Category: ಕಾವ್ಯಯಾನ

ಕಾವ್ಯಯಾನ

ಕವಿತೆ

ನೀನಿರಬೇಕು ಎಚ್. ಕೆ. ನಟರಾಜ ಇಳಿಸಂಜೆ ನಾನು ಮುಳುಗುವ ಸೂರ್ಯ..ನೀನೋ ರಾತ್ರೀ ಪ್ರೀತಿಸುವ ಆಗಸದ ಚಂದ್ರಮ.ಆದರೂ ಸೂರ್ಯ ಬೆಳಗುತ್ತಲೇಇರುತ್ತಾನೆ..ಚಂದ್ರ ನೀರಂತರ..ಮುದ ಕೊಡುತ್ತಿರುತ್ತಾನೆ.ನಿನ್ನಂತೆ ನಿನ್ನ ನಗುವಿನಂತೆಈ ಕತ್ತಲೆ ಬೆಳದಿಂಗಳಾಟದ ಗೊಂಬೆ ನಾನು.ಕತ್ತಲೆಯ ನಿಶೆತುಂಬಿದ ಮರುಳಹಗಲಿನಲ್ಲಿ ಬದುಕಿನ ಬಯಲಾಟದಪಾತ್ರವಾದರೂ ಆರ್ಭಟಿಸುವುದು ಇರುಳ ಬೆಳಕಿನಾಟದಲೆ..ಒಡ್ಡೋಲಗ ಪ್ರಭುಗಳು.ನೀನೆಂದರೆ ನೀನೇ ಒಡಲಾಳದ ಕರುಣೆಉಕ್ಕಿ ಬರಲು ಒಲುಮೆಯ ಚಿಲುಮೆ ಕನಸುಕಂಗಳಿಗೆ ಕಾರಿರುಳ ರಾತ್ರಿಯಲಿದೀಪ ದೀವಿಗೆಯಾಗಿ ಕಾಡುವ ನಿನನಗುವಿನಂದದಿ..ಮಲ್ಲಿಗೆ ಚಫ್ಪರಕಟ್ಟುವ ಬಯಕೆಯ ತಿರುಕ ನಾನು..ಪ್ರೇಮತಪೋವನದ ಸಂತನೂ ನಾನುನಕ್ಕು ಬಿಡೆ ಒಮ್ಮೆ.. ಕೇಕೇ ಹಾಕಿ.. ಹಸಿಇನಾಳಕೆ ಇಳಿಯಲೀ ಭೀಬತ್ಸ.. […]

ಕವಿತೆ

ಕವಿತೆ ಹಾಳೆ ತಿರುವಿದರೆ ಅಧ್ಯಾಯ ಮುಗಿಯದುಧರ್ಮಸ್ಥಾಪನೆಗೆ ಮತ್ತೆ ಮತ್ತೆ ಬರುತ್ತೇನೆಂದವಹೇಳಿದ್ದೂ ಅದನ್ನೇಎಲ್ಲವೂ ಮುಗಿಯದ ಅಧ್ಯಾಯ ದಾರಿಗಳು ಎಂದೋ ಕವಲೊಡೆದವುಎಲ್ಲ ಮರೆತಂತೆ ಹೆಜ್ಜೆಗಳೂ ನಡೆದವುಉಸಿರು ಭಾರದ ಜೋಕಾಲಿಜೀಕಿದಷ್ಟೂ ಎಳೆದಾಡುತ್ತಿತ್ತು ಕಟಕಟೆಯ ತೀರ್ಪಿನಲ್ಲಿಇವರು ಬೇರೆ ಬೇರೆಉಳಿಯುವುದು ಏನಿದ್ದರೂ ಲೆಕ್ಕಾಚಾರಉತ್ತರ ಹುಡುಕುವ ಪುಟ್ಟ ಕಂಗಳಲ್ಲಿಪ್ರಶ್ನೆಗಳ ಮಹಾಪೂರ ಹಾಳೆಗಳೂ ನಾಳೆಗಳಂತೆಕರೆದಷ್ಟೂ ತೆರೆಯುತ್ತವೆಚುಕ್ಕೆಯಿಡುವ ಮುನ್ನ ಅಲ್ಪವಿರಾಮಮುಗಿಸಲು ಮನಸ್ಸಿಲ್ಲಹೇಗೆಂದರೂಇದು ಮುಗಿಯದ ಅಧ್ಯಾಯ.

ಕವಿತೆ

ಕರೋನಾದ ಕತ್ತಲು ರೇಷ್ಮಾ ಕಂದಕೂರ ಕಳೆಗುಂದಿದೇಕೋ ಮೈಮನಸುಳಿಯದೆ, ನಿನ್ನ ಛಾಯೆ ಸೋಕದೆ ಭ್ರಾಂತಿಯ ಕೇಡು ತಾಗಿಮತಿ ಬಿರುಕಿನ ಕಂದಕದ ಮಾಯೆಗತಿ ಮೀರಿದೆ ಕನಸ ತೇಪೆ ನಿನ್ನಂತರಾಳವ ಹೊಕ್ಕಿರುವೆನೆಂದುಕಕ್ಕಾಬಿಕ್ಕಿಯಾಗಿರುವೆ ತಿಕ್ಕಲು ತನದಿ ಬಿಕ್ಕುತಲಿರುವೆ ಬದುಕಿನ ಚುಕ್ಕಾಣಿಯ ಹಿಡಿಯಲುದಕ್ಕಬಹುದೆ ಒಲುಮೆಅತೀ ಪ್ರೀತಿಯ ಪಾಪಶಂಕೆ ಬೆಂಗಾಡಿನ ವಶವಾಗಿರುವೆತಿದ್ದಿ ತೀಡಲುಪ್ರಗತಿಗೆ ಭಯ ಬುದ್ದಿ ಭ್ರಮಣೆಗೆಅನಂತ ಕನಸುಅದು ಹಾಗೆಯೇನಾಳೆಯಾದರೂ ಆಗಲಿಬದುಕಿನ ಅನಂತ ದಕ್ಕಲಿ **********************

ಕವಿತೆ

ಕಣ್ಣೀರಿಗೆ ದಂಡೆ ಸಾಕ್ಷಿ ನಾಗರಾಜ ಹರಪನಹಳ್ಳಿ -೧-ಬೀಜಕ್ಕೆ ನೆಲವಾದರೇನುಗೋಡೆಯ ಬಿರುಕಾದರೇನುಬೇಕಿರುವುದುಒಂದು ಹಿಡಿ ಮಣ್ಣು, ಹನಿಯಷ್ಟು ನೀರು -೨- ನದಿಯಾರಿಗೆ ತಾನೇ ಬೇಡ -೩-ನದಿ ಎಷ್ಟೇ ಕವಲಾಗಿ ಹರಿದರೂಕೊನೆಗೆ ಸೇರುವುದು ಕಡಲನ್ನೇ -೪-ಕೋಣೆನಿಟ್ಟುಸಿರಿಗೆ ಫ್ಯಾನ್ಗಾಳಿ ಹಾಕಿದೆ -೫-ಅವಳುನೆರಳಾಗಿದ್ದಳು ಕನ್ನಡಿಯಲ್ಲಿಈಗಅದಕ್ಕೂ ವಿರಹ -೬ಅಲೆಗಳ ಕಣ್ಣೀರಿಗೆದಂಡೆ ಸಾಕ್ಷಿ -೭-ಕಾಯುವುದು ಎಂದರೆಎದೆಯೊಳಗೆಕನಸುಗಳ ಬಿತ್ತುವುದು -೮-ಸಹನೆ ಇದೆಯಾಹಾಗಾದರೆ ;ನಾಳೆಯೂ ಇದೆ -೯-ಆಸೆಯ ಬೆನ್ನು ಹತ್ತುಸಂಚುಗಳಅರ್ಥಮಾಡಿಕೊದಾರಿ ಹೊಳೆದೀತು -೧೦-ಬದುಕಿನ ಅಂತಿಮ‌ ಸತ್ಯಏನುಏನುಏನುಏನು ಅಂದರೆಬಯಲಲ್ಲಿ ಬಯಲಾಗು************************************************–

ಕವಿತೆ

ಸಂಗಾತಿ ಅರುಣಾ ರಾವ್ ಎನ್ನ ಮನ ದೇಗುಲದಗಂಟೆಯನು ಬಾರಿಸಿಪ್ರೀತಿಯ ಬಡಿದೆಬ್ಬಿಸಿದಇನಿಯ ನೀ ಯಾರು? ಆ ನಾದವನು ಕೇಳಿತಲೆದೂಗುವ ಹಾವಂತೆಎನ್ನ ನಿನ್ನೆಡೆಗೆ ಸೆಳೆದಿಹಸಖ ನೀ ಯಾರು? ಬತ್ತಿದ್ದ ಎನ್ನ ಬಾಳಲ್ಲಿಪ್ರೀತಿ ಹನಿಗಳ ಚಿಮುಕಿಸಿಒಲವ ಹೊಳೆ ಹರಿಸಿದಗೆಳೆಯ ನೀ ಯಾರು? ಮುಚ್ಚಿದ್ದ ಎದೆ ಬಾಗಿಲಿನಚಿಲಕವನು ಅತ್ತ ಸರಿಸಿಒಳ ಹೊಕ್ಕು ನಿಂತಿಹಸಂಗಾತಿ ನೀ ಯಾರು? ನೀ ಯಾರಾದರೇನುಈಗಂತೂ ನನ್ನವ ನೀನುಎನ್ನ ಬಾಳ ದೇಗುಲಕೆಹೊನ್ನ ಕಳಶ| *******************************

ಕವಿತೆ

ಎಷ್ಟೊಂದು ಕಾಳಜಿ..!? ರುಕ್ಮಿಣಿ ನಾಗಣ್ಣವರ ಹರವಾದ ಎದೆಯನೀಳ ತೋಳುಗಳಬರಿ ಮೈಯ ಮಹಾಭುಜನೇಬಾಣ ಹೆದೆಗೇರಿಸಿಸಂಚು ಹೂಡಿದನಿನ್ನ ಕಣ್ಣೋಟದ ಮೊನಚಿಗೆನಾನೆಂದೂ ಒಲಿದವಳಲ್ಲ ರದ್ದಿ ಸಾಲದೆಕಿಂಗುಸೈಜು ಪುಸ್ತಕಗಳೆದೆ ತುಂಬಅದೆಷ್ಟು ಕೈಗಳುಎಷ್ಟೋ ನಮೂನೆಯನಿನ್ನ ಹೆಸರು ಬರೆದುಜೈಕಾರ ಗೈದುಉಸಿರ ಹಿಡಿದು ಜಪಿಸಿದರೂನೀನು ಒಲಿದವನಲ್ಲ ಕಾಡಿನಲಿ ಆಡಿಕೊಂಡಿದ್ದಮೊಲದ ಮರಿಗಳುನಿನ್ನವೇ ಬೀಜಗಳು ಎಂಬ-ಸಬೂಬು ದೊರೆತುಲೋಕವನುಗೆದ್ದೆನೆಂದು ಬೀಗಿದವ ನೀನು ಮರ್ಯಾದೆ ಪುರುಷೋತ್ತಮನೇನಿನ್ನ ಅಸಲಿತನದಖಾತರಿ ಮಾಡಿಕೊಂಡೇಮತ್ತೆಂದೂ ನಿನ್ನ ಬಯಸದೆಮೂಲ ನೆಲೆಗೆ ಮರಳಿದವಳಿಗೆತನ್ನತನದ ಹುಡುಕಾಟವಿತ್ತು ತನ್ನನ್ನು ಮಾತ್ರ ಭಜಿಸಿನನ್ನನ್ನು ನನ್ನಜ್ಜಿ, ಮುತ್ತಜ್ಜಿಯರನ್ನುಹೀನರೆಂದು ಬಗೆದತರತಮಗಳನು ತೂಗುವನಿನ್ನವರ ಕಣ್ಣೋಟಮೊದಲು ಸರಿಪಡಿಸು ನನಗೆ ನಂಬಿಕೆಸಮತೆಯನುಯೋಗವೆಂದು ಸಾಧಿಸುವರಕ್ತ […]

ಕವಿತೆ

ಆ – ಲಯ ಡಾ. ಅಜಿತ್ ಹರೀಶಿ ಆ ಕಲ್ಲುಗಳುಭೂಕಂಪಕ್ಕೆ ಸಿಲುಕಿನಡುಗಿ ಅಡಿಗಡಿಗೆಕುಸಿದು ಬಿದ್ದುದು ಅಲ್ಲ ಆಕಸ್ಮಿಕವಾಗಿಅದೇನೋ ತಾಗಿಅಲುಗಾಡಿನೆಲಕ್ಕುರುಳಿದ್ದೂ ಅಲ್ಲ..! ಏಕಶಿಲೆಯಂತೆಭದ್ರವಾಗಿದ್ದವುಗಳಬಡಿ-ಬಡಿದುಕೆಡವಿದ್ದು ನಾನೇ.. ಪಥ ಬದಲಿಸಿಸಮಯದಿಬಂಧಿಸುವ ಧನ್ಯನಾದಮೊಳಗಲೇ ಬೇಕಿದೆಕ್ರೀಯಾಶೀಲ ನಿನಾದ ಉರುಳಿ ಹೋದಕಲ್ಲುಗಳ ಆಯ್ದುಮತ್ತೆ ಕಟ್ಟಬೇಕಿದೆಅಡಿಯಿಂದಮುಡಿಯವರೆಗೂ..! * *

ಕವಿತೆ

ಖಾಲಿ ಬೆಂಚುಗಳ ಪ್ರಶ್ನೆ ದೇವು ಮಾಕೊಂಡ ನರೇಂದ್ರ, ನರೇಂದ್ರ!ಆಗ ಕೂಗಿನಲಿಏಕನಾದವಿತ್ತು ಹಾಳೆಗಳು ಮೆಲುಕು ಹಾಕುತ್ತಲೇ ಇದ್ದವುಕವಿತೆಯಾಗಿಹಾಡಾಗಿ ಈಗಆತಕಥೆಯಾಗಿದ್ದಾನೆಉಪಮೇಯಗಳ ನಡುವೆ ಸಿಲುಕಿಅಂತೆಕಂತೆಗಳ ಸಾಲು ಸೇರಿ ಅವನು ಕಟ್ಟಿ ಮೇಯಿಸಿದ ಧರ್ಮಹಗ್ಗ ಹರಿದುಕೊಂಡುಗೂಟ ಬದಲಿಸಿಕೊಂಡಿದೆಬಾಲಿಶ ಮೋಹ ಮಹಲುಗಳಿಗೆ ಅಂವ ನೆಟ್ಟ ಪಡಿ ಪದಾರ್ಥಗಳುಹಸಿಮಣ್ಣಿನ ಹುಸಿ ಬೀಜಗಳಾಗಿವೆ ನಾವೀಗ ಖಾಲಿ ಮೇಜುಗಳ ಹಿಂದೆ ನಿಂತುಕಪ್ಪು ಹಲಗೆಯ ಮೇಲೆ ಬರೆಯುವ ಹಾಗಿಲ್ಲಸಂತನೆಂದುಸನಾತನ ಪರಿಚಾರಕನೆಂದು ಈಗಖಾಲಿ ಬೆಂಚುಗಳೆ ಪ್ರಶ್ನೆ ಕೇಳುತ್ತಿವೆಅವನ ಮನೆಗೆ ಬಾಗಿಲುಗಳು ಎಷ್ಟೆಂದುಹಾಗಾಗಿನನ್ನ ತರಗತಿಯಲ್ಲಿ ನೀನೊಬ್ಬ ಪ್ರಶ್ನಾರ್ಥಕ ಚಿಹ್ನೆ ************************

ನಾನೂ ರಾಧೆ

ನಾನೂ ರಾಧೆ ಕವಿತೆ ಪೂರ್ಣಿಮಾ ಸುರೇಶ್ ನಮ್ಮೂರಿನ ತುಂಬೆಲ್ಲಾಅವರದೇ ಮಾತು- ಕತೆಕಾಡಿದೆ ಅವರ ಕಾಣುವತವಕದ ವ್ಯಥೆ ಆ ಹಾಲು ತುಳುಕುವ ಕೊಡಮೊಸರ ಮಡಕೆಅವಳ ಅರ್ಧ ಬಿಚ್ಚಿದ ಮುಡಿನವಿಲು ನಡಿಗೆಯ ಅಡಿಅವಳ ಮಿದುನುಡಿಯ ಚೆದುರುಆ ವಿಜನ ಬೀದಿದಟ್ಟನೆ ಬಿದಿರ ಮೆಳೆ ಯಮುನೆಯ ಕಚಗುಳಿ ಇಡುವಆ ಮೆಲ್ಲೆಲರುಅವನ ಗುನುಗಿನ ಬೆರಳುಅವಳ ಕಣ್ಣವೀಣೆಯ ಮೇಲೆಅವಳ ಅಕ್ಷತ ಬಿಂಬಅವನ ದಿಟ್ಟಿಯನು ತೊಳಗುವಬೆಳಕಿನ ಕಂಬ ಎಲ್ಲವನೂ ಇಣುಕಿಕಾಣುವ ಬಯಕೆಈ ಕಾತರ ದಗ್ಧ ಮನಕೆ,ಗೋಕುಲದ ಬಾಗಿಲಲ್ಲೆಒಲವ ಘಮಲುಪರಿಸರದ ತುಂಬರಾಸಲೀಲೆಯ ಅಮಲುಒಳಗೆ ಸುಳಿದಾಡಿದೆಅಲ್ಲಲ್ಲಿ ಎಡತಾಕಿದೆರಾಧಾಕೃಷ್ಣರ ಅರಸುತ ಸಿಕ್ಕಿದ […]

ಕಾವ್ಯಯಾನ

ಕವಿತೆ ಮಿಲನ ವೀಣಾ ರಮೇಶ್ ಮದುವನದ ಅಂಗಳದಲಿಮಧುರ ಮೌನ ಹಾಸಿದೆಮಧು ಮನಸುಗಳು ಬೆಸೆದಿರೆ,ಮಧು ಅರಸುವ ದುಂಬಿಗಳುಮಧುವಿಹಾರದ ಹಿಗ್ಗಿನಲಿ ಹಸಿರ ಹಂದರದೊಳಗೆಗಂಧರ್ವರೆ ಧರೆಗಿಳಿದಂತೆಮುದ ನೀಡಿ ಮತ್ತೇರಿಸಿದಆಲಾಪದ ದುಂಬಿಗಳುಮಧು ಹನಿಯೊಂದುಜಾರಿದೆ,ಕೆನ್ನೆ ಮಾತಾಡಿದೆತುಸು ಬಣ್ಣದಲಿ,ಅದರುತಿದೆ ಅಧರಗಳು ಭಾವಗಳ ಅರಮನೆಯಲಿಮಧುಮಂಚದ ಉಯ್ಯಾಲೆಪ್ರೇಮರಾಗದಿ ತೂಗುತಿರೆಸವಿಗನಸುಗಳು ಬಿಗಿದಪ್ಪಿನನ್ನೊಡಲಲಿ ಕೂತಿರೇ ಮಧುಚಂದಿರನು ಕರೆದಿರೆಮೆಲ್ಲನೆತನುಮನಗಳು ಹೆಣೆದಿದೆಪ್ರೇಮದ ಚಿಲುಮೆಅಧರ ಸುಖದೊಳಗಿನಮದಿರೆ,ಯ ಬೆಚ್ಚನೆಯಹಿತದೊಳಗೆ ಮಧುಮಿಲನದ ಅರಸಿಗೆಚೈತ್ರವಸಂತನ ಆಗಮನದ ಸಂತಸಮತ್ತದೇ ಪ್ರತಿಪದೆಗೆಸಂಭ್ರಮದ ಮಧುಮಾಸ *********************

Back To Top