ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರೋನಾದ ಕತ್ತಲು

ರೇಷ್ಮಾ ಕಂದಕೂರ

ಕಳೆಗುಂದಿದೇಕೋ ಮೈಮನ
ಸುಳಿಯದೆ, ನಿನ್ನ ಛಾಯೆ ಸೋಕದೆ

ಭ್ರಾಂತಿಯ ಕೇಡು ತಾಗಿ
ಮತಿ ಬಿರುಕಿನ ಕಂದಕದ ಮಾಯೆ
ಗತಿ ಮೀರಿದೆ ಕನಸ ತೇಪೆ

ನಿನ್ನಂತರಾಳವ ಹೊಕ್ಕಿರುವೆನೆಂದು
ಕಕ್ಕಾಬಿಕ್ಕಿಯಾಗಿರುವೆ ತಿಕ್ಕಲು ತನದಿ

ಬಿಕ್ಕುತಲಿರುವೆ ಬದುಕಿನ ಚುಕ್ಕಾಣಿಯ ಹಿಡಿಯಲು
ದಕ್ಕಬಹುದೆ ಒಲುಮೆ
ಅತೀ ಪ್ರೀತಿಯ ಪಾಪಶಂಕೆ

ಬೆಂಗಾಡಿನ ವಶವಾಗಿರುವೆ
ತಿದ್ದಿ ತೀಡಲು
ಪ್ರಗತಿಗೆ ಭಯ

ಬುದ್ದಿ ಭ್ರಮಣೆಗೆ
ಅನಂತ ಕನಸು
ಅದು ಹಾಗೆಯೇ
ನಾಳೆಯಾದರೂ ಆಗಲಿ
ಬದುಕಿನ ಅನಂತ ದಕ್ಕಲಿ

**********************

About The Author

Leave a Reply

You cannot copy content of this page

Scroll to Top