ಕವಿತೆ

ಕಣ್ಣೀರಿಗೆ ದಂಡೆ ಸಾಕ್ಷಿ

ನಾಗರಾಜ ಹರಪನಹಳ್ಳಿ

-೧-
ಬೀಜಕ್ಕೆ ನೆಲವಾದರೇನು
ಗೋಡೆಯ ಬಿರುಕಾದರೇನು
ಬೇಕಿರುವುದು
ಒಂದು ಹಿಡಿ ಮಣ್ಣು, ಹನಿಯಷ್ಟು ನೀರು


-೨-

ನದಿ
ಯಾರಿಗೆ ತಾನೇ ಬೇಡ


-೩-
ನದಿ ಎಷ್ಟೇ ಕವಲಾಗಿ ಹರಿದರೂ
ಕೊನೆಗೆ ಸೇರುವುದು ಕಡಲನ್ನೇ


-೪-
ಕೋಣೆ
ನಿಟ್ಟುಸಿರಿಗೆ ಫ್ಯಾನ್
ಗಾಳಿ ಹಾಕಿದೆ


-೫-
ಅವಳು
ನೆರಳಾಗಿದ್ದಳು ಕನ್ನಡಿಯಲ್ಲಿ
ಈಗ
ಅದಕ್ಕೂ ವಿರಹ


-೬
ಅಲೆಗಳ ಕಣ್ಣೀರಿಗೆ
ದಂಡೆ ಸಾಕ್ಷಿ


-೭-
ಕಾಯುವುದು ಎಂದರೆ
ಎದೆಯೊಳಗೆ
ಕನಸುಗಳ ಬಿತ್ತುವುದು


-೮-
ಸಹನೆ ಇದೆಯಾ
ಹಾಗಾದರೆ ;
ನಾಳೆಯೂ ಇದೆ


-೯-
ಆಸೆಯ ಬೆನ್ನು ಹತ್ತು
ಸಂಚುಗಳ
ಅರ್ಥಮಾಡಿಕೊ
ದಾರಿ ಹೊಳೆದೀತು


-೧೦-ಬದುಕಿನ ಅಂತಿಮ‌ ಸತ್ಯ
ಏನು
ಏನು
ಏನು
ಏನು ಅಂದರೆ
ಬಯಲಲ್ಲಿ ಬಯಲಾಗು
************************************************

4 thoughts on “ಕವಿತೆ

  1. ಮಳೆಯ ನಂತರದ ತೇವದ ಅನುಭವ…
    ಕೆಲವನ್ನು ಬಿಡಬಹುದು …ಉದಾ…ನದಿ ಕಡಲನ್ನು ಸೇರುವುದು

  2. ೭ ಮತ್ತು ೮ ನೇ ಹನಿಗಳು ಬಹಳವೇ ಇಷ್ಟವಾದವು ಸರ್…

  3. ಒಂದು ಏಳು ಎಂಟು ಒಂಬತ್ತು ಹತ್ತು ಬಹಳ ಅರ್ಥಪೂರ್ಣ

Leave a Reply

Back To Top