Category: ಕಾವ್ಯಯಾನ

ಕಾವ್ಯಯಾನ

ಸಿಂ(ಹ)ಪತಿ

ಕವಿತೆ ಸಿಂ(ಹ)ಪತಿ ವಿಶಾಲಾ ಆರಾಧ್ಯ ಮನದ ಮೆಟ್ಟಿಲುಗಳನೀ ಒಂದೊಂದಾಗಿಎಷ್ಟೇ ಬಾರಿ ಇಳಿದುಹೋದರೇನು ಗೆಳೆಯ ?ಮತ್ತೆ ಮತ್ತೆ ನೀ ಕೂರುವೆಬಂದು ಅಧಿಪತಿಯಾಗಿ …// ಒಡಲ ಕಣದಲಿನೀ ಅಂಗಾಂಗುಲವೂಎಷ್ಟೇ ಗಾಯಗೊಳಿಸಿಕೊರಗಿಸಿದರೇನು ಗೆಳೆಯ ?ಮತ್ತೆ ಮತ್ತೆ ನೀನೇ ಬರುವೆನನ್ನ ಭೂಪತಿಯಾಗಿ…// ಮೋಹಕ ನೋಟದಕಣ್ಣ ಕಂಬನಿಗೆನೀ ಕಾರಣವಾಗಿಎಷ್ಟೇ ಕಾಡಿದರೇನು ಗೆಳೆಯ ?ಆ ಕಣ್ಣ ಕನಸಲಿಮತ್ತೆ ಮತ್ತೆ ನೀನೇ ಬರುವೆನನ್ನ ಪತಿಯಾಗಿ…!!ಅದಕ್ಕೆ ನಾವಾಗಿರುವೆವುದಂಪತಿಯಾಗಿ …// ***************************

ಒಂದು ಸಾಂದರ್ಭಿಕ ಚಿತ್ರ

ಕವಿತೆ ಒಂದು ಸಾಂದರ್ಭಿಕ ಚಿತ್ರ ಬಸವರಾಜ ಹೂಗಾರ ಕರಿಕಲ್ಲಿನ ಮೇಲೆಚಂದದ ನಾಮಫಲಕಚಿಕ್ಕ ಗೇಟುಎರಡು ಕುರ್ಚಿ ಹಾಕುವಷ್ಟೇ ವರಾಂಡಇಣುಕಿ ನೋಡಿದರೆದೊಡ್ಡ ಪಡಸಾಲೆಎರಡು ಕೋಣೆಗಳ ಮಧ್ಯೆಅಂಗೈಯಗಲದ ದೇವರಮನೆ.ಬಾಡಿಗೆ ಮನೆಯಲಿಇದ್ದೂ ಇದ್ದೂ ಸಾಕಾಗಿಸಾಕಿಷ್ಟು ನಮಗೆಎನ್ನುವಷ್ಟಿತ್ತು ಮನೆ. ರಸ್ತೆಯಲ್ಲಿ ಹೋಗುವಾಗಆ ಮನೆ ಈ ಮನೆಬಣ್ಣ ಬಣ್ಣದ ಮನೆಗಳನೂರು ನೋಟ ಆಸೆ ಕನಸುಗಳಗಿಲಕಿ ಹಳವಂಡಎಚ್ಚರಾದವನಿಗೆ ಲೋಕ ಸುಂದರ. ಎಲ್ಲ ಮನೆಗಳೂ ಚಂದಕಂಡವರ ಮನೆ ಸಿಟೌಟಿನಲಿಪೇಪರ್ ಓದುವವನು ನಾನೊಬ್ಬನೆ !ಹತ್ತುವಾಗ ಇಳಿಯುವಾಗಹೆಚ್ಚು ಕಂಡದ್ದು ಈ ಚಿಕ್ಕ ಮನೆಗಂಡ ವ್ಯಾಪಾರಿ ಹೆಂಡತಿ ಸಂಸಾರಿಕಂಪೌಂಡಿನಂಗಳದಲಿಗೆಜ್ಜೆ ಗಿಲಕಿಯ ಹೆಜ್ಜೆವೂರುವ ಮಗು. […]

ಕಾವ್ಯ ಲೋಕದ ರವಿತೇಜ

ಕವಿತೆ ಕಾವ್ಯ ಲೋಕದ ರವಿತೇಜ ಶಿವರಂಜಿನಿ ,ಎಂಆರ್ ಶಿವಣ್ಣ ಸಾರಸ್ವತ ಅಂಗಳದಲಿಮಂದಹಾಸ ಬೀರುತಅರಳಿದಸುಂದರ ಹೂನೀವು ತಾನೆ ?ಕಾವ್ಯ ಸುಮದಿ ಘಮ ಘಮಿಸಿದನಿಮ್ಮ ಭಾವಗಳ ಐಸಿರಿಗೆಸೋತವಳು ನಾನು ತಾನೆ ? ಗೀತ ಸಂಗೀತ ಸ್ವರಗಳಲಿಸುರ ತರಂಗಗಳನೇಳಿಸಿದವರುನೀವು ತಾನೆ ?ಮನ ತುಂಬಿ ಅದರ ಗಾನ ರಸಸ್ವಾದಸವಿಯುಣುತ ಮೈಮರೆತವಳು ನಾನು ತಾನೆ ? ಗಾನ ಸರಸ್ವತಿಗೆ ಅಕ್ಷರ ಮಾಲೆಗಳ ತೊಡಿಸಿ,ಮಾಸದ ರವಿತೇಜನೀವೇ ತಾನೆ ?ನಿಮ್ಮಗೀತಿಕೆಗಳ ಮಂದಾರ ಚೆಂದವೆನಿಸಿಮಧುರ ರಾಗಗಳ ಗುನು ಗುನುಸುತಮುಗ್ಧಗೊಂಡವಳು ನಾನು ತಾನೆ? ಜನ ಮೆಚ್ಚಿದ ಜಗ ಮೆಚ್ಚಿದನಾನೂ ಮೆಚ್ಚಿದ […]

ಬಾಳ ಬೆಳಕೇ..

ಕವಿತೆ ಬಾಳ ಬೆಳಕೇ.. ವೀಣಾ ಪಿ. ‌ ಸುಧೆಗಡಲ ಸೊಗದೊಡಲಸವಿ ಆತ್ಮ ಚೇತನದಹಾಲು ಗಲ್ಲದಹದ ಭಾವವೇ.ಹೊಳೆವ ನಕ್ಷತ್ರದಮಿನುಗು ಕಣ್ಗಳ ಮಿಂಚೇ..ಮುಗ್ಧತೆಯು ಮೈವೆತ್ತಮುದ್ದು ಮಾಟದಬೊಂಬೆಯೇ..ಬೆಳಕು ಬೃಂದಾವನದಎಳೆ ತಳಿರು ತೋರಣದ‌ಚಿಗುರೊಡೆದಹಸಿರೇ..ಹೊಸ ವರಸೆಯಭರವಸೆಯನುಮೆಲ್ಲನರಳಿ ಮುಡಿಸುವನಗೆ ಮಲ್ಲಿಗೆ ಮೃದು ದಂಡೆಯೇ..ಕತ್ತಲೆಯ ಕಾರ್ಮೋಡಕಳೆದು ಬೆಳಕಾಗುವಬೆಳ್ಳಿ ಬೆಳದಿಂಗಳೇ..ನಿನ್ನಿಂದಲೇ ಬೆಳಕು ಬಾಳ್ಗೆ… ‌ *********************************************

ಕವಚದಲ್ಲಿ ಭದ್ರ

ಕವಿತೆ ಕವಚದಲ್ಲಿ ಭದ್ರ ತಮ್ಮಣ್ಣ ಬೀಗಾರ ಕವಚದಲ್ಲಿ ಭದ್ರ…ಅದು ಯಾವಾಗ ಹೋಗುತ್ತದೆಅಥವಾ ಹೋಗುವುದಿಲ್ಲವೆಂದುಹೇಳುವುದು ಹೇಗೆ…ನನಗಂತೂ ಬಂದಿದೆ ಕಾಯಿಲೆಮರದ ಬೇರು ಕೊಳೆಯುವಷ್ಟುಮಳೆಯಾದರೆ ಚಿಗುರುವುದು ಯಾವಾಗ…ತಲೆಯ ತುಂಬಾ ಕೆಲಸ ತುಂಬಿಕೊಂಡಿದೆಕಿಸೆ ಖಾಲಿಯಾಗಿ ಕೈಗಳನ್ನು ಜೇಡರ ಬಲೆಕಟ್ಟಿ ಹಾಕಿದೆ…ಒಂದು ದಿನ ರಜೆ ಸಿಕ್ಕಿದರೆ ನನ್ನೊಂದಿಗಾಡುತ್ತಿದ್ದಕಂದ… ದಿನವೂ ನನ್ನೊಂದಿಗೆಕುಸ್ತಿ ಹಿಡಿಯುತ್ತಾನೆ ತಲೆ ಕೆಡಿಸುತ್ತಾನೆಅಲ್ಲಿ ಬಸ್ ನಲ್ಲಿ ಜನರಿಲ್ಲ ಅಂಗಡಿಯಲ್ಲಿಜನರಿಲ್ಲ ಹೊಟೆಲಿನಲ್ಲಿ ಜನರಿಲ್ಲಆದರೂ ಕಾಯ್ದುಕೊಂಡಿಲ್ಲ ಅಂತರರೋಗ ಹರಡುತ್ತಲೇ ಇದೆಇವಳು ಯುಟ್ಯೂಬ್ ನೋಡಿ ಮಾಡುವಹೊಸ ತಿಂಡಿ ರುಚಿಯಾಗುವುದಿಲ್ಲಮತ್ತೆ ಕಂಪನಿಯಿಂದ ಬರುವ ಮೇಲ ಎಷ್ಟುನಿಧಾನವೆಂದರೆ ನಡೆದು ಬರುವಪೋಷ್ಟಮ್ಯಾನ […]

ನೀವು-ನಾವು

ಕವಿತೆ ನೀವು-ನಾವು ಸಿ.ಎಚ್.ಮಧುಕುಮಾರ ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದುನಿಮ್ಮನ್ನು ಕೇಳುವಂತಿಲ್ಲ;ಏಕೆಂದರೆ ನೀವು ಸಿಟ್ಟುಗೊಳ್ಳುವಿರಿ. ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದುನೀವು ನಮ್ಮನ್ನು ಪದೇ ಪದೇ ಕೇಳಬಹುದುನಾವಾಗ ಶಾಂತವಾಗಿದ್ದರೆನಿಮ್ಮ ಆತ್ಮಕ್ಕೆ ಸ್ವರ್ಗಸುಖನಿಮ್ಮ ಮಾತಿಗೆ ಸಿಟ್ಟಾದರೆತಟ್ಟನೇದುರಹಂಕಾರಿಯ ಪಟ್ಟ ಹೊರಿಸುವಿರಿ. ನೀವು ಸದಾ ಮುಂದೆ ನಡೆಯಲು ಬಯಸುವಿರಿ; ಅದಕ್ಕೂ ಮೊದಲುಹಿಂದೆ ನಾವಿರುವುದ ಖಚಿತ ಪಡಿಸಿಕೊಳ್ಳುವಿರಿ.ನಿಮ್ಮೊಂದಿಗೆ ಹೆಜ್ಜೆ ಹಾಕುವ ಬಯಕೆಯಿದೆ,ಅದು ಯಾವತ್ತೂ ಈಡೇರದ ಬಯಕೆಯೆಂದು ತಾವು ಆಗಾಗ್ಗೆ ಧೃಢಪಡಿಸಿರುವಿರಿಆದರೂ ಪಟ್ಟು ಬಿಡದೆ ನಡೆಯುವೆವು ನಾವು! *************************************************

ಮೊಬೈಲಾಯಣ

ಕವಿತೆ ಮೊಬೈಲಾಯಣ ಪೂರ್ಣಿಮಾ ಸುರೇಶ್ ಹಳೆಯದು,ಉಪಯೋಗಕ್ಕೆ ಬಾರದು ಎಂದು ಸರಿಸಿಟ್ಟಮೂಲೆ ಸೇರಿದ ಮೊಬೈಲ್ಇಂದು ಅಚಾನಕ್ ಸಿಕ್ಕಿದೆ ಗಾತ್ರದಲ್ಲಿ ಚಿಕ್ಕದುಅಡ್ಡಡ್ಡ ತರಚಿದ ಕವಚಪರದೆ ದೃಷ್ಟಿ ಮಂದಇದರ ಮಿದುಳಲ್ಲಿ ನಾನು ಎಷ್ಟೊಂದು ಭಾವರಸ, ಚಿತ್ರಪಟಕಸವನ್ನೂ ತುಂಬಿಟ್ಟಿದ್ದೆಬೇಕಾದಾಗ ನೆರವಾಗುವುದೆಂದು ನಂಬಿದ್ದೆ ಕುತೂಹಲ ಆಶ್ಚರ್ಯಕರಹಿಡಿಯಲ್ಲಿ ಬ್ರಹ್ಮಾಂಡಧರ ಅಳಿಸದ ಮಾತು ತಳದಲ್ಲಿ ಉಳಿದಿರಬಹುದೇನನ್ನೊಡನೆ ಅನುಸಂಧಾನ ನಡೆಸಬಹುದೇಬಿಚ್ಚದೆ ರೆಕ್ಕೆ ತೆಪ್ಪಗಿದೆಚಾರ್ಜರ್ ಗೆ ಸಿಕ್ಕಿಸಿದೆಧ್ಯಾನಬಿಂದು ಮಿನುಗುವಂತೆಆಹಾ! ಕೆಂಪು ಚುಕ್ಕಿ ಅತ್ತ ಸರಿದು ದಿಟ್ಟಿಸಿದೆಈಡಾಗಿ ಸೂಕ್ಷ್ಮ ಸೆಳೆತಕ್ಕೆ ಈಗ ತನ್ನನ್ನು ತಾನೇತೆರೆದುಕೊಂಡಿತು ಕ್ಷಣಾರ್ಧದಲ್ಲಿನನ್ನ ಮೊಗದಲ್ಲಿ ಮುಗುಳ್ನಗೆಯ ಚೆಲ್ಲಿ- ಜಾತ್ರೆಯಲ್ಲಿ […]

ನೋವಮೌನ-ಅನಾಥನಲಿವು

ಕವಿತೆ ನೋವಮೌನ-ಅನಾಥನಲಿವು ಮಮತ ಅರಸೀಕೆರೆ ಸುಡುವ ಆಲೋಚನೆಗಳ ಹೊರೆಭಾರದಲ್ಲಿ ಮಗ್ಗುಲು ಬದಲಾಯಿಸಿದ ಅವಳ ನಿಟ್ಟುಸಿರು ಅತ್ಯಾಚಾರದ ಕನಸು ಕಂಡು ದಡಕ್ಕನೆ ಎಚ್ಚರಗೊಂಡ ಬೆಲೆವೆಣ್ಣ ಸಾಂದ್ರಗೊಂಡ ನಿರಾಳತೆ ಗದರಿಕೆಗೆ ಬೆದರಿ ಕೈಮುಷ್ಟಿ ಹಿಡಿದು ಸ್ಥಂಭೀಭೂತವಾಗಿ ನಿಂತ ಅಬೋಧ ಬಾಲನ ಬೆರಗು ಕಣ್ಣುಮೊಲೆಹಾಲು ಕುಡಿದು ಕಟುವಾಯಿಯಲ್ಲಿ ಇಳಿಯುವಾಗಲೇ ಅಂಗಾತವಾದ ನಿದ್ದೆಗಣ್ಣ ಬೊಮ್ಮಟೆ ನಗು ಬವಣೆಗಳನ್ನೆಲ್ಲ ಬರಹವಾಗಿಸಿದ ಅಪೂರ್ಣ ಡೈರಿಯ ಇನ್ನರ್ಧ ಖಾಲಿಪುಟಗಳ ಚಡಪಡಿಕೆಬರೆಯುತ್ತಲೇ ಅತ್ಯುತ್ಸಾಹಕ್ಕೆ ಸ್ತಬ್ಧವಾದ ಸಾಲುಗಳ ನಡುವಿನ ರೂಪಣಾತ್ಮಕ ಧ್ವನ್ಯಾರ್ಥ ಪ್ರಯಾಣದ ನಡುವೆಯೇ ತಿರುವು ರಸ್ತೆಯಲ್ಲಿ ತಟಕ್ಕನೆ ಕೆಟ್ಟು […]

ಕಾಡುವ ಕವಿತೆಗೆ

ಕವಿತೆ ಕಾಡುವ ಕವಿತೆಗೆ ಅಬ್ಳಿ,ಹೆಗಡೆ ಹೊತ್ತಿಲ್ಲ ಗೊತ್ತಿಲ್ಲಕಾಡುವಾ ಕವಿತೆ.ಬೇಕೆಂದು ಕರೆದಾಗನೀನೆಲ್ಲಿ ಅವಿತೆ..?ಬಂದಿಲ್ಲಿ ಅಕ್ಕರೆಯಸಕ್ಕರೆಯ ನೀಡು.ನನ್ನೆದೆಯ ಅಕ್ಕರದಿನೀ…ನಾಟ್ಯವಾಡು.ಕಂಕುಳಲಿ ಕೈಯ್ಯಿಟ್ಟುಗಿಲಗಿಚ್ಚಿಯಾಡಿ.ನೋವಲ್ಲು ನಗಿಸುತ್ತಮಾಡುವೆಯೆ ಮೋಡಿ.ತುಂಟಾಟವಾಡುತಲಿಕಳೆದೆನ್ನ ‘ಹಮ್ಮು’.ತಂಟೆಮಾಡದೆ ಒಳಗೆಉಳಿಯೆ ‘ಖಾಯಮ್ಮು’.! ****************************************

ಪ್ರಾರ್ಥನೆ

ಕವಿತೆ ಪ್ರಾರ್ಥನೆ ಬಾಪು ಖಾಡೆ ಹಸಿರು ಬೆಟ್ಟಗಳ ಕಾಡು-ಕಣಿವೆಗಳರುದ್ರ ರಮಣೀಯತೆಯಲಿ ಉಗಮಿಸಿಝರಿಯಾಗಿ ತೊರೆಯಾಗಿ ಜಲಪಾತವಾಗಿಬಳುಕುತ್ತ ಬಾಗುತ್ತ ನಿನಾದಗೈಯುತ್ತವೈಯಾರದಿ ಸಾಗುವ ನದಿಮಾತೆಯೆಹೀಗೆ ಪ್ರಸನ್ನವದನೆಯಾಗಿ ಸಾಗುತ್ತೀರು ಕಾಡು ಕಡಿ-ಕಡಿದು ಬಯಲಾಗಿಸಿನಿನ್ನೊಡಲ ಬಗೆಬಗೆದು ಬರಿದಾಗಿಸಿಮಾಲಿನ್ಯ ಸುರಿಸುರಿದು ಕಪ್ಪಾಗಿಸಿತಿಳಿನೀರ ಹೊಳೆಯನ್ನುಕೊಳೆಯಾಗಿಸಿಜಲಚರ ಜೀವಕ್ಕೆ ವಿಷ ಉಣ್ಣಿಸಿದಕಟುಕ ಹೃದಯದ ನಿನ್ನ ಮಕ್ಕಳನು‌ಒಮ್ಮೆ ಕ್ಷಮಿಸಿ ಬೀಡು ತಾಯೆ ಬಿಟ್ಟ ಬಿಸಿಯುಸಿರು ಕಪ್ಪುಮೋಡಗಳಾಗಿಆಕ್ರೋಶದ ಬೆಂಕಿ ಚಂಡಮಾರುತವಾಗಿಕಡಲೆಲ್ಲ ಉಪ್ಪಾಗಿ ಸುನಾಮಿಯಾಗಿಕುಂಭದ್ರೋಣದ ಬಿರುಮಳೆಯಾಗಿಭೀಕರ ಪ್ರವಾಹವಾಗಿ ಉಕ್ಕೇರದಿರುಪಾತ್ರದಂಚನು ಮೀರಿ ಹರಿಯದಿರುತಪ್ಪೆಸಗಿದ ನಿನ್ನ ಮಕ್ಕಳನು ಮತ್ತೊಮ್ಮೆ ಮನ್ನಿಸಿ ಬೀಡು ಭೂತಾಯಿಯಂತೆ ಕ್ಷಮಯಾದರಿತ್ರಿಯಾಗಿರು ***********************************

Back To Top