ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಾಸನದ ನಿವೃತ್ತ ಚಿತ್ರಕಲಾ ಶಿಕ್ಷಕರು ಕಲಾವಿದರು  ಬಿ.ಎಸ್.ದೇಸಾಯಿ ಅವರ ಕಲಾಸಾಧನೆಗೆ ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿಯ ೨೦೨೫-೨೬ನೇ ಸಾಲಿನ ಗೌರವ ಪ್ರಶಸ್ತಿ ಒಲಿದು ಬಂದಿದೆ. ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ದಿನಾಂಕ ೨-೧೦-೧೯೬೫ ರಂದು ಜನಿಸಿದ ಇವರು ಹಾಸನದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿಯೇ ನೆಲೆಸಿದ್ದಾರೆ. ನಾನು ಹಾಸನಕ್ಕೆ ಬಂದು ೩೬ ವರ್ಷಗಳಾದವು ಗುರುವೇ (ಗೊರೂರು ಅನಂತರಾಜು) ಈ ಪರಿಸರವು ನನಗೆ ಪ್ರಿಯವಾಗಿ ಒಗ್ಗಿಹೋಯಿತು. ಬಂದ ಹೊಸದರಲ್ಲಿ ಊರ ಕಡೆಗೆ ವರ್ಗ ಮಾಡಿಸಿಕೊಳ್ಳುವ ಆಲೋಚನೆ ಇತ್ತಾದರೂ ಕಾಲಕ್ರಮೇಣ ಇಲ್ಲಿಯ ಕಲಾವಿದರು, ಸಾಹಿತಿಗಳ ಒಡನಾಟದಲ್ಲಿ ಇಲ್ಲಿಯೇ ಮನೆ ಮಾಡಿಕೊಂಡೆ ಎಂದು ಮನದುಂಬಿ ಹೇಳಿದರು. ಇವರು ಚಿತ್ರಕಲಾ ವ್ಯಾಸಂಗವು   ಪ್ರಿ-ಯೂನಿವರ್ಸಿಟಿ ಕೋರ್ಸ್ (ವಾಣಿಜ್ಯ ಕಲೆ), ಡ್ರಾಯಿಂಗ್ ಮತ್ತು ಪೇಂಟಿAಗ್‌ನಲ್ಲಿ ಡಿಪ್ಲೊಮಾ, ಡಿಪ್ಲೊಮಾ ಇನ್ ಆರ್ಟ್ ಮಾಸ್ಟರ್, ಮಾಸ್ಟರ್ ಆಫ್ ವಿಷುಯಲ್ ಆರ್ಟ್  ಆದರ್ಶ ಫೈನ್ ಆರ್ಟ್ ಕಾಲೇಜ್ ಇಂಡಿ ಬಿಜಾಪುರ ಜಿಲ್ಲೆ,
 ಅಮೂರ್ತ ಕಲೆಯ ಕಲಾವಿದರು:
ಅಮೂರ್ತತೆಯ ಬೆಳವಣಿಗೆಯ ಹಿಂದಿನ ಪ್ರೇರಣೆಗಳಲ್ಲಿ ಒಂದು ವಿಷಯಗಳ ಪ್ರಪಂಚದಿAದ ದೂರವಿರಲು ಅನೇಕ ಕಲಾವಿದರ ಬಲವಾದ ಬಯಕೆಯಾಗಿದೆ. ಲೌಕಿಕ ಭೌತವಾದದ ಉಲ್ಲೇಖವನ್ನು ಬಹಿಷ್ಕರಿಸುವುದು ಅಮೂರ್ತ ಕಲಾವಿದರ ಕೇಂದ್ರ ಗುರಿಯಾಗಿದೆ. ಇದು ಔಪಚಾರಿಕ ಪರಿಶುದ್ಧತೆಯ ಹುಡುಕಾಟಕ್ಕೆ ಮತ್ತು ಅತಿಕ್ರಮಣಕ್ಕಾಗಿ ನಿರಂತರವಾದ ಮಾನವ ಅನ್ವೇಷಣೆಯನ್ನು ವ್ಯಕ್ತಪಡಿಸುವ ಮಾರ್ಗಗಳ ಪರಿಗಣನೆಗೆ ಎರಡಕ್ಕೂ ಕಾರಣವಾಯಿತು.

ದೇಸಾಯಿಯವರ ಕಲೆಯ ಪಯಣವೂ ಅದೇ ಹಾದಿಯಲ್ಲಿದೆ. ಯೋಗ ಮತ್ತು ಧ್ಯಾನದ ಸ್ವಾಭಾವಿಕತೆಯ ವರ್ಷಾಚರಣೆಯು ಅವರ ಹೊಸ ಅನ್ವೇಷಣೆಗೆ ಸರಿಹೊಂದುವAತೆ ಆಧ್ಯಾತ್ಮಿಕ ಭಾಷೆಯನ್ನು ಹುಡುಕುವಂತೆ ಮಾಡುತ್ತದೆ. ಸುತ್ತಮುತ್ತಲಿನ ಜೀವನದಲ್ಲಿ ಪರಮಾರ್ಥದ ಅನ್ವೇಷಣೆಯಲ್ಲಿ ಅವರು ತನ್ನದೇ ಆದ ರೀತಿಯಲ್ಲಿ ಅದರ ಸಾರವನ್ನು ಅಮೂರ್ತಗೊಳಿಸುತ್ತಾರೆ. ಆಕಸ್ಮಿಕ ಟೆಕಶ್ಚರ್‌ಗಳಿಂದ ಸ್ಫೂರ್ತಿ ಪಡೆದ ಅವರು ಹೊಸ ದೃಶ್ಯ ಪ್ರಪಂಚವನ್ನು ರಚಿಸಲು ಕ್ಯಾನ್ವಾಸ್‌ನಲ್ಲಿ ತೇವವಾದ ಎಣ್ಣೆ ಬಣ್ಣಗಳ ಕೆಲವು ಭಾಗವನ್ನು ತೆಗೆದುಹಾಕುವ ಕೆರೆದು ಅಳಿಸುವ ವಿಧಾನವನ್ನು ರೂಪಿಸಿದರು. ಅಂತಿಮ ಫಲಿತಾಂಶವೆAದರೆ ಐಷಾರಾಮಿ ಬಣ್ಣದ ಆರ್ಕೆಸ್ಟೆçÃಶನ್ ಮತ್ತು ಅದ್ದೂರಿ ಸಂಯೋಜನೆಗಳು. ಕೆಲವೊಮ್ಮೆ ಅಧೀನಗೊಂಡ ತೇಲುವ ರೂಪಗಳು ಕೆಲವು ಗುರುತಿಸಬಹುದಾದ ರೂಪಗಳ ಉಪಸ್ಥಿತಿಯನ್ನು ಸೂಚಿಸುತ್ತವೆಯಾದರೂ ಕಲಾವಿದನ ಉದ್ದೇಶವು ಎದ್ದುಕಾಣುವ ಮಾನಸಿಕ ಭಾವನೆಗಳನ್ನು ಹೆಚ್ಚಿಸುವುದು. ಅವರ ವರ್ಣಚಿತ್ರಗಳು ಈ ಬಣ್ಣ ಮತ್ತು ವಿನ್ಯಾಸದ ಕಾರಣದಿಂದಾಗಿ ಮತ್ತು ಸರಳವಾದ ಸುಂಟರಗಾಳಿ ರೂಪಗಳ ಮೇಲೆ ಕೇಂದ್ರೀಕರಿಸುವ ಮೂಲಕ ಪ್ರೇಕ್ಷಕರನ್ನು ಹೀರಿಕೊಳ್ಳುತ್ತವೆ. ಅವರ ಪ್ರತಿಯೊಂದು ಕೃತಿಯು ಭವ್ಯವಾದ ದೃಶ್ಯ ಕಾವ್ಯದ ಭಾವನೆಗಳನ್ನು ಉಂಟುಮಾಡುತ್ತದೆ.  ಸಿ.ಎಸ್.ಕೃಷ್ಣಶೆಟ್ಟಿ ವಿಮರ್ಶಕರು  ಅಭಿಪ್ರಾಯದಂತೆ   ದೇಸಾಯಿಯವರ ಕೆಲಸವನ್ನು ಅವರ ಆತ್ಮದ ಭೂದೃಶ್ಯ ಎಂದು ಕರೆಯಬಹುದು. ಆದರೆ ಇದು ಕಲಾವಿದ ಭಾವುಕ ಎಂದು ಸೂಚಿಸುವುದಿಲ್ಲ. ಅವರ ವರ್ಣಚಿತ್ರಗಳು ಭಾರತದ ಆಳವಾದ ವ್ಯಕ್ತಿತ್ವದ ಖಚಿತವಾದ ಪ್ರಭಾವವನ್ನು ಹೊಂದಿವೆ. ಅವರ ಬಣ್ಣಗಳ ವ್ಯಾಪ್ತಿಯು ಎದ್ದುಕಾಣುವ ಆದರೆ ಸಮಚಿತ್ತದಿಂದ ಅವರು ಸಾಧಿಸಿದ ಒಂದು ನಿರ್ದಿಷ್ಟ ಪರಿಶುದ್ಧತೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಕುಂಚದ ಹೊಡೆತಗಳು ಅತೀಂದ್ರಿಯ ತೀವ್ರತೆಯನ್ನು ಎತ್ತಿ ತೋರಿಸುತ್ತವೆ. ಅವರ ಆಕೃತಿಗಳು ಅಮೂರ್ತವಲ್ಲ ಆದರೆ ಸಾಮರಸ್ಯ. ಇದು ಸಂಯೋಜನೆಗಳು  ನಿಗರ್ವಿಯಾಗಿ ಅಸ್ತಿತ್ವದಲ್ಲಿರಲು ಶಕ್ತಗೊಳಿಸುತ್ತದೆ. ಸಂಯೋಜನೆಗಳ ಮನೋಧರ್ಮವು ಒಟ್ಟಾರೆ ಮನಸ್ಥಿತಿಗೆ ಪೂರಕವಾಗಿದೆ, ಮಾನಸಿಕ ಅಥವಾ ಆಧ್ಯಾತ್ಮಿಕ ಅಂಶಗಳಿAದ ಗುಣಗಳನ್ನು ಪುಷ್ಟೀಕರಿಸಲಾಗುತ್ತದೆ. ಅವರ ಕಲೆಯು ಮೂಲಭೂತವಾಗಿ ಸಂತಾನ ಮೌಲ್ಯಗಳೊಂದಿಗೆ ಬಲವಾದ ನಂಬಿಕೆಯ ಅಭಿವ್ಯಕ್ತಿಯಾಗಿದೆ.

ಪೂಜ್ಯತೆ ಮತ್ತು ನಮ್ರತೆ ಸ್ಪಷ್ಟವಾಗಿದೆ, ಜೊತೆಗೆ ಉತ್ತಮ ಸಂತಾನೋತ್ಪತ್ತಿ ಮತ್ತು ಆಂತರಿಕ ಸಂಸ್ಕೃತಿಯನ್ನು ಸೂಚಿಸುವ ಹಿಂಜರಿಕೆ. ಕಲಾವಿದನು ತಾನು ನಿಜವಾಗಿಯೂ ಚಿತ್ರಿಸಲು ಇಷ್ಟಪಡುವುದನ್ನು ಚಿತ್ರಿಸುವ ಕೌಶಲ್ಯವನ್ನು ಹೊಂದಿದ್ದಾನೆ, ಗಟ್ಟಿಯಾದ ಬಣ್ಣದಲ್ಲಿ ಜೋರಾಗಿ ಕೂಗದಿರುವ ಚಾತುರ್ಯವನ್ನು ಅವನು ಹೊಂದಿದ್ದಾನೆ. ಅವರ ಕುಂಚದ ಕೆಲಸವು ಬ್ರಷ್ ಅಲ್ಲ.
 ದೇಸಾಯಿ ಅವರು ಆಧುನಿಕ ವರ್ಣಚಿತ್ರಕಾರರಾಗಿದ್ದು ಅವರು ಆಳವಾದ ಭಾವನೆಗಳು ಮತ್ತು ಜೀವನದಲ್ಲಿ ತಮ್ಮದೇ ಆದ ಸತ್ಯವನ್ನು ಚಿತ್ರಿಸುತ್ತಾರೆ ಎಂಬುದು  ಕೇಶವ್ ಮಲಿಕ್, ನವದೆಹಲಿ ಅವರ ಅಭಿಪ್ರಾಯವಾಗಿದೆ.
ಇನ್ನು ದೇಸಾಯಿ ಸಾಧನೆಯ ಹಾದಿಯ ಹಿಂದೆ ಹುಡುಕಿ ಹೋದರೆ ಅವರ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಸಬ್ಲೈಮ್ ಆರ್ಟ್ ಗ್ಯಾಲರಿ, ಬೆಂಗಳೂರು (೨೦೧೮,೨೦೧೯) ಯುಬಿ ನಗರ,ಬೆಂಗಳೂರು-೨೦೧೧, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೧೦, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೦೫, ಸಂಸ್ಕೃತಭವನ ಹಾಸನ-೨೦೦೫, ಕಲಾಕೃತಿ ಪ್ರದರ್ಶನ, ಬೆಂಗಳೂರು-೧೯೮೯ ಮುಖ್ಯವಾಗಿವೆ.
ಇವರು ಭಾಗವಹಿಸಿದ ಶಿಬಿರ ಕಾರ್ಯಾಗಾರಗಳಲ್ಲಿ  ಪ್ರಮುಖವಾಗಿ ಬಿಜಾಪುರ ಕಲಾ ಶಿಬಿರ- ೨೦೨೪, ಅಂತರಾಷ್ಟಿçÃಯ ಕಲಾ ಶಿಬಿರ-ಮೂಡುಬಿದರೆ-೨೦೨೩, ಕಾರ್ಕಳ ಕಲಾ ಶಿಬಿರ-೨೦೨೨, ರಾಷ್ಟಿçÃಯ ಕಲಾವಿದರ ಶಿಬಿರ, ವಾರಣಾಸಿ-೨೦೧೬, ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್–೨೦೧೪, ಕಾಗಿನೆಲೆ ಟ್ರಸ್ಟ್, ಕಾಗಿನೆಲೆ ಕಲಾಶಿಬಿರ, ಹಾವೇರಿ–೨೦೧೩,  ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ–೨೦೧೩, ವಿಶ್ವ ಕನ್ನಡ ಸಮ್ಮೇಳನ ಕಲಾ ಶಿಬಿರ ಬೆಳಗಾವಿ-೨೦೧೧, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾ ಶಿಕ್ಷಕರ ಶಿಬಿರ ಹಾಸನ-೨೦೧೦, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾಶಿಬಿರ, ಕೆಮ್ಮಣ್ಣು ಗುಂಡಿ-೨೦೦೯, ವೆಂಕಟಪ್ಪ ಗ್ಯಾಲರಿ, ಬೆಂಗಳೂರು-೨೦೦೭, ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ-೨೦೦೬, ಉಪಾಸನಾ ಕಲಾವಿದರ ಶಿಬಿರ ಸಮಸೆ ಚಿಕ್ಕಮಗಳೂರು-೨೦೦೬, ರಾಷ್ಟಿçÃಯ ಕಲಾ ಪ್ರದರ್ಶನ, ಮೌಂಟ್ ಅಬು-೨೦೦೪, ಅಕಾಡೆಮಿ ಸದಸ್ಯರಿಗೆ ಕಲಾ ಶಿಬಿರ, ಹೊನ್ನಾವರ-೨೦೦೩ ರಾಷ್ಟಿçÃಯ ಸಂಶೋಧನಾ ಕಾರ್ಯಾಗಾರ, ದೆಹಲಿ-೨೦೦೦, ಹೊಯ್ಸಳ ಉತ್ಸವ ಕಲಾ ಶಿಬಿರ, ಹಳೇಬೀಡು- ೧೯೯೯, ಕಲಾ ಬರಹಗಾರರ ಶಿಬಿರ, ಕರ್ನಾಟಕ ಲಲಿತಕಲಾ ಅಕಾಡೆಮಿ, ಇಳಕಲ್-೧೯೯೯, ಕಲಾ ಉಪನ್ಯಾಸಕರ ಚಿತ್ರಕಲಾ ಪ್ರದರ್ಶನ ಬಿಜಾಪುರ-೧೯೯೯, ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಕಲಾವಿದರ ಶಿಬಿರ ಅಲ್ಲದೇ ದೇಸಾಯಿಯವರು ೬೦  ಮೇಲ್ಪಟ್ಟ ಗುಂಪು ಪ್ರದರ್ಶನದಲ್ಲಿ ಈವರೆಗೆ ಭಾಗಿಯಾಗಿದ್ದಾರೆ.

 ಇವರ ಪೈಂಟಿAಗ್ಸ್ಗಳ ಖಾಸಗಿ ಸಂಗ್ರಹಣೆಗಳು ಸಾಗರೋತ್ತರವಾಗಿ  ಲಂಡನ್, ಬೆಲ್ಜಿಯಂ, ಫ್ರಾನ್ಸ್, ಸ್ವಿಜರ್ಲ್ಯಾಂಡ್, ಜರ್ಮನಿ, ಆಸ್ಟ್ರಿಯಾ, ಯುಎಇ, ಮಸ್ಕತ್, ಕೆನಡಾಗಳಲ್ಲಿ ಅಲ್ಲದೇ ಭಾರತದಲ್ಲಿ ಮೌಂಟ್ ಅಬು, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಗುಲ್ಬರ್ಗಾ, ಕೊಪ್ಪಳ, ಮೈಸೂರು, ಹಾಸನ, ಹೊನ್ನಾವರ, ಮಂಗಳೂರು, ಉಡುಪಿ, ಕುಂದಾಪುರ, ಮುಂಬೈ, ಚೆನ್ನೈ, ಪಾಂಡಿಚೇರಿ, ಕೊಚ್ಚಿಯಲ್ಲಿ ಇವೆ.  ದೇಸಾಯಿಯವರು ಮಾಜಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಾಜಿ ಸದಸ್ಯರು  ಧಾರವಾಡ,  ಸಂಚಾಲಕರು ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ–೨೦೦೬, ಸುವರ್ಣ ಕರ್ನಾಟಕ ಕಲಾವಿದರ ಶಿಬಿರ, ಹಾಸನ ೨೦೦೬, ಸಂಚಾಲಕರು ಚಿತ್ಕಲಾ ಉದಯೋನ್ಮುಖ ಕಲಾವಿದರ ಪ್ರದರ್ಶನ, ಕಾರ್ಯದರ್ಶಿ ರಾಜ್ಯ ಕಲಾಶಿಕ್ಷಕರ ಸಮ್ಮೇಳನ ಹಾಸನ-೨೦೦೧,
ಕಲಾವಿದರನ್ನು ಕಲೆ ಹಾಕಿ ಯಶಸ್ವಿ ಕಲಾಶಿಬಿರ ಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಕಲಾಸಕ್ತರ ಗಮನ ಸೆಳೆದಿರುವ ದೇಸಾಯಿಯವರು ಉತ್ತಮ ಛಾಯಾಗ್ರಾಹಕರೂ ಹೌದು. ಅವರು ತಮ್ಮ ಛಾಯಗ್ರಾಹಣದಿಂದ ಹಾಸನದ ಹುಣಸಿನಕೆರೆ ಪೋಟೋ ತೆಗೆದು ಸಾರ್ವಜನಿಕರ, ಪರಿಸರ ಪ್ರೇಮಿಗಳ ಮನಸೆಳೆದು ಕೆರೆ ಉಳಿವಿಗೆ ತಮ್ಮದೇ ಕಲ್ಪನೆಯಲ್ಲಿ ಕೆಲಸ ಮಾಡಿದ್ದಾರೆ. ಮನಕ್ಕೆ ಮುದ ನೀಡುವ ಚಿಂತನೆಗೀಡು ಮಾಡುವ ಹಲವಾರು ಚಿತ್ರಗಳಿಗೆ ಕುಂಚದಿAದ ಜನ್ಮ ನೀಡಿದ್ದಾರೆ. ನಿಸರ್ಗದ ಅನೇಕ ಚಿತ್ರಗಳನ್ನು ರಚಿಸಿರುವುದಲ್ಲದೇ  ತಮ್ಮ ಕ್ಯಾಮರದಿಂದಲೂ ಪ್ರಕೃತಿಯ ರಮ್ಯ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಪ್ರಕೃತಿಯ ವಿಶಿಷ್ಟ ಸೌಂದರ್ಯ ಕಲಾವಿದನನ್ನು ಪ್ರಭಾವಿಸುವಂತೆಯೆ ಅವನ ಭಾವನಾತ್ಮಕ ಪ್ರತಿಕ್ರಿಯೆಯು ಅವನ ಅಂತರAಗ ಸಾಮರ್ಥ್ಯವನ್ನು ಮತ್ತು ವೈಯಕ್ತಿಕ ಅಭಿರುಚಿಯನ್ನು ಒಳಗೊಂಡಿರುತ್ತದೆ. ಈ ದಿಸೆಯಲ್ಲಿ ದೇಸಾಯಿರವರ ಪ್ರಕೃತಿ ಮತ್ತು ವಿಕೃತಿ ಎಂಬ ಕಲಾಕೃತಿ ಅಮೂರ್ತ ಶೈಲಿಯ ಕಲಾರಚನೆಯಾಗಿದ್ದು ಚಿಂತನೆಗೆ ಹಚ್ಚುವ ಮೂಲದ್ರವ್ಯವನ್ನು ಒದಗಿಸುತ್ತದೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬAಧವನ್ನು ವಿಕೃತಗೊಳಿಸುತ್ತಿರುವ ಮನುಷ್ಯರ ಮನೋಭಾವನೆಯನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದೆ. ಪ್ರಕೃತಿಯನ್ನೇ ಅವಲಂಬಿಸಿ ಬದುಕುವ ಮನುಷ್ಯ ಭವಿಷ್ಯವನ್ನು ಯೋಚಿಸದೆ ನಿಸರ್ಗ ನಾಶ ಮಾಡುತ್ತಿರುವ ವಿಕೃತ ಮನೋಭಾವನೆಯನ್ನು ಅರ್ಥಗರ್ಭಿತವಾಗಿ ಮತ್ತು ಸಾಂಕೇತಿಕವಾಗಿ ಚಿತ್ರಿಸಲ್ಪಟ್ಟ ಕಲಾಕೃತಿಯಲ್ಲಿ ಪ್ರಸ್ತುತ ಜನ ನೈಸರ್ಗಿಕ ಸಂಪತ್ತನ್ನು ಹಾಳುಗೆಡುವುತ್ತಿರುವ ಬಗ್ಗೆ ಕಲಾವಿದರಲ್ಲಿ ಆಕ್ರೋಶ ಮತ್ತು ಸಮಾಜಿಕ ಕಳಕಳಿಯಿದೆ. ಚಿತ್ರಕಲೆಯ ವಿವಿಧ ಆಯಾಮಗಳಲ್ಲಿ ಕೃಷಿ ಮಾಡಿ ಜಲವರ್ಣ, ತೈಲವರ್ಣ, ಪೋಸ್ಟರ್ ಕಲರ್, ಟ್ರಾನ್ಸ್ಪರೆಂಟ್ ಬಣ್ಣ ಬಳಸಿ ಮನೋಹರವಾದ ಕಲಾಕೃತಿಗಳನ್ನು  ರಚಿಸಿದ್ದಾರೆ. ಜಲವರ್ಣದ ಪಾರದರ್ಶಕ ಬಣ್ಣಗಳನ್ನು ಬಳಸಿ ಸೃಷ್ಠಿಸಿರುವ ಚಿತ್ರಗಳು ಹಾಗೂ ತೈಲವರ್ಣದ ಇವರ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉತ್ತಮ ಛಾಯಾಗ್ರಾಹಕರಾಗಿರುವ ದೇಸಾಯಿಯವರು ತಾವು ಭೇಟಿನೀಡಿದ್ದ ಜರ್ಮನಿ, ಹಾಲೆಂಡ್, ಬೆಲ್ಲಿಯಂ, ಪ್ಯಾರಿಸ್, ಸ್ವಿಜ್ಜರ್ ಲ್ಯಾಂಡ್, ನ್ಯೂಜಿಲ್ಯಾಂಡ್ ಆಸ್ಟೆçÃಲಿಯ  ದೇಶಗಳ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ್ದಾರೆ. ತಮ್ಮ ಮನೆಯನ್ನೇ ಕಲಾಗ್ಯಾಲರಿ ಮಾಡಿ ಬೇರೆ ಹೊರಗಿನ ಕಲಾವಿದರ  ಕಲಾಪ್ರದರ್ಶನಗಳನ್ನು ಮಾಡಿದ್ದಾರೆ.


ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯,
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧

About The Author

Leave a Reply

You cannot copy content of this page

Scroll to Top