ಕನ್ನಡದ ಕವಿಗಳು ಸಾಹಿತ್ಯ ರಚನೆಗೆ ಬಹುಮೂಲಗಳಿಂದ ಪ್ರೇರಣೆ ಪಡೆವಾಗ ತೋರುವ ಭಾಷಾತೀತ ಧರ್ಮಾತೀತ ದೇಶಾತೀತ ಮುಕ್ತತೆಯನ್ನು, ದೇಶಕಟ್ಟುವ ತತ್ವವನ್ನಾಗಿಯೂ ರೂಪಿಸುತ್ತಾರೆ.
ಅಂಕಣ ಬರಹ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ.
ಈ ವಾರ-
ಸ್ವಾತಂತ್ರ್ಯ ಹೋರಾಟಗಾರ್ತಿ ಜಾನಕಿ ದೇವಿ ಬಜಾಜ್ (1893-1979
. ಇಂದಿನ, ಯುವಜನಾಂಗ ಗಾಂಧೀ ಮಾದರಿಯ ಹೋರಾಟಕ್ಕೆ ಪ್ರತಿಕ್ರಿಯಿಸುತ್ತಿರುವುದು ಆಶಾದಾಯಕವಾಗಿದೆ. ಇದಕ್ಕೆ ಪ್ರಸ್ತುತ ಭ್ರಷ್ಟಾಚಾರ ವಿರೋಧಿ ಹೋರಾಟ ಒಂದು ಜ್ವಲಂತ ಉದಾಹರಣೆಯಾಗಿದೆ
ಒಂದು ಸವಿ ಮುಂಜಾವಿನ ತಳ್ಳುಗಾಡಿಯ ಮಾರಾಟಗಾರರ ಕೂಗಿನ ಬನಿಯೊಡನೆ ಮೂಡಿನಿಂತ ಈ ಲೇಖನ, ‘ಹೊಸಗನ್ನಡದ ಮುಂಗೋಳಿ’ ಎಂದು ಕವಿ ಮುದ್ದಣನನ್ನು ಕರೆದು ಗೌರವಿಸಲಾಗಿರುವಂತೆ, ‘ಹೊಸದಿನದ ಜಾಗೃತ ಮುಂಗೋಳಿ’ಗಳೆಂದು ನಾವು ಮುಂಜಾವಿನ ಈ ಮಾರಾಟಗಾರರನ್ನು ಕರೆದು ಗೌರವಿಸಬಹುದು ಅಲ್ಲವೇ ಎಂಬ ಸದಾಶಯವನ್ನು ಹಾಗೇ ಮನದ ಬಾನಿನಲಿ ತೇಲಿಸಿತು…
ನಾಗರಿಕ ಸಮಾಜವು ಕೆಟ್ಟಪ್ರಭುತ್ವದ ಬಗ್ಗೆ ವಿಮರ್ಶಾತ್ಮಕವಾಗಿದ್ದರೆ, ದೇಶದ್ರೋಹಿ ಎನಿಸಿಕೊಂಡವರು ದೇಶಪ್ರೇಮಿಗಳಾಗಿ ತೋರುವರು; ಅದು ಪ್ರಭುತ್ವದ ಕೃತ್ಯಗಳಿಗೆ ಬೆಂಬಲಿಸಿದರೆ, ದೇಶಪ್ರೇಮಿಗಳು ಬಂಧನ ಮತ್ತು ಮರಣಗಳಲ್ಲಿ ನುಗ್ಗಾಗುವರು.
ಹನ್ಸಾ ಜೀವರಾಜ್ ಮೆಹ್ತಾರವರು ಒಬ್ಬ ಸಾಮಾಜಿಕ ಕಾರ್ಯಕರ್ತೆ, ಶಿಕ್ಷಣತಜ್ಞೆ, ಸುಧಾರಣಾವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಕೂಡ ಆಗಿದ್ದರು
ಅಂಕಣ ನೆಲಸಂಪಿಗೆ ಈ ಹಕ್ಕಿ ಮರಳಿ ಕಾಡಿಗೆ ಹೋಗಿ ಬದುಕಲಾರದು…! ಮನೆಗೆ ಬೇಕಾದ ಕೆಲ ಅಗತ್ಯದ ವಸ್ತುಗಳು ಮತ್ತು ಬಟ್ಟೆ ಖರೀದಿಸಲೆಂದು ಆವತ್ತು ಪೇಟೆಗೆ ಹೋಗಿದ್ದೆವು. ಮಾರ್ಚ್ ತಿಂಗಳ ಸುಡುಬಿಸಿಲು, ಧೂಳು. ಬಿಡುವು ಕೊಡದೆ ಧಾವಿಸುವ ವಾಹನಗಳ ಕರ್ಕಶ ಸದ್ದು. ಎಲ್ಲದರ ನಡುವೆ ರೋಸಿ ಹೋಗಿ ಬಟ್ಟೆಯಂಗಡಿಯ ಬಳಿ ತಲುಪಿದಾಗ ಆಗಲೇ ಆಯಾಸವಾಗಿತ್ತು. ಅಂತಹ ಹೊತ್ತಿನಲ್ಲಿ ಗುಬ್ಬಚ್ಚಿಯೊಂದು ಉರಿಬಿಸಿಲಿಗೆ ಕುದಿಯುತ್ತಿದ್ದ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಲ್ಲೇನೂ ಕಾಣಲಿಲ್ಲ. ಅದು ಬಾಯಾರಿಕೆ, ಹಸಿವಿನಿಂದ ಕಂಗೆಟ್ಟಂತೆ ನನಗೆ ಕಂಡಿತು. ಮೊದಲೆಲ್ಲ, ‘ಅಂಗಡಿ ಪಕ್ಕಿ’ ಎಂಬ ಹೆಸರಿಗೆ ಅನ್ವರ್ಥವಾಗಿ ಸಾಲು ಅಂಗಡಿಗಳ ಮುಂದೆ ಗಲಾಟೆ ಎಬ್ಬಿಸುತ್ತ ಚೆಲ್ಲಿದ ಕಾಳು ಆರಿಸುತ್ತಿದ್ದ ಗುಬ್ಬಚ್ಚಿಗಳ ಹಿಂಡು ನೆನಪಾಗಿ ಈ ಒಂಟಿಗುಬ್ಬಿ ಸದ್ಯದ ಪರಿಸ್ಥಿತಿಗೆ ರೂಪಕವಾಗಿ ಕಂಡು ಎದೆಯೊಳಗೆ ನೋವಾಯಿತು. ಬಟ್ಟೆಖರೀದಿಸುವ ಆಸಕ್ತಿ ಉಳಿಯದೆ “ನನಗೀಗ ಏನೂ ಬೇಡ” ಎಂದು ತಿಳಿಸಿ ಮನೆಮಂದಿಯನ್ನು ಅಂಗಡಿಯೊಳಗೆ ಕಳಿಸಿ ಸುಮ್ಮನೆ ಯೋಚಿಸುತ್ತ ನಿಂತುಬಿಟ್ಟೆ… ** ನಮ್ಮ ಆ ಬಾಡಿಗೆ ಮನೆಗೆ ಸಕಾರಣವಾಗಿ ‘ಹಕ್ಕಿ ಮನೆ’ ಎಂದು ಹೆಸರಿಟ್ಟಿದ್ದೆವು. ವಿಶಾಲವಾಗಿದ್ದ ಮನೆಯ ಸುತ್ತ ಒಂದಷ್ಟು ಜಾಗವಿತ್ತು; ಮರಗಿಡಗಳಿದ್ದವು. ತೆಂಗು, ನುಗ್ಗೆ ಮರಗಳು, ಪಪ್ಪಾಯಿ, ಬಾಳೆ, ಕ್ರೋಟನ್ ಗಿಡಗಳು ಅಂದ ಹೆಚ್ಚಿಸಿದ್ದವು. ಅಷ್ಟು ಒಳ್ಳೆಯ ಬಾಡಿಗೆಮನೆ ಸಿಕ್ಕಿದ್ದು ನಮ್ಮಅದೃಷ್ಟವೆಂದೇ ಹೇಳಬೇಕು. ಹಗಲಿನ ವೇಳೆ ಹಕ್ಕಿ ಹಾಡು, ಕೋಳಿಗಳ ಕೂಗು, ಮುಂಗುಸಿ, ಅಳಿಲು, ನಾಯಿ, ಬೆಕ್ಕುಗಳ ಸುಂದರ ಪ್ರಪಂಚವಾದರೆ; ರಾತ್ರಿ ತಾರಸಿಯ ಮೇಲಿನ ಬೆಳದಿಂಗಳ ಲೋಕ, ಇರುಳಹಕ್ಕಿಗಳ ಸವಿಮಾತು!ಇಂತಹ ಮನೆಗೆ ಹೋದ ಸ್ವಲ್ಪ ಸಮಯದಲ್ಲಿ ಮಗ ಮತ್ತು ನಾನು ರಜೆಯ ದಿನ ಒಂದು ಕಿಲಾಡಿತನ ಮಾಡಿದೆವು. ಎರಡುರಟ್ಟಿನ ಪೆಟ್ಟಿಗೆಯನ್ನುತೆಗೆದುಕೊಂಡು, ರಂಧ್ರಕೊರೆದು, ದಾರಕಟ್ಟಿ ಸಿಟೌಟಿನ ಕಂಬಕ್ಕೆ ಬಿಗಿಯಾಗಿ ಬಿಗಿದೆವು. “ಯಾವುದಾದರೊಂದು ಹಕ್ಕಿ ಬಂದು ಅದನ್ನು ತನ್ನ ಗೂಡಾಗಿ ಸ್ವೀಕರಿಸಬಾರದೇ’ ಎಂಬ ಅಸಾಧ್ಯ ಹಂಬಲ, ಕಲ್ಪನೆ ಮಾತ್ರ ನಮ್ಮದಾಗಿತ್ತು. ಆದರೆ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ಮಡಿವಾಳ ಹಕ್ಕಿ(ಮ್ಯಾಗಿಫೈ ರಾಬಿನ್)ಯೊಂದು ನಮ್ಮಕಲ್ಪನೆಯನ್ನು ವಾಸ್ತವಕ್ಕಿಳಿಸಿ ಔದಾರ್ಯ ಮೆರೆಯಿತು! ಆ ಬೆಳಗು ರಟ್ಟಿನ ಪೆಟ್ಟಿಗೆಗೆ ನಾರು ತಂದು ಹಾಕುತ್ತಿದ್ದ ಮಡಿವಾಳವನ್ನು ಕಂಡು ಕನಸೊಂದನ್ನು ಎಡವಿ ಬಿದ್ದಂತೆ ನನಗೆ ಭಾಸವಾಯಿತು! ಮಗನಂತೂ ಹಕ್ಕಿಗಳಿಗೆ ತೊಂದರೆಯಾದೀತೆಂದು ಮೌನವಾಗಿಯೇ ಕುಣಿದು ಖುಷಿಪಟ್ಟ! ಬದುಕಿನಲ್ಲಿ ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಅನುಭವಕ್ಕೆ ತೆರೆದುಕೊಂಡ ಸಂಭ್ರಮ ನನ್ನದಾಗಿತ್ತು. ಹುಲುಮಾನವರಾದ ನಾವು ಕೊಟ್ಟ ‘ಗೂಡನ್ನುʼಆಕಾಶಲೋಕದ ಕಿನ್ನರರಾದ ಹಕ್ಕಿಗಳು ಸ್ವೀಕರಿಸುವುದೆಂದರೆ ಏನು ಕಮ್ಮಿಯಮಾತೇ ? ಈ ಪುಳಕವೇ ನನ್ನ ಮುಂದಿನ ದಿನಗಳಿಗೆ ಉತ್ಸಾಹದ ಅಮೃತವೆರೆಯಿತು. ಸಿಟೌಟ್ನಲ್ಲಿದ್ದ ಹಕ್ಕಿಗಳಿಗೆ ತೊಂದರೆಯಾಗದಂತೆ ಚೂರೂ ಶಬ್ದ ಮಾಡದೆ ಇಡೀ ಮನೆಯ ಕೆಲಸಗಳನ್ನು ನಿರ್ವಹಿಸುವುದು ನಮ್ಮ ದಿನಚರಿಯ ಭಾಗವಾಯಿತು. ಹಕ್ಕಿಜೋಡಿ ಬೇಕೆಂಬಷ್ಟು ನಾರನ್ನುತಂದು ಗೂಡಿನೊಳಗೊಂದು ಗೂಡು ಮಾಡಿದವು. ನಂತರ ಮೊಟ್ಟೆಯಿಟ್ಟದ್ದು, ಕಾವು ಕೊಟ್ಟದ್ದುಎಲ್ಲವನ್ನೂ ಅವುಗಳ ನಿಶ್ಯಬ್ದ ಚಲನವಲನದಿಂದ ತಿಳಿದುಕೊಂಡೆವು. ಕೆಲವೇ ದಿನದಲ್ಲಿ ಮರಿಯೊಡೆದು ‘ಚೀಂಚೀಂ’ ಎಂಬ ಕಂದಮ್ಮಗಳ ಸದ್ದು ಕೇಳಿಬಂದಾಗ ವ್ಯಕ್ತಪಡಿಸಲಾದ ಸಂತಸ, ಎನರ್ಜಿ ಮನೆಯನ್ನೆಲ್ಲ ತುಂಬಿಕೊಂಡಿತು. ದಿನದ ಕೆಲಸಗಳನ್ನು ಮುಗಿಸಿ ಕತ್ತಲ ನೀರವತೆಯಲ್ಲಿ ಸ್ವಲ್ಪ ಹೊತ್ತು ಕುಳಿತು ನಿಸರ್ಗದ ಸದ್ದುಗಳನ್ನು ಆಲಿಸುವುದು ನನ್ನ ನಿತ್ಯದ ಅಭ್ಯಾಸ. ಇಂಥಾ ಹೊತ್ತಿನಲ್ಲಿ ತಲೆ ಮೇಲೆಯೇ ಇರುತ್ತಿದ್ದ ಹಕ್ಕಿ ಸಂಸಾರದ ಮೆಲುಮಾತು, ಜೀವಂತಿಕೆ ನನ್ನನ್ನು ಹೊಸದೊಂದು ಬೆಚ್ಚನೆಯ ಲೋಕಕ್ಕೆ ಕರೆದೊಯ್ಯುತ್ತಿತ್ತು. ತುಸು ದಿನಗಳಲ್ಲಿ ಮರಿಗಳು ದೊಡ್ಡವಾಗಿ ಕೊನೆಗೊಮ್ಮೆ ಹಾರಿ ಹೋದದ್ದು ತಿಳಿದಾಗ ಸದ್ಯ; ಎಲ್ಲವೂ ಸರಿಯಾಯಿತಲ್ಲ! ನಮ್ಮರಟ್ಟಿನ ಪೆಟ್ಟಿಗೆಯಿಂದ ಇಷ್ಟಾದರೂ ಸಹಾಯವಾಯಿತಲ್ಲ ಎಂದು ಸಮಾಧಾನದ ನಿಟ್ಟುಸಿರಿಟ್ಟೆವು. ಆದರೆ ಆ ರಟ್ಟಿನ ಪೆಟ್ಟಿಗೆಗೆ ಇನ್ನೂ ಹಲವು ಕರ್ತವ್ಯಗಳಿರಬಹುದೆಂದು ತಕ್ಷಣಕ್ಕೆ ನನಗೆ ಹೊಳೆದಿರಲಿಲ್ಲ. . ಒಂದಷ್ಟು ದಿನ ಕಳೆದ ಅನಂತರ ಒಂದು ದಿನ ಮಡಿವಾಳ ಹಕ್ಕಿಯೊಂದು ಮತ್ತೆ ನಮ್ಮಗೂಡಿಗೆ ನಾರು-ಬೇರು ತಂದು ಹಾಕುತ್ತಿದ್ದುದ್ದನ್ನು ನೋಡಿದೆ! ಅರೇ, ಇದ್ಯಾವ ಹಕ್ಕಿ; ಒಮ್ಮೆಉಪಯೋಗವಾದ ಹಕ್ಕಿಗೂಡು ಮತ್ತೆ ವಾಸಯೋಗ್ಯವಲ್ಲ ಎಂಬುದು ಬಾಲ್ಯದಿಂದಲೂ ಕಂಡ ಹಾಗೆ, ಓದಿದ ಹಾಗೆ ನನ್ನ ತಿಳುವಳಿಕೆ! ಆದರಿಲ್ಲಿ ಆ ‘ಜ್ಞಾನ’ ಉಲ್ಟಾ ಹೊಡೆದಿತ್ತು! ಹೌದು, ಪುನಃ ಇನ್ನೊಂದು ಹಕ್ಕಿ ನಮ್ಮರಟ್ಟಿನ ಪೆಟ್ಟಿಗೆಯನ್ನುತನ್ನ ಮನೆಯಾಗಿ ಸ್ವೀಕರಿಸಿತ್ತು. ಇದಂತೂ ಬಹಳ ಖುಷಿಯ, ಕುತೂಹಲದ ವಿಷಯ. ಎರಡು, ಮೂರು ದಿನ ತಿರುತಿರುಗಿ ಈ ವಿಷಯವನ್ನೇ ಮಾತಾಡಿದ್ದಾಯಿತು. ಆದರೆ ಅಷ್ಟರಲ್ಲಿ ನಮ್ಮ ಮನೆಯ ಓನರ್ ಅವರ ಒತ್ತಡ ಮಿತಿಮೀರಿ ‘ಮನೆ ಬಿಟ್ಟು ಹೊರಡಿ’ ಎಂಬ ಕೊನೆಯ ‘ವಾರ್ನಿಂಗ್’ ಹೊರಬಿದ್ದಿತು! ತಾವೇ ಬಂದು ಅಲ್ಲಿ ನೆಲೆಸುತ್ತೇವೆಂಬ ಅವರ ಮಾತಿಗೆ ನಮ್ಮಲ್ಲಿ ಬದಲಿರಲಿಲ್ಲ. ಆದರೆ ನನಗೆ ಇನ್ನೊಂದು ಮನೆ ಹುಡುಕುವ, ಸಾಮಾನು ಸರಂಜಾಮು ಸಾಗಿಸುವ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಎಲ್ಲ ಚಿಂತೆಗಳ ಮಧ್ಯೆ ಹಕ್ಕಿಗಳ ವ್ಯಥೆ ಎಡೆಬಿಡದೆ ಕಾಡುತ್ತಿತ್ತು. ವಿಧಿಯಿಲ್ಲದೆ ಮತ್ತೊಂದು ವಾರದಲ್ಲಿ ನಾವು ಮನೆ ಖಾಲಿ ಮಾಡಿದೆವು. ಕನಸಿನ ಗೂಡುಕಟ್ಟುತ್ತಿರುವ ಹಕ್ಕಿಗಳಿಗೇನು ಹೇಳುವುದು… ಹೊರಟ ಗಳಿಗೆ ಮನ ಭಾರವಾಗಿತ್ತು. ಆದರೆ ಗಟ್ಟಿಮನಸ್ಸು ಮಾಡಿ ನಾನೊಂದು ನಿರ್ಧಾರ ತೆಗೆದುಕೊಂಡೆ. ಮುಂದೆ ಆ ಮನೆಗೆ ಬರುವ ಯಾರೇ ಆದರೂ ಬಾಗಿಲಲ್ಲೇ ಇರುವ ರಟ್ಟಿನ ಪೆಟ್ಟಿಗೆಯನ್ನು ‘ಕಸ’ವೆಂದು ತಿಳಿದು ಆಚೆ ಎಸೆಯುವುದು ಖಾತ್ರಿಯಿತ್ತು. ಹಾಗಾಗಿ, ಐದಾರು ದಿನ ನಾರು ತಂದಿಟ್ಟ ಹಕ್ಕಿಗಳಲ್ಲಿ ಕ್ಷಮೆ ಬೇಡಿ, ನಡುಗುವ ಕೈಗಳಿಂದ ಗೂಡನ್ನು ಬಿಚ್ಚಿ ಜೋಪಾನವಾಗಿ ಹೊಸ ಮನೆಗೆ ಒಯ್ದೆ. ಮುಂದೆ ಕೇಳಿಸಬಹುದಾದ ಮೊಟ್ಟೆ ಮರಿಗಳ ಆಕ್ರಂದನಕ್ಕಿಂತ ಇದು ಉತ್ತಮವೆಂದು ನಾನು ಭಾವಿಸಿದೆ. ನಮ್ಮʼಹೊಸʼ ಬಾಡಿಗೆಮನೆ ಹಳೆಯ ಮನೆಯೇ ಆದರೂ ನಿಸರ್ಗದ ಮಡಿಲಲ್ಲಿತ್ತು. ಇಲ್ಲಿಯೂ ಮನೆ ಮುಂದೆ ಕಂಬವೊಂದಿತ್ತು. ರಟ್ಟಿನ ಪೆಟ್ಟಿಗೆಯ ಹಕ್ಕಿಗೂಡನ್ನು ಬರೀ ನೆನಪಿಗೆಂದೇ ಬಿಚ್ಚಿಕೊಂಡು ಬಂದದ್ದು ಹೌದಾದರೂ ನೋಡೋಣವೆಂದು ಕಂಬಕ್ಕೆ ಕಟ್ಟಿ, ಮನೆ ಸಾಮಾನು ಜೋಡಿಸುವಲ್ಲಿ, ಶಾಲೆಯ ಕೆಲಸದಲ್ಲಿ ನಿರತಳಾದೆ. ಸುಮಾರು ತಿಂಗಳೊಂದು ಕಳೆದಿತ್ತು. ಒಂದು ದಿನ ವಿನ್ಯಾಸ್ ಕರೆದು ತೋರಿಸಿದ; ಇನ್ನೊಂದು ಮಡಿವಾಳ ಹಕ್ಕಿ ಜೋಡಿ ಅದೇ ಪ್ರೀತಿಯ ಗೂಡಿಗೆ ಮತ್ತೆ ನಾರು ತಂದು ಹಾಕುತ್ತಿತ್ತು. ಈ ಸಲವಂತೂ ನಾನು ಭಾವುಕಳಾದೆ. ಕಣ್ಣೀರು ಉಕ್ಕಿ ಮಣ್ಣಿಗೆ ಸೇರಿತು. ಹಕ್ಕಿಗಳು ಮರಿಗಳಿಗೆ ಬೆಚ್ಚನೆಯ ಹಾಸಿಗೆ ಮಾಡಿದವು; ಮೊಟ್ಟೆಯಿಟ್ಟವು, ಮರಿಗಳೂ ಒಡೆದವು. ಆ ಹೊತ್ತಿಗೆ ಬಿರುಬೇಸಗೆ ಕಳೆದು ಮಳೆಗಾಲ ಆರಂಭವಾಗಿತ್ತು. ಜೋರು ಗಾಳಿ ಮಳೆಗೆ ಸಿಬ್ರ್(ಎರಚಲು) ಬಡಿದು ಗೂಡು ಹಾಳಾಗುತ್ತದೇನೋ ಎಂಬ ಭಯ ಕಾಡಿತು. ಈಗಾಗಲೇ ಆ ಪೆಟ್ಟಿಗೆ ಚೂರು ಶಿಥಿಲವಾಗಿತ್ತು. ಆದರೆ ಒಳಗಡೆ ನಾರಿನ ಆಶ್ರಯವಿತ್ತು. ಹಕ್ಕಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ದಿನಚರಿಯಲ್ಲಿ ಮೈಮರೆತಿದ್ದವು. ಈ ಸಂದರ್ಭದಲ್ಲೇ ಒಂದು ದಿನದ ಮಟ್ಟಿಗೆ ನಾವು ಹಾಲಾಡಿಗೆ ಹೋಗಬೇಕಾಯಿತು. ಆದರೆ ಹಾಗೆ ಹೋಗಿ ಬರುವುದರೊಳಗೆ ಇಲ್ಲಿ ನಮ್ಮ ಮೂಡಬಿದ್ರೆಯ ನಿಸರ್ಗದ ಮನೆಯಲ್ಲಿ ದೊಡ್ಡ ಅವಘಡವೇ ನಡೆದಿತ್ತು. ಏನಾಯಿತೋ ಗೊತ್ತಾಗಲಿಲ್ಲ ದೊಡ್ಡ ಹಕ್ಕಿಯ ದಾಳಿಯೋ, ಹಾವಿನ ಕಿತಾಪತಿಯೋ… ಮರಿಗಳು ಮಾಯವಾಗಿದ್ದವು! ಅಪ್ಪ-ಅಮ್ಮ ಹಕ್ಕಿಗಳು ಬಹುಶಃ ಹಾರಿಹೋಗಿದ್ದವು. ಇಂತಹ ನೋವುಗಳಿಗೆ ಪದಗಳಿಲ್ಲ. ಅಂತೂ ಹೇಗೋ ಎಲ್ಲವನ್ನೂ ಮರೆತು ಬದುಕಬೇಕೆಂಬ ಸೂತ್ರ ಅನುಸರಿಸಿ ಕುಂಟುವ ಮನಸ್ಸಿನೊಂದಿಗೆ ದಿನಕಳೆದ್ದಾಯಿತು. ಎರಡು ಮೂರು ತಿಂಗಳ ನಂತರ ಒಂದು ದಿನ ಹಕ್ಕಿಗೂಡಿನೊಳಗೆ ದೊಡ್ಡದೊಡ್ಡ ಹುಲ್ಲಿನೆಳೆಗಳು ಕಂಡುಬಂದವು. ಇದನ್ಯಾರು ತಂದಿಟ್ಟರೆಂದು ತಿಳಿಯಲಿಲ್ಲ! ಆ ಸಂಜೆ ಹೊತ್ತು ಮನೆಯೆದುರು ಹುಲ್ಲು ಬೆಳೆದ ಜಾಗದಲ್ಲಿ ಏನೋ ಕೆಲಸ ಮಾಡುತ್ತಿದ್ದ ನನ್ನವರಲ್ಲಿ ಕೇಳಿದೆ; “ನೀವೇನಾದರೂ… ಹುಲ್ಲನ್ನು ಹಕ್ಕಿ ಗೂಡೊಳಗೆ ಹಾಕಿದ್ದೀರಾ?” ಎಂದು! ಏಕೆಂದರೆ ಯಾರೋ ಮನುಷ್ಯರೇ ತುಂಬಿಟ್ಟಂತೆ ಅಸಡಾ ಬಸಡಾ ಇತ್ತದು. ಇವರು ನಗಾಡಿದರು. “ನನಗೇನು ಬೇರೆ ಕೆಲಸ ಇಲ್ವಾ?” ಎನ್ನುತ್ತಾ! ಹಾಗಾದರೆ ಇದ್ಯಾವುದೋ ಹೊಸ ಹಕ್ಕಿಯ ಕಾರುಬಾರೇ ಇರಬೇಕೆಂದು ಜ್ಞಾನೋದಯ ಹೊಂದಿ ಕಳ್ಳನನ್ನು ಕಂಡುಹಿಡಿಯಲು ಕಾದುಕೂತೆವು. ಅಂತೂ ಕಳ್ಳ ಬೇಗನೆ ಸಿಕ್ಕಿಹಾಕಿಕೊಂಡ; ಅದೊಂದು ‘ಮುನಿಯ’. ಭರದಿಂದ ಹುಲ್ಲನ್ನು ತಂದು ರಟ್ಟಿನ ಪೆಟ್ಟಿಗೆಯೊಳಗೆ ಒಟ್ಟುತ್ತಿತ್ತು. ಇದಂತೂ ಭಯಂಕರ ಚಟುವಟಿಕೆಯ ಹಕ್ಕಿ. ಎಂಥಾ ಚುರುಕು, ಏನು ಕತೆ! ನಿಜವಾಗಿಯೂ ಅದೃಷ್ಟಶಾಲಿ ರಟ್ಟಿನಪೆಟ್ಟಿಗೆ ಮತ್ತು ನಾವು. ಈ ಹಕ್ಕಿ ಜೋಡಿಯೂ ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿಗಳಿಗೆ ತುತ್ತುಣಿಸಿ, ದೊಡ್ಡ ಮಾಡಿ ಒಂದು ದಿನ ತೆರಳಿದವು. ಆದರೆ ಖಾಲಿಯಾದ ಗೂಡು ಹಾಗೇ ಉಳಿಯಲಿಲ್ಲ. ಮತ್ತೆ ಎರಡು ಮುನಿಯ ಹಕ್ಕಿಯ ಸಂಸಾರಗಳು ಬಂದವು. ಯಾವ ಅವಘಡಗಳಿಗೂ ತುತ್ತಾಗದೆ ನೆಮ್ಮದಿಯಿಂದ ಬದುಕಿ ಗೂಡನ್ನು ಖಾಲಿ ಮಾಡಿ ಹೊರಟುಹೋದವು. ಇಷ್ಟೆಲ್ಲಾ ಆಗುವಾಗ ಬಿರುಸಾದ ಮಳೆ ಮತ್ತು ಬಿಸಿಲಿಗೆ ಸ್ವಲ್ಪ ಭಾಗವನ್ನು ಒಡ್ಡಿಕೊಂಡಿದ್ದ ಗೂಡು ಮತ್ತಷ್ಟು ಶಿಥಿಲವಾಗಿತ್ತು. ಕೊನೆಯ ಸಲವಂತೂ ಇನ್ನೇನು ಕಳಚಿ ಬೀಳುತ್ತದೋ ಎಂಬಂತಾಯಿತು. ಆದರೆ ಒಳಗಡೆ ನಾರು, ಬೇರು, ಹುಲ್ಲಿನ ಬಲವಾದ ಮನೆಯೇ ಇದ್ದುದರಿಂದಲೋ ಏನೋ ಮುನಿಯಗಳು ಧೈರ್ಯವಾಗಿ ವಾಸಿಸಿದವು. ಲೆಕ್ಕ ಹಾಕಿದರೆ; ಕಾಲಾನುಕಾಲಕ್ಕೆ ಒಟ್ಟು ಆರು ಹಕ್ಕಿ ಸಂಸಾರಗಳು ನಮ್ಮ ಈ ಒಂದೇ ರಟ್ಟಿನ ಪೆಟ್ಟಿಗೆಯನ್ನು ತಮ್ಮಗೂಡಾಗಿ ಸ್ವೀಕರಿಸಿದ್ದವು! ನನ್ನ ಬದುಕಿನ ಪ್ರಮುಖ ಘಟನೆಗಳಲ್ಲಿ ಇದೂ ಒಂದು. ಮುಗ್ಧ ಹಕ್ಕಿಗಳು ಮನುಷ್ಯರಾದ ನಮ್ಮ ಮೇಲಿಟ್ಟ ಪ್ರೀತಿ, ವಿಶ್ವಾಸದ ಕುರುಹು ಇದೆಂದು ಭಾವಿಸಿ ಸದಾ ಕೃತಜ್ಞಳಾಗಿರುತ್ತೇನೆ. ಶಿಥಿಲವಾದ ಗೂಡನ್ನು ಬಿಚ್ಚಿ ನೆನಪಿಗೆಂದು ಇಟ್ಟುಕೊಂಡೆವು. *** ಮುಂದೆ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ಲಾಟೊಂದರಲ್ಲಿ ವಾಸಿಸಲು ಹೊರಟಾಗ ಅಲ್ಲಿಯೂ ಹಕ್ಕಿಗಳು ನಮ್ಮನ್ನು ಹಿಂಬಾಲಿಸಿ ಸಂಧಿಸುತ್ತವೆಂದು ನಾನು ಊಹಿಸಿರಲಿಲ್ಲ! ಆದರೆ ಮಣ್ಣಿನ ಸ್ಪರ್ಶ, ಮರಗಳ ಸೊಗಡು ಇಲ್ಲದ ಫ್ಲಾಟಿನ ಮನೆಯಲ್ಲಿ ಸೂರಕ್ಕಿಗಳು ಬಂದು ದಿನಗಳನ್ನು ಹಗುರಗೊಳಿಸಿಬಿಟ್ಟವು! ಬಾಲ್ಕನಿಯಲ್ಲಿದ್ದ ಬಟ್ಟೆಯೊಣಗಿಸುವ ದಾರಕ್ಕೆ ಗೂಡು ಕಟ್ಟಿ ಮರಿಗಳನ್ನು ಪೊರೆದವು. ವಿಚಿತ್ರವೆಂದರೆ ಇಲ್ಲಿಯೂ ಕೂಡಾ ಖಾಲಿಯಾದ ಗೂಡು ತಿರಸ್ಕೃತಗೊಳ್ಳದೆ ಮತ್ತೆ ಮತ್ತೆ ಸೂರಕ್ಕಿಗಳು ಬಂದು ಅದರೊಳಗೆ ಹಾಸಿಗೆ ಮಾಡಿ ಮೊಟ್ಟೆಯಿಟ್ಟು ಮರಿಗಳನ್ನು ಪೋಷಿಸಿಕೊಂಡು ಹೋದವು. ಹೀಗೆ ಒಂದು ವರ್ಷದಲ್ಲಿ ನಾಲ್ಕೈದು ಆವರ್ತನವಾದ ನಂತರ ಗೂಡು ಹರಿದು ಹೋಗಿ ಕಾಲು ಭಾಗ ಮಾತ್ರ ಉಳಿದುಕೊಂಡಿತು. ಆದರೂ ಬಿಡದೆ ಮತ್ತೊಂದು ಸೂರಕ್ಕಿ ಬಂದು ಅದೇ ಗೂಡನ್ನು ಪೂರ್ಣಗೊಳಿಸಿ ತನ್ನ ಜೊತೆಗಾತಿಯೊಂದಿಗೆ ಮರಿಗಳನ್ನು ಬೆಳೆಸಿ ಬಾನಿಗೆ ಹಾರಿಸಿತು! ಅಚ್ಚರಿಯೆಂದರೆ ನವೀಕರಣಗೊಂಡ ಈ ಹೊಸ ಗೂಡಿಗೆ ಮತ್ತೆ ಮತ್ತೆ ಹೊಸ ಜೋಡಿ ಬಂದು ಕುಟುಂಬ ಪೊರೆದವು. ನೀರವ ರಾತ್ರಿಗಳಲ್ಲಿ ಕಾವು ಕೊಡಲು ಗೂಡಿನಿಂದ ತಲೆ ಹೊರ ಹಾಕಿ ಕುಳಿತ ಹಕ್ಕಿ ಒಮ್ಮೆ ನನ್ನ ಮಗು ಎನಿಸಿದರೆ, ಇನ್ನೊಮ್ಮೆ ನಮ್ಮನ್ನು ಕಾಯುವ ನಿಸರ್ಗದ ಕಣ್ಣು ಅನ್ನಿಸುವುದು. ಇದಂತೂ ನಾನು ಬರೆಯುವ ಕುರ್ಚಿಯಿಂದ, ನಿದ್ದೆ ಹೋಗುವ ಮಂಚದಿಂದ ಬರೀ ಒಂದು ಮಾರು ದೂರದಲ್ಲಿರುವ ಗೂಡು. ಅಂದರೆ ಸೂರಕ್ಕಿ ಸಂಗಾತಿಗಳು ಸದಾ ನನ್ನ ಹತ್ತಿರ…..ತೀರಾ ಹತ್ತಿರ! ಈ ನಡುವೆ ಹೇಳಲೇಬೇಕಾದ ಇನ್ನೊಂದು ವಿಷಯವೆಂದರೆ, ನಮ್ಮ ‘ಹಕ್ಕಿಮನೆ’ಯಲ್ಲಿ ಪಿಕಳಾರ (ಬುಲ್ ಬುಲ್)ಗಳು ಅಂಗಳದ ಕ್ರೋಟನ್ ಗಿಡದಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವಾದರೂ; ಬೆಕ್ಕೋ, ಹಾವೋ ತಿಂದು ಹಾಕಿದ್ದರಿಂದ ವ್ಯರ್ಥವಾಗಿತ್ತು. ಬಹುಶಃ ರಟ್ಟಿನ ಪೆಟ್ಟಿಗೆಯನ್ನು ನಾವು ಕಂಬಕ್ಕೆ ಎತ್ತರದಲ್ಲಿ ಕಟ್ಟಿದ್ದು ಈ ದೃಷ್ಟಿಯಿಂದ ಬಹಳ ಸಹಾಯವಾಯಿತು ಮತ್ತು ಹಕ್ಕಿಗಳಿಗೂ ಮೆಚ್ಚುಗೆಯಾಯಿತೆಂದು ಕಾಣುತ್ತದೆ! ಇನ್ನು, ನಮ್ಮ ಫ್ಲಾಟಿನ ಗೋಡೆಗಳ ಸಂದುಗೊಂದುಗಳಲ್ಲಿ ಪಾರಿವಾಳದ ನೆಲೆ, ಅವುಗಳ ಗುಟರ್ಗುಟರ್ ಸಂಗೀತ ಸದಾ ಸೆಳೆಯುತ್ತದೆ. ಬಾಲ್ಕನಿಯಲ್ಲಿ ನೀರು, ಕಾಳು, ಬಾಳೆಹಣ್ಣು ಇಡುವ ವ್ಯವಸ್ಥೆ ಮಾಡಿದ್ದೇವೆ.
ತಮ್ಮ ಹೃದಯದ ಬೆಚ್ಚಗಿನ ಗೂಡಿನಲ್ಲಿ ಗಜಲ್ ಕನಕಾಂಗಿಯನ್ನು ಕಾಪಿಡುತ್ತಿರುವ ಗಜಲ್ ಕಾರರೊಂದಿಗೆ ಪ್ರತಿ ವಾರ ರುಬರು ಆಗುವ ಸದಾವಕಾಶ ದೊರಕಿದೆ. ಪ್ರತಿ ಗುರುವಾರ ಒಬ್ಬ ಗಜಲ್ ಗಾರುಡಿಗರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ…!!






