Category: ಕಾವ್ಯಯಾನ

ಕಾವ್ಯಯಾನ

ಮನಿಷಾಗೊಂದು ಗಝಲ್

ಮನಿಷಾಗೊಂದು ಗಝಲ್ ಅರುಣಾ ನರೇಂದ್ರ ನಾನಿಲ್ಲಿ ಮೂಕಳಾಗಿರಬೇಕು ಮಾತನಾಡಿದರೆ ನಾಲಿಗೆ ಕತ್ತರಿಸುತ್ತಾರೆನೀನಿಲ್ಲಿ ಜೀವಂತ ಶವವಾಗಿರಬೇಕು ಪ್ರತಿಭಟಿಸಿದರೆ ಗುಂಡಿ ತೋಡಿಸುತ್ತಾರೆ ರಾಮನಾಳಿದ ಈ ನೆಲದಲ್ಲಿ ನಾನು ಮತ್ತೆ ಹೆಣ್ಣಾಗಿ ಹುಟ್ಟಿದ್ದೇನೆ ಗೆಳತಿಹೊಸಿಲು ದಾಟಿ ಲಕ್ಷ್ಮಣ ರೇಖೆಯನ್ನೂ ದಾಟುತ್ತೇನೆಂದರೆ ವನವಾಸ ಕಳಿಸುತ್ತಾರೆ ನಿರ್ಭಯಾ ಮಧು ದಿಶಾ ಮತ್ತೆಲ್ಲರ ಆರ್ತನಾದ ಇನ್ನೂ ಕೇಳಿಸಿದರೂ ಮತ್ತೆ ಎಂಥ ನಿರ್ಲಕ್ಷ್ಯಇಂದು ಮನಿಶಾ ನಾಳೆ ನನ್ನ ಸರದಿ ಬೇಡವೆಂದರೆ ಮಸಣದ ಮನೆ ತೋರಿಸುತ್ತಾರೆ ಯುಗ ಯುಗಗಳು ಅಳಿದರೂ ಇನ್ನೆಷ್ಟು ಹೆಣ್ಣು ಬಲಿಯಾಗಬೇಕು ಇವರ ಕಾಮದ ತೀಟೆಗೆಅಂಗಾಂಗಗಳ […]

ಗಝಲ್

ಗಝಲ್ ಸುಜಾತಾ ರವೀಶ್ ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತು ನಾಳಿನ ಕನಸಿನ  ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು  ಧುತ್ತನೆ ಕವಿದಿಹ ಕಾರ್ಮೋಡ ಬಾನನು ಮಂಕಾಗಿಸಿತು ಒಮ್ಮೆಲೆಯೇ ಮೆತ್ತನೆ ಬರುತಿಹ ಹೊಂಗಿರಣ ನಗುವಿನ ಹೂಬಿಸಿಲಲಿ ಸೊಗಸಾಗಿಸಿತು ಮಾರ್ದವ  ಭಾವವ ಮುಳ್ಳಿನ ಮೊನೆಯೊಲು ಚುಚ್ಚ ತೊಡಗಿತು ಚಿಂತೆಯು ಹಾರ್ದಿಕ ಆಶಯ ಹೃದಯವ ಮುಟ್ಟುತ ಶಂಕೆಗಳನು ಮರೆಯಾಗಿಸಿತು ಜೀವನ ನೌಕೆಯು ಸಿಲುಕಿ ಬಿರುಗಾಳಿಗೆ ಹೊಯ್ದಾಡುತಿದೆ ಹೀಗೇಕೆ? ದೇವನ ಒಲುಮೆ ಭದ್ರತೆ ನೀಡುತ ಭರವಸೆಯಲಿ ಖುಷಿಯಾಗಿಸಿತು ಹಂಬಲ ಕಾಮನೆ ಮನುಜನ ಬದುಕಲಿ ನನಸಾದರೆನಿತು ಒಳಿತು ನಂಬಿದ ದೈವದ […]

ಮರಕುಟಿಕ

ಕವಿತೆ ಮರಕುಟಿಕ ಡಾ. ಅರಕಲಗೂಡು ನೀಲಕಂಠ ಮೂರ್ತಿ ಒಂದು ಮರಕುಟಿಕ ಕುಕ್ಕುತ್ತಿದೆಕಾಯಕದಂತೆ ಕಾಯದೆಯಾರಿಗೂ ಎಡೆಬಿಡದೆಗುಕ್ಕು ಗುಕ್ಕು ಚಕ್ಕೆಯಷ್ಟೇಎಬ್ಬುತ್ತಿದೆ ಲೆಕ್ಕವಿಡದೆಮರದ ಕಾಂಡ-ಕೊಂಬೆಗಡುಸಾಗಿದೆ ವೀರ ಎದೆಯ ಹಾಗೆ! ಎಷ್ಟೊಂದು ಮರಕುಟಿಕಗಳುಬಂದು ಬಂದು ಕುಟಿಕಿ ಹೋಗಿದ್ದಾಗಿದೆಅರಿವು ಮಂಕಾಗುವಷ್ಟು ದಿನಗಳಿಂದಬರುತ್ತಲೇ ಇವೆ ಇಂದಿಗೂಸರದಿಯಲ್ಲೋಜಾತ್ರೆಯ ಜಂಗುಳಿಯಲ್ಲೋ… ಬಂದೇ ಬರುತ್ತವೆ ತಪ್ಪದೆ ಮುಂದೂ–ಮರವಿರುವಷ್ಟು ದಿನಅದರ ತಿರುಳು ತೊನೆವಷ್ಟು ದಿನಬಂದೇ ಬರುತ್ತವೆ… ಮರಕ್ಕೆ ನೋವಾಗುವುದೋ ಬಿಡುವುದೋಕುಟುಕುವ ಕೊಕ್ಕಿಗೇಕೆ ಉಸಾಬರಿ!ಕೆಲವೊಮ್ಮೆ ಮರ ಒಂದೇ…ಮರಕುಟಿಕಗಳನೇಕನೋವು ಮಾತ್ರ ನಿಶಬ್ದ ತದೇಕ!ಚಿಂತೆ ಕಂಬನಿ ಯಾರಿಗೆ…ಏಕೆ! ಮರ ಉರುಳಿ ಅಳಿದಮೇಲೆಎಲ್ಲಿಯ ಮರಕುಟಿಕಎಲ್ಲಿಯ ಕುಕ್ಕುವಿಕೆ…!

ಗಜಲ್

ಗಜಲ್ (ಗಾಂಧಿ:ಇನ್ನೊಂದು ನೋಟ) ಡಾ. ಗೋವಿಂದ ಹೆಗಡೆ ಚರಕ ನೂಲು ಕೋಲುಗಳಲ್ಲೇ ಅವನ ಕಂಡಿದ್ದೇವೆಕನ್ನಡಕವನ್ನು ಮರೆಯದೇ ಜೇಬಿಗೆ ಇಳಿಸಿದ್ದೇವೆ ಸ್ವರಾಜ್ಯ ಸತ್ಯಾಗ್ರಹ ಸ್ವದೇಶಿ- ದುಡಿಯುತ್ತ ಹೋದ ಅವನುನಾವು ಪುರಸೊತ್ತಾಗಿ ಕೂತು ಅವನ ಟೀಕಿಸುತ್ತೇವೆ ಒಂದೇ ಮಗ್ಗುಲ ಚಿತ್ರಗಳೆಂದರೆ ನಮಗೆ ಬಹಳ ಪ್ರೀತಿಒಂದು ಕಣ್ಣು ಮುಚ್ಚಿಯೇ ಎಲ್ಲವನ್ನೂ ಅಳೆಯುತ್ತೇವೆ ಕಪ್ಪು-ಬಿಳುಪುಗಳ ಆಚೆ ಲೋಕವೆಷ್ಟು ಸಂಕೀರ್ಣವಿದೆಕರಿಯ ಕನ್ನಡಕದಲ್ಲಿ ಕಂಡದ್ದು ಮಾತ್ರ ನಿಜವೆನ್ನುತ್ತೇವೆ ತಪ್ಪು ತೊಡರು ನೆರಳುಗಳನ್ನು ನೋಡುತ್ತ ನೀಡಿ ತೀರ್ಪುಬೆಳಕಿನೊಡನೆಯ ಮುಖಾಮುಖಿಗಳ ಬೇಕೆಂದೇ ಮರೆಯುತ್ತೇವೆ ಸಂಕೇತ-ಸಂಗತಿ, ಭಜನೆ-ಭಂಜನೆಗಳಲ್ಲಿ ನಮ್ಮ ನಡೆ […]

ದ್ವಿಪದಿಗಳು

ದ್ವಿಪದಿಗಳು ವಿ.ಹರಿನಾಥ ಬಾಬು ಯಾರನ್ನಾದರೂ ಏನ ಕೇಳುವುದಿದೆ?ಕೇಳಲು ಉಳಿದಿರುವುದಾದರೂ ಏನು ನೀನೇ ಇಲ್ಲದ ಮೇಲೆ! ಹತ್ತು ದಿಕ್ಕಿಗೂ ಹುಡುಕಾಡಿದೆ ಹುಚ್ಚನಂತೆಹಿಡಿದ ಹುಚ್ಚು ಮತ್ತಷ್ಟು ಗಟ್ಟಿಯಾಯಿತು ನೀ ಕಾಣದೆ ಎದುರಾದವರೆಲ್ಲಾ ದಿಟ್ಟಿಸಿ ನೋಡಿ ಹೋಗುತ್ತಿದ್ದಾರೆನೀನು ನನ್ನ ಕಣ್ಣೊಳಗೇನಾದರೂ ಅವಿತುಕೊಂಡಿರುವೆಯಾ?? ರೆಪ್ಪೆ ಮುಚ್ಚಿದರೆ ಕಡಲು ಉಕ್ಕಿ ಹರಿವುದುಹಾಯಿ ದೋಣಿಯ ಬಟ್ಟೆ ಆಕಾಶವ ಹೊದ್ದಿದೆ ಮರಗಿಡಗಳೂ ಮೌನ ತಾಳಿವೆಜೀವವಿರದ ಈ ದೇಹ ದಿಗಿಲುಗೊಂಡಿದೆ ಬೆಳ್ಳಕ್ಕಿ ಯಾಕೋ ಮುಗಿಲಕಡೆ ನೋಡುತಿದೆಈಗತಾನೇ ನೀನು ನಭಕೆ ಹಾರಿಕೊಂಡಂತೆ ಕಾಣುತಿದೆ ಒಂಟಿತನಕೆ ಯಾಕಿಷ್ಟು ಆತಂಕ?ನೀನು ಕೊಟ್ಟ ಪ್ರೀತಿಯ […]

ಪ್ರತಿಷ್ಠೆ ಬದಿಗಿಟ್ಟರೆ ಬಾಳು

ಕವಿತೆ ಪ್ರತಿಷ್ಠೆ ಬದಿಗಿಟ್ಟರೆ ಬಾಳು ಲಕ್ಷ್ಮೀದೇವಿ ಕಮ್ಮಾರ ಮನೆ ಮಿಡಿದರೂ ಪ್ರತಿಷ್ಟೆ ಗಡಿಅಡ್ಡಿಯಾಗಿದೆ ನನಗೂ ನಿನಗೂ ಅಕ್ಕಪಕ್ಕದ ಲ್ಲಿದ್ದರೂ ಅಹಂನ ಅಡ್ಡಗೋಡೆ ಅರಿಯಲಾರೆ ನನ್ನ ನೀನು ,ನಿನ್ನ ನಾನು ಬೇಕು ಬೇಕೆನಿಸಿರೂ ಸಾಕು ಮಾಡಿದ್ದೆವೆ ಮಾತುಕುಹಕಿಗಳಿಂದಾಗಿದೆ ಬಿರುಕುಒಡೆದು ಹೋಗುತ್ತಿದೆ ಪ್ರೀತಿ ಸೇತು ಒಲವದಾರೆ ಹರಿಸಲು ಬಂದುದರ ಕುರುಹುಅರಿಯದೆ ನಮ್ಮ ಸ್ವಾರ್ಥದ ಪರದಿಯಲಿ ಬಂದಿಯಾಗುಳಿದವರು ನಾವು ***********************************

ಪ್ರೀತಿಯ ಬಿತ್ತಿ ಬೆಳೆಯಲು

ಕವಿತೆ ಪ್ರೀತಿಯ ಬಿತ್ತಿ ಬೆಳೆಯಲು ನಾಗರಾಜ ಹರಪನಹಳ್ಳಿ ನಾನು ಹೆಣ್ಣಾಗುವೆಗಾಂಧಿಯಂತಹ ಮಗನ ಹೆರಲು ಹೌದು,ಗಾಂಧಿಯಂಥ ಮಗ ಬೇಕುಈ ನೆಲಕ ದಿಕ್ಕು ತೋರಿಸಲು ಸಹನೆ ,ಸತ್ಯ ಅಹಿಂಸೆ ಹಂಚುವಗೋಡ್ಸೆ ಮನದ ಬಂದೂಕುಕಸಿದು, ಭೂಮಿ ಮೇಲಿನ ಗಡಿರೇಖೆ ಅಳಿಸಿಮನುಷ್ಯರೆಲ್ಲಾ ಒಂದೇ ಎಂದು ಮನದಟ್ಟು ಮಾಡಲುಗಾಂಧಿಯಂಥ ಮಗನ ಹೆರಬೇಕು ಗೋಡ್ಸೆ ಮನದ ಗಡಿಗಳ ಅಳಿಸಿಅವನ ಕಣ್ಣಿಗೆ ಕರುಣೆ ತುಂಬಿಅವನ ದೇಹದ ಅಣು ಅಣುವಿನಲಿ ದಯೆಯ ಬಿತ್ತಿಬೆಳೆಯಲು ಗಾಂಧಿಯಂತಹ ಮಗ ಬೇಕು ಹರಿದ ನೋಟು ,ಬೀದಿ ಕಸದ ಸ್ವಚ್ಛತೆಗೆ ಮೀಸಲಿಟ್ಟ ನನ್ನ ದೇಶದ […]

ಅಷ್ಟೇನೂ ಅಂತರವಿರಲಿಲ್ಲ

ಕವಿತೆ ಅಷ್ಟೇನೂ ಅಂತರವಿರಲಿಲ್ಲ ನಾಗರಾಜ ಮಸೂತಿ ಅಷ್ಟೇನೂ ಅಂತರವಿರಲಿಲ್ಲ,ಆದರೂನೆರಳು ತಾಗುತ್ತಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂಹೋಟೆಲ್ಲಿನ ಚೆಂಬು ಲೋಟಗಳಿಗೆನಮ್ಮ ಸ್ಪರ್ಶದ ಅರಿವಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಕರಗಳು ಕರ್ಪುರದ ಕಾವುಕಂಡಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಆವಾಸಗಳು ಊರಂಚಿನಲ್ಲಿ ಮಿಂಚುತ್ತಿದ್ದವು ಆದರೆ ಮನಸ್ಸುಗಳುಇದೇ ಅಂತರದ ಅಗ್ನಿಯಸ್ಪರ್ಶದಿಂದ ಕರಕಲಾಗಿದ್ದವು… ************************************

ನೀನಾದೆ ನೀನಾದೆ

ಕವಿತೆ ನೀನಾದೆ ನೀನಾದೆ ಶಾಂತಲಾ ಮಧು ನೀನಾದೆ ಜೀವನದದಾತೆ ತಾಯಿಜೀವನದ ದಾತರುಹಲವಾರುಮುಗ್ದ ಮನಸಿಗೆಹಬ್ಬಿ ಆಲಂಗಿಸಿಉತ್ಸಾಹಕೆ ಚಿಲುಮೆ ನೀನಾದೆ ನೀನಾದೆ ನೀನಾದೆಪ್ರೀತಿ -ಪ್ರೇಮ ವಾತ್ಸಲ್ಯದಲಿತಣಿಸಿ ಸಂಕಲ್ಪ ವಿಕಲ್ಪ ನೀನಾದೆ ನೀನಾದೆಭೂಮಿ ಆಕಾಶಜಲ-ಚರ ಪ್ರಕೃತಿನೀಭಾವನೆಗಳ ಕಲಿಸಿಪುಲಕಿಸಿ ಪ್ರಶ್ನಿಸಿಉತ್ತರವೂ ನೀನಾದೆ ನೀನಾದೆ ನೀನಾದೆತಪ್ಪು ಸರಿ ಕೊಂಡಿಗಳಪೋಣಿಸಿ ನಿನ್ನೀ ಪ್ರಿಯಸರವಾಗಿಸಿ ಮೆರಸಿನೀನಾದೆ ಆದೆಅರಿಷ್ಟ್ ವರ್ಗಗಳಿಗೆಶರಣಾಗಿಸಿ ಕಾಡಿಸಿಬಿಟ್ಟು ಬಿಡದೆಕತ್ತಲು ಬೆಳಕಮಾಯೆಯಲಿ ಮೀಯಿಸಿಮನತಟ್ಟಿ .ನೀನಾದೆನೀನಾದೆಸ್ವಾರ್ಥ ವಿಕಲ್ಪಕೆ ಪ್ರಶ್ನೆನೀನಾದೆ ಶೋಧನೆಗೆ ಹುಟ್ಟುಭಾವನೆ ಬದುಕಿಗೆಹುಡುಕಾಟ ,ನೀನಾದೆ ನೀನಾದೆತಪ್ಪಿಗೆ ಹುಸಿ ಹೊಣೆಗಾರ ನೀನಾದೆ ನೀನಾದೆಭಯ-ಭಕ್ತಿಗೆ – ಭ್ರಮೆ,ಅಳಲನಾಲಿಸಿಅಂತರಂಗದ ಮಾತಾಗಿಸತ್ಯ ನಿತ್ಯವೇ […]

ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ

ಕವಿತೆ ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ ಪ್ರಜ್ಞಾ ಮತ್ತಿಹಳ್ಳಿ ಬಾ ಬಾಪೂ ಇಲ್ಲೇ ಕೂಡುಇಕ್ಕಟ್ಟಾದರೂ ಅಂಗಳಕ್ಕಿಳಿಯಲುವೈರಾಣು ಭಯಗುಂಡು ಕನ್ನಡಕವನುಅರ್ಧ ಮುಚ್ಚಿದರೂಮಾಸ್ಕ್ ತೆಗೆಯಬೇಡಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂಹಾರ ಮಂಗಳಾರತಿಸಾಮೂಹಿಕ ಭಜನೆ ರಘುಪತಿಮುಗಿಸಿ ಬಂದ ಮೇಲೆಯೇ ನಾಷ್ಟಾ ತಿಂದೆಆದರೀ ಸಲಏನೋ ಕಲಮಲ ಕಳೆದ ವಾರ ನಿನ್ನ ಆತ್ಮಕತೆ ಓದಿಎಲ್ಲರ ನೋವನು ಬಲ್ಲವನೊಬ್ಬನಹುಡುಕುತ್ತ ಹೊರಟಿದ್ದೆನಡುರಾತ್ರಿ ಕಂದೀಲು ಹಚ್ಚಿದದೋಣಿಗಳು ತುಯ್ಯುವ ಅಲೆಯಲ್ಲಿನಿಧಾನಕ್ಕೆ ಹೊರಟಿದ್ದವು.ನಿದ್ದೆ ಜಗ್ಗುವ ರೆಪ್ಪೆಗಳ ಅಗಲಿಸುತ್ತಹುಟ್ಟು ಹಾಕುವ ಬೆಸ್ತರು ಎಂದೂಮಲಗದ ಮೀನುಗಳ ಹಂಬಲಿಸುತಿದ್ದರುಕೈ ಮಗ್ಗ ನಂಬಿ ಬಟ್ಟೆ ಕತ್ತರಿಸುವಹೆಂಗಸರು ಕೂಳಿಲ್ಲದೇ […]

Back To Top