ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಕೊಳಲನೂದಿ ಕರೆವಾಗ
ಕರಗಿ ಹೋದೆ ಮಾಧವ
ಪ್ರೀತಿಯ ಕರೆಯ ತಿರಸ್ಕರಿಸಿ
ಬಾಳಲು ಸಾಧ್ಯವ

ನವಿಲು ಗರಿಯ ಹಿಡಿದು ಬಂದೆ
ನಲ್ಮೆಯ ಗೋಪಾಲನಿಗಾಗಿ
ಬೆಣ್ಣೆಯ ಮಡಿಕೆ ಹೊತ್ತು ತಂದೆ
ಕಳ್ಳನಾದ ಆ ಕೃಷ್ಣನಿಗಾಗಿ

ಬೃಂದಾವನದೊಳಗೆ ಅವಿತ
ಅವನ ಹುಡುಕತ ಬಂದೆ
ರಂಗಿನೋಕುಳಿ ಎರಚಿ
ಮರೆಯಾದವನ ಒಲವಲಿ ನೆನೆದೆ

ಎದೆಯ ಬಯಕೆಯ ಅರಿತವನಾದರೂ
ಎಲ್ಲರೆದುರು ಮಗ್ಧನ ರೀತಿ ನಿಂತು ಸತಾಯಿಸಿ
ಗೋಪಿಕೆಯರ ಜೊತೆ ಕಳೆದು ಹೋದ
ಗೋವರ್ಧನನ ಗುರುತು ಹಿಡಿದೆ ಭ್ರಮಿಸಿ

ಇನ್ನು ಕಾಡಿಸ ಬೇಡ ಮಾಧವ
ವಿರಹದಲಿ ಬೆಂದು ಸೋತಿದೆ ಜೀವ
ಆನಂದದ ಯಮುನೆಯಲಿ ಮೀಯಿಸು
ಜೀವಚೇತನವಾಗಿ ಕೈಹಿಡಿದು ಮುನ್ನಡೆಸು


About The Author

Leave a Reply

You cannot copy content of this page

Scroll to Top