ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

ಆರಂಭವಾಗಲಿ ಬದಲಾವಣೆ ನಮ್ಮಿಂದಲೇ……ಜಯಶ್ರೀ ಜೆ ಅಬ್ಬಿಗೇರಿ

ಪ್ರೇರಣಾ ಸಂಗಾತಿ ಜಯಶ್ರೀ ಜೆ ಅಬ್ಬಿಗೇರಿ ಆರಂಭವಾಗಲಿ ಬದಲಾವಣೆ  ನಮ್ಮಿಂದಲೇ…… ನಾವೆಲ್ಲ ಜಗತ್ತು ಬದಲಾಗಬೇಕು ಎಂದು ಬಯಸುತ್ತೇವೆ.ಆದರೆ ನಾವು ಬದಲಾಗಲು ಬಯಸುವುದಿಲ್ಲ.ಈ ಮಾತು ವಿಚಿತ್ರ ಆದರೂ ಸತ್ಯ. ನೀನು, ಮೊದಲು ಆ ಬದಲಾವಣೆಯಾಗಿ ಬದಲಾಗು” (Be the change you want to see in the world) ಎಂಬ ಮಹಾತ್ಮ ಗಾಂಧೀಜಿಯವರ ಈ ಮಾತು ಕೇವಲ ಘೋಷಣೆಯಲ್ಲ; ಅದು ಬದುಕಿನ ಪರಮ ಸತ್ಯ.ನಾವು ಜಗತ್ತನ್ನು ದೂಷಿಸುವ ಮುನ್ನ ನಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಲು ಕಲಿಯಬೇಕಿದೆ. ಒಂದು ಪುಟ್ಟ ಪ್ರೇರಣಾದಾಯಕ ಕಥೆಯೊಂದನ್ನು ಓದಿದ್ದುನೆನಪಾಗುತ್ತಿದೆ. ನೀವೂ ಓದಿ. ಒಮ್ಮೆ ಕಡಲತೀರದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿತ್ತು. ಅಲೆಗಳ ಆರ್ಭಟಕ್ಕೆ ಸಿಲುಕಿ ಲಕ್ಷಾಂತರ ನಕ್ಷತ್ರ ಮೀನುಗಳು  ತೀರದ ಮರಳಿನ ಮೇಲೆ ಬಂದು ಬಿದ್ದಿದ್ದವು. ಸೂರ್ಯನ ಶಾಖ ಹೆಚ್ಚಾಗುತ್ತಿದ್ದಂತೆ ಅವು ನೀರಿಲ್ಲದೆ ಒದ್ದಾಡಿ ಸಾಯತೊಡಗಿದವು.ಅದೇ ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ವೃದ್ಧ, ಮರಳಿನ ಮೇಲೆ ಬಿದ್ದಿದ್ದ ಮೀನುಗಳನ್ನು ನೋಡಿ ನಿಟ್ಟುಸಿರು ಬಿಟ್ಟರು. ಆದರೆ, ಅಷ್ಟರಲ್ಲೇ ಒಬ್ಬ ಪುಟ್ಟ ಬಾಲಕ ಅಲ್ಲಿಗೆ ಬಂದ. ಅವನು ಮರಳಿನ ಮೇಲಿದ್ದ ಮೀನುಗಳನ್ನು ಒಂದೊಂದಾಗಿ ಎತ್ತಿ ಪ್ರೀತಿಯಿಂದ ಸಮುದ್ರದ ನೀರಿಗೆ ಎಸೆಯತೊಡಗಿದ. ಇದನ್ನು ನೋಡಿದ ವೃದ್ಧ ಬಾಲಕನ ಹತ್ತಿರ ಬಂದು, “ಮಗುವೇ, ಇಲ್ಲಿ ಲಕ್ಷಾಂತರ ಮೀನುಗಳಿವೆ. ನೀನು ಕೆಲವೇ ಕೆಲವು ಮೀನುಗಳನ್ನು ಉಳಿಸಿದರೆ ಈ ವಿಶಾಲ ಜಗತ್ತಿಗೆ ಏನು ವ್ಯತ್ಯಾಸವಾಗುತ್ತದೆ?” ಎಂದು ಕೇಳಿದ. ಬಾಲಕ ನಸುನಕ್ಕು, ಮತ್ತೊಂದು ಮೀನನ್ನು ಕೈಗೆತ್ತಿಕೊಂಡು ನೀರಿಗೆ ಎಸೆದ. ನಂತರ ವೃದ್ಧರ ಕಣ್ಣುಗಳನ್ನು ದಿಟ್ಟಿಸಿ ನೋಡಿ, “ಇಡೀ ಜಗತ್ತಿಗೆ ವ್ಯತ್ಯಾಸವಾಗದೇ ಇರಬಹುದು, ಆದರೆ ನಾನು ನೀರಿಗೆ ಎಸೆದ ಆ ಒಂದು ಮೀನಿನ ಜೀವಕ್ಕೆ ಇಡೀ ಜಗತ್ತೇ ಬದಲಾದಂತಾಯಿತಲ್ಲವೇ?” ಎಂದನು.ವೃದ್ಧನಿಗೆ ತನ್ನ ತಪ್ಪಿನ ಅರಿವಾಯಿತು. ಅವನೂ ಬಾಲಕನೊಂದಿಗೆ ಕೈಜೋಡಿಸಿದನು. “ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಹಬ್ಬ.” ಎಂಬಂತೆ, ಆ ಪುಟ್ಟ ಬಾಲಕನ ಒಂದು ಸಣ್ಣ ಪ್ರಯತ್ನದಹೆಜ್ಜೆ ಅಂದು ಸಾವಿರಾರು ಜೀವಗಳನ್ನು ಉಳಿಸಿತು. ಮುನ್ನುಡಿಬದಲಾವಣೆಗೆ ನಾವೇಮುನ್ನುಡಿ ಬರೆಯಬೇಕು.ಬದಲಾವಣೆ ನಮ್ಮಿಂದಲೇ ನಾವು ಪ್ರತಿದಿನ ಸಮಾಜದಲ್ಲಿನ ಭ್ರಷ್ಟಾಚಾರ, ಸ್ವಾರ್ಥ, ಪರಿಸರ ಮಾಲಿನ್ಯ ಮತ್ತು ದ್ವೇಷದ ಬಗ್ಗೆ ಮಾತನಾಡುತ್ತೇವೆ.ಸಮಾಜವನ್ನು,ವ್ಯವಸ್ಥೆಯನ್ನು ದೂಷಿಸುವುದು ಹೂವಿನ ಮೇಲಿನ ಇಬ್ಬನಿಯನ್ನು ಒರೆಸಿದಷ್ಟೇ ಸುಲಭ. ಆದರೆ, “ನಾನು ಸಮಾಜಕ್ಕೆ ಏನು ನೀಡುತ್ತಿದ್ದೇನೆ?” ಎಂದು ಯೋಚಿಸಿ, ಸಮಾಜಕ್ಕೆ ಕೊಡುಗೆ ನೀಡುವುದು ತುಂಬಾ ಕಷ್ಟದ ಕೆಲಸ.ಹಾಗೆ ನೋಡಿದರೆ ಅಂಥವರ ಸಂಖ್ಯೆಯುವಿರಳ. “ಕತ್ತಲೆಯನ್ನು ಶಪಿಸುತ್ತಾ ಕೂರುವುದಕ್ಕಿಂತ ಒಂದು ಪುಟ್ಟ ಹಣತೆಯನ್ನು ಹಚ್ಚುವುದು ಲೇಸು.” ಮನೆ ಕಸ ನಮ್ಮ ಮನೆ ಮತ್ತುಮನೆಯ ಮುಂದೆ ನಾವು ಕಸ ಗೂಡಿಸಿ ಪಕ್ಕದ ಮನೆಯವರ ಮುಂದೆ ಚೆಲ್ಲಿದರೆ ಏನು ಮಾಡಿದಂತಾಯಿತು? ಕಸ ಗುಡಿಸಿದ್ದು ವ್ಯರ್ಥ.ಆ ಕಸ ಗಾಳಿಗೆ ಎಲ್ಲೆಲ್ಲೂ ಹಾರಿ ಹೋಗುತ್ತದೆ.ಊರಿನ ಅಂಗಳಮತ್ತಷ್ಟು ಹೊಲಸಾಗುತ್ತದೆ.ನಾವು ಕಸವನ್ನು ಡಬ್ಬಿಗೆ ಹಾಕಿದರೆಇಡೀ ನಗರವೇ ಸ್ವಚ್ಛವಾಗುತ್ತದೆ. ಪ್ರತಿಬಿಂಬ ನಾವು ಇತರರಿಗೆ ಗೌರವ ನೀಡಿದರೆ, ಅವರು ನಮಗೆ ಗೌರವ ನೀಡುತ್ತಾರೆ. ಗೌರವ ಕೇಳಿ ಪಡೆಯುವುದಲ್ಲ. ಅದು ಕೊಟ್ಟು ಪಡೆಯುವಂಥದ್ದು.ನಾವು ಇತರರಿಗೆ ಪ್ರೀತಿ ನೀಡಿದರೆಸಮಾಜ ನಮಗೆ ಪ್ರೀತಿಯನ್ನು ಉಡುಗೊರೆಯಾಗಿ ನೀಡುತ್ತದೆ. ಸಮಾಜ ಎಂಬುದು ನಮ್ಮದೇ ಪ್ರತಿಬಿಂಬ. ನಾವು ಸುಂದರವಾಗಿದ್ದರೆ ಜಗತ್ತೂ ಸುಂದರವಾಗಿಯೇ ಕಾಣುತ್ತದೆ. ಪ್ರಾಜ್ಞರ ದೃಷ್ಟಿ ಕುವೆಂಪು ಹೇಳಿದಂತೆ: “ಮನುಜಮತ, ವಿಶ್ವಪಥದತ್ತ ಸಾಗಬೇಕಾದರೆ ಮೊದಲು ವ್ಯಕ್ತಿತ್ವದ ವಿಕಾಸವಾಗಬೇಕು. ನಿನ್ನ ಅಂತರಂಗದ ದೀಪವನ್ನು ಮೊದಲು ಹಚ್ಚಿಕೋ, ಜಗತ್ತಿನ ಕತ್ತಲೆ ತಾನಾಗಿಯೇ ಸರಿಯುತ್ತದೆ. “ಡಿ. ವಿ.ಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ :”ತಿದ್ದಿಕೊಳು ನಿನ್ನ ಒರಟು ನಡೆನುಡಿಗಳನು,ಜಗವ ತಿದ್ದುವ ಸಾಹಸಕೆ ಹೋಗದಿರು ಮನುಜ… ಎಂದಿದ್ದಾರೆ. “ಸ್ವಾಮಿ ವಿವೇಕಾನಂದ: “ನಿನ್ನನ್ನು ನೀನು ನಂಬು. ಇಡೀ ಜಗತ್ತನ್ನು ಬದಲಾಯಿಸುವ ಶಕ್ತಿ ನಿನ್ನ ಒಂದು ಸಣ್ಣ ಸಂಕಲ್ಪದಲ್ಲಿದೆ.” ಹರಿಕಾರ “ಬದಲಾವಣೆಯ ಹಾದಿಯಲ್ಲಿ ನೀ ಮೊದಲ ಹೆಜ್ಜೆಯಾಗು, ಒಣಗಿದ  ಮರಭೂಮಿಗೆ ನೀ ತಂಪಿನ ಹನಿಯಾಗು.ದೂಷಿಸಬೇಡ ಜಗದ ಕತ್ತಲನು ಮೌನದಿ ಕೊರಗಿ,ಉರಿಯುವ ಹಣತೆಯಾಗಿ ನೀ ಜಗಕೆ ಬೆಳಕಾಗು.ಕಲ್ಲನ್ನು ನುಣುಪುಗೊಳಿಸುವ ಶಿಲ್ಪಿಯಂತೆ, ನಿನ್ನ ನಡೆ-ನುಡಿ ಇರಲಿ. ಈ ಕಾವ್ಯದಂತೆ.ಜಗವ ಗೆಲ್ಲುವ ಆತುರ ಬಿಡು ಓ ಗೆಳೆಯಾ,ನಿನ್ನ ನೀ ಗೆದ್ದರೆ ಜಗವೇ ನಿನ್ನಂತೆ…!! ಕೊನೆ ಮಾತು ಜಗತ್ತನ್ನು ಬದಲಾಯಿಸಲು ನಾವ್ಯಾರೂ ಮೇಧಾವಿಗಳು ಆಗಬೇಕೆಂದಿಲ್ಲಸಿರಿವಂತರು ಆಗಬೇಕೆಂದಿಲ್ಲ.ಅಗತ್ಯವಿದ್ದವರಿಗೆಒಂದು ಪುಟ್ಟ ಸಹಾಯ,ನೊಂದವರಿಗೆ ಹೆದರದಿರಿ, ನಾವು ನಿಮ್ಮೊಂದಿಗೆ ಇರುತ್ತೇವೆ ಎಂಬ ಒಂದು ಸಾಂತ್ವನದ ಮಾತು.ಮುಖದ ಮೇಲೊಂದು ಸದಾ ಸಣ್ಣದೊಂದುನಗು ಸಾಕು.ಕೇವಲ ಒಬ್ಬ ಒಳ್ಳೆಯ ‘ಮನುಷ್ಯ’ನಾದರೆ ಸಾಕು. ನಾವು ಬಯಸುವ ಪ್ರೀತಿ, ಶಾಂತಿ, ಕರುಣೆ ಮತ್ತು ಪ್ರಾಮಾಣಿಕತೆ ಮೊದಲು ನಮ್ಮ ದಿನನಿತ್ಯದ ಬದುಕಿನಲ್ಲಿ ಮೂಡಿಬರುತ್ತದೆ.ನಮ್ಮ ಕಿರುನಗೆ ಒಬ್ಬರ ದುಃಖವನ್ನು ಮರೆಸಬಹುದು, ನಮ್ಮ ಒಂದು ಒಳ್ಳೆಯ ಮಾತು ಧೃತಿಗೆಟ್ಟ ಜೀವಕ್ಕೆ ಆಸರೆಯಾಗಬಹುದು. ಪೀಠಿಕೆ ಬದಲಾವಣೆಯ ಮಹಾಕಾವ್ಯಕ್ಕೆ ನಾವೇ ಪೀಠಿಕೆ ಬರೆಯಬೇಕು.ವಿನಃ ಬೇರೆ ಯಾರೋ ಬರೆಯುತ್ತಾರೆಂದು ಕಾಯುತ್ತ ವ್ಯವಸ್ಥೆಯನ್ನು ಬೈಯುತ್ತಾ ಕುಳಿತುಕೊಳ್ಳಬಾರದು.ಹಾಗಾದರೆ ತಡವೇಕೆ ಇಂದಿನಿಂದಲೇ ನಮ್ಮಿಂದಲೇ ಆಗಲಿ ಬದಲಾವಣೆಯಆರಂಭ. ಸಂತಸ ಸಮೃದ್ಧಿ ತರಲಿ  ಶುಭಾರಂಭ. ಜಯಶ್ರೀ ಜೆ ಅಬ್ಬಿಗೇರಿ

ಆರಂಭವಾಗಲಿ ಬದಲಾವಣೆ ನಮ್ಮಿಂದಲೇ……ಜಯಶ್ರೀ ಜೆ ಅಬ್ಬಿಗೇರಿ Read Post »

ಕಥಾಗುಚ್ಛ

“ಅಂತರಂಗದ ಸೋಲು” ಸಣ್ಣ ಕಥೆ ಶೇಖರಗೌಡ ವೀ ಸರನಾಡಗೌಡರ್.

ಕಥಾ ಸಂಗಾತಿ “ಅಂತರಂಗದ ಸೋಲು” ಶೇಖರಗೌಡ ವೀ ಸರನಾಡಗೌಡರ್. ಯಶಸ್ವಿನಿ ದೊಡ್ಡ ಪರದೆಯ ಟೀವಿಯಲ್ಲಿ ಯಾವುದೋ ಸಿನಿಮಾವೊಂದನ್ನು ನೋಡತೊಡಗಿದ್ದಳು. `ಸಾಕು, ಟೀವಿ ಆಫ್‍ಮಾಡಿ ಮಲಗಿಬಿಟ್ಟರಾಯಿತು’ ಎಂದು ಅಂದುಕೊಂಡಳಾದರೂ, ಅದೊಂದು ಭಾರೀ ಶೃಂಗಾರಭರಿತ ಮೂವಿಯಾಗಿದ್ದರಿಂದ ಹಾಗೇ ವೈಭವೋಪೇತ ಸೋಫಾದ ಮೇಲೆ ಅಡ್ಡಾಗಿ ಚಿತ್ರ ನೋಡಲು ಮುಂದಾದಳು. ದಿನಾಲೂ ರಾತ್ರಿ ಬಹಳ ಎಂದರೆ ಹತ್ತೂವರೆ, ಹನ್ನೊಂದಕ್ಕೆ ಹಾಸಿಗೆ ಸೇರಿಕೊಳ್ಳುತ್ತಿದ್ದಳು. `ಹೇಗೂ ವೀಕೆಂಡ್ ಅಲ್ವಾ…? ಆಫೀಸ್ ಇಲ್ಲವಲ್ಲ? ತಡವಾಗಿ ಮಲಗಿ ನಾಳೆ ಬೆಳಗ್ಗೆ ತಡವಾಗಿ ಏಳಬಹುದು. ಅದಲ್ಲದೇ, `ಕರೆದು ಕಟ್ಟಿಹಾಕುವವರಿಲ್ಲ, ತುರಿಸಿ ಮೇವು ಹಾಕುವವರಿಲ್ಲ’ ಎಂಬ ದನದಂತೆ ನಾನು. ತಡವಾಗಿ ಮಲಗಿದರೆ ನನಗಿಲ್ಲಿ ಯಾರೂ ಹೇಳುವವರಿಲ್ಲ, ಯಾವಾಗ ಎದ್ದರೂ ಯಾರೂ ಕೇಳುವವರಿಲ್ಲ. ಸುದೀರ್ಘ ಒಂಟಿ ಜೀವನಕ್ಕೆ ಒಗ್ಗಿಹೋಗಿದ್ದೇನೆ. ನನ್ನದೇ ಪ್ರಮೀಳಾ ರಾಜ್ಯ ಅಲ್ಲವೇ…?’ ಅಂತ ಮನದೊಳಗೇ ಅಂದುಕೊಂಡು ಯಶಸ್ವಿನಿ ಸಿನಿಮಾ ನೋಡುವುದನ್ನು ಮುಂದುವರಿಸಿದಳು. ಅಬ್ಬಾ…! ಮೈನವಿರೇಳಿಸುವ ಶೃಂಗಾರಭರಿತ ದೃಶ್ಯಗಳು…! ಯುವ ಪ್ರೇಮಿಗಳ ಪ್ರೀತಿ, ಪ್ರೇಮದ ಕಾವ್ಯ ಅದಾಗಿತ್ತು. ರಸಪೂರಿ ಮಾವಿನ ಹಣ ್ಣನಂಥಹ ನಾಯಕಿ, ಸುರಸುಂದರಾಂಗ ಎನ್ನುವಂಥಹ ನಾಯಕ. ಗಜನಿಂಬೆ ಹಣ ್ಣನ ಮೈಬಣ್ಣದ ನಾಯಕಿಯ ಸೊಬಗಿನ ತುಂಬಿದೆದೆ ಚಿತ್ರದುದ್ದಕ್ಕೂ ಮುಕ್ಕಾಲು ಭಾಗ ತೆರೆದೇ ಕೊಂಡಿತ್ತು. ಕೃಶೋದರಿಯ ಬಡ ನಡು ತುಂಬಾನೇ ಆಕರ್ಷಕವೇ. ಸಿನಿಮಾದುದ್ದಕ್ಕೂ ಶೃಂಗಾರಭರಿತ ಕಾವ್ಯ ಸಾಹಿತ್ಯದಲ್ಲಿ ಹೊರಹೊಮ್ಮುತ್ತಿದ್ದ ಹಾಡುಗಳಲ್ಲಿ ನಾಯಕ, ನಾಯಕಿಯರಿಬ್ಬರೂ ತುಂಡುಡುಗಳಲ್ಲೇ ಮಿಂಚುತ್ತಿದ್ದುದು ಚಿತ್ರದ ಹೈಲೈಟ್ ಆಗಿತ್ತು. ನಾಯಕಿಯ ನಳಿದೋಳುಗಳು, ಹೊಕ್ಕಳ ಗುಳಿ, ಸಪೂರ ಬಲಿಷ್ಠ ತೊಡೆಗಳು, ತುಂಬು ಜಘನ ಪ್ರೇಕ್ಷಕರ ಮನಗಳಿಗೆ ಕಚಗುಳಿ ಇಡುವಂತಿದ್ದವು. ಕಾವ್ಯಕನ್ನಿಕೆ, ಸೌಂದರ್ಯದೇವತೆ ರತಿದೇವಿಯಂತೆ ವಿಜೃಂಭಿಸುತ್ತಿದ್ದಳು ನಾಯಕಿ. ವಯಸ್ಸಾದವರು ಜೊಲ್ಲು ಸುರಿಸುತ್ತಾ ನೋಡುವಂತಿತ್ತು ನಾಯಕಿಯ ಮೈಮಾಟ. ನಾಯಕ, ನಾಯಕಿಯ ಪ್ರೀತಿ-ಪ್ರೇಮದ ತುಂಟಾಟದ ದೃಶ್ಯಗಳನ್ನು ನೋಡುತ್ತಿದ್ದಂತೆ ಯಶಸ್ವಿನಿಯ ಮೈಯಲ್ಲಿ ಕಾವೇರತೊಡಗಿತು. `ಅಬ್ಬಾ…! ಮೈ ಎಲ್ಲಾ ನವಿರೇಳುತ್ತಿದೆಯಲ್ಲ…? ಮೈಯಲ್ಲಿ ರೋಮಾಂಚನದಲೆಗಳು ಅಬ್ಬರಿಸಿ ಪುಟಿದೇಳುತ್ತಿವೆಯಲ್ಲ…? ಎದೆಯ ಬಡಿತ ಮುಗಿಲೆತ್ತರಕ್ಕೆ ಜಿಗಿಯುತ್ತಿದೆಯಲ್ಲ…? ಉಸಿರಾಟ ಜೋರಾಗುತ್ತಿದೆಯಲ್ಲ? ಹೃದಯದ ಲುಬ್-ಡುಬ್ ಅತಿವೇಗದ ಲಯ ಕಂಡುಕೊಳ್ಳುತ್ತಿದೆ ಎಂದು ಅನಿಸುತ್ತಿದೆ. ತುಂಬಾನೇ ಥ್ರಿಲ್ ಕೊಡುತ್ತಿದೆಯಲ್ಲ…? ಇಂಥಹ ಥ್ರಿಲ್ ಇದೆಯಾ ಗಂಡು-ಹೆಣ ್ಣನ ಶೃಂಗಾರ ಲೀಲೆಯಲ್ಲಿ…? ಶೃಂಗಾರ ಲೀಲೆಯ ಇಂಥಹ ಥ್ರಿಲ್‍ಗಳಿಂದ ವಂಚಿತಳಾಗಿ ನಾನು ಕರುಬುತ್ತಿರುವೆನಲ್ಲ…? ನನ್ನ ಉತ್ಕøಷ್ಠ ಯೌವನ ಕರಗಿ ಹೋಗುತ್ತಿದೆ. ಇನ್ನೇನು ನಾಲ್ಕಾರು ವರ್ಷಗಳಲ್ಲಿ ಮೆನೋಫಾಸ್ ಘಟ್ಟವನ್ನೂ ತಲುಪುವೆನೇನೋ? ಅದೃಷ್ಟ ಹೀನ ನತದೃಷ್ಟ ಹೆಣ್ಣು ನಾನು. ಎಲ್ಲವೂ ಇದ್ದು, ಏನೂ ಇಲ್ಲದವಳಂತಾಗಿದ್ದೇನೆ. ಹೆಸರೋ, `ಯಶಸ್ವಿನಿ.’ ಬಹಳಷ್ಟು ರಂಗಗಳಲ್ಲಿ ಯಶಸ್ಸು ಪಡೆದಿರುವೆನಾದರೂ ನನ್ನ ಪರ್ಸನಲ್ ಲೈಫಿನಲ್ಲಿ ಹೀನಾಯ ಸೋಲನ್ನು ಅನುಭವಿಸಿ ಪೇಚಾಡುತ್ತಿರುವೆ. ಈ ಸೋಲಿಗೆ ಯಾರು ಕಾರಣ…? ಯಾರೇಕೆ ಕಾರಣರಾಗುತ್ತಾರೆ? ನನ್ನ ಸೋಲಿಗೆ ನಾನೇ ಕಾರಣ ಅಷ್ಟೇ. ನಾನೇ ಅಂದರೆ ನನ್ನ, `ಅಹಂ’ ವೈಯಕ್ತಿಕ ಜೀವನದ ಸೋಲಿಗೆ ಕಾರಣ ತಾನೇ…? ಹೌದು, ಹೌದು, ಹೌದು. ನನ್ನ ಅಪರಿಮಿತ ಅಹಂ ನನ್ನ ವೈಯಕ್ತಿಕ ಜೀವನದ ಹಳಸುವಿಕೆಗೆ ಕಾರಣ.’ ಯದ್ವಾ-ತದ್ವಾ ಯೋಚನೆಗಳು ಯಶಸ್ವಿನಿಯ ಮನಸ್ಸನ್ನು ಮುತ್ತಿಕ್ಕಿ ಕಾಡತೊಡಗಿದವು.*****ಹಿಮ್ಮುಖವಾಗಿ ಚಲಿಸಲಾರಂಭಿಸಿದ ಯಶಸ್ವಿನಿಯ ಮನದಲ್ಲಿ ನೆನಪಿನ ಅಲೆಗಳ ಮಹಾಪೂರ ಭೋರ್ಗರೆಯತೊಡಗಿತು.“ನನ್ನ ಹೆಸರು, `ಯಶಸ್ವಿನಿ’ ಅಂತ ಆಗಲೇ ಹೇಳಿರುವೆನಲ್ಲ…? ಮೂವತ್ತೈದು ವಸಂತ ಋತುಗಳು ನನ್ನ ಜೀವನದಲ್ಲಿ ವಸಂತನಾಗಮನವಿಲ್ಲದೇ ಹಾಗೇ ಸಪ್ಪಗೇ ಕಳೆದು ಹೋದವು. ಈಗ ಮೂವತ್ತಾರರ ಹರೆಯದಲ್ಲಿ ನನ್ನ ಬಾಳಬಂಡಿಗೆ ಕಡೆಗೀಲೇ ಇಲ್ಲದಂತಾಗಿದೆ. ಸಾಮಾನ್ಯ ಕುಟುಂಬವೊಂದರಲ್ಲಿ ಮೂರನೇ ಮಗುವಾಗಿ ಜನಿಸಿದವಳು ನಾನು. ಅಪ್ಪ ಕೈಲಾಸ್, ಅಮ್ಮ ವಿಜಯಲಕ್ಷ್ಮಿ. ಅಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಅಮ್ಮ ಗೃಹಿಣ . ಹೆತ್ತವರಿಗೆ ನಾನು ಮೂರನೆಯವಳೆಂದು ಹೇಳಿದೆನಲ್ಲ, ನನಗೆ ಧೀರಜ್ ಎಂಬ ಅಣ್ಣನಿದ್ದಾನೆ. ಅಕ್ಕ ಸಮತಾ ಇದ್ದಾಳೆ. ಅಣ್ಣ ಧೀರಜನಿಗೂ, ನನಗೂ ಎಂಟು ವರ್ಷಗಳ ಅಂತರವಿದ್ದರೆ, ಅಕ್ಕ ಸಮತಾಳಿಗೆ ನನಗೆ ಕೇವಲ ಎರಡು ವರ್ಷಗಳ ಅಂತರ ಅಷ್ಟೇ. ಮೂವರಲ್ಲಿ ನಾನೇ ರೂಪವತಿ. ಚಿಕ್ಕವಳಿದ್ದಾಗಿನಿಂದ ಅಣ್ಣ, ಅಕ್ಕನಿಗೆ ಇಲ್ಲದಿದ್ದರೂ ನನಗೆಲ್ಲವೂ ಬೇಕು ಎಂಬ ಹಟಮಾರಿತನದ ಸ್ವಭಾವದವಳು. ಮುದ್ದಾದ ಚೆಲುವಿನ ಹುಡುಗಿ ಎಂದು ಅಪ್ಪ, ಅಮ್ಮ ನನ್ನನ್ನು ಅತೀ ಮುದ್ದಿನಿಂದಲೇ ಬೆಳೆಸಿದರು. ಚಿಕ್ಕಳಿದ್ದಾಗಿನಿಂದಲೂ ನನ್ನ ಬಲಗೆನ್ನೆ ಗುಳಿಗೆನ್ನೆಯೇ. ಆ ಗುಳಿಗೆನ್ನೆ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಯೌವನ ಮೈ, ಮನಗಳಲ್ಲಿ ಅರಳತೊಡಗಿತ್ತು. ಎದೆಯ ಕುಸುಮಗಳು ಅರಳಲು ಮುಂದಾಗುತ್ತಿದ್ದಂತೆ ನನ್ನ ಅಪರಿಮಿತ ರೂಪರಾಶಿಗೆ ನಾನೇ ನನ್ನ ಬೆನ್ನನ್ನು ಚಪ್ಪರಿಸಿಕೊಳ್ಳುತ್ತಿದ್ದೆ. ಸಾಧಾರಣ ರೂಪಿನ ಅಕ್ಕನನ್ನು ನನ್ನೊಂದಿಗೆ ಹೋಲಿಸಲು ಸಾಧ್ಯವೇ ಇರಲಿಲ್ಲ. ನನಗರಿವಿಲ್ಲದಂತೆ ನಾನು ಆಗಿನಿಂದಲೇ ಜಂಬದ ಕೋಳಿಯಂತಾಗತೊಡಗಿದ್ದೆ. ಧೀರಜ್ ಎಂಎ ಬಿಎಡ್ ಮಾಡಿಕೊಂಡು ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಸೇರಿಕೊಂಡ. ಅಕ್ಕ ಇಂಜನಿಯರಿಂಗ್ ಪದವಿಗೆ ಸೇರಿಕೊಂಡಳು. ನಾನೂ ಅಷ್ಟೇ. ಪಿಯುಸಿ ನಂತರ ಇಂಜನಿಯರಿಂಗ್ ಕೋರ್ಸಿಗೇ ಸೇರಿಕೊಂಡೆ. ಅಣ್ಣ ಉದ್ಯೋಗಕ್ಕೆ ಸೇರಿದ ಮೂರನೇ ವರ್ಷವೇ ಮದುವೆಯಾಗಿ ಜೀವನದಲ್ಲಿ ಸೆಟ್ಲಾದ. ಅತ್ತಿಗೆಯಾಗಿ ಬಂದವಳು ನಮ್ಮ ಮನೆಯ ಅಂತಸ್ತಿಗಿಂತ ಕೆಳಗಿನ ಮಟ್ಟದ ಅಂತಸ್ತಿನ ಮನೆತನದವಳು. ರೂಪದಲ್ಲೂ ಅಷ್ಟಕಷ್ಟೇ. `ಅಣ್ಣಾ, ಇದೇನಿದು ಇಂಥಹ ಆರ್ಡಿನರಿ ಹುಡುಗಿಯನ್ನು ಆಯ್ಕೆಮಾಡಿಕೊಂಡೆಯಲ್ಲ, ಇದು ನನಗ್ಯಾಕೋ ಸರಿಕಾಣುತ್ತಿಲ್ಲ…?’ ಅಂತ ಅಂದಿದ್ದಕ್ಕೆ, `ರೂಪವನ್ನು ಅರೆದುಕೊಂಡು ಕುಡಿಯಲು ಆಗುತ್ತದೆಯೇ…? ನಿನ್ನತ್ತಿಗೆಯಾಗುವವಳು ರೂಪವತಿಯೇ ಇರುವಳೆಂದು ನನ್ನ ಕಣ್ಣುಗಳ ಜೊತೆಗೆ ಹೃನ್ಮನಗಳೂ ಹೇಳುತ್ತಿವೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ. ರೂಪಕ್ಕಿಂತ ಗುಣ ಮುಖ್ಯ ಎಂಬುದು ನನ್ನ ಅನಿಸಿಕೆ. ಗಂಡ, ಹೆಂಡತಿ ಇಬ್ಬರೂ ಜೊತೆಗೂಡಿಕೊಂಡು ಅರ್ಥಪೂರ್ಣ ಜೀವನ ಸವೆಸಿದರೆ ಸಾಕಲ್ಲವೇ…?’ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದ. ಅದರಂತೆ ಅಣ್ಣ-ಅತ್ತಿಗೆಯರದು ಈಗ ಆದರ್ಶ ಸಂಸಾರವೇ. ಅತ್ತಿಗೆ ಸೌಭಾಗ್ಯಳಿಗೆ, `ನಮ್ಮ ಯಶೂ ತುಂಬಾನೇ ರೂಪವತಿ, ಶಾಣ್ಯಾಕಿ’ ಎಂದು ಸಂಬಂಧಿಕರ ಜೊತೆಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತಾಳೆ. ನಾನೆಂದರೆ ತುಂಬಾ ಪ್ರೀತಿ ಅವಳಿಗೆ.ಇಂಜನಿಯರಿಂಗ್ ಕೋರ್ಸ ಮುಗಿಯುವಷ್ಟರಲ್ಲಿ ಚೆಲುವಿನ ನನ್ನ ಮೈಯಲ್ಲಿ ಯೌವನ ತುಂಬಿ ತುಳುಕಾಡಲು ಮುಂದಾಗಿತ್ತು. ಯೌವನಮದ, ರೂಪಮದಗಳು ನನ್ನ ಮನಸ್ಸಿನಲ್ಲಿ ನೆಲೆನಿಂತು ಠಳಾಯಿಸತೊಡಗಿದವು. ತುಂಬಿದ ಕಾಶ್ಮೀರಿ ಸೇಬಿನ ಗುಳಿಗೆನ್ನೆ ನನ್ನ ಆಕರ್ಷಕ ಮೈಮಾಟಕ್ಕೆ ಇಂಬು ಕೊಡುತ್ತಿತ್ತು. `ನನ್ನಂಥಹ ಚೆಲುವೆ ಯಾರಿಲ್ಲ’ ಎಂಬ ಅಹಂ ಅಂಕುರಿಸಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯತೊಡಗಿತು. ಪದವಿ ಮುಗಿಯುತ್ತಿದ್ದಂತೆ ಸಮತಾಳಿಗೆ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಪ್ಯಾಕೇಜಿನ ಕೆಲಸವೂ ಸಿಕ್ಕಿತು. ನನಗೂ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಲ್ಲದೇ ಸಮತಾಳಿಗಿಂತ ನನ್ನ ಪ್ಯಾಕೇಜ್ ಹೆಚ್ಚೇ ಇದೆ.ಅಕ್ಕನೂ ಕೆಲಸಕ್ಕೆ ಸೇರಿದ ಮೂರನೇ ವರ್ಷವೇ ಮದುವೆಗೆ ಅಣ ಯಾದಳು. ಅವಳ ಮತ್ತು ನನ್ನ ಮದುವೆಯನ್ನು ಒಂದೇ ಸಲಕ್ಕೆ ಮಾಡಬೇಕೆಂದಿದ್ದ ಅಪ್ಪ-ಅಮ್ಮನಿಗೆ, `ನನಗಷ್ಟು ಬೇಗ ಮದುವೆಯಾಗುವ ಮನಸ್ಸು, ಆಸಕ್ತಿ ಇಲ್ಲ. ಅಕ್ಕನ ಮದುವೆ ಮಾಡಿಬಿಡಿ. ನನಗೆ ಮದುವೆ ಬೇಕೆಂದಾಗ ತಿಳಿಸುವೆ’ ಎಂದು ಹೇಳಿದ್ದೆ. ನನ್ನ ಹಟಮಾರಿತನದ ಸ್ವಭಾವಕ್ಕೆ ಮಣ ದಿದ್ದರು. ಅಕ್ಕನೂ ಆರಿಸಿಕೊಂಡಿದ್ದು ತನಗಿಂತ ಕಡಿಮೆ ರೂಪಿನ ಚೆಲುವನನ್ನು. ನನಗೆ ಹೋಲಿಸಿದರೆ ಅಕ್ಕನ ರೂಪವೂ ಅಷ್ಟಕಷ್ಟೇ. ಅವನೂ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರ್. `ಏನೇ ಅಕ್ಕ, ನೀನು ಮಧುಸಾಗರನೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದು ನನಗೇಕೋ ಅಷ್ಟಾಗಿ ಸರಿಕಾಣುತ್ತಿಲ್ಲ. ತೀರಾ ಸಾಮಾನ್ಯ ರೂಪಿನ ಹುಡಗ ಅವನು. ಮೇಲಾಗಿ ಅವನ ಪ್ಯಾಕೇಜ್ ನಿನಗಿಂತಲೂ ಬಹಳಷ್ಟು ಕಡಿಮೆಯೇ. ಅವನಿಗೆ ಹೇಳಿಕೊಳ್ಳುವಂಥಹ ಆಸ್ತಿ-ಅಂತಸ್ತೂ ಸಹ ಇಲ್ಲ. ಮೇಲಾಗಿ ಅವನಿಗೆ ಒಬ್ಬ ತಂಗಿಯ ಮದುವೆಯ ಜವಾಬ್ದಾರಿಯೂ ಇದೆ. ಏನೋಪ್ಪ, ನಿನ್ನ ನಿರ್ಧಾರ ಸರಿ ಇಲ್ಲ ಎಂದು ನನಗನಿಸುತ್ತಿದೆ’ ಎಂದು ಉದ್ದುದ್ದ ಭಾಷಣ ಬಿಗಿದಿದ್ದೆ. `ನೋಡು ಯಶೂ, ಮದುವೆ ಯಶಸ್ವಿಯಾಗುವುದು ಜೀವನ ಸಂಗಾತಿಯನ್ನು ಹುಡುಕುವುದಿಂದಲ್ಲ. ಸರಿಯಾದ ಜೀವನ ಸಂಗಾತಿ ಆಗುವುದರಿಂದ. ನನ್ನ ಆಯ್ಕೆ ಸೂಪರ್ರಾಗೇ ಇದೆ. ಹುಡುಗ ನನ್ನ ಕಣ್ಣಲ್ಲಿ ಚೆಲುವನೇ. ಮನಸ್ಸು, ಮನಸ್ಸುಗಳು ಒಂದಾದರೆ ಸಂಸಾರ ಆನಂದ ಸಾಗರವೇ. ಅವನ ನಡೆ-ನುಡಿ ಎಲ್ಲವೂ ಸ್ಫಟಿಕದಷ್ಟೇ ಶುಭ್ರ. ಆಫ್ಟರ್ ಆಲ್ ಲೈಫ್ ಈಜ್ ಯಾನ್ ಅಡ್ಜೆಸ್ಟಮೆಂಟ್ ಅಲ್ಲವೇ? ಪರಸ್ಪರ ಹೊಂದಿಕೊಂಡು ಜೀವನ ರಥ ಎಳೆದರೆ ದಾಂಪತ್ಯವು ಮಧುರವಾಗೇ ಸಾಗುತ್ತದೆ. ನೀನೇನೂ ಚಿಂತಿಸಬೇಡ. ನಮ್ಮದೂ ಒಂದು ಆದರ್ಶ ದಾಂಪತ್ಯ ಎಂದು ಮುಂದಿನ ದಿನಗಳಲ್ಲಿ ಸಾಬೀತುಮಾಡಿ ತೋರಿಸುತ್ತೇನೆ.’ ಸಮತಾ ದಿಟ್ಟವಾಗಿ ಉತ್ತರಿಸಿದ್ದಳು ನನ್ನ ಅನುಮಾನದ ಪ್ರಶ್ನೆಗಳಿಗೆ. ಮುಂದಿನ ದಿನಗಳಲ್ಲಿ ಅವಳು ಹೇಳಿದಂತೆ ನಡೆದೂ ತೋರಿಸತೊಡಗಿದಳು. ಅವಳದು ಅನ್ಯೋನ್ಯ ದಾಂಪತ್ಯ ಜೀವನವೇ. ಅವಳೀಗ ಎರಡು ಮುದ್ದು ಮಕ್ಕಳ ತಾಯಿಯೂ ಹೌದು.*****ಕಾಲೇಜ್ ಜೀವನ ಅಂದರೇ ಒಂಥರ ಕಲರ್ಫುಲ್ ಜೀವನ ಅಲ್ಲವೇ? ಅರಳುತ್ತಿರುವ ಚೆಲುವಿನ ಮೈಮನಗಳಲ್ಲಿ ಬಣ್ಣಬಣ್ಣದ ಕನಸುಗಳು ಅಂಕುರಿಸಿ ಬೆಳೆಯುವ ಕಾಲ ತಾನೇ…? ಕಾಲೇಜಿನೆಲ್ಲೆಡೆ ಹೂವುಗಳಂತೆ ಅರಳಿದ ಯುವಕ-ಯುವತಿಯರ ಮುಖಗಳು; ಬಿಸಿಲಲ್ಲಿ ಬೆಂದ ಭೂಮಿ ಮೊದಲ ಮಳೆಗಾಗಿ ಹಾತೊರೆಯುವಂತೆ ಎಲ್ಲರ ಹೃದಯಗಳು ಪ್ರೀತಿಯ ಮಳೆಗಾಗಿ ಕಾಯುತ್ತಿದ್ದ ವಸಂತಕಾಲ. ಪ್ರೀತಿಯ ನಿರೀಕ್ಷೆ ಬಲು ಸುಂದರ. ನನ್ನ ಕಥೆಯೂ ಬೇರೆ ಏನಿರಲಿಲ್ಲ. ನಾನು ಎರಡನೆಯ ವರ್ಷದ ಪಿಯುಸಿಯಲ್ಲಿದ್ದಾಗ ರಸಾಯನ ಶಾಸ್ತ್ರದ ಉಪನ್ಯಾಸಕರಾಗಿ ರಾಜಶೇಖರ್ ಎನ್ನುವ ಹ್ಯಾಂಡ್ಸಮ್ ಗೈ ಬಂದಿದ್ದರು. ಹ್ಯಾಂಡ್ಸಮ್ ಎಂದರೆ ನಿಜವಾಗಿಯೂ ತುಂಬಾನೇ ಹ್ಯಾಂಡ್ಸಮ್. ಮನ್ಮಥನ ಅಪರಾವತಾರವೇ. ನಾವು ಗೆಳತಿಯರೆಲ್ಲ ಅವರಿಗೆ ಸ್ಮಾರ್ಟೀ ಎಂದೇ ಸಂಬೋಧಿಸುತ್ತಿದ್ದೆವು ನಮ್ಮೊಳಗೇ. ತುಂಬಾ ಚೆನ್ನಾಗಿ ಪಾಠಮಾಡುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ಆತ್ಮೀಯವಾಗಿ ಮಾತಾಡುತ್ತಿದ್ದರು. ನನ್ನ ಜೊತೆಗೂ ತುಂಬಾನೇ ಆತ್ಮೀಯವಾಗಿ ಮಾತಾಡುತ್ತಿದ್ದರಲ್ಲದೇ, `ಯುವರ್ ಪರ್ಫಾರ್ಮೆನ್ಸ್ ಈಜ್ ಎಕ್ಷಲೆಂಟ್ ಎಂದು ಹೇಳುತ್ತಿದ್ದರಲ್ಲದೇ ಯುವ್ ಆರ್ ದಿ ಮೋಸ್ಟ್ ಬ್ಯೂಟಿಫುಲ್ ಗರ್ಲ ಆಫ್ ದಿ ಕಾಲೇಜ್’ ಅಂತಾನೂ ಒಮ್ಮೆ ಉದ್ಘರಿಸಿ ನನ್ನನ್ನು ಆಶ್ಚರ್ಯ ಚಕಿತಳನ್ನಾಗಿ ಮಾಡಿದ್ದೂ ಉಂಟು. ಆಗಷ್ಟೇ ನಾನು ಬಿಇ ಮುಗಿಸಿಕೊಂಡು ಕೆಲಸಕ್ಕೆ ಸೇರಿಕೊಂಡಿದ್ದೆ. ಅದೊಂದು ದಿನ ಏಕಾಯೇಕಿ ರಾಜಶೇಖರ್ ಸರ್ ನಮ್ಮ ಕಂಪನಿಯ ಕ್ಯಾಂಪಸ್ಸಿಗೆ ಬಂದಿದ್ದರು. ಅವರು ಮೊದಲಿಗಿಂತ ಇನ್ನೂ ಹ್ಯಾಂಡ್ಸಮ್ಮಾಗಿ ಕಂಡರು. ಕ್ಯಾಂಟೀನಿನಲ್ಲಿ ಚಹ ಹೀರುತ್ತಿದ್ದಾಗ ನನ್ನೊಂದಿಗೆ ಒಂದಿಷ್ಟು ಪರ್ಸನಲ್ಲಾಗಿ ಮಾತಾಡುವುದಿದೆ ಎಂದು ಮಾತಿಗೂ ಇಳಿದಿದ್ದರು.“ಯಶಸ್ವಿನಿಯವರೇ, ನೇರವಾಗಿ ವಿಷಯವನ್ನು ಪ್ರಸ್ತಾಪಿಸಿಬಿಡುತ್ತೇನೆ. ನಾನು ನಿಮ್ಮ ಪಿಯು ಟೂದ ಮೊದಲ ತರಗತಿ ತೆಗೆದುಕೊಂಡ ದಿನದಿಂದಲೂ ನಿಮ್ಮನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ನಿಮ್ಮ ಪದವಿ ಮುಗಿಯಲಿ ಎಂದು ಸುಮ್ಮನಿದ್ದೆ. ನೀವೀಗ ಪದವಿ ಮುಗಿಸಿಕೊಂಡು ಕೆಲಸವನ್ನೂ ಮಾಡುತ್ತಿರುವಿರಿ. ಈ ನಡುವೆ ನನ್ನ ಮದುವೆಗಾಗಿ ಹಲವಾರು ಸಂಬಂಧಗಳ ಪ್ರಸ್ತಾವಗಳು ಬಂದವಾದರೂ ಮೊದಲು ನಿಮ್ಮ ಅಭಿಪ್ರಾಯ ತಿಳಿದುಕೊಂಡು ಮುಂದೆ ವಿಚಾರಮಾಡಿದರಾಯಿತು ಎಂದಂದುಕೊಂಡು ಬಂದ ಪ್ರಸ್ತಾವಗಳನ್ನು ತಿರಸ್ಕರಿಸಿದ್ದೂ ಆಯಿತು. ಹಾಗೇ ಇನ್ನೊಂದು ಮಾತು. ನಿಮ್ಮ ಉದ್ಯೋಗ ಹೆಚ್ಚುಕಡಿಮೆ ಬೆಂಗಳೂರಿನಲ್ಲೇ ಮುಂದುವರಿಯುತ್ತದೆ. ನೀವು ನನ್ನ ಪ್ರಸ್ತಾವಕ್ಕೆ ಒಪ್ಪಿಗೆ ಕೊಟ್ಟರೆ ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಪ್ರಯತ್ನಿಸುವೆ. ಇಬ್ಬರೂ ಒಂದೇ ಕಡೆಗೆ ಇರಲು ಅನುಕೂಲವಾಗುತ್ತದೆ. ನನ್ನ ದಾಂಪತ್ಯ ಜೀವನದ ಕನಸು ನಿಮ್ಮ ನಿರ್ಧಾರದ ಮೇಲೆ ಅವಲಂಬಿಸಿದೆ” ಎಂದೆನ್ನುತ್ತಾ ನನ್ನ ಮೊಗವನ್ನೇ ದಿಟ್ಟಿಸತೊಡಗಿದ್ದರು ರಾಜಶೇಖರ್ ಸರ್. ನನಗೆ ಒಂಥರ ದಿಗ್ಭ್ರಮೆ. ನಾನೂ ಅವರನ್ನೇ ತೀಕ್ಷ್ಣವಾಗಿ ನೋಡತೊಡಗಿದೆ. `ಇದು ಜೀವಮಾನದ ಪ್ರಶ್ನೆ. ತತಕ್ಷಣ ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ…?’ ಮನದಲ್ಲೇ ಯೋಚಿಸಿದೆ.“ಸರ್, ಇದು ಯೋಚಿಸುವಂಥಹ ವಿಷಯವೇ. ಒಂದುವಾರದ ಸಮಯ ಕೊಡಿರಿ. ಯಾವುದಕ್ಕೂ ನನ್ನ ಅಭಿಪ್ರಾಯ ತಿಳಿಸುವೆ” ಎಂದಿದ್ದೆ ತುಸು ಹೊತ್ತಿನ ಮೌನದ ಬ್ರೇಕ್‍ನ ನಂತರ.“ಸರಿ ಅಷ್ಟೇ ಮಾಡಿರಿ. ನಿಮ್ಮ ಸಕಾರಾತ್ಮಕ ನಿರ್ಣಾಯದ ಮಾತಿನ ದಾರಿ ಕಾಯುವೆ. ನಿರಾಶೆ ಮಾಡಬೇಡಿರಿ ಈ ಪ್ರೇಮಿಯನ್ನು…” ವಿನೀತಭಾವದಲ್ಲಿ ಹೇಳಿದ್ದರು ರಾಜಶೇಖರ್ ಸರ್. ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದೆವು.    ಆ ರಾತ್ರಿ ನಾನು ಸರಿಯಾಗಿ

“ಅಂತರಂಗದ ಸೋಲು” ಸಣ್ಣ ಕಥೆ ಶೇಖರಗೌಡ ವೀ ಸರನಾಡಗೌಡರ್. Read Post »

ಕಾವ್ಯಯಾನ

ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ”

ಕಾವ್ಯ ಸಂಗಾತಿ ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ” ಭೀಮನ ಅಮಾವಾಸ್ಯೆಯಂದುನನ್ನ ಪಾದಗಳ ಮೇಲೆನೀ ಹೂವಿಟ್ಟಾಗನಿನ್ನ ಬೆರಳ ತುದಿಯ ಸ್ಪರ್ಶದಲ್ಲಿನನ್ನ ಹೃದಯನಿನ್ನ ಹೆಸರನ್ನೇ ಜಪಿಸಿತ್ತು ನೀ ಅದನ್ನು ಪೂಜೆ ಎಂದೆ,ನನಗದು ಪೂಜೆಯಾಗಿರಲಿಲ್ಲನನ್ನ ಬದುಕಿಗೆನೀ ನೀಡಿದ ಪ್ರೀತಿಯಮೌನ ಪ್ರಮಾಣವಾಗಿತ್ತು ನಿನ್ನ ಕಂಗಳಲ್ಲಿಆ ಕ್ಷಣ ಕಂಡ ಭಕ್ತಿಗಿಂತನಿನ್ನ ಹೃದಯದಲ್ಲಿದ್ದನನ್ನ ಮೇಲಿನ ಪ್ರೀತಿಯೇನನ್ನನ್ನು ಹೆಚ್ಚು ತಲೆಬಾಗಿಸಿತ್ತು ಇಂದು ಬೇಬಿಮಾ…ನಿನ್ನ ಪಾದಗಳ ಮುಂದೆಕೈಗಳನ್ನಿಡುವ ಸರದಿ ನನ್ನದು ನೀ ಇಷ್ಟು ವರ್ಷನನ್ನ ಬದುಕಿನ ದಾರಿಯಲ್ಲಿನನ್ನೊಂದಿಗೆ ನಡೆದಿರುವೆಈಗ ನಿನ್ನ ಪಾದಗಳಿಗೆ ಹೂವಿಡುವಾಗಆ ಹೂವಿನೊಂದಿಗೆನನ್ನ ಕೃತಜ್ಞತೆಯನ್ನೂ ಇಡುವೆ. ಕಷ್ಟದ ದಿನಗಳಲ್ಲಿ ಮುಖ ನೋಡಿಕೊಂಡೇನನ್ನ ನೋವನ್ನು ಅರಿತವಳು ನೀನುನನ್ನ ಸೋಲಿನ ದಿನಗಳಲ್ಲಿ“ನಾನಿದ್ದೇನೆ” ಎಂದುನನ್ನ ಕೈ ಹಿಡಿದವಳು ನೀನು. ನಾನು ಕುಗ್ಗಿದಾಗನನ್ನೊಳಗೆ ಧೈರ್ಯ ತುಂಬಿದವಳುನಾನು ಮೌನವಾದಾಗನನ್ನ ಮೌನವನ್ನು ಓದಿದವಳುನಾನು ಗೆದ್ದಾಗನನಗಿಂತ ಹೆಚ್ಚು ಸಂತೋಷಪಟ್ಟವಳು ನೀನೇ ಅಲ್ಲವೇ ಬೇಬಿಮಾ… ನನ್ನ ಬಾಳ ಬಾಗಿಲಿಗೆನೀ ಕಾಲಿಟ್ಟ ದಿನದಿಂದಈ ಮನೆಕೇವಲ ಗೋಡೆಗಳ ಮನೆಯಲ್ಲನಿನ್ನ ನಗುವಿನಿಂದಮನೆಯಾಯಿತುನಿನ್ನ ಮಮತೆಯಿಂದಮಂದಿರವಾಯಿತುನಿನ್ನ ಹೆಜ್ಜೆ ಗುರುತುಗಳಿಂದನನ್ನ ಬದುಕಾಯಿತು ನಿನ್ನ ಪಾದದ ಗೆಜ್ಜೆಯ ನಾದವೇನನ್ನ ಬೆಳಗಿನ ರಾಗನಿನ್ನ ಹೆಜ್ಜೆಯ ಸದ್ದೇನನ್ನ ಸಂಜೆಯ ನಿರೀಕ್ಷೆನೀ ಹತ್ತಿರವಿದ್ದರೆಮೌನವೂ ಮಾತಾಗುತ್ತದೆನೀ ದೂರವಿದ್ದರೆಮಾತುಗಳಿದ್ದರೂಮನಸ್ಸು ಮೌನವಾಗುತ್ತದೆ ಬಾ ಬೇಬಿಮಾ…ನಿನ್ನ ಪಾದಗಳನ್ನುಒಮ್ಮೆ ನನ್ನ ಮಡಿಲಲ್ಲಿರಿಸುಹೂವಿಡುವ ನೆಪದಲ್ಲಿನಿನ್ನ ಕೈ ಹಿಡಿದುಒಂದು ಮಾತು ಹೇಳಬೇಕು“ನನ್ನ ಬದುಕಿಗೆನೀ ಬಂದದ್ದುನನ್ನ ಅದೃಷ್ಟವಲ್ಲನನ್ನ ಬದುಕೇನಿನ್ನಿಂದ ಅದೃಷ್ಟವಾಯಿತು” ನಿನ್ನ ಪಾದಗಳಿಗೆನಾನು ಬಾಗುವಾಗನಿನ್ನ ಭಗವಂತನಾಗಿ ಇರುವುದಿಲ್ಲನಿನ್ನ ಪ್ರೀತಿಯಲ್ಲಿಜೀವಮಾನವಿಡೀಸೋತು ಬದುಕಲು ಬಯಸುವಒಬ್ಬ ಪ್ರೇಮಿಯಾಗಿ ಬಾಗುವೆ ನೀ ನನ್ನ ಅರ್ಧಾಂಗಿಯೆಂದುಹೇಳುವುದು ಬಹಳ ಸಣ್ಣ ಮಾತುನೀ ನನ್ನ ಬದುಕಿನಅರ್ಧವಲ್ಲ ಬೇಬಿಮಾ—ನನ್ನ ಬದುಕಿನಪೂರ್ಣ ಅರ್ಥ ನೀನು ನನ್ನ ನಗುವಿನ ಹಿಂದೆನಿನ್ನ ಮಮತೆಯಿದೆನನ್ನ ಧೈರ್ಯದ ಹಿಂದೆನಿನ್ನ ನಂಬಿಕೆಯಿದೆನನ್ನ ಪ್ರತಿಯೊಂದು ಹೆಜ್ಜೆಯ ಹಿಂದೆನಿನ್ನ ಮೌನ ಪ್ರಾರ್ಥನೆಯಿದೆ ನಾನು ಹೊರಗೆಜಗತ್ತಿನ ಮುಂದೆಎಷ್ಟೇ ದೊಡ್ಡವನಾಗಿ ನಿಂತರೂಮನೆಗೆ ಮರಳಿದಾಗನಿನ್ನ ಒಂದು ನೋಟಕ್ಕಾಗಿಕಾಯುವ ಸಾಮಾನ್ಯ ಮನುಷ್ಯ ನಾನು ನಿನ್ನ ಪಾದಗಳ ಮೇಲೆಒಂದು ಹೂವಿಡುವೆಅದರೊಳಗೆನನ್ನ ಕೃತಜ್ಞತೆಒಂದು ಮುತ್ತಿಡುವೆಅದರೊಳಗೆನನ್ನ ಜೀವಮಾನ ಪ್ರೀತಿ ಒಂದು ಕ್ಷಣಕಣ್ಣುಮುಚ್ಚುವೆಆ ಕ್ಷಣದಲ್ಲಿನನ್ನ ಮನಸ್ಸುಒಂದೇ ಒಂದು ಪ್ರಾರ್ಥನೆ ಮಾಡುವುದು “ದೇವರೇ,ಮುಂದಿನ ಏಳೇಳು ಜನ್ಮಗಳಲೂಮತ್ತೆ ಈ ಮಲ್ಲಿಗೆ ಸುಮವನ್ನೇ ಕೊಡುಅವಳ ಪಾದಗಳ ಬಳಿಯೇಮತ್ತೊಮ್ಮೆ ನನ್ನ ಬದುಕನ್ನುಆರಂಭಿಸುವ ಅವಕಾಶ ಕೊಡು” ನಿನ್ನ ಪಾದಪೂಜೆನನ್ನ ಭಕ್ತಿಯಲ್ಲ ಬೇಬಿಮಾ;ನೀ ನನ್ನನ್ನುಎಷ್ಟು ಪ್ರೀತಿಸಿದ್ದೀಯೋಅದಕ್ಕಿಂತಲೂ ಹೆಚ್ಚು ಪ್ರೀತಿಯಿಂದನಿನ್ನನ್ನು ಗೌರವಿಸುವನಮ್ಮ ದಾಂಪತ್ಯದ ಹಬ್ಬ ಇದುಗಂಡ ಹೆಂಡತಿಗೆ ಬಾಗಿದ ಕ್ಷಣವಲ್ಲಎರಡು ಹೃದಯಗಳುಒಬ್ಬರಿಗೊಬ್ಬರು“ನೀ ಇಲ್ಲದೆ ನಾನು ಪೂರ್ಣನಲ್ಲ”ಎಂದು ಅಪ್ಪಿಕೊಂಡ ಕ್ಷಣ ನೀ ಬರಿ ನನ್ನ ಹೆಂಡತಿಯಲ್ಲ…ನನ್ನ ಉಸಿರು,ನನ್ನ ನೆಮ್ಮದಿ,ನನ್ನ ಮೌನದ ಭಾಷೆ,ನನ್ನ ಕಣ್ಣೀರಿನ ಅರ್ಥ,ನನ್ನ ನಗುವಿನ ಕಾರಣ,ನನ್ನ ಸುಕನಸು,ನನ್ನ ಬದುಕು… ನನ್ನ ಕೊನೆಯ ಉಸಿರಿನವರೆಗೂನಿನ್ನ ಕೈ ನನ್ನ ಕೈಯಲ್ಲಿರಲಿನನ್ನ ಕೊನೆಯ ಹೆಜ್ಜೆಯವರೆಗೂನಿನ್ನ ಹೆಜ್ಜೆ ನನ್ನ ಹೆಜ್ಜೆಯ ಜೊತೆಯಿರಲಿಜೊತೆ ಜೊತೆಯಾಗಿ ಈ ಸಂಸಾರ ನೌಕೆ ಸಾಗಿಸೋಣ ರತ್ನರಾಯಮಲ್ಲ

ರತ್ನರಾಯಮಲ್ಲ “ನಿನ್ನ ಪಾದಗಳಿಗೆ ನನ್ನ ಪ್ರೇಮ” Read Post »

You cannot copy content of this page

Scroll to Top