ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ “ಇಂದೇಕೋ ಮನಸ್ಸು ಭಾರವಾಗಿದೆ.”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ ಇಂದೇಕೋ ಮನಸ್ಸು ಭಾರವಾಗಿದೆ. ಇಂದೇಕೋ ಮನಸ್ಸು ಭಾರವಾಗಿದೆ…  ಮೋಡ ಕವಿದ ಆಗಸದ ಹಾಗೆ.  ಕಾರಣ ಕೇಳಿದರೆ ಉತ್ತರವಿಲ್ಲ,  ಆದ್ರೂ ಎದೆಯೊಳಗೆ ಎದ್ದಿಹಬಿರುಗಾಳಿಯ ಸಾವಿರ ಸುಳಿಯೊಳಗೆ ಸಿಲುಕಿದೆ… ನಗುತ್ತಾ ಎಲ್ಲರೊಂದಿಗೂ ಮಾತಾಡ್ತೀನಿ,  ಆದ್ರೆ ಒಳಗೆ ಎಲ್ಲೋ ಒಂದು ಮೂಲೆಯಲ್ಲಿ  ಸಣ್ಣ ಮಗುವಿನ ಹಾಗೆ ಗೋಳಾಡ್ತಿದೆ ಮನಸ್ಸು.  ಯಾರಿಗೂ ಹೇಳಿಕೊಳ್ಳದ ಸಂಕಟ ನೋವುಗಳು  ಗುಂಡಿಗೆ ಗೂಡಲ್ಲಿ ಕಲ್ಲಿನಂತೆ ಕೂತಿವೆ. ಸಮಯ ನಿಂತಂತಿದೆ,  ಗಡಿಯಾರದ ಮುಳ್ಳುಗಳುಕೂಡ ನಿಧಾನಗತಿಯಲ್ಲಿ ಚಲಿಸುತ್ತಿವೆಪ್ರಪಂಚ ಜೋರಾಗಿ ಓಡ್ತಿದೆ,  ನಾನು ಮಾತ್ರ ನನ್ನ ಯೋಚನೆಗಳಲ್ಲೇ ಸಿಕ್ಕಿಹಾಕಿಕೊಂಡಿದ್ದೀನೇನೋ.. ಕಣ್ಣಲ್ಲಿ ನೀರಿದ್ದರೆ ಹರಿಯಲಿ.  ಮಳೆ ಬಿದ್ದ ಬಳಿಕ ಭೂಮಿಯಮಣ್ಣು ಪರಿಮಳ ಬೀರುತ್ತೋ,  ಅತ್ತಮೇಲೆ ಮನಸ್ಸೂ ಹಾಗೆಹಗುರಾಗುತ್ತದೆಂಬ ಭರವಸೆ. ಈ ಕತ್ತಲು ಶಾಶ್ವತವಲ್ಲ.  ದೀಪ ಆರಿಸಿದ ಕೂಡಲೇ ಬೆಳಕು ಬರುತ್ತೆ.  ನೋವು ಇರುವ ಜಾಗದಲ್ಲೇಗುಣವಾಗೋ ಶಕ್ತಿನೂ ಇರುತ್ತೆ.ಆದರೂ ಇಂದೇಕೋ ಈ ಮನಸ್ಸುಭಾರವಾಗಿದೆ…. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ “ಇಂದೇಕೋ ಮನಸ್ಸು ಭಾರವಾಗಿದೆ.” Read Post »

ಪುಸ್ತಕ ಸಂಗಾತಿ

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ

ರಂಗ ಸಂಗಾತಿ “ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ ರಚನೆ  : ಎಚ್ ಎಸ್ ಶಿವಪ್ರಕಾಶ್ಪ್ರಕಾಶಕರು  :  ಬಿ ಹೆಚ್  ಮಲ್ಲಿಕಾರ್ಜುನಆಡಳಿತಾಧಿಕಾರಿಕನ್ನಡ ಪುಸ್ತಕ ಪ್ರಾಧಿಕಾರಪ್ರಥಮ ಮುದ್ರಣ  : 2011ಪುಟಗಳು : 534 ಪ್ರತಿಯೊಂದು ದೇಶವು ಆಯಾ ಪ್ರದೇಶದ ಜನ ಜೀವನದ ಸ್ಥಳಿಯ ಸಂಪ್ರದಾಯಗಳು ಅಲ್ಲಿಯ ಕಲೆಗಳ ವಸ್ತುಗಳಾಗಿ ರೂಪುಗೊಂಡಿವೆ. ಭಾರತವೂ ವಿವಿಧ ಸಂಪ್ರದಾಯಗಳ ಜನ ಜೀವನವನ್ನು ಹೊಂದಿದ್ದು ಪ್ರತಿಯೊಂದು ಭಿನ್ನ ನಡಾವಳಿಗಳನ್ನು ಸೂಚಿಸುತ್ತವೆ. ಅದರಲ್ಲೂ ಬುಡಕಟ್ಟು ಸಮುದಾಯಗಳ ಕಟ್ಟು ನಿಟ್ಟಾದ ಸಂಪ್ರದಾಯಗಳು ಅಲ್ಲಿನ ಜೀವನ ಪದ್ದತಿಯನ್ನು ಬಿಂಬಿಸುತ್ತವೆ. ಅವು ಭಾರತದ ಜನಪದ ಸಂಸ್ಕೃತಿಯ ಅಡಿಗಲ್ಲಾಗಿ ಪರಿಣಮಿಸಿವೆ. ವೈವಿಧ್ಯಮಯ ಸಂಸ್ಕೃತಿˌ ಆಚಾರ ವಿಚಾರಗಳು ಆಯಾ ಪ್ರದೇಶಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.ನಾಟಕಕಾರರಾದ ಡಾ. ಎಚ್ ಎಸ್ ಶಿವಪ್ರಕಾಶ್ ಅವರ *ಮದುವೆ ಹೆಣ್ಣು* ನಾಟಕವು ಜನಪದ ಸಂಸ್ಕೃತಿಯ ಬುಡಕಟ್ಟು ಸಮುದಾಯದ ಜೀವನ ಪದ್ದತಿಯ ಕಥೆಯನ್ನಾಧರಿಸಿ ರಚನೆಯಾಗಿದೆ. ಆ ಸಮುದಾಯದಲ್ಲಿ ಮದುವೆಯಾಗಬೇಕಾದರೆ ಅನುಸರಿಸಬಹುದಾದ ನಿಯಮವನ್ನು ನಾಟಕ ವಿವರಿಸುತ್ತದೆ. ಹರೆಯಕ್ಕೆ ಬಂದ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ತಾವೇ ಹುಡುಕಿ ಕೊಳ್ಳುವ ಅವಕಾಶವಿದ್ದು. ಆ ಸಮಯ ಬಂದಾಗ ಯುವಕನು ತಾನು ವರಿಸುವ ವಧುವನ್ನು ಮದುವೆಗೆ ಮುಂಚೆ ಯುವಕ ನಾನು ಮದುವೆಯಾಗುವ ಹೆಣ್ಣನ್ನು ಯಾವುದೇ ಸಂದರ್ಭದಲ್ಲೂ ಎಂಥವರಿಂದಲೂ ಸಂರಕ್ಷಣೆ ಮಾಡಬಲ್ಲವನು. ಅಂತಹ ಸಾಮರ್ಥ್ಯ ಉಳ್ಳವನು ಎಂಬು ಸಾಬೀತುಪಡಿಸಲು  ಕಾಡಿನೊಳಗೆ ಒಬ್ಬಂಟಿಯಾಗಿದ್ದು ಗಂಡಾಳು ಒಬ್ಬನನ್ನು ಕೊಂದುˌ ಆತನ ರುಂಡವನ್ನು ತಂದು ಹೆಣ್ಣು ಕೊಡುವ ಮಾನವನಿಗೆ ಬಲಿ ಕೊಡಬೇಕಾಗುತ್ತದೆ. ಒಂದು ವೇಳೆ ಅವನು ಈ ಕಾರ್ಯ ಮಾಡಲಾಗದಿದ್ದರೆ ಅವಿವಾಹಿತನಾಗಿಯೇ ಉಳಿಯಬೇಕಾಗುತ್ತದೆ.ಈ ನಿಯಮದಂತೆ ಒಮ್ಮೆ ಊರ ಒಡೆಯನ ಮಗ ತನ್ನ ತಂದೆಯಿಂದ ನಿಯಮಗಳನ್ನು ತಿಳಿದು ತಾನು ವರಿಸುವ ಹೆಣ್ಣಿಗಾಗಿ ಕಾಡಿಗೆ ಹೋಗುತ್ತಾನೆ. ಗಂಡಾಳುವಿನೊಂದಿಗೆ ಹೋರಾಡಲು ಕಾಡೆಲ್ಲಾ ಸುತ್ತಾಡುತ್ತಾನೆ. ಒಬ್ಬನನ್ನು ಕೊಂದು ಅವನ ತಲೆ ಬುರುಡೆಯನ್ನು ತರಲು ಹರಸಾಹಸ ಪಡುತ್ತಾನೆ. ವೀರಾವೇಷದಿಂದ ಹೋರಾಡಲು ಪ್ರತಿದಿನ ಗಂಡಾಳುವಿಗಾಗಿ ಹುಡುಕುತ್ತಿರುತ್ತಾನೆ. ಬಹಳ ದಿನಗಳಾದರೂ ಯಾರೊಬ್ಬರೂ ಸಿಗದಿದ್ದಾಗˌ ಇತ್ತ ಇವನು ಬರುವಿಕೆಯನ್ನೇ ಕಾಯುತ್ತಿದ್ದ ಮದುವೆಯಾಗಬೇಕಿದ್ದ ಹೆಣ್ಣು  ಮದುವೆಯಾಗುವವನ್ನು ಬಿಟ್ಟಿರಲಾರದೆ ಅವನ ಕಷ್ಟವನ್ನು ನೋಡಲಾಗದೆ. ಅವನನ್ನೇ ಹುಡುಕಿ ಕಾಡಿಗೆ ಹೊರಡುತ್ತಾಳೆ. ಆದರೆ ಬಲಿಗಾಗಿ ತಿರುಗಾಡುತ್ತಿದ್ದ ಯುವಕನಿಗೆ ಈ ವಿಷಯ ತಿಳಿಯದಾಗಿತ್ತು. ಹೇಗಾದರೂ ಮಾಡಿ ಒಬ್ಬನನ್ನು ಕೊಂದುˌ ಅವನ ರುಂಡದೊಂದಿಗೆ ಮರಳಿ ಮದುವೆಯಾಗಬೇಕು. ಎಂದು ಹಂಬಲಿಸುತ್ತಿದ್ದ ಯುವಕ ಪ್ರತಿ ದಿನ ಪ್ರತಿ ಕ್ಷಣ ಬಲಿಗಾಗಿ ಹುಡುಕುತ್ತಲೇ ಇದ್ದನು. ಕೆಲ ದಿನಗಳ ನಂತರ ಯಾರೋ ನನ್ನನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂತು. ಯಾರವರು ಎಂದು ಬೆನ್ನಟ್ಟಿ ಹೊರಟನು.  ಯಾವನೋ ಗಂಡಿರಬೇಕು ಎಂದು ಭಾವಿಸಿ ಮರದ ಕೆಳಗೆ ಮಲಗಿದ್ದ ಅವಳ ರುಂಡವನ್ನು ಕತ್ತರಿಸಿ ರುಂಡವನ್ನು ಹಿಡಿದು ಮಾನವನ ಮನೆ ತಲುಪಿದನು. ಈತನ ಬರುವಿಕೆಯನ್ನೇ ಕಾತುರದಿಂದ ಕಾಯುತ್ತಿದ್ದತಂದೆˌ ಮಾವ ಮತ್ತು ಪೂಜಾರಿ (ಧಾರ್ಮಿಕ ವಿಧಾನಗಳಿಂದ ಮದುವೆ ಮಾಡಿಸುವವನು) ಹಾಗೂ ಊರಿನ ಮಂದಿ. ತಲೆ ಬುರುಡೆ ಹಿಡಿದು ಬಂದ ಯುವಕನ ಉತ್ಸಾಹವನ್ನು ನೋಡಿ ಅತ್ಯಾನಂದ ಪಡುತ್ತಾರೆ. ಇಡೀ ಊರನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸುತ್ತಾರೆ. ಸಡಗರದಿಂದ ಮದುವೆಯ ಸಿದ್ದತೆ ನಡೆಯುತ್ತದೆ. ಆದರೆ… ಇದನ್ನೆಲ್ಲಾ ಸೂಕ್ಷ್ಮಮತಿಯಿಂದ ಗಮನಿಸುತ್ತಿದ್ದ ಹೆಣ್ಣೊಂದು ಓಡೋಡಿ ಬಂದುˌ  ನಿಲ್ಲಿಸಿ… ನಿಲ್ಲಿಸಿ…. ನಿಲ್ಲಿಸಿ. ನಿಮ್ಮ ಮದುವೆಯ ಸಂಭ್ರಮದ ಕಾರ್ಯಗಳನ್ನು ನಿಲ್ಲಿಸಿ. ಎನ್ನುತ್ತಾಳೆ.  ನೆರೆದಿದ್ದವರೆಲ್ಲಾ ಯಾಕೆ ?  ಕಾರಣವೇನು ? ಎಂದಾಗ.  ಈಗ ಅವನು ತಂದಿರುವ ತಲೆ ಬುರುಡೆ ಬೇರೆ ಯಾರದೋ ವ್ಯಕ್ತಿಯದಲ್ಲ. ಅಂದಾಗ ಆಚ್ಚರಿಗೊಂಡ ಜನ ಮತ್ಯಾರದು ? ಎಂದು ಪ್ರಶ್ನಿಸುವರು. ಆಗ ಆ ಹೆಣ್ಣು ಆ ತಲೆ ಬುರುಡೆ ಬೇರೆ ಯಾರದೋ ಅಲ್ಲ. ಅವನು ಮದುವೆಯಾಗಬೇಕೆಂದಿದ್ದ ಹೆಣ್ಣಿನದು. ಎಂದಾಗ ಅಲ್ಲಿದ್ದವರೆಲ್ಲಾ ಒಂದು ಕ್ಷಣ ದಿಕ್ಕೇ ತೋಚದವರಂತಾಗುತ್ತಾರೆ. ಮಮ್ಮಲ ಮರುಗುತ್ತಾರೆ. ಇಂತಹ ನೀಚ ಕೆಲಸ ಮಾಡಿದ ಆ ಯುವಕನನ್ನು ಊರಿಂದ ಬಹಿಷ್ಕಾರ ಹಾಕಿ ಆಚೆ ಕಳುಹಿಸುತ್ತಾರೆ. ಊಟ ನೀರು ಕೊಡದೆ. ಯಾರೂ ಅವನನ್ನು ಮಾತನಾಡಿಸಕೂಡದು. ಒಂದು ವೇಳೆ ಯಾರಾದರೂ ಇಂತಹ ಕೆಲಸ ಮಾಡಿದರೆ ಅಂತವರನ್ನೂ ಬಹಿಷ್ಕರಿಸಬೇಕಾಗುತ್ತದೆ. ಎಂದು ಎಚ್ಚರಿಸುತ್ತಾರೆ.ಇಂತಹ ಅವಮಾನವನ್ನು ಮತ್ತು ತಾನು ಮದುವೆ ಆಗಬೇಕಿದ್ದವಳನ್ನು ಅರಿಯದೆ ಕೊಂದೆನಲ್ಲ ಕೊರಗಿನಿಂದ ಹತಾಶೆಯಿಂದ ತನ್ನ ಬರ್ಚಿಗೆ ಕೊರಳು ಕೊಟ್ಟು ಪ್ರಾಣ ಬಿಡುತ್ತಾನೆ.ಇದಿಷ್ಟು ನಾಟಕದ ಮುಖ್ಯ ಕಥಾ ವಸ್ತುವಾಗಿದೆ. ನಾಟಕದ ಪ್ರಾರಂಭದಲ್ಲಿಯೇ ಆತ್ಮಗಳು  ಮರು ಹುಟ್ಟಿನ ರೂಪದಲ್ಲಿ ಕಾಣುತ್ತಿವೆ.  ಬೌದ್ದ ಸನ್ಯಾಸಿಗಳು ಅಲ್ಲಲ್ಲಿ ತಿರುಗಾಡುತ್ತಿರುತ್ತಾರೆ. ತಾನು ಮದುವೆಯಾಗುವ ಯುವತಿಗೆ ಯುವಕ ರಕ್ತ ಪಿಪಾಸುವಿನಂತೆ ಗೋಳಾಡುತ್ತಾ ತನ್ನ ಪೂರ್ವ ಜನ್ಮದ ಕತೆಯನ್ನು ಹೇಳಲಾರಂಭಿಸುತ್ತಾನೆ. ಇದನ್ನೆಲ್ಲಾ ಆಲಿಸಿದ ಆ ಯುವತಿ ಇದು ತನ್ನದೇ ಕಥೆ. ಅವನೇ ಇವನು. ಎಂದು ಮರು ಜನ್ಮದಲ್ಲಿ ಮದುವೆಯಾಗಲು ನಿಶ್ಚಯಿಸುತ್ತಾಳೆ.ಪ್ರೇಕ್ಷಕನಾಗಿ ನಾಟಕ ನೋಡುವ ನನಗೆ ಅನಿಸುವುದೇನೆಂದರೆ ! ವಿಧಿಯಾಟದ ಮುಂದೆ ಏನೂ ನಡೆಯುವುದಿಲ್ಲˌ ಎಂದು ಮನವರಿಕೆಯಾಗುತ್ತದೆ. ಷೇಕ್ಷ್ಸ್ ಫಿಯರ್ ನಾಟಕ ಮ್ಯಾಕ್ ಬೆತ್ ನ ಛಾಯೆ ಇಲ್ಲಿದೆ. ಗ್ರೀಕ್ ನಾಟಕಕಾರ ಸೋಫೋಕ್ಲಿಸ್ ನ ಈಡಿಪಸ್ ನಾಟಕದ ಛಾಯೇಯೂ ಇದೆ. ಭಾರತೀಯರ ನಂಬಿಕೆಯೂ ಇದೆ ಆಗಿದೆ.ಈಡಿಪಸ್ ನಾಟಕದಲ್ಲಿ ಮಗ ತಾಯಿಯನ್ನು ಮದುವೆಯಾದರೆˌ ಇಲ್ಲಿ ಯುವಕ ತಾನು ವರಿಸುವ ಹೆಣ್ಣನ್ನು ತನಗೆ ಅರಿವಿಲ್ಲದೆ ಆಕೆಯನ್ನೇ ಕೊಲ್ಲುತ್ತಾನೆ. ಷೇಕ್ಷ್ಸ್ ಫಿಯರ್ ನ ಮ್ಯಾಕ್ ಬೆತ್ ನಾಟಕದಲ್ಲಿ ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಸೇರಿ ತಮ್ಮ ರಾಜನನ್ನೇ ಕೊಲ್ಲುತ್ತಾರೆ. ಆತನ ರಕ್ತದ ಮಡುವನ್ನು ಕಂಡ ಇಬ್ಬರೂ ಅದೆ ಭ್ರಮೆಯಲ್ಲಿ ಯಾತನೆಯನ್ನು ಅನುಭವಿಸಿದರೆˌ ಇಲ್ಲಿ ಯುವಕ ಮರು ಜನ್ಮದಲ್ಲಿ ತಾನು ಮದುವೆಯಾಗಬೇಕಿದ್ದ ಯುವತಿಯನ್ನು ನೆನೆದು ಕೊರಗುತ್ತಾನೆ. ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥಾ ವಸ್ತು ಹೊಂದಿರುವ ಎಚ್ ಎಸ್ ಪ್ರಕಾಶ ಅವರ ನಾಟಕ *ಮದುವೆ ಹೆಣ್ಣು* ಬಂಧದಲ್ಲಿ ಅತ್ಯಂತ ಗಟ್ಟಿತನವನ್ನು ಹೊಂದಿದೆ. ಈ ನಾಟಕವನ್ನು ಬಲು ನಾಜೂಕಿನಿಂದ ನಿರ್ಧೇಶಿಸಿದ ಅಸ್ಸಾಂ ನ ಪವಿತ್ರಾ ರಾಬಾ ಅವರ ರಂಗಭೂಮಿಯ ಜ್ಞಾನ ಎದ್ದು ಕಾಣುತ್ತದೆ.ಸಂಗೀತ ಸಂಯೋಜನೆ ಸಂದರ್ಭಕ್ಕೆ ಅನುಸಾರವಾಗಿ  ಇನ್ನೂ ಸ್ವಲ್ಪ ಸುಧಾರಿಸಬೇಕಿತ್ತು ಅನಿಸುತ್ತದೆ. ದೃಶ್ಯ ಸಂಯೋಜನೆಯೂ ಗೊಂದಲದಲ್ಲಿತ್ತು. ಒಂದು ದೃಶ್ಯಕ್ಕೂ ಮತ್ತೊಂದು ದೃಶ್ಯಕ್ಕೂ ಬಹಳ ವಿರಾಮ ಇದ್ದಂತಿತ್ತು.  ಆದರೆ ನಟನೆˌ ವಸ್ತಾೃಲಂಕಾರ. ಬೆಳಕು ಹಾಗೂ ಪ್ರಸಾಧನಗಳು ನಾಟಕವನ್ನು ಗುರಿ ತಲುಪಿಸಿದವು. ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾದವು. ರಂಗ ತರಬೇತಿ ಪಡೆಯದ ಹವ್ಯಾಸಿ ಕಲಾವಿದರಾದರೂ  ನುರಿತವರಂತೆ ಅಭಿನಯ ಮಾಡಿ ಸೈ ಎನಿಸಿಕೊಂಡರು. ನಾಟಕದ ವಸ್ತುವನ್ನು ಪ್ರೇಕ್ಷಕರ ಮನ ಮುಟ್ಟಿಸುವಲ್ಲಿ ಯಶಸ್ವಿಯಾದರು.ನಾಟಕ ಅಸ್ಸಾಂ ನ ಬುಡಕಟ್ಟು ಜನಾಂಗದಸಂಪ್ರದಾಯದ ಭಾಗವಾಗಿದ್ದರೂˌ ಭಾಷೆ ಬೇರೆಯಾದರೂ. ಪ್ರೇಕ್ಷಕರೆಲ್ಲರೂ ಇದು ನಮ್ಮ ಜೀವನದಲ್ಲಿ ನಡೆದ ಗಂಟೆ ಇದೆ. ಪ್ರೇಕ್ಷಕರೆಲ್ಲರೂ ಈ ಕತೆ ನಮ್ಮ ಜೀವನದಲ್ಲಿ ನಡೆಯಿತೇನೋ ಎಂಬ ಭಾವನೆಯಾಯಿತು. ಪಾತ್ರಧಾರಿಗಳಾದ ವಿಜಯಪುರದ ಶ್ರೀರಂಗ ವಡೇಕರ್ ˌ ಉಡುಪಿಯ ಪುನೀತ್ˌ ಧಾರವಾಡದ ಸಾವಿತ್ರಿ ಮತ್ತು ರಂಜಿತ. ಬಳ್ಳಾರಿಯ ನಂದಕುಮಾರ ಮತ್ತು ರಂಜಿತಾ ಕೊಪ್ಪಳದ ಹುಲ್ಲೇಶ್  ಚಿತ್ರದುರ್ಗದ ಅಮಿತ್ ಇವರ ಅಭಿನಯ ಚನ್ನಾಗಿತ್ತು. ಲವಣ ಕಿಶೋರ ಅವರ ಬೆಳಕಿನ ವಿನ್ಯಾಸ ಭಾವನೆಗಳನ್ನು ಉದ್ದೀಪನಗೊಳಿಸುವಂತಿತ್ತುಥೇಯೇಟರ್ ಸಮುರಾಯ್ ಕಲಾ ತಂಡವು ರಾಜ್ಯದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರಗಳಾದˌ ನೀನಾಸಂ. ರಂಗಾಯಣ. ಶಿವಸಂಚಾರ. ಜಮುರಾ ಮುಂತಾದ ರೆಪರ್ಟಿ ಕಲಾವಿದರಂತೆ ಪ್ರಬುದ್ದತೆಯಿಂದ ಅಭಿನಯಿಸಿತು. ವೆಂಕಟೇಶ ಈಡಿಗರ*ರಾಣೇಬೆನ್ನೂರು**9008698311*

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್ ಅವರ ಕವಿತೆ “ನಾವೀಗ ಅನಂತ”

ಕಾವ್ಯ ಸಂಗಾತಿ ಡಾ.ಭಾರತಿ ಅಶೋಕ್ “ನಾವೀಗ ಅನಂತ” ಇನ್ನೂಏನೆಂದರೆ ಏನನ್ನೂ ಧಕ್ಕಿಸಿಕೊಂಡಿರಲಿಲ್ಲಆಗಲೇ ತೊರೆದು ನಡದೆಈಗಷ್ಟೇ ಸಿಕ್ಕ ಹಾಗಿತ್ತು, ಇಲ್ಲ , ಸಿಗುತ್ತಿದ್ದೆ . ಆಗಲೇ ದಾರಿ ಬದಲಿಸಿದೆ ಮುಂದಿನನಿಲ್ದಾಣದಲ್ಲಿ  ಮತ್ತೆ ಸಿಗುತ್ತೇವೆಯೊ  ಅದುಬೇಡದ ಸಂಗತಿ ಇಲ್ಲಿಈಗಲೇ ಸಿಕ್ಕವರು ಒಬ್ಬರಿಗೊಬ್ಬರು ಏನೂದೊರಕಿಸಿಕೊಳ್ಳದೇ ಹೋದಮೇಲೆಮುಂದೆ ಕೊಡುಕೊಳ್ಳುತ್ತೇವೆ ಎನ್ನುವಹಂಬಲ ಭರವಸೆ ನನಗಿಲ್ಲನಿರಿಕ್ಷೆಯೋ ..ಒಮ್ಮೆ ನಿರೀಕ್ಷೆ ಸತ್ತರೆ ಸಿಗುವ ಸಿಗದಿರುವುದರಗೊಡವೆಯೇ ಇರದು ನೀವೆನ್ನಬಹುದುಇಲ್ಲಿ ಕೊಡುಕೊಳ್ಳುವುದಾದರು ಏನಿತ್ತು?ಏನೆಲ್ಲವೂ…. ಬದುಕು ಬವಣೆ,ಕೊನೆಗು ಉಸಿರನ್ನೂ….. ಅವನುಕೊಟ್ಟಿದ್ದರೆ ಬವಣೆಯನ್ನೂ ಉಸಿರಾಗಿಸಿಕೊಳ್ಳುವ ಛಾತಿ ಇತ್ತು. ಅವನದನ್ನೂ ಕೊಡದೇ ತೆರಳಿದ ನೀವನ್ನುವಿರುಅವನು ಎನೂ ಕೊಡದೇ ಹೋದುದೇಬವಣೆಯಲ್ಲವೇ ಎಂದು!ಅದು ಹಾಗಲ್ಲ ಎನೋ ಕೊಡದೇ ಇರುವುದೇ ಅಮೃತ ಪ್ರೀತಿಅದೆ ಎಲ್ಲ, ಎಲ್ಲವೂ… ಅದನ್ನೇ ಬದುಕುತ್ತಿರುವೆ ನಾನೀಗಅವನು ಏನನ್ನಾದರೂ ಕೊಟ್ಟಿದ್ದರೆ ಸೀಮಿತವಾಗುತ್ತಿದ್ದ ಈಗ ಏನನ್ನೂ ಕೊಡದ ಅವನು ಪಡೆಯದ ನಾನು ಇಬ್ಬರೂ ಅನಂತ ಡಾ.ಭಾರತಿ ಅಶೋಕ್.

ಡಾ.ಭಾರತಿ ಅಶೋಕ್ ಅವರ ಕವಿತೆ “ನಾವೀಗ ಅನಂತ” Read Post »

ಕಾವ್ಯಯಾನ

ರಶ್ಮಿ ಶಮಂತ್ ಅವರ ಕವಿತೆ “ಖಾಲಿಹಾಳೆ”

ಕಾವ್ಯ ಸಂಗಾತಿ ರಶ್ಮಿ ಶಮಂತ್ “ಖಾಲಿಹಾಳೆ” ಬದುಕುಬಿಳಿಯ ಖಾಲಿ ಹಾಳೆಯಾಗಿದ್ದರೆಬಣ್ಣಗಳ ಬಳಿಯಬಹುದಿತ್ತು ನಮ್ಮಿಚ್ಛೆಯಂತೆತುಂಬಿಹುದು ಓರೆ ಕೋರೆಯಾದ ಗೆರೆಕಪ್ಪು ಬಣ್ಣದ ಚುಕ್ಕೆಗಳುಎಂದೆದೂ ಅಳಿಸಲಾಗದಂತ ಕಲೆಗಳುಊಹಿಸಲಾರದಂತಹ ತಿರುವುಗಳು ಬರೆದಿಟ್ಟಂತೆ ನಡೆವುದಾದರೆ ಬಾಳುಇರುತ್ತಿರಲಿಲ್ಲ ಇಲ್ಲಾವುದೇ ಗೋಳುಜೀವನ ನಾವು ರಚಿಸುವ ಕಾದಂಬರಿಯಲ್ಲಸುಖಾಂತ್ಯವನ್ನೇ ಬಯಸೋಣವೆಂದರೆನಲಿವೊಂದೇ ತುಂಬಲಿ ಎನ್ನಲುಬದುಕು ನಾವೆಣಿಸಿದಂತಲ್ಲಎಣಿಕೆಗೂ ಮೀರಿದ ಬ್ರಹ್ಮನ ಹೆಣಿಕೆಯಿದು ಇರುವ ಬಣ್ಣಗಳ ಬಳಸಿನೋವು ನಲಿವುಗಳ ಬೆರೆಸಿಚುಕ್ಕಿಗಳ ಸೇರಿಸಿ ರಂಗೋಲಿಯಾಗಿಸಿಚಿತ್ತಾರವಾಗಿಹ ವಾಸ್ತವವಿದುಬರೆದಂತೆ ಬದುಕಲ್ಲನಿನ್ನ ಬದುಕೇ ಬರವಣಿಗೆಯಾಗುವುದಿಲ್ಲಿನಿನ್ನ ಹೆಜ್ಜೆಯ ಗುರುತೇ ಮಾದರಿಯಾಗಿಅಕ್ಷರವ ರೂಪ ತಾಳುವುದು ರಶ್ಮಿ ಶಮಂತ್

ರಶ್ಮಿ ಶಮಂತ್ ಅವರ ಕವಿತೆ “ಖಾಲಿಹಾಳೆ” Read Post »

ಇತರೆ

“ಭಾರತ ಸ್ವಾತಂತ್ರ್ಯ ದಿನ” ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ, ಲೇಖಕಿ:ಗೊರೂರು ವಸಂತಿ ಮೂರ್ತಿ

ಇತಿಹಾಸ ಸಂಗಾತಿ ಲೇಖಕಿ:ಗೊರೂರು ವಸಂತಿ ಮೂರ್ತಿ ಭಾರತ ಸ್ವಾತಂತ್ರ್ಯ ದಿನ ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ 1947 ನೆಯ ಇಸವಿ ಆಗಸ್ಟ್ 15 ನೆಯ ತಾರೀಕು ಭಾರತವನ್ನು ಒಂದು ಸ್ವತಂತ್ರದೇಶ ಎಂದು ಘೋಷಿಸಲಾಯಿತು. ಆದಿನ ಇಂಡಿಯಾ ಪಶ್ಚಾತ್ಯರ ದಬ್ಬಾಳಿಕೆಯಿಂದ ಮುಕ್ತವಾಯಿತು. ಮಹಾತ್ಮ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ಪ್ರಭಾವಿತರಾಗಿ ದೇಶದಾದ್ಯಂತ ಲಕ್ಷಾಂತರ ದೇಶಪ್ರೇಮಿಗಳು ಆ ದಿನಕ್ಕಾಗಿ ದುಡಿದಿದ್ದರು, ಸೆರೆವಾಸ ಅನುಭವಿಸಿದ್ದರು, ಅಪಾರ ತ್ಯಾಗಗಳನ್ನು ಮಾಡಿದ್ದರು. 1947ನೆಯ ಇಸವಿ ಆಗಸ್ಟ್ 15 ಕ್ಕೆ ಅವರುಗಳೆಲ್ಲ ಮಾಡಿದ ತ್ಯಾಗ ಮತ್ತು ಸಹಿಸಿದ ಕಷ್ಟಗಳಿಗೆ ಫಲ ಲಭಿಸಿತು. 1947ನೆಯ ಆಗಸ್ಟ್ 14, ಸರಿಯಾಗಿ ಮಧ್ಯರಾತ್ರಿ 12 ಘಂಟೆಯಲ್ಲಿ ಭಾರತ ಸ್ವತಂತ್ರ ದೇಶವೆಂದು (sovereign nation) ಘೋಷಿಸಲಾಯಿತು. ಮಧ್ಯರಾತ್ರಿಯಲ್ಲಿ All India Radio, ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳಲ್ಲಿ ನ್ಯೂಸ್ ದೇಶದಾದ್ಯಂತ ಕೆಲವೇ ನಿಮಿಷಗಳಲ್ಲಿ ಹರಡಿತು. ಜನ ಖುಷಿಯಿಂದ ಹುಚ್ಚೆದ್ದು ಬೀದಿ ಬೀದಿಗಳಲ್ಲಿ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಕುಣಿಯುತ್ತಾ ಮೆರವಣಿಗೆ ಹೊರಟು ತಮ್ಮ ಆತ್ಮ ಸಂತೋಷವನ್ನು ತೋರ್ಪಡಿಸಿದರು ಮತ್ತು ಹಂಚಿಕೊಂಡರು. ಭಾರತ್ ಮಾತಾಕಿ ಜೈ, ಮಹಾತ್ಮ ಗಾಂಧೀಕಿ ಜೈ, ಜವಾಹರಲಾಲ್ ನೆಹರೂಕಿ ಜೈ, ಸರ್ದಾರ್ ವಲ್ಲಬಾಯಿ ಪಟೇಲ್ ಕಿ ಜೈ, ಇತ್ಯಾದಿ ಜಯಘೋಷಗಳ ಕೂಗು ಮುಗಿಲನ್ನೇ ಮುಟ್ಟಿತ್ತು. ಹಳ್ಳಿಹಳ್ಳಿಗಳಲ್ಲಿಯೂ, ದೊಡ್ಡ ಮೈಸೂರು, ಬೆಂಗಳೂರು, ದೆಹಲಿ, ಕಲ್ಕತ್ತಾ ಮುಂತಾದ ನಗರಗಳಲ್ಲಿಯೂ ಈ ಜಯಘೋಷದ ಪ್ರತಿಧ್ವನಿ ವಾತಾವರಣವನ್ನು ಸಂಪೂರ್ಣವಾಗಿ ಮುಳುಗಿಸಿತ್ತು. ಇಂತಹ ಪವಿತ್ರ ಘಳಿಗೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸಮಸ್ತವನ್ನೂ ಮುಡುಪಿಟ್ಟು ಹೊಡೆದಾಡಿದ ಮಹಾತ್ಮಗಾಂಧಿ ಮತ್ತು ಇತರ ಮುಖಂಡರು ಎಲ್ಲಿದ್ದರು? ಅವರು ಖುಷಿಯಿಂದ ಬೀದಿಯಲ್ಲಿ ಮೆರವಣಿಗೆ ಹೊರಟಿರಲಿಲ್ಲ. ಮಿಠಾಯಿ ಹಂಚಿ ತಾವೂ ತಿನ್ನುತ್ತಿರಲಿಲ್ಲ. ಗಾಂಧೀಜಿ ಮತ್ತು ಅವರ ಕೆಲವು ನಿಕಟ ಅನುಯಾಯಿಗಳು (ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್) ಮುಂತಾದವರು ಕಲ್ಕತ್ತಾದಲ್ಲಿ ಇದ್ದರು. ಗಾಂಧೀಜಿ ಅವರು ದೇಶದಲ್ಲಿ ಶಾಂತಿ, ಅಹಿಂಸೆ ಮತ್ತು ಹಿಂದೂ ಮುಸ್ಲಿಂ ಸೌಹಾರ್ದಕ್ಕಾಗಿ ಉಪವಾಸದಲ್ಲಿ ತೊಡಗಿದ್ದರು. ಎಲ್ಲರೂ ಪ್ರಾರ್ಥನೆಯಲ್ಲಿ ನಿರತರಾಗಿದ್ದರು!! ಭಾರತದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆಯಲಿಲ್ಲ. ಕೋಟ್ಯಾಂತರ ಪ್ರಜೆಗಳು, ಯುವಕರು, ಮಧ್ಯವಯಸ್ಕರು, ಮುದುಕರು, ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕೆಚ್ಚೆದೆಯಿಂದ ತಮ್ಮ ದೇಹವನ್ನು ಬ್ರಿಟಿಷರ ಲಾಠಿ,ಬಂದೂಕಗಳಿಗೆ ಸ್ವಂತ ಇಚ್ಛೆಯಿಂದ ಒಡ್ಡಿದರು. ಗಾಂಧೀ ಅವರ ತತ್ವದ ಪ್ರಕಾರ ವಾಪಸ್ಸು ಹೊಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿದೂ ಭಾರತದ ಸ್ವಾತಂತ್ರ್ಯದ ಭವ್ಯ ಕನಸಿನಲ್ಲಿ ಪ್ರಜೆಗಳು ತಮ್ಮ ಸಮಸ್ತವನ್ನೂ ತ್ಯಾಗಮಾಡಲು ಮುಂದಾದರು. ಈ ದೇಶಭಕ್ತರು ಕಾರಾಗ್ರಹವಾಸಕ್ಕೂ ಹೆದರಲಿಲ್ಲ; ಬ್ರಿಟಿಷರ ಗುಂಡಿಗೂ ಹೆದರಲಿಲ್ಲ; ಇದು ಗಾಂಧೀಜಿ ಅವರ ತಪಸ್ಸಿನ ಆತ್ಮಶಕ್ತಿ. ಗಾಂಧೀಜಿ ಅವರನ್ನು ಹಿಂಬಾಲಿಸಿ ಸತ್ಯಾಗ್ರಹಕ್ಕೆ ಧುಮುಕಿದರೆ ವಾಪಸ್ಸು ಜೀವಂತವಾಗಿ ಬರುವುದು ಸಂದೇಹ ಎಂದು ತಿಳಿದೂ ಕೂಡ ಕೋಟಿ ಕೋಟಿ ಜನಗಳು ಸತ್ಯಾಗ್ರಹದಲ್ಲಿ ಭಾಗವಹಿಸಲು ಮುಂದಾದರು. ಜಗತ್ತಿನ ಚರಿತ್ರೆಯಲ್ಲಿಯೇ ಇಂತಹ ಅದ್ಭುತ ಎಲ್ಲಿಯೂ ನಡೆದಿಲ್ಲ. ಹಾಗಾದರೆ ಎಲ್ಲ ಆರಾಮವಾಗಿ ಸುಭಿಕ್ಷವಾಗಿ, ಶಾಂತಿ ಸೌಹಾರ್ದ, ಪ್ರೀತಿಯಿಂದ ಮುಗಿಯಿತೆಂದು ಹೇಳುವಹಾಗಿಲ್ಲ. ದೇಶ ವಿಭಾಗ ಮಾಡುವ ಪ್ರಶ್ನೆ ಎದ್ದಿತ್ತು. ಪಂಜಾಬ್, ಬಂಗಾಳಾಗಳಲ್ಲಿ ಹಿಂದೂ ಮುಸ್ಲಿಂ ಕೋಮುವಾದ ಮತ್ತು ಜಾತೀಯ ಘರ್ಷಣೆಗಳಿಂದ ಹಿಂಸೆ ಕೊಲೆಗಳು ನಡೆದು ಗಾಂಧೀಜಿ ಅವರ ಮನಸ್ಸಿಗೆ ತೀವ್ರ ದುಃಖವುಂಟು ಮಾಡಿದ್ದವು. ಅವರು ಮತ್ತೆ ಉಪವಾಸ ಪ್ರಾರಭಿಸಿದ್ದರು. ಈ ಬಾರಿ ಬ್ರಿಟಿಶರನ್ನು ಎದುರಿಸುವುದಕ್ಕಲ್ಲ. ತಮ್ಮ ಪ್ರೀತಿಯ ಭಾರತೀಯರ ಮನಸ್ಸಿನ ಆತ್ಮ ಸಂಧಾನಕ್ಕಾಗಿ. ಹೀಗೆ ದೇಶದಲ್ಲಿ ಅಶಾಂತಿ ಉಂಟಾದಾಗ ಪ್ರತಿ ಮನೆಯಲ್ಲೂ ಅವರವರದೇ ಆದ ಪರಿಸ್ಥಿತಿ/ಪ್ರಶ್ನೆಗಳು ಹುಟ್ಟಿದುವು ವಿದ್ಯಾರ್ಥಿಗಳು ಅನೇಕರು ಶಾಲೆ ಕಾಲೇಜುಗಳನ್ನು ಬಿಟ್ಟು ಚಳುವಳಿ ಸೇರಿದ್ದರು. ಅವರ ವಿದ್ಯಾಭ್ಯಾಸ ಕಡೆಗಣಿತವಾಗಿ ಅವರು ಯಾವ ತರಗತಿಗೆ ಸೇರಿ ಮುಂದುವರಿಸಬೇಕು ಎಂಬುದನ್ನು ತೀರ್ಮಾನಿಸಬೇಕಾಗಿತ್ತು. ಇನ್ನು ಕೆಲವು ಯುವಕರು ಚಳುವಳಿಯಲ್ಲಿ ಭಾಗವಹಿಸಿ ತಮ್ಮ ಜೀವವನ್ನೇ ಕಳೆದುಕೊಂಡು ಅವರ ಹೆಂಡತಿಯರು ಮತ್ತು ಮಕ್ಕಳ ಗತಿಯೇನು ಎಂದು ತಿಳಿಯದೇ ಆತಂಕದಲ್ಲಿದ್ದರು. ಮತ್ತು ಕೆಲವರು ತಾವು ಸತ್ಯಾಗ್ರಹದಲ್ಲೂ ಭಾಗವಹಿಸಲಿಲ್ಲ, ಕಾರಾಗ್ರಹಕ್ಕೂ ಹೋಗಲಿಲ್ಲ, ಮನೆಯಲ್ಲಿಯೇ ಕುಳಿತು “ನಾನೂ ಸತ್ಯಾಗ್ರಹಿ ಆಗಿದ್ದೇ; ಲಾಠಿ ಏಟು ತಿಂದಿದ್ದೇ” ಎಂದು ಸುಳ್ಳು ಹೇಳತೊಡಗಿದರು. ಮನೆಗೊಂದು ಕಥೆಯಾಯಿತು. ನಮ್ಮ ಗೊರೂರು ಮನೆಯಲ್ಲೂ ಒಂದು ಕಥೆ ಆಯಿತು. ಸ್ವಾತಂತ್ರ್ಯ ಬಂದಾಗ ನಮ್ಮ ತಂದೆ ಡಾ. ಗೊರೂರರು ಇನ್ನೂ ಸೆರೆಮನೆಯಲ್ಲಿಯೇ ಇದ್ದರು. “ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅವರಿಗೆ ಸ್ವಾತಂತ್ರ್ಯ ಬಂದಿರಲಿಲ್ಲ.” ಎಂಬ ಮಾತು ಬಳಕೆಯಲ್ಲಿದೆ. 1947 ಆಗುಸ್ಟ್ ತಿಂಗಳಿನಲ್ಲಿ ನನ್ನ ದೊಡ್ಡ ಅಣ್ಣ ರಾಮಚಂದ್ರ ತುಮಕೂರಿನಲ್ಲಿ ಇಂಟರ್ಮೀಡಿಯಟ್ ಓದುತ್ತಿದ್ದ. ಅವನಿಗೆ ಆಗ 17 ವಯಸ್ಸು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಆಗಬೇಕಾಗಿತ್ತು. ಅದಕ್ಕೆ ಎಲ್ಲರೂ ಕಾತುರರಾಗಿದ್ದರು. ಆದರೆ ಅದಕ್ಕೆ ಒಂದು ಅಡಚಣೆ ಬಂದಿತ್ತು. ಅದೇನೆಂದರೆ ಅನೇಕ ಮಹಾರಾಜರುಗಳು ತಮ್ಮ ಆಳ್ವಿಕೆಯನ್ನು ಬಿಟ್ಟು ಪ್ರಜಾಪ್ರಭುತ್ವವನ್ನು ಸೇರಲು ಇಷ್ಟಪಡಲಿಲ್ಲ. ಆಗ ಮತ್ತೊಂದು ಚಳುವಳಿ ಪ್ರಾರಂಭವಾಯಿತು. ಈ ಚಳುವಳಿಗೆ “ಚಲೋ ಪ್ಯಾಲೆಸ್” ಎಂದು ಹೆಸರು. ಈ ಚಳುವಳಿ ರಾಜರುಗಳ ಮನಸ್ಸನ್ನು ಬದಲಾಯಿಸುವುದಕ್ಕಾಗಿ ಮಾಡಿದ ಚಳುವಳಿ. ಇದರಲ್ಲಿ ಡಾ ಗೊರೂರರ ಮಗ ರಾಮಚಂದ್ರ ಭಾಗವಹಿಸುತ್ತಿದ್ದ. 1947 ಸೆಪ್ಟೆಂಬರ್ 14 ನೆಯ ತಾರೀಕು ಪೊಲೀಸರು ತುಮಕೂರಿನಲ್ಲಿ ಸತ್ಯಾಗ್ರಹಿಗಳ ಮೇಲೆ ಗೋಲೀಬಾರ್ ಚಲಾಯಿಸಿದರು. ಆ ದಿನ ರಾಮಚಂದ್ರನೂ ಸೇರಿದಂತೆ ನಿರಾಯುಧರಾದ ಅಹಿಂಸಾ ಚಳುವಳಿಯಲ್ಲಿ ಶಾಂತರಾಗಿ ತೊಡಗಿದ್ದ ಮೂರು ಜನ ಕನ್ನಡಿಗರನ್ನು ಬ್ರಿಟಿಷ್ ಪೋಲೀಸ ರು ವಿನಾಕಾರಣ ಗುಂಡು ಹಾರಿಸಿ ಕೊಂದರು. ಇಂದಿಗೂ ಆ ಸ್ಥಳದಲ್ಲಿ ಈ ಮೂವರ ಹೆಸರನ್ನು ಹೊತ್ತ ಒಂದು ಶಾಸನ ಇದೆ. ಈ ಪುಣ್ಯ ಸ್ಥಳಕ್ಕೆ “ಸ್ವತಂತ್ರ ಚೌಕ” ಅಥವಾ “Freedom Circle” ಎಂದು ಹೆಸರಿಸಲಾಗಿದೆ. ಇದಾದಮೇಲೆ 1947 ಅಕ್ಟೋಬರ್ 14 ನೆಯ ತಾರೀಕು ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ತಮ್ಮ ಒಪ್ಪಿಗೆಯನ್ನು ಘೋಷಿಸಿದರು. ಅದಾದಮೇಲೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಕರ್ನಾಟಕದ ಮೊಟ್ಟಮೊದಲನೆಯ ಮುಖ್ಯಮಂತ್ರಿ ಎಂಬ ಗೌರವ ಶ್ರೀ ಕೆ ಸಿ ರೆಡ್ಡಿ ಅವರಿಗೆ ಸಲ್ಲುತ್ತದೆ. ಭಾರತ ದೇಶದ ಸ್ವಾತಂತ್ರಕ್ಕಾಗಿ ಕಷ್ಟ ನಷ್ಟಗಳನ್ನು ಅನುಭವಿಸಿದ ಮತ್ತು ಪ್ರಾಣ ಕೊಟ್ಟ ಅನೇಕ ದೇಶಭಕ್ತರಿಗೆ ಅವರ ನಿಸ್ಸ್ವಾರ್ಥ ಸೇವೆಗೆ ಈ ದಿನ ನಮ್ಮ ನಮನಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಗೊರೂರು ವಸಂತಿ ಮೂರ್ತಿ

“ಭಾರತ ಸ್ವಾತಂತ್ರ್ಯ ದಿನ” ಆಗಸ್ಟ್ 15, 1947; ಚರಿತ್ರೆಯ ಒಂದು ಕಿರುನೋಟ, ಲೇಖಕಿ:ಗೊರೂರು ವಸಂತಿ ಮೂರ್ತಿ Read Post »

You cannot copy content of this page

Scroll to Top