ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು”
ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಅಪರೂಪದ ಕನಸು” ಅಪರೂಪದ ಕನಸು ಕಂಡೆಇಪ್ಪತ್ತೈದರ ಮುಂಜಾವಲಿ;ಮಣ್ಣೆಣ್ಣೆ ದೀಪದ ಮಬ್ಬಿನಲಿಆಲವೂ ಅತ್ತಿಯೂ ಚಿಗುರಿದ್ದವು,ಒಂದೇ ಮಣ್ಣಿನ ಮಡಿಲಲಿ. ಆಲದ ಕೆಳಗೆ ಭೀಮ ನಿಂತ,ಬಾವಿಯ ಬಳಿ ಕೇರಿಯ ಮಗು;ಬೊಗಸೆ ತುಂಬ ನೀರು ಕೊಟ್ಟಾಗಮಗುವಿನ ಮುಖ ಅರಳಿತುನೀರೊಳಗೆ ಆಕಾಶವೂ ಅರಳಿತು. ಅತ್ತಿಯ ಕೆಳಗೆ ದುರ್ಯೋಧನ,ಮಡಿಲಲ್ಲಿ ಹಳೆಯ ಓಲೆ;ಕೋಲ ತುದಿಯಿಂದ ನೆಲವ ಗೀರಿಗೆರೆಯ ಮೇಲೆ ಗೆರೆ ಎಳೆದಮಣ್ಣಿನ ಎದೆಯಲಿ ಗಾಯವಾಯಿತು. ಆಲ ಮೆಲ್ಲಗೆ ಬೇರು ಚಾಚಿತುಕೇರಿಯಿಂದ ಬಾವಿಗೆ,ಬಾವಿಯಿಂದ ಶಾಲೆಯ ಹೊಸ್ತಿಲಿಗೆ;ಭೀಮ ಗದೆಯನ್ನು ನೆಲಕ್ಕಿಟ್ಟುಮಗುವಿನ ಕೈಗೆ ಸ್ಲೇಟು ಕೊಟ್ಟ. ಅತ್ತಿಯ ಕೊಂಬೆ ಹಣ್ಣಾಯಿತು,ಹಣ್ಣಿನೊಳಗೆ ಸಾವಿರ ಬೀಜ;ದುರ್ಯೋಧನ ಬೇಲಿ ಕಟ್ಟಿದರೂಹಕ್ಕಿಗಳು ಕೊಂಬೆಯಿಂದ ಹಾರಿದವುಬೀಜಕ್ಕೆ ಬೇಲಿಯ ಭಾಷೆ ತಿಳಿಯಲಿಲ್ಲ. ಒಂದು ಸಂಜೆ ಬೆಂಕಿ ಎದ್ದಿತು,ಹಳೆಯ ಓಲೆ ಉರಿದು ಬೂದಿಯಾಯಿತು;ಬೂದಿ ಗಾಳಿಯ ಜೊತೆಗೆ ಹಾರಿದಾಗಆಲದ ಬರಿದ ಕೊಂಬೆಯ ತುದಿಯಲ್ಲಿಹೊಸ ಚಿಗುರೊಂದು ನಗುತ್ತಿತ್ತು. ಮಳೆ ಸುರಿಯಿತು, ಮಣ್ಣು ಘಮಿಸಿತು;ಆಲದ ನೆರಳಿಗೆ ಕೇರಿ ಬಂತು,ಕೇರಿಯ ಬೆನ್ನಿಗೆ ಊರೂ ಬಂತು;ಒಂದೇ ಚಾಪೆಯ ಮೇಲೆ ಕೂತುಅಕ್ಷರದ ದೀಪ ಹಚ್ಚಿದರು. ಅತ್ತಿಯ ಕೆಳಗೆ ದುರ್ಯೋಧನರಾತ್ರಿಯಿಡೀ ನಿದ್ದೆಗೆಟ್ಟ“ಎಲ್ಲರೂ ನೆಟ್ಟಗೆ ನಿಂತರೆನನ್ನ ಸಿಂಹಾಸನದ ಎತ್ತರಇನ್ನು ಯಾರಿಗೆ ಕಾಣುವುದು?” ಬೆಳಕು ಹರಿಯಿತುಭೀಮನ ಗದೆ ಮಣ್ಣಲ್ಲೇ ಉಳಿಯಿತು;ಎಲ್ಲರ ಹೆಸರಿಗೂ ಒಂದೇ ಮಸಿ ಹೊತ್ತಹೊಸ ಪುಸ್ತಕ ತೆರೆದುಕೊಂಡಿತುಅತ್ತಿಯ ನೆರಳು ಕಿರಿದಾಗುತ್ತಿತ್ತು. ಎಚ್ಚರವಾದಾಗಕಿಟಕಿಯಾಚೆ ಎರಡೂ ಮರಗಳಿದ್ದವು;ಆಲದಡಿ ಮಕ್ಕಳು ಒಟ್ಟಾಗಿ ನಗುತ್ತಿದ್ದರು,ಅತ್ತಿಯ ಬುಡದಲ್ಲಿ ಮಳೆ ಸುರಿಯುತ್ತಿತ್ತುನಿನ್ನೆ ಎಳೆದ ಗೆರೆಇಂದು ಮಣ್ಣಾಗುತ್ತಿತ್ತು. ಡಾ. ಹೆಚ್. ನಟರಾಜ್ ಆರ್ಯ
ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಅಪರೂಪದ ಕನಸು” Read Post »


