ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥೆ:”ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ”ಡಾ.ವೆಂಕಟೇಶ ಪಿ.ಗುಡೆಪ್ಪನವರ

ಕಥಾ ಸಂಗಾತಿ ಡಾ.ವೆಂಕಟೇಶ ಪಿ.ಗುಡೆಪ್ಪನವರ “ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ” ಬ್ಲರ್ಬ     “ಇಲ್ಲಿ ಬರೀ ಸಿಮೆಂಟ್ ದೂಳು ಮಳೆಯಾಗಿ ಸುಳಿಯುವುದಿಲ್ಲ; ಬಡತನದ ಒರಟುತನದಲ್ಲೂ ಚಿಗುರಿದ ಶುದ್ಧ ಪ್ರೀತಿಯೊಂದು ಅಂದದ ಜೀವಗಳನ್ನೇ ಬೂದಿ ಮಾಡಿತು!”   ಹಸಿರಿನಿಂದ ಕಂಗೊಳಿಸುತ್ತಿದ್ದ ಅವಳಿ ನಗರದ ತೋಟದ ಪಕ್ಕ ಕಾರ್ಖಾನೆಯೊಂದು ತಲೆಎತ್ತಿದಾಗ, ಅಲ್ಲಿನ ಪ್ರಕೃತಿಯಷ್ಟೇ ಮನುಷ್ಯರ ಉಸಿರೂ ಕಲುಷಿತವಾಯಿತು. ಅದೇ ದೂಳಿನಲ್ಲಿ ದಿನವಿಡೀ ಬೆವರು ಹರಿಸಿ ದುಡಿಯುವ ಒರಟು ಮೈಯ ಮರಗಪ್ಪ ಮತ್ತು ಶ್ರೀಮಂತ ಸಾವುಕಾರನ ಮುದ್ದಿನ ಮಗಳು ಗೌರಮ್ಮನ ನಡುವೆ ಚಿಗುರಿದ ಮೂಕ ಪ್ರೀತಿ, ವರ್ಗ-ಜಾತಿಯ ಗೋಡೆಗಳನ್ನು ಮೀರಿ ಬೆಳೆಯುತ್ತದೆ.ಆದರೆ, ವಿಧಿಯ ಕ್ರೂರ ಆಟವೆಂಬಂತೆ, ಅದೇ ಸಿಮೆಂಟ್ ದೂಳು ನಿಧಾನವಾಗಿ ಅವರ ಶ್ವಾಸಕೋಶವನ್ನು ತಿಂದುಹಾಕಿ ಮಾರಕ ‘ಕ್ಯಾನ್ಸರ್’ ಎಂಬ ಮಹಾಮಾರಿಯಾಗಿ ಪರಿಣಮಿಸುತ್ತದೆ. ಸಮಾಜದ ಕಣ್ಣಿಗೆ ಬಿಸುಕಿಸಲ್ಪಟ್ಟ ಆ ಪ್ರೇಮಿಗಳು ಕೊನೆಗೆ ಅದೇ ಬೂದಿ ಮಳೆಯ ನಡುವೆ ಒಂದೇ ಚಿತೆಯಲ್ಲಿ ಅಮರರಾಗುತ್ತಾರೆ.ಜಾತಿ-ಅಂತಸ್ತಿನ ಅಹಂಕಾರವನ್ನು ಕರಗಿಸಿ, ಓದುಗರ ಕಣ್ಣಾಲೆಗಳನ್ನು ಒದ್ದೆ ಮಾಡುವ ಈ ಕರುಳು ಹಿಂಡುವ ಪ್ರೇಮ ಕಥೆಯೇ  ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ… ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ ಅವಳಿ ನಗರಗಳ ಅಂಚಿನಲ್ಲಿ ಹಬ್ಬಿರುವ ಆ ಮಣ್ಣಿನ ವಾಸನೆಯೇ ಹಂಗೆ, ಅದಕ್ಕೊಂದು ಒಂಥರಾ ವಿಶಿಷ್ಟವಾದ ಗತ್ತು, ಗಮ್ಮತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಆ ಗಾಳಿಯ ಹಂಗೆ ಸಂಪೂರ್ಣವಾಗಿ ಬದಲಾಗಿಹೋಗಿದೆ. ಕೆಂಪು ಮಣ್ಣಿನ ಘಮಲು ಮಾಸಿ, ಯಂತ್ರಗಳ ಗರ್ಜನೆ ಆ ಪ್ರಾಂತ್ಯವನ್ನು ಆವರಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸತ್ಯಪ್ಪ ಸಾವುಕಾರನ ನೂರಾರು ಎಕರೆ ವಿಶಾಲವಾದ ತೋಟದ ಪಕ್ಕದಲ್ಲೇ ದೈತ್ಯಾಕಾರದಲ್ಲಿ ತಲೆಎತ್ತಿದ ಆ ಸಿಮೆಂಟ್ ಕಾರ್ಖಾನೆಯಂತೂ ಆ ಇಡೀ ಪ್ರದೇಶದ ಜೀವಸೆಲೆಯನ್ನು ಬತ್ತಿಸಿಬಿಟ್ಟಿದೆ. ಕಣ್ಣು ಹಾಯಿಸಿದಷ್ಟು ಹಸಿರಿನಿಂದ ಕಂಗೊಳಿಸುತ್ತಿದ್ದ ಬಾಳೆ ತೋಟ, ಮಾವಿನ ತೋಪು, ಸಪೋಟಾ ಗಿಡಗಳು ಈಗ ಜೀವ ಕಳೆದುಕೊಂಡು ನಿಂತಿವೆ. ಆ ತೋಟದ ಎಲೆಗಳ ಮೇಲೆಲ್ಲಾ ಹಸಿರು ಬಣ್ಣ ಮಾಸಿ, ಕಾರ್ಖಾನೆಯ ಬೂದಿ ಬಣ್ಣ ಮೈಮೇಲೆ ಅಂಟಿಕೊಂಡಿದೆ. ಇಲ್ಲಿನ ಜನರ ಬದುಕು ಕೂಡ ಆ ಸಿಮೆಂಟ್ ದೂಳಿನ ಮಳೆಯಲ್ಲಿ ನಲುಗಿ, ಬೂದಿಯಾಗಿಹೋಯ್ತು ಎಂದರೆ ತಪ್ಪಾಗಲಾರದು.ಅದೇ ತೋಟದ ಮೂಲೆಯಲ್ಲಿ, ಬಿರು ಬೇಸಿಗೆಯ ಸುಡು ಬಿಸಿಲಿಗೂ ಕ್ಯಾರೆ ಎನ್ನದೆ ಮೈಯೆಲ್ಲಾ ಕರಗಿ ಹೋದ ಬೆವರನ್ನು ಹರಿಸಿ ದುಡಿಯುವ ಒಬ್ಬ ಅಪ್ಪಟ ಒರಟು ಮನುಷ್ಯ ಮರಗಪ್ಪ. ಎದೆಗೆ ಬಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನೂ ಹೂವಿನಂತೆ ಎತ್ತುವ ಗಟ್ಟಿಮುಟ್ಟು ಮೈಕಟ್ಟು ಅವನದು. ಕುತ್ತಿಗೆಯ ಮೇಲೆ ಬಿದ್ದ ಬಿಳಿ ಸಿಮೆಂಟ್ ದೂಳು ಅವನ ಇಡೀ ಮೈಯನ್ನು ಆವರಿಸಿಕೊಂಡು, ನೋಡಲು ಯಾವುದೋ ಶಿಲ್ಪಿಯ ಕೈಯಲ್ಲಿ ರೂಪುಗೊಂಡ ಬಿಳಿ ಕಲ್ಲಿನ ಮೂರ್ತಿಯಂತೆ ಕಾಣುತ್ತಿದ್ದ. ಬಡತನದ ರೇಖೆಗಿಂತಲೂ ಕೆಳಗೆ ಹುಟ್ಟಿ, ಹೊಟ್ಟೆಪಾಡಿಗೆ ದಿನಗೂಲಿ ನಂಬಿ ಬದುಕುತ್ತಿದ್ದರೂ, ಅವನ ಒರಟು ಎದೆಯ ಒಳಗೆ ಮೃದುವಾದ ಹೃದಯವಿತ್ತು; ಕಣ್ಣುಗಳಲ್ಲಿ ಮಾತ್ರ ಒಂಥರಾ ಜೀವನದ ಕಳೆಯಿತ್ತು. ಮುಖದ ಮೇಲಿನ ಸಿಮೆಂಟ್ ದೂಳನ್ನು ಆಗಾಗ್ಗೆ ಬಿಳಿ ಕೈಯಿಂದ ಒರೆಸಿಕೊಳ್ಳುತ್ತಾ, ಸೂರ್ಯ ಮೂಡುವುದರಿಂದ ಹಿಡಿದು ಮುಳುಗುವವರೆಗೂ ದುಡಿಯುವುದೇ ಅವನ ಏಕೈಕ ಕಾಯಕವಾಗಿತ್ತು.ಅದೇ ಸತ್ಯಪ್ಪ ಸಾವುಕಾರನ ಮುದ್ದಿನ ಹಾಗೂ ಏಕೈಕ ಮಗಳು ಗೌರಮ್ಮ. ಆ ಊರಿನ ದೊಡ್ಡ ಶ್ರೀಮಂತನ ಮಗಳಾದ್ದರಿಂದ ಅವಳಿಗೆ ಯಾವುದೇ ರೀತಿಯ ಕೊರತೆ ಇರಲಿಲ್ಲ. ಅಪ್ಪನ ಆಸ್ತಿ-ಪಾಸ್ತಿಗೆ ಇವಳೇ ಕಣ್ಣಿನುಸಿರು, ರಾಣಿ. ಮೈತುಂಬಾ ಒಡವೆಗಳನ್ನು ಹಾಕಿಕೊಳ್ಳದಿದ್ದರೂ, ಅವಳ ಸ್ವಾಭಾವಿಕ ಅಂದವೇ ಆ ಊರಿನ ಯುವಕರ ನಿದ್ದೆಗೆಡಿಸಿತ್ತು. ಸಿಂಗಾರಗೊಂಡು ಕಾಲೇಜಿಗೆ ಹೋಗುವ ವಯಸ್ಸು ಅವಳದ್ದು. ಪಟ್ಟಣದ ದೊಡ್ಡ ಕಾಲೇಜಿನಲ್ಲಿ ಸೈನ್ಸ್ ಓದುತ್ತಿದ್ದರೂ, ವಾರಾಂತ್ಯದಲ್ಲಿ ಅಥವಾ ರಜೆ ದಿನಗಳಲ್ಲಿ ತಂದೆಯ ಈ ತೋಟಕ್ಕೆ ಬಂದಾಗಲೆಲ್ಲಾ ಆ ನಿಸರ್ಗದ ಮಡಿಲಲ್ಲಿ ಪಕ್ಷಿಯಂತೆ ಉಲ್ಲಾಸದಿಂದ ಓಡಾಡುತ್ತಿದ್ದಳು. ಬಿಳಿಯ ಸಲ್ವಾರ್ ಧರಿಸಿ, ಮುಡಿಯಲ್ಲಿ ಯಾವಾಗಲೂ ತಾಜಾ ಮಲ್ಲಿಗೆ ಹೂವನ್ನು ಮುಡಿದು ಆಕೆ ನಡೆದುಬರುತ್ತಿದ್ದರೆ, ಕಳೆಗುಂದಿದ್ದ ಆ ಸಾವುಕಾರನ ತೋಟಕ್ಕೆ ಮರಳಿ ಹೊಸ ಜೀವ ಬಂದಹಾಗಾಗುತ್ತಿತ್ತು. ಅವಳ ನಗು ಆ ಬಿಸಿಲಿನ ತಾಪವನ್ನೂ ತಣಿಸುವಂತಿತ್ತು.ಅದೊಂದು ದಿನ ಮಧ್ಯಾಹ್ನದ ಹೊತ್ತು. ಬಿಸಿಲು ತನ್ನ ಪ್ರತಾಪವನ್ನು ಸಂಪೂರ್ಣವಾಗಿ ತೋರುತ್ತಿತ್ತು. ಕಾರ್ಖಾನೆಯಿಂದ ಹೊರಬರುತ್ತಿದ್ದ ದೂಳು ಗಾಳಿಯಲ್ಲಿ ತೇಲಾಡುತ್ತಾ ಎಲ್ಲರ ಮೇಲೂ ಸುರಿಯುತ್ತಿತ್ತು. ಮರಗಪ್ಪ ತೋಟದ ಒಂದು ಮೂಲೆಯಲ್ಲಿ ಮರದ ನೆರಳಿನಲ್ಲಿ ನಿಂತು ಕೆಲಸ ಮಾಡಿ ಸುಸ್ತಾಗಿ ಹೋಗಿದ್ದನು. ಗಂಟಲು ಒಣಗಿಹೋಗಿತ್ತು, ಬಾಯಾರಿಕೆ ತೀವ್ರವಾಗಿತ್ತು. ನೀರು ಕುಡಿಯಲು ತೋಟದ ಮೂಲೆಯಲ್ಲಿದ್ದ ಪುರಾತನ ಕಲ್ಲು ಬಾವಿಯ ಬಳಿಗೆ ಹೆಜ್ಜೆ ಹಾಕಿದನು. ಅದೇ ಸಮಯದಲ್ಲಿ, ಅಪ್ಪನಿಗೆ ಊಟ ತಂದಿದ್ದ ಗೌರಮ್ಮ, ಕೈಯಲ್ಲಿ ತಣ್ಣನೆಯ ನೀರಿರುವ ತಾಮ್ರದ ಬಿಂದಿಗೆ ಹಿಡಿದು ಅದೇ ಬಾವಿಯ ಕಡೆಗೆ ಬಂದಿದ್ದಳು.ಅನಿರೀಕ್ಷಿತವಾಗಿ ಇಬ್ಬರ ಕಣ್ಣುಗಳೂ ಒಂದಕ್ಕೊಂದು ನೇರವಾಗಿ ಬೆಸೆದುಕೊಂಡವು. ಆ ಕ್ಷಣದಲ್ಲಿ ಜಗತ್ತೇ ನಿಂತುಹೋದ ಅನುಭವ. ಮಾತೇ ಆಡದ ಆ ಮೂಕ ಸೆಳೆತದಲ್ಲಿ, ಇಬ್ಬರ ಮನಸ್ಸಿನ ಆಳದಲ್ಲೂ ಏನೋ ಒಂದು ಹೊಸ ಅಲೆಯೊಂದು ಹುಟ್ಟಿಕೊಂಡಿತು. ಬಡತನದ ಮುಖವಾಡ ಧರಿಸಿದ ಮರಗಪ್ಪನ ಕಣ್ಣುಗಳಲ್ಲಿ ಬೆರಗು ಮೂಡಿದರೆ, ಶ್ರೀಮಂತಿಕೆಯ ಅಹಮಿಕೆಯಿಲ್ಲದ ಗೌರಮ್ಮನ ಕಣ್ಣುಗಳಲ್ಲಿ ಮೃದುವಾದ ಅರಿವು ಮೂಡಿತು.ಗೌರಮ್ಮ ತನ್ನ ಕೈಯಲ್ಲಿದ್ದ ಬಿಂದಿಗೆಯಿಂದ ತಣ್ಣನೆಯ ನೀರನ್ನು ಒಂದು ಲೋಟಕ್ಕೆ ಸುರಿದು ಮರಗಪ್ಪನ ಕಡೆಗೆ ಚಾಚುತ್ತಾ, ತನ್ನ ಮೃದು ಧ್ವನಿಯಲ್ಲಿ ನಸುನಗುತ್ತಾ ನುಡಿದಳು: “ಏನ್ಲಾ ಮರಗಪ್ಪ, ಮೈಯೆಲ್ಲಾ ಸಿಮೆಂಟ್ ದೂಳು ತುಂಬಿಕಂಡೈತಿ, ಗಂಟಲು ಒಣಗಿರಬೇಕಲ್ಲ, ಈ ನೀರು ಕುಡಿದು ಸ್ವಲ್ಪ ತಣ್ಣಗಾಗು.”ಅವಳ ಆ ಸಣ್ಣ ಎರಡು ಮಾತುಗಳು ಮರಗಪ್ಪನ ಒಣಗಿದ ಗಂಟಲಿಗೆ ಮಾತ್ರವಲ್ಲ, ಇಡೀ ಎದೆಗೆ ತಂಪಾದ ಮಳೆಯ ಅಲೆ ಅಪ್ಪಳಿಸಿದಂತಾಯಿತು. ಕೈಲಿದ್ದ ಲೋಟವನ್ನು ನಡುಗುವ ಕೈಗಳಿಂದ ಪಡೆದುಕೊಂಡು ನೀರು ಕುಡಿದ ಮರಗಪ್ಪನಿಗೆ, ಜಗತ್ತಿನ ಸಮಸ್ತ ಸಿಹಿಯೂ ಆ ನೀರಿನಲ್ಲೇ ಇದ್ದಹಾಗೆನಿಸಿತು. ಅಂದಿನಿಂದ ಆ ಸಿಮೆಂಟ್ ದೂಳು ತುಂಬಿದ ಕಲುಷಿತ ವಾತಾವರಣದಲ್ಲೂ ಅವರಿಬ್ಬರ ಮನಸ್ಸಿನಲ್ಲಿ ಪ್ರೀತಿಯ ಅಪುರೂಪದ ಚಿಗುರು ಒಡೆಯಲು ಶುರುವಾಯಿತು.ದಿನಗಳು ಕಳೆದಂತೆ ಆ ಭೇಟಿಗಳು ನಿತ್ಯದ ಅಭ್ಯಾಸವಾಯಿತು. ಫ್ಯಾಕ್ಟರಿಯಿಂದ ದಿನನಿತ್ಯ ಹೊರಬರುವ ಆ ಕೆಟ್ಟ ವಾಸನೆ ಮತ್ತು ಬಿಳಿ ದೂಳು ಇಡೀ ಊರನ್ನೆಲ್ಲಾ ಆವರಿಸುತ್ತಿದ್ದರೂ, ಆ ದೂಳಿನ ಕಣ ಕಣದಲ್ಲೂ ಅವರಿಬ್ಬರ ಪ್ರೀತಿ ಮಾತ್ರ ಮಕರಂದದಂತೆ ಹರಡಿಕೊಳ್ಳುತ್ತಾ ಹೋಯ್ತು. ಸತ್ಯಪ್ಪ ಸಾವುಕಾರನ ಕಣ್ಣಿಗೆ ಮಣ್ಣೆರಚಿ, ಯಾರೂ ಇಲ್ಲದ ವೇಳೆಗಳಲ್ಲಿ ಆ ಬೃಹತ್ ಬಾಳೆ ತೋಟದ ದಟ್ಟ ಮರಗಳ ಮರೆಯಲ್ಲಿ ಇಬ್ಬರೂ ಗುಟ್ಟಾಗಿ ಮಾತುಕತೆ ಆಡಲಾರಂಭಿಸಿದರು. ಗೌರಮ್ಮ ತನ್ನ ಕಾಲೇಜಿನ ಕಥೆಗಳನ್ನು ಹೇಳುತ್ತಿದ್ದರೆ, ಮರಗಪ್ಪ ತಾನು ಅನುಭವಿಸುತ್ತಿದ್ದ ಕಷ್ಟಗಳನ್ನೂ, ಈ ಕಾರ್ಖಾನೆ ಬಂದು ತೋಟ ಹಾಳಾಗುತ್ತಿರುವುದರ ನೋವನ್ನೂ ಹಂಚಿಕೊಳ್ಳುತ್ತಿದ್ದನು. ಪ್ರೀತಿ ಎನ್ನುವುದು ವರ್ಗ, ಜಾತಿ, ಬಡತನ, ಸಿರಿತನದ ಗಡಿಗಳನ್ನು ಮೀರಿ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಇವರೇ ಸಾಕ್ಷಿಯಾದರು.ಆದರೆ, ಈ ಪ್ರೀತಿಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ, ಮುಳ್ಳು ಹಾಸಿದ ಹಾದಿಯಾಗಿತ್ತು. ಕಾರ್ಖಾನೆಯಿಂದ ಸದಾ ಕಾಲ ಹೊರಬರುತ್ತಿದ್ದ ಆ ವಿಷಪೂರಿತ ಅನಿಲ, ಕೆಟ್ಟ ವಾಸನೆ ಮತ್ತು ದೂಳು ಕೇವಲ ಪ್ರಕೃತಿಯ ಹಸಿರನ್ನಷ್ಟೇ ಅಲ್ಲ, ಅಲ್ಲಿನ ಜನರ ಉಸಿರಾಟವನ್ನೂ ನಿಧಾನವಾಗಿ ಹೈರಾಣು ಮಾಡುತ್ತಿತ್ತು. ಆ ಬಿಳಿ ದೂಳು ಮನುಷ್ಯರ ಒಳಹೊಕ್ಕು ಶ್ವಾಸಕೋಶವನ್ನು ಗಾಯಗೊಳಿಸುತ್ತಿತ್ತು, ಉಸಿರುಗಟ್ಟಿಸುತ್ತಿತ್ತು. ಆದರೂ, ಮರಗಪ್ಪ ಮತ್ತು ಗೌರಮ್ಮನ ಪ್ರೀತಿಯ ಉಸಿರು ಮಾತ್ರ ಆ ದೂಳಿನ ಮಧ್ಯೆಯೂ ಯಾವುದಕ್ಕೂ ಜಗ್ಗದೆ ಗಟ್ಟಿಯಾಗಿ ನಿಂತಿತ್ತು….ಅವಳಿ ನಗರಗಳ ಆ ಹವಾಮಾನ ದಿನದಿಂದ ದಿನಕ್ಕೆ ಉಸಿರುಗಟ್ಟುವಂತಾಗುತ್ತಿತ್ತು. ಸತ್ಯಪ್ಪ ಸಾವುಕಾರನ ತೋಟದ ಅಂಚಿನಲ್ಲಿ ನಿಂತು ನೋಡಿದರೆ, ಆಕಾಶದಲ್ಲಿ ಮೋಡ ಕವಿದಿದೆಯೋ ಅಥವಾ ಸಿಮೆಂಟ್ ಕಾರ್ಖಾನೆಯ ಬೂದಿ ಆವರಿಸಿದೆಯೋ ಎಂದು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ಮೇಲ್ನೋಟಕ್ಕೆ ಅದೊಂದು ಹವಾಮಾನ ವೈಪರೀತ್ಯದಂತೆ ಕಂಡರೂ, ವಾಸ್ತವದಲ್ಲಿ ಅದೊಂದು ನಿಧಾನವಾಗಿ ಹರಡುತ್ತಿದ್ದ ಮಾರಕ ವಿಷವಾಗಿತ್ತು. ಆ ಬಿಳಿ ದೂಳು ದಿನವಿಡೀ ಮಳೆಯ ಹನಿಗಳಂತೆ ಇಡೀ ಊರಿನ ಮೇಲೆ ಸುರಿಯುತ್ತಿತ್ತು. ಗಿಡಮರಗಳ ಎಲೆಗಳು ತಮ್ಮ ಅಸಲಿ ಹಸಿರು ಬಣ್ಣವನ್ನು ಕಳೆದುಕೊಂಡು, ಬಿಳಿಚಿಕೊಂಡಿದ್ದವು. ಆದರೆ, ಪ್ರಕೃತಿಯ ಈ ವಿನಾಶದ ನಡುವೆಯೂ, ಮರಗಪ್ಪ ಮತ್ತು ಗೌರಮ್ಮನ ಪ್ರೀತಿ ಮಾತ್ರ ಆ ಬೂದಿಯ ಮಳೆಯಲ್ಲೂ ಗಟ್ಟಿಯಾದ ಬೇರು ಬಿಟ್ಟು ಬೆಳೆಯುತ್ತಿತ್ತು.ದಿನಗಳು ಕಳೆದಂತೆ ಅವರ ಭೇಟಿಗಳ ಕಾತರ ಹೆಚ್ಚಾಯಿತು. ಸಾವುಕಾರ ಸತ್ಯಪ್ಪ ತನ್ನ ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ರಾಜಕೀಯ ತಿಕ್ಕಾಟಗಳಲ್ಲಿ ಸಿಲುಕಿಕೊಂಡು ದಿನದ ಹೆಚ್ಚಿನ ಸಮಯ ಮನೆಯ ಹೊರಗಿರುತ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆ ಜೋಡಿ, ತೋಟದ ಕಡೆಗೆ ಯಾರೂ ಬಾರದ ನಿರ್ಜನ ಮೂಲೆಗಳಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ ಕಾಲ ಕಳೆಯುತ್ತಿತ್ತು. ಮರಗಪ್ಪ ತನ್ನ ಒರಟು ಕೈಗಳಿಂದ ಗೌರಮ್ಮಳ ಕೈಯನ್ನು ಸ್ಪರ್ಶಿಸಿದಾಗ, ಆ ಕೈಗಳಲ್ಲಿನ ಬೆವರು ಮತ್ತು ಸಿಮೆಂಟ್ ದೂಳು ಕೂಡ ಅವರಿಗೆ ಒಂದು ಪವಿತ್ರವಾದ ಗಂಧದಂತೆ ಭಾಸವಾಗುತ್ತಿತ್ತು. ಗೌರಮ್ಮ ಕಾಲೇಜಿನಿಂದ ತಂದ ಪುಸ್ತಕಗಳನ್ನು ಮರಗಪ್ಪನ ಕೈಗೆ ನೀಡಿ, “ಇದನ್ನು ಓದು ಮರಗಪ್ಪ, ಅಕ್ಷರ ಕಲಿತರೆ ಈ ಜಗತ್ತನ್ನು ಬೇರೆ ರೀತಿಯಲ್ಲಿ ನೋಡಬಹುದು” ಎಂದು ಪ್ರೀತಿಯಿಂದ ಹೇಳುತ್ತಿದ್ದಳು. ಅಕ್ಷರದ ಗಂಧವೇ ಇಲ್ಲದ ಮರಗಪ್ಪ, ಗೌರಮ್ಮಳಿಗಾಗಿ ಅಕ್ಷರಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದ. ಅವಳ ಆ ಮಾತುಗಳು ಅವನಿಗೆ ಜಗತ್ತಿನ ಯಾವುದೇ ದೊಡ್ಡ ವಿಶ್ವವಿದ್ಯಾಲಯದ ಪಾಠಕ್ಕಿಂತ ಮಿಗಿಲಾಗಿ ಕಾಣುತ್ತಿದ್ದವು.ಅಂದು, ಕಾರ್ಖಾನೆಯ ಸೈರನ್ ಭೀಕರವಾಗಿ ಮೊಳಗಿತು. ಆ ಶಬ್ದಕ್ಕೆ ಬೆಚ್ಚಿಬಿದ್ದ ಪಕ್ಷಿಗಳು ಗೂಡಿಗೆ ಹಾರಿದವು. ಅದೇ ಸಮಯದಲ್ಲಿ ಬಾಳೆ ತೋಟದ ನಡುವೆ ನಿಂತಿದ್ದ ಆ ಇಬ್ಬರ ಪ್ರೇಮಿಗಳ ಲೋಕದಲ್ಲಿ ದೊಡ್ಡದೊಂದು ಆತಂಕದ ಅಲೆ ಹರಿಯಿತು. ದೂರದಿಂದ ಕೆಲಸಗಾರನೊಬ್ಬ ಕೂಗುವ ಸದ್ದು ಕೇಳಿಸಿತು. “ಸಾವುಕಾರರು ಬರ್ತಿದಾರೆ! ಜಲ್ದಿ ಬನ್ನಿ!” ಎಂಬ ಆ ಮಾತು ಕೇಳುತ್ತಿದ್ದಂತೆ ಗೌರಮ್ಮನ ಮುಖದಲ್ಲಿ ಭಯದ ಛಾಯೆ ಆವರಿಸಿತು. ಅವಳ ತಂದೆ ಸತ್ಯಪ್ಪ ಸಾವುಕಾರನ ಕೋಪದ ಬಗ್ಗೆ ಆ ಊರಿನಲ್ಲಿ ಎಲ್ಲರಿಗೂ ಗೊತ್ತಿತ್ತು. ಬಡವ-ಸಿರಿವಂತರ ನಡುವಿನ ಈ ಅಂತರ ಮುರಿದುಬಿದ್ದರೆ, ಆತ ಏನು ಬೇಕಾದರೂ ಮಾಡಲು ಹಿಂದೆಮುಂದೆ ನೋಡುವುದಿಲ್ಲ ಎಂಬ ಸತ್ಯ ಅವರಿಬ್ಬರಿಗೂ ಚೆನ್ನಾಗಿ ತಿಳಿದಿತ್ತು.ಆದರೂ ಆ ಭಯವೇ ಅವರ ಪ್ರೀತಿಗೆ ಇನ್ನಷ್ಟು ಬಲ ತುಂಬಿತು. ವಿಧಿಯ ಆಟವೇ ವಿಚಿತ್ರವಲ್ಲವೇ? ಎಷ್ಟು ದಿನಗಳವರೆಗೆ ಈ ಕದ್ದುಮುಚ್ಚಿದ ಪ್ರೀತಿ ಮುಂದುವರಿಯಲು ಸಾಧ್ಯ? ಒಂದು ದಿನ ಸತ್ಯಪ್ಪ ಸಾವುಕಾರನ ಕಣ್ಣಿಗೆ ಆ ದೃಶ್ಯ ಬಿತ್ತು. ಅಂದು ಮಧ್ಯಾಹ್ನ ಸಾವುಕಾರ ತೋಟದ ಲೆಕ್ಕಪತ್ರಗಳನ್ನು ನೋಡಲು ಅನಿರೀಕ್ಷಿತವಾಗಿ ಬಂದಿದ್ದನು. ಎಂದೂ ಇಲ್ಲದಂತೆ ಆತ ಕಾರ್ಮಿಕರು ವಿಶ್ರಾಂತಿ ಪಡೆಯುವ ಶೆಡ್‌ಗಳ ಕಡೆಗೆ ಹೆಜ್ಜೆ ಹಾಕಿದನು. ದಟ್ಟವಾದ ಬಾಳೆ ಮರಗಳ ಮರೆಯಲ್ಲಿ ಗೌರಮ್ಮ ಮರಗಪ್ಪನ ಜೊತೆ ಮಾತನಾಡಿ ನಗುತ್ತಿರುವುದನ್ನು ಆತ ದೂರದಿಂದಲೇ ಕಣ್ಣಾರೆ ಕಂಡನು. ಆ ಕ್ಷಣದಲ್ಲಿ ಸಾವುಕಾರನ ಕಣ್ಣುಗಳು ಕೆಂಪಾದವು. ರಕ್ತದ ಕುದಿ ತಲೆಗೆ ಏರಿತು. ತನ್ನ ಮರ್ಯಾದೆ, ತನ್ನ ಆಸ್ತಿ, ತನ್ನ ಇಡೀ ವಂಶದ ಪ್ರತಿಷ್ಠೆ ಆ ಬಡ ಕಾರ್ಮಿಕನ ಕಾಲ್ತುಳಿತಕ್ಕೆ ಸಿಲುಕಿತು ಎಂದು ಭಾವಿಸಿದ ಆತನ ಮತಿ ಭ್ರಮಣೆಯಾಯಿತು.“ಏಯ್ ಮರಗಪ್ಪ!” ಎಂಬ ಆ ಸಿಂಹಘರ್ಜನೆ ಇಡೀ ತೋಟದಲ್ಲೇ ಪ್ರತಿಧ್ವನಿಸಿತು. ಆ ಧ್ವನಿಯನ್ನು ಕೇಳಿದ ತಕ್ಷಣ ಮರಗಪ್ಪ ಮತ್ತು ಗೌರಮ್ಮ ಬೆಚ್ಚಿಬಿದ್ದರು. ಸಾವುಕಾರ ಕೋಪದಿಂದ ಹತ್ತಿರ ಬಂದು, ಮರಗಪ್ಪನ ಕಾಲರ್ ಹಿಡಿದು ಎಳೆದಾಡಿದನು. “ನನ್ನ ಮನೆತನದ ಮರ್ಯಾದೆಯೊಂದಿಗೆ ಆಟವಾಡ್ತಿಯೇನ್ಲಾ ಬಡಪಾಯಿ ಮೂರ್ಖ? ನಿನ್ನ ಯೋಗ್ಯತೆಗೆ ನನ್ನ ಮಗಳನ್ನು

ಕಥೆ:”ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ”ಡಾ.ವೆಂಕಟೇಶ ಪಿ.ಗುಡೆಪ್ಪನವರ Read Post »

ಕಥಾಗುಚ್ಛ

“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..” ಸಣ್ಣಕಥೆ ಸೌಮ್ಯ ಕೆ ವಿ ಅವರಿಂದ

ಕಥಾ ಸಂಗಾತಿ ಸೌಮ್ಯ ಕೆ ವಿ “ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..”       ಜೇನುಪುರದ ತಾವರೆ ಕೆರೆ ಹಿಂದೆಂದೂ  ಸುದ್ದಿಯಾಗಿರಲಿಲ್ಲ. ಮಳೆಗಾಲದಲ್ಲಿ ತುಂಬಿ, ಬೇಸಿಗೆಯಲ್ಲಿ ಕುಗ್ಗಿ, ವರ್ಷದಿಂದ ವರ್ಷಕ್ಕೆ ಅದೇ ತಾವರೆ ಹೂಗಳನ್ನು ಅರಳಿಸುತ್ತಾ, ಊರಿನ ಹಿರಿಯರಂತೆ ಗಂಭೀರವಾಗಿ ಬದುಕಿತ್ತು. ಆ ದಿನ ಮಾತ್ರ ಕೆರೆಯ ದಂಡೆಯಲ್ಲಿ ಜನಸಂದಣಿ. “ಮೊಸಳೆ… ಮೊಸಳೆ ಬಂದಿದೆ!” ಎಂಬ ಕೂಗು ಕೇಳುತ್ತಿದ್ದಂತೆ ಊರಿನ ಜನರೆಲ್ಲ ಓಡಿಬಂದಿದ್ದರು. ನೀರಿನ ಅಂಚಿನಲ್ಲಿ ಒಂದು ಪುಟ್ಟ ಮೊಸಳೆಯ ಮರಿ ಬಿಸಿಲಿಗೆ ಮೈಯೊಡ್ಡಿ ಮಲಗಿತ್ತು. ಯಾರೋ ಮೊಬೈಲ್‌ನಲ್ಲಿ ಚಿತ್ರ ತೆಗೆಯುತ್ತಿದ್ದರು. ಯಾರೋ ಮಕ್ಕಳನ್ನು ಹಿಂದೆ ಸರಿಸುತ್ತಿದ್ದರು. ಇನ್ನೂ ಕೆಲವರು ಅರಣ್ಯ ಇಲಾಖೆಗೆ ಕರೆ ಮಾಡುತ್ತಿದ್ದರು. ಮನೆಯ ನಾಲ್ಕು ಗೋಡೆಗಳ ಮಧ್ಯೆ ದಿನವಿಡೀ ಸಿಲುಕಿ ಬೇಸರಗೊಂಡು ಸಹನಾ  ಎಂದಿನಂತೆ ಸಂಜೆಯ ವಾಕಿಂಗ್‌ಗೆ ಬಂದಿದ್ದಳು. ಜನಸಂದಣಿ ಕಂಡು ಕುತೂಹಲದಿಂದ ಮುಂದೆ ಹೋಗಿ ಮೊಸಳೆಯನ್ನು ನೋಡಿದಳು. ಅವಳೂ ಮೊಬೈಲ್ ತೆಗೆದು ಎರಡು ಚಿತ್ರ, ಒಂದು ಚಿಕ್ಕ ವಿಡಿಯೋ ಮಾಡಿಕೊಂಡಳು.  ಮನೆಗೆ ಬಂದು ಅಡುಗೆ, ಮಕ್ಕಳ ಓದು, ಅತ್ತೆ-ಮಾವಂದಿರ ಔಷಧಿ—ಇವೆಲ್ಲದರ ನಡುವೆ ಆ ವಿಡಿಯೊವನ್ನು ಸ್ನೇಹಿತರಿಗೆ ಕಳುಹಿಸುತ್ತಿದ್ದಾಗ, ಅರಿವಿಲ್ಲದೆ ಹಳೆಯ ಪ್ರಾಥಮಿಕ ಶಾಲಾ ಸಹಪಾಠಿಗಳ ವಾಟ್ಸ್ಆಪ್‌ ಗುಂಪಿಗೂ ಕಳುಹಿಸಿಬಿಟ್ಟಳು. ಆ ಗುಂಪು ವರ್ಷಗಳಿಂದ ಚಾಲ್ತಿಯಿದ್ದರೂ ಅದರಲ್ಲಿ ಜೀವಂತಿಕೆಯೇನಿರಲಿಲ್ಲ.ಬೆಳಿಗ್ಗೆ “ಶುಭೋದಯ” ಹೂವುಗಳು, ದೇವರ ಚಿತ್ರಗಳು, ಹಬ್ಬದ ಶುಭಾಶಯಗಳು… ಅಷ್ಟಕ್ಕೇ ಸೀಮಿತವಾಗಿತ್ತು. ಮೊಸಳೆಯ ವಿಡಿಯೊ ಕಳುಹಿಸಿದ ನಂತರವೂ ಸಹನಾ ಅದನ್ನು ಮರೆತುಬಿಟ್ಟಳು. ಆದರೆ ಮರುದಿನ  ಅವಳ ಮೊಬೈಲ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಒಂದು ಸಂದೇಶ ಬಂತು. “ಹಲೋ… ನಾನು ಕಿಶನ್ ಭಾರದ್ವಾಜ್. ನಿನ್ನ ಪ್ರಾಥಮಿಕ ಶಾಲಾ ಸಹಪಾಠಿ.. ನೆನಪಿದೆಯೇ?” ಆ ಒಂದು ಸಾಲು ಅವಳನ್ನು ಮೂವತ್ತು ವರ್ಷಗಳ  ಹಿಂದಕ್ಕೆ ಕರೆದೊಯ್ದಿತು. ಕಿಶನ್… ಪುಸ್ತಕಗಳೊಳಗೇ ಬದುಕುತ್ತಿದ್ದ ಹುಡುಗ. ತರಗತಿಯಲ್ಲಿ ಶಿಕ್ಷಕರು ಪ್ರಶ್ನೆ ಕೇಳುವ ಮೊದಲೇ ಉತ್ತರ ಹೇಳುತ್ತಿದ್ದ ಹುಡುಗ. ದಪ್ಪ ಕನ್ನಡಕದ ಹಿಂದೆ ಯಾವಾಗಲೂ ಏನನ್ನೋ ಯೋಚಿಸುತ್ತಿದ್ದ ಕಣ್ಣುಗಳು. ಆದರೆ ಯಾರೊಂದಿಗೂ ಹೆಚ್ಚು ಮಾತನಾಡದ ಮೌನ. ಸಹನಾ ಅವನನ್ನು ನೆನಪಿಸಿಕೊಂಡಳು. ಆದರೆ ಅವನ ಜೊತೆ ಮಾತನಾಡಿದ ಒಂದೇ ಒಂದು ಸಂದರ್ಭ ನೆನಪಿಗೆ ಬರಲಿಲ್ಲ. “ಹೇಗಿದ್ದೀರಾ? ಇಷ್ಟು ವರ್ಷಗಳ ನಂತರ ನನ್ನ ನೆನಪಾಯಿತೇ?” ಎಂದು ಅವಳು ಉತ್ತರ ಕಳುಹಿಸಿದಳು. ಕೆಲವೇ ಕ್ಷಣಗಳಲ್ಲಿ ಉತ್ತರ ಬಂತು. “ನಿನ್ನ ಮೊಸಳೆಯ ವಿಡಿಯೋ ವನ್ನು ಗ್ರೂಪ್ ನಲ್ಲಿ ನೋಡಿದೆ. ಆ ಕೆರೆ ನಿಮ್ಮ ಊರಿನಲ್ಲೇ ಇದೆಯಾ?” ಸಹನಾಳಿಗೆ ನಗು ಬಂತು. ಇಷ್ಟು ವರ್ಷಗಳ ನಂತರ ಕೇಳುವ ಪ್ರಶ್ನೆ ಇದೇನಾ? ಆದರೂ ಮಾತು ಅಲ್ಲಿಂದಲೇ ಆರಂಭವಾಯಿತು. ಕಿಶನ್ ಈಗ ಒಡಿಶಾದ ಒಂದು ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿ. ದೇಶ-ವಿದೇಶ ಅಲೆದ ಜೀವನ. ಮದುವೆಯಾಗಿತ್ತು. ಮುರಿದುಹೋಗಿತ್ತು. ಮಕ್ಕಳು ಇರಲಿಲ್ಲ. ಈಗ ಕೆಲಸವೇ ಅವನ ಸಂಗಾತಿ. ಸಹನಾ ತನ್ನ ಬಗ್ಗೆ ಹೆಚ್ಚು ಹೇಳಲಿಲ್ಲ. “ಜೇನುಪುರದಲ್ಲಿ ಇದ್ದೇನೆ. ಇಬ್ಬರು ಮಕ್ಕಳು. ಗಂಡನಿಗೆ ಬಟ್ಟೆ ಅಂಗಡಿ.” ಅಷ್ಟೇ. ಮಾತುಗಳು ಕಡಿಮೆಯಿದ್ದರೂ, ದಿನಕ್ಕೆ ಒಂದೆರಡು ಸಂದೇಶಗಳು ಬರತೊಡಗಿದವು. ಸಹನಾಳ ದಿನಚರಿಯೂ ಬದಲಾಯಿತು. ಬೆಳಿಗ್ಗೆ ಎದ್ದ ಕೂಡಲೇ ಅವಳು ಮೊಬೈಲ್ ನೋಡುತ್ತಿದ್ದಳು. ಅವನು ಏನಾದರೂ ಕಳುಹಿಸಿದ್ದಾನಾ? ಒಂದು ಸಂದೇಶ ಬಂದರೂ ಮನಸ್ಸು ಹಗುರವಾಗುತ್ತಿತ್ತು. ಅವಳಿಗೆ ಗಂಡನ ಬಗ್ಗೆ ದೂರುಗಳಿರಲಿಲ್ಲ. ಅವನು ದುಡಿತದ ಹಿಂದೆ ಬಿದ್ದ ಮನುಷ್ಯ. ಮನೆ, ಮಕ್ಕಳು, ಅತ್ತೆ-ಮಾವ—ಎಲ್ಲರ ಹೊಣೆ.. ಅವರ ಬದುಕು ಯಾವಾಗಲೋ ಲೆಕ್ಕಾಚಾರವಾಗಿಬಿಟ್ಟಿತ್ತು. ಮಾತುಗಳಿದ್ದವು. ಮಮತೆ ಇರಲಿಲ್ಲ. ಕಾಳಜಿಯಿತ್ತು. ಕುತೂಹಲ ಇರಲಿಲ್ಲ. ಸಹನಾ ಯಾವಾಗ ನಕ್ಕಳು, ಯಾವಾಗ ಬೇಸರಪಟ್ಟಳು ಎಂಬುದನ್ನು ಗಮನಿಸುವಷ್ಟು ಬಿಡುವು ಯಾರಿಗೂ ಇರಲಿಲ್ಲ. ಹಳೆಯ ಗೆಳತಿ ಶುಭಾಳೊಂದಿಗೆ ಮೊಬೈಲ್ ನಲ್ಲಿ ಸಂಪರ್ಕಿಸುವುದನ್ನು ಬಿಟ್ಟರೆ ಬದುಕಿನ ಯಾವ ಸಂಗತಿಯಲ್ಲೂ ಉಮೇದಿಯಿರಲಿಲ್ಲ.. ಗಂಡ ನಾಲ್ಕು ಸಲ ಲೆಕ್ಕ ಮಾಡಿ ಕೊಡುವ ಎರಡು ಮೂರು ನೋಟುಗಳಲ್ಲಿ ಆನ್ ಲೈನ್ ಬಟ್ಟೆ ಆರ್ಡರ್ ಮಾಡುವ, ಧರಿಸಿ ಫೋಟೋ ಹೊಡಕೊಂಡು ಆಮೇಲೆ ರಿಟರ್ನ್ ಮಾಡಿ  ಆ ದುಡ್ಡಿನಲ್ಲಿ ಮತ್ತೇನೋ ಆರ್ಡರ್ ಮಾಡುವುದಷ್ಟೇ ಅವಳಿಗೆ ಖುಷಿ ಕೊಡುವ ಸಂಗತಿಯಾಗಿತ್ತು.. ಕಿಶನ್‌ನ  ಪ್ರತಿಯಂದು ಸಂದೇಶ  ಅವಳ ದೈನಂದಿನ ಬದುಕಿನಲ್ಲಿ ಹೊಸ ಅಲೆ ಎಬ್ಬಿಸತೊಡಗಿತ್ತು. ಕೆಲವೊಮ್ಮೆ ಮನುಷ್ಯನಿಗೆ ಪ್ರೀತಿಗಿಂತ ಮೊದಲು ಬೇಕಾಗುವುದು, ಯಾರೋ ತನ್ನನ್ನು ನೆನಪಿಸಿಕೊಂಡಿದ್ದಾರೆ ಎಂಬ ಭಾವನೆ. ಬಹುಶಃ ಸಹನಾ ಅನುಭವಿಸುತ್ತಿದ್ದುದೂ ಅದೇ. ಒಂದು ಸಂಜೆ ಕಿಶನ್ ಸಂದೇಶ ಕಳುಹಿಸಿದ. “ನಾನು ಜೇನುಪುರಕ್ಕೆ ಬರಬಹುದಾ? ಆ ಮೊಸಳೆಯನ್ನು ಕಣ್ಣಾರೆ ನೋಡಬೇಕು.” ಸಹನಾ ಮೊಬೈಲ್ ಪರದೆಯತ್ತ ಬಹಳ ಹೊತ್ತು ನೋಡುತ್ತ ಕುಳಿತಳು. ಗೆಳತಿ ಶುಭಾಗೆ ಹೀಗೆಲ್ಲ ನಡೀತು ಅಂದರೆ  ಮೊಸಳೆ ಒಂದು ನೆವ ಅಷ್ಟೇ.. ಅವನು ಭೇಟಿ ಮಾಡಲು ಬಯಸಿರುವುದು ನಿನ್ನನ್ನು.. ! ಹೊಸ ಕಥೆ ಶುರುವಾಗುತ್ತಿದೆಯೋ ಅಥವಾ ಹಳೆಯ ಕಥೆಯೇ ಮರುಜೀವ ಪಡೆಯುತ್ತಿದೆಯೋ ಎಂದು ಕಾಲೆಳೆದಿದ್ದಳು.. ಕಿಶನ್ ಜೇನುಪುರಕ್ಕೆ ಬರುವ  ದಿನ, ಸಹನಾ ತನ್ನ ವಯಸ್ಸನ್ನು ಮರೆತು ಕನ್ನಡಿಯ ಮುಂದೆಯೇ  ನಿಂತಿದ್ದಳು.ಅದು ಅವಳಿಗೆ ಹೊಸ ಅನುಭವ.ಮದುವೆಯ ಮೊದಲ ವರ್ಷಗಳಲ್ಲಿ ಗಂಡನಿಗಾಗಿ ಸಿಂಗಾರ ಮಾಡಿಕೊಂಡಿದ್ದ ನೆನಪು ಇತ್ತು. ನಂತರ ಮಕ್ಕಳು, ಮನೆ, ಜವಾಬ್ದಾರಿಗಳು—ಇವೆಲ್ಲದರ ನಡುವೆ ತನ್ನ ಮುಖವನ್ನು ನೋಡುವುದಕ್ಕೂ ಸಮಯ ಸಿಕ್ಕಿರಲಿಲ್ಲ.ಆದರೆ ಆ ದಿನ ನಾಲ್ಕು ಸೀರೆ ಬದಲಿಸಿದಳು. ಕೂದಲು ಮತ್ತೆ ಮತ್ತೆ ಸರಿಪಡಿಸಿದಳು. ಕಣ್ಣಿನ ಕೆಳಗಿನ ಆಯಾಸವನ್ನು ಮುಚ್ಚಲು ಸ್ವಲ್ಪ ಮೇಕಪ್ ಹಚ್ಚಿಕೊಂಡಳು.ಯಾರಿಗೂ ಗೊತ್ತಾಗದಂತೆ.ತನ್ನನ್ನೇ ಮೋಸಗೊಳಿಸುತ್ತಾ.. ಅವಳ ಬುದ್ದಿ, ಮನಸ್ಸು, ಹೃದಯ ಯಾವುದೂ ಅವಳ ಹತೋಟಿಯಲ್ಲಿ ಇರಲಿಲ್ಲ.. ಆದರೆ ಕಿಶನ್‌ನ್ನು ನೋಡಿದ  ತಕ್ಷಣ ಅವಳ ಮನಸ್ಸಿನೊಳಗೆ ನಿರೀಕ್ಷೆಯ ಬಲೂನು  ಢಮ್ಮೆಂದು  ಒಡೆದ ಶಬ್ದ ಕೇಳಿಸಿತು!! ಶಾಲೆಯ ದಿನಗಳ ಸಣಕಲು ಹುಡುಗ ಈಗ ಎಲ್ಲಿದ್ದ!ಬೊಜ್ಜು ದೇಹ. ವಿರಳವಾಗಿರುವ ಕೂದಲು. ಆಯಾಸಗೊಂಡ ಕಣ್ಣುಗಳು. ವಯಸ್ಸಿಗಿಂತ ಹೆಚ್ಚು ಮುಪ್ಪು. ವರ್ಷಗಳ ಸಂಶೋಧನೆ, ನಿರಂತರ ಪ್ರಯಾಣ, ಏಕಾಂತ—ಇವೆಲ್ಲ ಸೇರಿ ಅವನ ಮುಖದ ಮೇಲೆ  ಅಳಿಸಲಾರದ ಗುರುತು ಬಿಟ್ಟಿದ್ದವು.ಸಹನಾ ಮನಸ್ಸಿನಲ್ಲೇ ನಕ್ಕಳು.“ಇವನಿಗಿಂತ ನನ್ನ ಗಂಡನೇ ಚೆನ್ನಾಗಿ ಕಾಣುತ್ತಾರೆ.”ಆ ಸಂಜೆ ಶುಭಾಗೆ ಕರೆ ಮಾಡಿದಾಗ ಮೊದಲ ಮಾತೇ ಅದಾಗಿತ್ತು.                         ಶುಭಾ ಹೊಟ್ಟೆ ಹಿಡಿದು ನಕ್ಕಳು.“ಅಯ್ಯೋ, ನೀನು ಹೀರೋನನ್ನೇ ಕಲ್ಪಿಸಿಕೊಂಡಿದ್ದೆಯಾ ಏನು!”ಸಹನಾ ಕೂಡ ನಕ್ಕಳು.ಆದರೆ ಆ ನಗುವಿನೊಳಗೆ ಸ್ವಲ್ಪ ನಿರಾಶೆಯೂ ಇತ್ತು.ಅವಳು ಕಾಯುತ್ತಿದ್ದದ್ದು ಹಳೆಯ ನೆನಪುಗಳ ಮಾತುಗಳನ್ನು. ಆದರೆ ಕಿಶನ್‌ಗೆ ಆಸಕ್ತಿ ಇದ್ದದ್ದು ಕೇವಲ ಮೊಸಳೆಯ ಮೇಲೆ. ಅಯ್ಯೋ ..ಅದರ ಮೇಲೆ ಸಂಶೋಧನೆ ಮಾಡಲೆಂದು ಅಷ್ಟು ದೂರದಿಂದ ಬಂದನೇ?? ಮುಂದಿನ ಎರಡು ದಿನ ಅವನು ತಾವರೆ ಕೆರೆಯ ದಂಡೆಯಲ್ಲೇ ಕಳೆದ. ಬೆಳಿಗ್ಗೆ. ಮಧ್ಯಾಹ್ನ. ಸಂಜೆ. ಕೆರೆಯ ಸುತ್ತ ತಿರುಗುತ್ತಿದ್ದ. ನೀರಿನ ಅಂಚಿನಲ್ಲಿ ಕುಳಿತು ದೂರ ನೋಡುತ್ತಿದ್ದ. ಗ್ರಾಮಸ್ಥರನ್ನು ಪ್ರಶ್ನಿಸುತ್ತಿದ್ದ. ಆದರೆ ಮೊಸಳೆ ಮತ್ತೆ ಕಾಣಿಸಲಿಲ್ಲ. ಹಿಂತಿರುಗುವ ಮುನ್ನ ಒಂದು ಸಂಜೆ ಇಬ್ಬರೂ ಕೆರೆಯ ದಡದಲ್ಲಿ ನಿಂತಿದ್ದರು. ಸೂರ್ಯ ಅಸ್ತಮಿಸುತ್ತಿದ್ದ. ತಾವರೆ ಎಲೆಗಳ ನಡುವೆ ಗಾಳಿ ನಿಧಾನವಾಗಿ ಹರಿಯುತ್ತಿತ್ತು. ಆಗ ಕಿಶನ್   ಮನದಾಳದ ಮಾತುಗಳನ್ನು ಹಂಚಿಕೊಂಡ.. “ನನ್ನ ತಾಯಿ ನಾನು ಹತ್ತನೇ ತರಗತಿಯಲ್ಲಿ ಇದ್ದಾಗ ತೀರಿಕೊಂಡರು.. -ಬ್ರೇನ್ ಕ್ಯಾನ್ಸರ್..  ಕೊನೆಯ ದಿನಗಳಲ್ಲಿ ಅವರು ನನ್ನನ್ನು ಗುರುತಿಸಲೂ ಆಗುತ್ತಿರಲಿಲ್ಲ.” ಅವನು ಸ್ವಲ್ಪ ಹೊತ್ತು ನೀರಿನತ್ತ ನೋಡಿದ. “ಕಳೆದ ಕೆಲವು ವರ್ಷಗಳಿಂದ ಒಂದು ಕನಸು ಪದೇಪದೇ ಬೀಳುತ್ತಿದೆ.” “ಯಾವ ಕನಸು?” ಎಂದು ಸಹನಾ ಕೇಳಿದಳು. “ನನ್ನ ತಾಯಿ  ಮೊಸಳೆಯಾಗಿ ಹುಟ್ಟಿದ್ದಾರೆ ಅಂತ!” ಸಹನಾಳಿಗೆ ಅವನು ತಮಾಷೆ ಮಾಡುತ್ತಿದ್ದಾನೇನೋ ಅನಿಸಿತು. ಆದರೆ ಅವನ ಮುಖದಲ್ಲಿ ನಗುವಿರಲಿಲ್ಲ. ಅವನು ನಿಜವಾಗಿಯೇ ಹೇಳುತ್ತಿದ್ದ. ವಿಜ್ಞಾನಿಯಾಗಿದ್ದೂ? ಸಂಶೋಧಕನಾಗಿದ್ದೂ? ಸಹನಾ ಗೊಂದಲಕ್ಕೊಳಗಾದಳು. “ಅದು ನಿಜವೋ ಸುಳ್ಳೋ ಗೊತ್ತಿಲ್ಲ, ನೀನು ಮೊಸಳೆಯ ವಿಡಿಯೋ ಶೇರ್ ಮಾಡಿದ ಮೇಲೆ ಇವಳೇ ನನ್ನ ಅಮ್ಮ ಎಂದು ಮತ್ತೆ ಕನಸಾಯಿತು!!” ಎಂದು ಕಿಶನ್ ನಿಧಾನವಾಗಿ ಹೇಳಿದ. ಒಬ್ಬ ವಿಜ್ಞಾನಿ.. ಒಬ್ಬ ಬುದ್ಧಿವಂತ ಮನುಷ್ಯ..  ತನ್ನ ತಾಯಿಯನ್ನು ಒಂದು ಮೊಸಳೆಯೊಳಗೆ ಹುಡುಕುತ್ತಿದ್ದಾನೆ!! ಮನುಷ್ಯನ ದುಃಖಕ್ಕೆ ತರ್ಕದ ಭಾಷೆ ಗೊತ್ತಿರದಿರಬಹುದು ಎಂದು ಮೊದಲ ಬಾರಿಗೆ ಅವಳಿಗೆ ಅನಿಸಿತು. ಹಿಂತಿರುಗುವಾಗ ಕಿಶನ್ ಒಂದು ವಿನಂತಿ ಮಾಡಿದ. “ಮೊಸಳೆ ಮತ್ತೆ ಕಂಡರೆ ನನಗೆ ಫೋಟೋ ಕಳುಹಿಸು.” “ಸರಿ.” “ಸಾಧ್ಯವಾದರೆ ಅದರ ಬಗ್ಗೆ ಗಮನವಿಡು.” “ಅಂದರೆ?” “ಆಹಾರ ಹಾಕು. ಯಾರಾದರೂ ತೊಂದರೆ ಕೊಡದಂತೆ ನೋಡಿಕೋ.” ಸಹನಾ ನಕ್ಕಳು. “ನಾನು ಮೊಸಳೆಯ ಕಾವಲುಗಾರ್ತಿಯಾ?” “ನಾನು ಖರ್ಚು ಕಳುಹಿಸುತ್ತೇನೆ.” ಆ ಮಾತು ಕೇಳಿದಾಗ ಸಹನಾ ಏನೂ ಹೇಳಲಿಲ್ಲ. ಮೊದಲ ತಿಂಗಳು ಕಿಶನ್ ಸ್ವಲ್ಪ ಹಣ ಕಳುಹಿಸಿದ. ಸಹನಾ ನಿಜವಾಗಿಯೇ ಕೆಲವು ಮೀನುಗಳನ್ನು ತಂದು ಕೆರೆಯ ಬಳಿ ಹಾಕಿದಳು. ಮುಂದಿನ ತಿಂಗಳು ಮತ್ತೆ ಹಣ ಬಂತು. ಅದಾದ ಮೇಲೆ ಇನ್ನೊಮ್ಮೆ. ಇದರ ಮಧ್ಯೆ ಕಿಶನ್ ಜರ್ಮನಿಗೆ ಹೊರಟ. ದೂರದ ದೇಶದಿಂದಲೂ ಅವನು ಮೊಸಳೆಯ ವಿಚಾರ ಕೇಳುತ್ತಿದ್ದ. “ಇವತ್ತು ಕಂಡಿತಾ?” “ನೀರಿನ ಮಟ್ಟ ಹೇಗಿದೆ?” “ಅದಕ್ಕೆ ಆಹಾರ ಹಾಕಿದ್ದೀಯಾ?” ಸಹನಾ ಉತ್ತರಿಸುತ್ತಿದ್ದಳು. ಆದರೆ ನಿಧಾನವಾಗಿ ಅವಳ ಉತ್ತರಗಳಲ್ಲಿ ಸತ್ಯ ಕಡಿಮೆಯಾಗತೊಡಗಿತು. ಒಂದು ದಿನ ಅವಳು ಬರೆದಳು: “ಮೊಸಳೆಗೆ ಮೀನು ತರಲು ಖರ್ಚು ಹೆಚ್ಚಾಗಿದೆ.” ಕಿಶನ್ ತಕ್ಷಣ ಹಣ ಕಳುಹಿಸಿದ. ಮತ್ತೊಂದು ದಿನ: “ಕೆರೆಯ ನೀರು ಕಲುಷಿತವಾಗಿದೆ. ಸ್ವಚ್ಛಗೊಳಿಸಬೇಕು.” ಮತ್ತೆ ಹಣ ಬಂತು. ಮೊದಲ ಬಾರಿ ಹಣ ಬಂದಾಗ ಅವಳಿಗೆ ಸಂಕೋಚವಾಯಿತು.ಎರಡನೇ ಬಾರಿ ಕಡಿಮೆ ಆಯಿತು.ಮೂರನೇ ಬಾರಿ ಸಂಪೂರ್ಣ ಮಾಯವಾಯಿತು. ಅವಳು ತನ್ನೊಳಗೆ ಒಂದು ಸಮರ್ಥನೆ ಕಂಡುಕೊಂಡಳು. “ನಾನು ಕದಿಯುತ್ತಿಲ್ಲ. ಅವನೇ ಕೊಡುತ್ತಿದ್ದಾನೆ.” ಆದರೆ ಕೆಲವು ಸುಳ್ಳುಗಳು ಮೊದಲಿಗೆ ಇತರರನ್ನು ಮೋಸಗೊಳಿಸುತ್ತವೆ.ನಂತರ ಅವುಗಳನ್ನು ಹೇಳಿದವರನ್ನೇ. ಅದನ್ನು ಸಹನಾ ಇನ್ನೂ ಅರಿತಿರಲಿಲ್ಲ. ಕೆರೆಯ ನೀರು ನಿಶ್ಚಲವಾಗಿತ್ತು. ಮೊಸಳೆ ಅಪರೂಪಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಸಹನಾಳ ಬದುಕಿನಲ್ಲಿ ಹೊಸ ಅಲೆಗಳು ಎದ್ದಿದ್ದವು. ಅವು ಎಲ್ಲಿಗೆ ಕರೆದೊಯ್ಯುತ್ತವೆ ಎಂಬುದು ಅವಳಿಗೂ ಗೊತ್ತಿರಲಿಲ್ಲ.ವರ್ಷಗಳು ಕೆಲವೊಮ್ಮೆ ಮನುಷ್ಯರನ್ನು ದೊಡ್ಡವರನ್ನಾಗಿಸುವುದಿಲ್ಲ.ಅವರೊಳಗಿನ ಆಸೆಗಳನ್ನು ಮೊಸಳೆಯ ಬಾಯಿಗಿಂತ ದೊಡ್ಡದಾಗಿಸುತ್ತವೆ.. ಕಿಶನ್ ಕಳುಹಿಸುತ್ತಿದ್ದ ಹಣದಿಂದ ಸಹನಾ ಮೊದಲು ಒಂದು ಬಂಗಾರದ ಸರ ಕೊಂಡಳು. ನಂತರ ಇನ್ನೊಂದು. ದುಬಾರಿ ಸೀರೆಗಳು ಬಂದವು. ಗಂಡನ ಬಟ್ಟೆ ಅಂಗಡಿಯ ಒಂದು ಮೂಲೆಯಲ್ಲಿ ಮಹಿಳೆಯರ ಸಿದ್ಧ ಉಡುಪು ಮತ್ತು ಕೃತಕ ಆಭರಣಗಳ ಪುಟ್ಟ ಮಳಿಗೆಯನ್ನೂ ತೆರೆದಳು.“ತವರು ಮನೆಯಿಂದ ಸ್ವಲ್ಪ ಆಸ್ತಿ ಬಂದಿದೆ,” ಎಂದು ಗಂಡನಿಗೆ ಹೇಳಿದಳು.ಅವನು ಪ್ರಶ್ನಿಸಲಿಲ್ಲ.ನಂಬಿಕೆ ಕೆಲವೊಮ್ಮೆ ಪ್ರಶ್ನೆಗಳಿಗಿಂತ ದೊಡ್ಡದು. ಮೂರು ವರ್ಷಗಳು ಕಳೆದುಹೋದವು.ಒಂದು ಬೆಳಿಗ್ಗೆ ಕಿಶನ್‌ನ ಸಂದೇಶ ಬಂತು.“ನನ್ನ ಜರ್ಮನಿ ನಿಯೋಜನೆ ಮುಗಿದಿದೆ.  ಒಂದೆರಡು  ವಾರದಲ್ಲಿ  ಜೇನುಪುರಕ್ಕೆ ಬರುತ್ತಿದ್ದೇನೆ.”ಆ ಒಂದು ಸಾಲು ಓದಿದ ಕ್ಷಣದಿಂದ ಸಹನಾಳ ಮನಸ್ಸು ತನ್ನದೇ ಧ್ವನಿಯನ್ನು ಕಳೆದುಕೊಂಡಿತು. ರಾತ್ರಿ ಮಲಗಿದರೆ ನಿದ್ದೆ ಬರುತ್ತಿರಲಿಲ್ಲ.ಬಂದರೂ ಮಧ್ಯರಾತ್ರಿಯಲ್ಲಿ ಬೆಚ್ಚಿ ಎಚ್ಚರವಾಗುತ್ತಿತ್ತು.ಕನಸಿನಲ್ಲಿ ಕೆರೆಯ ನೀರು ಕಾಣಿಸುತ್ತಿತ್ತು.ಆ ನೀರಿನಲ್ಲಿ ಮೊಸಳೆಯಲ್ಲ…ತನ್ನ ಮುಖವೇ ತೇಲುತ್ತಿತ್ತು.ಕುತ್ತಿಗೆಯ ತುಂಬ ಬಂಗಾರದ ಸರಗಳಿದ್ದರೂ, ಕಣ್ಣುಗಳಲ್ಲಿ ಬೆಳಕು ಇರಲಿಲ್ಲ. ರಾತ್ರಿಯಿಡೀ ಕೆಟ್ಟ ಕನಸುಗಳು.. ಸರಗಳೇ ನೇಣಿನ ಕುಣಿಕೆಯಾದಂತೆ.. ತನ್ನ ಮೈಯಿಡೀ ಮೊಸಳೆಯ ಚರ್ಮದಂತಾಗಿ ಬಿಟ್ಟಂತೆ.. ಯಾವ ಸೀರೆ ಉಡಲು ಹೋದರೂ ಮೊಸಳೆಯ ವಾಸನೆ ಬಂದಂತೆ..

“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..” ಸಣ್ಣಕಥೆ ಸೌಮ್ಯ ಕೆ ವಿ ಅವರಿಂದ Read Post »

ಕಥಾಗುಚ್ಛ

“ಏಕ ಪೋಷಕತ್ವ” ವಿಶೇಷ ಲೇಖನ, ಡಾ.ರೇಖಾ ಉದಯ್

ವಿಶೇಷ ಸಂಗಾತಿ ಡಾ.ರೇಖಾ ಉದಯ್ “ಏಕ ಪೋಷಕತ್ವ” ನದಿಗಳ ಕೊನೆಗೆ ಸೇರುವುದು ಸಮುದ್ರವನ್ನೇ ಎಂದು ಹೇಳುವುದು ಸಹಜವಾದ ಮಾತು. ಆದರೆ ಕೆಲವು ನದಿಗಳು ಸಮುದ್ರ ಸೇರದೆ ಕೆರೆ-ತೊರೆಗಳಾಗಿ ವಸುಂಧರೆಯ ಚೆಲುವನ್ನು ಹೆಚ್ಚಿಸುತ್ತವೆ. ಈ ಮಾತನ್ನು ಏಕೆ ಹೇಳುತ್ತಿರುವೆ ಎಂದರೆ ಸಿಂಗಲ್ ಪೇರೆಂಟ್ಸ ಅಥವಾ ಏಕ ಪೋಷಕತ್ವ ಇದು ಇತ್ತೀಚಿನ  ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳುತ್ತಿರುವ ಮತ್ತು ನೋಡುತ್ತಿರುವ ವಿಷಯವಾಗಿದೆ. ನಾನು ತುಂಬಾ ಹತ್ತಿರದಲ್ಲಿ ನೋಡಿರುವುದಕ್ಕೆ ಈ ವಿಚಾರ ಬರೆಯಲು ತೆಗೆದುಕೊಂಡೆ ಎಲ್ಲೋ ಕೇಳಿದಾಗ, ಮತ್ತೆಲ್ಲೂ ಓದಿದಾಗ, ಯಾರನ್ನೋ ನೋಡಿದಾಗ ಮನಸ್ಸಿಗೆ ಅಷ್ಟು ನಾಟದೆ ಇರಬಹುದು. ಆದರೆ ನಮ್ಮ ಆತ್ಮೀಯರು ಇಂತಹ ಪರಿಸ್ಥಿತಿಗಳನ್ನ ಎದುರಿಸಿದಾಗ ಸಹಜವಾಗಿ ನೋವಾಗುತ್ತದೆ. ಮಾನಸಿಕ ಯಾತನೆ ಉಂಟಾಗುತ್ತದೆ.ಜೊತೆಗಾರ ಅಥವಾ ಜೊತೆಗಾತಿ ಇದ್ದು ಅನೇಕ ಸಮಸ್ಯೆಗಳನ್ನ ಇಂದು ಎದುರಿಸುತ್ತಿರುವಾಗ ಒಂಟಿಯಾಗಿ ಎಲ್ಲವನ್ನೂ ಎದುರಿಸುವುದು ಇದೆಯಲ್ಲ ಅದು ಹೇಳಲಸಾಧ್ಯ ಹಿಂಸೆ, ಅದರಲ್ಲೂ ಒಬ್ಬ ಹೆಣ್ಣುಮಗಳು ಸಿಂಗಲ್ ಪೇರೆಂಟ್ಸ್  ಆದಾಗ ತಂದೆ ಪ್ರೀತಿ, ತಾಯಿ ಪ್ರೀತಿ ಒಬ್ಬಳೇ ನೀಡುತ್ತಾ ಅನೇಕ ಸವಾಲುಗಳನ್ನು ಎದುರಿಸುತ್ತಾ ಹೋರಾಡಬೇಕು. ವಿಚ್ಛೇದನ, ಸಂಗಾತಿ ಸಾವು, ಅಥವಾ ದತ್ತು ತೆಗೆದುಕೊಂಡು ಸಾಕುವುದು,ಇದರ ಹಂತವಾಗಿರುತ್ತದೆ        “ಯಾವ ಹಾದಿಯಲ್ಲಾದರು ನಡೆ, ನಿನ್ನ ಆತ್ಮವಿಶ್ವಾಸವೇ ನಿನಗೆ ದಾರಿ ದೀಪ” ಎಂಬ ಕುವೆಂಪುರವರ ಮಾತು ಸ್ಪೂರ್ತಿ ನೀಡುತ್ತದೆ. ಜೀವನ ಪಥದಲ್ಲಿ ಒಂಟಿಯಾಗಿ ಸಾಗುವಾಗ ಮಗುವಿನ ಸುಖ ಸಂತೋಷ, ವಿದ್ಯಾಭ್ಯಾಸ ಆರೋಗ್ಯ ಹೀಗೆ ಹತ್ತು ಹಲವಾರು ಜವಾಬ್ದಾರಿ ಹೊರುವ ದೀಪ ಸ್ತಂಭವಿದ್ದಂತೆ, ಬಿರುಗಾಳಿಯೇ ಬರಲಿ ,ಸುನಾಮಿ ಅಲೆಗಳೇ ಅಪ್ಪಳಿಸಲಿ  ಮಗುವಿನ ಭವಿಷ್ಯಕ್ಕಾಗಿ ಎಲ್ಲವನ್ನು ಎದುರಿಸುತ್ತಲೆ ಸಾಗುತ್ತಾಳೆ.ಒಮ್ಮೆ ತಮ್ಮ ಸಂಬಂಧಗಳಿಂದ ಹೊರ ಬಿದ್ದು ಸಿಂಗಲ್ ಪೇರೆಂಟ್ ಎಂಬ ಹಣೆ ಪಟ್ಟಿ ಬಿದ್ದ ಮೇಲೆ ಅವಳ ಅಸ್ತಿತ್ವವನ್ನೇ ಅಲ್ಲಾಡಿಸಿ ಅವಳ ಜಂಘಾಬಲ ಉಡುಗಿಸಿ ಬಿಡುತ್ತಾರೆ ಸುತ್ತಮುತ್ತಲಿನವರು. ಗಂಡ ಇಲ್ಲದೆ ಇರುವ ಮಹಿಳೆಯರು  ಮೇಲೆ ಒಂದು ತೆರನಾದ ಅನುಕಂಪ, ಅಯ್ಯೋ ಪಾಪ ಹೀಗಾಗಬಾರದಿತ್ತು ,ಮಗು ಚಿಕ್ಕದು ಎಂಬ ಕಾರಣಗಳಿಂದ, ಒಂದು ಕಡೆಯಿಂದ ಮಾನಸಿಕ ಬೆಂಬಲ ಅಥವಾ ಆರ್ಥಿಕ ಬೆಂಬಲ ಕೂಡ ದೊರೆಯಬಹುದು, ಅವಳ  ಕಷ್ಟಕ್ಕೆ ಎಲ್ಲರೂ ಸಾತ್ ಕೊಡಬಹುದು.  ಆದರೆ ಎಲ್ಲರಿಗೂ ಹೀಗೆ ಆಗಬೇಕು ಎಂಬುವ ಹಾಗಿಲ್ಲ, ಅವಳಿಗೆ ತವರು ಮನೆಯಲ್ಲಿ, ಗಂಡನ ಮನೆಯಲ್ಲಿ ಸ್ಥಾನ ಸಿಗದೇ ಒಂಟಿಯಾಗಿ ಸಮಾಜದ ಕೊಂಕು ನುಡಿಗಳನ್ನ ,ಸಮಸ್ಯೆಗಳನ್ನ ಎದುರಿಸುತ್ತಾ ಮಗುವನ್ನು ಬೆಳೆಸಿ ಒಳ್ಳೆಯ ಶಿಕ್ಷಣ ,ಆರೋಗ್ಯ ಕೊಟ್ಟು ಪಾಲನೆ ಪೋಷಣೆ ಮಾಡುವುದು ಒಂದು ದೊಡ್ಡ ಸವಾಲು ಎಂಬುದು ಸುಳ್ಳಲ್ಲ.ವಿಚ್ಛೇದಿತ ಮಹಿಳೆಗೆ ಇಂತಹ ಸಂಪೂರ್ಣ ಬೆಂಬಲ ಸಿಗಲಾರದು ಏಕೆಂದರೆ ಡಿವೋಸ೯ ತಗೋತಾ ಇರೋದೇ ಮೊದಲು ಕುಟುಂಬದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ, ಹೊಂದಿಕೊಂಡು ಹೋಗುವುದರ ಬಗ್ಗೆ ಸಾಕಷ್ಟು ತಿಳಿ ಹೇಳಿರುತ್ತಾರೆ. ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ. ಆದರೆ ಅವಳ ದಿಟ್ಟ ನಿರ್ಧಾರ ಕೆಲವರಲ್ಲಿ ಅಸಮಾಧಾನ ಉಂಟು ಮಾಡಿರುತ್ತದೆ. ಇಂತಹ ಸಂದರ್ಭದಲ್ಲಿ ಅವಳು ಏಕಾಂಗಿ ಹೋರಾಟ ನಡೆಸಲೇ ಬೇಕಾಗುತ್ತದೆ ತನ್ನ ದುಡಿಮೆಯೊಂದಿಗೆ ಮಗುವಿನ ಆಗುಹೋಗುಗಳ ಜವಾಬ್ದಾರಿ ಹೆಗಲೇರುತ್ತದೆ. ಎಲ್ಲಾ ಸಮಸ್ಯೆಗಳನ್ನ ಒಂಟಿಯಾಗಿ ನಿಭಾಯಿಸುತ್ತಾ ಆರ್ಥಿಕವಾಗಿ, ಮಾನಸಿಕವಾಗಿ ,ಸಾಮಾಜಿಕವಾಗಿ, ಸದೃಡರಾಗಬೇಕಾಗುತ್ತದೆ. ಮಗು ದೊಡ್ಡದಾಗುತ್ತಾ ಬಂದಂತೆ ಮಗುವಿನ ಬದುಕಿನ ಮಜಲುಗಳನ್ನು ತಿಳಿಸಬೇಕಾಗುತ್ತದೆ. ಎಲ್ಲ ರೀತಿಯ ಪ್ರೀತಿಯ ಹೂಮಳೆ ಸುರಿಸಬೇಕಾಗುತ್ತದೆ, ಕೆಲವೊಮ್ಮೆ ಇದೆಂತಹ ಬದುಕು ಅನ್ನಿಸದಿರದು. ಮಗುವಿಗಾಗಲಿ, ತನಗೆ ಆಗಲಿ ಆರೋಗ್ಯ ಸಮಸ್ಯೆಗಳು ಉಂಟಾದಾಗ ಆಸ್ಪತ್ರೆ, ಮನೆ, ಮಗು ,ಹಣ ಇವೆಲ್ಲವು ಪೇಡಂಭೂತವಾಗಿ ಕಾಡುತ್ತದೆ .ಇತ್ತೀಚೆಗೆ ಸಿಂಗಲ್ ಪೇರೆಂಟ್ ಎಂಬುದು ಟ್ರೆಂಡ್ ಆಗಿದೆ, ಇದೆಲ್ಲ ಕಾಮನ್ ಎಂಬ ಮಾತು ಎಲ್ಲರ ಬಾಯಲ್ಲೂ ಸಹಜವಾಗಿ ಬರತೊಡಗಿದೆ. ಹಿರಿಯರ ವಿರೋಧ ಸದಾ ಇದಕ್ಕೆ ಇದ್ದೇ ಇರುತ್ತದೆ ,ಅವರ ಮನಸ್ಸು ಇಂಥವುಗಳಿಗೆ ಒಪ್ಪದು, ಆದರೆ ಜಮಾನ ಬದಲಾಗಿದೆ. ಭಾವನೆಗಳ ನೆಲಗಟ್ಟಿನ ಮೇಲೆ ಬದುಕು ಸಾಗುತ್ತಿಲ್ಲ. ನಾನು ಎಂಬ ಅಹಂ ತಾಂಡವವಾಡುತ್ತಿದೆ.ಅಡ್ಜೇಸ್ಟ ಆಗಬೇಕಾ?,ನಾನೇ ಆಗಬೇಕಾ? ಯಾಕೆ  ಆಗಬೇಕು, ನಾನು ದುಡಿತಾ ಇಲ್ವಾ,ಎಂಬ ಪ್ರಶ್ನೆಗಳ ಸುರಿಮಳೆ, ಇಬ್ಬರಲ್ಲೂ ಅಹಂ ಹೆಚ್ಚಾದಂತೆ ಸಂಬಂಧಗಳ ನಡುವೆ ಬಿರುಕು ಸರ್ವೇಸಾಮಾನ್ಯ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವರಿಬ್ಬರ ಜಗಳ ಮನಸ್ತಾಪಗಳಿಂದ ಮಗು ಖಿನ್ನತೆಗೆ ಒಳಗಾಗಬಹುದು. ಅಥವಾ ದುರ್ಮಾರ್ಗ, ದುರಭ್ಯಾಸಗಳಗತ್ತ ವಾಲಬಹುದು.ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ಸಮಾಧಾನದಿಂದ ಕುಳಿತು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ!? ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು ಒಂದು ವೇಳೆ ಇದು ಅಸಾಧ್ಯ ಎಂದಾಗ ಅನಿವಾರ್ಯ. ಆದರೆ ಮಕ್ಕಳ ಬೆಳವಣಿಗೆಯಲ್ಲಿ ಇಬ್ಬರ ಪಾತ್ರ ಎಷ್ಟು ಮುಖ್ಯವಾದದ್ದು .ಒಂಟಿಯಾದಾಗ ಆ ಜವಾಬ್ದಾರಿ ದ್ವಿಗುಣವಾಗುತ್ತೆ ಮಗುವಿನ ಮನಸ್ಥಿತಿಗೆ ಸ್ಪಂದಿಸುತ್ತಾ ಅವರಲ್ಲಿ ಒಂದು ಸಕಾರಾತ್ಮಕ ಸದೃಢ ಭಾವನೆ ಬೆಳೆಸಿ ಒಂಟಿಯಾಗಿದ್ದರು ಎಷ್ಟು ಚೆನ್ನಾಗಿ ಮಗುವನ್ನು ಬೆಳೆಸಿದ್ದಾರೆ, ತಮ್ಮ ಜೀವನ ರೂಪಿಸಿಕೊಂಡಿದ್ದಾರೆ ಎಂದು ಬಾಯಿ ಮೇಲೆ ಬೆರಳು ಇಡುವಂತಾಗಬೇಕು, ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಬೇಕು ಅಷ್ಟೇ…. ಡಾ.ರೇಖಾ ಉದಯ 

“ಏಕ ಪೋಷಕತ್ವ” ವಿಶೇಷ ಲೇಖನ, ಡಾ.ರೇಖಾ ಉದಯ್ Read Post »

ಕಥಾಗುಚ್ಛ

ರೋಹಿಣಿ ಜೆ ಅವರ ಸಣ್ಣ ಕಥೆ “ಹಾರಾಟ ಮುಗಿದ ಹಕ್ಕಿ!”

ಕಥಾ ಸಂಗಾತಿ ರೋಹಿಣಿ ಜೆ “ಹಾರಾಟ ಮುಗಿದ ಹಕ್ಕಿ!” ಒಂದೂರು.. ಊರ ಬಾಗಿಲಲೊಂದು ಅರಳಿ ಮರ. ಅದರ ಮೇಲೆ ಒಂದು ಹಕ್ಕಿ ಗೂಡು. ತಂದೆ ತಾಯಿ ಎರಡು ಮರಿಗಳು ಅದರಲ್ಲಿ ವಾಸವಾಗಿದ್ದವು. ಹಗಲಲ್ಲಿ ಹಾರಾಡುತ್ತ ಇರುಳಲ್ಲಿ ಆಕಾಶ ನೋಡುತ್ತ ಸಂಭ್ರಮಿಸುತ್ತ ಎಲ್ಲ ಚಂದಿತ್ತು.  ಕಿರಿಯ ಮರಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಬಹಳ ಮುದ್ದಿನಿಂದ ನೋಡಿಕೊಳ್ಳುತ್ತಿದ್ದವು. ತನ್ನ ಗೂಡಿನಲ್ಲಿ ಇರುವವರೆಗೂ ಆ ಹಕ್ಕಿಮರಿಗೆ ಹಸಿವು ಎಂದರೆ ಏನು ಅಂತಾನೆ ಗೊತ್ತಾಗುತ್ತಿರಲಿಲ್ಲ, ಆ ಮರದಿಂದ ಈ ಮರ ಈ ಮರದಿಂದ ಆ ಕೊಂಬೆ ಹಾರುತ್ತಾ ನಲಿದಾಡುತ್ತಾ ಎಲ್ಲದಕ್ಕೂ ಹಠ ಮಾಡುತ್ತಾ ಕಾಲ ಕಳೆಯುತ್ತಾ ಇತ್ತು. ಮಳೆ ಗಾಳಿ ಜೋರಾಯ್ತು ಅಂದ್ರೆ ಗೂಡು ಸೋರುತ್ತಾ ಇತ್ತು. ಬೀಳುವ ಭಯ ಕಾಡ್ತಾ ಇತ್ತು. ಆದರೆ ಅಪ್ಪ ಅಮ್ಮ ರೆಕ್ಕೆಯಲ್ಲಿ ಅಪ್ಪಿ ಆ ಭಯ ಕಾಡದ ಹಾಗೆ ನೋಡ್ಕೊಳ್ತಿದ್ವು, ಊಟ ಮಾಡಲಿಕ್ಕೆ ತುಂಬಾ ಹಠ ಮಾಡುತ್ತಿತ್ತು. “ತಿನ್ನು, ತಿನ್ನು” ಅಂತ ಅದರ ಹಿಂದೆನೇ ಬೀಳ್ತಾ ಇದ್ರು. ಹಕ್ಕಿಮರಿ ಬೆಳೆಯುತ್ತಾ ಹೋಯಿತು ಸ್ವಲ್ಪ ದೊಡ್ಡದಾಗುತ್ತಾ ಅದರ ಆಸೆಗಳು ಕೂಡ ದೊಡ್ಡದಾಗಲಿಕ್ಕೆ ಶುರುವಾಯಿತು. ತನ್ನ ಗೂಡು ಚಿಕ್ಕದು ಅನ್ನಿಸಲಿಕ್ಕೆ ಶುರುವಾಯಿತು.  ಕೆಲವು ಪಕ್ಷಿಗಳ ಗೂಡು ಬಹಳ ಗಟ್ಟಿಮುಟ್ಟಾಗಿತ್ತು ಇದರ ಅಪ್ಪ ಅಮ್ಮ ತನ್ನ ಶಕ್ತಿ ಮೀರಿ ಈಗಿರುವ ಗೂಡನ್ನು ಕಟ್ಟಿದ್ದು ಇನ್ನೂ ಅದಕ್ಕಿಂತ ಹೆಚ್ಚು ಅವುಗಳಿಂದ ನಿರೀಕ್ಷೆ ಮಾಡಲಿಕ್ಕೆ ಆಗ್ತರ‍್ಲಿಲ್ಲ. ಈ ಹಕ್ಕಿಗೆ ಮಳೆಗಾಲದಲ್ಲಿ ಸೋರದ, ಬಿರುಗಾಳಿಗೆ ಬೀಳದ ಗಟ್ಟಿ ಮನೆ ಒಂದನ್ನು ಕಟ್ಟಬೇಕೆಂಬ ಆಸೆ ಮೂಡತೊಡಗಿತು. ಅಷ್ಟೇ ಅಲ್ಲ ತನ್ನನ್ನು ಮುದ್ದಿನಿಂದ ಸಾಕಿದ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಕೊನರತೊಡಗಿತು.ಹೀಗಿರುವಾಗ ಅಪ್ಪ ಅಮ್ಮ ಬೇಡುವ ಅಗೋಚರವಾದ ಆ ʼದೇವʼನನ್ನು ತಾನೂ ಬೇಡಿತು. ಅವನು ತಥಾಸ್ತು ಅಂದನೋ ಇಲ್ಲ ಅದರ ವಿಧಿಯೇ ಅಂತಿತ್ತೋ ಯಾರಿಗೆ ಗೊತ್ತು! ಯಾವುದೋ ಹಕ್ಕಿಗಳ ಮೂಲಕ ಇದಕ್ಕೆ ಹಣ್ಣಿನ ಸಾಮ್ರಾಜ್ಯದ ಪರಿಚಯ ಆಯ್ತು. ಅಲ್ಲಿ ಹೋದರೆ ಊಟ, ಸಂಪತ್ತು ಯಾವುದಕ್ಕೂ ಕೊರತೆ ಇಲ್ಲ ಎನಿಸಿತು. ತಾನು ಶ್ರೀಮಂತರಾಗಿ ತನ್ನವರನ್ನು ಶ್ರೀಮಂತವಾಗಿಸುವ ಬಯಕೆ ಚಿಗುರೊಡೆಯಿತು. ಹಿಂದೆ ಮುಂದೆ ಯೋಚನೆ ಮಾಡದೆ ಆದದ್ದಾಗಲಿ ಏನಾದರೂ ಸಾಧಿಸಲೇಬೇಕೆಂದು ತನ್ನ ಸೋದರಹಕ್ಕಿಯನ್ನು ಅಪ್ಪ ಅಮ್ಮರ ಜೊತೆ ಇರಲು ಹೇಳಿ ಮರಿ ಹಕ್ಕಿ ಹೊರಟು ನಿಂತಿತು. ತಂದೆ ಹಕ್ಕಿ ಇದನ್ನು ಕಂಡು ತುಂಬಾ ದುಃಖಿಸಿತು “ಬೇಡ ಮಗು ಇಲ್ಲೇ ಇರೋಣ ಇದ್ದಿದ್ರಲ್ಲಿ ಖುಷಿಯಾಗಿ, ದೂರದ ಕಾಣದ ಊರಿನ ಸಹವಾಸ ಯಾಕೆ?”.  ಹಕ್ಕಿಮರಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸಾಲದ್ದಕ್ಕೆ ಅದರ ತಾಯಿ ಹಕ್ಕಿ ತನ್ನ ಮರಿಗೆ ಬೆಂಬಲ ಕೊಟ್ಟಿತು. “ಹೋಗಿ ಬಾ ಕಂದಾ, ಒಳ್ಳೆಯದಾಗಲಿ ನಿನಗೆ” ಎಂದು. ಇತ್ತ ತನ್ನ ಗಂಡನನ್ನು ಸಂತೈಸಿತು “ಇರಲಿ ಬಿಡು ಅದರಿಂದಲಾದರೂ ನೆಮ್ಮದಿ ಕಾಣೋಣ, ನಾವೂ ಎಲ್ಲರಂತೆ ಬದುಕಬಹುದು”. ಒಂದು ದಿನ ಅದು ಹೊರಡುವ ಸಮಯ ಬಂದೇ ಬಿಟ್ಟಿತು. ಪ್ರೀತಿ ಭಯ ಆತಂಕಗಳಿಂದ ಕಣ್ತುಂಬಿಕೊಂಡು ಬೀಳ್ಕೊಟ್ಟವು.ಹಾರಿತು, ಹಾರಿತು ದೂರದ ತೀರಕೆ ಹಣ್ಣಿನ ರಾಜ್ಯವನ್ನು ಹುಡುಕಿಕೊಂಡು ಬಹಳ ಕ್ರಮಿಸಿದ ಬಳಿಕ ಕೊನೆಗೊಂದು ದಿನ ಸಿಕ್ಕೆ ಬಿಟ್ಟಿತು ಹಣ್ಣಿನ ಸಾಮ್ರಾಜ್ಯ. ಹೌದು ಇಲ್ಲಿ ಎಲ್ಲವೂ ಚಂದ ಎಷ್ಟೊಂದು ಹಣ್ಣುಗಳು! ಬಣ್ಣ ಬಣ್ಣದ ಹಣ್ಣುಗಳು, ಹೂವುಗಳು ಬಹುಪಾಲು ಹೆಸರೇ ಗೊತ್ತಿಲ್ಲ! ಎಲ್ಲ ಹೊಸಬಗೆಯವು. ಆ ಹಕ್ಕಿ “ಸುಂದರ ಹೂ, ಹಣ್ಣಿನ ತೋಟ ಸ್ವರ್ಗ ಅಂದ್ರೆ ಇದೇ ಏನು! ಮನುಷ್ಯರು ಮಾತಾಡ್ತಾರಲ್ಲ ಅದು” ಎಂದುಕೊಂಡಿತು ಮನದಲಿ.  ಹೊಸದರಲ್ಲಿ ಎಲ್ಲವೂ ಸೊಗಸೆನಿಸಿತು. ಇದು ಗರಿಬಿಚ್ಚಿ ರ‍್ತಿಸಿತು ಮೇಲಿಂದ ಕೆಳಗೆ ಜಿಗಿದು, ಟಪಟಪ ರೆಕ್ಕೆಬಡಿದು ಅದರ ಖುಷಿ ಸಂಭ್ರಮಕ್ಕೆ ಕೊನೆ ಇರಲಿಲ್ಲ “ಅಂತು ತಾನು ಸಾಧಿಸಿಬಿಟ್ಟೆ ಇನ್ನು ನನ್ನ ಮನೆಯ ಕಷ್ಟಗಳೆಲ್ಲ ಪರಿಹಾರವಾದಂತೆಯೇ ನನ್ನ ಪಾಲಿಗೆ ಬರಿ ಸುಖವೇ ಇನ್ನು” ಎಂದುಕೊಂಡಿತು.ಹೊಸ ಜಾಗ, ಹೊಸ ಗಿಡ ಮರಗಳು, ಹೊಸ ಮುಖಗಳು ಎಲ್ಲವೂ ಹೊಸದು. ಅಲ್ಲಿದ್ದ ಹಕ್ಕಿಗಳು ಪ್ರೀತಿಯಿಂದ ಸ್ವಾಗತಿಸಿದವು. ಇದು ಸುಮ್ಮನೆ ಪಿಳಿ ಪಿಳಿ ಮುಖ ನೋಡಿತು. ಯಾರು ಯಾರೋ ಮಾತಾಡಿಸಿದವು ಇದಕೆ ಭಾಷೆ ತಿಳಿಯುತ್ತಿಲ್ಲ. ನಕ್ಕು ಸುಮ್ಮನಾಯಿತು. ಹಣ್ಣುಗಳಂತೂ ಕಣ್ಣು ಕೋರೈಸುವಂತೆ ದಪ್ಪ ದಪ್ಪದಾಗಿ ಹಲವು ಬಣ್ಣಗಳಲ್ಲಿ ಮಾಗಿದ್ದವು. ಕೆಲವೊಂದಕ್ಕೆ ನೇರವಾಗಿ ಬಾಯಿಟ್ಟಿತು. ಇಲ್ಲ ಯಾಕೋ ತಿನ್ನಲ್ಲಾಗುತ್ತಿಲ್ಲ.  ಹಣ್ಣೇನೋ ಮಾಗಿದೆ  ಘಮಗುಡುತ್ತಿದೆ ಇದರ ನಾಲಿಗೆ ಮಾತ್ರ ರುಚಿ ಎನಿಸದು. ಈಗ ಅದಕ್ಕೆ ಹಸಿವಿನ ಬೆಲೆ, ಊಟದ ಬೆಲೆ ತಿಳಿಯುತ್ತಾ ಹೋಯಿತು. ಅಪ್ಪ ಅಮ್ಮನ ನೆನಪು ಕಾಡಕೊಡಗಿತು. ನಿಧಾನವಾಗಿ ತಿನ್ನುತ್ತಾ ತಿನ್ನುತ್ತಾ ಅಭ್ಯಾಸ ಮಾಡಿಕೊಂಡಿತು. ಕೊನೆಗೆ ಅದರಲ್ಲೇ ರುಚಿ ಕಂಡುಕೊಂಡಿತು ತನ್ನೂರಿಗೂ ಈ ಹಣ್ಣುಗಳನ್ನು ಒಯ್ದು ತನ್ನವರಿಗೂ ಅಭ್ಯಾಸ ಮಾಡಿಸಬೇಕೆಂದುಕೊಂಡಿತು.  ಒಂದು ಹಣ್ಣು ಒಯ್ದರೆ ಸಾಕು ವರ‍್ಷಕ್ಕಾಗುವಷ್ಟು ಊಟ. ಅಷ್ಟೇನೂ ಭಾರವೂ ಇಲ್ಲ ಹಣ್ಣು.  ಪ್ರತಿ ಬಾರಿ ಎರಡೆರಡು ಹೊಯ್ದು ಒಂದು ಊಟಕ್ಕೆ, ಒಂದು ಮಾರಾಟಕ್ಕೆ ಅದರಿಂದ ಬಂದ  ಲಾಭದಿಂದ ಗಟ್ಟಿ ಮನೆಯನ್ನು ಕಟ್ಟಿಕೊಳ್ಳಬೇಕೆಂದು ಆಸೆಪಟ್ಟಿತು.  ಎರಡು ಹಣ್ಣು ಎತ್ತಿಕೊಂಡು ಹಾರಿಹೋಯಿತು. ಕುಟುಂಬದಲ್ಲಿ ಎಲ್ಲ ಸಂಭ್ರಮ ಪಟ್ಟವು. ಹಕ್ಕಿ ಮತ್ತೆ ಹಾರಿ ಹಣ್ಣಿನ ಸಾಮ್ರಾಜ್ಯಕ್ಕೆ ಬಂದಿತು. ಏಕೆಂದರೆ ಅಲ್ಲಿ ನಿಲ್ಲುವಂತಿರಲಿಲ್ಲ! ಇಲ್ಲಿ ಹಣ್ಣಿನ ಸಾಮ್ರಾಜ್ಯದ ಒಡೆಯ ನಿಯಮ ವಿಧಿಸಿದ್ದ ಒಂದು ಹಣ್ಣು ಒಯ್ದರೆ ನಾಲ್ಕು ದಿನಕ್ಕೆ, ಎರಡು ಹಣ್ಣು ತೆಗೆದುಕೊಂಡು ಹೋದರೆ ಎರಡೇ ದಿನಕ್ಕೆ ವಾಪಸ್ ಬರಬೇಕಿತ್ತು. ಹೀಗೆ ವರ‍್ಷಗಳೇ ಕಳೆದು ಹೋದವು. ತನ್ನ ಕುಡಿಯನ್ನು ಮತ್ತೆ ಕಳಿಸಲು ಬೇಸರ ತಂದೆ ತಾಯಿ ಹಕ್ಕಿಗಳಿಗೆ ಆದರೆ ಹೊಟ್ಟೆಪಾಡು,  ತಂದೆ ಹಕ್ಕಿಗೂ ವಯಸ್ಸಾಗುತ್ತಿತ್ತು ಆಹಾರ ಹೊಂದಿಸುವುದು ಕಷ್ಟವಾಗತೊಡಗಿತು.ಇತ್ತೀಚಿಗೆ ಈ ಹಕ್ಕಿ ಇನ್ನೂ ದೊಡ್ಡದಾಗಿತ್ತು ಅಷ್ಟೇ ಅಲ್ಲ ಅದರ ಸ್ವಾರ್ಥವೂ ಹೆಚ್ಚಿತ್ತು ಈಗ ಅದು ಒಮ್ಮೆಲೇ ಐದೈದು ಹಣ್ಣುಗಳನ್ನು ಸಂಪಾದಿಸುವ ಶಕ್ತಿ ಬೆಳೆಸಿಕೊಂಡಿತ್ತು ಹಾಗಾಗಿ ತಾನು ಬಯಸಿದಂತೆ ಗಟ್ಟಿಯಾದ ಸುಭದ್ರವಾದ ಸುಂದರವಾದ ಅಕ್ಕಪಕ್ಕದ ಗೂಡಿನ ಹಕ್ಕಿಗಳೆಲ್ಲ ಮೆಚ್ಚುವಂತಹ ʼಹಕ್ಕಿಗೂಡುʼ ಒಂದನ್ನು ಕಟ್ಟಿತು. ಬಂದಂತಹ ನೆಂಟರಿಷ್ಟರು ಬಂಧುಗಳೆಲ್ಲ ಹರಸಿ ಸಂಭ್ರಮಿಸಿ ಹೋದರು. ಜೊತೆಗೆ ಕೇಳಿಯೂ ಹೋದರು “ಏನು ಹಣ್ಣಿನ ರಾಜ್ಯದಲ್ಲೇ ಉಳಿದುಬಿಡುವ ಬಯಕೆಯೇ? ಇತ್ತ ಬರುವ ಮನಸಾಗದೆ! ನಿನ್ನ ಹೆತ್ತವರಿಗೂ ವಯಸ್ಸಾಯ್ತು ಬಂದುಬಿಡು”. ಇಂತಹ ನೂರಾರು ಪ್ರಶ್ನೆಗಳು, ಮಾತುಗಳು ಚೂಪಾದ ಬಾಣದಲ್ಲಿ ಚುಚ್ಚಿದಂತೆ ಭಾಸವಾಗುತ್ತಿತ್ತು. ಅಲ್ಲಿ ಹಣ್ಣಿನ ಸಾಮ್ರಾಜ್ಯದಲ್ಲಿ ಬಿಡುಗಡೆ ಅಷ್ಟು ಸುಲಭವಿರಲಿಲ್ಲ ಇಲ್ಲಿ ತನಗೆ ವಹಿಸಿದ ಎಲ್ಲ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ, ಸುತ್ತ ಪ್ರೀತಿ ಹಂಚುತ್ತಾ ಯಾರಿಗೂ ನೋವಾಗದೆ, ಎಲ್ಲರೊಡನೆ ಹೊಂದಿಕೊಂಡು ಎಷ್ಟೆಲ್ಲ ದುಡಿದರೂ ಹಣ್ಣಿನ ಸಾಮ್ರಾಜ್ಯದ ಒಡೆಯ ಕರುಣೆ ತೋರುವಂತೆ ಕಾಣಲಿಲ್ಲ. ಹಕ್ಕಿಗೆ ಸಂಕಟ ಹೆಚ್ಚಾಗತೊಡಗಿತು, ಪಶ್ಚಾತ್ತಾಪದಲ್ಲಿ ಬೇಯತೊಡಗಿತು. ತನ್ನವರು, ಬಂಧುಗಳಿಂದ ದೂರಾಗಿ ಒಂಟಿತನ ಕಾಡತೊಡಗಿತು. ಸಂಬಂಧಿಗಳ ಸಂಭ್ರಮದಲಿ, ಸಂತಾಪಗಳಲಿ ಭಾಗವಹಿಸಲಾಗಲಿಲ್ಲ. ಇದೆಲ್ಲದರ ನಡುವೆ ತನ್ನ ತಂದೆಯನ್ನೂ, ಆಪ್ತ ಸಂಬಂಧಿಗಳನ್ನು ಕಳೆದುಕೊಂಡಿತು! ಈಗಂತೂ ಅದಕ್ಕೆ ಹುಚ್ಚುಹಿಡಿಯುವುದೊಂದೇ ಬಾಕಿ ವಿಲವಿಲ ಒದ್ದಾಡಿತು. ಕಾದನೆಲದಲ್ಲಿ ಹೊರಳಾಡಿತು. ಬೇಡಿತು, ಕಾಡಿತು ಹಣ್ಣಿನ ಸಾಮ್ರಾಜ್ಯದ ಒಡೆಯನ ಕಣ್ಣು ತೆರೆಯಲೇ ಇಲ್ಲ. ಅದರ ಜೊತೆಯಾದ ಅದೇ ಸಾಮ್ರಾಜ್ಯದ ಇತರ ಹಕ್ಕಿಗಳು ಅದನ್ನು ಅಪ್ಪಿ ಸಂತೈಸತೊಡಗಿದವು. ಆದರೆ ಪಾಪ ಅವಕ್ಕೂ ಮನೆ ಕುಟುಂಬ ಇದರ ಜೊತೆ ಎಷ್ಟು ಹೊತ್ತು ಇರಲಾದೀತು. ಅವುಗಳ ಪ್ರೀತಿಯೇನೋ ಅಗಾಧವಾಗಿತ್ತು. ಆದರೆ ಎಲ್ಲರ ನಡುವೆ ಇದಕ್ಕೆ ಕೊರಗು ಕಾಡಲು ಶುರು ಆಯ್ತು ಈಗ ಯಾವ ಹಣ್ಣನ್ನ ಹುಡುಕಿ ಬಂದಿತ್ತೋ ಆ ಹಣ್ಣಲ್ಲಿ ರುಚಿ ಕಳೆದುಕೊಳ್ಳಲಾರಂಭಿಸಿತು. “ಹಣ್ಣು ಈಗ ಮೊದಲಿಗಿಂತಲೂ ರುಚಿಯಾಗಿವೆ” ಅಲ್ಲಿನ ಹಕ್ಕಿಗಳು ಹೇಳುತ್ತವೆ. ಆದರೆ ಇದರ ನಾಲಿಗೆಗೆ ರುಚಿ ಎನಿಸುತ್ತಿಲ್ಲ. ಇದೆಲ್ಲದರ ಮಧ್ಯ  ತಿಂಗಳಿಗೆ ಒಂದೊಂದು ಗರಿ ಉದುರಲಾರಂಭಿಸಿತು. ನೋಡು ನೋಡುತ್ತಲೇ ಹಕ್ಕಿ ಹಣ್ಣಾಗಿ  ಗರಿಕಳಚಿ ಬೋಳಾಗತೊಡಗಿತು. ಈಗ ಮತ್ತಷ್ಟು ಭಯ ಉಂಟಾಯಿತು ಅದಕೆ. ತನ್ನ ಮನೆಯ ತುಂಬಾ ರಾಶಿ ಹಣ್ಣುಗಳಿವೆ ಯಾವುದಕ್ಕೂ ಕೊಕ್ಕು ಹಚ್ಚಲಾಗುತ್ತಿಲ್ಲ ಬಣ್ಣ ಬಣ್ಣದ ರಾಶಿ ಹೂವುಗಳಿವೆ ಸಂಭ್ರಮಿಸಲಾಗುತ್ತಿಲ್ಲ. ಏನೇನೋ ಪ್ರಯತ್ನ ಪಡ್ತಿದೆ ಎಲ್ಲ ಸರಿ ಮಾಡಬೇಕು, ಇದೆಲ್ಲದರಿಂದ ಹೊರ ಬರಬೇಕು, ನಾನು ಮರಳಿ ಗೂಡು ಸೇರಬೇಕು, ತನ್ನವ್ವನ ಮಡಿಲಲ್ಲಿ ಮಲಗಬೇಕು. ಇಲ್ಲ ಹಣ್ಣಿನ ಸಾಮ್ರಾಜ್ಯದ ಒಡೆಯ ಹೃದಯ ಕಲ್ಲಾಗಿಸಿದ್ದ..! ಒಂದೊಂದಾಗಿ ತನ್ನದೆಲ್ಲವನ್ನು ಕಳೆದುಕೊಂಡ ಹಕ್ಕಿ ಗೂಡಿಂದ ಹೊರಬರುವುದನ್ನು  ನಿಲ್ಲಿಸಿ ಬಿಟ್ಟಿತು. ತನ್ನೂರಿಗೆ ಹೋಗುವಾಗ ಮಾತ್ರ ಸಂಭ್ರಮಿಸಿ ಮತ್ತೆ ಅಲ್ಲಿಂದ ಬರುವಾಗ ದಾರಿಯುದ್ದಕ್ಕೂ ಕಣ್ಣೀರುಗರೆಯುತ್ತ ಬರುತ್ತಿತ್ತು.ಇತ್ತ ಎಲ್ಲ ಇದ್ದು ತನ್ನವರಿಂದ ದೂರ ಉಳಿದು ನರಳುವ ಪಾಡು ತನ್ನದಾದರೆ ಅತ್ತ ಕಟ್ಟಿದ ಗೂಡಲ್ಲಿ ಯಾರು ವಾಸವಿರದೆ ಯಾವುದೋ ಬರಸಿಡಿಲಿಗೆ ಬಲಿಯಾಗಿ ಕುಟುಂಬ ದಿಕ್ಕಾಪಾಲಾಗಿ ಇರುವ ಪರಿಸ್ಥಿತಿ ಮತ್ತೊಂದೆಡೆ. ಕೊನೆಗೆ ಹಕ್ಕಿ  ಹಣ್ಣೊಂದರ ಮೇಲೆ ಕುಳಿತು ಯೋಚಿಸತೊಡಗಿತು ಕಣ್ಣೀರು ಅದರ ಪಾದ ಸವರಿ ಹಣ್ಣಿನ ಮೇಲೆ ಹರಿಯತೊಡಗಿತು. “ತಾನು ಸಾಧಿಸಿದ್ದಾದರೂ ಏನು…! ಹೊಟ್ಟೆಪಾಡಿಗಾಗಿ ಆ ದೇವರನ್ನು ಹಣ್ಣಿನ ಸಾಮ್ರಾಜ್ಯದ ದಾರಿ ತೋರಿಸು ಎಂದು ಬೇಡಿದ್ದೇ ತಪ್ಪಾಯ್ತೇ.. ಅನ್ನ ಬೇಡಿದ್ದಕ್ಕೆ ಈ ಪರಿ ಶಿಕ್ಷೆಯೇ, ಯಾವ ತಪ್ಪಿಗೆ! ಯಾರಿಗೆ ತೊಂದರೆ ಕೊಟ್ಟಿದ್ದಕ್ಕೆ!” ಸುಮ್ಮನೆ ಪಶ್ಚಾತಾಪದಲ್ಲಿ ಬೇಯತೊಡಗಿತ್ತು. ಯೋಚನೆಯಲಿ ಹಕ್ಕಿ ಮತ್ತಷ್ಟು ಹಣ್ಣಾಯಿತು. ಈಗ ಅದಕ್ಕೆ  ಈ ಹಣ್ಣುಗಳನ್ನು ನೋಡಿ ವಾಕರಿಕೆ ಶುರುವಾಯಿತು. ಹಸಿವೂ ಪ್ರಾಯಶ್ಚಿತ ರೂಪದಿ ಇಂಗತೊಡಗಿತು. “ಇಲ್ಲ, ಇಲ್ಲ ಆಗುತ್ತಿಲ್ಲ” ಕೊಕ್ಕಿನಿಂದ ಒಂದು ಚೂರು ತಿನ್ನಲಾಗುತ್ತಿಲ್ಲ, ದುಸ್ತರವಾಯಿತು ಮಲಗಲೂ ಕೂಡ. ಬದುಕಲು ಬಹಳ ಕಷ್ಟ ಪಡುತ್ತಿದೆ ಜೀವವಿದ್ದಾಗಲೇ ತನ್ನ ಗೂಡು ಸೇರಬೇಕೆಂಬ ಹಂಬಲ ಹಿಡಿದು ಉಸಿರಾಡುತಿದೆ. ಇನ್ನೇನೋ ಇದು ಉಳಿಯುವುದೇ ಇಲ್ಲ ಎನ್ನುವುದು ಅವನಿಗೆ ಅರಿವಾಯಿತೋ ಏನೋ ಅವನು ಎಲ್ಲ ಬಲ್ಲವ!  ಹಣ್ಣಿನ ಸಾಮ್ರಾಜ್ಯದ ಒಡೆಯ ಕಣ್ಣು ತೆರೆದ ಎಷ್ಟೋ ರ‍್ಷಗಳ ನಂತರ!   ಅದರ ಸುತ್ತಮುತ್ತ ವಾಸವಿದ್ದ ಹಕ್ಕಿಗಳೆಲ್ಲ ಸಂಭ್ರಮಿಸಿದವು “ಹೋ!!” ಎಂದು. ಇದು ತನ್ನ ಬಾಡಿಗೆಗೂಡಿನಿಂದ ಹೊರಬರಲಾಗದೆ ತೆವಳುತ್ತಾ ಇಣುಕಿ ನೋಡಿತು ನಂಬಲಾಗುತ್ತಿಲ್ಲ ಅದಕ್ಕೆ. ಹೌದು! ಹಣ್ಣಿನ ಸಾಮ್ರಾಜ್ಯದ ಒಡೆಯ ಕಣ್ಣು ತೆರೆದಿದ್ದಾನೆ! ಇಷ್ಟು ರ‍್ಷ ಕಾಡಿ ಬೇಡಿದರೂ ಮೂಕನಾಗಿದ್ದನವ ಇಂದು ಕಣ್ಣು ತೆರೆದ. ಹಕ್ಕಿಗೆ ಸಂಭ್ರಮಿಸಬೇಕೋ, ಸಂಕಟಪಡಬೇಕೋ ತಿಳಿಯುತ್ತಿಲ್ಲ ತಾನು “ವಾಪಸ್ ತನ್ನೂರಿಗೆ ತೆರಳುವೆನೇ, ಇಲ್ಲಿಂದ ಪರ‍್ತಿ ಪ್ರಮಾಣದಲ್ಲಿ ಬಿಡುಗಡೆ ಹೊಂದಿ ನನ್ನ ಊರಲ್ಲಿ ನೆಲೆಸುವ ಭಾಗ್ಯ ನನಗೆ ದೊರೆತೀತೇ, ಅಥವಾ ಮತ್ತಾವುದೋ ಜನ್ಮದ ತಪ್ಪಿನ ಲೆಕ್ಕ ತೆಗೆದು ಶಿಕ್ಷೆ ರೂಪದಿ ಮತ್ತೊಂದು ಹಣ್ಣಿನರಾಜ್ಯಕ್ಕೆ ಎಸೆಯುವನೇ?” ಏನೊಂದು ತೋಚುತ್ತಿಲ್ಲ. ಏನನ್ನು ನಂಬಲಾಗುತ್ತಿಲ್ಲ. ಹಣ್ಣಿನ ಸಾಮ್ರಾಜ್ಯದ ಒಡೆಯ ಬಳಿ ಕರೆದು ಹೇಳಿದ “ನೀನಿನ್ನು ಹೊರಡಬಹುದು, ನಿನ್ನ ಸಮಯ ಮುಗಿಯಿತು”. ಖುಷಿಯಲ್ಲಿ ಹಕ್ಕಿ ಹಾರಲು ಪ್ರಯತ್ನಿಸಿತು ಆಗುತ್ತಿಲ್ಲ, ತಿನ್ನಲು ಪ್ರಯತ್ನಿಸಿತು ಆಗುತ್ತಿಲ್ಲ. ಏನು ಮಾಡುವುದು ತಿಳಿಯದೆ ಹಣ್ಣಿನ ಸಾಮ್ರಾಜ್ಯದ ಒಡೆಯನನ್ನೇ ಕೇಳಿತು‌. “ನಾನೀಗ ಶಕ್ತಿಹೀನ ಎಲ್ಲವನ್ನು ಕಳೆದುಕೊಂಡಿದ್ದೇನೆ”. ಕರುಣಾಳು ದಯಾಮಯಿ ಅವ ಹೇಳಿದ “ಸರಿ, ನಿನ್ನ  ಊರಿಗೆ ಹೋಗಿ ತಲುಪುವಷ್ಟು ಶಕ್ತಿಯನ್ನು ನೀಡುತ್ತೇನೆ ಮುಂದಿನದು ನಿನ್ನ ಜವಾಬ್ದಾರಿ”. ಅಷ್ಟಕ್ಕೆ ಹಕ್ಕಿ ಸಂಭ್ರಮಿಸಿ ನಲಿದಾಡಿತು ಅವನ ಮಹಿಮೆಯನ್ನು ಕೊಂಡಾಡಿತು. ದೂರದ ತೀರಕೆ ಹಾರಿತು ಹಾರಿತು ತಾನು ಹಾರಿ ಬಂದಿದ್ದ ದಿಕ್ಕಿಗೆ. ಆದರೆ ಕಣ್ಣು ಮಂಜು ಮಂಜು ನೋಡಿದರೆ ಯಾವುದೋ ಹೊಸ ಊರು!“ಅಯ್ಯೋ ನಾನು

ರೋಹಿಣಿ ಜೆ ಅವರ ಸಣ್ಣ ಕಥೆ “ಹಾರಾಟ ಮುಗಿದ ಹಕ್ಕಿ!” Read Post »

ಕಥಾಗುಚ್ಛ

“ನಂಬಿಕೆಯ ಬಲೆಯಲ್ಲಿ..” ಸಣ್ಣ ಕಥೆ ಪೃಥ್ವಿ ಬಸವರಾಜ್

ಕಥಾ ಸಂಗಾತಿ ಪೃಥ್ವಿ ಬಸವರಾಜ್ “ನಂಬಿಕೆಯ ಬಲೆಯಲ್ಲಿ..” ರಾತ್ರಿ ಹನ್ನೆರಡು ಗಂಟೆ ದಾಟಿತ್ತು. ಕಿಟಕಿಯ ಗಾಜಿನ ಮೇಲೆ ಮಳೆ ಹನಿಗಳು ನಿಧಾನವಾಗಿ ಜಾರುತ್ತಿದ್ದವು. ಮೇಜಿನ ಮೇಲೆ ತೆರೆದಿಟ್ಟಿದ್ದ ಹಳೆಯ ದಿನಚರಿಯ ಒಂದು ಪುಟದಲ್ಲಿ ಅವಳ ಹೆಸರನ್ನು ಮತ್ತೆ ಮತ್ತೆ ಬರೆಯುತ್ತಾ ಕುಳಿತಿದ್ದೆ. “ಅವಳು ನನ್ನವಳಾ?” ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮೂರು ವರ್ಷಗಳು ಕಳೆದಿದ್ದವು.ಮೊದಲ ಬಾರಿ ಅವಳನ್ನು ನೋಡಿದ್ದು ವಿಶ್ವವಿದ್ಯಾನಿಲಯದ ಎಂ.ಎ ತರಗತಿಯಲ್ಲಿ. ಮೊದಲ ದಿನವೇ ಅವಳು ತರಗತಿಗೆ ಬಂದಾಗ ಎಲ್ಲರ ದೃಷ್ಟಿಯೂ ಕ್ಷಣಕಾಲ ಅವಳತ್ತ ನೆಟ್ಟಿತ್ತು. ಅದು ಅವಳ ಸೌಂದರ್ಯಕ್ಕಲ್ಲ. ಅವಳ ಮುಖದಲ್ಲಿ ಕಾಣುತ್ತಿದ್ದ ಮುಗ್ಧತೆಯ ಕಾರಣಕ್ಕೆ.ಅವಳ ಕಣ್ಣುಗಳಲ್ಲಿ ಯಾವುದೇ ಲೆಕ್ಕಾಚಾರ ಇರಲಿಲ್ಲ. ಅವಳ ನಗುವಿನಲ್ಲಿ ನಾಟಕೀಯತೆ ಇರಲಿಲ್ಲ. ಯಾರೇ ಮಾತನಾಡಿದರೂ, ಪರಿಚಯವಿದ್ದರೂ ಇಲ್ಲದಿದ್ದರೂ ಒಂದೇ ರೀತಿಯ ಗೌರವದಿಂದ ಉತ್ತರಿಸುತ್ತಿದ್ದಳು. ಇಂದಿನ ಕಾಲದಲ್ಲಿ ಜನರು ಒಳ್ಳೆಯವರಂತೆ ಕಾಣಲು ಮುಖವಾಡ ಧರಿಸುವುದನ್ನು ನೋಡಿದ್ದ ನನಗೆ ಅವಳು ಒಂದು ಪ್ರಶ್ನೆಯಾಗಿ ಕಂಡಳು. “ಇವಳು ನಿಜವಾಗಿಯೂ ಇಷ್ಟೇ ಸರಳಳಾ? ಇಲ್ಲವೇ ಎಲ್ಲರ ಮುಂದೆ ಒಳ್ಳೆಯವಳೆಂದು ತೋರಿಸಲು ಅಭಿನಯಿಸುತ್ತಿದ್ದಾಳಾ?” ದಿನಗಳು ಕಳೆದವು.ನಾನು ಅವಳನ್ನು ಗಮನಿಸುತ್ತಲೇ ಇದ್ದೆ.ಗ್ರಂಥಾಲಯದಲ್ಲಿ ಪುಸ್ತಕ ಓದುತ್ತಿದ್ದಳು.ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದಳು.ಕಾಲೇಜು ಮುಗಿದ ತಕ್ಷಣ ಮನೆಗೆ ಹೋಗುತ್ತಿದ್ದಳು.ಹಬ್ಬ ಬಂದರೆ ಮನೆಗೆ ತೆರಳಿ ತಂದೆತಾಯಿಯ ಜೊತೆ ಕಾಲ ಕಳೆಯುತ್ತಿದ್ದಳು.ಸ್ನೇಹಿತೆಯರು ಪ್ರೀತಿ, ಪ್ರೇಮದ ಬಗ್ಗೆ ಮಾತನಾಡಿದಾಗ ಅವಳು ಕೇವಲ ನಗುತ್ತಾ ಹೇಳುತ್ತಿದ್ದಳು. “ನನ್ನ ಅಪ್ಪ ಅಮ್ಮ ನನ್ನನ್ನು ತುಂಬಾ ನಂಬಿದ್ದಾರೆ. ಅವರ ನಂಬಿಕೆಯನ್ನು ಕಳೆದುಕೊಳ್ಳುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ.” ಆ ಮಾತು ಕೇಳಿದ ದಿನ ಅವಳ ಬಗ್ಗೆ ನನ್ನ ಮನಸ್ಸಿನಲ್ಲಿ ಇದ್ದ ಎಲ್ಲಾ ಅನುಮಾನಗಳು ಕರಗಿ ಹೋದವು. ಅವಳು ತನ್ನ ಸುತ್ತ ತಾನೇ ಒಂದು ಬೇಲಿ ಕಟ್ಟಿಕೊಂಡಿದ್ದಳು.ಅದು ಬಂಧನವಲ್ಲ.ಅದು ಅವಳ ತಂದೆತಾಯಿಯ ನಂಬಿಕೆಯಿಂದ ನಿರ್ಮಾಣವಾದ ಬೇಲಿ. ಅವಳ ಪ್ರಪಂಚ ಚಿಕ್ಕದಾಗಿತ್ತು.ತಂದೆ.ತಾಯಿ.ಓದು.ಕನಸುಗಳು.ಅಷ್ಟೇ. ಆ ಪ್ರಪಂಚದಲ್ಲಿ ಪ್ರೀತಿಗೆ ಜಾಗವೇ ಇರಲಿಲ್ಲ. ಆದರೆ ಬದುಕು ಯಾವಾಗಲೂ ನಾವು ಹಾಕಿಕೊಂಡ ನಿಯಮಗಳಂತೆ ನಡೆಯುವುದಿಲ್ಲ.ನನಗೂ ಅವಳಿಗೂ ಸ್ನೇಹ ಬೆಳೆಯಿತು.ಸಣ್ಣ ಸಣ್ಣ ಮಾತುಗಳು.ತರಗತಿಯ ಟಿಪ್ಪಣಿಗಳು.ಪರೀಕ್ಷೆಯ ಚರ್ಚೆಗಳು.ಹುಟ್ಟುಹಬ್ಬದ ಶುಭಾಶಯಗಳು.ನಿಧಾನವಾಗಿ ಸ್ನೇಹ ಹೃದಯದೊಳಗೆ ಬೇರು ಬಿಟ್ಟಿತು.ಒಂದು ದಿನ ನಾನು ಧೈರ್ಯ ಮಾಡಿ ಕೇಳಿದೆ.“ನೀನು ಪ್ರೀತಿಯನ್ನು ನಂಬುತ್ತೀಯಾ?”ಅವಳು ಸ್ವಲ್ಪ ಹೊತ್ತು ಮೌನವಾಗಿದ್ದಳು.ನಂತರ ನಿಧಾನವಾಗಿ ಹೇಳಿದಳು.“ಪ್ರೀತಿ ತಪ್ಪಲ್ಲ. ಆದರೆ ನಮ್ಮನ್ನು ನಂಬಿ ಬದುಕುವವರ ಕಣ್ಣಲ್ಲಿ ನಿರಾಶೆ ಮೂಡಿಸಿದರೆ ಆ ಪ್ರೀತಿಯ ಅರ್ಥವೇನು?”ಅವಳ ಉತ್ತರ ನನ್ನನ್ನು ಮೌನಗೊಳಿಸಿತು.ಆದರೆ ಪ್ರೀತಿಯು ಮೌನವನ್ನು ಅರ್ಥಮಾಡಿಕೊಳ್ಳುವುದಿಲ್ಲ.ಅದು ಮನಸ್ಸಿನೊಳಗೆ ನಿಧಾನವಾಗಿ ಬೆಳೆಯುತ್ತಲೇ ಇರುತ್ತದೆ.ಕೊನೆಗೆ ಒಂದು ಸಂಜೆ ಕಾಲೇಜಿನ ಆವರಣದಲ್ಲಿ ಅವಳ ಮುಂದೆ ನನ್ನ ಮನಸ್ಸಿನ ಮಾತನ್ನು ಹೇಳಿಬಿಟ್ಟೆ.ಅವಳು ಏನೂ ಮಾತನಾಡಲಿಲ್ಲ. ಕೆಲವು ದಿನಗಳ ನಂತರ ಅವಳಿಂದ ಸಂದೇಶವೊಂದು ಬಂದಿತು.“ನಾನು ನಿನ್ನನ್ನು ಇಷ್ಟಪಡಲು ಪ್ರಾರಂಭಿಸಿದ್ದೇನೆ. ಆದರೆ ನನಗೆ ಭಯವಾಗುತ್ತಿದೆ.”“ಯಾಕೆ?”“ನನ್ನ ಅಪ್ಪ ಅಮ್ಮ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುವ ಭಯ.” ಆ ದಿನದಿಂದ ನಮ್ಮ ಪ್ರೀತಿ ಆರಂಭವಾಯಿತು.ಆದರೆ ಅದು ಸಂಭ್ರಮದ ಪ್ರೀತಿ ಇರಲಿಲ್ಲ.ಜವಾಬ್ದಾರಿಯ ಪ್ರೀತಿ.ಮಿತಿಯೊಳಗಿನ ಪ್ರೀತಿ.ಗೌರವದ ಪ್ರೀತಿ. ಅವಳು ಪ್ರತಿದಿನ ಹೇಳುತ್ತಿದ್ದಳು.“ನಮ್ಮ ಪ್ರೀತಿ ಯಾರ ಕಣ್ಣಲ್ಲೂ ಕಣ್ಣೀರು ತರಬಾರದು.”ಒಮ್ಮೆ ನಾನು ಕೇಳಿದೆ.“ಒಂದು ವೇಳೆ ನಿನ್ನ ತಂದೆತಾಯಿಗೆ ನಮ್ಮ ಬಗ್ಗೆ ಗೊತ್ತಾದರೆ?”ಅವಳ ಕಣ್ಣುಗಳು ತೇವಗೊಂಡವು.“ನನ್ನನ್ನು ಶಿಕ್ಷಿಸಿದರೂ ಸಹಿಸುತ್ತೇನೆ. ಆದರೆ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ಮುರಿಯುವುದನ್ನು ಮಾತ್ರ ಸಹಿಸಲಾರೆ.”ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ.ಒಂದೇ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.“ನನ್ನಿಂದಾಗಿ ಅವಳು ತನ್ನ ತಂದೆತಾಯಿಯ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾಳೆಯೇ?”ಕೆಲವು ಪ್ರೇಮಗಳು ಸೇರಿಸುವುದಕ್ಕಿಂತ ಹೆಚ್ಚು ಕಲಿಸುತ್ತವೆ. ನಾನು ಅವಳನ್ನು ಪ್ರೀತಿಸಿದ್ದೆ.ಆದರೆ ಅವಳ ಪ್ರೀತಿಗಿಂತ ಅವಳ ತಂದೆತಾಯಿಯ ನಂಬಿಕೆ ದೊಡ್ಡದು ಎಂಬುದು ನನಗೆ ಅರಿವಾಯಿತು.ಒಂದು ದಿನ ನಾನು ಅವಳಿಗೆ ಹೇಳಿದೆ.“ನಿನ್ನ ಜೀವನದಲ್ಲಿ ನಾನು ಪ್ರೀತಿಯಾಗಿ ಉಳಿಯದಿದ್ದರೂ ಪರವಾಗಿಲ್ಲ. ಆದರೆ ನಿನ್ನ ತಂದೆತಾಯಿಯ ಹೆಮ್ಮೆಯಾಗಿ ಉಳಿಯಬೇಕು.”ಅವಳು ಕಣ್ಣೀರು ಒರೆಸಿಕೊಂಡು ನಗಿದಳು.“ನೀನು ನನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅರ್ಥ ಮಾಡಿಕೊಂಡೆ.” ಇಂದು ಮೂರು ವರ್ಷಗಳ ನಂತರವೂ ಅವಳ ನೆನಪು ನನ್ನ ಮನಸ್ಸಿನಲ್ಲಿದೆ.ಅವಳು ನನ್ನವಳಾಗಲಿಲ್ಲ.ಆದರೆ ನನಗೆ ಒಂದು ದೊಡ್ಡ ಪಾಠವನ್ನು ಕಲಿಸಿದಳು.ನಂಬಿಕೆಯನ್ನು ಕಾಪಾಡಿಕೊಳ್ಳಲು ತ್ಯಾಗ ಮಾಡಬಲ್ಲವಳೇ ನಿಜವಾದ ಪ್ರೀತಿಯನ್ನು ಅರಿತವಳು. ಹೊರಗೆ ಮಳೆ ನಿಂತಿತ್ತು.ನಾನು ದಿನಚರಿಯ ಕೊನೆಯ ಪುಟದಲ್ಲಿ ಒಂದು ವಾಕ್ಯ ಬರೆದೆ. “ಪ್ರೀತಿ ಎರಡು ಹೃದಯಗಳನ್ನು ಒಂದಾಗಿಸಬಹುದು; ಆದರೆ ನಂಬಿಕೆ ಇಡೀ ಕುಟುಂಬವನ್ನು ಬದುಕಿಸುತ್ತದೆ. ಪ್ರೀತಿಯನ್ನು ಗೆಲ್ಲಬಹುದು, ನಂಬಿಕೆಯನ್ನು ಮಾತ್ರ ಉಳಿಸಿಕೊಳ್ಳಬೇಕು.” ಪೃಥ್ವಿ ಬಸವರಾಜ್

“ನಂಬಿಕೆಯ ಬಲೆಯಲ್ಲಿ..” ಸಣ್ಣ ಕಥೆ ಪೃಥ್ವಿ ಬಸವರಾಜ್ Read Post »

ಕಥಾಗುಚ್ಛ

ಸರಸ್ವತಿ ಕೆ ನಾಗರಾಜ್ ಅವರಕಥೆ “ಪರಿವರ್ತನೆ”

ಕಥಾ ಸಂಗಾತಿ ಸರಸ್ವತಿ ಕೆ ನಾಗರಾಜ್ “ಪರಿವರ್ತನೆ” ಒಂದು ಹಳ್ಳಿಯಲ್ಲಿ ರಾಹುಲ್ ಎಂಬ ಹುಡುಗನಿದ್ದ. ಅವನು ಯಾವಾಗಲೂ ತನ್ನ ಅದೃಷ್ಟವನ್ನು ದೂಷಿಸುತ್ತಿದ್ದ. “ನನಗೆ ಅವಕಾಶಗಳು ಸಿಗುವುದೇ ಇಲ್ಲ” ಎಂದು ಬೇಸರಪಡುತ್ತಿದ್ದ.ಒಂದು ದಿನ ಅವನು ತೋಟದಲ್ಲಿ ನಡೆಯುತ್ತಿದ್ದಾಗ ಒಂದು ಸಣ್ಣ ಮರಿಹುಳವನ್ನು ಕಂಡನು. ಅದು ನಿಧಾನವಾಗಿ ಎಲೆಗಳ ಮೇಲೆ ಹತ್ತುತ್ತಿತ್ತು. ಕೆಲವು ದಿನಗಳ ನಂತರ ಅದೇ ಹುಳು ತನ್ನನ್ನು ತಾನು ಗೂಡಿನೊಳಗೆ ಸುತ್ತಿಕೊಂಡಿತು.ರಾಹುಲ್ ಪ್ರತಿದಿನ ಅದನ್ನು ನೋಡುತ್ತಿದ್ದ. “ಇದು ಈಗ ಏನೂ ಮಾಡುತ್ತಿಲ್ಲ” ಎಂದುಕೊಂಡನು. ಆದರೆ ಕೆಲ ದಿನಗಳ ನಂತರ ಆ ಗೂಡು ಒಡೆದು, ಅದರಿಂದ ಬಣ್ಣಬಣ್ಣದ ಸುಂದರ ಚಿಟ್ಟೆ ಹೊರಬಂತು.ಆ ಚಿಟ್ಟೆ ಆಕಾಶದಲ್ಲಿ ಹಾರಾಡುವುದನ್ನು ಕಂಡ ರಾಹುಲ್ ಆಶ್ಚರ್ಯಪಟ್ಟ. ಆಗ ಅವನಿಗೆ ಒಂದು ಸತ್ಯ ಅರ್ಥವಾಯಿತು. ಪರಿವರ್ತನೆಗೆ ಸಮಯ, ಸಹನೆ ಮತ್ತು ಪ್ರಯತ್ನ ಬೇಕು. ಹೊರಗೆ ಏನೂ ನಡೆಯದಂತೆ ಕಂಡರೂ, ಒಳಗೆ ದೊಡ್ಡ ಬದಲಾವಣೆಗಳು ನಡೆಯುತ್ತಿರುತ್ತವೆ.ಆ ದಿನದಿಂದ ರಾಹುಲ್ ತನ್ನನ್ನು ಬದಲಾಯಿಸಿಕೊಳ್ಳಲು ಆರಂಭಿಸಿದ. ದೂರು ಹೇಳುವುದನ್ನು ಬಿಟ್ಟು, ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡತೊಡಗಿದ. ಕೆಲವು ತಿಂಗಳುಗಳ ನಂತರ ಅವನು ತನ್ನ ಓದಿನಲ್ಲಿ, ನಡತೆಯಲ್ಲಿ ಮತ್ತು ಜೀವನದಲ್ಲಿ ದೊಡ್ಡ ಯಶಸ್ಸನ್ನು ಕಂಡನು.ರಾಹುಲನ ಜೀವನದಲ್ಲಿ ಬಂದ ಆ ಬದಲಾವಣೆ ನಿಧಾನವಾಗಿದ್ದರೂ, ಅದು ತುಂಬಾ ಗಟ್ಟಿಯಾಗಿತ್ತು. ಈಗ ಅವನು ಪ್ರತಿಯೊಂದು ಸಮಸ್ಯೆಯನ್ನು ಸೋಲಾಗಿ ನೋಡದೆ, ಹೊಸ ಪಾಠವಾಗಿ ಸ್ವೀಕರಿಸುತ್ತಿದ್ದ.ಒಂದು ದಿನ ಹಳ್ಳಿಯಲ್ಲಿ ಭಾಷಣ ಸ್ಪರ್ಧೆ ನಡೆಯಿತು. ಹಿಂದೆಂದೂ ಜನರ ಮುಂದೆ ಮಾತನಾಡಲು ಹೆದರುತ್ತಿದ್ದ ರಾಹುಲ್, ಈ ಬಾರಿ ಧೈರ್ಯದಿಂದ ವೇದಿಕೆಯ ಮೇಲೆ ನಿಂತ. ತನ್ನ ಅನುಭವಗಳನ್ನು ಹಂಚಿಕೊಂಡಾಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.ಅವನ ಯಶಸ್ಸನ್ನು ನೋಡಿ ಅನೇಕ ಯುವಕರು ಪ್ರೇರಣೆ ಪಡೆದರು. “ಬದಲಾವಣೆ ಸಾಧ್ಯ” ಎಂಬ ನಂಬಿಕೆ ಅವರಲ್ಲೂ ಮೂಡಿತು. ರಾಹುಲ್ ಅವರಿಗೆ ಒಂದು ಮಾತು ಹೇಳುತ್ತಿದ್ದ:“ಚಿಟ್ಟೆಯಾಗುವ ಮೊದಲು ಹುಳವೂ ಅನೇಕ ಕಷ್ಟಗಳನ್ನು ಎದುರಿಸಿತ್ತು. ಆದ್ದರಿಂದ ಕಷ್ಟ ಬಂದಾಗ ಹೆದರಬೇಡಿ; ಅದು ನಿಮ್ಮ ಪರಿವರ್ತನೆಯ ಆರಂಭವಾಗಿರಬಹುದು.”ವರ್ಷಗಳು ಕಳೆದವು. ಒಮ್ಮೆ ತನ್ನ ಅದೃಷ್ಟವನ್ನು ದೂಷಿಸುತ್ತಿದ್ದ ರಾಹುಲ್, ಈಗ ಇತರರಿಗೆ ಆಶಾಕಿರಣವಾಗಿದ್ದ. ಅವನ ಜೀವನವೇ ಒಂದು ಸಂದೇಶವಾಗಿ ಮಾರ್ಪಟ್ಟಿತು —“ಪರಿಸ್ಥಿತಿಗಳು ನಮ್ಮನ್ನು ಬದಲಾಯಿಸುವುದಿಲ್ಲ; ನಾವು ಬದಲಾಗಲು ತೆಗೆದುಕೊಳ್ಳುವ ನಿರ್ಧಾರವೇ ನಮ್ಮ ಭವಿಷ್ಯವನ್ನು ಬದಲಾಯಿಸುತ್ತದೆ.ಕಾಲ ಮುಂದೆ ಸಾಗುತ್ತಲೇ ಇತ್ತು. ರಾಹುಲನ ಹೆಸರು ಈಗ ಹಳ್ಳಿಯ ಗಡಿಯನ್ನು ದಾಟಿ ಸುತ್ತಮುತ್ತಲಿನ ಊರುಗಳಲ್ಲಿಯೂ ಕೇಳಿಬರುತ್ತಿತ್ತು. ಆದರೆ ಅವನ ಯಶಸ್ಸು ಅವನನ್ನು ಅಹಂಕಾರಿಯಾಗಿಸಲಿಲ್ಲ. ಅವನು ಇನ್ನೂ ಅದೇ ಸರಳತೆ ಮತ್ತು ವಿನಯವನ್ನು ಉಳಿಸಿಕೊಂಡಿದ್ದ.ಒಂದು ದಿನ ಒಬ್ಬ ಯುವಕ ಅವನ ಬಳಿಗೆ ಬಂದು ಕೇಳಿದ, “ಅಣ್ಣಾ, ನೀವು ಇಷ್ಟು ಬದಲಾಗಲು ಕಾರಣವೇನು?”ರಾಹುಲ್ ಮುಗುಳ್ನಗುತ್ತಾ ಉತ್ತರಿಸಿದ, “ನನ್ನ ಜೀವನವನ್ನು ಬದಲಿಸಿದುದು ದೊಡ್ಡ ಅವಕಾಶಗಳಲ್ಲ, ಪ್ರತಿದಿನ ನಾನು ತೆಗೆದುಕೊಂಡ ಸಣ್ಣ ನಿರ್ಧಾರಗಳು.”ಆ ಮಾತು ಯುವಕನ ಮನಸ್ಸಿನಲ್ಲಿ ಆಳವಾಗಿ ನೆಲೆಯೂರಿತು. ಅವನೂ ತನ್ನ ಜೀವನವನ್ನು ಹೊಸದಾಗಿ ಆರಂಭಿಸಿದ.ಹೀಗೆ ಒಂದು ಕಾಲದಲ್ಲಿ ತನ್ನೊಳಗಿನ ಬೆಳಕನ್ನು ಹುಡುಕುತ್ತಿದ್ದ ರಾಹುಲ್, ಈಗ ನೂರಾರು ಜನರ ಬದುಕಿನಲ್ಲಿ ಬೆಳಕನ್ನು ಹಚ್ಚುವ ದೀಪವಾಗಿದ್ದ. ಅವನ ಕಥೆ ಎಲ್ಲರಿಗೂ ಒಂದು ಸತ್ಯವನ್ನು ನೆನಪಿಸುತ್ತಿತ್ತು:“ಬೀಜವು ಮಣ್ಣಿನೊಳಗೆ ಹೂತುಹೋಗುವುದು ಅದರ ಅಂತ್ಯವಲ್ಲ; ಅದು ಹೊಸ ಬದುಕಿನ ಆರಂಭ. ಹಾಗೆಯೇ ಜೀವನದ ಕಷ್ಟಗಳೂ ನಮ್ಮನ್ನು ಮುರಿಯಲು ಅಲ್ಲ, ಬೆಳೆಸಲು ಬರುತ್ತವೆ.”ಆ ದಿನದಿಂದ ಹಳ್ಳಿಯ ಜನರು ಒಂದು ಮಾತನ್ನು ಆಗಾಗ ಹೇಳುತ್ತಿದ್ದರು:“ಪರಿವರ್ತನೆ ಎಂಬುದು ರೂಪ ಬದಲಾವಣೆಯಲ್ಲ; ಮನಸ್ಸು ಅರಳುವ ಪಯಣ.” ಸರಸ್ವತಿ ಕೆ ನಾಗರಾಜ್

ಸರಸ್ವತಿ ಕೆ ನಾಗರಾಜ್ ಅವರಕಥೆ “ಪರಿವರ್ತನೆ” Read Post »

ಅನುವಾದ, ಕಥಾಗುಚ್ಛ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ ಶೋಭನ್‌ ಬಾಬು-ಗಣೇಶ್‌ ಬೀಡಿ ತೆಲುಗುಮೂಲ ಜಿ.ಉಮಾಮಹೇಶ್ವರ್‌ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು ಶ್ರೀಶೈಲದಂತಹ ಆಧ್ಯಾತ್ಮಿಕ ಕ್ಷೇತ್ರದ ಅಂಚಿನಲ್ಲಿ ಇರುವುದರಿಂದಲೋ ಅಥವಾ ಮಧ್ಯಮ ವರ್ಗದ ನೌಕರರ  ಕುಟುಂಬಗಳು ಅಧಿಕವಾಗಿ ಇರುವುದರಿಂದಲೋ ಮತ್ತು ಸುನ್ನಿಪೆಂಟದಲ್ಲಿ  ಭಕ್ತಿ ಕಾರ್ಯಕ್ರಮಗಳು, ಮತ್ತು ಹಬ್ಬಗಳ ಸಂಭ್ರಗಳು ಚೆನ್ನಾಗಿ ಇರುತ್ತಿದ್ದವು. ವಿನಾಯಕಚವಿತಿಗೆ, ರಾಮನವಮಿಗೆ ಚಪ್ಪರಗಳನ್ನು ಹಾಕುವವರು. ಒಂಬತ್ತು ದಿನಗಳ ಹಬ್ಬದ ಗಡಿಬಿಡಿಯಲ್ಲಿ ನಾಟಕಗಳು, ಹರಿಕಥೆಗಳು, ಬುರ್ರಕಥೆಗಳು ಅದರಲ್ಲಿ ಭಾಗವಾಗಿದ್ದವು. ಚಿಕ್ಕಮಕ್ಕಳಿಗೆ ಹಾಡುಗಳು, ಏಕಪಾತ್ರಾಭಿನಯಗಳು, ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳು ವಿತರಿಸುವವರು. ಶಿವರಾತ್ರಿಗೆ ಸಿನಿಮಾ ಹಾಲುಗಳಲ್ಲಿ ತ್ರೀ ಶೋಸ್ ಹಾಕುವವರು. ಧನುರ್ಮಾಸದಲ್ಲಿ ನಗರ ಸಂಕೀರ್ತನೆಗಳು ಚಳಿಯನ್ನು ಜಯಿಸುತ್ತವೆ. ಸಂಕ್ರಾಂತಿಗೆ ಅಘೋಷಿತ ರಂಗೋಳಿ ಸ್ಪರ್ಧೆಗಳು ನಡೆಯುತ್ತಿದ್ದವು. ಯಾರ ರಥ ಎಷ್ಟು ದೂರ ಸಾಗಿತೋ ಎಂದು ಅಳೆಯುತ್ತಿದ್ದರು. ದೊಡ್ಡ ದೊಡ್ಡ ರಂಗೋಳಿಗಳಿಗೆ ವಿಶೇಷ ಪ್ರಶಂಸೆಗಳು ದೊರೆಯುತ್ತಿದ್ದವು. ಅಕ್ಕಾತಂಗಿಯರು,ತಾಯಿ-ಆತ್ತೆಗಳು ರಂಗೊಳಿಗಳು ಹಾಕುತ್ತಿದ್ದಾರೆ  ಅಣ್ಣ-ತಮ್ಮಂದಿರು, ತುಂಟ ಮಕ್ಕಳು ಸ್ವಂತ ರಂಗೊಳಿಗಳಿಗೆ ಕಾಪಾಲಾ ಕಾಯುತ್ತಾ, ಹೊರಗಿನ ರಂಗೊಳಿಗಳನ್ನು ವಿಶ್ಲೇಷಿಸುತ್ತಾ ತಿರುಗಾಡುತ್ತಿದ್ದರು. ಸುನ್ನಿಪೆಂಟಗೆ ಸಂಬಂಧಿಸಿದವರೆಗೂ ಸತ್ಯನಾರಾಯಣಸ್ವಾಮಿ ದೇವಸ್ಥಾನ, ರಾಮಮಂದಿರಗಳು ಭಕ್ತಿ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿವೆ.ಶ್ರೀಶೈಲದಲ್ಲಿ ಸಹಜ ಸಿದ್ಧವಾಗಿ ಕೆಲವುರು ಸಾಧುಗಳು, ಸನ್ಯಾಸಿಗಳು ಯಾವಾಗಲೂ ಕಂಡು ಬರುತ್ತಿರುತ್ತಾರೆ. ಇವರಲ್ಲದೆ, ಹೊರ ಪ್ರದೇಶಗಳಿಂದಲೂ ಕೆಲವರು ಬಂದು ಇಲ್ಲಿ ಯಾವುದೋ ಸತ್ರದಲ್ಲಿ ಊಟ ಮಾಡುತ್ತಾ, ಕಾಲ ಕಳೆಯುತ್ತಾ   ಬದುಕುವವರು ಅನೇಕರು ಇರುವವರು. ಮುಮುಕ್ಷುವುರಾದ ಸಾಧುಗಳು ಯಾರೋ, ಭಿಕ್ಷುಕುರಾದ ಸನ್ಯಾಸಿಗಳು ಯಾರೋ ಕಂಡುಹಿಡಿಯುವುದು ತುಂಬಾಕಷ್ಟ. ಉಡುಗೆ ತೊಡುಗೆಗಳಿಂದ, ಹಾವಭಾವಗಳಿಂದ, ಮಾತಿನ ಪದ್ಧತಿ ಸುಮಾರಾಗಿ ಒಂದೇ ವಿಧವಾಗಿ ಇರುತ್ತದೆ.ಒಮ್ಮೆ ಪೂರ್ಣಾನಂದ ಸ್ವಾಮಿ ಎಂಬ ಸ್ವಾಮಿಗಳು ತಮ್ಮ ಪತ್ನಿಸಮೇತ ಶ್ರೀಶೈಲಕ್ಕೆ ಬಂದರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು, ಮತ್ತು ಸತ್ಯನಾರಾಯಣ ಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು ಪ್ರವಚನಗಳನ್ನು ಹೇಳುತ್ತಾ ಸುಮಾರು ಮೂರುತಿಂಗಳ ಕಾಲವು ಅವರು ಸುನ್ನಿಪೆಂಟದಲ್ಲಿ ಕಳೆದರು. ಹಾಗಾಗಿ ಪೂರ್ಣಾನಂದಸ್ವಾಮಿಗಳು ಶ್ರೀಶೈಲದಲ್ಲಿದ್ದ ಮೂರುತಿಂಗಳಲ್ಲಿ ಒಂದುತಿಂಗಳು ನಮ್ಮ ಮನೆಯಲ್ಲಿಯೇ ಇದ್ದರು. ಪೂರ್ಣಾನಂದಸ್ವಾಮಿಗಳು, ತಾವು ವೇದಾಂತಂ ಲಕ್ಷ್ಮಯ್ಯನವರ ಶಿಷ್ಯರೆಂದು, ಅವರ ಊರು ಕಡಪಜಿಲ್ಲೆಯ ಮಾಮಿಡಾಲಪಲ್ಲೆ ಎಂದೋ, ಇನ್ನೂ ಯವುದೋ ಊರು ಎಂದು ಹೇಳಿದ್ದು ನೆನಪಿದೆ. ಪ್ರತಿದಿನ, ಸಾಯಂಕಾಲ ಆರರಿಂದ ಏಳರ ವರೆಗೆ ಅವರು  ಉಪದೇಶ ಮಾಡುತ್ತಿದ್ದರು. ಆಗ ಹೆಂಗಸರೆಲ್ಲ ಆ ಸಮಯಕ್ಕೆ  ಸೇರಿ ಸ್ವಲ್ಪ ಹೊತ್ತು ಕಾಲಕ್ಷೇಪ ಮಾಡುತ್ತಿದ್ದರು. ಭಾನುವಾರಗಳಲ್ಲಿ ಮಾತ್ರ ಮಧ್ಯಾಹ್ನ ಮೂರರಿಂದ ನಾಲ್ಕರವರೆಗೂ ಹೇಳುತ್ತಿದ್ದರು.ಒಂದುದಿನ ಯಾವುದೋ ಕೆಲಸಕ್ಕೆ ನನ್ನ ತಾಯಿಯನ್ನು ಕರೆದುಕೊಂಡು ಬರಬೇಕೆಂದು ಅಪ್ಪ ಹೇಳಿದರೇ ನಾನು ದೇವಸ್ಥಾನಕ್ಕೆ ಹೋಗಿದ್ದೆ. ಇನ್ನೊಂದು ಐದು ನಿಮಿಷಗಳಲ್ಲಿ ಮುಗಿಯುತ್ತದೆ. ಕೂತ್ಕೋ ಅಂದರೆ, ನಾನೂ ಕೂತ್ಕೊಂಡು ಕೇಳುತ್ತಿದ್ದೇನೆ. ಅವರು ಶ್ಯಾಸೆದ ಬಗ್ಗೆ, ಶ್ಯಾಸೆ ಮೇಲಿನ ಧ್ಯಾಸದ ಬಗ್ಗೆ, ಮೌನವಾಗಿ ಮಾಡುವ ಧ್ಯಾನದ ಬಗ್ಗೆ ಹೇಳುತ್ತಾ  ಅಧ್ಯಾತ್ಮಿಕ ಸಂಬಂಧವಾದ ಮಾತುಗಳೇನೊ ಹೇಳಿತ್ತಿದ್ದರು.ನಾನು ಏನೋ  ಯೋಚಿಸುತ್ತಾ ಕೂತಿದ್ದಾರೆ ನಾಗಮಣಿ ಅತ್ತೆ ನನ್ನನ್ನು ಹತ್ತಿರಕ್ಕೆ ಕರೆದು –“ಈ ಸ್ವಾಮಿ ಇಷ್ಟೊಂದು ಮಾತುಗಳು ಹೇಳ್ತಾನೆ, ಆದರೆ, ಇವರಿಗೆ ಸಿನಿಮಾ ಹುಚ್ಚು ಹೋಗಿಲ್ಲ” ಎಂದಳು.ವಾಸ್ತವಕ್ಕೆ ಈ ಚರ್ಚೆಯಲ್ಲಿ ಚಲನ ಚಿತ್ರಗಳ ಪ್ರಸ್ತಾವನೆ ಏಕೆ ಬಂದವೋ ನನಗೆ ಅರ್ಥವಾಗಿಲ್ಲ. ಆ ಅತ್ತೆ ಸಿನಿಮಾಗಳು ಚೆನ್ನಾಗಿ ನೋಡುತ್ತಾಳೆ. ಚೆನ್ನಾಗಿ ಫಾಲೋ ಆಗುತ್ತಾಳೆ  ಕೂಡಾ. ಇವರಿಗೆ ಸಿನಿಮಾಹುಚ್ಚು ಎಂದು ಹೇಗೆ ನಿರ್ಧರಿಸಿದ್ದಾಳೋ  ತಿಳಿಯದೆ ನಾನು ತಲೆ ಕೆಡಿಸಿಕೊಂಡಾಗ, ಅವರೇ ನನ್ನನ್ನು ಮತ್ತಿಷ್ಟೂ ಹತ್ತಿರಕ್ಕೆ ಕರೆದು-“ಬೇಕಿದ್ದರೆ ಕೇಳು, ಅವರು ಮಾತು ಮಾತಿಗೆ ಶೋಭನ್ ಬಾಬು, ಶೋಭನ್ ಬಾಬು ಎನ್ನುತ್ತಿದ್ದಾನೆ”ನಾನು ಸ್ವಲ್ಪ ಕಿವಿಕೊಟ್ಟು ಶ್ರದ್ಧೆ ಯಿಂದ ಕೇಳಿದಾಗ, ಹಾಗೆ ಅನಿಸಿತು, ಆದರೆ ಅದಲ್ಲ ಅಂತಲೂ ಅನಿಸಿತು. ನನಗೆ ತೆಲುಗು ಭಾಷೆಯೆಂದರೆ ಒಲವು, ಮನೆಯಲ್ಲಿದ್ದ ಪುಸ್ತಕಗಳನ್ನು(ಪೂರ್ಣಾನಂದಸ್ವಾಮಿ ಅವರವು ಕೂಡಾ) ನೋಡಿದ್ದೇನೆ. ಅದರಿಂದ ಮತ್ತಿಷ್ಟೂ ಶ್ರದ್ಧೆಯಿಂದ ಕೇಳಿದರೆ  ಆಗ  ಸ್ಫುರಿಸಿತು ಆ ಪದವು, ಅದರ ಅರ್ಥ್!ಆ ಅತ್ತೆ ಮತ್ತೆ ಕರೆದು  “ಗಮನಿಸಿದ್ದೀಯಾ?” ಎಂದು ಕೇಳಿದಳು.ಆಗ ನಾನು ಅವಳಿಗೆ ಹೇಳಿದೆ –“ಅತ್ತೆ, ಅದು ನೀವು ಅಂದುಕೊಂಡಂತೆ ಶೋಭಾನ್ ಬಾಬು ಅಲ್ಲ – ಸೋಹಂ ಭಾವ – ಅಂದರೆ ನಾನೇ ದೇವರು ಎಂಬ ಭಾವನೆ ” ಎಂದು ಹೇಳಿದರೆ  ಅವಳ ಮುಖ ಸಂಪೂರ್ಣವಾಗಿ ಕಳೆಗುಂದಿತ್ತು. ನಂಬಿದಂತೆ ಕಾಣಿಸಲಿಲ್ಲ. ಮನೆಗೆ ಬಂದಮೇಲೆ ನನ್ನ ಅಕ್ಕಗೆ ಹೇಳಿದೆ. ಈಗಲೂ  ಆ ವಿಷಯವನ್ನು ನೆನೆದರೆ  ತಡೆಯಲಾರದಷ್ಟು ನಗು ಬರುತ್ತದೆ.ಇನ್ನೊಂದು ಸಲ ಸನ್ಯಾಸಿಯೊಬ್ಬರು ಮಹದೇವಪ್ಪನವರನ್ನು ಭೇಟಿಮಾಡಿ  ತಾನು ಬಂದು ವ್ರತವನ್ನು ಸಂಕಲ್ಪಿಸಿದ್ದೇ ನೆಂದು ಅದು ಮುಗಿಯುವ ತನಕ ಅವರ ಸಹಾಯ ಬೇಕೆಂದು ಕೇಳಿದ. ಬೋಳ ಶಂಕರನಂತಹ  ಮಹದೇವಪ್ಪ ಮಾಮಾ ಆ ವ್ರತವು ಏನು, ಅದು ಮುಗಿಸಲು ಎಷ್ಟು ದಿನಗಳು ಬೇಕಾಗುತ್ತವೋ  ಅದಕ್ಕೆ  ಏನೇನು ಬೇಕಾಗುತ್ತವೋ ಏನೂ  ಕೇಳದೆ ಅವರಿಗೆ ಅಭಯ ಕೊಟ್ಟರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಆಶ್ರಯವೂ ಕೊಡಿಸಿದರು. ಒಂದುವಾರ ಅವರಿಗೆ ಎರಡು ಸಲ ಊಟ ಕಳುಹಿಸುವ ಸರದಿ ನಮ್ಮದಾಗಿತ್ತು.ದೇವಸ್ಥಾನದ ಈಶಾನ್ಯದ  ಮೂಲೆಯಲ್ಲಿ ಸ್ವಲ್ಪ ಖಾಲೀ ಜಾಗವಿತ್ತು. ಅಲ್ಲಿಯೇ ಅವರು ತಮ್ಮ ಚೀಲ ಇಟ್ಟುಕೊಂಡು, ಅಲ್ಲಿಯೇ ಇದ್ದ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದರು. ಅವರು ಅಷ್ಟೊಂದು ಪೂಜೆ ಪುಂಸ್ಕಾರಗಳು ಮಾಡಿದಂತೆ ಕಾಣಿಸುತ್ತಿರಲಿಲ್ಲ. ಯಾವಾಗಲೂ ಮೌನವಾಗಿ ಏನೋ ಯೋಚಿಸುತ್ತಿದ್ದವನಂತೆ ಇರುವವನು. ಆಗಾಗ, ಕೆಲವೊಮ್ಮೆ ಗೋಡೆಗೆ ಒರಗಿ ಮಲಗಿದ್ದೇನೋ  ಧ್ಯಾನ ಮಾಡುತ್ತಿದ್ದಾನೋ ತಿಳಿಯದ ಸ್ಥಿತಿಯಲ್ಲಿ ಇರುತ್ತಿದ್ದ.ಅಯ್ಯಪ್ಪಸ್ವಾಮಿ ದೇವಸ್ಥಾನ ನಮ್ಮ  ಕಾರ್ಯಕಲಾಪಕ್ಕೆ ಮುಖ್ಯವಾದ ಜಾಗಾ. ಅದು ದೊಡ್ಡ  ಜನಸಂದಣಿ ಇರುವ ದೇವಸ್ಥಾನ ವಲ್ಲ. ಆ ಪ್ರಾಜೆಕ್ಟ್ ನಲ್ಲಿ ಉದ್ಯೋಗಿಯೊಬ್ಬರು ಆ ದೇವಸ್ಥಾನಕ್ಕೆ ಧರ್ಮ ಕರ್ತ, ಪೂಜಾರಿ  ಎಲ್ಲಾ ಅವನೇ ಆಗಿ ನಡೆಸುತ್ತಿದ್ದನು. ಆ ದೇವಸ್ಥಾನ, ಅವರ ಮನೆ ಪೂಜಾ ಕೋಣೆಗೆ ತುಂಬಾ ದೊಡ್ಡದಾಗಿದಂತೆ,  ಮತ್ತು ಸಾಂಪ್ರದಾಯಿಕ ದೇವಸ್ಥಾನಗಳಿಗೆ ತುಂಬಾ ಚಿಕ್ಕದಾಗಿದಂತೆ ಕಾಣಿಸುತ್ತಿತ್ತು. ಅವರ ಮನೆ ಒಳೆಗೆಯಿಂದ ದೇವಸ್ಥಾನಕ್ಕೆ ದಾರಿಯಿತ್ತು. ದೇವಸ್ಥಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಪೂಜೆ, ನೈವೇದ್ಯ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರ ಮಗನ  ಹೆಸರು ಮಣಿಕಂಠ. ಅದೇನೇ ಇರಲಿ, ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯ ವರೆಗೂ ಅದು ಮಕ್ಕಳ ಆಟಗಳ  ಜಾಗಾವಾಗಿತ್ತು.ಶನಿವಾರ ಸಂಜೆ ಏಳುಗಂಟೆಗೆಲ್ಲಾ , ‘ಈಗಲಪೆಂಟ’ದಿಂದ ಒಬ್ಬ ಮಲಯಾಳ/ ತಮಿಳ ಭಜನ ತಂಡ ಬರುತ್ತಿತ್ತು. ಅಲ್ಲಿಯ ವರೆಗೂ ಅಲ್ಲಲ್ಲಿ ಆಟವಾಡುತ್ತಿದ್ದ ಮಕ್ಕಳೆಲ್ಲರು ಮನೆಗೆ  ಹೋಗಿ ಕೈಕಾಲೂ ತೊಳೆದುಕೊಂಡು ಬಂದು  ಭಜನೆಯಲ್ಲಿ ಭಾಗ ವಹಿಸುವವರು. ಘಂಟೆಸಾಲ ಅವರ ಶುಕ್ಲಾಂಬರಧರಂದಿಂದ ಪ್ರಾರಂಭವಾಗಿ “ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ”, “ಚಂದ್ರಶೇಖರ, ಚಂದ್ರಶೇಖರ” ಎಂಬ ಭಜನೆಗಳ ಮೂಲಕ  “ಒನ್ರಾಮ್ ತಿರುಪ್ಪಡಿ ಶರಣಂ ಪುನ್ನಯ್ಯಪ್ಪ” ಎಂದು  ಸಾಗುವ ಸೋಪಾನದ ಗೀತೆಯೊಂದಿಗೆ ಕೊನೆಗೊಳ್ಳುವುದು.  ಸೋಪಾನಗಳ ಹಾಡು ಉಂಬಾ ಉತ್ಸಾಹದಿಂದ  ತುಂಬಿ ತುಳುಕುತ್ತಿತ್ತು. ಪ್ರತಿಯೊಂದು ಸೋಪಾನಕ್ಕೆ ಒಂದು ಚರಣವಿದೆ. ಪ್ರತಿಚರಣ ಮುಗಿಯುತ್ತಿದ್ದಂತೆ, ಪ್ರಸಾದಕ್ಕೆ ಹತ್ತಿರವಾಗುತ್ತಿದ್ದ ತೃಪ್ತಿ. ನಡುವೆ ಕಾಲಕ್ಷೇಪಕ್ಕಾಗಿ ನಾನು ಶಿವ ಶಿವ ಶಂಕರ…  ಎನ್ನುತ್ತಾ ಭಕ್ತ  ಕನ್ನಪ್ಪ ಗೀತವನ್ನು ಹಾಡುತ್ತಿದ್ದೆ.  ಆ ಭಜನ ತಂಡಕ್ಕೇ ನನ್ನ ಹೆಸರು ಶಿವ ಶಿವ ಶಂಕರ ಎಂದೇ ಗುರುತು. ಕೊನೆಗೆ ಮಂಗಳಾರತಿಯ ನಂತರ ಅರ್ಚಕರು ಬಿಸಿಬಿಸಿ ಚಕ್ಕರ ಪೊಂಗಲಿಯನ್ನು  ಚಿಕ್ಕ ಚಿಕ್ಕ  ದೊನ್ನೆಗಳಲ್ಲೋ , ಎಲೆಗಳಲ್ಲೋ  ಹಂಚುವವರು.  ಅಂದು ರಾತ್ರಿ ಆರತಿ ಮುಗಿಸಿದ ಮೇಲೆ ತಿನ್ನುವ ಆ ಪ್ರಸಾದ ಅದ್ಬುತವಾದ ರುಚಿಯಿಂದ, ಆಹಾ… ಅನ್ನಿಸುವಷ್ಟು ರುಚಿಯಾಗಿ ಇರುತ್ತಿತ್ತು. ಬಹಳಷ್ಟು ಬಾರಿ  ಆ ಪ್ರಸಾದದ ಮೇಲೆ ಅನುರಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದರೆ  ಅದರಲ್ಲಿ ಸ್ವಲ್ಪವಾದರೂ ಸುಳ್ಳು ಇಲ್ಲ..ಹಾಗೆ ಆದಿವಾರದ ಬೆಳಿಗ್ಗೆ ತಮ್ಮ ತಮ್ಮ ಮನೆಗಳಲ್ಲಿ ತಾವು ತಿಂಡಿ ಮುಗಿಸಿಕೊಂಡು ಎಲ್ಲಿ ಆಟ ಆಡಬಹುದು, ಏನು ಆಡಬೇಕು ಎಂದು ಚರ್ಚಿಸಿತ್ತಿದ್ದೆವು. ಹಾಗೆ ನಾವು ಚರ್ಚಿಸಲು ಹೋಗುವ ಮೊತ್ತ ಮೊದಲಿನ ಪ್ರದೇಶ ಅಯ್ಯಪ್ಪಸ್ವಾಮಿ ದೇವಸ್ಥಾನವು.  ಆ ದಿನವೂ ಎಂದಿನಂತೆ ಎಲ್ಲರೂ ಗುಂಪು ಸೇರಿ ಯಾವಾವು ಆಟಗಳು ಆಡಬೇಕೋ ಚರ್ಚಿಕೊಳ್ಳುತ್ತಿದ್ದರೆ ಸಾಧುವು ನನ್ನನು ಆತ್ತ ಇತ್ತ  ನೋಡಿ  ಇಲ್ಲಿಬಾ ಎಂಬಂತೆ ಕೈ ಸನ್ನೆ ಮಾಡಿದ.  ನನ್ನೇ ಎಂದು ನಿರ್ಧರಿಸಿಕೊಂಡು ನಾನೇ ಅವಾರ ಕಡೆಗೆ ಹೋದ. ಅವರು ನನ್ನನ್ನು ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು, ಮೇಲಿನ ಜೇಬಿನಿಂದ ಒಂದು ರೂಪಾಯಿ ನೋಟು ತೆಗೆದು, ‘ಒಂದು ಗಣೇಶ್ ಬೀಡಿ ಕಟ್ಟು ತೆಗೆದುಕೊಂಡು ಬಾ ಮಗು. ಹಾಗೆ ನಿನಗೂ ಬೇಕಾದರೆ,  ಐದುಪೈಸೆಗೆ ಏನಾದರೂ  ಕೊಂಡುಕೋ’  ಎಂದು ಹೇಳಿ ಆ ರೂಪಾಯನ್ನು ಕೈಯಲ್ಲಿ ಇಟ್ಟ.ನಾನು ಏನೂ ಯೋಚಿಸದೆಯೇ  ಅಂಗಡಿಯ ಕಡೆಗೆ ಓಡಿದೆ. ಮಲ್ಲಿಕಾರ್ಜುನ ಟಾಕೀಸುಗೆ ತಿರುಗುವ ಮೂಲೆಯಲ್ಲಿ ಒಂದು ಅಂಗಡಿ ಇತ್ತು. ಅಲ್ಲೇ ನಾವು ರೂಢಿಯಾಗಿ ಸಾಮಾನುಗಳನ್ನು ತಂದುಕೊಳ್ಳುತ್ತಿದ್ದೆವು. ಆ ಅಂಗಡಿಯಲ್ಲಿ ಇಬ್ಬರು ಸಹೋದರರು ಇರುತ್ತಿದ್ದರು. ನಾವು ಅವರನ್ನು ಚಿಕ್ಕ ಶೆಟ್ಟಿ  ಮತ್ತು ದೊಡ್ಡ ಶೆಟ್ಟಿ ಎಂದು ಕರೆದುಕೊಳ್ಳುತಿದ್ದೆವು.   .ಚಿಕ್ಕ ಶೆಟ್ಟಿ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾ, ಉತ್ತಮ ಗ್ರಾಹಕರ ಪ್ರಜ್ಞೆಯನ್ನು ತೋರಿಸುವವನು. ನಾನು ಬೀಡಿ ಕೇಳಿದೊಡನೆ ಒಂದು ಕಟ್ಟು ಕೊಟ್ಟು ಏನೋ ಕೇಳುತ್ತಿದ್ದಾಗ ನಾನು ಓಡುತ್ತಾ ಬಂದುಬಿಟ್ಟೆ. ದೇವಸ್ಥಾನದಲ್ಲಿ ಗಣೇಶ್ ಬೀಡಿಗಳ ಕಟ್ಟು, ಉಳಿದ ಚಿಲ್ಲರೆ, ಸಾಧುವಿಗೆ ನೀಡಿ, ನನ್ನ ಆಟಗಳಲ್ಲಿ ನಾನು ಮುಳುಗಿಹೋದೆ.ಒಂದು ವಾರದ ನಂತರ, ಅಪ್ಪ ಯಥಾಲಾಪವಾಗಿ  ಪಡಶಾಲೆಯಲ್ಲಿ ಇದ್ದ ನನ್ನನ್ನು ಕರೆದು “ಏನೋ ಬೀಡಿ ಸೇದುತ್ತಿದ್ದೀಯಾ?”  ಎಂದು ಸ್ವಲ್ಪ ಕಟುವಾಗಿಯೇ ಕೇಳಿದರು.  ನನ್ನ ಬಾಯಿಂದ ಮಾತು ಬರಲಿಲ್ಲ. ಅಷ್ಟರಲ್ಲಿ ಅಮ್ಮನೂ ಬಂದಳು. ವಿಷಯ ತಿಳಿದುಕೊಂಡು, “ಛ, ಚ ಅವನು ಏಕೆ ಸೇದುತ್ತಾನೆ? ” ಎಂದು ನನ್ನನ್ನು ಸಮರ್ಥಿಸಿದಳು.ಮತ್ತೆ ತಾನೇ “ಇಷ್ಟಕ್ಕೂ ನಿಮಗೆ ಯಾರು ಹೇಳಿದರು?” ಎಂದು ಕೇಳಿದಾಗ, ಅಪ್ಪ “ಯಾರೋ ಹೇಳಿದರೆ ನಾನೇಕೆ ನಂಬುತ್ತೇನೆ,  ಯಾರ ಹತ್ರ  ಇವನು ಖರೀದಿಸಿದನೋ  ಅವನೇ, ಚಿಕ್ಕಶೆಟ್ಟಿ ಹೇಳಿದ” ಎಂದ.ನನಗೆ ವಿಷಯವು ಅರ್ಥವಾಯಿತು. ನಾನು ಮುಗುಳ್ನಗುತ್ತಾ “ಓಹ್, ಅದಾ, ದೇವಸ್ಥಾನದಲ್ಲಿ ಸ್ವಾಮಿ ಇದ್ದಾನಲ್ಲ, ಕಳೆದ ಭಾನುವಾರ ಅವರು ಖರೀದಿಸಿಕೊಂಡು ಬಾ ಅಂತ ಹೇಳಿದರು. ಆಗ ನಾನು  ಖರೀದಿಸಿದೇ. ನಾನು ಕುಡಿಯಲು ಅಲ್ಲ.”ಎಂದೆ.ಅಪ್ಪ ನಂಬುವಂತೆ ಕಾಣಲಿಲ್ಲ. “ನೀವು ತಪ್ಪು ಮಾಡಿದ್ದು ಅಲ್ಲದೆ, ಅಪರಾಧವನ್ನು ಇನ್ನೊಬ್ಬರಿ ಮೇಲೆ ಹಾಕುವೇ ” ಎಂದು ಅವರು ಪ್ರತಿದಾಳಿ ನಡೆಸಿದರು.ಆ ಮಾತುಗಳಿಗೆ ನನ್ನ ಮುಖವು ಕೆಂಪಾಯಿತು. ದುಃಖವಾಯಿತು. ಕೀಚಲು ಧ್ವನಿಯಲ್ಲಿ ನಮ್ಮಮ್ಮಯೊಂದಿಗೆ, “ಬೇಕಾದರೆ ಈಗಲೇ ದೇವಸ್ಥಾನಕ್ಕೆ ಹೋಗೋಣ. ಅವರಿಂದಲೇ ಮಾತನಾಡಿಸುವೆ” ಎಂದೆ.ನನ್ನ  ನಿರಪರಾಧತ್ವ ಮೇಲೆ ನನಗಿಂತಲೂ ಜಾಸ್ತಿ ನಂಬಿಕೆ ಇರುವ ಅಮ್ಮ ತಕ್ಷಣ-“ಹೋಗಿ ಅವರನ್ನೇ ಕೇಳೋಣ” ಎಂದಳು.ನನ್ನ ತಂದೆಯೂ ಅಂಗಿ ಧರಿಸುತ್ತಾ-“ತಕ್ಷಣ ಹೋಗಿ ಮಹದೇವಪ್ಪ ಮಾಮನವರನ್ನು ಕರೆದುಕೊಂಡುಬಾ ಹೋಗು, ಇಲ್ಲಿ ಇದ್ದಂತೆ ಬರಬೇಕು. ಏಕೆ ಎಂದು ಕೇಳಿದರೆ ಬಂದಾಗಾ ಅಪ್ಪ ಹೇಳುತ್ತರಂತೆ ಎಂದು ಹೇಳು. ನಾವು ದೇವಸ್ಥಾನದ ಹೊರಗೆ ಇರುತ್ತೇವೆ” ಎಂದೆ.ನಾನು ಮಿಂಚಿನ ವೇಗದಿಂದ ಹೋಗಿ ಹತ್ತು ನಿಮಿಷದಲ್ಲಿ ಮಹದೇವಪ್ಪ ಮಾಮಾನ ಜೊತೆ ದೇವಸ್ಥಾನಕ್ಕೆ ಬಂದೆ. ಅಪ್ಪ ಮಾಮನೊಂದಿಗೆ ಏನೋ ಮಾತಾಡಿದರು. ಮಾಮ, ಹಿಂದೆ ಅಪ್ಪ, ಆ ಹಿಂದೆ ಅಮ್ಮ, ನಾನು ದೇವಸ್ಥಾನದ ಒಳಗೆ ಹೋಗಿ ಸ್ವಾಮಿ ಕುಳಿತಿದ್ದ ಜಾಗಕ್ಕೆ ಸೇರೀದೆವು .ನಮ್ಮ ಬರುವಿಕೆಯನ್ನು ನಿಜಕ್ಕೆ ಊಹಿಸದ ಅವರು, ‘ರಾತ್ರಿ ಊಟ ತೆಗೊಂಡು ಯಾರೋ ಭಕ್ತರು ಬರಬೇಕಾದ ಸಮಯದಲ್ಲಿ ಇವರು ಬಂದಿದ್ದರೇನು?’ ಎಂದು ಆಶ್ಚರ್ಯ ಹೋದ. ಸ್ವಲ್ಪ ತಬ್ಬಿಬ್ಬಾದ.ಮಹದೇವಪ್ಪ ಮಾಮ ಅವು ಇವು ಮಾತಾಡಿ-“ನೀವು ಈ ಹುಡುಗನೊಂದಿಗೆ ಹೋದ ವಾರ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು Read Post »

ಕಥಾಗುಚ್ಛ

“ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ”ಸಣ್ಣ ಕಥೆ,ವೀಣಾ ಹೇಮಂತ್ರ ಗೌಡ ಪಾಟೀಲರಿಂದ

ಕಥಾ ಸಂಗಾತಿ ವೀಣಾ ಹೇಮಂತ್ರ ಗೌಡ ಪಾಟೀಲ “ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ” ನಸುಕಿನ 5:ರ ಸಮಯ. ಮಾಡಿದ ಎಲ್ಲಾ ಅಡುಗೆಗಳನ್ನು ಒಂದೆಡೆ ಜೋಡಿಸಿದ ಸುಮಾಳ ಬೆನ್ನು ನೋವಿನಿಂದ ಮುಲುಗುಟ್ಟುತ್ತಿದ್ದರೆ ದೇಹ ಒಲೆಯ ಝಳದ ಜೊತೆಗೆ ಜ್ವರದ ತಾಪದಿಂದ ಕಾಯುತ್ತಿತ್ತು. ಅಡುಗೆ ಮನೆಯ ಬಾಗಿಲಲ್ಲಿ ಬಂದು ನಿಂತ ಅತ್ತೆ ರಮಾ ಬಾಯಿ ಎಲ್ಲ ಕೆಲಸ ಮುಗಿಯಿತೆ? ಎಂದು ಬಿಗುಮಾನದಿಂದ ಕೇಳಿದರು. ತಲೆಯೆತ್ತದೆ ಗೋಣಾಡಿಸಿದ ಸೊಸೆ ಸುಮಳನ್ನು ನೋಡಿ ಅವರ ಅತ್ತೆತನದ ಹಮ್ಮು ಸಂತೃಪ್ತಿಗೊಂಡಿತು.ತುಸು ದರ್ಪದ ಧ್ವನಿಯನ್ನು ಹೆಚ್ಚಿಸಿ ಬರಿ ಇಡ್ಲಿ ವಡೆ ಚಟ್ನಿ ಸಾಂಬಾರ್ ಸಾಲುವುದಿಲ್ಲ ಒಂದಷ್ಟು ಕೇಸರಿಬಾತ್ ಹಾಗೂ ಉಪ್ಪಿಟ್ಟು ಕೂಡ ಮಾಡಿಬಿಡು ಸುಮಾ ಎಂದು ಹೇಳಿದರು. ಈಗಾಗಲೇ ದೇಹವೆಲ್ಲಾ ಬಿಸಿಯಾಗಿ ಬೆನ್ನು ಹೊಡೆತದಿಂದ ಒದ್ದಾಡುತ್ತಿದ್ದ ಸುಮಾಳ ಮುಖದಲ್ಲಿ ವ್ಯಂಗ್ಯದ ನಗು ಮೂಡಿತು. ಮನದಲ್ಲಿ ನಿಶ್ಚಯ ಮಡುಗಟ್ಟಿತು. ಆಯ್ತು ಎಂದು ತಲೆ ಆಡಿಸಿದ ಆಕೆ ಡಬ್ಬದಿಂದ ರವೆಯನ್ನು ತೆಗೆದು ಹುರಿಯಲು ಆರಂಭಿಸಿದಳು. ರವೆಯ ಕಣಗಳು ನಿಧಾನವಾದ ಉರಿಗೆ ಹದವಾಗಿ ಹುರಿಯಲ್ಪಟ್ಟು ಘಮ್ಮನೆಯ ಸುವಾಸನೆಯನ್ನು ಹೊರಡಿಸಿದ್ದರೆ ಅಸಹನೆಯನ್ನು ಮೂಡಿಸುವ ಕಳೆದ ನಾಲ್ಕು ವರ್ಷಗಳ ಆಕೆಯ ವೈವಾಹಿಕ ಬದುಕಿನ ಪುಟಗಳು ಒಂದೊಂದಾಗಿ ಮೊದಲಿನಿಂದ ತೆರೆಯಲು ಆರಂಭಿಸಿದ್ದವು.ಜಿಲ್ಲಾ ಕೇಂದ್ರವೊಂದರ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಮುಖ್ಯ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಳನ್ನು ನೋಡಲು ಬಂದ ಸುದೀಪ್ ಗೆ ಮೆಚ್ಚುಗೆಯಾದದ್ದು ಆಕೆಯ ಸ್ಳಿಗ್ಧ ಸೌಂದರ್ಯವಾದರೆ ಅತ್ಯಂತ ಸೌಮ್ಯ ಮುಖಭಾವವನ್ನು ಕಂಡ ಸುದೀಪನ ತಾಯಿ ತನ್ನ ತಾಳಕ್ಕೆ ತಕ್ಕಂತೆ ಯುವತಿಯನ್ನು ಕುಣಿಸಬಹುದು ಎಂಬ ಭಾವ ಒಪ್ಪಿಗೆ ಸೂಸಲು ಕಾರಣವಾಗಿತ್ತು. ತಾಯಿ ಮತ್ತು ಮಗನ ಮಾತಿಗೆ ಎದುರಾಡದ ತಂದೆ ತಮ್ಮ ಸಮ್ಮತಿಯನ್ನು ಸೂಚಿಸಿದರು.ಇರುವುದರಲ್ಲಿಯೇ ಚೆನ್ನಾಗಿ ಮದುವೆ ಮಾಡಿಕೊಟ್ಟ ಸುಮಳ ಪಾಲಕರು ತಮ್ಮ ತಲೆಯ ಮೇಲಿನ ಹೊರೆ ಇಳಿದ ಭಾವವನ್ನು ಅನುಭವಿಸಿದರು. ತಾಯಿಯ ತವರುಮನೆಯಿಂದ ಬಂದು ಒಂದು ತುಂಬಿಟ್ಟ ಸೇರನ್ನು ಒದ್ದು ಬಲಗಾಲಿಟ್ಟು ಮನೆಯನ್ನು ಪ್ರವೇಶಿಸಿದ ಸೊಸೆಯ ಕೈಯಿಂದ ಕುಟುಂಬಕ್ಕೆ ಸಂಬಂಧಿಸಿದ ತಿಜೋರಿಯಲ್ಲಿ ಸುಮಾಳ ಆಸ್ತಿ ಪತ್ರ ಹಾಗೂ ಒಡವೆಗಳನ್ನು ಇಸಿದುಕೊಂಡು ಆಕೆಯ ಅತ್ತೆ ಭದ್ರಪಡಿಸಿದರು. ಮಧುಚಂದ್ರದ ಅವಧಿ ಮುಗಿಯುವ ಮೊದಲೇ ಸುಮಾಳ ಹರಿವಿಗೆ ಬಂದದ್ದು ಆಕೆಯ ಪತಿ ತನ್ನ ತಾಯಿಯ ಮಾತನ್ನು ತೆಗೆದುಹಾಕುವುದಿಲ್ಲ ಎಂಬುದರ ಅರಿವಾಗಿತ್ತು. ಮಾವ ಕೂಡ ಕೋಲೆ ಬಸವನಂತೆ ತಲೆಯಾಡಿಸುವುದು ಆಕೆಯ ಅರಿವಿಗೆ ಬಂದಿತ್ತು. ಸ್ವಭಾವತಃ ಮೆದುವಾಗಿದ್ದ ಸುಮಾ ತನ್ನ ಮನೆಯ ಪರಿಸ್ಥಿತಿಗಿಂತ ಅಷ್ಟೇನೂ ಭಿನ್ನವಾಗಿಲ್ಲದ ಗಂಡನ ಮನೆಗೆ ಸಹಜವಾಗಿಯೇ ಒಗ್ಗಿಕೊಂಡಳು. ಆದರೆ ದಿನ ದಿನಕ್ಕೆ ಅತ್ತೆಯ ಕಠಿಣತೆ ಹೆಚ್ಚಾಗುತ್ತಾ ಹೋಯಿತು ಹಾಗೂ ಗಂಡ ತಾಯಿಯೊಂದಿಗೆ ಹೊಂದಿಕೊಂಡು ಹೋಗು, ತಾಯಿ ಹೇಳಿದಂತೆ ಕೇಳು,ಅಮ್ಮನ ಮನಸ್ಸಿಗೆ ಬೇಸರವಾಗದಂತೆ ನೋಡಿಕೋ ಎಂದು ಹೇಳುವುದನ್ನು ಕೇಳಿ ಆಕೆಗೆ ಬೇಸರವಾಗತೊಡಗಿತು. ಅದರಲ್ಲೂ ಅತ್ತೆ ತನ್ನನ್ನು ಮನೆಯಲ್ಲಿ ಎಲ್ಲರ ಸೇವೆ ಮಾಡುವ ಸೇವಕಿ ಎಂಬಂತೆ ಬಿಂಬಿಸತೊಡಗಿದಾಗ ಆಕೆಯ ಬೇಸರ ನೋವಿಗೆ ಎಡೆ ಮಾಡಿಕೊಟ್ಟಿತು. ದಿನಗಳೆದಂತೆ ಅತ್ತೆಯ ದರ್ಪ, ಮಾವನ ಕಾಠಿಣ್ಯ ಹಾಗೂ ಗಂಡನ ನಿಷ್ಕ್ರಿಯತೆ ಆಕೆಯಲ್ಲಿ ಒಂದು ಬಗೆಯ ಬೇಸರವನ್ನು ಉಂಟು ಮಾಡಿ, ಆಕೆ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಳು. ಇದರ ಜೊತೆಗೆ ಮಕ್ಕಳಾಗದೇ ಇರುವುದು ಆಕೆಯ ಬೇಸರವನ್ನು ಮತ್ತಷ್ಟು ಹೆಚ್ಚಿಸಿತ್ತು.ಕೆಲ ತಿಂಗಳುಗಳ ಹಿಂದೆ ತವರಿಗೆ ಹೋದ ಆಕೆ ತನ್ನೊಂದಿಗೆ ಓದುತ್ತಿದ್ದ ತನ್ನ ಆತ್ಮೀಯ ಸ್ನೇಹಿತೆಯೊಂದಿಗೆ ಈ ಕುರಿತು ನೋವನ್ನು ತೋಡಿಕೊಂಡಾಗ ಸ್ನೇಹಿತೆ ಹೇಳಿದ ಮಾತುಗಳು ಆಕೆಯ ಕಣ್ಣಿಗೆ ಕಟ್ಟಿದ ಪರದೆಯನ್ನು ಕೊಂಚ ತೆರೆಯಿತು.ತನ್ನ ತಾಯಿಯ ತವರು ಮನೆಯಿಂದ ತನಗೆ ದೊರೆತ ಆಸ್ತಿಯ ಕಾಗದ ಪತ್ರಗಳು, ಒಡವೆ ವಸ್ತುಗಳು ಅತ್ತೆಯ ಅಲಮಾರಿಯಲ್ಲಿ ಇರುವುದು ಹಾಗೂ ಆಕೆ ಅದನ್ನು ತಮ್ಮ ಕುಟುಂಬಕ್ಕೆ ಕೊಡುಗೆಯಾಗಿ ಬಂದದ್ದು ಎಂದು ಹೇಳುವ ಮೂಲಕ ಅದನ್ನು ಕುಟುಂಬದ ಆಸ್ತಿಯಾಗಿ ಪರಿಗಣಿಸುತ್ತಿರುವುದು ತಪ್ಪು ಎಂಬುದು ಆಕೆಗೆ ಅರಿವಾಯಿತು.ಮರಳಿ ಬಂದ ನಂತರ ಅದೊಂದು ಬಾರಿ ಚಿನ್ನದ ಒಡವೆಗಳನ್ನು ಸಂಬಂಧಿಕರ ಮನೆಯ ಮದುವೆಗೆ ಹೋದಾಗ ಅತ್ತೆಯ ತಿಜೋರಿಯ ಸೇಫ್ ನಿಂದ ಹೊರ ತೆಗೆದು ಉಪಯೋಗಿಸಿ ಮರಳಿ ಎತ್ತಿಡುವಾಗ ತನ್ನೆಲ್ಲ ಶೈಕ್ಷಣಿಕ ಕಾಗದ ಪತ್ರಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಸ್ತಿಯ ಪತ್ರಗಳನ್ನು ಹಾಗೂ ಒಡವೆಗಳನ್ನು ಸುಮಾ ಎತ್ತಿಟ್ಟುಕೊಂಡಳು. ಇಂದು ಅತ್ತೆಯ ಕಾಠಿಣ್ಯದ ಆಜ್ಞೆಗಳು ಆಕೆಯ ಮನಸ್ಸಿನಲ್ಲಿ ಹರಳುಗಟ್ಟುತ್ತಿದ್ದ ಯೋಚನೆಗಳಿಗೆ ಅಂತಿಮ ಸ್ವರೂಪವನ್ನು ನೀಡಿದವು ಅಂತೆಯೇ ಕೇಸರಿಬಾತ್ ಮತ್ತು ಉಪ್ಪಿಟ್ಟನ್ನು ಮಾಡಿ ಪೂರೈಸಿ ಎಲ್ಲವನ್ನು ಒಂದೆಡೆ ಟೇಬಲ್ ಮೇಲೆ ಜೋಡಿಸಿ ಇಟ್ಟ ಆಕೆ ಅದರ ಬಳಿ ತಾನು ಮನೆ ಬಿಟ್ಟು ಹೋಗುತ್ತಿರುವುದಾಗಿ ಬರೆದ ಕಾಗದವೊಂದನ್ನು ಇಟ್ಟಳು.ತೀವ್ರ ಆಯಾಸದಿಂದ ತನ್ನ ಕೋಣೆಗೆ ಬಂದ ಆಕೆ ಸ್ನಾನ ಮಾಡಿ ಆರಾಮದಾಯಕ ಉಡುಪೊಂದನ್ನು ಧರಿಸಿ ಒಂದಷ್ಟು ಬಟ್ಟೆಗಳನ್ನು, ಹಾಗೂ ಒಳಉಡುಪುಗಳನ್ನು  ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಅವಶ್ಯಕ ಕಾಗದ ಪತ್ರಗಳನ್ನು ಜೋಡಿಸಿಟ್ಟುಕೊಂಡು ದೇವರ ಕೋಣೆಗೆ ಬಂದು ದೀಪವನ್ನು ಮುಡಿಸಿ ದೇವರಿಗೆ ನಮಸ್ಕರಿಸಿ ದೃಢ ನಿರ್ಧಾರದಿಂದ ತನ್ನ ಬ್ಯಾಗಿನೊಂದಿಗೆ ಮನೆಯ ಹೊರಗೆ ಕಾಲಿಟ್ಟಳು.ಮನೆಯ ಬಾಗಿಲನ್ನು ದಾಟಿ ರಸ್ತೆಗೆ ಬರುತ್ತಿದ್ದಂತೆಯೇ ಎದುರಿಗೆ ಕಂಡ ಆಟೋವೊಂದನ್ನು ಕೂಗಿ ಕರೆದ ಆಕೆ ಢವಗುಡುತ್ತಿದ್ದ ಎದೆಯ ಬಡಿತವನ್ನು ಸ್ಥಿಮಿತಕ್ಕೆ ತರಲು ಪ್ರಯತ್ನಿಸುತ್ತಾ ಅದರಲ್ಲಿ ಕುಳಿತು ರೈಲು ನಿಲ್ದಾಣಕ್ಕೆ ಹೋಗುವಂತೆ ನಿರ್ದೇಶಿಸಿ ಹಿಂದಕ್ಕೊರಗಿ ಕುಳಿತುಕೊಂಡಳು.ಇತ್ತ ಮನೆಯಲ್ಲಿ ಆಕೆಯ ಸುಳಿವಿರದೆ ಮನೆಯ ಎಲ್ಲೆಡೆ ಹುಡುಕಲು ಆರಂಭಿಸಿದರು. ಟೇಬಲ್ ನ ಮೇಲಿದ್ದ ಕಾಗದವನ್ನು ಓದಿದ ಮಾವ ನಖಶಿಖಾಂತ ಬೆವೆತರೆ ಅತ್ತೆ ಕ್ರೋಧದಿಂದ ತಪ್ತಳಾದಳು.ಗಂಡ ಆಕೆಗೆ ಕರೆ ಮಾಡಿದ. ಕರೆಯನ್ನು ಆಕೆ ಸ್ವೀಕರಿಸಿದ ಕೂಡಲೇ ‘ಎಲ್ಲಿರುವೆ ಸುಮಾ, ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದಾರೆ’ ಎಂದು ಕೇಳಿದ. ನಾನು ಮನೆ ಬಿಟ್ಟು ಹೊರಟಿದ್ದೇನೆ. ನಿಮಗೆ ಬೇಕಾದ ಅಡುಗೆಯನ್ನು ಮಾಡಿ ಟೇಬಲ್ ಮೇಲೆ ಇಟ್ಟಿದ್ದೇನೆ ಎಂದು ಅತ್ಯಂತ ಶಾಂತವಾಗಿ ಆಕೆ ಹೇಳಿದಳು.‘ಮನೆಗೆ ಅಷ್ಟೊಂದು ಜನ ಬರುತ್ತಿದ್ದಾರೆ ಅಂತಹದರಲ್ಲಿ ಮನೆಯ ಸೊಸೆಯಾಗಿ ನೀನೇ ಇಲ್ಲವೆಂದರೆ ಹೇಗೆ ?’ ಎಂದು ಸುದೀಪ್ ಕೇಳಿದ. ನಿಮಗೆ ಬೇಕಾಗಿರುವುದು ಮನೆಯ ಸೊಸೆಯಲ್ಲ ಕೇವಲ ಕೆಲಸದಾಕೆ. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಆ ಮನೆಯ ಸೊಸೆಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಕೆಲಸದವಳಾಗಿ ಬದುಕಿದ್ದೆ ಎಂಬುದು ನಿಮಗಿಂತ ಚೆನ್ನಾಗಿ ಬೇರೆ ಯಾರಿಗೆ ಗೊತ್ತು ? ಎಂದು ಆಕೆ ತುಸು ತೀಕ್ಷ್ಣವಾಗಿ ಹೇಳಿದಳು. ಆಕೆಯ ಧ್ವನಿಯಲ್ಲಿದ್ದ ತೀಕ್ಷ್ಣತೆ ಹಾಗೂ ಗಟ್ಟಿತನವನ್ನು ಗುರುತಿಸಿದ ಆಟೋ ಡ್ರೈವರ್ ಜೋರಾಗಿ ಕೇಳಿಸುತ್ತಿದ್ದ ಸ್ಪೀಕರ್ ನ ಕಿವಿಯನ್ನು ಮೆಲ್ಲನೆ ತಿರುವಿ ನಂತರ  ತನ್ನ ಆಟೋ ನಿಲ್ಲಿಸಿ ‘ಮೇಡಂ, ಎಲ್ಲಿಗೆ ಹೋಗಬೇಕು? ಎಂದು ತಗ್ಗಿದ ದನಿಯಲ್ಲಿ ಕೇಳಿದ.ಕೂಡಲೇ ಎಚ್ಚೆತ್ತು ಸುಮಾ ‘ರೈಲ್ವೇ ಸ್ಟೇಷನ್ ಗೆ ನಡೆಯಿರಿ ಅಣ್ಣ ‘ ಎಂದು ಹೇಳಿದಳು. ಸ್ಟೇಷನ್ ಗೆ ಬಂದ ಆಕೆ ಮೈಸೂರಿಗೆ ತೆರಳುವ ರೈಲನ್ನು ಏರಿ ಕುಳಿತಳು. ಅತ್ತೆಯ ಮನೆಯ ಯಾವೊಬ್ಬ ಸದಸ್ಯರ ಫೋನ್ ಕರೆಯನ್ನು ಆಕೆ ಸ್ವೀಕರಿಸಲಿಲ್ಲ…. ಗಂಡನದ್ದು ಕೂಡ.ರೈಲು ಮೈಸೂರನ್ನು ತಲುಪಿದಾಗ ಆಟೋ ಏರಿದ ಆಕೆತನ್ನ ಚಿಕ್ಕಮ್ಮನ ಮನೆಗೆ ಬಂದು ಬಾಗಿಲು ತಟ್ಟಿದಳು. ಬಾಗಿಲನ್ನು ತೆರೆದ ಚಿಕ್ಕಮ್ಮ ಈಕೆಯನ್ನು ನೋಡಿದ ಕೂಡಲೇ ಆಶ್ಚರ್ಯದಿಂದ ನಿಂತಳು. ನಾನು ಮತ್ತೆ ಮರಳಿ ಗಂಡನ ಮನೆಗೆ ಹೋಗಲು ಸಿದ್ದವಿಲ್ಲ ಚಿಕ್ಕಮ್ಮ ಎಂದು ಹೇಳಿದಾಗ ಅಕ್ಕನ ಮಗಳನ್ನು ಮೆದುವಾಗಿ ತಬ್ಬಿ ಒಳಗೆ ಕರೆದೊಯ್ದ ಚಿಕ್ಕಮ್ಮ ಆಕೆಗೆ ಸಾಂತ್ವನ ಹೇಳಿ ಮುಖ ತೊಳೆದು ಬರಲು ಹೇಳಿ ಬಿಸಿ ತಿಂಡಿಯನ್ನು ಹಾಕಿ ಕೊಟ್ಟರು. ತಿಂಡಿಯನ್ನು ತಿನ್ನುತ್ತಲೇ ನಡೆದ ವಿಷಯವನ್ನು ಆಕೆ ಹೇಳಿದಳು.ಅಂದು ಅವರ ಕುಟುಂಬದ ವಾಟ್ಸಪ್ ಗುಂಪಿನಲ್ಲಿಆ ದಿನ ಮುಂಜಾನೆ ಸುಮಳ ಅತ್ತೆಯ ಮನೆಯಲ್ಲಿ  ನಡೆದ ವಿಷಯದ ಚರ್ಚೆ ಆಗಲಾರಂಭಿಸಿತು. ಕುಟುಂಬದ ಹಿರಿಯರು ಮನೆಯ ವಿಷಯವನ್ನು ಹೀಗೆ ಹೊರಗೆ ತರುವ ಅವಶ್ಯಕತೆ ಇದೆ ಎಂಬಂತೆ ಗುಂಪಿನಲ್ಲಿ ಚರ್ಚಿಸಿದಾಗ ಸುಮಾಳ ಮುಖದಲ್ಲಿ ವಿಷಾದದ ಕಿರುನಗೆ ಮೂಡಿತು. ಮನೆಯ ನಾಲ್ಕು ಗೋಡೆಗಳ ಒಳಗೆ ಈ ಕುರಿತು ಚರ್ಚಿಸಲು ಮನೆಯವರು ತಯಾರಿರಲಿಲ್ಲವಾದ ಕಾರಣ  ಮನೆಯ ಸಮಸ್ಯೆ ನಾಲ್ಕು ಜನರಿಗೆ ತಿಳಿಯುವಂತೆ ಮಾಡಬೇಕಾಯಿತು ಎಂದು ಬರೆದ ಆಕೆ ಅದನ್ನು ಗುಂಪಿನಲ್ಲಿ ಹಂಚಿಕೊಂಡಳು.. ಎಲ್ಲರ ಬಾಯಿಗೆ ಬೀಗ ಬಿದ್ದಂತಾಯಿತು.ಮುಂದಿನ ಎರಡು ದಿನಕ್ಕೆ ಮೈಸೂರಿಗೆ ಬಂದಿಳಿದ ಸುದೀಪ್ ಆಕೆಯ ಮನವೊಲಿಸಲು ಪ್ರಯತ್ನಿಸಿದ. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ತನ್ನ ತಾಯಿಯ ಕುರಿತು ಮಾತ್ರ ಯೋಚಿಸಿದ್ದ ಪತಿಯನ್ನು ನಂಬಲು ಸುಮ ಸಿದ್ಧವಿರಲಿಲ್ಲ. ನಿರಾಶನಾಗಿ ಹಿಂದಿರುಗಿದ ಪತಿ. ಮತ್ತೆ ಒಂದು ವಾರದ ಬಳಿಕ ಮರಳಿ ಬಂದ. ಆತನ ಮುಖದಲ್ಲಿ ಗಾಂಭೀರ್ಯವಿತ್ತು. ಕೇವಲ ಒಂದೇ ವಾರದಲ್ಲಿ ಹತ್ತು ವರ್ಷ ಹೆಚ್ಚು ವಯಸ್ಸಾದಂತೆ ತೋರುತ್ತಿದ್ದ ಆತ ಈ ಬಾರಿ ಆಕೆಯನ್ನು ಮರಳಿ ಬಾ ಎಂದು ಅಂಗಲಾಚಲಿಲ್ಲ. ಬದಲಾಗಿ ತಾನು ತಮ್ಮಿಬ್ಬರ ಕುರಿತು ಮಾತನಾಡಿದ್ದು ಇನ್ನು ಮುಂದೆ ಆಕೆಯ ಎಲ್ಲ ಚಟುವಟಿಕೆಗಳಿಗೆ ಬೆಂಬಲವಾಗಿ ನಿಲ್ಲುವ, ಆಕೆಗೆ ಬೇಕಾದ ಎಲ್ಲಾ ಅಗತ್ಯ ಸಹಾಯಗಳನ್ನು ನೀಡುವುದಾಗಿ ಹೇಳಿದ. ಆಕೆಗೆ ತನ್ನೊಂದಿಗೆ ಬಾಳಲು ಇಷ್ಟವಿಲ್ಲ ಎಂದಾದರೆ ವಿಚ್ಛೇದನ ನೀಡಲು ಕೂಡ ಸಿದ್ದ ಎಂದು ಹೇಳಿದ.‘ ನನಗೆ ಯೋಚಿಸಲು ಕೊಂಚ ಸಮಯ ಬೇಕು’ ಎಂದಷ್ಟೇ ಹೇಳಿದ ಆಕೆಯ ಮಾತನ್ನು ಗೌರವಿಸಿ ಮರಳಿ ಊರಿಗೆ ಹೊರಟು ಹೋದ. ಒಂದೆರಡು ವಾರಗಳು ಕಳೆದ ಬಳಿಕ ತನ್ನ ಚಿಕ್ಕಮ್ಮನ ಸಹಾಯದಿಂದ ಆಕೆ ಉದ್ಯೋಗಸ್ಥ ಜನರಿಗೆ ಕ್ಯಾರಿಯರ್ ಊಟ ತಲುಪಿಸುವ ಕೆಲಸವನ್ನು ಆರಂಭಿಸಿದಳು. ಮೊದಲ ವಾರ ಕೇವಲ ಎಂಟು ಜನರಿಂದ ಆರಂಭವಾದ ಆಕೆಯ ಕ್ಯಾರಿಯರ್ ಊಟದ ಸರ್ವಿಸ್ ಕೆಲವೇ ವಾರಗಳಲ್ಲಿ 40 ರಿಂದ 50 ಜನರಿಗೆ ವಿಸ್ತಾರವಾಯಿತು. ಕೈಯಲ್ಲಿ ಎರಡರಿಂದ ಮೂರು ಆಳುಗಳನ್ನು ಕೆಲಸಕ್ಕೆ ಇಟ್ಟುಕೊಂಡ ಆಕೆ ಇದೀಗ ತುಸು ದೊಡ್ಡ ಪ್ರಮಾಣದಲ್ಲಿ ಮನೆಯ ಹಿಂಭಾಗದಲ್ಲಿ ಶೆಡ್ ಹಾಕಿಸಿ ಅಲ್ಲಿ ರುಚಿ ಹಾಗೂ ಶುಚಿಗೆ ಹೆಸರಾದ ಪುಟ್ಟ ಕ್ಯಾರಿಯರ್ ಸರ್ವಿಸನ್ನು ಆರಂಭಿಸಿದರು.ಪ್ರತಿ ಶನಿವಾರ ಸಾಯಂಕಾಲ ಬರುತ್ತಿದ್ದ ಸುದೀಪ ಸಲಹೆ ಸೂಚನೆಗಳನ್ನು ಹಾಗೂ ಸಹಾಯ ಸಹಕಾರಗಳನ್ನು ನೀಡುತ್ತಿದ್ದ. ತಾನೇ ಲಿಸ್ಟ್ ಮಾಡಿಕೊಂಡು ಆಕೆಯ ಕೇಟರಿಂಗ್ ಕೆಲಸಕ್ಕೆ ಬೇಕಾಗುವ ಪದಾರ್ಥಗಳನ್ನು ತಂದು ಕೊಡುತ್ತಿದ್ದ… ಆದರೆ ಅವರಿಬ್ಬರ ಮಧ್ಯದಲ್ಲಿ ಇದ್ದುದು ದಾಂಪತ್ಯವಲ್ಲ ಕೇವಲ ಸ್ನೇಹ ಭಾವ. ಇದೀಗ ಆತನಲ್ಲಿ ಪತಿಯ ಜವಾಬ್ದಾರಿಯ ಅರಿವು ಮೂಡಿದ್ದು ಜೀವನಪೂರ್ತಿ ಆಕೆಗಾಗಿ ಕಾಯಲು ಆತ ಸಿದ್ದನಿದ್ದ. ಸರಿಸುಮಾರು ಆರು ತಿಂಗಳ ನಂತರ ತನ್ನ ನೌಕರಿಗೆ ವರ್ಗಾವಣೆ ಮಾಡಿಸಿಕೊಂಡು ಆತ ಮೈಸೂರಿಗೆ ಬಂದು ನೆಲೆಸಿದ…. ಈಗಲೂ ಕೂಡ ಆತನಲ್ಲಿ ಈ ಹಿಂದೆ ತಾವು ನಡೆದುಕೊಂಡ ರೀತಿಯ ಕುರಿತು ಪಶ್ಚಾತ್ತಾಪದ ಭಾವವಿದ್ದು, ಇನ್ನು ಮುಂದೆ ಆಕೆಗೆ ನೋವಾಗದಂತೆ ಬದುಕಬೇಕು ಎಂಬ ನಿರ್ಧಾರ ಕೂಡ ಇತ್ತು.ಅದೊಂದು ದಿನ ಆಕೆಯ ಅತ್ತೆ ಮಾವ ಬಂದು ಇಳಿದರು. ಅವರಿಬ್ಬರ ಮುಖದಲ್ಲಿ ಸೋತು ಹೋದ ಭಾವವಿತ್ತು. ಕೊನೆಗೂ ನೀನು ನಿನ್ನ ಹಟ ಸಾಧಿಸಿದೆ ಎಂದು ಅತ್ತೆ ಹೇಳಿದಾಗ ನಸುನಕ್ಕ ಸುಮತಿ ಒಳ್ಳೆಯತನವನ್ನು ಕೈಲಾಗದತನ ಎಂದು ತಿಳಿದುಕೊಳ್ಳುವುದು ತಪ್ಪು ಅತ್ತೆ, ನಾವು ಹಿರಿಯರಿಗೆ ಕೊಡುವ ಗೌರವವನ್ನು ಅವರು ಭಯ, ಹೆದರಿಕೆ ಎಂದು ಭಾವಿಸಬಾರದು. ದಾಂಪತ್ಯದಲ್ಲಿ ಗಂಡ ಹೆಚ್ಚು ಹೆಂಡತಿ ಕಡಿಮೆ ಎಂಬ ಭಾವ ಎಂದಿಗೂ ಬೇಡ… ಅವರಿಬ್ಬರೂ ಪರಸ್ಪರರಿಗೆ ಪೂರಕವಾಗಿ ಬದುಕಬೇಕು. ಒಬ್ಬರು ಕೇವಲ ಪಡೆಯುವ ಹಾಗೂ ಮತ್ತೊಬ್ಬರು ಕೊಟ್ಟು ಬರಿದಾಗುವ ಪ್ರಕ್ರಿಯೆ ದಾಂಪತ್ಯದಲ್ಲಿ ಖಂಡಿತವಾಗಿಯೂ

“ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ”ಸಣ್ಣ ಕಥೆ,ವೀಣಾ ಹೇಮಂತ್ರ ಗೌಡ ಪಾಟೀಲರಿಂದ Read Post »

ಕಥಾಗುಚ್ಛ

“ಮನೆಯೊಳಗಿಲ್ಲ ಮನದೊಡೆಯ” ಸಣ್ಣ ಕಥೆ,ಶ್ರೀದೇವಿ. ಮ.ಗುಮ್ಮಗೋಳ ಅವರಿಂದ

ಕಥಾ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಮನೆಯೊಳಗಿಲ್ಲ ಮನದೊಡೆಯ” ದಿನ ಬೆಳಗ್ಗೆ ವಾಕಿಂಗಿಗೆ ಹೋಗುವಾಗ ಆ ಮನೆ ಅದೇಕೊ ನನ್ನನ್ನು ಸೂಜಿ ಗಲ್ಲಿನಂತೆ ಸೆಳೆಯುತ್ತಿತ್ತು.  ಹಳೆಯದಾದ ದೊಡ್ಡ ಹಂಚಿನಮನೆ. ಸುತ್ತಲು ವಿಶಾಲವಾದ ಜಾಗದಲ್ಲಿ ಹುಲ್ಲು ಕಡ್ಡಿ ಬೆಳೆದಿತ್ತು. ಒಂದೆರಡು ಮಾವಿನ ಗಿಡಗಳು ಬೊಳಾಗಿದ್ದವು. ಚಿಕ್ಕುಗಿಡದಲ್ಲಿ ಹಣ್ಣುಗಳಾಗಿದ್ದರೂ ಅದನ್ನಾರೂ ಹರಿದಂತೆ ಕಾಣಿಸುತ್ತಿರಲಿಲ್ಲ. ಸುತ್ತಲು ಹುಲ್ಲಿನ ಪೊದೆ. ಗಿಡಗಳ ಮದ್ಯೆ ಒಂದು ಹುತ್ತು ಬೆಳೆದಿತ್ತು. ಕಂಪೌಂಡಿಗೆ ಸುಣ್ಣಬಣ್ಣವಿಲ್ಲದೇ ಹಾಳಾಗಿತ್ತು. ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆ ಮನೆಗೆ ಬೀಗ ಹಾಕಲಾಗಿತ್ತು. ಬಹುಶಃ ಆ ಮನೆಯಲ್ಲಿ ಯಾರು ಇರುತ್ತಿರಲಿಲ್ಲವೆಂದು ಕಾಣುತ್ತದೆ. ಹೋಗುವಾಗ ಬರುವಾಗೊಮ್ಮೆ ಆ ಮನೆಯನ್ನೆ ಸ್ವಲ್ಪ ಹೊತ್ತ ನೋಡುತ್ತ ನಿಲ್ಲುತ್ತಿದ್ದೆ‌. ಅಂದು ಆ ಮನೆಯ ಮುಂದೆ ನೋಡುತ ನಿಂತಾಗ ನನ್ನದೇ ಯೊಚನಾಲಹರಿಯಲ್ಲಿ ಮುಳಗಿಹೋಗಿದ್ದೆ. ಒಂದಾನೊಂದು ಕಾಲದಲ್ಲಿ ಈ ಮನೆ ಅಜ್ಜ ಅಜ್ಜಿ ಮಗ ಹೆಂಡತಿ ಮೊಮ್ಮಕ್ಕಳಿಂದ ಮನೆ ತುಂಬಿರಬಹುದು. ಮನೆಯ ಅಂಗಳ ನಂದನವನವಾಗಿದಿತ್ತು. ತರಹ ತರಹದ ಹಣ್ಣುಗಳ ಗಿಡಗಳು. ತರತರಹದ ಹೂಗಳ ಗಿಡಗಳು ಅಂಗಳದಲ್ಲಿ ಬೆಳದಿದ್ದವೇನೊ, ಬೆಳಗಿನ ಜಾವ ಹಕ್ಕಿಗಳ ಕಲರವದ ನೀನಾದ, ಮದ್ಯಾಹ್ನದಲ್ಲಿ ದುಂಬಿಗಳ ಜೇಂಕಾರ, ತರತರಹದ ಪಾತರಗಿತ್ತಿಗಳ ಹಾರಾಟವಿತ್ತೇನೊ. ಹೌದು ಒಂದಾನೊಂದು ಕಾಲದಲ್ಲಿ ಸಜ್ಜನರ ಗೂಡಿಂದ ಸುಂದರವಾದ ಹೂದೋಟದಿಂದ ಎಲ್ಲರ ಮನಗೆದ್ದಿತೇನೊ ಎಂದು ಯೋಚಿಸುತ ಕನಸಿನ ನನ್ನ ಲೋಕದಿಂದ ಹೊರಬಂದಾಗ ಮನೆ ನೋಡಿ ಬಸವಣ್ಣನವರ ವಚನವೊಂದು ಕಣ್ಮುಂದೆ ಹಾದು ಹೋಯಿತು. ಮನೆಯೊಳಗೆ ಮನೆಯೊಡಯನಿದ್ದಾನೊ ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿಮನೆಯೊಳಗೆ ರಜ ತುಂಬಿ…..  ಎನ್ನುವ ವಚನ ಮನದಲ್ಲೆ ಗುಣಗುಣಿಸುತ್ತಾ ನಡೆದೆ. ಹೀಗೇಯೆ ಒಂದು ವಾರದ ನಂತರ ಆ ಮನೆಯ ಮುಂದೆ ಹಾದು ಹೋಗುವಾಗ ಮನೆಯ ಬಾಗಿಲು ತೆಗೆದಂತೆ ಮನೆಯಲ್ಲಿ ಯಾರೊ ಇದ್ದಂತನಿಸಿತು. ಮನೆಯ ಗೇಟಿನ ಸಮೀಪ ನಿಂತು ನೋಡತೊಡಗಿದೆ. ಒಳಗಿಂದ ಒಬ್ಬ ಎಪ್ಪತ್ತರ ಆಸು ಪಾಸಿನ ಒಬ್ಬ ವ್ಯಕ್ತಿ ಹೊರಗಡೆ ಬಂದು ಮನೆಯ ವಿಶಾಲವಾದ ಹುಲ್ಲು ಕಸ ಕಡ್ಡಿ ಬೆಳೆದ ವರಾಂಡವನ್ನು ದಾಟುತ್ತ ಗೇಟ ಕಡೆಗೆ ಬಂದರು. ನಾನು ನೋಡುತ್ತ ನಿಂತಿದ್ದನ್ನು ನೋಡಿದ ಆ ವ್ಯಕ್ತಿ “ಬನ್ನಿ ಸರ್ ಒಳಗೆ ಯಾರ‌ಬೇಕಾಗಿತ್ತು” ಎಂದು ಕೇಳಿದರು. ನಾನು “ಏನೂ ಬೇಕಿಲ್ಲ ಸರ್. ದಿನಾ ನಾನು ಇದೆ ಮಾರ್ಗದಲ್ಲಿ ವಾಕಿಂಗಿಗೆ ಹೋಗುತ್ತೇನೆ. ನಿಮ್ಮ ಮನೆ ಯಾವಾಗಲೂ ಬೀಗ ಹಾಕಿರುತ್ತತ್ತು. ಇವತ್ತು ಯಾರೊ ಇದ್ದ ಹಾಗೆ ಅನಿಸಿತು ಅದಕೆ ನೋಡಿದೆ. ನನ್ನ ಹೆಸರು ಮಹಾಲಿಂಗ ಪಾಟೀಲ ಅಂತ. ಇಲ್ಲಿಯೇ ಕೆನರಾ ಬ್ಯಾಂಕನಲ್ಲಿ ಕ್ಲರ್ಕ ಆಗಿ ಕೆಲಸ ಮಾಡುತ್ತಿದ್ದೇನೆ…..ಅಂದ್ಹಾಗೆ ನಿಮ್ಮ ಹೆಸರೇನು ಸರ್…. ನೀವು ಏನ್ ಮಾಡಿಕೊಂಡಿದಿರಾ” ಎಂದು ಕೇಳಿದೆ. ಆ ವ್ಯಕ್ತಿ “ಪಾಟೀಲರೆ… ನನ್ನ ಹೆಸರು… ವೆಂಕಟೇಶ ದೇಸಾಯಿ ಅಂತ. ನಾನು ಸ್ಕೂಲ ಮಾಸ್ತರು. ಹೆಡಮಾಸ್ಟರಾಗಿ ರಿಟೈರ್ಡಾಗಿ ಈಗ ಹತ್ತು ವರ್ಷವಾಯಿತು. ನಡಿರಿ ನಾನು ವಾಕಿಂಗಗೆ ಹೋಗುತ್ತಿದ್ದೇನೆ. ನನಗೂ ಕಂಪನಿ ಸಿಕ್ಕಂಗಾಯಿತು” ಎಂದು ನನ್ನ ಜೊತೆಗೆ ಬಂದರು. ಒಂದು ವಾರದ ಹತ್ತಿರವಾಗಿತ್ತು ನಾನು ಅವರ ಮನೆಯ ಬಳಿಗೆ ಹೋಗುತ್ತಲೇ ದೇಸಾಯಿ ಮಾಸ್ತರರು ನನ್ನ ಜೊತೆಯಾಗುತ್ತಿದ್ದರು. ಹಲವು ಸಲ ನಿವೂ ಇದುವರೆಗೆ ಎಲ್ಲಿದ್ದಿರಿ. ಇಷ್ಟು ದೊಡ್ಡ ಮನೆ ಸುತ್ತಲು ವಿಶಾಲವಾದ ಜಾಗ ಬಿಟ್ಟು ಹೋಗುವಂತ ಪರಿಸ್ಥಿತಿ ಏನು? ಮನೆಯ ವರಾಂಡದಲೆಲ್ಲಾ ಹುಲ್ಲು ಕಡ್ಡಿ ಬೆಳೆದಿದೆ. ಬಹುಶಃ ನಿಮಗೆ ಮಕ್ಕಳಾರು ಇಲ್ಲವೇ? ಅಥವಾ ನಿಮ್ಮ ಮದುವೆಯೇ ಆಗಿಲ್ಲವೇ? ಎಂದು ಅನೇಕ ಪ್ರಶ್ನೆಗಳನ್ನು ಕೇಳಬೇಕೆಂದರೂ ಸಮಯ ಬಂದಾಗ ಅವರೆ ಹೇಳುತ್ತಾರೆ ಎಂದು ಸುಮ್ಮನಾದೆ. ಒಂದು ದಿನ ಹಾಗೆ ನನ್ನ ಕೆಲಸದ ಬಗ್ಗೆ, ಮತ್ತು ಹೆಂಡತಿ ನನಗಿಬ್ಬರೂ ಆರತಿಗೊಬ್ಬಳು ಕೀರ್ತಿಗೊಬ್ಬ ಇಬ್ಬರು ಮಕ್ಕಳು. ನಮ್ಮ ಮನೆ ಸಣ್ಣದಾದರೂ ನಂದನವನದಂತಿದೆ ಎಂದು ಹೇಳಿದೆ. ಇದೆ ಅವಕಾಶವೆಂದು ನಿಮಗೆ ಎಷ್ಟು ಮಕ್ಕಳು ಅಥವಾ ನೀವು ಬ್ರಹ್ಮಚಾರಿಯಾ? ಮನೆ ಅಷ್ಟೂ ದೊಡ್ಡದಿದ್ದರೂ ಸುತ್ತ ಮುತ್ತಲು ಕಸ ಬೆಳೆದು ನೋಡುವರಾರು ಇಲ್ಲ ಅಥವಾ ನಿಮಗೆ ಮಕ್ಕಳೆ ಇಲ್ಲವೇ? ಎಂದಾಗ ದೇಸಾಯಿ ಮಾಸ್ತರು  “ಅಯ್ಯೊ ಬ್ರಹ್ಮಚಾರಿ ಏನಿಲ್ಲ ನನಗೆ ಮದುವೆಯಾಗಿ ಎರಡು ಗಂಡು‌ಮಕ್ಕಳು ಇದ್ದಾರೆ. ಆದರೆ ಏನೂ ಮಾಡುವದು ಮಕ್ಕಳ ಮನಸ್ಸಿನೊಳಗೆ ಆಸೆ, ದುರಾಸೆ, ಅಸಹನೆ, ತಾತ್ಸಾರದ ಕಸ ಬೆಳೆದಾಗ , ನನ್ನವರು, ನನ್ನದು ಎನ್ನುವ ಭಾವನೆಯೇ ಇಲ್ಲದಾದಾಗ ಮನೆ ಏನು ಹಸನಾಗಿದ್ದಿತು. ಇನ್ಮೂ ಮನೆ ಹೊರಗೆ ಕೇಳಬೇಕೆ ಯಾರೂ ನೋಡದಂತಾಗಿ ಕಸ ಕಡ್ಡಿ ಬೆಳೆಯುವದು ಸಹಜವೇ ತಾನೆ…..  ಸಣ್ಣವರಿದ್ದಾಗ ಮಕ್ಕಳು ಮರಿ ಅಂತ ಅವರಿಗೋಸ್ಕರ ಅವರ ಭವಿಷ್ಯಕ್ಕೊಸ್ಕರ ಎನೆಲ್ಲಾ ಜವಾಬ್ದಾರಿಗಳನ್ನ, ಕಷ್ಟಗಳನ್ನ ಅನುಭವಿಸುತ್ತೇವೆ. ಆದರೆ ಅದೇ ಕಷ್ಟ ಕಾರ್ಪಣ್ಯಗಳು ನಾವು ವಯಸ್ಸಾದಾಗ ಮಕ್ಕಳು ನಮಗಾಗಿ ಹೊರವರು ಎನ್ನುವದು ಭ್ರಮೆ, ಸುಳ್ಳು ನಿರೀಕ್ಷೆ” ಎಂದರು. ಅವರು ತಮ್ಮ ಕಥೆ ಹೇಳ ತೊಡಗಿದರು. ******** ನಾನು ಸ್ಕೂಲ ಮಾಸ್ತರರಾಗಿ ಸೇರಿಕೊಂಡೆ. ಅಪ್ಪನಿಂದ ಬಳುವಳಿಯಾಗಿ ಬಂದ ಊರಲ್ಲಿಯ ಎರಡು ಎಕರೆ ಹೊಲ. ಈ ವಿಶಾಲ ಮನೆಗೆ ವಿಶಾಲಮ್ಮ ನನ್ನ ಮಡದಿಯಾಗಿ ಬಂದಳು. ನನ್ನ ಕಷ್ಟ ಸುಖಗಳಲ್ಲಿ ಜೊತೆಯಾದಳು. ನನಗೆ ಇಬ್ಬರು ಮುದ್ದಾದಗಂಡು ಮಕ್ಕಳಾದರು. ರಘುರಾಮ ಮತ್ತು ಶ್ರೀರಾಮ ಎಂದು ಹೆಸರಿಟ್ಟೆ. ಇಬ್ಬರಿಗೂ ಎರಡು ವರ್ಷಗಳ ಅಂತರ. ಇಬ್ಬರನ್ನು ಊರಲ್ಲಿಯ ಎರಡು ಎಕರೆ ಹೊಲ‌ಮಾರಿ ಚೆನ್ನಾಗಿ ಓದಿಸಿದೆ. ಮೊದಲನೇಯ ಮಗ ತಾಲೂಕ‌ ಛೇರಿಯಲ್ಲಿಗುಮಾಸ್ತನಾದ. ಎರಡನೇಯವ ಇಂಜನೀಯರಿಂಗ ಓದಿ ಮುಂಬೈಯಲ್ಲಿ ಉದ್ಯೊಗ ಅರಸಿ ಹೊರಟ. ಮೊದಲನೇಯ ಮಗ ನನ್ನ ಜೊತೆಯೇ ಇದೆ ಮನೆಯಲ್ಲಿ ಇರತೊಡಗಿದ. ಇಬ್ಬರಿಗೂ ಶ್ರೀಮಂತ ಕುಟುಂಬದ ಸುಂದರ ಹುಡಗಿಯರನ್ನು ನೋಡಿ ಮದುವೆ ಮಾಡಿದೆ. ಮೊದಲನೆಯ ರಘುರಾಮನ ಹೆಂಡತಿ ಬಹಳ ದುರಾಶೆಯ, ತಳಕು ಬಳುಕಿನ ಬದುಕಿಗೆ ಮಾರು ಹೋದ ಹುಡಗಿಯಾಗಿದ್ದಳು. ಅವಳು ಗಂಡನಿಗೆ ಫ್ರಿಜ್, ವಾಸಿಂಗ ಮಶಿನ್, ಬೆಲೆ ಬಾಳುವ ರೇಷ್ಮೆ ಬಟ್ಟೆ, ಒಡವೆಗಾಗಿ ಗಂಡನನ್ನ ಪೀಡಿಸ ತೊಡಗಿದಳು. ಹೆಂಡತಿಯ ಆಶೆಗೆ ಮಗ ರಘುರಾಮ ಲಂಚ ಪಡೆಯತೊಡಗಿದ. ಒಮ್ಮೆ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ. ಹೆಂಡತಿ ತವರು ಮನೆ ಸೇರಿದಳು.  ಹಾಗೊ ಹೀಗೊ ಮಾಡಿ ಮಗನನ್ನು ಬಿಡಿಸಿಕೊಂಡು ಬಂದೆ. ತೀವ್ರ ಆಘಾತಕ್ಕೆ ಒಳಗಾದ ಮಗ ಆತ್ಮ ಹತ್ಯೆ ಮಾಡಿಕೊಂಡ. ಎರಡನೇಯ ಮಗ ಇದ್ದು ಇಲ್ಲದಂತವ. ಎಷ್ಟೊಂದು ಓದಿಸಿ ದೊಡ್ಡ ಸಂಪಾದನೆ ತರುವಂತ ಇಂಜನೀಯರನ್ನಾಗಿ ಮಾಡಿದೆ. ಆದರೆ ಆ ಮಗನ ಮನೆಗೆ ಹೋದರೆ ಅಲ್ಲಿ ನಮ್ಮನ್ನು ಅಸಹನೆಯಿಂದ, ತಾತ್ಸಾರದಿಂದ ನೋಡುತ್ತಿದ್ದರು. ಬೇಡವೆಂದು ಇಲ್ಲಿಯೇ ಉಳಿದೇವು. ಹೆಂಡತಿ ನಾನು ಚೆನ್ನಾಗಿ ಇರುವವರೆಗೆ ಮನೆ ಮನೆಂಗಳ ಎಲ್ಲವೂ ಚೆನ್ನಾಗಿ ನೋಡಿಕೊಂಡು ಹೋಗುತ್ತಿದ್ದೇವು. ಆದರೆ ನನ್ನ ಹೆಂಡತಿಗೆ ಅಸ್ತಮಾ ಸೇರಿತು. ಆಗ ನನ್ನ ಮಗನಾಗಲಿ ಸೊಸೆಯಾಗಲಿ ನಮ್ಮ ಕಡೆ ಬನ್ನಿ ನೋಡುತ್ತೇವೆ ಅನ್ನಲೇ ಇಲ್ಲ. ನನಗೆ ಕೈಲಾದಷ್ಟು ಹೆಂಡತಿಯನ್ನು ಗುಣಪಡಿಸಲು ಆಸ್ಪತ್ರೆಗೆ ತೊರಿಸಿದೆ. ಆದರೆ ಅವಳು ಉಳಿಯಲಿಲ್ಲ.  ನನ್ನ ಹೆಂಡತಿ ತೀರಿ ಹೋಗಿ ಈಗ ನಾಲ್ಕೈದು ವರ್ಷಗಳಾಗಿವೆ. ನನಗೂ ವಯಸ್ಸಾಗಿದ್ದರಿಂದ ಇಲ್ಲಿ ಒಬ್ಬನೇ ಇರಲಾಗದೆ ಅನಿವಾರ್ಯವಾಗಿ ಮಗನ ಮನೆಯಲ್ಲಿದ್ದೇನೆ. ಸೊಸೆಯ ತಾತ್ಸಾರ, ಅಸಹನೆಯ ನಡೆಯನ್ನು ಸಹಿಸಿಕೊಂಡು ಇನ್ನೂ ಬದುಕಿದ್ದೇನೆ. ಮಗ ಮನೆಯನ್ನು ಮಾರಿ ಬಿಡು ಅಪ್ಪಾ ಅನ್ನುತ್ತಿದ್ದಾನೆ. ನಾಡು ಬಾ ಅನ್ನುತ್ತೆ ಕಾಡು ಹೋಗು ಅನ್ನುತ್ತೆ.  ಅದೇಕೊ ಮನಸ್ಸಿಗೆ ನನ್ನ ವಿಶಾಲಳು ನನ್ನನ್ನು ಕರೆದಂತೆ ಬಾಸವಾಯಿತು. ಅವಳ ಪೊಟೊ ಇದೆ ಮನೆಯಲ್ಲಿದೆ. ಅದನ್ನು ತೆಗೆದುಕೊಳ್ಳಲು ಹಾಗೆಯೆ ಮನೆ ಮಾರುವದಕ್ಕೆ ಎಜಂಟರನ್ನು ವಿಚಾರಿಸಲು ಒಂದುವಾರ ಇದ್ದು ಹೋದರಾಯಿತು ಎಂದು ಬಂದೆ. ಇಲ್ಲಿಗೆ ಬಂದ ಮೇಲೆ ಅದೇಕೊ ಮಗನ ಆತ್ಮ ಹತ್ಯೆ, ಹೆಂಡತಿಯ ಸಾವಿನ ಹಳೆಯ ನೆನಪುಗಳು ಕಾಡಿದವು. ನಿನ್ನೆ ಒಬ್ಬ ಎಜೆಂಟನಿಗೆ ಮನೆಯನ್ನು ಮಾರುವ ಬಗ್ಗೆ ತಿಳಿಸಿದ್ದೇನೆ.  ನಾಳೆ ಮಗನ ಹತ್ತಿರ ಹೊರಟಿದ್ದೇನೆ. ಎಂದು ತಮ್ಮ ಕಥೆ ಹೇಳಿದರು. ನಾನು “ಮನೆಗೆ ಒಮ್ಮೆ ಬಂದು ಹೋಗಿ ಸರ್” ಎಂದು ಅಹ್ವಾನಿಸಿದೆ. “ಇಲ್ಲ ನಾಳೆ ಬೆಳಿಗ್ಗೆಯೇ ಹೊರಡುತ್ತಿದ್ದೇನೆ. ನೋಡೊಣ ದೇವರು ನಿಮ್ಮನ್ನು ಮತ್ತೊಮ್ಮೆ ಕಾಣುವ ಭಾಗ್ಯ ಬರೆದಿದ್ದಿರೆ ಖಂಡಿತಾ ಭೇಟಿ ಆಗೋಣ” ಎನ್ನುತಿರಲು ಅವರ ಮನೆ ಗೇಟು ಬಂತು. ದೇಸಾಯರು ಕೈಯಲ್ಲಿ ಕೋಲು ಹಿಡಿದು ಗೇಟ ಬಾಗಿಲು ತೆಗೆದು ಒಳ ಹೊರಟರು ಹಿಂದೆಯೇ ಅವರನ್ನು ನೋಡುತ ಸ್ವಲ್ಪ ಹೊತ್ತು ನಿಂತೆ.   *******  ಅದೇಕೊ ಅವರ ಕಥೆ ಕೇಳಿ ಮನಕೆ ಬೇಸರವಾಗಿ ಒಂದೆರಡು ದಿನ ವಾಕಿಂಗಗೆ ಹೋಗಲು ಮೂಡೆ ಬರಲಿಲ್ಲ. ಹೆಂಡತಿ “ಏಕೆ ವಾಕಿಂಗೆ ಹೋಗುವದಿಲ್ಲವೇ? ಏನಾದರೂ ತೊಂದರೆಯಾ” ಎಂದಾಗ. “ಏನಿಲ್ಲ ಆಮೇಲೆ ಹೇಳುತ್ತೇನೆ” ಎಂದು ವಾಕಿಂಗೆ ಹೊರಟೆ. ನನ್ನ ಕಾಲಗಳದೇಕೊ ದೇಸಾಯರ ಮನೆ ಹತ್ತಿರ ಬಂದಾಗ ತಾವಾಗಿಯೇ ನಿಂತು ಕೊಂಡವು.  ಮನದೊಡೆಯ ಮನೆಯೊಳಗೆ ಇರಲಿಲ್ಲ. ಮನವೇಕೊ ಬಾರವಾದಂತೆನಿಸಿತು. ಬಾಗಿಲ ಬಳಿ ಬಂದಾಗ ಬಾಗಿಲಿಗೆ ಕೀಲಿ ಹಾಕಿತ್ತು. ಮೊದಲ ಅನೇಕ ಬಾರಿ ನೋಡಿದಾಗ ಮನದಲ್ಲಿ ಗುಣಗಣಿಸುತ್ತಿದ್ದ ಬಸವಣ್ಣನವರ ವಚನ  ದೂರದ ಗಾಳಿಯಲ್ಲಿ ತೇಲಿ ಬಂದು ಕಿವಿಯಲ್ಲಿ ಗುನುಗುನಿಸಿದಂತೆ ಭಾಸವಾಯಿತು.  *ಮನೆಯೊಳಗೆ* *ಮನೆಯೊಡೆಯನಿದ್ದಾನೊ* *ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ* *ಮನೆಯೊಳಗೆ ರಜ ತುಂಬಿ* *ಮನೆಯೊಳಗೆ* *ಮನೆಯೊಡೆಯನಿದ್ದಾನೊ* *ಇಲ್ಲವೊ ತನುವಿನಲ್ಲಿ ಹುಸಿ ತುಂಬಿ* *ಮನದೊಳಗೆ ವಿಷಯ ತುಂಬಿ* *ಮನದೊಳಗೆ* [ *ಮನದೊ]ಡೆಯನಿದ್ದಾನೊ* *ಇಲ್ಲವೊ ಇಲ್ಲ* *ಕೂಡಲಸಂಗಮದೇವಾ* . ಶ್ರೀದೇವಿ. ಮ.ಗುಮ್ಮಗೋಳ

“ಮನೆಯೊಳಗಿಲ್ಲ ಮನದೊಡೆಯ” ಸಣ್ಣ ಕಥೆ,ಶ್ರೀದೇವಿ. ಮ.ಗುಮ್ಮಗೋಳ ಅವರಿಂದ Read Post »

ಕಥಾಗುಚ್ಛ

ಸುಮಲತಾ ಗಡಿಯಪ್ಪನವರ ಸಣ್ಣ ಕಥೆ”ಒಂಟಿತನ”

ಕಥಾ ಸಂಗಾತಿ ಸುಮಲತಾ ಗಡಿಯಪ್ಪನವರ “ಒಂಟಿತನ” ನಾರಾಯಣರಾಯರ ಮನೆಗೆ ಬೆಳಕು ಬರುವುದು ಸೂರ್ಯನಿಂದಲ್ಲ; ಅದು ನೆನಪುಗಳ ಮಿಡಿತದಿಂದ. ಮುಂಜಾನೆ ಕಿಟಕಿಯ ಅಂಚಿನಿಂದ ಸರಿದುಬರುವ ತಣ್ಣನೆಯ ಗಾಳಿ, ಅವರ ಕಿವಿಯಲ್ಲಿ ಲಕ್ಷ್ಮೀದೇವಿಯ ಧ್ವನಿಯಾಗಿ ಅರಳುತ್ತಿತ್ತು—“ಏಳಿ… ಕಾಫಿ ತಣ್ಣಗಾಗುತ್ತಿದೆ.” ಆದರೆ ಕಣ್ಣು ತೆರೆದ ಕ್ಷಣವೇ ಎದುರುಗೊಳ್ಳುವುದು ಖಾಲಿ ಹಾಸಿಗೆ. ಹತ್ತು ವರ್ಷಗಳ ಹಿಂದೆ ಶಾಶ್ವತ ನಿದ್ರೆಗೆ ಜಾರಿದ ಪತ್ನಿಯ ಕೊರತೆ, ಪ್ರತಿದಿನವೂ ಹೊಸ ಗಾಯದಂತೆ ಎದೆಯನ್ನು ಕೀಳುತ್ತಿತ್ತು. ಕಾಲ ಮುಂದಕ್ಕೆ ಓಡುತ್ತಿತ್ತು; ಅವರ ಮನಸ್ಸು ಮಾತ್ರ ಹಿಂದೆ ಉಳಿದಿತ್ತು. ಕನ್ನಡಿಯ ಮುಂದೆ ನಿಂತಾಗ ಅವರು ತಮ್ಮ ಪ್ರತಿಬಿಂಬವನ್ನೇ ಗುರುತಿಸಲಾರರು. ಒಮ್ಮೆ ಈ ಮನೆಯ ಆಧಾರವಾಗಿದ್ದ ಮುಖ ಈಗ ನೆರಳಿನಂತೆ ಕುಗ್ಗಿತ್ತು—ಬಿಳಿಬಿದ್ದ ಕೂದಲು, ಒಳಗೆ ಕುಸಿದ ಕಣ್ಣುಗಳು, ನಿಶ್ಯಬ್ದ ನಿಟ್ಟುಸಿರು. ಗೋಡೆಗಳಲ್ಲೂ ಒಂಟಿತನದ ವಾಸನೆ ಅಂಟಿಕೊಂಡಂತಿತ್ತು. ಅಡುಗೆಮನೆಯ ಪಾತ್ರೆಗಳು ನೆನಪಿನಲ್ಲಿ ಮಾತನಾಡುತ್ತಿದ್ದವು. ಲಕ್ಷ್ಮೀದೇವಿಯ ಕೈರೇಖೆಯ ರುಚಿ ಇನ್ನೂ ಅವುಗಳೊಳಗೆ ಉಳಿದಿತ್ತು; ಆದರೆ ಅನ್ನಕ್ಕೆ ರುಚಿ ಇರಲಿಲ್ಲ. ಆಗ ಅವರಿಗೆ ಅರಿವಾಯಿತು—ರುಚಿ ಅನ್ನದಲ್ಲಿರಲಿಲ್ಲ, ಜೊತೆಯಲ್ಲಿತ್ತು. ಮಕ್ಕಳು ಇದ್ದರು—ದೂರದ ನಗರಗಳಲ್ಲಿ. ದೊಡ್ಡ ಹುದ್ದೆ, ದೊಡ್ಡ ಮನೆ, ದೊಡ್ಡ ಕನಸುಗಳು. ಆದರೆ ಅಪ್ಪನ ಬದುಕು ಮಾತ್ರ ನಿಧಾನವಾಗಿ ಕರಗುತ್ತಿತ್ತು. ತಿಂಗಳಲ್ಲಿ ಒಮ್ಮೆ ಬರುವ ಫೋನ್ ಕರೆ—“ಅಪ್ಪ, ಆರೋಗ್ಯ ಹೇಗಿದೆ?” ಪ್ರಶ್ನೆಯಲ್ಲೇ ಮುಗಿದುಹೋಗುತ್ತಿತ್ತು. ಅವರು ಎಂದಿನಂತೆ “ಚೆನ್ನಾಗಿದ್ದೇನೆ” ಎನ್ನುತ್ತಿದ್ದರು. ಸಮಾಜ ಕಲಿಸಿದ ಪಾಠ—ಗಂಡಸು ಅಳಬಾರದು, ನೋವು ತೋರಿಸಬಾರದು—ಅವರ ನಾಲಿಗೆಯನ್ನು ಕಟ್ಟಿಹಾಕಿತ್ತು. ಸಂಜೆಯಾದರೆ ಮನೆ ಇನ್ನಷ್ಟು ಭಾರವಾಗುತ್ತಿತ್ತು. ಗೋಡಿಯ ಮೇಲಿನ ಲಕ್ಷ್ಮೀದೇವಿಯ ಫೋಟೋ ಮುಂದೆ ಕುಳಿತು ಅವರು ಮೃದುವಾಗಿ ಮಾತಾಡುತ್ತಿದ್ದರು:“ನೀನಿಲ್ಲದೆ ಮಾತಾಡೋದಕ್ಕೂ ಅರ್ಥವಿಲ್ಲ ಲಕ್ಷ್ಮೀ…” ಉತ್ತರ ಸಿಗುತ್ತಿರಲಿಲ್ಲ. ಮೌನ ಮಾತ್ರ ಉಸಿರಾಡುತ್ತಿತ್ತು. ಒಂದು ರಾತ್ರಿ ಎದೆನೋವು ಹಠಾತ್ತಾಗಿ ದಾಳಿ ಮಾಡಿತು. ಉಸಿರು ಭಾರ, ಕೈ ಕಾಲು ಜಡ. ಫೋನ್ ಪಕ್ಕದಲ್ಲೇ ಇತ್ತು; ಆದರೆ ಕರೆ ಮಾಡಲು ಮನಸ್ಸು ಒಪ್ಪಲಿಲ್ಲ—“ಮಕ್ಕಳಿಗೆ ತೊಂದರೆ ಕೊಡಬಾರದು.” ಆ ಕ್ಷಣದಲ್ಲಿ ಅವರಿಗೆ ಸಾವು ಭಯವಲ್ಲ; ಯಾರಿಗೂ ಗೊತ್ತಾಗದೆ ಸಾಯುವ ಭಯ ಹೆಚ್ಚಾಗಿತ್ತು. ವರ್ಷಗಳ ಕಾಲ ಒತ್ತಿಹಿಡಿದ ನೋವು ಒಮ್ಮೆಲೆ ಒಡೆದು ಹರಿಯಿತು. ಕಣ್ಣೀರು ಜಾರಿ ಬಿದ್ದಿತು. ಅವರು ತಮ್ಮೊಳಗೆ ನುಡಿಯಿದರು:“ನಾನು ಗಂಡಸು… ಆದರೂ ನನಗೂ ಭಯವಾಗುತ್ತೆ.” ಮರುದಿನ ಬೆಳಗ್ಗೆ ಪಕ್ಕದ ಮನೆಯ ಚಿಕ್ಕ ಹುಡುಗಿ ಹಾಲು ಕೊಡಲು ಬಂದಳು. ಬಾಗಿಲು ಅರ್ಧ ತೆರೆದಿತ್ತು. ಅವಳು ಒಳಗೆ ಬಂದು ಆತಂಕದಿಂದ ಹೇಳಿದಳು:“ಅಜ್ಜ, ನಿನ್ನೆ ನೀವು ಕಾಣಿಸಲಿಲ್ಲ… ನನಗೆ ಭಯ ಆಯ್ತು.” ಆ ಒಂದು ವಾಕ್ಯ ಅವರ ಒಳಗಿನ ಕತ್ತಲೆಗೆ ದೀಪ ಹಚ್ಚಿತು. ಯಾರೋ ತನ್ನ ನ್ನು ಗಮನಿಸಿದ್ದಾರೆ ಎಂಬ ಅರಿವು, ಅವರನ್ನು ಮತ್ತೆ ಬದುಕಿನ ಕಡೆ ತಿರುಗಿಸಿತು. ಆ ದಿನ ಅವರು ಮೊದಲ ಬಾರಿ ನಗುಸಹಿತ “ಬಾ ಮಗಳೇ, ಕುಡಿ ಕಾಫಿ” ಎಂದರು. ನಾರಾಯಣರಾಯರಿಗೆ ಸ್ಪಷ್ಟವಾಯಿತು—ಮನುಷ್ಯನಿಗೆ ಅನ್ನ, ನೀರು, ಔಷಧಿ ಮಾತ್ರ ಸಾಲದು; ಮಾತು, ಕಾಳಜಿ, ಜೊತೆಗಾರಿಕೆ ಬೇಕು.ಹಿರಿಯ ವಿಧುರನ ನೋವು ಕಣ್ಣಿಗೆ ಕಾಣುವುದಿಲ್ಲ.ಅವನು ಕೂಗುವುದಿಲ್ಲ, ಬೇಡಿಕೊಳ್ಳುವುದಿಲ್ಲ—ಮೌನವಾಗಿ ಕರಗುತ್ತಾನೆ. ಸುಮಲತಾ ಗಡಿಯಪ್ಪನವರ

ಸುಮಲತಾ ಗಡಿಯಪ್ಪನವರ ಸಣ್ಣ ಕಥೆ”ಒಂಟಿತನ” Read Post »

You cannot copy content of this page

Scroll to Top