ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಅನುಷ್ಠಾನ ಕಲೆಯ ನವ್ಯತೆ” ಗೊರೂರು ಅನಂತರಾಜು.

ಚಿತ್ರಕಲಾ ಸಂಗಾತಿ ಗೊರೂರು ಅನಂತರಾಜು,. ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅನುಷ್ಠಾನ ಕಲೆಯ ನವ್ಯತೆ ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅನುಷ್ಠಾನ ಕಲೆಯ ನವ್ಯತೆಗೊರೂರು ಅನಂತರಾಜು,. ಹಾಸನ.ಹಾಸನದ ಹಾಸನಾಂಬ ಕಲಾಕ್ಷೇತ್ರದ ಹೊರಗೆ ಯುವ ಕಲಾವಿದ ಕೃಷ್ಣಾಚಾರಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ಪ್ರದರ್ಶಿತ ಚಿತ್ರಕಲೆ, ಅನುಷ್ಠಾನ ಕಲೆ ಯುವ ಕಲಾವಿದನ ತಾಜಾ ಪ್ರತಿಭೆ ಅನಾವರಣಗೊಳಿಸಿತು.೧೯೯೬ ನವೆಂಬರ್ ೨೭ ಜನ್ಮದಿನದ ಕೃಷ್ಣಾಚಾರಿ ಬ್ಯಾಚುಲರ್ ಆಫ್ ವಿಶುಯಲ್ ಆರ್ಟ್ ಕಲಾವ್ಯಾಸಂಗವನ್ನು ಹಾಸನದ ನಿರ್ಮಲ ಕಾಲೇಜಿನಲ್ಲಿ ಮಾಸ್ಟರ್ ಆಫ್ ವಿಶುಯಲ್ ಆರ್ಟ್ ವ್ಯಾಸಂಗವನ್ನು ಎಂ.ಎಂ.ಕೆ ಕಾಲೇಜು ಕಲ್ಬುರ್ಗಿಯಲ್ಲೂ ಮಾಡಿದ್ದಾರೆ. ೨೦೨೪ರಲ್ಲಿ ಚಾರು ಕಲಾ ಗ್ಯಾಲರಿ ಮೈಸೂರು, ಐಜಿಎನ್ ಸಿಎ ಗ್ರೂಪ್ ಶೋ ಬೆಂಗಳೂರು ಹೀಗೆ ಕೆಲವು ಗುಂಪು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ೨೦೨೩ರಲ್ಲಿ ದೆಹಲಿಯ ಇಂಡಿಯನ್ ಆರ್ಟ್ ಆರ್ಕಿಟೆಕ್ಚರ್ ಡಿಸೈನ್ ಬೈನ್ನಲೆ, ಆಹಮದಬಾದ್‌ನ ಅಬಿರ್ ಫಸ್ಟ್ ಟೇಕ್, ೨೦೨೨ರಲ್ಲಿ ರೂಟ್ ಆಫ್ ಸಾಯಿಲ್ ಏಕವ್ಯಕ್ತಿ ಪ್ರದರ್ಶನ, ಸಿಕೆಪಿ ಬೆಂಗಳೂರು, ೨೦೨೧ರಲ್ಲಿ ಕಲ್ಬುರ್ಗಿಯಲ್ಲಿ ನಡೆದ ೫೨ನೇ ಕಲಾಮಹೋತ್ಸವ, ವಿಜಯಪುರ ಕರ್ನಾಟಕ ಲಲಿತಕಲಾ ಅಕಾಡೆಮಿ ೪೨ನೇ ವಾರ್ಷಿಕ ಕಲಾ ಪ್ರದರ್ಶನ, ಬೆಂಗಳೂರಿನ ಶಿಲ್ಪಕಲಾ ಅಕಾಡೆಮಿ ವಾರ್ಷಿಕ ಪ್ರದರ್ಶನ, ಅಮೃತ ದೃಶ್ಯಕಲಾ ಉತ್ಸವ ಪೈಂಟಿAಗ್ ಶೋ..ಹೀಗೆ ಇವರ ಪ್ರದರ್ಶನಗಳು ಸಾಕಷ್ವಟು ನಡೆದಿವೆ. ಹಲವಾರು ಕಲಾ ಕ್ಯಾಂಪ್‌ನಲ್ಲೂ ಭಾಗವಹಿಸಿದ್ದಾರೆ ಅಲ್ಲದೇ ಹತ್ತಾರು ಅವಾರ್ಡ್ ಪಡೆದಿದ್ದಾರೆ. ಹಾಸನದ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಈ ವ್ಯಕ್ತಿಯನ್ನು ಮಾತನಾಡಿಸಿದೆ. ಸಾರ್, ನನ್ನ ಕಲಾ ಅಭ್ಯಾಸವು ಮಣ್ಣು, ಪ್ರಕೃತಿ, ಪರಿಸರ ಮತ್ತು ಮಾನವ ಬದುಕಿನ ನಡುವಿನ ಆಳವಾದ ಸಂಬAಧವನ್ನು ಅನ್ವೇಷಿಸುತ್ತದೆ. ಭೂಮಿ ಕೇವಲ ನಮ್ಮ ಬದುಕಿನ ಆಧಾರವಲ್ಲ. ಅದು ಅನೇಕ ನೆನಪುಗಳು, ಅನುಭವಗಳು, ಸಂಸ್ಕೃತಿಗಳು ಮತ್ತು ಬದಲಾವಣೆಗಳನ್ನು ತನ್ನೊಳಗೆ ಸಂಗ್ರಹಿಸಿಕೊAಡ ಜೀವಂತ ಅಸ್ತಿತ್ವ. ನನ್ನ ಕಲಾಕೃತಿಗಳಲ್ಲಿ ಮಣ್ಣು, ನೈಸರ್ಗಿಕ ಬಣ್ಣಗಳು, ಬೀಜಗಳು, ಎಲೆ, ಬಿದಿರು, ಮರ ಇದ್ದಿಲು, ಟೆರಾಕೋಟಾ, ಕೈಯಿಂದ ತಯಾರಿಸಿದ ಕಾಗದ, ಖಾದಿ ಬಟ್ಟೆ.. ಹೀಗೆ ನೈಸರ್ಗಿಕ ವಸ್ತು ಬಳಸುತ್ತೇನೆ. ಈ ವಸ್ತುಗಳು ನನಗೆ ಕೇವಲ ಕಲಾ ಮಾಧ್ಯಮಗಳಲ್ಲ. ಅವು ತಮ್ಮದೇ ಆದ ಇತಿಹಾಸದ ನೆನಪು ಮತ್ತು ಸಾಂಸ್ಕೃತಿಕ ಅರ್ಥ ಹೊಂದಿರುವ ಜೀವಂತ ಅಂಶ.. ಮಣ್ಣಿನ ಪದರಗಳು, ಭೂ ದೃಶ್ಯಗಳ ಬದಲಾವಣೆ, ಜೀವ ವೈವಿಧ್ಯದ ಕಾಡು ಪರಿಸರ ನಾಶ, ನಗರೀಕರಣ, ಅತಿಯಾದ ಅಭಿವೃದ್ಧಿ, ಮಾನªನ ಪ್ರಕೃತಿಯ ಮೇಲಿನ ಹಸ್ತಕ್ಷೇಪ ಇವು ಇವರ ಕಲೆಯ ಒಳಸುಳಿ ಹುಳಿ ಪೆಟ್ಟು. ಪ್ರಕೃತಿಯೊಂದಿಗೆ ಮಾನವನ ಸಂಬAಧ ಬದಲಾಗುತ್ತಿರುವುದನ್ನು ಕಲಾಕೃತಿಗಳು ಪ್ರಶ್ನಿಸುತ್ತವೆ. ಹಾಗೆಯೇ ನಮ್ಮ ಸುತ್ತಲ ಪರಿಸರವನ್ನು ನಾವು ಮತ್ತೊಮ್ಮೆ ಮಗದೊಮ್ಮೆ ಗಮನಿಸುವಂತೆ ಸೂಚಿಸುತ್ತಲೇ ಹೊಸ ಹೊಳವು ಮನದಲ್ಲಿ ಮೂಡಿಸುತ್ತವೆ.ನೋಡಿ ಅದು ಒಂದು ಓಲ್ಡ್ ಮರದ ಖುರ್ಚಿ. ಬಹುಶ: ಅದರ ಮೇಲೆ ಇವರ ತಂದೆ ಅಥವಾ ತಾತಾ ಕೂರುತ್ತಿದ್ದಾರೇನೋ..? ಅದು ಸರಿ ಅದರ ಮೇಲೇಕೆ ಮಂಜಿನ ಗೆಡ್ಡೆ..? ಎಂದು ಕೇಳಿದರೆ ಅದಕ್ಕೊಂದು ವ್ಯಾಖ್ಯಾನ. ಅಜ್ಜ ಕೂರುತ್ತಿದ್ದ ಖುರ್ಚಿ ಕಾಲ ಕಳೆದಂತೆ ಶಿಥಿಲವಾಗುತ್ತದೆ. ಮಂಜು ಕರಗಿದಂತೆ ಅಜ್ಜನ ನೆನಪು ಕಾಲ ಕಳೆದಂತೆ ಮಾಸುತ್ತಾ ಹೋಗುತ್ತದೆ. ಅರೇ ಹೀಗೂ ಈ ಅನುಷ್ಟಾನ ಕಲೆ ಅರ್ಥೈಸುವುದೇ..? ಎಂದು ಆಶ್ಚರ್ಯಚಿಕಿತನಾದೆ. ಮತ್ತೊಂದು ಕಡೆ ಮೇಲೆ ಪ್ಲಾಸ್ಟಿಕ್ ತೆಳು ಪರದೆಯ ಉಯ್ಯಾಲೆಯಂತೆ ತೂಗುಹಾಕಿರುವಲ್ಲಿ ಅದರ ತುಂಬಾ ಪೇಪರ್ ದೋಣಿಗಳು. ನಾವು ಸಾಮಾನ್ಯವಾಗಿ ಮಳೆಗಾಲದಲ್ಲಿ ಮನೆಯ ಮುಂದೆ ಮಣ್ಣಿನ ಗುಂಡಿ ರಸ್ತೆಯಲ್ಲಿ ಅಥವಾ ಹರಿಯುವ ಚರಂಡಿ ನೀರಿನಲ್ಲಿ ಪೇಪರ್ ದೋಣಿ ಅದು ಸಾದಾ ದೋಣಿ, ಕತ್ತಿ ದೋಣಿ ಎಂದೆಲ್ಲಾ ಮಾಡಿ ಹರಿಯಲು ಬಿಟ್ಟು ಖುಷಿ ಪಡುತ್ತಿರಲಿಲ್ಲವೇ ಅದು ನೆನಪಾದರೆ ದೇಸಾಯಿ ಹೇಳಿದÀರು ಕೊಲ್ಲಿ ಯುದ್ಧದಲ್ಲಿ ಹರ್ಮುಜ್ ಜಲಸಂಧಿ ಬಂದ್ ಮಾಡಿ ಅಲ್ಲಿ ಬಾಂಬ್ ಹಾಕಿದ್ದರೆ ಪೆಟ್ರೋಲ್, ಗ್ಯಾಸ್ ಹಡಗುಗಳು ಹೀಗೆ ಮುಳುಗಿ ವುಡ್ ತೇಲುತ್ತಿತ್ತು ಪ್ರಪಂಚ ಫುಡ್ ಗಾಗಿ ಬಾಯಿ ಬಡಿದುಕೊಳ್ಳುತ್ತಿತ್ತು. ಅಣ್ಣಾ ಎತ್ತಣಿಂದ ಎತ್ತಣ ಹೋಲಿಕೆ..!ಓಕೆ ನೀವು ಏನಾದರೂ ಊಹಿಸಿಕೊಳ್ಳಿ, ಏನಾದರೂ ಹೇಳಿಕೊಳ್ಳಿ ನಿಮ್ಮ ಚಿಂತನೆ ನಿಮಗೆ ಬಿಟ್ಟಿದ್ದು ಎಂದು ಮೈಕ್ ಹಿಡಿದು ಎಲ್ಲರೂ ಶಾಂತವಾಗಿರಿ ಎನ್ನುತ್ತಿದ್ದರು ಕೃಷ್ಞಾಚಾರಿಯವರು. ಏಕೆಂದರೆ ಅಂದು ಅದೇ ಕಲಾಭವನದಲ್ಲಿ ಒಳಗೆ ವಾರ್ಷಿಕೋತ್ಸವ ಏರ್ಪಾಡು ನಡೆಯುತ್ತಿದ್ದರೆ, ಹೊರಗೆ ಮಾಸ್ತರುಗಳ ಉಭಯ ಕುಶಲೋಪರು ಮಾತುಕತೆಗಳು ನಡೆದಿದ್ದವು. ಮೈಕ್ ನಲ್ಲೇ ಜೋರಾಗಿ ಹೇಳಿ ಕೇಳಿಸಿಕೊಳ್ಳುತ್ತೇವೆ ಎಂದೆ.ನಾನು ಬಳಸುವ ನೈಸರ್ಗಿಕ ವಸ್ತುಗಳ ವಿನ್ಯಾಸ, ವಿನ್ಯಾಸದಲ್ಲಿನ ಸರಳತೆ ಮತ್ತು ಅವುಗಳ ಸಹಜ ಗುಣಗಳನ್ನು ಉಳಿಸಿಕೊಂಡು ಸಮಕಾಲೀನ ದೃಶ್ಯಭಾಷೆಯನ್ನು ರೂಪಿಸಲು ಪ್ರಯತ್ನಿಸುತ್ತೇನೆ. ನನ್ನ ಕಲಾಕೃತಿಗಳು ಒಂದು ನಿರ್ದಿಷ್ಠ ಕಥೆಯನ್ನು ಹೇಳವುದಕ್ಕಿಂತಲೂ ಪ್ರೇಕ್ಷಕರಲ್ಲಿ ನೆನಪು ಪ್ರಶ್ನೆ ಮತ್ತು ಅನುಭವಗಳನ್ನು ಹುಟ್ಟಿಸುವ ಒಂದು ಮುಕ್ತ ಸಂವಾದದAತೆ ಇರಬೇಕೆಂದು ಬಯಸುತ್ತೇನೆ..ಸರಿ, ಅಲ್ಲೊಂದು ಬಾವಿಯಲ್ಲಿ ನೀರು ಸೇದುವ ಹಗ್ಗವನ್ನು ಗುಪ್ಪೆಯಾಗಿ ಹುತ್ತದಂತೆ ಮಾಡಿ ಹಗ್ಗದ ತುದಿಗಳಿಗೆ ಕೆಂಪುಬಣ್ಣ ಹಚ್ಚಿದ್ದೀರಲ್ಲಾ ಇದರ ಕಥೆಯೇನು.. ? ಎಂದು ಕೇಳಿದೆ. ಅದು ಒಂದು ಕಡೆಯಿಂದ ನೋಡಿದರೆ ಯಾರೋ ಮುನಿವರ್ಯ ಮನೆಯಲ್ಲಿ ಧರ್ಮಪತ್ನಿಯೊಂದಿಗೆ ಮುನಿಸಿಕೊಂಡು ಕಾಡಿನಲ್ಲಿ ತಪಸ್ಸಿಗೆ ಕುಳಿತು ಕರ್ಮ ಕಳೆದುಕೊಳ್ಳುವಂತೆ ಕಂಡಿತು. ಈ ಹಗ್ಗಕ್ಕೆ ಕೊನೆ ಎಲ್ಲ ಅನಂತರಾಜು.. ಎಂದು ಚಿತ್ರಕಲಾ ಗುರು ಕಾರದಕಟ್ಟಿ ಹೇಳಿದರು. ಋಷಿ ಮೂಲ ಗುರು ಮೂಲ ಹುಡುಕಬಾರದು ತೆಪ್ಪಗಾದೆ. ನೋಡಿ ಈ ಅನುಷ್ಠಾನ ಕಲೆಗೆ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದು ಗುರುಗಳು ಶಿಷ್ಯನ ಕಲೆಗಾರಿಕೆ ಕಡೆ ಬೆರಳು ತೋರಿಸಿದರು. ಕಾರದಕಟ್ಟಿ ನಿರ್ಮಲ ಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಈಗ ನಿವೃತ್ತರು. ಇದು ಮಣ್ಣಿನಲ್ಲಿ ರೂಪಿಸಿದ ಅನುಷ್ಠಾನ ಕಲೆ ಎಂದರು. ಅಕಾಡೆಮಿಯೇ ಪ್ರಶಸ್ತಿ ಕೊಟ್ಟಮೇಲೆ ಕಲೆಯ ಗೂಢರ್ಥ ಕೇಳಲುಂಟೆ..? ಶಿಷ್ಯ ಮಾತು ಮುಂದುವರೆಸಿದರು. ನನ್ನ ಕಲಾ ಪ್ರಯಾಣದ ಮೂಲಕ ಭೂಮಿ ನಮ್ಮ ಹೊರಗಿನ ಆಸ್ತಿತ್ವವಲ್ಲ. ಅದು ನಮ್ಮ ಬದುಕಿನ ಅವಿಭಾಜ್ಯ ಭಾಗ ಎಂಬ ಅರಿವನ್ನು ಮೂಡಿಸುವುದು ನನ್ನ ಉದ್ದೇಶ. ಮಣ್ಣು ಮತ್ತು ಪ್ರಕೃತಿಯೊಂದಿಗೆ ನನ್ನ ನಿರಂತರ ಸಂವಾದದ ಮೂಲಕ ಕಳೆದು ಹೋಗುತ್ತಿರುವ ಪರಿಸರ, ಸಂಸ್ಕೃತಿ ನೆನಪುಗಳನ್ನು ಕಲೆಯ ಮೂಲಕ ದಾಖಲಿಸಿ ಅವುಗಳೊಂದಿಗೆ ಹೊಸ ಸಂಬAಧವನ್ನು ಕಟ್ಟಿಕೊಳ್ಳುವ ಪ್ರಯತ್ನ ಮುಂದುವರಿಸುತ್ತೇನೆ.. ಗುಡ್ ಲಕ್ ಎಂದೆ. ಬ್ಯಾಡ್ ಲಕ್ ಎಂದರೆ ಅದೇ ರೀತಿ ಮತ್ತೊಂದು ಅನುಷ್ಠಾನ ಕಲೆ ಪಕ್ಕದಲ್ಲಿತ್ತು. ಒಂದು ಹಸುವಿನ ಹೊಟ್ಟೆಯಲ್ಲಿ ಕರಗದ ಪ್ಲಾಸ್ಟಿಕ್ ಚೀಲಗಳು, ಹಾಲು ಕರೆಯುವ ಯಂತ್ರ ಗೋಮಾತೆಯ ಕೆಚ್ಚಲಿನಿಂದ ಹಾಲನ್ನು ಬಕೇಟಿಗೆ ಕರೆಯುತ್ತಿತ್ತು. ಈ ಕಲೆಯ ಕೆಳಗಿನ ದೃಶ್ಯವು ಆನೆಯ ಹೊಟ್ಟೆಯಲ್ಲಿ ಕಲ್ಲುಗಳ ರಸ್ತೆ. ಬಹುಶ: ಅದು ಎತ್ತಿನಹೊಳೆ ರಸ್ತೆ ಇರಬೇಕೆನಿಸಿತು. ಕೇಳಲಿಲ್ಲ ಅಷ್ಟೇ..! ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಅನುಷ್ಠಾನ ಕಲೆಯ ನವ್ಯತೆ” ಗೊರೂರು ಅನಂತರಾಜು. Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಅವರ ಕವಿತೆ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ” ಪ್ರತಿ ಮುಂಜಾನೆಯುನನ್ನ ಮನೆ ಕಿಟಕಿಯ ಮುಂದೆಸೂರ್ಯೋದಯ ಬಂದು ನಿಲ್ಲುತ್ತದೆ!ಅದನ್ನು ತೆರೆಯುವ ಕೀಲಿಕೈಈ ಕಾಂಕ್ರೀಟಿನ ಮನೆ ಅಡಿಪಾಯದೊಳಗೆಹೂತುಹೋಗಿದೆ! ಈ ಮನೆಯ ಗೋಡೆಗಳುಇಟ್ಟಿಗೆ ಗಾರೆಯಿಂದಲ್ಲಅರ್ಧಕ್ಕೆ ಮುರಿದ ಸಂಭಾಷಣೆಗಳಿಂದಕಟ್ಟಲ್ಪಟ್ಟಿವೆ!ಅವುಗಳ ನಡುವೆಒಂದು ನಗು ಸಿಕ್ಕಿಕೊಂಡುವರ್ಷಗಳಿಂದ ಪ್ರತಿಧ್ವನಿಯಾಗಲು ಕಲಿಯುತ್ತಿದೆ! ನಗರದ ರಸ್ತೆಗಳುಮನುಷ್ಯರ ಕಾಲುಗಳನ್ನುಗಮ್ಯದ ಕಡೆಗೆ ಕರೆದೊಯ್ಯುವುದಿಲ್ಲ!ಹೆಜ್ಜೆಗಳ ನೆನಪುಗಳನ್ನುಡಾಂಬರಿನ ಕೆಳಗೆ ಸಮಾಧಿ ಮಾಡುತ್ತವೆ! ನನ್ನ ನೆರಳು ಸಂಜೆಯಾಗುತ್ತಿದ್ದಂತೆನನ್ನನ್ನು ಬಿಟ್ಟುಬೀದಿದೀಪದ ಕೆಳಗೆ ಕೆಲಸಕ್ಕೆ ಸೇರಿಕೊಳ್ಳುತ್ತದೆ! ರಾತ್ರಿ ಮನೆಗೆ ಬಂದಾಗಕನ್ನಡಿಯ ಮುಖದಲ್ಲೂ ನನ್ನಷ್ಟೇ ಆಯಾಸ! ಕನ್ನಡಿಯೊಳಗಿನ ನಾನು ಪ್ರತಿದಿನಸ್ವಲ್ಪ ಸ್ವಲ್ಪವಾಗಿ ಪಾರದರ್ಶಕನಾಗುತ್ತಿದ್ದೇನೆಮುಖ ಮರೆತು ಹೋಗದಂತೆ! ಮರಗಳು ಈಗಎಲೆಗಳನ್ನು ಉದುರಿಸುವುದಿಲ್ಲಹಕ್ಕಿಗಳ ವಿಳಾಸಗಳನ್ನುಒಂದೊಂದಾಗಿ ಕೆಳಗೆ ಬೀಳಿಸುತ್ತಿವೆ! ಗಾಳಿಯ ಕೈಯಲ್ಲಿ ಹೂವಿನ ಪರಿಮಳವಿಲ್ಲಬೀಗ ಹಾಕಿದ ಮನೆಗಳಕೊನೆಯ ನಿಟ್ಟುಸಿರನ್ನು ಹೊತ್ತು ತಿರುಗುತ್ತಿದೆ! ನಾನು ಇನ್ನೂ ಆಕಾಶವನ್ನು ನೋಡುತ್ತೇನೆಅದು ಮೇಲಿಲ್ಲನನ್ನ ಕಣ್ಣಿನಲ್ಲಿ ಬಿರುಕು ಬಿಟ್ಟ ನೀಲಿ ಬಣ್ಣವಾಗಿಮೆಲ್ಲಗೆ ಉದುರುತ್ತಿದೆ! ಆಕಾಶದಿಂದ ಬೀಳುವಪ್ರತಿ ಹನಿಯುಸತ್ತ ಕನಸಿನ ಕೊನೆಯ ಬೆಳಕು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಗೋಡೆಗಳೊಳಗೆ ಸಿಕ್ಕಿಬಿದ್ದ ಆಕಾಶ” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಸತತವಾಗಿ ಅತ್ತಳು ಸತ್ಯಸತ್ವದ ಸತಿ ಸೀತೆ ಬಿರುಗಾಳಿಯ ಬಿರುಸಿಗೆ ಬಲವಿಲ್ಲದಂತಾದ ಬಾಳೆಗಿಡ ಬುವಿಯನ್ನಪ್ಪಿದಂತೆ ನೆಲಕ್ಕೆ ಬಿದ್ದಳು ಧರಣಿಸುತೆ, ಲಕ್ಷö್ಮಣನ ನುಡಿಯದು ಕಿವಿಗೆ ಬಿದ್ದ ಕ್ಷಣದಲ್ಲಿ. ಲೋಕವನ್ನೇ ಮರೆತಳು ತಕ್ಷಣದಲ್ಲಿ.ಸೀತೆಯ ಸ್ಥಿತಿಗೆ ಮರುಗಿದ ಲಕ್ಷö್ಮಣ ತನ್ನ ಉತ್ತರೀಯದಿಂದ ಅವಳಿಗೆ ಗಾಳಿಯನ್ನು ಬೀಸಿ, ಕಣ್ಣೀರು ಹರಿಸುತ್ತಾ ಅವಳನ್ನು ಸಾಂತ್ವನಗೊಳಿಸುವ ಪ್ರಯತ್ನ ನಡೆಸಿದ.ಕಣ್ಣುಗಳ ತೆರೆದಳು ರಾಮಸತಿ. ನಿಟ್ಟುಸಿರ ಬಿಟ್ಟಳು ಧರಣಿಸುತೆ. ಸುಮಿತ್ರಾಸುತನನ್ನು ನೋಡಿದಳು ಜನಕಸುತೆ.“ಅಪರಾಧವನ್ನೇನೂ ಮಾಡದ ನನ್ನನ್ನು ಹೀಗೆ ಅರಣ್ಯಕ್ಕೆ ಅಟ್ಟುವ ಬದಲು ಖಡ್ಗದಿಂದ ನನ್ನ ಶಿರವನ್ನೇ ಕತ್ತರಿಸಬಹುದಿತ್ತಲ್ಲಾ! ನನ್ನ ಮನೋವಲ್ಲಭನನ್ನು ತೊರೆದು ಈ ಕಾಡಿನಲ್ಲಿರುವಂತಾಯಿತೇ ನಾನು!” ಎಂದು ಅತ್ತಳು ಕೌಸಲ್ಯಾಸುತನ ಸತಿ.“ವಿವಾಹ ಆದಾಗಿನಿಂದಲೂ ನನ್ನ ಜೊತೆ ಸುಖಸುಖವಾಗಿ ಬದುಕಿದವರು, ನಾನು ಅಗಲಿದಾಗ ನೋವು ಅನುಭವಿಸಿದವರು, ನನಗಾಗಿ ಆ ದುಷ್ಟ ರಾವಣನನ್ನು ಕೊಂದವರು ಈಗ ತೊರೆದರೇ ನನ್ನನ್ನು!” ಎಂದು ಹಲುಬಿದಳು ಹಲವು ನಿಮಿಷ.ತನ್ನದೇನೂ ತಪ್ಪಿಲ್ಲ ಎಂದು ರುಜುವಾತುಪಡಿಸುವ ಸ್ವಪ್ರಜ್ಞೆ ಸೀತೆಯಲ್ಲೀಗ ಮೂಡತೊಡಗಿತು. “ಅಂದು ರಾವಣ ಸಂಹಾರದ ನಂತರ ಅಗ್ನಿಪ್ರವೇಶದ ಮೂಲಕ ನನ್ನ ಸತ್ಯವನ್ನು ಸಾಬೀತುಪಡಿಸಿಕೊಂಡವಳು ಈ ಸೀತೆ. ಹಾಗಿದ್ದೂ ನನ್ನನ್ನು ಅಪರಾಧಿ ಎನ್ನಲು ಕಾರಣವೇನು?” ಎಂಬ ಪ್ರಶ್ನೆಯೆತ್ತಿ ಲಕ್ಷö್ಮಣನ ಮುಖವನ್ನೇ ನೋಡಿದಳು.ಕಾಡಿನಲ್ಲಿ ತನ್ನನ್ನು ಬಿಟ್ಟುಹೋಗಲೆಂದು ಬಂದ ಲಕ್ಷ್ಮಣನು ಅವಳ ಕಣ್ಣಿಗೆ ಕಂಡದ್ದು ಕರುಣೆಯಿಲ್ಲದವನಾಗಿ. “ಕಲ್ಲುಮುಳ್ಳುಗಳೇ ಇರುವ ಕಾಡಿನಲ್ಲಿ ಅಂದು ಅಲೆದಾಡುತ್ತಿದ್ದೆವು. ಅಂತಹ ಕಷ್ಟದ ಸ್ಥಿತಿಯಲ್ಲಿ ನಾನು ನಡೆಯಲಾರದೆ ಒದ್ದಾಡುತ್ತಿದ್ದಾಗ ನನ್ನನ್ನು ಉಪಚರಿಸಿದವನು ನೀನು. ನನಗೆ ಸಂಕಟವಿತ್ತು ಘರ್ಜಿಸಿದ ವಿರಾಧನೆಂಬ ಅಸುರರನ್ನು ಕೊಂದವನು ನೀನು. ಅಂದು ಚಿನ್ನದ ಜಿಂಕೆಯ ಬೆನ್ನತ್ತಿಹೋದ ನನ್ನೊಡೆಯರಿಗೆ ಏನೋ ಕೆಡುಕು ಆಗಿದೆಯೆಂದು ನಾನು ವ್ಯಥೆಪಟ್ಟು, ಹೋಗಿ ನೋಡಿ ಬಾ ಎಂದು ನಿನ್ನಲ್ಲಿ ಕೇಳಿಕೊಂಡಾಗ ಅಯೋಧ್ಯಾಪತಿಯನ್ನು ಹುಡುಕಿಕೊಂಡು ಹೋದವ ನೀನು. ನನ್ನಿಷ್ಟದ ಮೈದುನ ನೀನು. ಹಾಗಿರುವಾಗ ನನ್ನನ್ನೊಬ್ಬಳನ್ನೇ ಈ ದುರ್ಗಮ ಕಾಡಿನಲ್ಲಿ ಬಿಟ್ಟುಹೋಗುವ ಮನಸ್ಸು ನಿನಗೆ ಬಂದೀತೇ ಲಕ್ಷö್ಮಣ!” ಎಂದು ದುಃಖವನ್ನು ತೋಡಿಕೊಂಡಳು.ಪತಿಯ ಮುಖವನ್ನು ಕಾಣದೆ ಎಂತಿರಲಿ ಇಲ್ಲಿ ಎಂದು ಪ್ರಲಾಪಿಸಿದಳು. ರಮಣನನ್ನು ರಮಿಸದೆ ಹೇಗಿರಲಿ ಇಲ್ಲಿ ಎಂದು ವಿಲಾಪಿಸಿದಳು. ಆಗಾಗ ಮೈಮರೆಯುತ, ಆಗಾಗ ಎಚ್ಚರವಾಗುತ ಸೋತ ಭಾವದಲ್ಲಿದ್ದಳು ಸೀತೆ, ಹಾವಿನಿಂದ ಕಚ್ಚಿಸಿಕೊಂಡ ಎಳೆಶಿಶುವಿನಂತೆ.ಈ ಬಗೆಯಲ್ಲಿ ಜಾನಕಿಯನ್ನು ಕಂಡ ಲಕ್ಷö್ಮಣ ತೊಳಲಾಟಕ್ಕೆ ಈಡಾದ. ತೊರೆದುಹೋಗಲೇಬೇಕಿತ್ತು ಅವನು ಅವಳನ್ನು ಕಾಡಿನಲ್ಲಿ, ರಾಮನಾಜ್ಞೆಗೆ ಶಿರಬಾಗಿ. ತೊರೆದುಹೋಗದಂತೆ ತಡೆಯಿತದೋ ಮಮಕಾರ, ದುಃಖಿಸಿದ ಅತಿಯಾಗಿ ಆ ಕ್ಷಣವೇ ಎದೆಬೀಗಿ.ಎಂತು ಹೋಗಲಿ ತಾನು, ಹೋಗದೇ ಇರಲೆಂತು ಇನ್ನು ಎಂಬ ದ್ವಂದ್ವ ಭಾವದಲ್ಲಿ ಸಂಕಟವನ್ನು ಸೌಮಿತ್ರಿ ಅನುಭವಿಸುತ್ತಿದ್ದಾಗಲೇ ಸೀತೆ ನುಡಿದಳು ತಪಸ್ವಿನಿಯ ತೆರದಲ್ಲಿ. “ಅಂದು ರೇಖೆಯನೆಳೆದು ರಾಮ ಶೋಧನೆಗೆ ಹೊರಟ ರೀತಿಯಲ್ಲಿಯೇ ಇಂದೂ ಹೊರಡು ಸೌಮಿತ್ರಿ. ನನ್ನ ಅಪರಾಧವಿಲ್ಲದೆ ನನ್ನ ಒಡೆಯರು ಇಂದು ತೊರೆದರೆನ್ನ ಎಂಬ ಸಮಾಚಾರವನ್ನು ಹೇಳಿಬಿಡು ಎನ್ನ ತಾಯಿಸಮಾನರಾದ ಕೌಸಲ್ಯೆಗೆ” ಎಂದಳು ಸೀತೆ.ರಾಮನ ಜೊತೆಗೆ ಯಾರೂ ಇಲ್ಲ ಸಹಾಯಕ್ಕೆ ಎಂಬ ಯೋಚನೆ ಮೂಡಿತು ಅವಳಲ್ಲಿ, ಆ ಕ್ಷಣದಲ್ಲಿ. “ತಡವಾದರೆ ಕೋಪಿಸಿಕೊಳ್ಳಬಹುದು ನಿನ್ನಣ್ಣ. ನನಗಾದರೂ ಈ ಕಾಡಿನಲ್ಲಿ ಕ್ರೂರಮೃಗಗಳ ನೆರವಿದೆ. ಅವರು ಅಲ್ಲಿ ಒಬ್ಬಂಟಿಯಾಗಿದ್ದಾರೆ. ವಿಳಂಬ ಮಾಡದೆ ಸೇರು ಕ್ಷಿಪ್ರವಾಗಿ ಅವರನ್ನು” ಎಂದಳು ಮರ್ಮಾರ್ಥಭರಿತವಾಗಿ.ತನ್ನನ್ನು ತೊರೆದ ರಾಮನದ್ದೇನೂ ತಪ್ಪಿಲ್ಲ. ಹೆಣ್ಣಾಗಿ ಜನಿಸಿದ ತನ್ನದೇ ಅಪರಾಧ ಎಂಬ ಕೀಳರಿಮೆಯ ಮಾತೂ ಹೊರಬಂತು ಅವಳಿಂದ.ಈ ಪರಿಯ ಪರಿತಾಪವನ್ನು ಕಂಡ ಲಕ್ಷö್ಮಣ ದೃಷ್ಟಿ ಹರಿಸಿದ ದೆಸೆದೆಸೆಗೆ. ಕಣ್ಣಿಗೆ ಕಂಡ, ಕಾಣದ ಮೃಗ- ಖಗ, ಕ್ರಿಮಿ- ಕೀಟ, ಗಿಡ- ಮರ, ಗಂಗಾನದಿ, ದಿಕ್ಕುಗಳು, ಪಂಚಭೂತಗಳು ಎಲ್ಲವುಗಳನ್ನೂ ಉದ್ದೇಶಿಸಿ ನುಡಿದ ಉದ್ದಂಡವಾದ ಮಾತನ್ನು.“ಜಾನಕಿಯನ್ನು ರಕ್ಷಿಸುವ ಹೊಣೆಯೀಗ ನಿಮ್ಮದು. ಭೂದೇವಿಯೇ ಪೊರೆಯಬೇಕು ನೀನೇ, ನಿನ್ನ ಈ ಮಗಳನ್ನು”ಅಸಹಾಯಕ ಹೆಣ್ಣನ್ನು ಅನಾಥೆಯ ತೆರದಲ್ಲಿ ಬಿಟ್ಟುಹೋಗಬೇಕಾದ ತನ್ನ ಹೀನಸ್ಥಿತಿಯನ್ನು ನೆನೆದು ಮತ್ತೆ ಮತ್ತೆ ಮರುಗಿದ ಲಕ್ಷö್ಮಣ. ಈ ನಿಷ್ಠುರದ ಬದುಕನ್ನು ತಾನು ನಡೆಸಬೇಕಾಗಿ ಬಂದದ್ದಕ್ಕೆ ತನ್ನ ದೇಹವನ್ನು ಎರಡು ಭಾಗವಾಗಿ ಸೀಳಿಹಾಕಬೇಕು ಎಂದು ತನಗೆ ತಾನೇ ಶಪಿಸಿಕೊಂಡ.ಏನಾದರಾಗಲಿ ಇಲ್ಲಿಂದ ಹೋಗಿಯೇ ಬಿಡುತ್ತೇನೆ ಎಂದು ಮುಂದೆ ಮುಂದೆ ಹೋದ, ಬಿರುಸಾಗಿ. ಏನಂದುಕೊಳ್ಳುವಳೋ ಜನಕಸುತೆ ಎಂದು ಆಲೋಚಿಸಿ ಮತ್ತೆ ಹಿಂದೆ ಹಿಂದೆ ಬಂದ, ಇರಿಸುಮುರುಸಾಗಿ. ಅಣ್ಣನನ್ನು ಸೇರಬೇಕೆಂಬ ತುಡಿತವದು ಮತ್ತೆ ಸೆಳೆಯಿತು ಅವನನ್ನು. ಸೀತೆಯನ್ನು ನೋಡದೆಯೇ ಮುಂದೆ ಹೋದ. ಹೆಂಗಳೆಯ ಮನವನ್ನು ನೋಯಿಸಿದೆ ಎಂಬ ಭಾವವದು ಎಳೆಯಿತು ಅವನನ್ನು. ಸೀತೆಯೆಡೆಗೆ ನೋಡುತ್ತಾ ಹಿಂದೆ ಬಂದ. ಒಮ್ಮೆ ಆ ಕಡೆಗೆ, ಮತ್ತೊಮ್ಮೆ ಈ ಕಡೆಗೆ. ಒಮ್ಮೆ ಮುಂದೆ, ಇನ್ನೊಮ್ಮೆ ಹಿಂದೆ. ತೊರೆಯದಿರಲಾರೆ ಈಗ ಎಂಬ ಭಾವ ಒಮ್ಮೆ. ತೊರೆದುಹೋಗಲಾರೆ ಬೇಗ ಎಂಬ ಭಾವ ಮಗದೊಮ್ಮೆ. ಮುಂದಕ್ಕೂ ಹಿಂದಕ್ಕೂ ಹೊಯ್ದಾಡುವ ಉಯ್ಯಾಲೆಯಂತಾದ ಲಕ್ಷö್ಮಣ.ಅದೋ! ಆ ಕ್ಷಣದಲ್ಲಿ, ಅದೊಂದು ಕ್ಷಣದಲ್ಲಿ, ಆ ಒಂದೇ ಒಂದು ಕ್ಷಣದಲ್ಲಿ ಸೀತೆಯನ್ನು ಅಗಲಿ ಹೋಗಿಯೆಬಿಟ್ಟ ಸೌಮಿತ್ರಿ! ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಬೆಂಗಳೂರಿನಿಂದ ಹಾಸನದತ್ತ ಸುಮತಿಯಪಯಣ ಬಾವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಅವಳ ನೋಟದಲ್ಲಿ ಯಾವುದೋ ಅವ್ಯಕ್ತವಾದ ದೃಢ ನಿರ್ಧಾರದ ಸೂಚನೆ ಬಾವನಿಗೆ ದೊರೆಯಿತು. ಆದರೂ ಅದೇನೆಂದು ತಿಳಿದುಕೊಳ್ಳಲು…. “ಏನು ನಿರ್ಧರಿಸಿದೆಯಮ್ಮಾ… ನೀನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ಎಲ್ಲರ ಹಿತ ದೃಷ್ಟಿಯಿಂದಲೂ ಉತ್ತಮವಾಗಿರುತ್ತದೆ ಎಂಬುದು ನನಗೆ ತಿಳಿದಿದೆ…. ವಯಸ್ಸು ಚಿಕ್ಕದಾದರೂ ನಿನ್ನ ಆಲೋಚನಾ ಶೈಲಿ ಬಹಳ ಪ್ರಬುದ್ಧವಾದದ್ದು…. ಎಂದಾಗ, ನಾದಿನಿ…”ಬಾವಾ… ನನ್ನ ನಿರ್ಧಾರ ಸರಿಯೋ ತಪ್ಪೋ ನನಗೆ ತಿಳಿದಿಲ್ಲ…. ಆದರೆ ನನಗೆ ಬೇರೆ ದಾರಿ ತೋಚುತ್ತಿಲ್ಲ….. ವಾರ್ಡಿನಲ್ಲಿ ದಾಖಲಾದ ಅಮ್ಮ ನಮ್ಮನ್ನು ಸಂಪೂರ್ಣವಾಗಿ ನಂಬಿದ್ದಾಳೆ…. ಅವಳ ಮುಖ ಈಗ ಸಂಪೂರ್ಣ ಗೆಲುವಿನಿಂದ ಕೂಡಿದೆ…. ಇಲ್ಲಿಂದ ಚಿಕಿತ್ಸೆ ಪಡೆದು ಹಿಂತಿರುವಾಗ ತಾನು ತನ್ನ ಹಿಂದಿನ ಆರೋಗ್ಯವನ್ನು ಪಡೆದು ಮನೆಗೆ ಹಿಂತಿರುತ್ತೇನೆ ಎಂಬ ಭರವಸೆಯನ್ನು ನನ್ನ ತಾಯಿಯ ಕಣ್ಣುಗಳಲ್ಲಿ ನಾನು ನೋಡಿದೆ… ಎಂದು ಅರ್ಧಕ್ಕೆ ನಿಲ್ಲಿಸಿದಳು. ವಿಷಯವನ್ನು ಪೂರ್ತಿ ಹೇಳದೇ ಏಕೆ ಅರ್ಧಕ್ಕೆ ನಿಲ್ಲಿಸಿದಳು? ಎಂದು ಪ್ರಶ್ನಾರ್ಥಕವಾಗಿ ಬಾವ ನಾದಿನಿಯನ್ನು ನೋಡುತ್ತಾ…. “ಹೌದು ನೀನು ಹೇಳಿದ್ದು ನಿಜ…. ನಾನು ಅದನ್ನು ಗಮನಿಸಿದೆ…. ಇಲ್ಲಿನ ಚಿಕಿತ್ಸೆ ಬಹಳ ದುಬಾರಿ ಎಂಬುದು ತಿಳಿಯಿತು…. ಆದರೆ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಲು ನಮ್ಮಿಂದ ಸಾಧ್ಯವೇ? ಎಂಬ ವಿಚಾರ ನನ್ನನ್ನು ಚಿಂತೆಗೀಡು ಮಾಡಿದೆ…. ನಮ್ಮೆಲ್ಲಾ ದುಡಿಮೆಯ ಹಣವನ್ನು ಸೇರಿಸಿದರೂ ಕೂಡ ಒಂದು ಬಾರಿಯ ಡಯಾಲಿಸಿಸ್ ಸಾಧ್ಯವಾಗುತ್ತದೆಯೇ? ಎಂಬುದು ಕೂಡಾ ನನಗೆ ಸಂಶಯ”… ಎಂದ ಚಿಂತಾಕ್ರಾಂತನಾಗಿ.  ಬಾವನ ಪರಿಸ್ಥಿತಿಯು ನಾದಿನಿಗೆ ತಿಳಿದಿತ್ತು. ಎಷ್ಟೋ ಬಾರಿ ತಮಗೆ ಹಣಕಾಸಿನ ತೊಂದರೆ ಬಂದಾಗ ತನ್ನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ನಮಗೆ ಕೊಟ್ಟು ಸಹಾಯ ಮಾಡಿದ್ದಾರೆ ಬಾವ. ಒಮ್ಮೆ ಇನ್ನೇನು ಬದುಕಲು ಬೇರೆ ದಾರಿಯೇ ಇಲ್ಲವೇನೋ? ಎನ್ನುವ ಪರಿಸ್ಥಿತಿಯಲ್ಲಿ ಬಾವನೇ ನಮಗೆ ಸಹಾಯ ಮಾಡಿ ನಮ್ಮೆಲ್ಲರ ಜೀವ ಉಳಿಸಿದ್ದು. ತಮ್ಮ ಕೈಲಿದ್ದರೆ ಖಂಡಿತ ಏನಾದರೂ ಸಹಾಯ ಮಾಡೇ ಮಾಡುತ್ತಾರೆ. ಈಗ ಮಳೆಗಾಲ ಬೇರೆ ಸಮೀಪಿಸುತ್ತಿರುವುದರಿಂದ ಅವರಿಗೆ ಕೆಲಸ ಇರುವುದಿಲ್ಲ  ಎನ್ನುವುದು ನಾದಿನಿ ಬಲ್ಲಳು. ನಾದಿನಿ ಏನೂ ಮಾತನಾಡದೆ ಸುಮ್ಮನೆ ಎಲ್ಲೋ ನೋಡುತ್ತಾ ಏನೋ ಆಲೋಚನೆ ಮಾಡುತ್ತಾ ನಿಂತಿರುವುದನ್ನು ಕಂಡು… “ಈಗ ಏನು ಮಾಡುವುದು?…ನೀನು ಏನು ನಿರ್ಧರಿಸಿರುವೆ? ಎಂದು ಬಾವ ಕೇಳಿದಾಗ…. “ಹೇಗೆ ಹೇಳಲಿ ಎಂದು ನನಗೆ ತಿಳಿಯುತ್ತಿಲ್ಲ ಬಾವಾ”…. ಎಂದು ತನ್ನ ಮನದಲ್ಲಿದ್ದ ಆಲೋಚನೆಯನ್ನು ಭಾವನೆಗೆ ತಿಳಿಸಿದಳು. ನಾದಿನಿಯ ಮಾತನ್ನು ಕೇಳಿದ ಬಾವ ಒಮ್ಮೆ ದೀರ್ಘವಾದ ನಿಟ್ಟಿಸಿರನ್ನು ಬಿಟ್ಟು… ₹ಸರಿ ನಡಿ… ಅತ್ತೆಗೆ ತಿಳಿಸೋಣ ಬಾ”…. ಎಂದು ಹೇಳಿ ಮುಂದೆ ಹೆಜ್ಜೆ ಹಾಕಿದ ಬಾವನನ್ನು ನಾದಿನಿ ಹಿಂಬಾಲಿಸಿದಳು. ಇಡುವ ಪ್ರತಿ ಹೆಜ್ಜೆಯೂ ಭಾರವಾದಂತ ಅನಿಸಿತು. ಎಷ್ಟೇ ವೇಗವಾಗಿ ನಡೆದರೂ ಹೆಜ್ಜೆ ಮುಂದಿಡಲು ಸಾಧ್ಯವಾಗುತ್ತಿಲ್ಲ ಎಂದು ಅನಿಸಿತವಳಿಗೆ. ತುರ್ತು ಚಿಕಿತ್ಸಾ ಘಟಕ ವಿಭಾಗದ ವಾರ್ಡಿನ ಬಾಗಿಲ ಬಳಿ ಬಂದಾಗ ಅವಳ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು.  ಹೆಜ್ಜೆ ಮುಂದಡಲಾಗದೆ ಅವಳು ಬಾಗಿಲ ಬಳಿಯೇ ನಿಂತು ಬಿಟ್ಟಳು. ನಾದಿನಿ ತನ್ನ ಹಿಂದೆ ಬರುತ್ತಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ಹಿಂತಿರುಗಿ ನೋಡಿದ ಆತ, ನಾದಿನಿಯ ಕಣ್ಣುಗಳು ತುಂಬಿದ್ದನ್ನು ಕಂಡು… “ಅಳಬೇಡ… ಈಗ ನೀನು ಅಧೀರಳಾಗಬಾರದು…. ನಿನ್ನ ದುಗುಡ, ನೋವು ಏನೆಂದು ನನಗೆ ತಿಳಿದಿದೆ…. ದಯವಿಟ್ಟು ಕಣ್ಣುಗಳನ್ನು ಒರೆಸಿಕೊ….. ನಿನ್ನ ತುಂಬಿದ ಕಣ್ಣುಗಳನ್ನು ಗಮನಿಸಿದರೆ ಅತ್ತೆ ಎಲ್ಲವನ್ನೂ ಊಹಿಸಿಬಿಡುತ್ತಾರೆ…. ನೀನು ಈಗ ಧೈರ್ಯವನ್ನು ತಂದುಕೊಳ್ಳಲೇಬೇಕು…. ನಿನ್ನ ಮನಸ್ಸಿನಲ್ಲಿರುವ ಯೋಜನೆಯ ಪ್ರಕಾರ ಅತ್ತೆಗೆ ಮನನವಾಗುವಂತೆ ತಿಳಿಸಿಬಿಡು.”… ಎಂದು ಬಾವ ಹೇಳಿದ್ದು ಕೇಳಿ, ಹೌದು ಅವರು ನಿಜವನ್ನೇ ಹೇಳುತ್ತಿದ್ದಾರೆ ಎನ್ನುತ್ತಾ ತನ್ನ ಕಣ್ಣು ಒರೆಸಿಕೊಂಡಳು. ಬಾರದ ನಗುವನ್ನು ಮುಖದಲ್ಲಿ ತಂದುಕೊಂಡು ಬಾವನ ಜೊತೆಗೆ ವಾರ್ಡಿನ ಒಳಹೊಕ್ಕಳು. ಅಳಿಯ ವಾರ್ಡಿನ ಒಳಗೆ ಬಂದಿದ್ದನ್ನು ಗಮನಿಸಿದ ಸುಮತಿ…. “ಡಾಕ್ಟರ್ ಏನ್ ಹೇಳಿದರು?… ಎದ್ದು ಕೇಳಿದಳು. ಅತ್ತೆಯ ಪ್ರಶ್ನೆಗೆ ಅಳಿಯ ನಾದಿನಿಯ ಕಡೆ ತಿರುಗಿ, ಹೇಳು ಎನ್ನುವಂತೆ ಸನ್ನೆ ಮಾಡಿದ. ಗಂಟಲುಬ್ಬಿ ಬಂದರೂ, ಕಣ್ಣುಗಳು ಮತ್ತೆ ಹನಿಗೂಡ ತೊಡಗಿದರೂ ಅದನ್ನು ತಾಯಿಗೆ ತೋರಕೊಡದೆ….. “ಅಮ್ಮಾ…. ಡಾಕ್ಟರ್ ಹೇಳಿದರು…. ಇಲ್ಲಿ ದೊರಕುವ ಚಿಕಿತ್ಸೆಯು ನಮ್ಮ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿಯೇ ಲಭ್ಯವಿದೆ. ಅಲ್ಲಿಗೆ ಹೋಗಿ ಪಡೆದುಕೊಳ್ಳಬಹುದು…. ಎಂದಿದ್ದಾರಮ್ಮಾ”…. ಎನ್ನುತ್ತಾ ಅಮ್ಮನ ಬಳಿಗೆ ಬಂದಳು. ತನ್ನ ಅಳುವನ್ನು ತಡೆ ಹಿಡಿದುಕೊಳ್ಳಲು ಅವಳು ಹರಸಾಹಸ ಪಡಬೇಕಾಯಿತು. ಸುಮತಿಯನ್ನು ಬಿಗಿಯಾಗಿ ಅಪ್ಪಿಕೊಂಡಳು.  “ಆದಷ್ಟು ಬೇಗನೇ ನಾವು ಇಲ್ಲಿಂದ ಹೋಗೋಣ… ಎಂದು ಹೇಳುತ್ತಾ ವಾರ್ಡಿನಲ್ಲಿದ್ದ ನರ್ಸ್ ಬಳಿಗೆ ತೆರಳಿದಳು…. “ಸಿಸ್ಟರ್…. ತಾಯಿಯನ್ನು ಇಲ್ಲಿ ಈಗ ಅಡ್ಮಿಟ್ ಮಾಡುವುದಿಲ್ಲ…. ಇನ್ನೊಂದೆರಡು ದಿನದ ಬಳಿಕ ಬರುತ್ತೇವೆ_…. ಎಂದು ಹೇಳಿದಳು.‌… “ಓ ಹೌದಾ… ನೀವು ಔಷಧಿಯನ್ನು ತಂದಿದ್ದರೆ ಹಾಗೂ ಇಲ್ಲಿ ಅಡ್ಮಿಟ್ ಮಾಡಿದ್ದರೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದಿತ್ತು…. ಸರಿ ನಿಮ್ಮ ಇಚ್ಛೆ”…. ಎಂದು ಹೇಳಿ ಸುಮತಿಯನ್ನು ವಾರ್ಡಿನಿಂದ ಕರೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಿದಳು. ಮಾವನಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ನಾದಿನಿ ಬಾವನನ್ನು ವಿನಂತಿಸಿಕೊಂಡಳು. ಸರಿ ಎಂದು ಹೇಳಿ ಬಾವ ರಿಸೆಪ್ಶನ್ ಗೆ ಹೋಗಿ ಅಲ್ಲಿಂದ ಮಾವನಿಗೆ ಕರೆ ಮಾಡಿ, ಅತ್ತೆಯನ್ನು ಇಲ್ಲಿಂದ ಹಾಸನದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲು ಮಾಡುತ್ತೇವೆ. ಇಲ್ಲಿ ಹೆಚ್ಚು ಸಮಯ ಕಳೆಯಲು ಅತ್ತೆಯಿಂದ ಸಾಧ್ಯವಿಲ್ಲ ಹಾಗಾಗಿ ಇಲ್ಲಿಂದ ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಹಾಸನಕ್ಕೆ ಹೋಗುತ್ತೇವೆ ಎಂಬುದಾಗಿ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ತಮ್ಮನಿಗೆ ಅಳಿಯನ ಮಾತು ಕೇಳಿ ಮನದಲ್ಲಿ ಏನೋ ಕಸಿವಿಸಿ ಉಂಟಾಯಿತು. ಸ್ವಲ್ಪ ಆತಂಕವಾಯಿತು. ಆಸ್ಪತ್ರೆಯಲ್ಲಿ ನಡೆದ ವಿಷಯ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ಪರಿಸ್ಥಿತಿಯ ಅರ್ಥ ಅವನಿಗಾಯಿತು. ಅವನ ಮನಸ್ಸು ಭಾರವಾಯಿತು…”ಸರಿ ಅಕ್ಕನನ್ನು ನೀವು ಕರೆದುಕೊಂಡು ಹೋಗಿ….. ಹಾಸನದಲ್ಲಿ ಅಕ್ಕನಿಗೆ ಚಿಕಿತ್ಸೆ ಕೊಡಿಸಿ…. ನಾನು ಕುಟುಂಬ ಸಮೇತ ಅಲ್ಲಿಗೆ ಬರುತ್ತೇನೆ”….ಎಂದು ಸುಮತಿಯ ತಮ್ಮ ಹೇಳಿದ. ಸುಮತಿಯನ್ನು ಅಲ್ಲಿಂದ ಕರೆದುಕೊಂಡು ಅಳಿಯ ಮತ್ತು ಮಗಳು ಹಾಸನದ ಕಡೆಗೆ ಪ್ರಯಾಣ ಬೆಳೆಸಿದರು. 

Read Post »

You cannot copy content of this page

Scroll to Top