ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ

ಪುಸ್ತಕ ಸಂಗಾತಿ ವೆಂಕಟೇಶ ಈಡಿಗರ “ಸಾವಿರದ ಶರಣವ್ವ ಕನ್ನಡದ ತಾಯೇ“ ಅಂಕಿತ ಪ್ರಕಾಶನಪ್ರಕಾಶಕರು ಮತ್ತು ಮಾರಾಟಗಾರರು53ˌ ಶಾಮ್ ಸಿಂಗ್ ಕಾಂಪ್ಲೆಕ್ಸ್ಗಾಂಧಿ ಬಜಾರ್ .ಮುಖ್ಯ ರಸ್ತೆಬಸವನಗುಡಿ. ಬೆಂಗಳೂರುಪುಸ್ತಕದ ಬೆಲೆ — 250 ರೂ ಜನಪದವೇ ಜನಾನುರಾಗದ ಮೂಲಮಂತ್ರ ಎಂದು ನಂಬಿ ಮುನ್ನೆಡೆಯುತ್ತಿರುವ ಬಿತ್ತಿ ಬೆಳೆಸುತ್ತಿರುವ  ಹಿರಿಯ ಸಾಹಿತಿˌ  ನಾಟಕಕಾರರು ಹಾಗೂ ಜನಪದ ಕಲಾವಿದರಾದ ಚಂದ್ರಶೇಖರ ಕಂಬಾರರು ನೆಲಮೂಲ ಸಂಸ್ಕೃತಿಯಲ್ಲಿಯನ್ನೇ ಆಧಾರವಾಗಿಟ್ಟುಕೊಂಡು ನಾಟಕˌ ಕಾವ್ಯ. ಕಾದಂಬರಿ ಕಥೆ. ರೂಪಕ ಮುಂತಾದ ಸಾಹಿತ್ಯ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ ಮತ್ತು ರಚಿಸುತ್ತಿದ್ದಾರೆ. ರಂಗಭೂಮಿˌ ಸಿನಿಮಾ ಪತ್ರಿಕೆ ಮುಂತಾದ ಹಲವು ಮಾಧ್ಯಮಗಳಲ್ಲಿ ತಮ್ಮ ಆಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲಾ ಕಲೆಗಳ ತಾಯಿಬೇರಿನಂತಿರುವ ಜನರ ಜೀವನ ವಿಧಾನದ ಮೂಲ ಸೆಲೆ ಜನಪದ ಚಟುವಟಿಕೆಗಳು ಜೀವನುತ್ಸಾಹದ ಸೆಲೆಗಳು ಎಂಬುದನ್ನು ಸಮಾಜಕ್ಕೆ ತಿಳಿಸುತ್ತಿದ್ದಾರೆ.  ಜೀವನದ ಜೀವಾಳ ಎಂದಿದ್ದಾರೆ.ಕನ್ನಡ ರಂಗಭೂಮಿಯ ಹಿರಿಮೆ ಪಾಲುದಾರರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ನಾಡು ಕಂಡ ಶ್ರೇಷ್ಠ ಜನಪದ ವಿದ್ವಾಂಸರು. ನೆಲಮೂಲ ಸಂಸ್ಕೃತಿಯನ್ನು ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟು ಅದರ ಸೊಗಸನ್ನು ಮುಂದಿನ ಪೀಳಿಗೆಗೆ ಧಾರೆಯಾಗಿ ಎರೆದವರು. ಜನಪದ ಸಂಗೀತˌ ಜನಪದ ಸಾಹಿತ್ಯ ಹಾಗೂ ಜನಪದ ನಾಟಕಗಳನ್ನು ರಚಿಸುವುದರಿಂದಲೇ ನಾಡಿನ ನೆಲಮೂಲ ಸಂಸ್ಕೃತಿಗೆ ಘನತೆ ತಂದವರು. ಅದರಲ್ಲೂ ನಾಟಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಹಿರಿಯರಿಗಾಗಿ ಅನೇಕ ಪತಿಹಾಸಿಕ. ಜನಪದ. ವಾಸ್ತವವಾದಿ ಮುಂತಾದ ವಿಷಯಗಳನ್ನಿಟ್ಟುಕೊಂಡು ನಾಟಕ ರಚಿಸಿದವರು. ಬೆಳೆಯುವ ಸಿರಿ ಮೊಳಕೆಯಲ್ಲಿ ಆಗಿರುವುದರಿಂದ   *ಸಾವಿರದ ಶರಣವ್ವ ಕನ್ನಡದ ತಾಯೇ* ಎಂಬ ಏಕಾಂಕ ನಾಟಕಗಳ ಸಂಕಲವನ್ನು  ಮಕ್ಕಳಿಗಾಗಿ ರಚಿಸಿದ್ದಾರೆ. ಇನ್ನೂರ ನಾಲ್ಕು ಪುಟಗಳಿರುವ ಈ ಪುಸ್ತಕವನ್ನು ಕ್ರಿ ಶ 2023 ರಲ್ಲಿ  ಅಂಕಿತ ಪ್ರಕಾಶನವು ಮುದ್ರಣಗೊಳಿಸಿದೆ. ಮಕ್ಕಳಿಗಾಗಿಯೇ ರಚನೆಗೊಂಡ ಈ ಕೃತಿಯು ಹನ್ನೆರಡು ಏಕಾಂಕ ನಾಟಕಗಳನ್ನು ಒಳಗೊಂಡಿದೆ.ಮಕ್ಕಳ ರಂಗಭೂಮಿಯಲ್ಲಿ ಮಕ್ಕಳಿಗಾಗಿ ಮತ್ತು ಮಕ್ಕಳು ಪ್ರದರ್ಶನ ಮಾಡುವ  ಮಕ್ಕಳ ನಾಟಕಗಳೇ ರಚನೆಯಾಗುತ್ತಿಲ್ಲ. ಮತ್ತು  ರಚಿಸುವವರಿಲ್ಲ ಎಂಬ ಕೊರಗನ್ನು ಚಂದ್ರಶೇಖರ ಕಂಬಾರರು ಹೋಗಲಾಡಿಸಿದವರು. ಕಂಬಾರರೇ ರಚಿಸಿರುವ ಅಲಿಬಾಬ ಮತ್ತು 40 ಜನ ಕಳ್ಳರು. ಪುಷ್ಪರಾಣಿ ಮುಂತಾದ ಮಕ್ಕಳ ನಾಟಕಗಳಿವೆ. ಇವುಗಳ ಜೊತೆಗೆ ಮಕ್ಕಳು ಸುಲಭವಾಗಿ ಅಭಿನಯಿಸಬಹುದಾದ ಹನ್ನೆರಡು ನಾಟಕಗಳನ್ನು *ಸಾವಿರದ ಶರಣವ್ವ ಕನ್ನಡದ ತಾಯೆ* ಎಂಬ ಶೀರ್ಷಿಕೆಯ ಅಡಿಯಲ್ಲಿ ಮಕ್ಕಳ ರಂಗಭೂಮಿಗೆ ಕೊಡುಗೆ ನೀಡಿದ್ದಾರೆ. ಇವು ಜನಪದˌ ಪೌರಾಣಿಕ. ಐತಿಹಾಸಿಕ ನಾಟಕಗಳ ವಸ್ತು ಒಳಗೊಂಡವುಗಳಾಗಿವೆ.ತಂದೆ ಮಾತನ್ನು ಪರಿಪಾಲಿಸಿ ತಾಯಿಯ ಶಿರವನ್ನು ಕಡಿದ ಪರಶುರಾಮˌ  ವೀರ ಮೈಯೂರˌ ಚಾಲುಕ್ಯರ ಚಕ್ರೇಶ್ವರˌ ರಾಷ್ಟೃಕೂಟ ದೊರೆ ಅಮೋಘವರ್ಷ ನೃಪತುಂಗˌ ಬಾಹುಬಲಿˌ ಕಲ್ಯಾಣದ ಕೂಗುˌ  ಜಕಣಾಚಾರ್ಯˌ ಸಾಮ್ರಾಜ್ಯದ ಕತೆ. (ವಿಜಯನಗರ ಸಾಮ್ರಾಜ್ಯ ಸ್ಥಾಪನೆ)ˌ ಪುರಂದರದಾಸರುˌ ಸಾವಳಿಗಿ ಶಿವಲಿಂಗˌ ಕೆಂಪೇಗೌಡ ಹಾಗೂ ಕಿತ್ತೂರು ಚನ್ನಮ್ಮ  ಎಂಬ ಹನ್ನೆರಡು ನಾಟಕಗಳು ಮಕ್ಕಳಲ್ಲಿ ಕನ್ನಡ ನಾಡಿನ ವಿವಿಧ ಕಾಲಘಟ್ಟದ ಸಾಮಾಜಿಕ. ರಾಜಕೀಯˌ ಸಂಸ್ಕೃತಿˌ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯನ್ನು ತಿಳಿಸಲು ಸಹಕಾರಿಯಾಗಿವೆ.ಪಿತೃ ವಾಕ್ಯ ಪರಿಪಾಲಕನಾಗಿ ತಾಯಿಯ ಶಿರವನ್ನೇ ಕಡಿದ ಪರಶುರಾಮನ ಕತೆಯು ಕೊನೆಗೆ ತಾಯಿಯ ಜೀವವನ್ನೇ ವರವಾಗಿ ಪಡೆದು ತನ್ನ ಮಾತೃಹತ್ಯೆಯ ದೋಷದಿಂದ ಮುಕ್ತನಾಗುವ ಕತೆ ತಂದೆ ಮತ್ತು ತಾಯಿಯ ಮಹತ್ವವನ್ನು ಸಾರುತ್ತದೆ. ಕನ್ನಡದ ಮೊದಲ ಸಾಮ್ರಾಜ್ಯವೆಂದೆ ಹೇಳಿಕೊಳ್ಳಬಹುದಾದ ಕದಂಬ ವಂಶ ಸಂಸ್ಥಾಪಕನಾದ ಮೈಯೂರ ವರ್ಮ ಮೈಯೂರಶರ್ಮನಾಗಿ ಸಾಮ್ರಾಜ್ಯ ಕಟ್ಟಿದ ಕತೆಯಾಗಿದೆ. ಚಾಲುಕ್ಯ ಚಕ್ರೇಶ್ವರ ಎಂದು ಖ್ಯಾತನಾದ ಹಿಮ್ಮಡಿ ಪುಲಿಕೇಶಿಯು ದಕ್ಷಿಣ ಪಥೇಶ್ವರನಾಗಿ ಉತ್ತರದ ಹರ್ಷವರ್ಧನನ್ನು ಸೋಲಿಸಿದ ಸಾಹಸದ ಕತೆಯನ್ನು ಮನೋಜ್ಞವಾಗಿ ವಿವರಿಸಲಾಗಿದೆ.   ರಾಷ್ಟೃಕೂಟರ ಸಂಸ್ಥಾಪಕ ಅಮೋಘವರ್ಷ ನೃಪತುಂಗನು ಕನ್ನಡವನ್ನು ಹೇಗೆ ಉತ್ತುಂಗ ಮಟ್ಟಕ್ಕೆ ಹೊಯ್ದನು ಎಂದು ತಿಳಿಸುತ್ತದೆ.ಭರತ ಮತ್ತು ಬಾಹುಬಲಿಯ ಕತೆಯಂತೂ ತಿಳಿಯೇ ಇದೆ . ಚಕ್ರರತ್ನದ ಮೂಲಕ ಸಹೋದರರೆಲ್ಲರನ್ನೂ ಜಯಿಸಿದ ಭರತ ತಮ್ಮ ಬಾಹುಬಲಿಯನ್ನು ಸಕಲ ಯುದ್ದದಲ್ಲೂ ಗೆಲ್ಲಲಾಗದೆ ಕೊನೆಗೆ ಅಣ್ಣ ಭರತನಿಗೆ ಸಾಮ್ರಾಜ್ಯವನ್ನೇ ಬಿಟ್ಟು ಬಾಹುಬಲಿ ಶ್ರವಣಬೆಳಗೋಳಕ್ಕೆ ಹೋದ ಕತೆಯನ್ನು ಹೇಳುತ್ತದೆ. *ಕಲ್ಯಾಣದ ಕೂಗು* ನಾಟಕವು ಹನ್ನೆರಡನೇ ಶತಮಾನದ ಕಲ್ಯಾಣದ ಕ್ರಾಂತಿಯ ವಸ್ತುವನ್ನು ಹೊಂದಿದೆ. ಅಂತರ್ಜಾತಿ ವಿವಾಹ ಮಾಡಿ ಕ್ರಿಂತಿಗೆ ಕಾರಣನಾದ ಬಸವಣ್ಣ ಮತ್ತು ಶರಣರನ್ನು  ಬ್ರಾಹ್ಮಣ ಕುಲದವರು ಹೇಗೆ ಓಡಾಡಿಸಿ ಕೊಂದರು ಎಂಬ ಕತೆಯನ್ನು ವಿವರಿಸುತ್ತದೆ. ಶಿಲ್ಪಕಲೆಯ ಜತುರನಾದ ಜಕಣಾಚಾರ್ಯ ಮತ್ತು ಆತನ ಕೌಟುಂಬಿಕ ಕತೆಯನ್ನು ಅರುಹುವ *ಜಕಣಿಚಾರ್ಯ* ನಾಟಕವು ಕಲೆ ರಕ್ತಗತವಾಗಿ ಬರುತ್ತದೆ ಎಂಬುದರ ಜೊತೆಗೆ ತನ್ನ ಹೆಂಡತಿಯ ಮೇಲೆ ಸಂಶಯ ಪಟ್ಟು ಕುಟುಂಬವನ್ನೇ ತೊರೆದು ಬಂದು ಹೊಯ್ಸಳರ ಆಸ್ಥಾನದಲ್ಲಿದ್ದ ಜಕಣಾಚಾರ್ಯರು ಕೊನೆಗೆ ತಂದೆಯನ್ನು ಹುಡುಕಿಕೊಂಡು ಬಂದ ಡಂಕಣನು ತಂದೆಯನ್ನು ಮೀರಿಸುವಷ್ಟು ಶಿಲ್ಪಕಲಾ ಪಂಡಿತನಂತೆ ಬೆಳೆಯುತ್ತಾನೆ.  *ಸಾಮ್ರಾಜ್ಯದ ಕತೆ* ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕಬುಕ್ಕರ ಜೀವನ ಮತ್ತು ಸಾಮ್ರಾಜ್ಯ ಕಟ್ಟಿದ ಪರಿಯನ್ನು ವಿವರಿಸುತ್ತದೆ. *ಪುರಂದರದಾಸರು* ನಾಟಕವೂ ಇದೆ ಹನ್ನೆರಡನೆಯ ಶತಮಾನದ ಕತೆಯಾಗಿದ್ದು ಶ್ರೀನಿವಾಸನಾಯಕ ಎಂಬ ಶ್ರೀಮಂತ ಬಂಗಾರದ ವ್ಯಾಪಾರಿಯೊಬ್ಬನು ಜೀವನದಲ್ಲಿ ಭಕ್ತಿಯನ್ನು ಹೊತ್ತಿಸಿಕೊಂಡು ದಾಸನಾಗುತ್ತಾನೆ. ಅವನೇ ಪುರಂದರದಾಸ. ಈ ಕತೆಯನ್ನು ವಿವರಿಸುತ್ತದೆ.  ಕೆರೆಗೆ ಹಾರವಾದ ಕತೆಯಂತೆ ಬೆಳಗಾವಿಯ ಭಾಗದಲ್ಲೂ ಈ ಘಟನೆ ನಡೆಯುತ್ತದೆ. ಹಿಂದು — ಮುಸ್ಲಿಂ ಬೇಧವನ್ನು ತೊಡೆದು ಹಾಕಲು ಸೂಫಿ ಮತ್ತು ಭಕ್ತಿಪಂಥಗಳು ಉದಯವಾಗುತ್ತವೆ. ಅಂತೆಯೇ ಸಾವಳಿಗಿ ಶಿವಲಿಂಗನೂ ಸಾಮರಸ್ಯದ ಬದುಕಿಗೆ ನಾಂದಿಯಾಡುತ್ತಾನೆ.ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೈಡರನ್ನು ವಿಜಯನಗರದ ಸಾಮಂತ ಅರಸರಾಗಿ ಬೆಂಗಳೂರನ್ನು ನಿರ್ಮಾಣ ಮಾಡಿದ ಹಾಗೂ ಕೆರೆ ಕಟ್ಟೆ. ಕೋಟೆ ಅರಮನೆಗಳನ್ನು ಕಟ್ಟಿ ನಾಡಿನ ಸಮೃದ್ದಿಗೆ ಕಾರಣರಾದ ಇತಿಹಾಸವನ್ನು ಈ ನಾಟಕ ತಿಳಿಸಿಕೊಡುತ್ತದೆ.ಇಲ್ಲಿರುವ ಹನ್ನೆರಡು ನಾಟಕಗಳಲ್ಲಿ ಹಲವು ಜಾನಪದ ಕತೆಯ ಮೂಲವನ್ನು ಹೊಂದಿವೆ. ಕೆಲವು ಇತಿಹಾಸದ ವಸ್ತುವನ್ನು ಹೊಂದಿದ್ದು ಮತ್ತೆ ಕೆಲವು ಪೌರಾಣಿಕ ವಿಷಯಾಧಾರಿತ ನಾಟಕಗಳಾಗಿವೆ. ಎಲ್ಲವೂ ಮಕ್ಕಳಲ್ಲಿ ನೈತಿಕ ಮೌಲ್ಯವನ್ನು ಬಿತ್ತುವಂತವುಗಳೇ ಆಗಿವೆ. ಜನಪದ ಉಳಿದರೆ ಎಲ್ಲವೂ ಉಳಿದು ಬೆಳೆಯುತ್ತದೆ ಎಂಬ ಲೇಖಕರ ಆಶಯ ಇಲ್ಲಿನ ಎಲ್ಲಾ ನಾಟಕಗಳಲ್ಲಿ ಎದ್ದು ಕಾಣುತ್ತದೆ. ನಾಟಕಗಳ ಮೂಲಕ ಮಕ್ಕಳಲ್ಲಿ  ನೈತಿಕ ಪ್ರಜ್ಞೆ. ಇತಿಹಾಸದ ಜ್ಞಾನ ಹಾಗೂ ಪೌರಾಣಿಕ ಕತೆಗಳ ಅರಿವನ್ನು ಮೂಡಿಸುವ ಮೂಲಕ ವಿಚಾರವಂತರನ್ನಾಗಿ ಮಾಡಬೇಕೆಂಬ ಆಶಯ ಲೇಖಕರದ್ದಾಗಿದೆ. ಕದಂಬˌ ಚಾಲುಕ್ಯˌ  ರಾಷ್ಟೃಕೂಟರು ವಿಜಯನಗರ ಸಾಮ್ರಾಜ್ಯ. ಬಸವಣ್ಣನವರ ಕಾಲˌ ಕೆಂಪೆಗೌಡ ಹಾಗೂ ಕಿತ್ತೂರರಾಣಿ ಚನ್ನಮ್ಮ ಇವರ ಕಾಲದ ಐತಿಹಾಸಿಕ ಜ್ಞಾನವನ್ನು ತಮ್ಮ ನಾಟಕಗಳ ಮೂಲಕ ತಿಳಿಸಿದ್ದಾರೆ. ಹಾಗೆಯೇ ಪುರಂದರದಾಸರು. ಬಾಹುಬಲಿ. ಸಾವಳಿಗಿ ಶಿವಲಿಂಗ ಜಕಣಾಚಾರ್ಯರಂತವರ ಜೀವನ ಸಾಧನೆಯನ್ನೂ ಕತೆಯಾಗಿ ರೂಪಾಂತರಿಸಲಾಗಿದೆ.ಇಲ್ಲಿರುವ ಹನ್ನೆರಡು ನಾಟಕಗಳೂ ಏಕಾಂಕ ನಾಟಕಗಳಾಗಿದ್ದು ಶಾಲಾ ಕಾಲೇಜುಗಳಲ್ಲಿ ಮತ್ತು ಸಣ್ಣ ಪುಟ್ಟ ತಂಡಗಳಲ್ಲಿ ನಾಟಕ ತಯಾರಿಸಿ ಪ್ರದರ್ಶಿಸಲು ಅನುಕೂಲವನ್ನು ಹೊಂದಿವೆ. ಅತ್ಯಂತ ಸರಳ ಬಂಧದಲ್ಲಿ ರಚನೆಗೊಂಡಿರುವ ನಾಟಕಗಳು ಕತೆಯಂತೆ ನಿರಂತರವಾದ ದೃಶ್ಯಗಳನ್ನು ಹೊಂದಿರುವುದರಿಂದ ಪ್ರದರ್ಶನದ ತಾಂತ್ರಿಕ ತೊಂದರೆ ಎದ್ದು ಕಾಣುತ್ತದೆ. ದೃಶ್ಯಗಳು ಒಂದರ ನಂತರ ಒಂದಾಗಿ ಬರುವುದರಿಂದ ನಟರಿಗೆ ಅಭಿನಯಿಸಲು ತೊಂದರೆಯೂ ಆಗಬಹುದು ಎನಿಸುತ್ತದೆ. ಒಂದು ದೃಶ್ಯದಲ್ಲಿರುವ ಪಾತ್ರಧಾರಿಗಳು ಮುಂದೆ ಬರುವದೃಶ್ಯದಲ್ಲಿಯೂ ಬರುವುದರಿಂದ ನಿರಂತರವಾಗಿ ಅದೆ ಪಾತ್ರಗಳು ಅಭಿನಯಿಸಲು ತೊಡಕಾಗಬಹುದು ಎನಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಬದಲಿ ಪಾತ್ರಗಳು ಬರುವಂತೆ ಇದ್ದರೆ ಮತ್ತು ಮಧ್ಯೆ ಮಧ್ಯೆ ಸಂಗೀತ ಹಾಗೂ ನಾಟಕೀಯ ಸನ್ನಿವೇಷ ಬಂದರೆ ಅಭಿನಯಿಸಲು ಅನುಕೂಲವಾಗಹುದು ಎನಿಸುತ್ತದೆ. ಆದರೆ…ˌ ಇವು ಪಠ್ಯ ನಾಟಕಗಳಾದ್ದರಿಂದ ಹೀಗಿರಬಹುದು. ಪ್ರದರ್ಶಕ್ಕೆ ಬಂದಾಗ ನಿರ್ಧೇಶಕ ಮತ್ತು ನಟರ ಜಾಣ್ಮೆಯಿಂದ ಸಂಗೀತˌ ನಾಟಕೀಯತೆ ಹಾಗೂ ನಿರಂತರತೆಯ ತಾತ್ರಿಕ ದೋಷಗಳು ನಿವಾರಣೆಯಾಗಹುದು. ಲೇಖಕರ ಮತ್ತೊಂದು ಸಂತೃಪ್ತ ಭಾವ ಯಾವುದೆಂದರೆ ಇಂತಹ ಮಹನೀಯರೆಲ್ಲಾ ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದು ಘನವಾದ ಸಾಧನೆ ಮಾಡಿದ್ದಾರೆಲ್ಲ ಅದೆ ಕನ್ನಡದ ಹಿರಿಮೆ ಎನ್ನುತ್ತಾರೆ. ಅಂತಹ ಹಿರಿಮೆಯುಳ್ಳ ಕನ್ನಡ ನಾಡಿನಲ್ಲಿ ಹುಟ್ಟಿರುವುದೂ ನಮ್ಮ ಪುಣ್ಯ ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ತಮ್ಮ ನಾಟಕಗಳನ್ನು ಮಕ್ಕಳಿಗೆ ಅನುಕೂಲವಾಗುವಂತೆ ರಚಿಸಿದ್ದಾರೆ. ನಾಡು ನುಡಿ ನೆಲ ಜಲದ ವಿಷಯ ಹಾಗೂ ಸಂಸ್ಕೃತಿಕಯನ್ನು ಕಾಪಾಡುವ ಜವಾಬ್ದಾರಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂಬುದನ್ನು ನಾಟಕಗಳು ತಿಳಿಸುತ್ತವೆ. ನಾಡಿನ ಸಮಸ್ತ ಕಲಾವಿದರು. ನಿರ್ದೇಶಕರುˌ ನಾಟಕ ತಂಡಗಳು ಹಾಗೂ ಪೋಷಕರು ಮಕ್ಕಳು. ಶಾಲಾ ಕಾಲೇಜಿನ ಶಿಕ್ಷಕರು ಈ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಲಿ ಎಂಬ ಆಶಯ ಈ ಲೇಖನದ್ದಾಗಿದೆ. ವೆಂಕಟೇಶ ಈಡಿಗರರಾಣೇಬೆನ್ನೂರು

“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಗಜೇಶ ಮಸಣಯ್ಯ ಗಜೇಶ ಮಸಣಯ್ಯನವರ  ವಚನಗಳು ಶರಣಸತಿ ಲಿಂಗಪತಿ ಭಾವ, ಷಟ್ಸ್ಥಲ ಸಿದ್ಧಾಂತ ಮತ್ತು ಆತ್ಮಜ್ಞಾನದ ಆಳವಾದ ತಿಳುವಳಿಕೆಯನ್ನು ಒಳಗೊಂಡಿವೆ. ಬಸವಣ್ಣನವರ ಕೀರ್ತಿಯನ್ನು ಕೇಳಿ ಇವರು ತಮ್ಮ ಮಡದಿಯೊಂದಿಗೆ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.  ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು. ಒಬ್ಬಶ್ರೇಷ್ಠಅನುಭಾವಿ ಚಿಂತಕ ಬಸವಕಾಲಿನಶರಣರು.   ಕಾಲ – ಹನ್ನೆರಡನೆಯ ಶತಮಾನಒಟ್ಟು ವಚನಗಳು 70 ಜನ್ಮ ಸ್ಥಳ  ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು.ಅಂಕಿತ -ಮಹಾಲಿಂಗ ಗಜೇಶ್ವರ”. ಮಡದಿ -ಗಜೇಶ ಮಸಣಮ್ಮಐಕ್ಯ ಸ್ಥಳ – ಕಲ್ಯಾಣ ಕ್ರಾಂತಿಯ ನಂತರದಲ್ಲಿ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಮನಹಳ್ಳಿ ಗ್ರಾಮದಲ್ಲಿದ್ದು ಕೊನೆಗೆ ಅಲ್ಲಿಯೇ ಐಕ್ಯರಾದರೆಂದು ಕೆಲವರು ಹೇಳಿದರೆ, ಅಕ್ಕಲಕೋಟೆಯ ಕರ್ಜಗಿ ಗ್ರಾಮದಲ್ಲಿ ಐಕ್ಯರಾದರೆಂದು ತಿಳಿದು ಬರುತ್ತದೆ.   12 ನೇ ಶತಮಾನದ ಅಪ್ರಸಿದ್ದ ವಚನಕಾರ, ಅಕಲಕೋಟೆ ತಾಲ್ಲೋಕಿನ ಕರಜಗಿ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯ ಹೆಸರು ಏನೆಂದು ತಿಳಿಯುವುದಿಲ್ಲವಾದರೂ ಆಕೆಯೂ ವಚನಕಾರ್ತಿಯಾಗಿರುವುದನ್ನು ಗಮನಿಸಬಹುದಾಗಿದೆ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಇವರ ವಚನಗಳ ಅಂಕಿತ “ಮಹಾಲಿಂಗ ಗಜೇಶ್ವರ”. ಹೊಸ ಮದುವೆ ಹಸೆ ಉಡುಗದ ಮುನ್ನಹೂಸಿದರಿಶಿನ ಬಿಸಿಲಿಂಗೆ ಹರಿಯದ ಮುನ್ನನೀರ ತಾಳ್ಮೆ ಹರಿಯದ ಮುನ್ನತನು ಸಂಚಳವಾಗಿ, ಮನ ಗುರುಕಾರುಣ್ಯವ ಪಡೆದುಹುಸಿ ಇಲ್ಲದಿದ್ದಡೆ ಭಕ್ತನೆಂಬೆಪಿಡಿಯಲಿಲ್ಲದಿದ್ದಡೆ ಮಾಹೇಶ್ವರನೆಂಬೆತನುವಿಲ್ಲದಿದ್ದಡೆ ಪ್ರಸಾದಿ ಎಂಬೆಭೇಧವಿಲ್ಲದಿದ್ದಡೆ ಪ್ರಾಣಲಿಂಗಿ ಎಂಬೆಆಸೆ ಇಲ್ಲದಿದ್ದಡೆ ಶರಣನೆಂಬೆಐವರ ಸಂಪರ್ಕ ಭೋಗವಾ[ಗ]ದಡೆ ಐಕ್ಯನೆಂಬೆಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯವೆಂಬೆಇಂತಾಗಬೇಕೆಂಬ ಮನದ ದೇಹಇರಿದಡರಿಯದು, ಸ್ತುತಿಸಿದಡರಿಯದುಸುಖವನರಿಯದು, ದುಃಖವನರಿಯದುಈ ಚತಿರ್ವಿಧ ತಾಗು ನಿರೋಧವನರಿಯದಿರ್ದಡೆಅದೇ ಮಹಾಲಿಂಗ ಗಜೇಶ್ವರನೆಂಬೆ ಎನ್ನ ಕರಸ್ಥಲವೇ ಬಸವಣ್ಣನಯ್ಯಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಎನ್ನ ಭಾವ ಸ್ಥಲವೇಪ್ರಭುದೇವರಯ್ಯ,ಇಂತೆನ್ನ ಕರ ಮನ ಭಾವಂಗಳಲ್ಲಿ  ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ    ಮಹಾಲಿಂಗ ಗಜೇಶ್ವರನಿಮ್ಮ ಶರಣರ ಘನವನುಎನ್ನ ಸರ್ವಾಂಗದಲ್ಲಿ  ಕಂಡು ಪರಮ ಸುಖಿಯಾಗಿರ್ದೆನು.                                         ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗಗಳು ತನ್ನ ಬದುಕಿನಲ್ಲಿ  ಹೇಗೆ ಅಳವಡಿಸಿಕೊಂಡನು ಮಸಣಯ್ಯ   ಎಂದು ಸುಂದರವಾಗಿ ಸಾದರಪಡಿಸಿದ್ದಾನೆ .ಎನ್ನ ಕರಸ್ಥಲವೇ ಬಸವಣ್ಣನಯ್ಯ———————————-ಗುರು ಲಿಂಗ ಜಂಗಮ – ಉಪಾದಿತವಲ್ಲ ಅವು ತತ್ವಗುಣಗಳು .ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ  ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.ಕರಸ್ಥಲಕ್ಕೆ   ಪರಂಜ್ಯೋತಿಯ ಕುರುಹು ತಂದಿಟ್ಟ ಕರಣ ಬಸವಣ್ಣ ತನ್ನ ಕರಸ್ಥಲದಲ್ಲಿದ್ದನಯ್ಯ ಬಸವಣ್ಣನು ಎಂದಿದ್ದಾನೆ  ಗಜೇಶ ಮಸಣಯ್ಯ . ಇದನ್ನು ಚಾಮರಸನು ಅತ್ಯಂತ ಸುಂದರವಾಗಿ ಹೀಗೆ ಹೇಳಿದ್ದಾನೆ. ಕಾಯದೊಳು ಗುರು ಲಿಂಗ ಜಂಗಮದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |ದಾಯದೋರಿ ಸಮಸ್ತ ಭಕ್ತ ನಿಕಾಯವನು ಪಾವನವ ಮಾಡಿದರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ||  ಚಾಮರಸ ( ಪ್ರಭು ಲಿಂಗ ಲೀಲೆ ) ಗಜೇಶ ಮಸಣಯ್ಯನವರು ಬಸವಣ್ಣ ತನ್ನ ಕರಸ್ಥಲದ ಚೇತನ ಕಾರಸ್ತಹದಲ್ಲಿ ಇಂಬುಗೊಂಡ ಲಿಂಗದ ಜನಕ ಎಂತಲೂ ಹೇಳಿದ್ದಾನೆ. ಕರಸ್ಥದಲ್ಲಿರುವ ಲಿಂಗವು ಜಂಗಮ ಸಮಾಜ ಎಂತಾದರೆ ಮಸಣಯ್ಯನವರಿಗೆ ಅದು ಬಸವಣ್ಣ ಮಾತ್ರ.ಕರಸ್ಥಲದಿಂದ ಕಾಯಕ ಮಾಡಿ ದಾಸೋಹ ಮಾಡುವ ತತ್ವವ ನೀಡಿದ ಬಸವಣ್ಣ ತನ್ನ ನಿಜದ ಅರಿವಿನ ಗುರು ಎಂದಿದ್ದಾನೆ. ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ————————————–ಕರವು ಬಸವಣ್ಣನವರು ನೀಡಿದ ಇಷ್ಟಲಿಂಗದಿಂದ ಚುಳುಕಾಗಿ ಜಂಗಮ ಜ್ಞಾನಕ್ಕೆ ಕಾಲಿಡುವಾಗ ಮುಂದಿನ ಅಂತರಂಗದ ವಿಕಸತನದಲ್ಲಿ  ಚೆನ್ನ ಬಸವಣ್ಣ ಮನದ ಮೂರುತಿಯಾಗುತ್ತಾರೆ.ಮಾನಸಿಕವಾಗಿ ಬೌದ್ಧಿಕವಾಗಿ ಬಾಹ್ಯ ಶರೀರದಿಂದ ಆತ್ಮದ ಒಳಗೆ ಪ್ರವೇಶ ಮಾಡುವಾಗ ಚೆನ್ನ ಬಸವಣ್ಣನವರ ಷಟಸ್ಥಲ ಕರಣ ಹಸಿಗೆ ಕೊಡುಗೆ ಅಪಾರವಾಗಿದೆ..ಹೀಗಾಗಿ ಚೆನ್ನ ಬಸವಣ್ಣನವರ ಅನುಭವ ತಮ್ಮ ಪ್ರಾಣಲಿಂಗವಾಯಿತ್ತು ಎಂದು ಇಷ್ಟಲಿಂಗವೆಂಬ ಸ್ಥಾವರ ಭಾವವನ್ನು  ತೊರೆದು ಚೆನ್ನಬಸವಣ್ಣನವರ ಅನುಭವವೇ ಮೌಲ್ಯ ಅವುಗಳೇ ತಮಗೆ ಪ್ರಾಣಲಿಂಗವಾಗಿಸಲು ಅಂತರಂಗದ ಆತ್ಮ ವಿಮರ್ಶೆ ಆತ್ಮಾವಲೋಕನ ಅಗತ್ಯವಾಗಿದೆ ಎಂದಿದ್ದಾರೆ ಮಸಣಯ್ಯನವರು. ಎನ್ನ ಭಾವಸ್ಥಲವೇ ಪ್ರಭುದೇವರಯ್ಯ,———————————–ಇಷ್ಟಲಿಂಗ ಬಸವಣ್ಣ  ಪ್ರಾಣಲಿಂಗಚೆನ್ನಬಸವಣ್ಣನವರ ಜ್ಞಾನ ಪಡೆದ ಶರಣನು ಅಲ್ಲಮ ಪ್ರಭುದೇವರ ಉದಾತ್ತೀಕರಣ . ನಿರ್ದೇಹಿ ತತ್ವ   ಶರಣ ಸಂಕುಲಕ್ಕೆ ಆಕರ್ಷಣೆ ಮತ್ತು ಅನುಕರಣೀಯವಾಗಿದೆ.ಅಲ್ಲಮರ ಅನುಭಾವವು ಚಿಂತನೆಗಳು ಜಗತ್ತಿನ ಇಂದಿಗೂ ಆದರಣೀಯವಾದ ಮೌಲ್ಯಗಳು . ಇಷ್ಟಲಿಂಗವೆಂಬುದು ಅರಿವಿನ ಕುರು ಇಷ್ಟಲಿಂಗವು ಯೋಗ ಸಾಧನವು. ಅದನ್ನು ಮನದಲ್ಲಿರಿಸಿಕೊಂಡು ಪ್ರಾಣಜೀವಕ್ಕೆ ಸಂಚಯಿಸುವುದು ಪ್ರಾಣಲಿಂಗವು ಅದು ಚೆನ್ನಬಸವಣ್ಣನವರಜ್ಞಾನ ಮತ್ತು ಅನುಭವವು. ಪ್ರಾಣಮಯ ಮಾಡಿದ ಲಿಂಗ ಜ್ಞಾನವು ಭಾವಲಿಂಗವಾಗಿ ಸೃಷ್ಟಿ ಸ್ಥಿತಿ ಲಯಗಳ ಮಧ್ಯೆ ಪಂಚ ಮಹಾಭೂತಗಳ ಚೇಷ್ಟೆ ಕಾರ್ಯಗಳನ್ನು ಪಂಚೇಂದ್ರಿಗಳ ಮೂಲಕ ಅನುಭವಿಸುವ ಭಾವ ಲಿಂಗವೇ ಅಲ್ಲಮ ಪ್ರಭುಗಳು ಎಂದೆನ್ನುತ್ತಾರೆ ಮಸಣಯ್ಯನವರು. ಇಂತೆನ್ನ ಕರ ಮನ ಭಾವಂಗಳಲ್ಲಿ    ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ——————————————————————————ಈ ರೀತಿಯಾಗಿ ಇಷ್ಟ ಲಿಂಗ ಪ್ರಾಣಲಿಂಗ ಭಾವಲಿಂಗವು ತನ್ನ ಕಾಯದೊಳು ಕೂಡಿಕೊಂಡು ತನ್ನ ಶರೀರವನ್ನುಪ್ರಾಣವನ್ನು  ಮನವನ್ನು ಭಾವವನ್ನು ಶುದ್ಧ ಮಾಡುವ  ಪರಿ ಅದ್ಭುತವಾಗಿದೆ . ಇಷ್ಟ ಪ್ರಾಣ ಭಾವ ಲಿಂಗವೆನ್ನುವುದು   ಒಂದು ಮುಹೂರ್ತ ಸ್ವರೂಪ . ಭಕ್ತನ ಆಧ್ಯಾತ್ಮಿಕ ವಿಕಸನದ ಒಳ ಪಯಣ .ಬಾಹ್ಯವಾಗಿ ಬದುಕಲುಅಣಿಯಾಗುವ ಉಪಕ್ರಮ ಮಾತ್ರ . ಇದೆ ಕಾರಣಕ್ಕೆ ಬಸವಣ್ಣನವರು ಇದೆ ಅಂತರಂಗದ ಶುದ್ಧಿ ಇದೆ ಬಹಿರಂಗದ ಶುದ್ಧಿ ಎಂದಿದ್ದಾರೆ.ಒಳಗಿನ ಶುಚಿತ್ವವು ಹೊರಗಿನ ಸುಂದರತೆಗೆ ತತ್ವ ನಿಷ್ಠೆಗೆ ಕಾರಣವಾಗುತ್ತದೆ. ಶರಣ ಸಂಸ್ಕೃತಿಗೆ ಬಸವಣ್ಣ  ಚೆನ್ನ ಬಸವಣ್ಣ ಮತ್ತು ಅಲ್ಲಮಪ್ರಭುಗಳ ಅನುಭಾವ ಅನುಪಮವಾದದ್ದು ಎಂದು ಮಸಣಯ್ಯ ಶರಣ ಅವರನ್ನು ನೆನೆದಿದ್ದಾನೆ. ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ  ಕಂಡು ಪರಮ ಸುಖಿಯಾಗಿರ್ದೆನು.————————————————————————————————–ಶರಣರ ಆಧ್ಯಾತ್ಮಿಕ ಸಾಧನೆಯಲ್ಲಿ ಅಲ್ಲಮ ಬಸವಣ್ಣ ಸಿದ್ಧರಾಮ ಅಕ್ಕಮಹಾದೇವಿ ಚೆನ್ನ ಬಸವಣ್ಣ ಮಡಿವಾಳ ಮಾಚಿದೇವ ಕಕ್ಕಯ್ಯ ಹೀಗೆ ಸಾವಿರಾರು ಶರಣರುತಮ್ಮ ಅನುಭಗಳ ನಿಜದ ನಿಲುವುಗಳನ್ನು ಅನುಭವ ಮಂಟಪದಲ್ಲಿ ನಿರಂತರವಾಗಿ ಪ್ರಕಟಗೊಳಿಸಿ ಶರಣಾತ ತತ್ವಗಳನ್ನು ಇನ್ನಷ್ಟು ಬಲಗೊಳಿಸಿದ್ದಾರೆ.ಆ ಕಾರಣ ತನ್ನ ಚೈತನ್ಯದ ಕುರುಹು ಮಹಾಲಿಂಗ ಗಜೇಶ್ವರ ಎಂಬುದಾಗಿ ಆತ್ಮ ನಿವೇದನೆ ಮಾಡಿಕೊಳ್ಳುತ್ತಾ ಗಜೇಶ ಮಸಣಯ್ಯನವರು ಪ್ರತಿ ಸಾಧಕರ ಶರಣರ ಘನವಾದ ನಿಲುವುಗಳನ್ನು ತಮ್ಮ ಅಂಗ ಗುಣ ಕಾಯದಲ್ಲಿ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.ಇಷ್ಟಲಿಂಗ ಸಾಧಕನ ಗಟ್ಟಿ ಮುಟ್ಟದ ಸಂಕೇತ ಅರಿವಿನ ಕುರುಹು ಅದನ್ನು ಕೊಟ್ಟ ಬಸವಣ್ಣ ಸಮಗ್ರ ಪಯಣದ ಚಿಂತನೆಗಳ ಆರಂಭಿಕ ಸೂತ್ರಧಾರ . ಇಷ್ಟಲಿಂಗವು ನಿತ್ಯ ಯೋಗಕ್ಕೆ ಸಾಧನ ಹಾಗು ಬಹು ಮುಖ್ಯ ಸಾಧನೆಯ ಮೆಟ್ಟಿಲು. ಇಷ್ಟಲಿಂಗದ ಯೋಗದೊಳು ಹೊಕ್ಕು ನಿರಂತರವಾಗಿ ವಿಕಸಿತವಾಗಿ ಅವುಗಳನ್ನು ಪ್ರಾಣದಲ್ಲಿ ಪ್ರತಿಷ್ಠಾಪನೆ   ಮಾಡಿದಲ್ಲಿ ಅಲ್ಲಿ ಪ್ರಾಣವು ಆನಂದಕರ ಭಾವವನ್ನು ಹೊಂದುತ್ತದೆ ಅದು ಮುಂದೆ ಭಾವಕ್ಕೆ ತಲುಪಿ ಮನವು ಪ್ರಸನ್ನ ಭಾವವಾಗುತ್ತದೆ. ಅದುವೇ ಕಾಯ ಪ್ರಸಾದ ಗುಣವಾಗುವ ಸಿದ್ಧಿಯೋಗ. ಬಸವಣ್ಣ ಸ್ಥೂಲ ಚೆನ್ನಬಸವಣ್ಣ ಸೂಕ್ಷ್ಮ ಮತ್ತು ಅಲ್ಲಮ ಪ್ರಭುಗಳು ಕಾರಣ ಶರೀರಕ್ಕೆ ಪ್ರತಿನಿಧಿಗಳಾಗುತ್ತಾರೆ.ಇದನ್ನು ಭಕ್ತನು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಅನಂತಹ ಎತ್ತರದ ನಿಲುವನ್ನು ಕಾಣಲುಸಾದ್ಯ  ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 

Read Post »

You cannot copy content of this page

Scroll to Top