ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹಣ್ಣಾಗಿ ಉದುರಿದೆಲೆಗಳು ಮತ್ತೆ ಚಿಗುರಿ ಹಸಿರಾಗಬಹುದೇ ಹೇಳುಮುಪ್ಪಾಗಿ ಬಾಗಿದ ಕಾಯ ಮರಳಿ ತರುಣವಾಗಬಹುದೇ ಹೇಳು ಕಳೆದು ಹೋದ ಸಮಯ ತಿರುಗಿ ಬಾರದು ಅಲ್ಲವೇಬೆಳೆದು ನಿಂತ ಮರ ಕೆಳಗೆ ಬಾಗಬಹುದೇ ಹೇಳು ಪಂಜರದ ಗಿಳಿಯು ರೆಕ್ಕೆ ಬಡಿಯುತ ಚಡಪಡಿಸಿದೆ ನೋಡುಬೀಸುವ ಗಾಳಿಯ ಅಲೆಗಳನು ಗಿರಿಶಿಖರ ತಡೆಯಬಹುದೇ ಹೇಳು ಅರಳಿದ ಹೂಗಳ ಪರಿಮಳ ಸುತ್ತ  ಆವರಿಸಿ ಘಮಘಮಿಸಿದೆಕೆರಳಿದ ಗಾಯಗಳ ನೋವು ಮನದಿಂದ ಬೇರೆಯಾಗಬಹುದೇ ಹೇಳು ದುಃಖಗಳ ಮೂಟೆ ಹೊತ್ತು ನಿಂತಿಹುದು ನೊಂದ ಜೀವಸವಿದಂಥ ಸುಖಗಳ ಬೇಗಂ ಎಂದಾದರೂ ಮರೆಯಬಹುದೇ ಹೇಳು. ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಇತರೆ

ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಹಾಸ್ಯ ಬರಹ, ಗೊರೂರು ಅನಂತರಾಜು, ಹಾಸನ.

ಹಾಸ್ಯ ಸಂಗಾತಿ ಗೊರೂರು ಅನಂತರಾಜು ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಬೋರನಿಗೆ ಹುಟ್ಟೂರುನಾಯಕರಹಳ್ಳಿಯಲ್ಲಿ  ಒಬ್ಬನೇ ಕುಂತು ತುಂಬಾ ಬೋರಾಗಿತ್ತು. ಅವನ ಗೆಳೆಯರೆಲ್ಲಾ  ಕೆಟ್ಟು ಪಟ್ಟಣ ಸೇರಿದ್ರು. ಇವನು ಮಾತ್ರ ಒಳ್ಳೆಯವನಾಗೇ ಹಳ್ಳಿಯಲ್ಲಿ ಉಳಿದುಬಿಟ್ಟಿದ್ದ. ಮನೆಗೆ ಸುಣ್ಣ ಬಣ್ಣ ಹೊಡೆಸಿ ಬಹಳ ದಿನ ಆಗಿತ್ತು. ಇಟ್ಟಿಗೆ.ಸಿಮೆಂಟ್,ಸಕಲೇಶಪುರದ ನಾಟಿ ಮರಳು ಇಲ್ಲದೇ ಇವರಪ್ಪ ಕೆಂಚ ಜೇಡಿ ಮಣ್ಣಲ್ಲೇ ಗೋಡೆ ಕಟ್ಟಿ, ಆರ್‌ಸಿಸಿ ಶೀಟ್ ಹೊದಿಸಿ ಲಲಿತ ಮಹಲ್ ಕಟ್ಟಿದ್ದ. ಅಪ್ಪ ಸತ್ತು ಇಪ್ಪತ್ತು ವರ್ಷ ಆಗಿತ್ತು. ಸತ್ತು ಹನ್ನೊಂದನೇ ದಿನಕ್ಕೆ ಹೊಡೆಸಿದ್ದು ಸುಣ್ಣ ಬಣ್ಣ. ಅವತ್ತು ಪುಣ್ಯ ಮಾಡಿಸ್ಕೊಂಡಿದ್ದ ಪುಣ್ಯಾತ್ಮ ಇವತ್ತಿನವರೆಗೂ ಗೋಡೆಗೆ ಸುಣ್ಣ ಬಣ್ಣ ಹೊಡೆಸಿರಲಿಲ್ಲ, ಆ ಜೇಡಿಮಣ್ಣಿನ  ಗೋಡೆ ಜಡಿಮಳೆಗೆ ಬಿರುಕು ಬಿಟ್ಟಿದ್ದು ತಿಗಣೆ, ಜಿರಲೆಸೇರ್ಕೊಂಡು ಬೋರನಿಗೆ ಬಹಳ ಕಾಟ ಕೊಡ್ತಿದ್ವು. ಹಗಲು ಹೊತ್ತಿನಲ್ಲಿ ಜಿರಲೆ ಕಾಟ. ರಾತ್ರಿ ವೇಳೆ ತಿಗಣೆ ಕಾಟ. ಯಾರೋ ಹೆಲ್ತ್ ಇನ್ಸ್ ಪೆಕ್ಟರ್ ಮನೆ ಹತ್ರ ಬಂದು ಮನೆ ಮುಂದೆ ಚರಂಡಿ ನೀಟಾಗಿ ಮಡಿಕೊ ಬೋರ.  ಚರಂಡಿಯಲ್ಲಿ ನೀರು ನಿಂತ್ರೆ ಸೊಳ್ಳೆಗಳು ನೀರಲ್ಲಿ ಮೊಟ್ಟೆ ಇಡ್ತವೆ.  ಅವು ಮರಿಯಾಗಿ ಅಭಿವೃದ್ಧಿ ಹೊಂದಿ ರೆಕ್ಕೆ ಬೆಳೆದು ಹಾರಿ ಬಂದು ನಿನ್ನ ಕಚ್ತವೆ. ಅವು ನಿನ್ನ ಹಗಲು ಹೊತ್ತು ಕಡಿದ್ರೆ ಡೆಂಗ್ಯೂ ಜ್ವರ.  ರಾತ್ರಿ  ಕಡಿದ್ರೆ ಮಲೇರಿಯಾ ಅಂತ ತಿಳ್ಕೋ.  ಸೊಳ್ಳೆಯಲ್ಲೂ ಎರಡು ಜಾತಿ ಐತೆ.. ಅಂತ ಜಾತ್ಯಾತೀತ ಭಾಷಣ ಮಾಡುತ್ತಿರಲು‘”ಇನ್ಸ್ ಸ್ಪೆಕ್ಟ್ರೇ, ನೀವೇನೋ ಉದ್ದುದ್ದ ಭಾಷಣ ಮಾಡಿ ಜನ ಜಾಗೃತಿ ಮಾಡ್ತಿದ್ದಿರಿ ತುಂಬಾ ಥ್ಯಾಂಕ್ಸ್..  ಇವೆಲ್ಲಾ ಸೈನ್ಸ್  ಮಾತು ನನ್ನ ನೈಸ್ ರೋಡ್ ತಲೆಗೆ ಹತ್ತಕ್ಕಿಲ್ಲ. ಸದ್ಯ ನನ್ನ ತಲೇಲಿ ಹೇನು ಕಾಟ ತಪ್ಪಕ್ಕಿಲ್ಲ. ತಿಗಣಿಗೆ ಹೊಡಿಯೋ ಔಷಧಿ ತರಹ ಹೇನು  ನಾಶಕ್ಕೆ ಏನಾದ್ರು ಆಯಿಲ್ ಇದ್ರೇ ಹೇಳಿ. ನಾನು ಸ್ಟ್ರೇ ಮಾಡ್ಕೋತಿನಿ.. ಎನ್ನಲು ಹೆಲ್ತ್ ಇನ್ಸ್ ಸ್ಪೆಕ್ಟರ್ ದೂಸ್ರ ಮಾತ್ನಾ ಡದೆ ತಲೆ ಕೆರೆದುಕೊಂಡು ಹೆರಿಗೆ ಆಸ್ಪತ್ರೆ ಕಡೆಗೆ ಹೊಂಟೋಗಿದ್ರು. ಛೇ ಏನು ಮಾಡೋದು ಮನೆಯಲ್ಲಿ ಮಲಗೊಂಗಿಲ್ಲ. ಈ ಸೊಳ್ಳೆ, ಜಿರಳೆ, ತಿಗಣಿ ಕಾಟ. ಹಲ್ಲಿ ಲೊಚ ಲೊಚ ಶಕುನ ಜ್ಯೊತಿಷ್ಯ ಭಯ!  ಅದ್ಕೇ ಏನ್ ಮಾಡೊದು..? ರಾತ್ರಿಯೆಲ್ಲಾ ಕುಂತು ಯೋಚ್ನೇ ಮಾಡ್ದ. ಬೆಳಿಗ್ಗೆ   ಹೊತ್ಗೆ ಒಂದು ಪ್ಲಾನ್ ತಲೇಲಿ ಹೊಳಿತು. ಅದೇನು ಐದು ವರ್ಷದ ಪಂಚವಾರ್ಷಿಕ ಯೋಜನೆ ಅಲ್ಲಾ. ಐದು ದಿನಗಳಲ್ಲಿ ಮುಗಿಸಬಹುದಾದ ಯೋಜನೆ. ತನ್ನ ಪಾಲಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಬಂದಿದ್ದ ಐದು ಗುಂಟೆ ಜಮೀನಿನಲ್ಲಿ ಒಂದು ಎತ್ತರವಾಗಿ ಅಟ್ಟಣಿ ಕಟ್ಟಿ ರಾತ್ರಿ ಅಲ್ಲೆ ಮಲಗೋದು. ಇತ್ತ ರಾತ್ರಿ ಕಾಡು ಹಂದಿ ಹೊಲಕ್ಕೆ ನುಗ್ಗಿ ಫಸಲು ಹಾಳು ಮಾಡ್ಡಂಗೆಕಾಯ್ದಂಗೂ ಆಗ್ತದೆ. ಅತ್ತ ಜಿರಳೆ ಕಾಟನೂ ತಪ್ತದೆ. ಸೊಳ್ಳೆಗಳು ಕೂಡ ಅಷ್ಟು ಎತ್ತರಕ್ಕೆ ಹಾರೋದು ಡೌಟು ಅಂತ ಥಾಟ್ಸ್ ಮಾಡಿದ್ದ.ಮಾರನೇ ದಿನ ಬೆಳಿಗ್ಗೆ ಎದ್ದು ಲುಂಗಿ ಸೊಂಟಕ್ಕೆ ಬಿಗಿಯಾಗಿ ಸಿಗಿಸಿಕೊಂಡು ಹೊಳೆ ಕಡೆ ಹೊರಟ. ಬೋರ ಮನೆಯಲ್ಲೇ ಕುಂತುoಡು ಹೊಟ್ಟೆ ಸ್ವಲ್ಪ ಮುಂದೆ ಬಂದಿತ್ತು. ಬಿಳಿ ಪಂಚೆ ಬೇಗ ಕೊಳೆ ಆಗ್ತದೆ ಅಂತ ಅಡ್ಡಡ್ಡ  ಗೆರೆ  ಇರೋ ಪಟೆಪಟೆ ಲುಂಗಿನ ಸಿ.ನಂಜಪ್ಪನ ಅಂಗಡಿಯಲ್ಲಿ ಖರೀದಿಸಿ ತಂದಿದ್ದ. ಅದು ಪಕ್ಕ ಕಾಟನ್ ಪೇಟೆ  ಕಾಟನ್ ಲುಂಗಿ. ಒಂದೇ ಒಗೆತಕ್ಕೆ ಸಿಂಕ್ ಆಗಿಬಿಡ್ತು.  ಇವ  ಹದಿನಾರು ಮೊಳದ ಲುಂಗಿತಗಳೊದು ಬಿಟ್ಟು ಹನ್ನೆರೆಡು ಮೊಳದ್ದು ತಗೊಂಡಿದ್ದ. ಅದೇ ಎಡವಟ್ಟಾಗಿತ್ತು. ಅದನ್ನು ಪೂರಾ ಸೊಂಟಕ್ಕೆ ಸುತ್ಕೊಂಡು ಹಿಂದ್ಗಡೆ ಕಟ್ಟಿಕೊಳ್ಳೊಕ್ಕೆ ಆಗ್ತಿರಲಿಲ್ಲ. ಹೀಗಾಗಿ ಆಗಾಗ್ಗೆ ಜಾರಿ ಹೋಗ್ತಿದ್ದ ಲುಂಗಿನ ಸಿಗಿಸಿಕೊಂಡು ಸಿಗಿಸಿಕೊಂಡು ಸುಸ್ತಾಗಿದ್ದ. ಇತ್ತ ಬೋರ ಬೆಳಿಗ್ಗೆ ಎದ್ದೇಟಿಗೆ ಹೊಳೆ ಹತ್ರ ಬರುತ್ತಿರಲು ಅತ್ತ ಊರಿನ ಹಿರಿಯ ಈರಯ್ಯ ಮೇಷ್ಟು ಹೊಳೆ ಬದಿಯ ಎಲ್ಲಾ ನಿತ್ಯಕರ್ಮ ಮುಗಿಸಿಕೊಂಡು ಟರ್ಕಿ ಟವಲ್ ನಲ್ಲಿ ಮುಖ ಒರಸ್ಕೊoಡು ಸೂರ್ಯ ದೇವರಿಗೆ ನಮಸ್ಕಾರ ಮಾಡ್ತಿದ್ರು,‘ ಏನ್ ಮೇಷ್ಟ್ರೇ, ನಮ್ಮ ಹೇಮಾವತಿ ಹೊಳೆಲಿ ಎಷ್ಟು ಟಿಎಂಸಿ ನೀರು ಐತೆ..?ಬೋರನ ಈ ತರಲೆ ಪ್ರಶ್ನೆಗೆ ಈರಯ್ಯ ಮೇಷ್ಟ್ರು ಏನ್ ತಾನೇ ಉತ್ತರ ಕೊಟ್ಟಾರು?“ಲೋ, ಬೋರ, ನಿನ್ಗೆ ತಿ.. ಮುಖ ತೊಳ್ಕೊಳಕ್ಕೆ ಎಷ್ಟು ನೀರು ಬೇಕು ಅಷ್ಟೇ ಐತೆ ಹೋಗ್ಲ.. ರಾಜ್ಯದ ಉಸಾಬರಿ ಎಲ್ಲಾ ನಿನಗ್ಯಾಕೆ.. ರಾಜಧಾನಿಯಲ್ಲಿ  ಇರೋ ನಮ್ಮ ಮಂತ್ರಿ ಮಾನ್ಯರು ಅದನ್ನು ನೋಡ್ಕೊತ್ತಾರೆ. ಅದ್ಕೆ ಅಂತ್ಲೇ ನಾವು  ಹೆಬ್ಬಟ್ಟು ಒತ್ತಿ ಓಟ್ ಹಾಕಿ ಗೆಲ್ಸಿ ಕಳಿಸಿಲ್ವಾ..“ಮೇಷ್ಟ್ರೇ, ನಾಳೇ ಬೆಂಗಳೂರಿಗೆ ಹೋಗೋಕೆ ನಮ್ಮ ಊರಿಂದ ಜನ ಎಲ್ಲಾ ಹೊಂಟೋರೆ. ನೀನು ಬಾರಲಾ ಬೋರ ಅಂತ ಆ ವೆಂಕಟಸ್ವಾಮಿ ಹೇಳ್ವನೆ. ನಾನೂ ಬೆಂಗಳೂರಿಗೆ ಹೋಗಿ ಬಹಳ ದಿನ ಆಯ್ತು.  ಈಗೇನೋ ಅದ್ನ ಮೆಗಾಸಿಟಿ ಮಾಡೋಕೆ ಹೊಂಟೊರಂತೆ..!‘ ನೀನ್ಗೆ ನರೇಗದಲ್ಲಿ ಏನೂ ಕೂಲಿ ಕೆಲಸ ಸಿಕ್ಕಿಲ್ಲ ಅಂದ್ರೇ ಬೆಂಗಳೂರಿಗೆ ಹೋಗಿ ಬಾ. ಹಾಗೇ ಬರ್ತಾ ತಮಿಳುನಾಡಿನ ಸಿಎಂ ನಟಿಸಿರೋ ಮೆಗಾ ಹಿಟ್ ಸಿನಿಮಾನೂ ನೋಡ್ಕೊಂಡು ಬಾ..‘ ಆಯ್ತು ಮೇಷ್ಟ್ರೇ, ನೀವು ಬನ್ನಿ ಆ ಸ್ಟ್ರೈಕ್ ನಲ್ಲಿ ನೀವು ವಸಿ ಎಂಟರ್ ಟೈನ್ ಮೆಂಟ್ ತಗೊಳಿರಂತೆ..‘ ನಮಗ್ಯಾಕ್ಲ ಬೋರ ಮನರಂಜನೆ. ಕಾಡು ಬಾ ಅಂತದೆ ಊರು ಹೋಗು ಅಂತದೆ.  ಈ ಊರಲ್ಲಿ ಹುಟ್ಟಿ ಇದನ್ನೇ ಜನ್ಮಭೂಮಿ ನಮ್ಮ ಕರ್ಮಭೂಮಿ ಅನ್ಕೊಂಡು ಕಾಲ ಹಾಕೋ ಮಂದಿ ನಾವು.ನಾನು  ಹುಡ್ಗುನಾಗಿದ್ದಾಗ ಕೂಲಿಮಠದ ಮೇಷ್ಟ್ರು ಹತ್ರ ನಾಲ್ಕು ಅಕ್ಷರ ಮರಳಲ್ಲಿ ಬರ್ದಿ ಕಲ್ತಿದ್ದೆ.  ಅದು ನನ್ಗೆ  ಈಗ ರಾಮಾಯಣ, ಮಹಾಭಾರತ, ಭಾಗವತ ಓದಿಕೊಳ್ಳೊಕೆ ನೆರವಾಗ್ತಿದೆ. ನಮ್ಮಪ್ಪ ಲಕ್ಷ್ಮೇಗೌಡ್ರುಸುತ್ತಮುತ್ತಲ ಊರಿಗೆ ಹೋಗಿ ಪೌರಾಣಿಕ ನಾಟಕ ಕಲಿಸ್ತಿದ್ರು.  ಅಪ್ಪ  ಬಿಟ್ಟು ಹೋಗಿದ್ದು ಅದೊಂದೆ ಹಳೇ ಹಾರ್ಮೊನಿಯಂ ಮತ್ತು ಮರದ  ಪೆಟ್ಟಿಗೆ. ಆಗೆಲ್ಲಾ ನಾನು ನಮ್ಮಪ್ಪನ ಜೊತೆ ನಾಟಕ ನೋಡೋಕೆ ಹಳ್ಳಿ ಹಳ್ಳಿಗೆ ಹೋಗ್ತ ಇದ್ದೆ.  ಅವರಿವರು ಸಮಯ ಸಂದರ್ಭ ಏನೇನೋ ಕಾರಣ ಹೇಳಿ ನಾಟಕದ ಪ್ರದರ್ಶನ ದಿನ ತಪ್ಪಿಸಿಕೊಂಡಾಗ ಆ ಪಾರ್ಟು ನಾನೇ ಮಾಡ್ತಿದ್ದೆ. ನಮ್ಮಪ್ಪ  ಹಾರ್ಮೋನಿಯಂ ನುಡಿಸ್ತಿದ್ದನ್ನೇ ನೋಡ್ಕೊಂಡು, ಮನೇಲಿ ಕುಂತು ಅಭ್ಯಾಸ ಮಾಡಿ ಅಂತೂ ಇಂತು ಹಾರ್ಮೋನಿಯಂ ಮೇಷ್ಟ್ರಾಗಿ ನಿಮ್ಮಂತಹ ಕಲಿಯುಗದ ನಾಟಕ ಕಲಿಯುವ ಊರ ಹುಡುಗರಿಗೆಲ್ಲಾ ನಾಟಕ ಕಲಿಸಿದೆ. ಅದ್ಕೆ ನೀವೆಲ್ಲಾ ನಾಟಕದ ಮೇಷ್ಟ್ರು ಅಂತ ಆಗ ನನ್ನನ್ನು ಕರಿತಿದ್ರಿ. ಈಗ ನನ್ಗೂ ವಯಸ್ಸಾಯ್ತು. ನೀವೆಲ್ಲಾ ನನ್ನ ಕೈ ಬಿಟ್ರಿ. ಅದ್ಕೇ ಈಗ ನಾನು ಬರೇ ಮೇಷ್ಟ್ರು ಆಗಿ ಉಳಿದಿದ್ದೀನಿ ಅಷ್ಟೇ..” ಬೇಜಾರು ಮಾಡ್ಕೋಬೇಡಿ ಮೇಷ್ಟೇ. ಹಳೇ ಮೇಷ್ಟ್ರು ರಿಟೈರ್ಡ್ ಆದ್ಮೇಲೆ ಹೊಸ ಮೇಷ್ಟ್ರು ಬರಬೇಕಲ್ವೇ.! ಹಂಗೆ ಈ ದೇಶದ ಪಾಲಿಟಿಕ್ಸ್ ನಲ್ಲಿ ಹಳೇ ಪಾರ್ಟಿಗಳೆಲ್ಲಾ ಟೆಂಟ್ ಸಿನಿಮಾಗಳಂತೆ ಪ್ಯಾಕಪ್ ಆಗ್ತಿವೆ.  ಈಗೇನೋ ಹೊಸದಾಗಿ ಜಿರಲೆ ಪಾರ್ಟಿ ಅಂತ ಜೋರಾಗಿ ಹವಾ ಹುಟ್ಟಾಕ್ತ  ಐತೆ..ನಾನು ಆ ಪಾರ್ಟಿ ಸೇರೋಣ ಅಂತ ಯೋಚ್ನೆ ಮಾಡಿವ್ನಿ..‘ಲೇ ತರಲೇ, ನಿಮ್ಮಂತಹ ಎಸ್.ಎಸ್.ಎಲ್.ಸಿ. ಫೇಲಾದ ಹುಡುಗರಿಗೆಲ್ಲಾ ಆ ಪಾರ್ಟಿಯಲ್ಲಿ ಸೀಟು ಸಿಕ್ಕಲ್ಲ ಹೋಗ್ಲಾ ನಿನ್ನ ಕೆಲಸ   ನೋಡ್ಕೋ. ಈ ಹಳ್ಳಿಯಲ್ಲಿ ನೀನು ಕಷ್ಟ ಪಟ್ಟು ದುಡಿಮೆ ಮಾಡಿ ನಿನ್ನ ಹೊಟ್ಟೆಪಾಡು ಹೇಗೋ ನಡಿತಾ ಐತೆ.  ನಾಳೆ ಬೆಂಗಳೂರಿಗೆ ನೀನು ಹೋಗಿ ಬಾ  ಬೇಡ ಅನ್ನಲ್ಲಾ. ಏನಾದ್ರೂ ವಿರೋಧ ಪಕ್ಷದವರು  ಐನೂರು ಸಾವಿರ ಕೊಟ್ರೇ ಹೋಗಿ ಬಾ. ನಿನಗೆ ನಷ್ಟ ಏನೂ ಆಗಲ್ಲ. ಪುಕ್ಸಟ್ಟೆ ಬಸ್ ಮಾಡವರೇ ಅಂತ ಮನೆ ಕೆಲಸ ಎಲ್ಲಾ ಬಿಟ್ಟು ಸಿಟಿಗೆ ಹೋಗಿ ಗಲಾಟೆ ಮಾಡಿ ಏಟು ತಿಂದು ಬರಬ್ಯಾಡ ದಡ್ಡ..ಎಂದು ಬಿಳಿ ಗಡ್ಡ ಕೆರೆದುಕೊಂಡರುಈರಯ್ಯ ಮೇಷ್ಟು. ” ನೀವು ಹೇಳೋ ಮಾತಿನಲ್ಲೂ ಸತ್ಯ ಐತೆ ಮೇಷ್ಟ್ರೇ. ನಾನೂ ಕೂಡ ನಮ್ಮ ಹೊಲದಲ್ಲಿ ಒಂದು  ಅಟ್ಟಣಿ ಕಟ್ಟಬೇಕು ಅಂತ ಇವತ್ತು ಬೆಳಿಗ್ಗೆ  ತಾನೇ ಯೋಚನೆ ಮಾಡಿವ್ನಿ. ನಾಳೆ ಬೆಂಗಳೂರು ಚಲೋ ಚಳುವಳಿಗೆ ನಾನು ಬರೊಲ್ಲಾ. ನಂಗೆ ಡೆಂಗ್ಯೂ ಜ್ವರ ಬಂದೈತೆ ಅಂತ ವೆಂಕಟಸ್ವಾಮಿಗೆ ಒಂದು ಸುಳ್ಳು ಹೇಳಿ ಸಾಗ ಹಾಕ್ತಿನಿ..” ಸರಿ, ಈಗ ಹೇಮಾವತಿ ಹೊಳೆಯಲ್ಲಿ ಇರೋ ಡೆಡ್ ಸ್ಟೊರೇಜ್ ವಾಟರ್ ನಲ್ಲಿ ಒಂದಿಷ್ಟು ಎಡದಂಡೆ ನಾಲೇಲಿ ನೀರು ಬಿಟ್ಟವರೇ.. ನಾಳೆ ಏನ್ ಮಾಡ್ತಾರೋ ಗೊತ್ತಿಲ್ಲ.  ಸಧ್ಯ ಈಗ ಹೇಮಾವತಿ  ಹೊಳೆಯಲ್ಲಿ ಹರಿತಿರೋ ಈ ಶುದ್ಧವಾದ ನೀರಲ್ಲಿ ಮುಖ ತೊಳ್ಕೊಂಡು ಆ ಆಕಾಶ  ದೇವನಿಗೆ ಮೋಡ ಕಟ್ಟಿ ಮಳೆ ಹುಯ್ಸಪ್ಪ ಅಂತ ಪ್ರಾರ್ಥನೆ ಮಾಡಿ,  ಮನೆಗೆ ಹೋಗಿ ಹೆಂಡ್ತಿ ಮೈನಾವತಿ ಮಾಡಿಟ್ಟಿರೋ ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ತಿಂದು ಗೊರೂರು  ಗ್ರಾಮ ಪಂಚಾಯ್ತಿ ಆಫೀಸ್ ಹತ್ರ ಹತ್ತು ಗಂಟೆ ಹೊತ್ತಿಗೆ  ಸರಿಯಾಗಿಬಾ. ಗೊರೂರು ಮಧ್ಯೆ ಹಾಯ್ದ ಹೋಗಿರುವ ಚಂಗರವಳ್ಳಿ ನಾಲೆಯಲ್ಲಿ  ಹೂಳು ತುಂಬಿಕೊಂಡೈತೆ. ಇದರಿಂದ ನಮ್ಮೂರ ತನಕ ನೀರು ಬರ್ತಿಲ್ಲಾ. ಆ ಹೊಳನ್ನೆಲ್ಲಾನರೇಗ ಸ್ಕಿಂ ನಲ್ಲಿ ಬಿಲ್ ಮಾಡಿ ತೆಗಿಸಿಬಿಡಪ್ಪ.  ಬೋರನಂತಹ ಹಳ್ಳಿಯಲ್ಲಿ ಉಳಿದಿರುವ ಶ್ರಮಿಕ ಕೂಲಿ ಕಾರ್ಮಿಕರ ಕೈಗೆ ಒಂದಿಷ್ಟು ಕೆಲಸ ಕೊಡಪ್ಪ   ಅಂತ ಹೊಸದಾಗಿ  ಅಪಾಯಿಂಟ್ ಆಗಿ ಬಂದಿರೋ ಪಿಡಿಯೋ ಸಾಹೇಬ್ರಿಗೆ ಹೇಳ್ತಿನಿ. ಪಾಪ ಆತ ನೀಟಾಗಿ  ಮನೇಲಿ ಕುಂತು  ಓದಿ ನೀಟ್ ಪರೀಕ್ಷೆ ಬರೆದು ಮುಂದೆ ಬಿಇ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿ,  ಐಎಎಸ್, ಐಪಿಎಸ್, ಕೆಪಿಎಸ್ಸಿ ಪರೀಕ್ಷೆಗೆ ಅಂತೆಲ್ಲಾ ಓದ್ಕೊಂಡು   ಸದ್ಯಕ್ಕೆ ಈ ಪಿಡಿಓ ಉದ್ಯೋಗಕ್ಕೆ ಬಂದವ್ನೇ.  ಪುಣ್ಯಾತ್ಮ ತಾನು   Rank ಸ್ಕೂಡೆಂಟ್ ಅಂತ ಕೆಲಸ ಹುಡಿಕ್ಕೊಂಡು ವಿದೇಶಕ್ಕೆ ಹಾರಿ ಹೋಗಿಲ್ಲ.  ಹೊಸ ಮನುಷ್ಯ ಲಂಚದ ಆಮಿಷಕ್ಕೆ ಇನ್ನೂ ಬಗ್ಗಿಲ್ಲ.  ಮುಂದೆ ಎಲ್ಲಿ ಈ ಗುತ್ತಿಗೆದಾರರು ಆಮಿಷ ತೋರಿ ಏನು ಹಾಳು  ಮಾಡ್ತಾರೋ ಗೊತ್ತಿಲ್ಲ. ಇರಲಿ ಸಧ್ಯಕ್ಕಂತೂ ಆತ  ನಯ ವಿನಯ ಇರೋ ವ್ಯಕ್ತಿಯಾಗಿ  ಕಾಣ್ಸಿತ್ತಾವ್ನೆ..”  ಹೌದ ಮೇಷ್ಟ್ರೇ, ನೀವು ಹೇಳಿದ ಹೊತ್ತಿಗೆ ಸರಿಯಾಗಿ ಬರ್ತಿನಿ. ಕಡೆದಾಗಿ ಒಂದು ಪ್ರಶ್ನೆ. ಅದೇನೋ  ಹಳೇ ನರೇಗ  ಹೋಗಿ ಈಗ ಹೊಸದಾಗಿ..ರಾಗ ಎಳೆದ“ಹೋಗ್ಲ ಬೋರ.. ನಮ್ಮ  ಮಾತು ಹೀಗೆ ಕಂಬಿ ಇಲ್ಲದ ರೈಲಿನಂತೆ ಹೋಗ್ತ ಇದ್ರೇ ಡೆಡ್ ಲೈನ್ ಇರೊಲ್ಲ…—ಗೊರೂರು ಅನಂತರಾಜು,ಹುಣಸಿನಕೆರೆ ಬಡಾವಣಿ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ.

ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಹಾಸ್ಯ ಬರಹ, ಗೊರೂರು ಅನಂತರಾಜು, ಹಾಸನ. Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಜ್ಯೋತಿ ಡಿ . ಬೊಮ್ಮಾ ಮನದ ಮಾತುಗಳು ಜಿರಳೆಗಳು ಮತ್ತು ಶಿಕ್ಷಣ ವ್ಯವಸ್ಥೆ. ಈ ಸಂದರ್ಭದ ಮಾತುಗಳಂದ್ರ ಮಳಿ ಮತ್ತು ಜಿರಲೆಗಳು.ಮಳಿಗಾಲ ಶರು ಆಗಿ ಎರಡು ತಿಂಗಳಾದಮ್ಯಾಲ ಈಗ ನಮ್ಮ ಕಲ್ಬುರ್ಗಿ ಕಡಿ ಮಳಿ ಬರಲತದ. ಬಿತ್ತಿದ ಉದ್ದು ಹೆಸರು ಬೆಳೆಗಳು ಮಳಿ ಇಲ್ದೆ ಬಾಡಿ ಹೋದ್ವು.ಈಗ ಬಿತ್ತಿದ ತೊಗರಿ ಅತೀ ಮಳೆಯಿಂದ ಎನಾಗತದೋ , ಪ್ರತಿ ವರ್ಷ ಇದೇ ಕತಿ .ಅತಿವೃಷ್ಟಿ ಅಥವಾ ಅನಾವೃಷ್ಟಿ , ಆಹಾರ ಹೆಂಗಾದ್ರೂ ಮಾಡ್ಬಹುದು. ಬೋರ್ವೆಲ್ ಗಳದಾಗೆಲ್ಲ ಅಂತರ್ಜಲ ಮಟ್ಟ ಕುಸದು ನೀರು ಬತ್ತಿ ಹೋಗಿದ್ವು. ಇನ್ನೂ ಸ್ವಲ್ಪ ದಿನ ಮಳಿ ಬರದಿದ್ರ ನೀರಿನ ಬರಗಾಲ ಕಾಣಬೇಕಾಗಿತ್ತು.ಮಳಿ ಕರುಣೆ ತೋರಿಸ್ತು. ಇದರ ಜೋತೆಗೆ ನಮ್ಮ ದೇಶದ ಯುವ ಜಿರಲೆಗಳ ಹರತಾಳ ಒಂದು ರೀತಿ ಯಶಶ್ವಿ ಆಯ್ತು.ಈಗಿನ ಯುವ ಪಿಳಗಿ ಜೆನ್ ಝಿ ಗಳ ಒಂದು ರೀತಿ ಹಠಮಾರಿಗಳು.ಅವರ ವಿದ್ಯ ಬಗ್ಗೆ ಹೇಳಬೆಕಂದ್ರ ಈಗ ಎಲ್ಲರೂ ಓದಿದವ್ರೆ.ಓದಲಾರದವ್ರು ಕೂಡ ಸೋಸಿಯಲ್ ಮಿಡಿಯಾದ ಪ್ರಭಾವದಿಂದ ವುದ್ಯಾವಂತ್ರೆ.ಯಾಕಂದ್ರ ಇಂಗ್ಲಿಷ್ ಓದಕ್ಕ ಬರೆಯಕ್ಕ ಬರದಿದ್ರೂ ಇವರು ಪೋನ್ ನಲ್ಲಿ ಇಂಗ್ಲಿಷ್ ಒದ್ತಾರ.ಮತ್ತ ಟೈಪ್ ಕೂಡ ಮಾಡತಾರ.ಇದು ಝನ್ ಝಿ ಗಳ ಕರಾಮತ್ತು. ನಮ್ಮ ನ್ಯಾಯವಾದುಗಳು ಈಗಿನ ನಿರುದ್ಯೋಗಿ ಯುವ ಪಿಳಿಗಿ ಜಿರಲೆಗಳಂತೆ ಎಲ್ಲರ ಮ್ಯಾಲ ಎಗರಿ ಬಿಳತಾರ ಅಂತ ಹೆಳಿದ್ರು.ಆದ್ರ ಅದು ಸುಳ್ಳು. ಝನ್ ಝಿ ಗಳು ತಮ್ಮ ಪಾಡಿಗಿ ತಾವು ಯಾವಾಗ್ಲೂ ಪೋನ್ ನಲ್ಲಿ ಮುಳಗಿರತಾವ.ಅವರಿಗೆ ಭವಿಷ್ಯದ ಬಗ್ಗೆ ಅತೀ ನಿರೀಕ್ಷೆ ಗಳಿಲ್ಲ. ಯಾರ ಜೋತೆ ಹೆಚ್ಚು ಮಾತಿಲ್ಲ , ಎಕಾಂಗಿಯಾಗೆ ಇರತಾರ.ಮನಿಗಿ ಯಾರಾದ್ರೂ ಅಥಿತಿ ಗಳು ಬಂದ್ರ ಸುಮ್ನ ಮಾರಿ ತೋರ್ಸಿ ರೂಂ ನೊಳಗ ಹೋಗಿ ಸೇರಿಕೊಂಡು ಬಿಡತಾವ.ಅವ್ರು ಗೆಳೆಯರೊಂದಿಗೆ ಆಪ್ತ ಆಗಿ ಇರುವಷ್ಟು ಹೆತ್ತವರೊಂದಿಗೂ ಇರಲ್ಲ.ತಮ್ಮ ಮನದಾಳ ಗೂಗಲ್ ಅಥವಾ ಅಲೆಕ್ಸಾ ಗ ಹೇಳತಾರ ಹೊರತಾಗಿ ಹೆತ್ತವರಿಗಿ ಹೇಳಲ್ಲ. ಆದ್ರ ಅವರಿಗಿ ಒತ್ತಾಯಿಸಿದ್ರ ದಬ್ಬಾಳಿಕಿ ಮಾಡಿದ್ರ , ಕಿಡಿಕಿಡಿ ಆಗತಾರ. ಆತ್ಮಹತ್ಯೆಗಳಂತ ನಿರ್ಧಾರ ಕ್ಕೂ ಕೂಡ ಯುವ ಜನ ಅಂಜತಿಲ್ಲ.ಇದು ಶೋಚನೀಯ ವಿಷಯ. ಈಗಿನ ಯುವ ಜನ ಗೌಪ್ಯತೆ ಇಷ್ಟ ಪಡತಾರ.ಯಾರೊಂದಿಗೂ ಹೆಚ್ಚು ಎನನ್ನು ಹಂಚಿಕೊಳ್ಳಲ್ಲ. ಎಕಾಂತ ಮತ್ತು ಪೋನ್ ಗಳೆ ಅವ್ರ ಆಪ್ತ ಸಂಗಾತಿಗಳು. ಇನ್ನೂ ಶಿಕ್ಷಣದ ವಿಷಯ ಬಂದ್ರೆ ಯುವ ಜನ ಅದರ ಬಗ್ಗೆ ಸಂತುಷ್ಟರಾಗಿಲ್ಲ.ಎಷ್ಟೇ ಓದಿ ಎರಡೆರಡು ಡಿಗ್ರಿ ತಗೊಂಡ್ರು ಉದ್ಯೋಗದ ಭರವಸೆಗಳಿಲ್ಲ.ಗ್ರಾಮೀಣ ಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಕಾರ್ಪೊರೇಟ್ ನೌಕರಿಗಾಗಿ ದೊಡ್ಡ ಊರು ಸೇರಿ ಪಟ್ಟಣದವರೊಂದಿಗೆ ಸೆಣಸಿ ತಮ್ಮ ನೌಕರಿ ಉಳಿಸಿಕೊಳ್ಳಲು ಹರಸಾಹಸ ಪಡಬೇಕು.ಇನ್ನೂ ಸರ್ಕಾರಿ ನೌಕರಿ ಸೇರಬೇಕಾದ್ರ ವಶೀಲಿ ಅಥವಾ ದುಡ್ಡಿನ ಆಧಾರ ಬೇಕು. ಸರ್ಕಾರಿ ನೌಕರಿ ಸಿಕ್ರು ನೆಮ್ಮದಿ ಇಲ್ಲ.ವ್ಯವಸ್ಥೆ ವಿರುದ್ದ ಹೋಗಲಾರದೆ , ತಮ್ಮಿಷ್ಟದಂತೆ ಕೆಲಸ ಮಾಡ್ಲಿಕ್ಕಾಗ್ದೆ ಅಶಾಂತಿ ಯಲ್ಲೆ ಇರತಾರ. ಶಿಕ್ಷಣ ಯುವಜನಕ್ಕೆ ಯಾವ ರೀತಿ ಉಪಯೋಗ ಆಗ್ತಾ ಇದೆ ಅಂತ ಚಿಂತಿ ಆಗತದ.ಬಿ ಎ . ಬಿ ಕಾಂ ನಂತಹ ಡಿಗ್ರಿ ಮಾಡಿ ಮುಂದೆ ಏನ್ ಮಾಡ್ಬೇಕು . ಅದಕ್ಕ ಎಲ್ರೂ ಡಾಕ್ಟರ್ ಇಂಜಿನಿಯರ್ ಗಳೆ ಆಗಬೇಕು ಅಂತ ಹೆತ್ತವರ ಆಸೆ.ಮಕ್ಕಳಿಗಿ ಇಷ್ಟ ಇರಲಿ ಬಿಡ್ಲಿ , ಆಸ್ತಿ ಮಾರಿ ಸಾಲ ಮಾಡಿಯಾದ್ರೂ ಮಕ್ಕಳಿಗಿ ಡಾಕ್ಟರ್ ಇಂಜಿನಿಯರ್ ಮಾಡ್ಬೇಕು ಎಂಬುದೇ ಹೆತ್ತವರ ಉದ್ದೇಶ. ಡಾಕ್ಟರ್ ಇಂಜಿನಿಯರ್ ಓದಿದವ್ರು ಈಗ ನಿರುದ್ಯೋಗಿಗಳು.ಇನ್ನೂ ಆರ್ಟ್ಸ್ , ಕಾಮರ್ಸ್ ಮಾಡಿದವ್ರ ಪಾಡು ಕೆಳೋದೇ ಬ್ಯಾಡ.ಇಂತಹ ಸಂದರ್ಭದಾಗ ಯುವಜನತೆಯ ಮನಸ್ಥಿತಿ ಏನಾಗಿರತದ..! ಮಾಡಲು ಕೆಲಸ ಇಲ್ದೆ ಭವಿಷ್ಯದ ಬಗ್ಗೆ ನಿರುತ್ಸಾಹಿತರಾಗತಾರ.ಇದಕ್ಕ ಯಾರು ಹೊಣೆ..! ಈಗಿನ ಯುವ ಪಿಳಿಗಿ ಓದುವ ವಿಷಯಕ್ಕೆ ಎಲ್ರು ಜಾಣರೆ ಇದ್ದಾರ.ಹಗಲೂ ರಾತ್ರಿ ಓದ್ತಾರ.ಡಾಕ್ಟರ್ ಇಂಜಿನಿಯರ್ ಆಗ್ಲೇಬೇಕು ಅಂತ ಅತೀ ಆಕಾಂಕ್ಷೆ ಇಟ್ಟುಕೊಂಡು ಓದ್ತಾರ.ಅಂತದ್ದರಲ್ಲಿ ಈ ಪೇಪರಗಳು ಪರೀಕ್ಷೆಗೆ ಮೊದಲೆ ಸೋರಿ ಕಣ್ಣಾಗ ಎಣ್ಣಿ ಹಾಕ್ಕೊಂಡು ಓದಿದವ್ರಿಗೆ ಹತಾಶ ಭಾವ ಉಂಟುಮಾಡತದ.ಸಹಜ , ಒಂದಲ್ಲ ಎರಡಲ್ಲ , ಮ್ಯಾಲಿಂದ ಮ್ಯಾಲ ಪೇಪರ್ ಲೀಕ್ ಆಗೋದು.ಪರಿಕ್ಷೆಗಳು ಮತ್ತ ನಡೆಯೊದು ಇವೆಲ್ಲ ವಿದ್ಯಾರ್ಥಿಗಳಿಗಿ ಒತ್ತಡ ಉಂಟು ಮಾಡತದ. ಭವಿಷ್ಯದ ಬಗ್ಗೆ ಹತಾಶರಾಗಿ ಆತ್ಮಹತ್ಯೆ ಗೆ ಶರಣಾಗತಿದ್ದಾರ. ಇದಕ್ಕೆಲ್ಲ ಯಾರು ಹೊಣೆ..! ಸರ್ಕಾರ. ಯುವಕರಿಗೆ ಉದ್ಯೋಗವಕಾಶಗಳನ್ನು ಮೊದಲು ಒದಗಿಸಬೇಕು.ಒಂದರನಂತರ ಒಂದು ಹೋಸ ಹೋಸ ಕಾಲೇಜ್ ಗಳಿಗಿ ಪರವಾನಗಿ ಕೊಟ್ಡು ವಿದ್ಯಾವಂತ ನಿರಿದ್ಯೋಗಿಗಳನ್ನು ಸರ್ಕಾರ ಸೃಷ್ಟಿ ಮಾಡಲತದ.ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆ ಗಳು ಬೆಳೆದಂದ ಉದ್ಯೋಗ ಗಳನ್ನು ಒದಗಿಸ್ರಿ. ಡಿಗ್ರಿ ಕೊಡೊದಷ್ಟೆ ನಮ್ಮ ಕೆಲಸ ಅಂತ ಸರ್ಟಿಫಿಕೇಟ್ ಕೊಟ್ಟು ಕಳಸಿದ್ರ.. ಹೊರಗ ಬಂದಮ್ಯಾಲ ಯುವಜನತೆ ಏನು ಮಾಡ್ಬೇಕು..! ಇದಕ್ಕೆಲ್ಲ ಉತ್ತರಾನೆ ಇಲ್ಲ ಬಿಡ್ರಿ. ಈಗ ಅತೀ ವಿದ್ಯಾವಂತ್ರೆ ಹೆಚ್ಚು ಆತ್ಮಹತ್ಯೆ ಗಳಿಗೆ ಶರಣಾಗತಿದ್ದಾರ.ವಿದ್ಯ ವ್ಯಕ್ತಿತ್ವ ವಿಕಸನ ಮಾಡುವ ಬದಲಾಗಿ ವ್ಯಕ್ತಿತ್ವವನ್ನು ಹತಾಶೆಗೊಳಿಸ್ತಿದೆ.ಹಂಗಾದ್ರೆ ಮುಂದಿನ ಪಿಳಿಗೆಯ ಭವಿಷ್ಯ..! ಇಂತಹ ವಿಷಯಗಳು ಮಾತಾಡ್ಬೇಕಾದ ಸರ್ಕಾರ ಮೌನವಾಗಿದ್ರ ಯುವಜನ ದಂಗೆ ಏಳಲಾರಧ ಮತ್ತೆನು ಮಾಡ್ಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾ ಸರ್ಕಾರದ ಅವಧಿಯಲ್ಲೂ ಆಗಿರಬಹುದು.ಅದಕ್ಕಾಗಿ ದ್ವನಿ ಎತ್ತುವ ಸಮಯ ಈಗ ಬಂದಿತ್ತು.ಆ ವಿಷಯದ ಚರ್ಚೆಗಾಗಿ ಸರ್ಕಾರದ ಸಿದ್ದವಿರಲಾರದಕ್ಕ ಪರಿಸರ ಹೋರಾಟಗಾರ ಸೋನ್ಂ ವಾಂಗ್ಚೂಕ್ ವಿದ್ಯಾರ್ಥಿ ಗಳ ಪ್ರತಿನಿಧಿ ಯಾಗಿ ಉಪವಾಸ ಸತ್ಯಾಗ್ರಹ ಆರಂಬಿಸಿದ್ರು. ಆಗಲಾದ್ರೂ ಸರ್ಕಾರ ಅವರೊಂದಿಗೆ ಚರ್ಚೆಗೆ ಬರಬೇಕಾಗಿತ್ತು.ಒಬ್ಬ ವ್ಯಕ್ತಿ ದೇಶದ ವಿಷಯದ ಬಗ್ಗೆ ಉಪವಾಸ ಸತ್ಯಾಗ್ರಹ ಮಾಡತಿದ್ರೆ ಸರ್ಕಾರದ ಕರ್ತವ್ಯ ಆಗತಿರದ ಆ ವ್ಯಕ್ತಿಗೆ ಭೇಟಿ ಮಾಡಿ ಸಮಸ್ಯೆ ಆಲಿಸಿ ಅದರ ಪರಿಹಾರಕ್ಕಾಗಿ ನಾವು ನೀವು ಕೂಡಿ ಪ್ರಯತ್ನಿಸೋಣ ಎಂದು ಹೇಳೊದು. ಆದ್ರ ನಮ್ಮ ಸರ್ಕಾರ ಇದರ ಬಗ್ಗೆ ಚರ್ಚಿಸೋದು ಇರಲಿ.ಒಬ್ಬ ವ್ಯಕ್ತಿ ಉಪವಾಸ ಮಾಡಿ ಸಾಯುವ ಸ್ಥಿತಿಗೆ ಬರತಿದ್ದಾನ ಅಂತ ಗೊತ್ತಿದ್ದೂ ಆ ವಿಷಯದ ಬಗ್ಗೆ ಚಕಾರ ಎತ್ತದೆ ಇರೊದ್ರೀಂದ ಜನರ ಅದರಲ್ಲೂ ಯುವಜನರ ವಿರೋಧ ಎದಿರಿಸಬೇಕಾಯ್ತು. ನಮ್ಮ ದೇಶದ ಬಿಜೆಪಿ ಸರ್ಕಾರಕ್ಕೆ ಯಾಕ ಇಷ್ಟು ಆತ್ಮ ಪ್ರತಿಷ್ಟೆ..! ನಾವು ಏನು ಮಾಡಿದ್ರು ನಡಿತದ ಎಂಬ ದೋರಣೆ. ನಾವು ಮಾಡಿದ್ದೆಲ್ಲ ಸರಿ ಇರತದ ಎಂಬ ಅತೀ ಆತ್ಮ ವಿಶ್ವಾಸ. ಇಂಥ ಸರ್ವಾಧಿಕಾರಿ ದೋರಣೆ ನಮ್ಮ ದೇಶದ ಯುವಜನರನ್ನ ರೊಚ್ಚಿಗೆಬ್ಬಿಸ್ತು. ಮೊದಲೆ ಶಿಕ್ಷಣ ವ್ಯವಸ್ಥೆ ಯಿಂದ , ನಿರುದ್ಯೋಗ ದಿಂದ ಒದ್ದಾಡತಿರೋ ವಿದ್ಯಾರ್ಥಿಗಳು , ತಮಗಾಗಿ ಉಪವಾಸ ಸತ್ಯಾಗ್ರಹ ಮಾಡುವರ ಪರ ಆದ್ರು.ಸರ್ಕಾರದ ವಿರುದ್ದ ದಂಗೆ ಎದ್ರು. ಸತ್ಯಾಗ್ರಹ ಗಳಲ್ಲಿ ಮುಷ್ಕರ ಗಳಲ್ಲಿ ದಂಗೆಗಳಾಗತ್ತವ.ಕೆಲವು ದಂಗೆಕೋರರು ಇಂತಹ ಅವಕಾಶ ಬಳಸಿಕೊಳ್ಳಲಿಕ್ಕೆ ಕಾಯ್ತಿರತಾರ. ವಿದ್ಯಾರ್ಥಿ ಗಳು ಮಾಡತಿರೋ ಮುಷ್ಕರ ದಲ್ಲಿ ಕಿಡಿಗೇಡಿಗಳು ಪೋಲಿಸ್ ರ ಮೇಲೆ ಹಲ್ಲೆ ಮಾಡಿದಕ್ಕೆ ವಿದ್ಯಾರ್ಥಿ ಸಮೂಹದ ಮ್ಯಾಲ ಲಾಠಿ ಚಾರ್ಜ್ ಮಾಡಿ ಹೊಡೆಯೊದು ಅಮಾನುಷ ವರ್ತನೆ. ಹೊಡೆತ ತಿಂದ ವಿದ್ಯಾರ್ಥಿಗಳು ಮತ್ತಷ್ಟು ದಂಗೆ ಎದ್ರು.ಇದನ್ನು ನಿತಂತ್ರಿಸಲಿಕ್ಕೆ ಪೋಲಿಸರು ಮತ್ತಷ್ಟು ಲಾಠಿ ಚಾರ್ಜ್ ಮಾಡಿದ್ರು.ಈ ಘರ್ಷಣೆ ಗೆ ಸರ್ಕಾರ ಹೊಣೆ.ನಮ್ಮ ಪ್ರಧಾನ ಮಂತ್ರಿ ಯ ಮೌನದಿಂದಲೇ ಇಷ್ಟೆಲ್ಲಾ ಆಯ್ತು.ಇನ್ನೂ ಮುಷ್ಕರ ದಲ್ಲಿ ಯುವಕ ಯುವತಿಯರ ವರ್ತನೆಗಳ ಬಗ್ಗೆ ಎಲ್ಲಾ ಸಕಾರಾತ್ಮಕವಾಗೆ ಹೇಳಲಿಕ್ಕಾಗಲ್ಲ.ಯುವ ಪಿಳಗಿ ಅಂದ್ರ ಒಂದು ರೀತಿ ಕಪಿಗಳಂಗ.ಕೆಣಕಿದ್ರ ಮೈಮ್ಯಾಲ ಬರತಾವ.ತಮಗಾದ ಅನ್ಯಾಯಕ್ಕೆ ಎನಾದ್ರೂ ಸಮಾಧಾನ ಆಗುವಹಂಗ ಮಾತಾಡಿ ರಮಿಸ್ತಾರ ನಮ ಪ್ರಧಾನ ಮಂತ್ರಿಗಳು ಅಂತ ಆಪೇಕ್ಕಾ ಪಟ್ರ ತಮಗ ಲಾಠಿಯಿಂದ ಹೊಡ್ಸತಾರ ಅಂತ ಮತ್ತಿಟು ಸಿಟ್ಟಾದ್ವು. ಆಗ ನಮ್ಮ ಪ್ರ ಮಂ ಗಳಿಗಿ ಗೊತ್ತಾಯ್ತು.ಈ ಝನ್ ಝಿ ಪಿಳಗಿ ಲಾಠಿ ಏಟಗಿ ಬಗ್ಗವು ಅಲ್ಲ.ಇವಕ್ಕೆ ಪ್ರೀತಿಯಿಂದ ಅವ್ರ ಭಾಷಾದಾಗೆ ಒಲಿಸಿಕೊಳ್ಳಬೇಕು ಅಂತ ಪೋನ್ ಮಾರಿ ಮುಂದ ಹಿಡಕೊಂಡು ರಾತ್ರಿ ಅವರಾತ್ರಿ ರೀಲ್ ಮಾಡಿ ಝನ್ ಝಿ ಆಗಲಿಕ್ಕ ಪ್ರಯತ್ನಿಸಿದ್ರು.ಇದೇ ಮೊದಲೆ ಮಾಡಿದ್ರ ಆಗ್ತಿತ್ತು..ಆದ್ರ ನಾನೇ ಶ್ರೇಷ್ಠ ಅಂದಕೊಳ್ಳೋರಿಗೆ ಸಮಯನೆ ಪಾಠ ಕಲಿಸ್ತದಂತ. ಜ್ಯೋತಿ ಡಿ ಬೊಮ್ಮಾ

Read Post »

You cannot copy content of this page

Scroll to Top