ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ, ಕಥಾಗುಚ್ಛ, ನಿಮ್ಮೊಂದಿಗೆ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್

ಅನುವಾದ ಸಂಗಾತಿ ಡೇಟಾ ಕೇಂದ್ರದಲ್ಲಿ ದೆವ್ವ ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಡೇಟಾ ಕೇಂದ್ರದಲ್ಲಿ  ದೆವ್ವತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು  “ಈ ಘಟನೆ ನಡೆದು ಸುಮಾರು ಆರು ವರ್ಷಗಳೇ ಕಳೆದಿವೆ,’’ ಎಂದು ಕುಲಕರ್ಣಿ ಉಪೋದ್ಘಾತದಂತೆ ಹೇಳಿದರು. “ಈ ಪರಿಸ್ಥಿತಿಯಲ್ಲಿ, ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸೂಕ್ತವೆಂದು ತೋರುತ್ತದೆ. ಈ ಘಟನೆಗೆ ನೇರವಾಗಿ ಸಂಬAಧಿಸಿದ ಮೂರ್ತಿ ಅವರು ಕೂಡ ಇಲ್ಲಿಯೇ ಇದ್ದಾರೆ. ಅವರು ಸಹ ನಮಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಯಿAದ ನಡೆಸಲಾದ ಅಲ್ಪಾವಧಿ ತರಬೇತಿ ಸಮಾರೋಪ ಸಭೆಗೆ ಕುಲಕರ್ಣಿ ಅವರನ್ನು ಮುಖ್ಯ ಅತಿಥಿಗಳಾಗಿ ಸಂಘಟಕರು ಕರೆದಿದ್ದರು. ಕುಲಕರ್ಣಿ ಅವರು ಇಂಟೆಲಿಜೆನ್ಸ್ ಕಛೇರಿಯಲ್ಲಿ ಐಟಿ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿ ಇತ್ತೀಚೆಗೆ ನಿವೃತ್ತರಾಗಿದ್ದರು. ಅವರ ಸರ್ವೀಸ್‌ನಲ್ಲಿ ಪರಿಹರಿಸಲಾಗದ ಮುಖ್ಯವಾದ ಕೇಸುಗಳನ್ನು, ಛೇದಿಸಿದ ಕೆಲವು ಆಸಕ್ತಿಕರವಾದ ಸವಾಲುಗಳನ್ನು ಕುರಿತು ಒಂದು ಪುಸ್ತಕವಾಗಿ ಹೊರ ತರಲಿದ್ದಾರೆ. ವಿಷಯ ಯಾವುದಾದರೂ ಒಳ್ಳೆಯ ಕಥೆಯಂತೆ, ಜನರಂಜಕವಾಗಿ ಅವರು ಹೇಳುತ್ತಾರೆಂದು ಅವರನ್ನು ಅನೇಕ ಸಭೆಗಳಿಗೆ ಕರೆಯುತ್ತಾರೆ. ಅವರು ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೈದರಾಬಾದ್‌ನೊಂದಿಗೂ ಅವರ ಅನುಬಂಧವನ್ನು ಮರೆಯಲು ಸಾಧ್ಯವಿಲ್ಲವೆಂದು ಅವರೇ ಹೇಳಿಕೊಳ್ಳುತ್ತಾರೆ. “ಈ ಒಂದು ವಾರದ ತರಬೇತಿಯು ನಿಮಗೆ ಹೊಸ ವಿಷಯಗಳನ್ನು ಪರಿಚಯಿಸಿದೆ ಎಂದು, ನೀವು ಇಲ್ಲಿ ಕಲಿತ ವಿಷಯಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಅನುಸರಿಸಿ, ಅದರಿಂದ ಪ್ರಯೋಜನ ಪಡೆಯುತ್ತಿರುವಿರೆಂದು ಆಶಿಸುತ್ತೇನೆ” ಎಂದು ಒಂದು ನಿಮಿಷ ತಡೆದು ಸಭಾಂಗಣದಲ್ಲಿರುವ ಎಲ್ಲಾ ಅತಿಥಿಗಳನ್ನು ಗಮನಿಸಿ ನೋಡಿದರು. ಐವತ್ತು ಜನ ಇಂಟಲಿಜೆನ್ಸ್ ಇನ್ಸ್ಪೆಕ್ಟರ್‌ಗಳು ತಮ್ಮ ರಿಫ್ರೆಷರ್ ತರಬೇತಿಯನ್ನು ಮುಗಿಸಿಕೊಂಡು ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ ಹೋಗುವ ಮೊದಲು ಆಯೋಜಿಸಿದ್ದ ವಿದಾಯ ಸಮಾವೇಶವಿದು. ಬಹಳಷ್ಟು ಜನ ಅವರವರ ಮನೆಗಳನ್ನು, ಕುಟುಂಬಗಳನ್ನು ಬಿಟ್ಟು ಬಂದು ಒಂದು ವಾರವಾಗಿರುವುದರಿಂದ, ತರಬೇತಿ ಮುಗಿಯುವುದನ್ನೇ ಕಾಯುತ್ತ, ಯಾವಾಗ ರೈಲು ಹತ್ತುತ್ತೇವೆ ಎಂಬAತೆ ಇದ್ದರು. ಕುಲಕರ್ಣಿ ಅವರು ಸಣ್ಣಗೆ ನಕ್ಕರು – ನಿಮ್ಮ ತರಬೇತಿ ಕಾರ್ಯಕ್ರಮಕ್ಕೆ ಮೂರ್ತಿ ಅವರು ಕೋ ಆರ್ಡಿನೇಟರ್ ಆಗಿ ಇದ್ದರೆಂದರೆ – ಅವರು ಈ ವಾರದ ದಿನಗಳಲ್ಲಿ ನಿಮಗೆ ನಿಮ್ಮ ಅತ್ತೆಯವರ ಮನೆಯನ್ನು ಖಂಡಿತವಾಗಿ ನೆನಪಿಸಿರುತ್ತಾರೆ. ಅವರ ಆತಿಥ್ಯವನ್ನು ಅನುಭವಿಸಿದ್ದರಿಂದ ಆ ವಿಷಯವನ್ನು ನಾನು ಖಚಿತವಾಗಿ ಹೇಳಬಲ್ಲೆ. ಮೂರ್ತಿ ಅವರು ತುಂಬಾ ತಮಾಷೆ ಮನುಷ್ಯ. ಬಹುಶಃ ನೀವು ಈ ವಾರದಲ್ಲಿ ಅದನ್ನು ಗಮನಿಸಿಯೇ ಇರಬಹುದು. ಅದು ಮನೆಯಾದರೂ, ಕಛೇರಿಯಾದರೂ ಸುತ್ತಲಿನ ಪರಿಸರವನ್ನು ಹಿತಕರವಾಗಿ ಪರಿವರ್ತಿಸಬಲ್ಲ ಜಾಣ್ಮೆ, ಕೌಶಲ ಕೆಲವೇ ಜನರಿಗೆ ಇರುತ್ತದೆ. ಅದರಲ್ಲಿ ಮೂರ್ತಿಯವರು ಮೊದಲ ಸಾಲಿನಲ್ಲಿ ಇರುತ್ತಾರೆ.” ಎಂದು ಸ್ವಲ್ಪ ನಿಲ್ಲಿಸಿ, ಎಲ್ಲರೂ ಹೌದೆನ್ನುವಂತೆ ತಲೆದೂಗುತ್ತಿದ್ದರೆ, ತಾವೂ ಅದಕ್ಕೆ ಒಪ್ಪುವವರಂತೆ ತಲೆಯಾಡಿಸಿ, “ಅಂತಹ ಮೂರ್ತಿಯವರಿಗೆ ಒಂದು ರಾತ್ರಿ ನಿದ್ರೆಯನ್ನು ದೂರ ಮಾಡಿದ ಕಥೆ ಇದು” ಅಂದರು. ಎಲ್ಲರ ಮುಖದಲ್ಲೂ ನಗುಗಳು ಚಿಗುರಿವೆ. ಕುಲಕರ್ಣಿ ತನ್ನ ಲ್ಯಾಪ್‌ಟಾಪ್‌ನ ಬಟನ್ ಒತ್ತಿ ತನ್ನ ಎದುರಿಗಿದ್ದ ಸ್ಕಿçÃನ್ ಮೇಲೆ ಆ ಗೊಂಬೆ ಕಾಣಿಸುತ್ತಿದೆ ಎಂದು ನಿರ್ಧರಿಸಿಕೊಂಡು – “ಇದೇ ನಮ್ಮ ಕಥೆಯ ಸ್ಥಳ” ಎಂದು ಪ್ರೊಜೆಕ್ಟರ್ ಸ್ಕಿçÃನ್ ಮೇಲೆ ಗೊಂಬೆ ತೋರಿಸುತ್ತಾ ಹೇಳಿದರು, ಆ ನಂತರ ಸ್ಲೆöÊಡ್‌ನಲ್ಲಿ ಆ ಗೊಂಬೆಗೆ ಸಂಬAಧಿಸಿದ ವಿವರಗಳು ಹೀಗೆ ಇದ್ದವು. “2010 ವರ್ಷದಲ್ಲಿ ಪ್ರಾರಂಭಿಸಿ 2012ನಲ್ಲಿ ಮುಗಿಸಿದ ಕೇಂದ್ರ ಡೇಟಾ ಸೆಂಟರ್ ಆವರಣ. ಅದರ ವಿಸ್ತೀರ್ಣ 50 ಎಕರೆ. ನಗರಕ್ಕೆ 30 ಕಿಲೋಮೀಟರ್ ದೂರ. ಹೆದ್ದಾರಿಯಿಂದ 3 ಕಿಲೋಮೀಟರ್ ಒಳಗೆ, ರಂಗನಪಲ್ಲಿ ಗ್ರಾಮ ಪಂಚಾಯತಿ ಹತ್ರ. ಡೇಟಾ ಸೆಂಟರ್ ಸಾಮರ್ಥ್ಯ 500 ರಾಕ್ ಸ್ಪೇಸ್. ಹತ್ತು ಸಾವಿರ ಸರ್ವರ್‌ಗಳು, 10 ಜೇಟಾ ಬೈಟ್‌ಗಳ ಸ್ಟೋರೇಜ್. ಒಟ್ಟು ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್ಲಾ ಇಲಾಖೆಗಳು, ಸಂಸ್ಥೆಗಳು ತಮ್ಮ ತಮ್ಮ ವಿಭಾಗಗಳ ಒಟ್ಟು ಮಾಹಿತಿಯನ್ನು ಇಲ್ಲೆ ಭದ್ರವಾಗಿ ಸಂಗ್ರಹಿಸುತ್ತಾರೆ. ವಿದ್ಯುತ್ ಸರಬರಾಜಿಗೆ ಅಡಚಣೆಯಾದರೆ 24 ಗಂಟೆಗಳವರೆಗೆ ಪರ್ಯಾಯ ವಿದ್ಯುತನ್ನು ಒದಗಿಸುವ ಜನರೇಟರ್‌ಗಳು, ಸಿಸಿಟಿವಿಗಳು, ಹಗಲು ರಾತ್ರಿ ಸುಶಿಕ್ಷಿತರಾದ ಕಾವಲುಗಾರರು… ದೇಶಕ್ಕೆ ಮಿದುಳಿನಂತಿದೆ ಈ ಸೆಂಟರ್.” ಪ್ರೊಜೆಕ್ಟರ್ ಆಫ್ ಮಾಡಿ ಮತ್ತು ಮೈಕ್‌ಅನ್ನು ಕೈಯಲ್ಲಿ ತೆಗೆದುಕೊಂಡು – “ಅಂತಹ ಸೆಂಟರ್‌ಗೆ ಮೂರ್ತಿ ಅವರು ಆಡಳಿತ ಮತ್ತು ನಿರ್ವಹಣಾಧಿಕಾರಿಯಾಗಿದ್ದರು. ಒಳ್ಳೆಯ ಕಲಾಭಿರುಚಿಯ ಮೂರ್ತಿ ಅವರು ಆ ಆವರಣವನ್ನು ಸುಂದರವಾಗಿ ರೂಪಿಸಿದರು. ಐವತ್ತು ಜನ ಟೆಕ್ನಿಕಲ್ ಸ್ಟಾಫ್, ಇನ್ನೂ ಐವತ್ತು ಜನ ಸಪೋರ್ಟ್ ಸ್ಟಾಫ್ ಇರಬಹುದೆಂದು ಭಾವಿಸುತ್ತೇನೆ. ಅಲ್ಲಿ ಎಲ್ಲರಿಗೂ ಕ್ವಾರ್ಟರ್ಸ್ ಇತ್ತು. ಆದರೆ ಕೆಲವರು ಸಿಟಿಯಿಂದ ಅಪ್ ಅಂಡ್ ಡೌನ್ ಮಾಡುತ್ತಿದ್ದರು. ಸೆಕ್ಯೂರಿಟಿ ಸ್ಟಾಫ್‌ಗೂ ಉತ್ತಮ ವಸತಿ ವ್ಯವಸ್ಥೆ ಇತ್ತು. ಸಿಟಿಯಿಂದ ದೂರ ಎಂಬ ಭಾವನೆ ಹೊರತು ಎಲ್ಲವೂ ಇತ್ತು. ಹೌದಲ್ಲವೇ ಮೂರ್ತಿ?” ಎಂದು ಮೂರ್ತಿಯವರ ಒಪ್ಪಿಗೆಗೆ ಒಂದು ಕ್ಷಣ ಬಿಟ್ಟು, ಮತ್ತೆ – “ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವ ದಿನಗಳಲ್ಲಿ, ಡೇಟಾ ಮಾತ್ರವೇ ಇರಬೇಕಾದ ಆ ಸೆಂಟರ್‌ನಲ್ಲಿ ಒಂದು ದೆವ್ವ ಬಂದಿದೆ.” ಎಲ್ಲರೂ ಮುಗುಳ್ನಗೆ ನಗುತ್ತಿದ್ದದ್ದು ನೋಡಿ, “ಅರೆ, ನೀವು ಸರಿಯಾಗಿ ಕೇಳಿದ್ದೀರಿ. ಆದರೆ, ಆ ದೆವ್ವ ಹೇಗೆ ಬಂತು ಎಂದು ಅದರ ಸಂಪೂರ್ಣ ವಿಷಯವೇನು ಅಂತ ಆಗಿನ ಆ ಸೆಂಟರ್ ನಿರ್ವಹಣಾಧಿಕಾರಿಯಾಗಿದ್ದ ಮೂರ್ತಿ ಅವರಿಂದಲೇ ಕೇಳೋಣ. ನಂತರ ನಾನು ಮುಂದುವರಿಯುತ್ತೇನೆ”ಎAದು ಹೆಳಿ ಮೈಕನ್ನು ಮೂರ್ತಿ ಕೈಗೆ ಕೊಟ್ಟ, ಮೂರ್ತಿ – ಈ ಅನಿರೀಕ್ಷಿತ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗದೆ ನಗುತ್ತಾ – “ಖಂಡಿತ” ಎಂದು ಹತ್ತು ಸೆಕೆಂಡುಗಳ ನಂತರ” ಎಲ್ಲಿಂದ ಪ್ರಾರಂಭಿಸ ಬೇಕೋ ನನಗೆ ತಿಳಿಯುತ್ತಿಲ್ಲ” ಎಂದ. ಮತ್ತೆ – “ಡೇಟಾ ಸೆಂಟರ್ ಕಾರ್ಯಕ್ರಮಗಳು ಪ್ರಾರಂಭವಾಗಿ ಎರಡು ವರ್ಷಗಳವರೆಗೂ ನಮಗೆ ವಿಪರೀತವಾದ ಕೆಲಸ ಇರುತ್ತಿತ್ತು. ಹೊಸಬರಿಗೆ ವಸತಿ ವ್ಯವಸ್ಥೆ, ಮಾರಾಟಗಾರರ ರಶ್, ಸರ್ಕಾರದ ಆದೇಶಗಳ ಪ್ರಕಾರ ನಮ್ಮೊಂದಿಗೆ ಡೇಟಾವನ್ನು ಭದ್ರಪಡಿಸಲು ಅಗತ್ಯವಾದ ವ್ಯವಸ್ಥೆಗಳು, ಅದಕ್ಕೆ ಸೂಕ್ತವಾದ ತರಬೇತಿಗಳು, ಹೀಗೆ ಎರಡು ವರ್ಷಗಳು ಬಿಡುವಿಲ್ಲದೇ ಕಳೆದು ಹೋದೆವು. ಅದರ ನಂತರ ಎಲ್ಲವೂ ಶಾಂತವಾದಾಗ ಒಂದು ಬೇಸಿಗೆಯ ಮಧ್ಯಾಹ್ನ ಸಾಹು ಎಂಬ ಇಂಜನಿಯರ್ ನನ್ನ ಕೋಣೆಯೊಳಗೆ ಬಂದ. ಸಾಮಾನ್ಯವಾಗಿ ಎಂಜಿನಿಯರ್‌ಗಳಿಗೆ ನನ್ನೊಂದಿಗೆ ಹೆಚ್ಚು ಕೆಲಸಗಳೇನು ಇರುವುದಿಲ್ಲ. ಅವರ ನಿವಾಸಗಳಲ್ಲಿ ಏನಾದರೂ ರಿಪೇರಿಗಳು ಇದ್ದರೆ, ಅಥವಾ ನಗರಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆಕ್ಕಾಗಿ ಈ ರೀತಿಯ ಸಣ್ಣಪುಟ್ಟ ಅಗತ್ಯಗಳಿರುತ್ತವೆ. ಆದರೇ ನಾನೇ ಅವರೊಂದಿಗೆ ಬೇಕೆಂದೇ ಮಾತನಾಡುತ್ತಾ ಸಂಜೆಗಳನ್ನು ಉತ್ಸಾಹ ಭರಿತವಾಗಿ ಕಳೆಯಲು ಟೆನ್ನಿಸ್ ಕೋರ್ಟ್ ಹಾಕಿಸಿ, ಇಂಡೋರ್ ಗೇಮ್ಸ್ ಆಟಗಳನ್ನು ಏರ್ಪಡಿಸಿ, ದೇಶದೆಲ್ಲೆಡೆಯಿಂದ ಬಂದವರಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದೆ. ಹೀಗಾಗಿಯೇ ಎಲ್ಲರೂ ಅದನ್ನು ನೆನಪಿಸಿಕೊಳ್ಳುವ ಸಲುಗೆ ಇರುತ್ತಿತ್ತು. ಬಂದವನು ಏನೂ ಮಾತಿಲ್ಲದೆ ಹಾಗೆ ನಿಂತಿದ್ದಾನೆ. ಯಾವುದಾದರೂ ದೊಡ್ಡ ವಿಷಯವೇನೋ ಎಂದು ಕುಳಿತುಕೊಳ್ಳಲು ಕುರ್ಚಿ ತೋರಿಸಿದೆ. ಆ ಹುಡುಗ ಸ್ವಲ್ಪ ಮುಜುಗರ, ಸಂಕೋಚದಿAದ … ಯಾವುದೋ ವಿಷಯವನ್ನು ಹೇಳಬೇಕೋ, ಇಲ್ಲವೋ ಎಂಬ ಅನುಮಾನದಿಂದ ಇದ್ದಂತೆ ನೆಲವನ್ನು ನೋಡುತ್ತಾ, ಮಾತಾಡಲು ತೊದಲುತ್ತಿದ್ದ. ನಾನೇ ಸಲುಗೆಯಿಂದ “ಹೇಳಿ, ಡೊಂಟ್ ವರಿ… ನನ್ನೊಂದಿಗೆ ನೀವು ಯಾವ ವಿಷಯವಾದರೂ ನಿರಭ್ಯಂತರವಾಗಿ, ನಿಸ್ಸಂದೇಹವಾಗಿ ಮಾತಾಡಬಹುದು” ಎಂದು ಭರವಸೆ ನೀಡಿದ ನಂತರ, “ಸರ್, ನೀವು ಬೇರೆ ರೀತಿಯಲ್ಲಿ ಅಂದುಕೊಳ್ಳುವುದಿಲ್ಲ ಎಂದರೆ ನಾನೊಂದು ವಿಷಯ ಹೇಳ್ತೇನೆ” ಎಂದು ಗುಟ್ಟನ್ನು ಹೇಳುವ ಹಾಗೆ ಮೇಜಿನ ಮೇಲೆ ಬಾಗಿ ಒರಗುತ್ತಾ, ನನ್ನ ಮುಖ ನೋಡುತ್ತಾ – “ಸರ್, ನಮ್ಮ ಡೇಟಾ ಸೆಂಟರ್ ಸುತ್ತಾ ರಾತ್ರಿಯಲ್ಲಿ ದೆವ್ವ ಸುತ್ತಾಡುತ್ತಿದೆ ಸಾರ್!” ನಾನು ಲಘುವಾಗಿ ಮುಗುಳ್ನಕ್ಕೆ. ತಕ್ಷಣ ಮುಖವೆಲ್ಲಾ ಗಂಭೀರವಾಗಿ ಇಟ್ಟುಕೊಂಡು – “ಅದನ್ನು ನೋಡಿದ್ದೀರಾ?” ಎಂದು ನಾನು ಮುಗಿಸುವುದರೊಳಗೆ, “ನೀವು ಖಂಡಿಸಲು ಸಿದ್ಧವಾಗುತ್ತಿದ್ದೀರಿ… ದಯವಿಟ್ಟು ನನ್ನ ಮಾತು ಕೇಳಿ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಿಗೆ ಒಂದು ಐದು ದಿನಗಳಿಂದ, ಒಂದು ದೆವ್ವ ನಮ್ಮ ಸರ್ವರ್ ರೂಮ್ ಬಳಿ ಸುತ್ತಾಡುತ್ತಿದೆ. ನಮ್ಮ ನೆಟ್‌ವರ್ಕ್ ಇಂಜನೀಯರ್ ಕೂಡಾ ರಾತ್ರಿ ಯಲ್ಲಿ ಒಬ್ಬನೇ ಡ್ಯೂಟಿಯಲ್ಲಿ ಇದ್ದಾಗ ಆ ಚಪ್ಪಾಳೆಗಳನ್ನು ಕೇಳಿದ್ದಾನೆ. ಒಂದು ನೆರಳು ಚಲಿಸುತ್ತಾ ಹೋಗುವುದು, ನಡುನಡುವೆ ವಿಚಿತ್ರ ಶಬ್ದಗಳು ಮಾಡುವುದು, ಇವನ್ನೆಲ್ಲಾ ನೋಡಿದರೆ ನಮ್ಮ ಹಳೆಯ ಸೆಕ್ಯುರಿಟಿ ನರ್ಸಿಂಗ್ ಹೇಳಿದ ವಿಷಯ ನಿಜವೆನಿಸುತ್ತಿದೆ’’ ಎಂದು ವಿರಾಮವಿಲ್ಲದೆ ಮಾತಾಡಿದ. ಸಿದ್ಧವಾಗುತ್ತಿದ್ದೀರಿ ಅರ್ಥವಾಗಲಿಲ್ಲ. “ಅವನಿಗೆ ಹಲವು ರೀತಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವರ ಅಭಿಪ್ರಾಯ ಬದಲಾಗಲಿಲ್ಲ.” ಮೂರ್ತಿಯವರ ಮಾತಿಗೆ ಅಡಚಣೆ ಮಾಡುತ್ತಾ ಕೇಳುಗರಲ್ಲಿ ಒಬ್ಬನು- “ಅದಕ್ಕೂ ಮುಂಚೆ ಸೆಕ್ಯುರಿಟಿ ಗಾರ್ಡ್ ಏನು ಹೇಳಿದನೋ ನೀವು ಹೇಳ್ಳಿಲ್ಲ.” ಮೂರ್ತಿ ಮುಗುಳ್ನಕ್ಕೂ, “ಸಿ.ಐ.ಎಸ್.ಎಫ್. ಅವರ ಆಗಮನದ ಮೊದಲು, ನರ್ಸಿಂಗ್ ಎಂಬ ಸ್ಥಳೀಯ ಏಜೆನ್ಸಿಯ ಸೆಕ್ಯುರಿಟಿ ಗಾರ್ಡ್ ಇದ್ದನು.. ಅವನೊಬ್ಬ ವಾಚಾಳಿ. ಅಲ್ಲಿನ ಕೆಲಸಗಾರರಿಗೆ, ಈ ಸ್ಥಳವು ಒಂದು ಕಾಲದಲ್ಲಿ ಸ್ಮಶಾನವೆಂದು, ಅಲ್ಲಿ ದೆವ್ವಗಳು ಓಡಾಡುತ್ತಿರುತ್ತವೆ ಎಂದು ಕಥೆಗಳನ್ನು ಹೇಳುತ್ತಿದ್ದನು. ಸೆಂಟರ್ ಚಟುವಟಿಕೆಗಳು ಸಿ.ಐ.ಎಸ್.ಎಫ್. ಅವರು ಪೂರ್ತಿ ಜಾಗವನ್ನು ತಮ್ಮ ಹತೋಟಿ ಒಳಗೆ ತೆಗೆದುಕೊಂಡಾಗ, ಅಲ್ಲೇ ತೋಟಗಾರನಾಗಿ ಮುಂದುವರೆದರು. ಆ ಸಮಯದಲ್ಲಿ, ತನ್ನ ಭಯವನ್ನು ಹೋಗಲಾಡಿಸಲು, ಒಂದು ಹನುಮಂತನ ಚಿತ್ರವನ್ನು ಇಟ್ಟು ಅದರ ಸುತ್ತಲೂ ನಾಲ್ಕು ಕಲ್ಲುಗಳನ್ನು ಹೂತಿಟ್ಟಿದನು., ಈ ಆಂಜನೇಯಸ್ವಾಮಿ ಇರುವವರೆಗೂ ಆ ದೆವ್ವಗಳು ಅಲ್ಲಿಗೆ ಬರುವುದಿಲ್ಲವೆಂದು ಎಲ್ಲರಿಗೂ ಹೇಳುವವವನು. ಕೆಲವು ದಿನಗಳ ನಂತರ, ಡ್ಯೂಟಿಯಲ್ಲಿ ಕುಡಿದು ಬಂದಿದ್ದಕ್ಕೆ ಕೆಲಸಕ್ಕೆ ಬರಬೇಡವೆಂದು ಹೇಳಿದರೆ ಸಿಟಿಯಲ್ಲಿರುವ ಅವರ ಮಗನ ಕಡೆ ಹೋಗಿಬಿಟ್ಟಿದ್ದಾನೆ. ಆದರೆ ಅಲ್ಲಿರುವ ದಿನಗಳು ದೆವ್ವದ ಬಗ್ಗೆ ಸುಮ್ಮನೆ ಗಡಿಬಿಡಿ ಮಾಡುವವನು. ಆ ವಿಷಯವನ್ನೇ ಸಾಹು ನೆನಪಿಸಿದ. ಮತ್ತೆ ನಮ್ಮ ಸಾಹು ಕಡೆಗೆ ಬಂದರೆ, ಆ ಹುಡುಗ ನನ್ನ ಮಾತುಗಳಿಂದ ಕನ್ವಿನ್ಸ್ ಆಗಲಿಲ್ಲ ಎಂದು ನಂತರದ ಅನೇಕ ಘಟನೆಗಳಿಂದ ನನಗೆ ಅರ್ಥವಾದವು. ಪ್ರತಿಯೊಂದು ಸಣ್ಣ ವಿಷಯವನ್ನು ಭೂತಗನ್ನಡಿಯಿಂದ ನೋಡುವುದು, ಪ್ರತಿ ವೈಫಲ್ಯವನ್ನು ದೆವ್ವಕ್ಕೆ ಆರೋಪಿಸುವುದು, ಅವನ ಮಾತಿನ ನಡುವೆ, ದೇವರಿದ್ದಾನೆಂದು ನಂಬಿದರೆ ದೆವ್ವಗಳೂ ಇವೆ ಎಂದು ನಂಬಬೇಕು ಅಲ್ಲವೇ, ಅವರ ಹಳ್ಳಿಯಲ್ಲಿ ಅವರ ಸಂಬAಧಿಕರಿಗೆ ಸಂಭವಿಸಿದ ಕೆಲವು ಅನುಭವಗಳು, ಹಾರರ್ಚಲನ ಚಿತ್ರಗಳ ಚರ್ಚೆ, ಈ ರೀತಿಯ ಇನ್ನೂ ಕೆಲವು. ಆದರೆ ಅವನ ಸ್ನೇಹಿತರು ಕೂಡಾ ಅವನನ್ನು ಚುಡಾಯಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಬಚ್ಚಿಟ್ಟುವುದು, ಅದನ್ನು ದೆವ್ವಕ್ಕೆ ಆರೋಪಿಸಿ ಸತಾಯಿಸುವುದು, ಹುಡುಗರು, ಒಬ್ಬಂಟಿಗರು, ಆ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅವೆಲ್ಲಾ ಮಾಡಿ ತಮಾಷೆ ನೋಡುತ್ತಿದ್ದರು. ಒಮ್ಮೆ ಒಂದು ಅಪ್ಲಿಕೇಷನ್ ಸರ್ವರ್ ಕೆಲಸ ಮಾಡಲಿಲ್ಲ. ಸಾಹೂ ಸರ್ವರ್ ಅಡ್ಮಿನಿಸ್ಟೆçÃಟರ್. ಎಲ್ಲಾ ಸರ್ವರ್‌ಗಳು ಉತ್ತಮವಾಗಿವೆ, ಆದರೆ ಇದು ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಆಗ ಅವನು ಎಷ್ಟು ಅವಸರ ಮಾಡಿದ್ದನೆಂದರೆ, ಯಾರೋ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು, ತನ್ನ ಮೇಲೆ ಮಾಟ-ಮಂತ್ರ ಪ್ರಯೋಗಗಳು ಜರುಗುತ್ತಿದ್ದವೆಂದು, ಅದರ ಫಲವಾಗಿ ಆ ಸರ್ವರ್ ಕೆಲಸ ಮಾಡುತ್ತಿಲ್ಲವೆಂದು ಗೋಳಿಡುತ್ತಿದ್ದ. ಅವನನ್ನು ಹೊರಗೆ ಕಳಿಸಿ, ಕುಲಕರ್ಣಿ ಅವರಿಗೆ ಫೋನ್ ಮಾಡಿದೆವು. ಒಂದು -ಎರಡು ಗಂಟೆಗಳ ತನಿಖೆಯ ನಂತರ ನಮಗೆ ಗೊತ್ತಾದ ವಿಷಯವೇನೆಂದರೆ, ಅದೇನೋ ಡಿಡಾಸ್ ಎಟಾಕ್ ಎಂದು ಕರೆಯಲಾಗುತ್ತದೆ, ಅದರಿಂದ ಈ ಅನರ್ಥ ನಡೆದಿದೆ ಎಂದು ಕುಲಕರ್ಣಿ ತಂಡ ತೀರ್ಮಾನಿಸಿತು. ಯಾವುದೇ ಸಂದರ್ಭದಲ್ಲಿ ಡೇಟಾ ಸೆಂಟರ್‌ಗೆ ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಬಾರದೆಂದು ಸೂಚಿಸಿದರು. ಅಲ್ಲಿಗೆ ವಿವಾದ ಇತ್ಯರ್ಥವಾಯಿತು. ಮೂರ್ತಿಯವರು ನಿರ್ವಾಹಕರನ್ನು ನೀರಿಗಾಗಿ ಕೇಳಿ ಎರಡು ಗುಟುಕುಗಳು ಕುಡಿದರು. “ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳದೆಯೇ ವಿಷಯಕ್ಕೆ ಬರುತ್ತೀನಿ! ಈ ಡಿಡಾಸ್ ಘಟನೆ ನಂತರ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್ Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ “ಆಸೆ ( ಅತಿಯಾಸೆ)”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಆಸೆ ( ಅತಿಯಾಸೆ)” ಕಣ್ಣು ಮುಚ್ಚಿವೆಮಣ್ಣು ಮುಚ್ಚುವ ಮುನ್ನನಿನ್ನ ಮುಖವನ್ನೋಮ್ಮೆನನ್ನ ಮುಚ್ಚಿದ ಕಣ್ಣುಗಳೊಳಗಿಂದ ನೋಡುವಾಸೆ ಉಸಿರಾಡುವದ ಮರೆತ ನನ್ನಉಸಿರ ತಿತ್ತಿಗಳಪ್ರತಿ ಪದರಲಿನಿನ್ನ ಹೆಸರಿರುವದ ನಿನಗೆ ತೋರಿಸುವಾಸೆ ನಿನ್ನವಳು ನಾನೆಂದುಡಂಗುರಸಾರಿದ ಸಮಕರಿಗೇನೀನು ನನ್ನವನೆಂದು ತೋರಿಸುವಾಸೆ ಮರಳಿ ಬಾರದೂರಿಗೆ ಹೊರಟಿರುವೆಹೂವಿನಾ ತೇರನೇರಿ.ಮುಡಿಗೆ ಮೊಳ ಮಲ್ಲಿಗೆ ಇಲ್ಲೆಂಬಸುದ್ದಿ ಹಬ್ಬಬಾರದೆಂಬಾಸೆ. ನಿನ್ನ ಆರುಮೆ ಅಮೂರ್ತ !ಅರಿವಿದೆ ನನಗೆ.ಅರ್ಥಕಪಾರ್ಥ ಕಲ್ಪಿಸುವಕಮಂಗಿ ತಿಮಿಂಗಿಲಗಳಹಸಿವಿಗಹಾರ ನೀನಾಗ ಬಾರದೆಂಬಾಸೆ ಒಂದೇ ವಾಕ್ಯದಲ್ಲೊಮ್ಮೆಮರಣಕ್ಕೆ ಮದ್ದಿಲ್ಲನನ್ನೊಲುಮೆಗೆ ಸಾವಿಲ್ಲ ಎಂದುನೀ ಉಸುರ ಬೇಕೆಂಬಾಸೆ ಬಿಂದುಗಳಿಂದಲೇ ಬಿಗಿದ ನಿನ್ನ ಕಣ್ಣುಗಳಿಂದನನ್ನ ನೋಡುತ್ತಾ..ನನ್ನ ಹಣೆಬರಹ ದಲ್ಲಿಲ್ಲದ ನೀನು ನನ್ನಹಣೆಗೊಮ್ಮೆ ಮುತ್ತಿಕ್ಕಿ ಮಣ್ಣಿನಾ ದೇಹತಣ್ಣಗೆ ಮಣ್ಣಿಗೆ ಕಳಿಸುವೆ ಎಂಬಾಸೆ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ “ಆಸೆ ( ಅತಿಯಾಸೆ)” Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಗಾದೆಗಳ ಗಣಿ *ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? “ಹುಟ್ಟಿನಿಂದ ಬಂದ ಗುಣ ಅಥವಾ ನೈಜ ಸ್ವಭಾವವನ್ನು ಎಂತಹ ಭವ್ಯ ಪರಿಸರದಲ್ಲೇ ಇಟ್ಟರೂ ಬದಲಾಯಿಸಲು ಸಾಧ್ಯವಿಲ್ಲ.” ಈ ಅನುಭವದ ಸಾರವನ್ನು ಹಿಡಿದಿಟ್ಟ ಗಾದೆಗಳು ನಮಗೆ ನೀಡಿದ ಅಮೂಲ್ಯ ಜ್ಞಾನದ ಮುತ್ತುಗಳು. ಹನಿ ಹನಿ ಸೇರಿದರೆ ಹಳ್ಳವಾಗುವಂತೆ, ಸಣ್ಣ ಸಾಲುಗಳಲ್ಲಿ ಇಡೀ ಜಗತ್ತಿನ ಸತ್ಯವನ್ನು ದರ್ಶಿಸುವ ಶಕ್ತಿ ಗಾದೆ ಮಾತಿನಲ್ಲಿವೆ. ಅಂತಹ ಅದ್ಭುತ ಗಾದೆಗಳಲ್ಲಿ “ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?” ಎನ್ನುವುದು ಪ್ರಮುಖವಾದದ್ದು. ಇದು ಕೇವಲ ಪಕ್ಷಿ ಪ್ರಪಂಚಕ್ಕೆ ಸೀಮಿತವಾಗದೆ, ಮನುಷ್ಯನ ಸಹಜ ಗುಣ, ಯೋಗ್ಯತೆ ಮತ್ತು ಅಹಂಕಾರದ ಮುಖವಾಡಗಳನ್ನು ಕಳಚಿಡುವ ಒಂದು ತತ್ವವಾಗಿದೆ.​​ಕಾಗೆಯ ಸ್ವರ ಬಹು ಕರ್ಕಶ ಧ್ವನಿ, ಸಾಮಾನ್ಯತೆ ಅಥವಾ ಕೀಳು ಗುಣದ ಸಂಕೇತ ಇಲ್ಲಿ ಕಾಗೆಯನ್ನು ಕೀಳಾಗಿ ಕಾಣುವುದಕ್ಕಿಂತ ಅದರ ಸಹಜ ಗುಣವನ್ನು ಗುರುತಿಸುವುದು ಮುಖ್ಯ.​ಪಂಜರ (ಚಿನ್ನದ ಪಂಜರ): ಇದು ವೈಭೋಗ, ಕೃತಕವಾಗಿ ಸೃಷ್ಟಿಸಿದ ಉನ್ನತ ಪರಿಸರ ಅಥವಾ ಯೋಗ್ಯತೆಗೂ ಮೀರಿದ ಸ್ಥಾನದ ಸಂಕೇತ.​ಪಂಚಮ ಸ್ವರದ ವಿಶೇಷತೆ ಎಂದರೆ ಸಂಗೀತದ ಅತ್ಯಂತ ಮಧುರವಾದ, ಕೋಗಿಲೆಯು ಹೊರಡಿಸುವ ಶ್ರೇಷ್ಠ ಧ್ವನಿಯ ಸಂಕೇತ.​ಕೋಗಿಲೆಯನ್ನು ಚಿನ್ನದ ಪಂಜರದಲ್ಲಿಟ್ಟರೆ ಅದು ತನ್ನ ಮಧುರವಾದ ಪಂಚಮ ಸ್ವರದಿಂದ ಹಾಡುತ್ತದೆ. ಆದರೆ, ಕಾಗೆಯನ್ನು ತಂದು ಎಷ್ಟೇ ದುಬಾರಿ, ರತ್ನಖಚಿತ ಪಂಜರದಲ್ಲಿ ಕೂರಿಸಿದರೂ ಅದು ತನ್ನ ಸಹಜ ಗುಣವಾದ ‘ಕಾವ್ ಕಾವ್’ ಎಂಬ ಕರ್ಕಶ ಧ್ವನಿಯನ್ನೇ ಹೊರಡಿಸುತ್ತದೆಯೇ ಹೊರತು ಕೋಗಿಲೆಯಂತೆ ಹಾಡಲು ಸಾಧ್ಯವಿಲ್ಲ.​ನೈಜ ಸ್ವಭಾವ ಮತ್ತು ಪರಿಸರದ ಮಿತಿ​ಮಾನವನ ವ್ಯಕ್ತಿತ್ವ ವಿಕಸನದಲ್ಲಿ ಪರಿಸರ ಮತ್ತು ವಂಶವಾಹಿ (ಹುಟ್ಟುಗುಣ) ಎರಡೂ ಪಾತ್ರ ವಹಿಸುತ್ತವೆ. ಆದರೆ ಕೆಲವು ಮೂಲಭೂತ ಗುಣಗಳು ಹುಟ್ಟಿನಿಂದಲೇ ರಕ್ತಗತವಾಗಿ ಬಂದಿರುತ್ತವೆ. ಹೊರಗಿನ ಆಡಂಬರ, ಸಂಪತ್ತು ಅಥವಾ ಉನ್ನತ ಹುದ್ದೆಗಳು ಮನುಷ್ಯನ ಬಾಹ್ಯ ರೂಪವನ್ನು ಬದಲಾಯಿಸಬಹುದೇ ಹೊರತು ಆತನ ಆಂತರಿಕ ಯೋಗ್ಯತೆ ಅಥವಾ ದುರ್ಗುಣವನ್ನು ಬದಲಾಯಿಸಲಾರವು.​ಒಬ್ಬ ಅಯೋಗ್ಯನಿಗೆ ರಾಜಸಿಂಹಾಸನವನ್ನು ನೀಡಿದರೂ ಆತ ಯೋಚಿಸುವ ರೀತಿ ಮತ್ತು ನಡೆದುಕೊಳ್ಳುವ ರೀತಿ ಆತನ ಅಲ್ಪತನವನ್ನೇ ಪ್ರದರ್ಶಿಸುತ್ತದೆ. ಕೆಸರಿನಲ್ಲಿ ಹುಟ್ಟಿದ ಕಮಲ ಪವಿತ್ರವಾಗುತ್ತದೆ, ಆದರೆ ಹಾವಿಗೆ ಹಾಲನ್ನು ಕುಡಿಸಿದರೂ ವಿಷವೇ ಹೊರಬರುತ್ತದೆ ವಿನಃ ಅಮೃತವಲ್ಲ. ಹಾಗೆಯೇ, ಆಂತರಿಕವಾಗಿ ಸಂಸ್ಕಾರವಿಲ್ಲದ ವ್ಯಕ್ತಿಯನ್ನು ಅತ್ಯುನ್ನತ ಸಮಾಜದಲ್ಲಿ ಕೂರಿಸಿದರೂ ಆತನ ನೈಜ ಗುಣ ಒಂದಲ್ಲಾ ಒಂದು ದಿನ ಹೊರಬಂದೇ ತೀರುತ್ತದೆ.​ಸಾಮಾಜಿಕ ಮತ್ತು ರಾಜಕೀಯ ಪ್ರಸ್ತುತತೆಯಲ್ಲಿನ​ಇಂದಿನ ಆಧುನಿಕ ಸಮಾಜಕ್ಕೆ ಈ ಗಾದೆ ಮಾತು ಅತ್ಯಂತ ಪ್ರಸ್ತುತವಾಗಿದೆ. ಇಂದು ಹಣ, ಅಧಿಕಾರ ಅಥವಾ ವಂಶಪಾರಂಪರ್ಯದ ಪ್ರಭಾವದಿಂದ ಅನೇಕರು ಉನ್ನತ ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಆದರೆ ಆ ಸ್ಥಾನಕ್ಕೆ ಬೇಕಾದ ಅರ್ಹತೆ, ಕರುಣೆ, ವಿವೇಕ ಅವರಲ್ಲಿ ಇರುವುದಿಲ್ಲ.​ರಾಜಕೀಯದಲ್ಲಿ ಅರ್ಹತೆಯಿಲ್ಲದ ನಾಯಕನಿಗೆ ಎಷ್ಟೇ ದೊಡ್ಡ ಅಧಿಕಾರ ನೀಡಿದರೂ ಆತ ಜನಕಲ್ಯಾಣ ಮಾಡಲಾರ. ಆತನ ಭ್ರಷ್ಟ ಮತ್ತು ದುರಹಂಕಾರದ ಗುಣಗಳು ಹೊರಬೀಳುತ್ತವೆ. ಇದು ಕಾಗೆಯನ್ನು ಪಂಜರದಲ್ಲಿಟ್ಟಂತೆ.​ಶಿಕ್ಷಣ ಮತ್ತು ಉದ್ಯೋಗದಲ್ಲಿಯೂ ಅಷ್ಟೆ .ಕೇವಲ ಶಿಫಾರಸಿನಿಂದ ದೊಡ್ಡ ಹುದ್ದೆ ಪಡೆದ ವ್ಯಕ್ತಿ ಆ ಕೆಲಸದಲ್ಲಿ ಸೃಜನಶೀಲತೆ ತೋರಿಸಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದವನಿಗೆ ಐಷಾರಾಮಿ ಕಚೇರಿ (ಪಂಜರ) ಕೊಟ್ಟರೂ ಆತನಿಂದ ಗುಣಮಟ್ಟದ ಕೆಲಸ (ಪಂಚಮ ಸ್ವರ) ನಿರೀಕ್ಷಿಸಲು ಸಾಧ್ಯವಿಲ್ಲ.​​ಈ ಗಾದೆಯು ನಮಗೆ ಕೃತಕತೆ ಮತ್ತು ನೈಸರ್ಗಿಕತೆಯ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ. ಕಾಗೆಗೆ ತನ್ನದೇ ಆದ ಮಹತ್ವವಿದೆ—ಅದು ಪರಿಸರವನ್ನು ಸ್ವಚ್ಛಗೊಳಿಸುತ್ತದೆ, ಪಿತೃಕಾರ್ಯಗಳಲ್ಲಿ ಅದಕ್ಕೆ ಪ್ರಾಧಾನ್ಯತೆಯಿದೆ. ಆದರೆ, ಅದರ ಮಿತಿ ಅದಕ್ಕಿದೆ. ಕಾಗೆ ಕೋಗಿಲೆಯಾಗಲು ಯತ್ನಿಸುವುದು ಕೃತಕತೆ.​ಅದೇ ರೀತಿ, ಮನುಷ್ಯ ತಾನು ಅಲ್ಲದೇ ಇರುವುದನ್ನು ತೋರಿಸಿಕೊಳ್ಳಲು ‘ಮುಖವಾಡ’ ಧರಿಸಿದಾಗ ಈ ಗಾದೆ ಅನ್ವಯಿಸುತ್ತದೆ. ಎಷ್ಟೇ ಶ್ರೀಮಂತಿಕೆಯ ಪ್ರದರ್ಶನ ಮಾಡಿದರೂ, ಆಚಾರ-ವಿಚಾರಗಳಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ಶ್ರೀಮಂತಿಕೆ ವ್ಯರ್ಥ. ಬೂದಿಗೆ ತುಪ್ಪ ಸುರಿದರೆ ಹೋಮವಾಗುವುದಿಲ್ಲ, ಹಾಗೆಯೇ ಸಂಸ್ಕಾರಹೀನನಿಗೆ ಸಕಲ ಸೌಲಭ್ಯ ನೀಡಿದರೂ ಆತ ಸತ್ಪ್ರಜೆಯಾಗಲಾರ.​ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ​ಕನ್ನಡದ ಅನೇಕ ಶರಣರು ಮತ್ತು ದಾಸರು ಈ ಕಲ್ಪನೆಯನ್ನು ತಮ್ಮ ವಚನ ಹಾಗೂ ಕೀರ್ತನೆಗಳಲ್ಲಿ ಬಳಸಿದ್ದಾರೆ.​”ಕಾಗೆಯ ತಂದು ಪಂಜರದೊಳಗಿಟ್ಟರೆ ಕೋಗಿಲೆಯಾಗಬಲ್ಲದೇ?”​ಎಂದು ಜಗತ್ತಿನ ಕೃತಕತೆಯನ್ನು ವಚನಕಾರರು ಪ್ರಶ್ನಿಸಿದ್ದಾರೆ. ಆಧ್ಯಾತ್ಮಿಕವಾಗಿ, ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭಗಳೆಂಬ ಮಲಿನತೆ ತುಂಬಿರುವಾಗ, ದೇಹಕ್ಕೆ ಕಾವಿ ಬಟ್ಟೆ ಧರಿಸಿದ ತಕ್ಷಣ ಅಥವಾ ದೇವಸ್ಥಾನದೊಳಗೆ ಕುಳಿತ ತಕ್ಷಣ ಒಬ್ಬ ವ್ಯಕ್ತಿ ಮಹಾತ್ಮನಾಗಲು ಸಾಧ್ಯವಿಲ್ಲ. ಅಂತರಂಗ ಶುದ್ಧಿಯಾಗದ ಹೊರತು ಬಹಿರಂಗದ ಆಡಂಬರವೆಲ್ಲವೂ ಶೂನ್ಯ. ಕಾಗೆಯ ಕಪ್ಪು ಬಣ್ಣವನ್ನು ತೊಳೆದರೆ ಬಿಳಿಯಾಗುವುದಿಲ್ಲ, ಹಾಗೆಯೇ ದುರ್ಬುದ್ಧಿಯುಳ್ಳವನಿಗೆ ತೀರ್ಥಸ್ನಾನ ಮಾಡಿಸಿದರೂ ಆತನ ಪಾಪ ಅಥವಾ ಕುಟಿಲತೆ ದೂರವಾಗುವುದಿಲ್ಲ.ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? ಎಂಬ ಮಾತು ನಮಗೆ ಬದುಕಿನ ದೊಡ್ಡ ಸತ್ಯವನ್ನು ಬೋಧಿಸುತ್ತದೆ.​ಸ್ವಯಂ ಅರಿವು ಉಂಟಾಗುತ್ತದೆ.ನಾವು ಯಾರೋ ಆಗಲು ಪ್ರಯತ್ನಿಸದೇ, ನಮ್ಮ ನೈಜ ಸಾಮರ್ಥ್ಯವನ್ನು ಗುರುತಿಸಿ ಬೆಳೆಯಬೇಕು.​ ಬಾಹ್ಯ ವೈಭವವನ್ನು ನೋಡಿ ವ್ಯಕ್ತಿಯನ್ನು ಅಳೆಯಬಾರದು, ಆತನ ಆಂತರಿಕ ಯೋಗ್ಯತೆ ಮತ್ತು ನಡತೆಗೆ ಬೆಲೆ ಕೊಡಬೇಕು.​ಕೇವಲ ಪರಿಸರ ಬದಲಾದರೆ ಸಾಲದು, ವ್ಯಕ್ತಿಯ ಆಂತರಿಕ ಗುಣ ಮತ್ತು ಯೋಚನಾ ಲಹರಿ ಬದಲಾಗಬೇಕು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಿತಿಯನ್ನು ಅರಿತು, ಕೃತಕ ಮುಖವಾಡಗಳನ್ನು ಕಳಚಿ ಹಾಕಿ, ಸತ್ಸಂಗ ಮತ್ತು ಸದ್ವಿಚಾರಗಳ ಮೂಲಕ ತನ್ನ ಆಂತರಿಕ ಗುಣವನ್ನು ಕೋಗಿಲೆಯಂತೆ ಮಧುರವಾಗಿಸಿಕೊಳ್ಳಲು ಪ್ರಯತ್ನಿಸಬೇಕು. ​ಈ ಮಾತು ಮನುಷ್ಯನ ಆಂತರಿಕ ಪ್ರಕೃತಿ ಮತ್ತು ಬಾಹ್ಯ ಪ್ರಭಾವಗಳ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಮನಃಶಾಸ್ತ್ರದಲ್ಲಿ ಇದನ್ನು ಹುಟ್ಟುಗುಣ ಅಥವಾ ಬೆಳೆಸಿದ ವಾತಾವರಣ ಎನ್ನಲಾಗುತ್ತದೆ. ​ ಇಂದು ಜಗತ್ತು ಕೇವಲ ‘ಪಂಜರ’ಗಳನ್ನು ಅಂದರೆ ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ ಕಾರುಗಳು, ಬ್ರ್ಯಾಂಡೆಡ್ ಬಟ್ಟೆಗಳನ್ನು ನೋಡಿ ವ್ಯಕ್ತಿಯ ಯೋಗ್ಯತೆಯನ್ನು ಅಳೆಯುತ್ತದೆ. ಆದರೆ, ಮಾನಸಿಕವಾಗಿ ವಿಕಾಸಗೊಳ್ಳದ, ಸಣ್ಣತನದ ಯೋಚನೆ ಇರುವ ವ್ಯಕ್ತಿಯನ್ನು ಎಷ್ಟೇ ದೊಡ್ಡ ಶ್ರೀಮಂತಿಕೆಯಲ್ಲಿ ಇಟ್ಟರೂ ಆತನ ಮಾತುಗಳು ಮತ್ತು ವರ್ತನೆಗಳು ಕಾಗೆಯ ಕರ್ಕಶ ಧ್ವನಿಯಂತೆಯೇ ಇರುತ್ತವೆ.ಕಾಗೆಯು, ಕೋಗಿಲೆಯನ್ನು ನೋಡಿ ನಕಲು ಮಾಡಲು ಸಾಧ್ಯವಿಲ್ಲ. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇತರರ ಜೀವನವನ್ನು ನೋಡಿ ತಾವೂ ಹಾಗೆಯೇ ಬದುಕಲು ಕೃತಕವಾಗಿ ಪ್ರಯತ್ನಿಸುತ್ತಿದೆ. ತನ್ನ ಮೂಲ ಅಸ್ತಿತ್ವವನ್ನು ಮರೆತು, ಬೇರೊಬ್ಬರ ಮುಖವಾಡ ಧರಿಸಿದಾಗ ಮನುಷ್ಯ ತನ್ನ ನೈಜ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಕಾಗೆಗೆ ತನ್ನದೇ ಆದ ಸ್ವಾತಂತ್ರ್ಯವಿದೆ, ಆದರೆ ಅದು ಕೋಗಿಲೆಯಾಗಲು ಹೋದಾಗ ಮಾತ್ರ ಹಾಸ್ಯಾಸ್ಪದವಾಗುತ್ತದೆ.​​ಕುಟುಂಬ ಮತ್ತು ಸಂಸ್ಕಾರದ ಹಿನ್ನೆಲೆಯಲ್ಲಿ ಈ ಗಾದೆಗೆ ಭಿನ್ನವಾದ ಅರ್ಥವಿದೆ. ಕೇವಲ ಶ್ರೀಮಂತ ಅಥವಾ ಪ್ರಭಾವಿ ಕುಟುಂಬದಲ್ಲಿ ಹುಟ್ಟಿದ ತಕ್ಷಣ ಒಬ್ಬ ವ್ಯಕ್ತಿಗೆ ಯೋಗ್ಯತೆ ಬಂದುಬಿಡುವುದಿಲ್ಲ. ಸಮಾಜದಲ್ಲಿ ದೊಡ್ಡ ಮನೆತನದಲ್ಲಿ ಹುಟ್ಟಿ, ಸಕಲ ಸೌಕರ್ಯಗಳ ಮಧ್ಯೆ ಬೆಳೆದ ಎಷ್ಟೋ ಮಕ್ಕಳು ದುಶ್ಚಟಗಳಿಗೆ ದಾಸರಾಗಿ, ಸಮಾಜಕ್ಕೆ ಕಂಟಕರಾಗುವುದನ್ನು ನಾವು ನೋಡುತ್ತೇವೆ. ಇಲ್ಲಿ ‘ದೊಡ್ಡ ಮನೆತನ’ ಎನ್ನುವುದು ಚಿನ್ನದ ಪಂಜರ ಇದ್ದಂತೆ. ಆದರೆ ಆ ಮಗುವಿನಲ್ಲಿ ಮೂಲತಃ ಒಳ್ಳೆಯ ಗುಣ, ವಿನಯ ಮತ್ತು ಸಂಸ್ಕಾರ ಇಲ್ಲದಿದ್ದರೆ, ಆತ ಸಮಾಜದಲ್ಲಿ ‘ಪಂಚಮ ಸ್ವರ’ದಂತಹ ಕೀರ್ತಿಯನ್ನು ತರಲಾರ.​ ರಾಜನ ಮಗ ರಾಜನಾಗಬಹುದು, ಆದರೆ ಆತ ಪ್ರಜಾವತ್ಸಲನಾದ ನಾಯಕನಾಗಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದ ಉತ್ತರಾಧಿಕಾರಿಗೆ ಎಷ್ಟೇ ದೊಡ್ಡ ಸಾಮ್ರಾಜ್ಯವನ್ನು ಹಸ್ತಾಂತರಿಸಿದರೂ ಆತ ಅದನ್ನು ನಾಶ ಮಾಡುತ್ತಾನೆಯೇ ಹೊರತು ರಕ್ಷಿಸುವುದಿಲ್ಲ. ಯೋಗ್ಯತೆಯನ್ನು ತರಬೇತಿಯಿಂದ ಕೊಡಬಹುದೇ ಹೊರತು, ಜನ್ಮಸಿದ್ಧ ಹಕ್ಕಾಗಿ ಅಥವಾ ಆಸ್ತಿಯ ರೂಪದಲ್ಲಿ ವರ್ಗಾಯಿಸಲು ಸಾಧ್ಯವಿಲ್ಲ.​​ಕಲೆ ಮತ್ತು ಸಾಹಿತ್ಯದ ಲೋಕದಲ್ಲಿ ಈ ಗಾದೆಯು ‘ಪ್ರತಿಭೆ’ ಮತ್ತು ‘ಅವಕಾಶ’ಗಳ ನಡುವಿನ ಸಂಬಂಧವನ್ನು ವಿವರಿಸುತ್ತದೆ. ​ಕಲೆ ಎನ್ನುವುದು ದೈವದತ್ತವಾದದ್ದು ಮತ್ತು ಕಠಿಣ ಪರಿಶ್ರಮದಿಂದ ಒಲಿಯುವಂತದ್ದು. ಇಂದು ಕಲಾ ಜಗತ್ತಿನಲ್ಲಿ ಅಥವಾ ಸಿನಿಮಾ ರಂಗದಲ್ಲಿ ಯಾವುದೇ ಪ್ರತಿಭೆಯಿಲ್ಲದ ವ್ಯಕ್ತಿಗೆ ಹಣದ ಬಲದಿಂದ ದೊಡ್ಡ ಅವಕಾಶಗಳನ್ನು ಸೃಷ್ಟಿಸಿಕೊಡಬಹುದು. ಆದರೆ, ಜನಮನ ಗೆಲ್ಲುವಂತಹ ‘ಪಂಚಮ ಸ್ವರ’ವನ್ನು ಸೃಷ್ಟಿಸಲು ಆತನಿಗೆ ಸಾಧ್ಯವಾಗುವುದಿಲ್ಲ. ನೈಜ ಪ್ರತಿಭೆಯಿಲ್ಲದ ನಟನೆ ಅಥವಾ ಸಂಗೀತ ಕೃತಕವಾಗಿ ಕಾಣುತ್ತದೆ.ಕಾಗೆ ಕಪ್ಪಗಿದ್ದರೂ ಸಮಾಜಕ್ಕೆ ಅದರದೇ ಆದ ಕೊಡುಗೆಯಿದೆ. ಆದರೆ ಅದನ್ನು ಕೋಗಿಲೆಯ ಸ್ಥಾನದಲ್ಲಿ ಕೂರಿಸುವುದು ಕಲೆಯ ಅಪಚಾರವಾಗುತ್ತದೆ. ಅದೇ ರೀತಿ, ಅನರ್ಹರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಉನ್ನತ ಪೀಠದಲ್ಲಿ ಕೂರಿಸಿದಾಗ ಇಡೀ ಸಾಂಸ್ಕೃತಿಕ ವ್ಯವಸ್ಥೆಯೇ ಹದಗೆಡುತ್ತದೆ ಎಂಬುದನ್ನು ಈ ಗಾದೆ ಎಚ್ಚರಿಸುತ್ತದೆ.​​ನಮ್ಮ ಭಾರತೀಯ ದರ್ಶನಗಳಲ್ಲಿ ಅಥವಾ ವೇದಾಂತದಲ್ಲಿ ಈ ಗಾದೆಗೆ ಅತ್ಯಂತ ಆಳವಾದ ತಾತ್ವಿಕ ಹಿನ್ನೆಲೆಯಿದೆ. ಇಲ್ಲಿ ಪಂಜರ ಎನ್ನುವುದು ‘ಐಹಿಕ ಜಗತ್ತು’ ಅಥವಾ ‘ದೇಹ’, ಕಾಗೆ ಎನ್ನುವುದು ‘ಅಹಂಕಾರ’ ಅಥವಾ ‘ಅಜ್ಞಾನ’.​ಅಂತರಂಗದ ಶುದ್ಧಿಯೆನ್ನಬಹುದು. ಮನುಷ್ಯನು, ಕಾಶಿ, ರಾಮೇಶ್ವರ ಅಥವಾ ಮಕ್ಕಾಗೆ ಹೋಗಿ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿದರೂ ಆತನ ಮನಸ್ಸಿನಲ್ಲಿರುವ ಕ್ರೌರ್ಯ, ಅಸೂಯೆ ಮತ್ತು ಕಾಮನೆಗಳು ದೂರವಾಗುವುದಿಲ್ಲ. ದೇಹಕ್ಕೆ ಚಂದನ ಸವರಿದರೂ ಒಳಗಿರುವ ಕೊಳಕು ನಾಶವಾಗುವುದಿಲ್ಲ. ಧಾರ್ಮಿಕ ಆಚರಣೆಗಳು ಕೇವಲ ಬಾಹ್ಯ ಪಂಜರದಂತೆ. ಮನಸ್ಸು ಶುದ್ಧವಾಗದ ಹೊರತು ಭಗವಂತನ ಸಾಕ್ಷಾತ್ಕಾರವೆಂಬ ಪಂಚಮ ಸ್ವರ ಹೊರಹೊಮ್ಮಲು ಸಾಧ್ಯವಿಲ್ಲ. ​ ಹಿಂದೂ ತತ್ತ್ವಶಾಸ್ತ್ರದ ಪ್ರಕಾರ, ಮನುಷ್ಯ ತನ್ನ ಹಿಂದಿನ ಜನ್ಮಗಳ ‘ವಾಸನೆ’ (ಗುಣಗಳು) ಮತ್ತು ಕರ್ಮಗಳನ್ನು ಹೊತ್ತು ತರುತ್ತಾನೆ. ಆ ಹುಟ್ಟುಗುಣವನ್ನು ಕೇವಲ ಬಾಹ್ಯ ಪರಿಸರದಿಂದ ಬದಲಾಯಿಸುವುದು ಕಷ್ಟ. ಕಟುಕನ ಕೈಯಲ್ಲಿರುವ ಕತ್ತಿಗೆ ಚಿನ್ನದ ಹಿಡಿ ಹಾಕಿದರೂ ಅದು ರಕ್ತವನ್ನೇ ಹರಿಸುತ್ತದೆಯೆ ಹೊರತು ಕಬ್ಬಿನ ಹಾಲನ್ನು ಹರಿಸಲಾರದು .ಹಾಗೆಯೇ, ತಾಮಸ ಗುಣವುಳ್ಳ ವ್ಯಕ್ತಿಗೆ ಸಾತ್ವಿಕ ವಾತಾವರಣ ಕಲ್ಪಿಸಿದರೂ ಆತನ ಆಲೋಚನೆಗಳು ತಾಮಸಿಕವಾಗಿಯೇ ಇರುತ್ತವೆ.​ಜಾಗತಿಕ ಮಟ್ಟದಲ್ಲಿ ಅಥವಾ ಇಂದಿನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಈ ಗಾದೆ ಅತ್ಯಂತ ಮಾರ್ಮಿಕವಾದ ವಿಡಂಬನೆಯನ್ನು ಮಾಡುತ್ತದೆ.​ಪದವಿಗಳು ಮತ್ತು ಪ್ರಬುದ್ಧತೆಗಳಿಗೂ ಬೇರೆ ಮಾತು ಹೇಳಬೇಕಾಗಿಲ್ಲ. ಇಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಂದ ಲಕ್ಷಾಂತರ ರೂಪಾಯಿ ಕೊಟ್ಟು ಪದವಿ (Degrees) ಪಡೆದವರು ದೇಶದಲ್ಲಿದ್ದಾರೆ. ಈ ಪದವಿಗಳು ಕೇವಲ ಒಂದು ಪಂಜರವಿದ್ದಂತೆ. ಆದರೆ, ಸಮಾಜಕ್ಕೆ ಬೇಕಾದ ಕರುಣೆ, ನೈತಿಕತೆ, ಮತ್ತು ದೇಶಪ್ರೇಮ ಅವರಲ್ಲಿ ಇಲ್ಲದಿದ್ದರೆ ಆ ಶಿಕ್ಷಣಕ್ಕೆ ಯಾವುದೇ ಬೆಲೆಯಿರುವುದಿಲ್ಲ. ಜ್ಞಾನವಿದ್ದಲ್ಲಿ ವಿನಯವಿರಬೇಕು, ಆದರೆ ಕೇವಲ ಅಹಂಕಾರದ ‘ಕಾವ್ ಕಾವ್’ ಧ್ವನಿ ಕೇಳಿಬಂದರೆ ಆ ಶಿಕ್ಷಣ ಸಂಪೂರ್ಣ ವಿಫಲ ಎಂದರ್ಥ.​ವ್ಯವಸ್ಥೆಯ ವೈಫಲ್ಯವು ಎಷ್ಟು ಕೆಟ್ಟು ಹೋಗಿದೆ ಎಂದರೆ, ಯಾವುದೇ ಒಂದು ಸಂಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷ ನೌಕರನನ್ನು ಮೂಲೆಗುಂಪು ಮಾಡಿ, ಕೇವಲ ಹಿತೈಷಿ ಅಥವಾ ಚಮಚಾಗಿರಿ ಮಾಡುವ ವ್ಯಕ್ತಿಗೆ ಉನ್ನತ ಮ್ಯಾನೇಜರ್ ಹುದ್ದೆ ನೀಡಿದರೆ ಆ ಸಂಸ್ಥೆ ದಿವಾಳಿಯಾಗುತ್ತದೆ. ಕಾಗೆಯನ್ನು ಸಿಂಹಾಸನದ ಮೇಲೆ ಕೂರಿಸಿದಾಗ ಇಡೀ ಸಾಮ್ರಾಜ್ಯವೇ ಪತನದ ಹಾದಿ ಹಿಡಿಯುತ್ತದೆ ಎಂಬ ರಾಜನೀತಿಯ ಸತ್ಯವನ್ನು ಇದು ಜ್ಞಾಪಿಸುತ್ತದೆ.​​ಈ ಗಾದೆ ಮಾತು ಕೇವಲ ನಕಾರಾತ್ಮಕವಾಗಿ ಕಾಗೆಯನ್ನು ನಿಂದಿಸುವ ಮಾತಲ್ಲ; ಬದಲಿಗೆ ಇದು ಪ್ರಕೃತಿಯ ನಿಯಮವನ್ನು ಎತ್ತಿಹಿಡಿಯುವ ಸತ್ಯ. “ಯಾರಿಗೆ ಎಲ್ಲಿ ಗೌರವ ಸಿಗಬೇಕೋ ಅಲ್ಲಿ ಸಿಗಬೇಕು ಮತ್ತು ಯಾರು ತಮ್ಮ ನೈಜ ಗುಣಕ್ಕೆ ತಕ್ಕಂತೆ ಬದುಕಬೇಕೋ ಹಾಗೆ ಬದುಕಬೇಕು.”​ಕಾಗೆ ಮುಕ್ತವಾಗಿ ಆಕಾಶದಲ್ಲಿ ಹಾರಾಡುತ್ತಾ ಪ್ರಕೃತಿಯನ್ನು ಸ್ವಚ್ಛಗೊಳಿಸುವಾಗ ಸುಂದರವಾಗಿರುತ್ತದೆ. ಅದನ್ನು ತಂದು ಪಂಜರದಲ್ಲಿಟ್ಟು ಕೋಗಿಲೆಯಾಗಲು ಒತ್ತಾಯಿಸುವುದು ಕಾಗೆಗೂ ಮಾಡುವ ಅನ್ಯಾಯ, ಪಂಜರಕ್ಕೂ ಮಾಡುವ ಅಪಚಾರ. ಆದ್ದರಿಂದ, ಪ್ರತಿಯೊಬ್ಬ ಮನುಷ್ಯನೂ ತನ್ನ ನೈಜ ಸಾಮರ್ಥ್ಯವನ್ನು ಅರಿತು, ಕೃತಕ ಆಡಂಬರಗಳಿಗೆ ಮಾರುಹೋಗದೆ, ತನ್ನ ಅಂತರಂಗವನ್ನು ಶುದ್ಧೀಕರಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗುವ ‘ಪಂಚಮ

Read Post »

You cannot copy content of this page

Scroll to Top