“ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ವೈ.ಎಂ.ಯಾಕೊಳ್ಳಿ
ಪುಸ್ತಕ ಸಂಗಾತಿ ವೈ.ಎಂ.ಯಾಕೊಳ್ಳಿ “ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ಕನ್ನಡದಲ್ಲಿ ಹೈಕು ಕಾವ್ಯ ಬಂದು ಅರ್ಧಶತಮಾನವೇ ಆಗಿರಬೇಕು. ೧೭೦ ರ ದಶಕದಲ್ಲಿ ಡಾ.ಕೆ.ಬಿ ಬ್ಯಾಳಿಯವರು ಮೊದಲ ಬಾರಿಗೆ ಕನ್ನಡದಲ್ಲಿ ಹೈಕು ಬರೆದರು . ಮತ್ತು ಕೆಲವು ಹೈಕುಗಳನ್ನು ಅನುವಾದ ಮಾಡುವ ಮೂಲಕ ಹೈಕು ಕಾವ್ಯವನ್ನು ಪರಿಚಯಿಸಿದರು . ಇದು ಮೂಲತ: ಜಪಾನಿ ಭಾಷೆಗೆ ಸೇರಿದ ಕಿರು ಪದ್ಯ ಪ್ರಕಾರ. ಇದನ್ನು ಭಾರತಕ್ಕೆ ತಂದವರು ವಿಶ್ವ ಕವಿ ರವೀಂದ್ರರೇ ಎಂದು ಹೇಳಲಾಗುತ್ತದೆ. ಡಾ. ಬ್ಯಾಳಿಯವರ ನಂತರದಲ್ಲಿ ಹಲವಾರು ಜನ ಹೈಕು ಬರೆಯತೊಡಗಿದರು. ಈಗಂತೂ ಹೈಕು ಕಾವ್ಯ ಬರೆಯಲೆಂದೇ ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯಂಥವರು ಸಾಮಾಜಿಕ ಜಾಲತಾಣಗಳ ಗುಂಪನ್ನೆ ರಚಿಸಿದರು. ಒಬ್ಬೊಬ್ಬರೆ ನಾಲ್ಕು ಹ್ಯಕು ಸಂಕಲನಗಳನ್ನು ತಂದ ಉದಾಹರಣೆಗಳು ಇವೆ. ಚಿತ್ರದುರ್ಗದ ಮನೋಜ್ ಮಕರಂದ, ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯವರು,ಬಾಗಲಕೋಟೆಯ ಶ್ರೀ ಬಿ .ಎಸ್ .ಬಿಜಾಪೂರ ಅವರು ಈ ದಿಶೆಯಲ್ಲಿ ಅತಿ ಹೆಚ್ಚು ಹೈಕು ಸಂಕಲನಗಳನ್ನು ಕೊಟ್ಟಿದ್ದಾರೆ. ಈಗ ಹತ್ತಾರು ಜನರ ಹೈಕು ಸಂಕಲನಗಳು ಬಂದಿವೆ. ಹೈಕು ೫/೭/ ೫ ಸಿಲೆಬಲ್ ಗಳ ಗಳಲ್ಲಿ ರಚಿತವಾಗುವ ಮೂರು ಸಾಲಿನ ಚಂದೋಪ್ರಕಾರ ಆದರೆ ಕನ್ನಡದಲ್ಲಿ ಸಿಲೆಬಲ್ ಗಳನ್ನು ಅಕ್ಷರಗಳೆಂದು ತಿಳಿದು ೫/೭/೫ ಅಕ್ಷರಗಳಿಗೆ ಸೀಮಿತಗೊಳಿಸಿದ ಹೈಕು ಕಾವ್ಯವನ್ನು ಬರೆಯುವ ಪದ್ಧತಿಯನ್ನು ಡಾ ಕೆ .ಬಿ ಬ್ಯಾಳಿಯವರು ಹಾಕಿದರು . ಅವರ ದಾರಿಯಲ್ಲಿ ಇಂದು ನೂರಾರು ಜನ ಹೈಕು ಬರೆಯುತ್ತಿದ್ದಾರೆ. ಹತ್ತರು ಹೈಕು ಸಮಕಲನಗಳೂ ಬಂದಿವೆ. ಆದರೆ ಇನ್ನೊಂದು ಬರ್ಗ ಇದೆ./. ಡಾ. ಸಿ ರವೀಂದ್ರನಾಥ, ರಮ್ಜಾನ್ ಹೆಬಸೂರ,ದೊಡ್ಡಣ್ನ ಗದ್ದನಕೇರಿ, ಡ ಪ್ರಕಸ ಖಾಡೆ, ಮನೋಜ ಮಕರಂದ ಮೊದಲಾದವರು ಮೂರು ಸಾಲಿನ ಕಿರು ಪದ್ಯಪ್ರಕಾರವನ್ನು ಇರಿಸಿಕೊಂಡು ೫/೭/೫ ಅಕ್ಷರಗಳಿಗೆ ಅಷ್ಟು ಮಹತ್ವ ಕೊಡದೆ ಮೂರು ಸಾಲುಗಳ ಕವಿತೆಯನ್ನು ಹೈಕು ಎಂದು ಕರೆದು ಸಂಕಲನ ತಂದಿದ್ದಾರೆ. ಕೆಲವರು ಈ ಪದ್ದತಿಯನ್ನೂ ಅನುಸರಿಸಿರುವದು ಉಂಟು. ಒಟ್ಟಿನಲ್ಲಿ ಈ ಎರಡೂ ಬಗೆಯ ಹೈಕು ಸಂಲನಗಳು ಈಗ ಕನ್ನಡದಲ್ಲಿ ಬರುತ್ತಿವೆ. ಇದೆ ಸಾಲಿಗೆ ಸೇರಿದವರು ಧಾರವಾಡದ ಶ್ರೀ ರಾಮಚಂದ್ರ ಕುಲಕರ್ಣಿಯವರು. ವೃತ್ತಿಯಿಂದ ಬ್ಯಾಂಕ್ ಅಧಿಕಾರಿಯಾಗಿ ಈಗ ತಮ್ಮ ಸೇವೆಗೆ ರಾಜಿನಾಮೆ ಕೊಟ್ಟು ಪೂರ್ಣ ಸಾಹಿತ್ಯ ಸೇವೆಗೆ ಸಮರ್ಪಿಸಿಕೊಂಡಿರುವ ಶ್ರೀಯುತರ ಹೈಕುಗಳ ಮೂರು ಸಂಕಲನ ತಂದಿದ್ದಾರೆ. ಇನ್ನೆರಡು ಸಮಕಲನ ಪ್ರಕಟಣೆಯ ಹಂತದಲ್ಲಿವೆ. ಅವು ೫/೭/೫ ಅಕ್ಷರಗಳ ಪರಿಮಿತಿಗೆ ಸೇರಿದ ಹೈಕುಗಳಲ್ಲ. ಮೂರು ಸಾಲಿನ ಸ್ವತಂತ್ರ ಮುಕ್ತಕಗಳು ಎನ್ನುವದನ್ನು ಗಮನಿಸಬೇಕು. ಅಕ್ಷರಮಿತಿಕಾವ್ಯಕ್ಕೆ ಕುತ್ತು ಹಾಗಾಗಿನಾ ಲಂಘನ ಮಾಡಿದೆ (ನನ್ನ ರಚನೆ) ಎನ್ನುವದು ಅವರ ವಿಚಾರ. ಇಲ್ಲಿ ಮೂರು ಸಾಲಿವೆ ಅದರೆ ಅಕ್ಷರಗಳ ಮಿತಿಯಿಲ್ಲದ ರಚನೆಗಳು. ಹಾಗೆ ನೋಡಿದರೆ ಈ ಬಗೆಯ ಹೈಕುಗಳನ್ನು ಪ್ರಯೋಗ ಮಡಿದ ಸಿ ರವೀಂದ್ರನಾಥ ಮೊದಲಾದವರಿಗಿಂತ ಮುಂಚೆಯೇ ಹೈಕು ಬರೆದವರು ಶ್ರೀ ರಾಮಚಂದ್ರ ಕುಲಕರ್ಣಿಯವರು ೧೯೯೯ ರಲ್ಲಿಯೇ ಅಂದರೆ ಇಂದಿಗೆ ೨೫ ವರ್ಷಗಳ ಹಿಂದೆಯೇ ಅವರ ಹೈಕು ಸಂಕಲಕನ ಬಂದಿದ್ದವು. ಒಂದೆರಡು ಸಂಕಲನಗಳಂತೂ ಮೂರು ಮೂರು ಮುದ್ರಣ ಕಂಡಿದ್ದವು. ಹಾಯ್ ಹಾಯ್ಕು ಸರಣಿಯಲ್ಲಿ ಐದು ಸಂಕಲನಗಳನ್ನು ಅವರು ತಯಾರಿಸಿದ್ದಾರೆ ಈಗಾಗಲೇ ಮೂರು ಪ್ರಕಟವಾಗಿದ್ದು ಇನ್ನೆರಡು ಪ್ರಕಟಣೆಯ ಹಂತದಲ್ಲಿವೆ. ಅವರೇ ಹೇಳಿಕೊಂಡಂತೆ ಸುಮರು ೨೫೦೦ ಹೈಕುಗಳನ್ನು ರಚಿಸಿದ ಹೈಕು ಕವಿ ಅವರಾಗಿದ್ದಾರೆ. ಹಾಯ್ ಹಾಯಕು -೩ ಸಂಕಲನ ಈಗ ನನ್ನ ಕ್ಯಲಿದೆ. ಅವರ ಹಾಯ್ ಹಾಯಕು ಸೀರಿಸ್ ನಲ್ಲಿ ಇದು ಮೂರನೆಯ ಕೃತಿಯಾಗಿದೆ. ಇಲ್ಲಿ ಸುಮಾರು ೪೫೦ ರಷ್ಟು ಹೈಕುಗಳನ್ನು ಒಂಬತ್ತು ಭಾಗವಾಗಿಸಿದ್ದಾರೆ ಮೊದಲ ಭಾಗಕ್ಕೆ ಯಾವುದೆ ಹೆಸರು ಕೊಡದೆ ಇರುವ ಕವಿ ನಂತರದಲ್ಲಿ ಉಲ್ಕಾಪಾತ(೨೬ ಹೈಕು)ದಿನದರ್ಶಿಕೆ ( ೧೭) ಮೋಡಗಳು (೧೪ ಹೈಕು)ನಿದ್ರೆ ( ೪೦ ಹೈಕುಗಳು) ಗಾಳಿಪಟ ( ೧೬ ಹೈಕುಗಳು )ಗುಡ್ಡ (೧೬ ಹೈಕುಗಳು),ಮೀನು ಮಾರ್ಕೆಟ್ಟು ( ೨೯ ಹೈಕುಗಳು)ಆಕಾಶ (೮ ಹ್ಯಕುಗಳು) ಹೀಗೆ ಬೇರೆಬೇರೆ ಭಾಗವಾಗಿಸಿ ಸಮಕಲನದಲಕ್ಲಿ ನೀಡಿದ್ದಾರೆ. ರಾಮಚಂದ್ರ ಕುಲಕರ್ಣೀಯವರು ಬರೀ ಹೈಕು ಕವಿಗಳಲ್ಲ, ಹೈಕು ಮೀಮಾಂಸಕರೂ ಹೌದು. ಅವರ ಸಂಕಲನಗ ಆರಂಭದ ಪ್ರಸ್ತಾವಣೆಯಲ್ಲಿ ಹೈಕು ಕಾವ್ಯ ರಚಿನೆ ಕುರಿತ ಚಿಮತನೆ ಮೂಡಿ ಬಂದಿರುವದು ಉಪಯುಕ್ತವಾಗಿದೆ. ಅವರ ಹುಕುಗಳಲ್ಲಿ ಝೆನ್ ತತ್ವಜ್ಞಾನ ಅವಲಂಬಿಸಿದ ಬುದ್ದನ ತತ್ವಗಳನ್ನು ಸಾರುವ ಹಾಗೆಯೇ ನಿಸರ್ಗದ ಅಂತಸತ್ವ ಹೊಂದಿದ ಹೈಕು ಕಾವ್ಯ ತುಂಬ ತಾಜಾ ಸರಸ ಸುಂದರವಾಗಿ ಅರಳಿವೆ. ಬದುಕಿನ ತಾತ್ವಿಕ ಚಿಂತನೆ ಮಡುವ ಅನುಭಾವ ಪೂರ್ಣ ಹ್ಯಕಿಗೆ ಉದಾಹರಣೆಯಾಗಿ ಎಲ್ಲರೂ ಸಾಯುತ್ತೇವೆ.ಒಬ್ಬರಿಗೂ ನೆನಪಿಲ್ಲ ‘ಹಃ’ಮರೆವು ಸಾವಿಗೆ ವರ ಎಂಥ ಸುಂದರ ಸತ್ಯ! ಮರೆತಿದ್ದೇವೆ ಎಂತಲೇ ನಾವು ಆರಾಮ ಇದ್ದೇವೆ. ಗೊತ್ತೇ ಸಖಿ ? ಹಕ್ಕಿಪಕ್ಕಿನಮಗಿಂತ ಮೊದಲೇಎದ್ದಿವೆ! ಗೆದ್ದಿವೆ! ಎದ್ದಿವೆ ಎನ್ನುವದು ಮತ್ರವಲ್ಲ ನಮ್ಮ ಮೇಲೆ ನಿಸರ್ಗ ಮಡಿದ ವಿಜಯ ಗೆದ್ದಿವೆ ಕೂಡಾ! ಇದೇ ನಿಜವಾದ ಸತ್ಯ. ಎಷ್ಟೆಲ್ಲ ಹೊಸರೋಗ!ಏನೆಲ್ಲ ಔಷಧಿ!ಪಥ್ಯ !ನರಳಿಕೆಯೊಂದೇ ಸತ್ಯ ವಾಸ್ತವವನ್ನು ಹೇಳುವ ಹೈಕು ಇದು. ನಾವು ನಿಸರ್ಗಕ್ಕೆ ಮಡಿದ ಅಘಾತದಿಂದ ಇಂದು ಪ್ರಾಣಿ ಪಕ್ಷಿಗಳು ಮನುಷ್ಯನ ಹೆಜ್ಜೆ ಕಂಡರೂ ಸಹಿಸಿಲಾರವು ಅವು ನಮ್ಮನ್ನಗಲಿ ದೂರ ಹೋಗಿವೆ. ಅವಕ್ಕೆ ತಮ್ಮದೇ ಜಾಗ ಬೇಕಾಗಿದೆ ಎನ್ನುವ ಕವಿ ಗುಬ್ಬಿ ಗುಳೆ ಹೋಗಿವೆತಮ್ಮ ಎದೆ ಬಡಿತಕೇಳಿಸುವಲ್ಲಿ ! ಪ್ರಾಣಿ ಪಕ್ಷಿಗಳನ್ನು ನೆಮ್ಮದಿಯಿಂದ ಬದುಕದಂತೆ ಮಾಡಿದ ಮನುಷ್ಯ ಅವು ಗಡಿಪಾರು ಅಗುವಂತೆ ಮಡಿದ್ದಾನೆ ಎನ್ನುವದನ್ನು ಈ ಹೈಕು ಸೂಚಿಸುತ್ತದೆ. ಆದರೆ ನಿಸರ್ಗಕ್ಕೆ ಅಂತ್ಯವಿಲ್ಲ ಅದು ಮತ್ತೆ ಚಿಗುರುತ್ತದೆ ಎನ್ನುವದಕ್ಕೆ ಮೊನ್ನೆ ಉರುಳಿತು ಮರಇಂದು ಮೋಟು ನೆತ್ತಿಯ ಮೇಲೆಕುಸುರು ಕುಸುರು ಚಿಗುರ ಎಂಥ ಅದ್ಭುತ ಅಲ್ಲವೇ! ಲೌಕಿಕದ ಸತ್ಯಗಳಣ್ನೂ ಕಾಣವು ಕವಿ ಪ್ರೀತಿ ಯ ಬಗ್ಗೆ ಸಾಲು ಗಳು ಎಷ್ಟು ಮಾರ್ಮಿಕ ವಾಗಿವೆ ನೋಡಿ. ಒಲವು ಮಹಾ ಕೊಲೆಗಾರಪ್ರಾಣ ಹೀರಿದೆ ಎಷ್ಟೋಕಾಣುವಂತೆ! ಕಾಣದಂತೆ!! ಕಾಣುವಂತೆ ಸತ್ತವು ಕೆಲವು ಜೀವಗಳಾದರೆ ಕಾಣದಂತೆ, ಮುಚ್ಚಿಟ್ಟು ಸತ್ತವು ಎಷ್ಟೋ ಏನೋ? ಎನ್ನುವ ಉದ್ಘಾರ ಕವಿಯದು. ಕಾಣು ಪದವನ್ನು ದುಡಿಸಿಕೊಂಡ ರೀತಿಯಲ್ಲಿಯೆ ಕವಿತೆ ಅಡಗಿರುವದು. ಮೀನು ಮಾಕೇಟ್ಟಿನಲ್ಲಿ ಸಾಲಾಗಿ ಸತ್ತು ಮಲಗಿದ ಮೀನು ಗಳನ್ನು ಕಂಡ ಕವಿ ಸಾವಿನ ಕಂತೆಸಾಲಾಗಿ ಮಲಗಿದೆಸಾವಿಗೂ ಬೆಲೆಯಿದೆ , ಸಂತೆ! ಮಾರಾಟಕ್ಕಿಟ್ಟ ಮೀನಿನ ಗುಂಪು ಕವಿಯಲ್ಲಿ ಮೂಡಿಸುವ ಆಘಾತ ಕವಿತೆಯಾಗಿ ಹೊರಹೊಮ್ಮಿದೆ. ಕೌಟುಂಬಿಕ ಪರಿಸರವನ್ನು ಚಿತ್ರಿಸುವ ಹೈಕುಗಳಲ್ಲಿ ಹೆಂಡತಿಯ ಮೌನವನ್ನು ಕುರಿತು ಅವರು ಬರೆದ ಹೈಕು ಹೀಗಿದೆ. ನೀ ಸುಮ್ಮನಿದ್ಧೀ ಎಂದರೆನನಗೇನೋ ಗುಮಾನಿ!ಏನೋ ಆಟ, ಏನೋ ಬೇಟ ನಾಳೆ ಈ ಹೊತ್ತಿಗೆ! ಪ್ರತಿಯೊಂದು ಭಾಗದ ಹೈಕುಗಳೂ ಅರ್ಥಪೂರ್ಣ ರಚನೆಗಳಾಗಿರುವದು ಅವರ ಕಾವ್ಯ ಸಂಕಲನದ ಮಹತ್ವ ಹೆಚ್ಚಿಸಿವೆ. ಸುಮ್ಮನೇ ಹೆಸರಿಸುತ್ತ ಹೋಗುವದಾದರೆ ಉಲ್ಕಾಪಾತಕ್ಕೆ ಉರುಳಿದ ಉಲ್ಕೆಯಪತನಕ್ಕೆ ಉಳಿದ ತಾರೆಗಳುಪಾಪ ! ಎಂದವು ದಿನದರ್ಶಿಕೆ ಭಾಗದ ಒಂದು ಹೈಕು ಆಸೆಯನ್ನೆ ತೂಗು ಬಿಟ್ಟೆನನ್ನೆದೆಯ ಗೋಡೆ ಮೊಳೆಗೆಈ ವರ್ಷ ಕೂಡ ಬದುಕುವೆ ಎಷ್ಟೊಂದು ಧನಾತ್ಮಕವಾದ ಚಿಂತನೆ! ಇನ್ನೊಂದು ಇದೆಬಾಗದ ಹೈಕು ವರ್ಷಕ್ಕೊಂದು ಹೊಸ ಕ್ಯಾಲೆಂಡರ್ಗರಿಗರಿ ಮುಗುಚುತ್ತದೆದುರ್ಬಲ ಸೋತ ಕೈಗಳು ಹೀಗೆ ಇಲ್ಲಿ ಹೈಕುಗಳು ಅವರೇ ಹೇಳಿದಂತೆ ‘ಕಿರಿದರಲ್ಲಿ ಪಿರಿದರ್ಥ’ ನೀಡಿವೆ. ಅವರು “ಹೈಕು ತತ್ ಕ್ಷಣಕ್ಕೆ ಮಿಂಚಿ ಮರೆಯಾಗುವ ಕಾವ್ಯಪ್ರಕಾರ ಅಲ್ಲ. ಅಂತರಾಳಕ್ಕೆ ಹೋಗಿ ಆನಂದದ ಸೆಲೆಯಾಗಿ ಚಿಮ್ಮಿಸುವ ಸಾಧನವಾಗಿ ಬಳಕೆಯಾಗುತ್ತದೆ” ಎಂದು ಹೇಳುವ ಅವರು ತೋರುವ ವಿನಯ ದೊಡ್ಡದು. “ಇಲ್ಲಿನ ನನ್ನೆಲ್ಲ ಹೈಕುಗಳನ್ನು ಅಪ್ಪಟ ಹಾಯ್ಕು ಗಳೆನ್ನುವ ಹಕ್ಕು ಧೈರ್ಯ ನನಗಿಲ್ಲ .. ಅರಿವುದಕ್ಕೆ ಇನ್ನೂ ಇದೆ. ಆ ಮಾರ್ಗದ ನವಿರುಯ ಅನುಭವಗಳ ಸರಳ ಅಭಿವ್ಯಕ್ತಿಗಳೇ ಈ ನನ್ನ ಹಾಯ್ಕುಗಳು” ಎನ್ನುವ ಮಾತು ಮುಖ್ಯವಾಗಿ ಕಾಣಿಸುತ್ತದೆ. ಡಾ ವೈ.ಎಂ.ಯಾಕೊಳ್ಳಿ
“ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ವೈ.ಎಂ.ಯಾಕೊಳ್ಳಿ Read Post »



