ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮನೆ ತುಳಸಿ ಬಾಡಿತು,
ಹೊಸ್ತಿಲ ದೀಪ ಆರಿತು;
ಒಂದೇ ಸೂರಿನ ನೆರಳಲಿ
ನಗುವು ಮೌನ ಸೇರಿತು.

ಮಾತು ಹಕ್ಕಿ ಹಾರಿತು,
ಮೌನ ಗೂಡು ಕಟ್ಟಿತು;
ಕೈಯ ಸ್ಪರ್ಶವಿದ್ದರೂ
ಮನಸು ದೂರ ಸರಿಯಿತು.

ನಂಬಿಕೆ ಮೊಗ್ಗು ಬಾಡಿತು,
ಸ್ವಾರ್ಥ ಗಾಳಿ ಬೀಸಿತು;
ಅರಳುವ ಮೊದಲೇ ಪ್ರೀತಿ
ಧೂಳಾಗಿ ಉದುರಿತು.

ಕಾದ ಕಣ್ಣ ಬೆಳಕಲಿ
ಹೊಸ್ತಿಲ ನೆರಳು ನಿಂತಿತು;
ಹೆಜ್ಜೆ ಸದ್ದು ಮೂಡದೆ
ಸಂಜೆ ಮೌನ ಹರಡಿತು

ಒಣ ಮಣ್ಣ ಮಡಿಲಲಿ
ಬೀಜ ಇನ್ನೂ ಮಲಗಿತು;
ಪ್ರೀತಿಯ ಮೊದಲ ಹನಿಯಲಿ
ಬಂಧ ಮತ್ತೆ ಚಿಗುರಿತು.

✍️ ಡಾ. ಹೆಚ್. ನಟರಾಜ್ ಆರ್ಯ

About The Author

4 thoughts on “ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ””

  1. ನಿಮ್ಮ ಲೇಖನಿಯಿಂದ ಮೂಡಿದ ಕಾವ್ಯ,
    ಭಾವನೆಗಳ ಭಂಡಾರ, ಅದ್ಭುತ ನವ್ಯ!
    ಪ್ರತಿ ಸಾಲಲ್ಲೂ ಅಡಗಿದೆ ಸುಂದರ ಅರ್ಥ,
    ನಿಮ್ಮ ಪ್ರತಿಭೆಗೆ ಸಿಕ್ಕಿದೆ ಸಾಹಿತ್ಯದ ಜೈತ್ರಯಾತ್ರೆಗೆ ಪಥ.

  2. Dr Annapurna H

    The title itself is very catchy. Each word is literally meaning ful.Overall, it is an excellent write up

Leave a Reply

You cannot copy content of this page

Scroll to Top