ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಮೌನ ಮಳೆ”


ಮನೆ ತುಳಸಿ ಬಾಡಿತು,
ಹೊಸ್ತಿಲ ದೀಪ ಆರಿತು;
ಒಂದೇ ಸೂರಿನ ನೆರಳಲಿ
ನಗುವು ಮೌನ ಸೇರಿತು.
ಮಾತು ಹಕ್ಕಿ ಹಾರಿತು,
ಮೌನ ಗೂಡು ಕಟ್ಟಿತು;
ಕೈಯ ಸ್ಪರ್ಶವಿದ್ದರೂ
ಮನಸು ದೂರ ಸರಿಯಿತು.
ನಂಬಿಕೆ ಮೊಗ್ಗು ಬಾಡಿತು,
ಸ್ವಾರ್ಥ ಗಾಳಿ ಬೀಸಿತು;
ಅರಳುವ ಮೊದಲೇ ಪ್ರೀತಿ
ಧೂಳಾಗಿ ಉದುರಿತು.
ಕಾದ ಕಣ್ಣ ಬೆಳಕಲಿ
ಹೊಸ್ತಿಲ ನೆರಳು ನಿಂತಿತು;
ಹೆಜ್ಜೆ ಸದ್ದು ಮೂಡದೆ
ಸಂಜೆ ಮೌನ ಹರಡಿತು
ಒಣ ಮಣ್ಣ ಮಡಿಲಲಿ
ಬೀಜ ಇನ್ನೂ ಮಲಗಿತು;
ಪ್ರೀತಿಯ ಮೊದಲ ಹನಿಯಲಿ
ಬಂಧ ಮತ್ತೆ ಚಿಗುರಿತು.
✍️ ಡಾ. ಹೆಚ್. ನಟರಾಜ್ ಆರ್ಯ




ಪ್ರಾಸ ಬದ್ದ ವಾದ ಬರವಣಿಗೆ
Beautiful Natarajji