ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನೆ ತುಳಸಿ ಬಾಡಿತು,
ಹೊಸ್ತಿಲ ದೀಪ ಆರಿತು;
ಒಂದೇ ಸೂರಿನ ನೆರಳಲಿ
ನಗುವು ಮೌನ ಸೇರಿತು.

ಮಾತು ಹಕ್ಕಿ ಹಾರಿತು,
ಮೌನ ಗೂಡು ಕಟ್ಟಿತು;
ಕೈಯ ಸ್ಪರ್ಶವಿದ್ದರೂ
ಮನಸು ದೂರ ಸರಿಯಿತು.

ನಂಬಿಕೆ ಮೊಗ್ಗು ಬಾಡಿತು,
ಸ್ವಾರ್ಥ ಗಾಳಿ ಬೀಸಿತು;
ಅರಳುವ ಮೊದಲೇ ಪ್ರೀತಿ
ಧೂಳಾಗಿ ಉದುರಿತು.

ಕಾದ ಕಣ್ಣ ಬೆಳಕಲಿ
ಹೊಸ್ತಿಲ ನೆರಳು ನಿಂತಿತು;
ಹೆಜ್ಜೆ ಸದ್ದು ಮೂಡದೆ
ಸಂಜೆ ಮೌನ ಹರಡಿತು

ಒಣ ಮಣ್ಣ ಮಡಿಲಲಿ
ಬೀಜ ಇನ್ನೂ ಮಲಗಿತು;
ಪ್ರೀತಿಯ ಮೊದಲ ಹನಿಯಲಿ
ಬಂಧ ಮತ್ತೆ ಚಿಗುರಿತು.

✍️ ಡಾ. ಹೆಚ್. ನಟರಾಜ್ ಆರ್ಯ

About The Author

2 thoughts on “ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ಮೌನ ಮಳೆ””

Leave a Reply

You cannot copy content of this page

Scroll to Top