ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಸಿರು ತೇರು ಹೊರಟಿದೆ,
ಭುವಿಯೆಲ್ಲ ಹಬ್ಬವಾಗಿದೆ;
ಮರದ ನೆರಳು ಹರಡಿದೆ,
ಮನದೊಳಗೆ ಮುದತಂದಿದೆ.

ಗಿಡವ ನೆಟ್ಟು ಬೆಳಸೋಣ,
ಗಿರಿಯ ಸೊಬಗು ಉಳಿಸೋಣ;
ನದಿಯ ನಗುವು ಕೇಳೋಣ,
ನಾಳೆಯ ಬದುಕು ಕಾಪಾಡೋಣ.

ಎಲೆಯ ನಾದವು ವೀಣೆಯದು,
ಹೂವಿನ ಪರಿಮಳ ಗೀತೆಯದು;
ಹಕ್ಕಿಯ ಕಲರವ ವೇದವದು,
ಪ್ರಕೃತಿಯ ಮಡಿಲೇ ಸ್ವರ್ಗವದು.

ಮಳೆ ಸುರಿಯಲು ಕಾಡಿರಬೇಕು,
ಕಾಡು ಬೆಳೆಯಲು ನಾವಿರಬೇಕು;
ಉಸಿರು ಉಳಿಯಲು ಮರವಿರಬೇಕು,
ಜಗವು ಉಳಿಯಲು ಹಸಿರಿರಬೇಕು.

ಬನ್ನಿ ಎಲ್ಲರು ಕೈಜೋಡಿಸಿ,
ಭೂಮಿತಾಯಿಯ ಪ್ರೀತಿಗೋಸ್ಕರ;
ಹಸಿರು ತೇರನು ಎಳೆಯೋಣ,
ಭವ್ಯ ಭವಿಷ್ಯವ ಕಟ್ಟೋಣ.

ಹಸಿರು ನಮ್ಮ ಉಸಿರಾಗಲಿ,
ಹಸಿರು ನಮ್ಮ ಹೆಸರಾಗಲಿ;
ಹಸಿರು ತೇರು ಸಾಗುತಿರಲಿ,
ಭುವಿಯೆಲ್ಲ ನಗುತಿರಲಿ.


About The Author

1 thought on “ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು””

Leave a Reply

You cannot copy content of this page

Scroll to Top