ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಣ್ಣು ಬಿಟ್ಟ ಕ್ಷಣಗಳೆಲ್ಲಾ
ಮಂಜಿನ ಹನಿಗಳೆಂದುಕೊಂಡಿದ್ದೆ;
ನಂಜಿನ ನೂಲುಗಳಾಗಿ ಗೋಚರಿಸುತ್ತಿವೆ..

***

ಅಸಮಾನೆತೆಯ ನೆತ್ತರು
ಕುಡಿದ ನೆಲ ಕುದಿಯುತ್ತಿದೆ;
ತೂಗುವ ತೊಟ್ಟಿಲು ಮಸಣವಾಗುತ್ತಿದೆ.

***

ವೈಷಮ್ಯ ಚಿಗುರೊಡೆದು
ನೆಲ ಕೆಂಪಾಗಿದೆ
ಈಗ ನಂಜೇರಿ ಕಪ್ಪಾಯಿತು

***

ನಮ್ಮೊಳಗೆ ಧರ್ಮದ ಅಮಲು ಏರಿದೆ
ಅಸಮಾನತೆಯ ಕಸದಿಂದ
ಒಡಲು ತುಕ್ಕು ಹಿಡಿದಿದೆ

***

ನಯವಂಚಕರ ದುನಿಯಾ
ಬದುಕ ಪಾತ್ರೆಯಲ್ಲಿ
ಜಗದ ಐಕ್ಯತೆ ತಳ ಹತ್ತಿದೆ.

***

ಎದೆಗೆ ಎದೆ ನೇಯ್ದ ಮಗ್ಗ ನಂಜಾಗಿದೆ;
ಇನ್ನೂ, ಜಾತಿ ಜಾತಿಯ
ದೋಂಬಿ ನಡೆಯದೇ ಇರುತ್ತದೆಯೇ

***

ಬಿದ್ದ ಬೀಜವೂ
ಮೊಳಕೆಯೊಡೆಯಲು
ನೆಲ ಉರಿವ ಕೆಂಡವಾಗಿದೆ

***

ಕಿಚ್ಚು ಹಚ್ಚಿಕೊಂಡ ಎದೆಗಣ್ಣಿಗೆ
ಬೆಂಕಿ ಮತ್ತು ದೀಪದ ವ್ಯತ್ಯಾಸ ಗೊತ್ತಾಗುವುದೇ


Recipients

About The Author

Leave a Reply

You cannot copy content of this page

Scroll to Top