ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಕನ್ನಡಿ ಮುಂದಿನ ನಗ್ನ ಚಿತ್ರಗಳು

ಪುಸ್ತಕ ಸಂಗಾತಿ ಕನ್ನಡಿ ಮುಂದಿನ ನಗ್ನ ಚಿತ್ರಗಳು ನಗ್ನ ಚಿತ್ರಗಳ ಬಿಂಬ ಸೆರೆಹಿಡಿದ ಕವಿ ನೋಟದ ಕನ್ನಡಿ……. ಸಮಾಜ ವಿಷಮ ಘಟ್ಟದಲ್ಲಿದ್ದಾಗ ಅನೈತಿಕತೆ,ದುರಾಡಳಿತ, ಸ್ವೇಚ್ಛಾಚಾರ,ದಬ್ಬಾಳಿಕೆಯನ್ನು ಖಂಡಿಸಿ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿಯುವಲ್ಲಿ ಯುವಜನರಲ್ಲಿ ಮತ್ತೆ ಅವುಗಳನ್ನು ಮೂಡಿಸುವಲ್ಲಿ ಚಿಂತಕರ, ತತ್ವಜ್ಞಾನಿಗಳ, ಸಾಹಿತಿಗಳ ಪ್ರಯತ್ನ ನಿರಂತರ, ಇಂತಹದೇ ಪ್ರಯತ್ನವಾಗಿ ಇಲ್ಲಿನ ಗಜಲ್ ಗಳನ್ನು ವಿಶ್ಲೇಷಿಸಬಹುದು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದಂಡಳ್ಳಿಯ ಯುವಕ ಶ್ರೀ ಪ್ರಶಾಂತ ಅಂಗಡಿ, ಶ್ವೇತಪ್ರಿಯ ಎಂಬ ಕಾವ್ಯನಾಮದಿಂದ ತಮ್ಮ ಗಜಲ್ ಬರೆಹ ಯಾನದಲ್ಲಿರುವರು. ಇವರ ಈ ಕೃತಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಧನ ಸಹಾಯ ಪಡೆದಿದೆ. ಇಲ್ಲಿನ ಗಜಲ್ ಗಳು ಸಾಮಾಜಿಕ ಅಸಮಾನತೆ, ರಾಜಕೀಯ ವಿಡಂಬನೆ, ಕೃಷಿ ಬದುಕಿನ ಒಳನೋಟ, ಹೆತ್ತವರ ಬಗೆಗಿನ ಆಳವಾದ ಪ್ರೇಮ, ಮತ್ತು ಒಲವಿನ ರಂಗೋಲಿಯ ಗೆರೆಗಳನ್ನು ಒಳಗೊಂಡ ಸುಂದರ ಅರವತ್ತು ಗಜಲ್ ಗಳ ಗುಚ್ಚವಾಗಿ ನಮ್ಮ ಕೈಸೇರಿದೆ. “ಹತ್ತುಸಲ ಮರಣಯಾತನೆಯನ್ನು ಅನುಭವಿಸಬೇಕಾಗಿ ಬಂದರು ನನ್ನ ನಡತೆಯನ್ನೇನು ಬದಲಾಯಿಸಲಾಯಿಸುವದಿಲ್ಲ ಎಂಬುದನ್ನು ಮಾತ್ರ ತಿಳಿಯಿರಿ” ಎನ್ನುತ್ತಾನೆ ಗ್ರೀಸ್ ನ ತತ್ವಜ್ಞಾನಿ ಸಾಕ್ರೆಟಿಸ್.ಜೈಲಿನ ಸೇವಕ ಕೊಟ್ಟ “ಹೇಮ್ಲಾಕ್” ವಿಷ ಸೇವನೆಗೂ ಮುನ್ನ ಅವನ ತಪ್ಪೊಪ್ಪಿಗೆ ಹೇಳಿಕೆಗೆ ಆಗ್ರಹಿಸುವ ಜೈಲಿನ ಅಧಿಕಾರಿಗೆ ಹೇಳಿದ ಕೊನೆಯ ಮಾತಿದು. ಇಂತಹ ದಾಷ್ಟ್ಯತನ ಸಮಾಜ ಸುಧಾರಕ, ಲೋಕ ಚಿಂತಕ, ಲೋಕದ ಹಿತೈಷಿಗಳಿಗಲ್ಲದೆ ಭ್ರಷ್ಟ ಮನಸ್ಥಿತಿಯಲ್ಲಿ ಲೋಕ ದೇಳ್ಗೆ ಯ ವಿಚಾರಗಳು ಮೂಡಲಾರವು ಇಲ್ಲಿ ಇಂತಹದ್ದೇ ಪದಾಕ್ರೋಶ. ಇಲ್ಲಿನ ಬಹುತೇಕ ಗಜಲ್ ಗಳು ಭಾವಗೀತಾತ್ಮಕವಾದ ಮಧುರ ಬಂಧದಲ್ಲಿ ಕಟ್ಟಿ ಕೊಟ್ಟಿದ್ದರೂ ಅಭಿವ್ಯಕ್ತಿಯ ಸಿಡಿಲಾಗಿ ಕೋರೈಸುವ ಶೇರ್ ಗಳೇ ಹೆಚ್ಚಾಗಿವೆ. ತನ್ನ ಸುತ್ತ ಮುತ್ತಲಿನಲ್ಲಿ ನೋಡಿದ,ಅನುಭವಿಸಿದ ಕಷ್ಟ,ದಾರಿದ್ರ್ಯ,ತಾರತಮ್ಯ,ಬಡವರ ಬವಣೆ, ಆಡಳಿತಗಾರರ ಭ್ರಷ್ಟತೆ, ಜಾತಿ ಓಲೈಕೆ, ಒಡೆದಾಳುವ ಸಂಚು ಎಲ್ಲವನ್ನೂ ಕವಿ ಬಹು ನಿರ್ಭಿಡೆಯಿಂದ ತನ್ನ ಗಜಲ್ ಗಳಲ್ಲಿ ಉಲ್ಲೇಖಿಸಿ ಜಾಡಿಸಿದ್ದಾನೆ, ಖಟು ಪದಗಳಲ್ಲಿ ರೂಪಕಗಳಲ್ಲಿ ವಿಡಂಬಿಸಿ ಲೇವಡಿಯಾಡಿದ್ದಾನೆ.ಇಂತಹ ಒಂದಷ್ಟು ಶೇರ್ ಗಳನು ಉದಾಹರಣೆಗೆ ನೀಡುವುದಾದರೆ…. ಗಜಲ್  01 “ಬೆದರುಗೊಂಬೆಗೆ ನೆದರು ಬಿದ್ದಿದೆ ನೆರಳು ಗದರಿ ನಿಲ್ಲುವಂತೆ ಹೆಜ್ಜೆ ಹೆಜ್ಜೆಗೂ ಜಾತಿಯ ಗಡಿ ರೇಖೆಗಳಿವೆ ಏನು ಮಾಡಲಿ“ ಹೊಲದಲ್ಲಿ ಹಕ್ಕಿ ಪಕ್ಷಿಗಳನ್ನು ಮೋಸಗೊಳಿಸಲು ತನ್ನ ಬೇಳೆ ಕಾಯ್ದುಕೊಳ್ಳಲು ರೈತಾಪಿ ಜನ ಮನುಷ್ಯನೊಬ್ಬ ಅಲ್ಲಿ ಸದಾ ಕಾವಲಿರುವಂತೆ ಕಾಣುವ ಬೆದರು ಬೊಂಬೆಯನ್ನು ಹೊಲದಲ್ಲಿ ನೆಡಾಕಿರುತ್ತಾರೆ ಅದರ ನೆರಳು ಕೂಡ ನಡುಗುವಂತೆ,ಅಂದರೆ ಜೀವವಿಲ್ಲದ ಬೊಂಬೆ ಮತ್ತದರ ನೆರಳು ಎಂಥ ರೂಪಕವಿದು ಈ ನೆರಳು ಹೆದರುವಂತೆ ಹೆಜ್ಜೆ ಹೆಜ್ಜೆಗೂ ಎಲ್ಲರಲ್ಲಿಯೂ, ಎಲ್ಲೆಂದರಲ್ಲಿ ಜಾತಿಯ ಗಡಿರೇಖೆಗಳನ್ನು ಎಳೆದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂದಿನ ವಿದ್ಯಮಾನದ ಕುರಿತು  ಅಸಮಾಧಾನವಿದೆ. ಗಜಲ್  4 “ಹುಟ್ಟು ಸಾವಿನ ಮಧ್ಯ ಮನುಷ್ಯತ್ವ ಹುಟ್ಟಲಿ ಅದುವೇ ಜೀವನ ಸತ್ತ ಹೃದಯ ಮೌನತಾಳಿ ಸೋಲುವದೇನು ಹೊಸತಲ್ಲ ಬಿಡು“ ಅಪಘಾತದಲ್ಲಿಯೋ, ದುರಂತದಲ್ಲಿಯೋ, ಜೀವಗಳು ನರಳುತ್ತಿದ್ದರೆ ಅವರನ್ನು ರಕ್ಷಿಸದೆ,ಉಪಚರಿಸದೆ ಅದನ್ನು ಚಿತ್ರಿಸಿ ಜಾಲತಾಣಗಳಿಗೆ ರವಾನಿಸುವ ಇಂದಿನ ಆಧುನಿಕರ ಸಂವೇದನಾಹೀನ ಮನ ಕಂಡು ಹುಟ್ಟು ಸಾವಿನ ನಡುವಲ್ಲಿ ಒಮ್ಮೆಯಾದರೂ ಅವರಲ್ಲಿ ಮನುಷ್ಯತ್ವ ಜಾಗೃತವಾಗಲಿ ಹೃದಯ ಒಳ್ಳೆಯದನ್ನು ಆಚರಿಸಲು ಮಿಡಿಯಲಿ ಅದುವೇ ಜೀವನ,ಆಗಲೇ ಬದುಕು ಗೆಲ್ಲುವುದು ಇಲ್ಲದಿದ್ದರೆ ಮಾನವನ ಬದುಕು ಸೋಲುವುದು ನಿಶ್ಚಿತ ಅದಾಗದಿದ್ದರೆ ಅದು ಸತ್ತ ಹೃದಯ ಅದು ಮೌನತಾಳುವುದು ಸಹಜ ಎನ್ನುವ ಅಂಬೋಣ. ಗಜಲ್  8 “ಉಸಿರಿಗೆ ಬೆಲೆ ಕಟ್ಟಿ ಹರಾಜು ಕೂಗಿದ್ದಾರೆ ಅವನ ಗಜಲಿಗೆ ಬೆಲೆ ಇನ್ನೂ ನಿಗದಿಯಾಗಿಲ್ಲ“ “ರವಿ ಕಾಣದ್ದನ್ನು ಕವಿ ಕಾಣ್ವ”  ಎನ್ನುವ ಮಾತಿದೆ ಇಂಥಹ ಕವಿಗೆ ಬೆಲೆ ಕಟ್ಟಿ ಅವನ ಬದುಕನ್ನು ಹಣ ಅಂತಸ್ತಿನಿಂದ ಅಳೆದು ಹರಾಜು ಕೂಗಿದ್ದಾರೆ ಆದರೆ ಅವನ ಗಜಲಿಗೆ ಇನ್ನೂ ಬೆಲೆ ನಿಗದಿಯಾಗಿಲ್ಲ, ಲೋಕ ಚಿಂತಕರ ವಿಚಾರಗಳನ್ನೂ, ಕಾಣಿಸಿದ ದಾರಿಯನು ಅನುಸರಿಸಬಹುದು, ಅಳವಡಿಸಿಕೊಳ್ಳಬಹುದೇ ಹೊರತು ಅಳಿಸಲು ನೋಡುವುದು ಬೆಲೆ ನಿಗದಿಮಾಡುವುದು ಮೂರ್ಖತನ . ಗಜಲ್  9 “ಚರ್ಚು ಮಸೀದಿ ಗುಡಿಗಳಲ್ಲಿ ಬೆತ್ತಲಾಗಿ ಮಲಗಿದ್ದಾನೆ ಹೆಸರಿಡಬೇಡ ಅವನು ಗಜಲಿನ ನಶೆಗೆ ಮಧುಶಾಲೆಗೆ ಹೋದವನು ಹೇಗೆ ತಡೆಯಲಿ“ ಧರ್ಮಗಳ ಕಾರ್ಯಸ್ತಾನ ಅದರ ಪವಿತ್ರ ತಾಣಗಳು, ಅಲ್ಲಿಯೇ ಕವಿ ಇಂತಹ ಧರ್ಮದಿಂದ ಬಂದಿದ್ದಾನೆ ಎಂದು ತೋರುವ ಧರ್ಮದ ಬಟ್ಟೆ , ಲಾಂಛನ ಮೇಲು ವಸ್ತ್ರದ ಹಂಗು ತೊರೆದು ಬೆತ್ತಲಾಗಿದ್ದಾನೆ ಅಲ್ಲದೆ ಅವನು ಗಜಲ್ ನ ನಶೆಗಾಗಿ ಮಧುಶಾಲೆಗೆ ಹೋಗಿದ್ದಾನೆ ಅವನನ್ನು ನಾನು ತಡೆಯಲಾರೆ ಆಕ್ಷೇಪಿಸಲಾರೆ ಇದು ನಡೆಯ ಬೇಕಾದ ನಡೆ ಎನ್ನುತ್ತದೆ. ಮಧುಶಾಲೆ ಚಿಂತನಾ ಕೂಟವಾಗಿ ಗಜಲ್ ಅಲ್ಲಿಂದ ಹೊಮ್ಮಿದ ಪಾಕ ಪರಿಮಳ,ಈ ಶೇರ್ ಮನುಜ ಮತ ಸಾಗಬೇಕಾದ ಹಾದಿಯ ದಿಕ್ಸೂಚಿಯಾಗಿದೆ.  ಗಜಲ್  15 “ವ್ಯವಸಾಯಿಕ ಅಪ್ಪನ ಜೀವನವನ್ನು ವ್ಯವಸಾಯದ ಪರಿಕರ ಮತ್ತು ಪರಿಸ್ಥಿತಿಯ ಸಾದೃಶ್ಯಗಳೊಂದಿಗೆ ಹೋಲಿಸಿ ಬರೆದ ಮನಮಿಡಿಯುವ ಗಜಲ್ ಆಗಿದೆ“ ಗಜಲ್  17 “ಕಲ್ಹೊಡೆದ ಕೈಗಳ ಬೊಬ್ಬೆಯ ಅಳಲಿಗೆ ಕಿವಿಗೊಡಬೇಕಿತ್ತು ಚೂರು ಸೂರಿಗೆ ಬೆಟ್ಟ ಗುಡ್ಡಗಳೇ ನೀರಾಗಿದೆ ಸಾಕಿ“ ಕಲ್ಲು ಹೊಡೆಯುವ ಕಲ್ಲು ಕುಟಿಕರ ಕೈಯಲ್ಲಿ ಎದ್ದ ಬೊಬ್ಬೆಯ ಅಳಲಿಗೆ ಕಿವಿಗೊಡಬೇಕಿತ್ತು ಅವರ ಸಣ್ಣ ಸೂರಿನ  ಅಗತ್ಯತೆಗಳಿಗಾಗಿ ಬೆಟ್ಟ ಗುಡ್ಡಗಳು ಕೂಡ ಮಿದಿಡಿವೆ ಎನ್ನುವ ವಾಚ್ಛಾರ್ಥ ಕಂಡರೂ ಕಲ್ಲು ಎಸೆಯುವ ಸಮಾಜ ಘಾತುಕರಿಗಳಿಗು ಕಿವಿಗೊಡೋಣ ಅವರ ಸಣ್ಣ ಅತೃಪ್ತಿಗಾಗಿ ದೊಡ್ಡ ಬೆಟ್ಟವನ್ನೆ ಕರಗಿಸುತ್ತಾರೆ ಎನ್ನುವ ಎಚ್ಚರಿಕೆಯ ಮಾತು ಇಲ್ಲಿ ಅರ್ಥೈಸಬಹುದು. ಗಜಲ್  21 “ಸರ್ವಜ್ಞ” ನ ಬಗ್ಗೆ ಗಜಲ್ ಗೋ ರಿಗೆ ಇರುವ ಅಭಿಮಾನ ಗಜಲ್ ಆಗಿ ಕಳೆಗಟ್ಟಿದೆ. ಗಜಲ್ 33 ಕರೋನಾದ ಭೀಕರತೆ,ಕಾರಣ ವಿವರಿಸುವ ಗಜಲ್ ಆಗಿದೆ. ಗಜಲ್ 29 “ಸತ್ಯದ ಮುಖ ಹುಡುಕದಿರು ನಿನ್ನುಸಿರ ಕಪ್ಪ ಕೇಳುತ್ತಾರೆ ಅವುಡುಗಚ್ಚಿದ ನಾಲಿಗೆಗಿಂದು ಕದನದ ಆಪತ್ತು ಒದಗಿದೆ“ ಸತ್ಯವನ್ನು ಆಚರಿಸುವುದು ಅದನ್ನು ಹುಡುಕಾಡುವಂತ ಸ್ಥಿತಿ ಈಗ ನಿರ್ಮಾಣವಾಗಿದೆ, ಒಂದುವೇಳೆ ಹುಡುಕಲು ಹೋದರು ಅದಕ್ಕಾಗಿ ಪ್ರಾಣವನ್ನೇ ತೆರಿಗೆಯಾಗಿ ಕಟ್ಟಬೇಕಾದ ಪರಿಸ್ಥಿತಿ ಒದಗಿದೆ ಅಲ್ಲದೆ ಇದೆಲ್ಲವನ್ನೂ ಬಾಯಿ ಮುಚ್ಚಿ ಸಹಿಸಿದರೂ ಎಂದಾದರೂ ಒಮ್ಮೆ ಇದು ತಮಗೆ ತಿರುಗುಬಾಣವಾಗುವ ಭಯದಿಂದ ಸಾಮಾನ್ಯರ ನಾಲಿಗೆಗೂ ಸಂಚಕಾರ ತರುವರು ಎನ್ನುವ ದ್ರೋಹಿಗಳ ಹುನ್ನಾರದ ವಾಸ್ತವ. ಗಜಲ್ 30 “ಅದೆಷ್ಟೋ ಬಾರಿ ಹಸಿದ ಹೊಟ್ಟೆಗೆ ಬಹಿಷ್ಕಾರ ಹಾಕಿದ್ದಳು ನನ್ನವ್ವ ಪಾದದ ಧೂಳಿಗೆ ಗಡಿಪಾರು ಹಾಕಲು ನನ್ನಪ್ಪನ ದುಬ್ಬ ಸೋತಿತ್ತು“ ಈ ಶೇರ್ ಅಪ್ಪ ಅವ್ವ ಸವೆಸುವ ಬದುಕಿನ ಹಾದಿಯ ಧಾರುಣತೆಯನ್ನು ತೋರುಗಾಣಿಸಿದಂತೆ ಕಂಡರೂ ಸ್ವತಂತ್ರ ಭಾರತದ ಬಹುಪಾಲು ಜನ ಅನ್ನವಿಲ್ಲದೆ ,ಸೂರಿಲ್ಲದೆ ಆಸರೆಯ ಬಲವಿಲ್ಲದೆ ಬದುಕುತ್ತಿರುವ ಬದುಕಿಗೆ ಸಾಕ್ಷಿಯಾಗಿ ಶೇರ್ ದಾಖಲಾಗಿದೆ. ಗಜಲ್  35 “ಎಲುಬಿಲ್ಲದ ನಾಲಿಗೆ ದೇಶವಿರೋಧಿ ಜೈಕಾರ ಹಾಕಿದೆ ಸುಟ್ಟುಬಿಡು “ಶ್ವೇತಪ್ರಿಯ“ ಸಾವು ಬಯಸಿದರೆ ಮಸಣದ ಮೆಟ್ಟಿಲು ತಿರಸ್ಕರಿಸಿ ಹಾರೈಸುವಂತೆ ಇರಬೇಕು“ ಈ ಶೇರ್ ಕವಿಯ ದೇಶಪ್ರೇಮವನ್ನು  ಸಾರುತ್ತಿದೆ ದೇಶವಿರೋಧಿ ಜೈಕಾರ  ಹಾಕುವ ಎಲುಬಿಲ್ಲದ ನಾಲಿಗೆಯನ್ನು ಸುಟ್ಟುಬಿಡು ಅಲ್ಲದೆ ಮಸಣದ ಮೆಟ್ಟಿಲು ಕೂಡ ನಿನ್ನ ಸಾವನ್ನು ತಿರಸ್ಕರಿಸುವಂತೆ ಅಲ್ಲಿಯೇ ಬದುಕಿಬಿಡು ಎಂದು ಹೇಳುವ ಉತ್ಕಟ ದೇಶಪ್ರೇಮವಿದು ಅಪ್ಪಟ ದೇಶ ಭಕ್ತನ ಮನದಾಳದ ಹೆಬ್ಬಯಕೆಯಿದೆ ಇಲ್ಲಿ. ಗಜಲ್ 56 “ಆರಿಂಚಿನ ಎದೆ ಬಂಜರೆಂದು ತಿಳಿಯದೆ ಬೀಜ ಬಿತ್ತಿದ್ದಾನೆ ಶ್ವೇತಪ್ರಿಯ ತೆರಿಗೆಯ ಮಳೆ ಸುರಿದರೂ ಬರಗಾಲದ ವೈರಸ್ ಒಕ್ಕರಿಸಿ ಬಿಕ್ಕಳಿಸಿದೆ“ ಬಂಜರಿನಲ್ಲಿಯು ಕೂಡ ಬಿತ್ತನೆ ಮಾಡಿ,ತೆರಿಗೆಯ ಮಳೆ ಸುರಿದರೂ, ಬರಗಾಲದ ವೈರಸ್ ಆ ಬೆಳೆಯನ್ನು ನಾಶಪಡಿಸುತ್ತಿದೆ ಫಸಲಿಗಾಗಿ ಕಾಯುತ್ತ ಕೂತಿರುವ ರೈತನ ಪರಿಸ್ಥಿತಿಯ ಅರ್ಥದೊಂದಿಗೆ  ಎದೆ ಬಂಜರು ಬಿತ್ತಬಾರದಾಗಿತ್ತು ತಾನು ನಂಬಬಾರದ್ದಲ್ಲಿ ನಂಬಿದ್ದನ್ನು ಅದು ಆಗಬಾರದ ಕೇಡಾಗಿ ಘಟಿಸಿದ್ದರ ವಿಷಾದ ಧ್ವನಿಸುತ್ತದೆ. ಆರಿಂಚಿನ ಇದೆ ಇನ್ನೊಂದು ವಾಸ್ತವಿಕವಾದ ಸಧ್ಯದ ಮತ್ತೊಂದು ಹೊಳವನ್ನು ನೀಡುತ್ತಿದೆ. ಪ್ರೇಮ, ವಿರಸ ,ದಾಂಪತ್ಯ ಸವಿಯ ಅನೇಕ ಗಜಲ್ ಗಳು ಇದ್ದರೂ ಸಮಕಾಲೀನ ವಿಷಯಗಳಲ್ಲಿನ ಸಂದಿಗ್ಧತೆ ಸೂಚಿಸುವ ಗಜಲ್ ಗಳ ಸದ್ದೆ ಇಲ್ಲಿ ಹೆಚ್ಚು ಕೇಳಿಬರುತ್ತದೆ. ಇಲ್ಲಿನ ಗಜಲ್ ಗಳು ಹತ್ತು ಹಲವಾರು ವಿಷಯಗಳನ್ನು ಧ್ವನಿಸಿದರು ಅದನ್ನೇ ಇನ್ನೂ ನಯವಾಗಿ,ಸೂಚ್ಯವಾಗಿ ತಿಳಿಸುವ ಉಮೇದು ಇದ್ದಂತಿಲ್ಲ ಹೊಸೆದ ಸಾಲು ಆಕಾಶಕ್ಕೆ ಗುರಿಯಾಗಿರಬೇಕು ಅದು ಸೂರ್ಯನಿಗೋ, ಚಂದ್ರನಿಗೊ,ನಕ್ಷತ್ರಗಳಿಗೋ ಇತ್ಯಾದಿ ಕಲ್ಪನೆ ಹೊಸ ಹೊಳವು ನೋಡುಗ, ಓದುಗರಲ್ಲಿ ಮೂಡಿಸಿದಾಗಲೇ ಕವಿತೆಗೆ ಸಮಾಧಾನ ಮುಂದೆ ಈ  ಪ್ರಯತ್ನವಿರಲಿ. ಒತ್ತಕ್ಷರವಿರುವ ಪದಗಳನ್ನು ಕಡಿಮೆ ಗೊಳಿಸಿ ಇನ್ನೂ ಸರಳ ವಿರಳ ಪದಗಳ ಬಳಕೆಯಿಂದ ಗಜಲ್ ಇನ್ನೂ ಲಾಲಿತ್ಯಪೂರ್ಣ ವಾಗಿಸಬಹುದಿತ್ತು ಎನ್ನುವ ಅಂಬೋಣ ಮುಂದಿನ ಗಜಲ್ ಗಳಲ್ಲಿ ಕವಿ ಇದನ್ನು ಗಮನಿಸಲಿ. ಸಧ್ಯದ ಕಾಲದ ತಲ್ಲಣಗಳಿಗೆ ಧ್ವನಿಯಾಗಿ ಮೂಡಿಬಂದ ಈ ಗಜಲ್ ಆಲದ ಮರದ ಕೆಳಗೆ ಕುಳಿತು ನೀವು ಒಮ್ಮೆ ಇಲ್ಲಿನ ವಿಚಾರಗಳಿಗೆ ಕಿವಿಯಾಗಿ. ಪುಸ್ತಕ ಬೇಕಾದವರು ಸಂಪರ್ಕಿಸಿ ಶ್ರೀ.ಪ್ರಕಾಶ ಅಂಗಡಿ ಫೋನ್ ಸಂಖ್ಯೆ: 81474 03964 ಜ್ಯೋತಿ ಬಿ ದೇವಣಗಾವ

ಕನ್ನಡಿ ಮುಂದಿನ ನಗ್ನ ಚಿತ್ರಗಳು Read Post »

ಕಾವ್ಯಯಾನ

ಕಾವ್ಯ ಸಂಗಾತಿ ಭಾವನೆ…. ನಮಗೂ ಇದೆ.. ಸುಮಾ, ಪಡುಬೆಳ್ಳೆ ಹರಿದ ಬಟ್ಟೆ ಬಡಕಲು ದೇಹ ತೋರಿತು,ಮಣ್ಣಿನ ಕಾಯ; ಹಸಿ ನೆತ್ತರ ಗಾಯಅಸ್ಪ್ರಶ್ಯತೆ ತಂದಿತುಇದ ನೋಡಿಯು ನೋಡದ ಹೆತ್ತವರಮಾತು ಮೂಕವಿಸ್ಮಿತವಾಯಿತುಸುತ್ತಲೂ ಮೌನ, ವ್ಯರ್ಥ ಮಾತಿನ್ನೇಕೆ? ಸಹಾಯ ಮಾಡಬಯಸುವ ಕೆಲವೊಂದು ಜೀವ,ಅದ ಹಿಂಜರಿಸಿತು ಅವರ ನಾಚಿಕೆಯ ಸ್ವಭಾವಶ್ರೀಮಂತಿಕೆ ಇದ್ದರೇನು ಬಂತು,ನಮ್ಮನ್ನು ಕಾಣುವ, ತಲೆಗೆಟ್ಟ ವರ್ತನೆ ಅವರದ್ದಂತೂ ಎಲ್ಲೋ ಪುಸ್ತಕದ ಭಂಡಾರ ಹೊರುವರುನಮ್ಮದೆಂತ ಪರಿಸ್ಥಿತಿ, ಪರಿಸ್ಥಿತಿ….?ಹೆತ್ತವರ ಅನಕ್ಷರತೆ ಮುಳ್ಳಾಯಿತೆ ನಮಗೆ?ನಮ್ಮೆಲ್ಲಾ ಕನಸುಗಳು ಸುಳ್ಳಾಯಿತೆ ಕೊನೆಗೆ? ಯಾರದ್ದೋ ಹರಕಲು ಬಟ್ಟೆ, ನಮ್ಮ ಹೊಸಬಟ್ಟೆಅಂದೇ ಯುಗಾದಿ, ದೀಪಾವಳಿ!ಖುಷಿಯಲ್ಲೇ ತುಂಬಿತೀಪುಟ್ಟಹೊಟ್ಟೆಅಂತಸ್ತಿನ ಮನೆಯ ತಂಗಳೂಟಅದೇ ಮೃಷ್ಟಾನ್ನವೆಂದು ನಮ್ಮ ಓಟಇದ ಕಂಡು ಸುರಿಯುತಿದೆ ಕಂಬನಿ ನಿರ್ಜೀವಿಗಳಿಂದ ಯಾರಂದರು ಮನುಷ್ಯರು ನಾವಲ್ಲವೆಂದು?ಎಲ್ಲರಂತೆ ನಮಗೂ ಭಾವನೆಗಳಿವೆಈ ಯಾತನೆ ಎಲ್ಲಿ ಮುಟ್ಟುವುದೋ; ಮುಟ್ಟದಿರುವುದೋ?ಎಂತಹ ಆಲೋಚನೆ ನಿನ್ನಲ್ಲಿ ಮೂಡಿತೋ ದೇವರೆಇಂತಹ ಜೀವನ ಸೃಷ್ಟಿಸಲು, ನಮ್ಮಂತಹ ಮಕ್ಕಳಿಗೆ . (ವಲಸೆ ಕಾರ್ಮಿಕರ ಮಕ್ಕಳ ಬಗೆಗೆ)

Read Post »

ಕಾವ್ಯಯಾನ

ಸ್ನೇಹ

ಕಾವ್ಯ ಸಂಗಾತಿ ಸ್ನೇಹ ಆಸೀಫಾ ದೂರಾದರೂ ದೇಹ ಶಾಶ್ವತವಿರಲಿ ಸ್ನೇಹಮರೆತರೂ ಕೂಡ ಮರೆಯದಿರಲಿ ಭಾವಕೆಲಕಾಲದ ಒಡನಾಟ ಅಂಟಿತ್ತು ಮನಸಬಿಟ್ಟು ಹೋದರೂ ಬಿಡದು ನಿನ್ನ ನೆನಪ ಜೊತೆ ಜೊತೆಯಲಿ ಓಡಾಡಿದ ದಾರಿನೆನಪಾಗುವುದು ಒಂದಲ್ಲ ನೂರು ಬಾರಿನಗುವುದ ಮರೆತೈತೆ ನನ್ನ ಊರು ಕೇರಿಮುಖವಿತ್ತ ಮಾಡಿ ಹೋಗು ಒಂದು ಸಾರಿ ಹೃದಯದ ತುಂಬ ಅರಳಿದ್ದ ಸುಮಗಳುಬಾಡೈತಿ ನೋಡು ನೀ ನಿಲ್ಲದೆ ಗೆಳತಿಬೀಗಿದ ಕ್ಷಣಗಳು ಕೂಗಿ ಕೂಗಿ ಕರೆದರೂಅರಸಿದ ಅರಸಿ ಬಂದಾಳೇ ಒಡತಿ ಓಡುತೈತೆ ಚಕ್ರ ನಿಲ್ಲುವುದೆಂತು ಕಾಲನೆನ್ನೆ ಮೊನ್ನೆಗಳ ಬದಲಾಗದು ಜಾಲಸಾಗಬೇಕು ಸಾಗಲೇಬೇಕು ಮುಂದಇದುವೇ ಜೀವನದ ಅಂದ ಚೆಂದ

ಸ್ನೇಹ Read Post »

ಕಾವ್ಯಯಾನ

ಕಾವ್ಯ ಸಂಗಾತಿ ಮಿಲನ ಹೃದಯ ಹೃದಯಗಳಮಿಲನಕ್ಕೆ ಸ್ನೇಹವೇಸೇತುವೆ ಬೇರೆ ಮಾತಿನಜೋಡಣೆ ಇಲ್ಲ ಸ್ವಾರ್ಥ ನಿಸ್ವಾರ್ಥ ಬೇಕುಮುನಿಸು ರಮಿಸುವಮಿಲನದ ಅಮೃತರಸಾನುಭಾವ ಅರಿತ ಮನಕ್ಕೆ ಶಂಕೆ ಬೇಡಹತ್ತಿರ ದೂರದ ಅಂತರ ಏಕೆದೇಹಕ್ಕೆ ದೂರವಾಗಿರುವುದೇನಗು ಅಳುವಿನ ನೆರಳು ನಿನ್ನದೇ ಬಾಳಿನ ಪಯಣದಲ್ಲಿ ಜೊತೆಯಾದ ಸಂಗಾತಿ ನೀಅಗಲಿ ಹುಡುಕುವ ಅಳುಕು ಏಕೆಪ್ರೀತಿಯ ಬೆಳಕಿಗೆ ಕೊನೆಯಿಲ್ಲ! **** ಹಸಿವು ಹಸಿವಿನ ನರಳಾಟದಲ್ಲಿತುಳಿತಕ್ಕೆ ಒಳಗಾಗುವೆವು ನಾವುಸಂಕಟದಲ್ಲಿ ಒದರಾಡಿದರೆಮೂರಡಿಯಲ್ಲಿ ಹೂಳುವರು ಹಸಿವಿನ ಚೀಲ ಬೆನ್ನು ತಟ್ಟಿದೆಶಾಂತಿ ನೆಮ್ಮದಿಯ ವೇದಾಂತಕಿವಿಯಲ್ಲಿ ಗುಣುಗುಟ್ಟಿದೆಮೋಸ ವಂಚನೆ ಕೊರಳ ಉರುಳಾಗಿದೆ ಮಾಯೆ ಎಂಬುವರು ಬಾಳುಆಸೆ ದುಃಖಕ್ಕೆ ಮೂಲ ಎನ್ನುವರುಕಡಿವಾಣ ಇಲ್ಲದೆ ಹಸಿವುಮೆರೆಯುತ್ತಿದೆ ಏಕೆ ಎಲುಬಿಲ್ಲದ ನಾಲಿಗೆಬಯಸುತ್ತಿದೆ ರುಚಿಹಸಿವು ತಣಿಯುವ ಮಂತ್ರವೇದಾಂತ ಇದೆಯೇ ಮನವೇ…. ಮಾಜಾನ್ ಮಸ್ಕಿ

Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ ಒರಟು ಕಲ್ಲುಗಳ ಮೇಲೆ ಹರಿದು ಓಲಾಡುತ್ತ ನಿಮಿಷಕ್ಕೊಮ್ಮೆ ಎಗರಿ ಬೀಳುತ್ತ ಬರುತ್ತಿದ್ದಾಗಲೇ ಅವನ ಹೊಟ್ಟೆಯೊಳಗೆ ಅವಲಕ್ಕಿ ಕುಟ್ಟಿದಂಥ ಹಿಂಸೆಯಾಗುತ್ತಿತ್ತು. ಈಗ ಅದಕ್ಕೆ ಮೆತ್ತಿಕೊಂಡಿದ್ದ ಧೂಳನ್ನೂ ಕಂಡವನು, ‘ಥೂ! ಥೂ! ಎಂಥ ಸಾವು ಮಾರಾಯ ಇದು. ಹೊಸ ಕಾರಿಡೀ ಧೂಳುಮಯವಾಗಿಬಿಟ್ಟಿದೆ ನೋಡು…!’ ಎಂದು ತಂಗವೇಲುವೇ ಅದಕ್ಕೆ ಕಾರಣ ಎಂಬಂತೆ ಸಿಡುಕಿದ. ಅದಕ್ಕವನು ‘ಹ್ಹಿಹ್ಹಿಹ್ಹಿಹ್ಹಿ…! ಊರಿಗೆ ಹೋಗಿ ಗ್ಯಾರೇಜಿಗೆ ಬಿಟ್ಟರಾಯ್ತು ಸಂಗರಣ್ಣಾ…!’ ಎಂದು ಹಲ್ಲು ಗಿಂಜಿ ಮುಂದೆ ನಡೆದ. ಆಗ ಶಂಕರನಿಗೆ ಮತ್ತಷ್ಟು ಉರಿಯಿತು. ಆದರೂ ವಿಧಿಯಿಲ್ಲದೆ ಅವನನ್ನು ಹಿಂಬಾಲಿಸಿದ.    ಇಬ್ಬರೂ ಸುರೇಂದ್ರಯ್ಯನ ಮನೆಯಂಗಳಕ್ಕೆ ಬಂದು ನಿಂತರು. ‘ಸಾವುಗಾರ್ರೇ… ಸಾವುಗಾರ್ರೇ…!’ ಎಂದು ತಂಗವೇಲು ಧ್ವನಿಯೆತ್ತಿ ಕೂಗಿದ. ಶಂಕರ ಆ ಮನೆಯನ್ನೂ ಸುತ್ತಲಿನ ವಠಾರವನ್ನೂ ಗಮನಿಸತೊಡಗಿದ. ಒಂದುಕಾಲದಲ್ಲಿ ನೂರಾರು ಮಂದಿ ಅವಿಭಕ್ತವಾಗಿ ಬಾಳಿ ಬದುಕಿದ ಮನೆಯದು ಎಂಬುದು ಅದನ್ನು ಕಟ್ಟಿದ ಶ್ರೀಮಂತ ಕಲಾತ್ಮಕತೆಯಿಂದಲೇ ತಿಳಿಯುತ್ತಿತ್ತು. ಆದರೆ ಈಗ ಆ ಮನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಬದುಕಿದ್ದು, ಅದರ ಹೆಚ್ಚಿನ ಭಾಗಗಳು ಶಿಥಿಲಗೊಂಡು ಒಂದೆರಡು ಭಾಗದ ಗೋಡೆಗಳು ಕುಸಿದುಬಿದ್ದಿದ್ದವು. ಸುತ್ತಲಿನ ತೆಂಗು, ಅಡಿಕೆ ತೋಟ ಮತ್ತು ಹೊಲಗದ್ದೆಗಳು ದುಡಿಯುವವರಿಲ್ಲದೆ ಹಡಿಲು ಬಿದ್ದು ದಶಕಗಳೇ ಕಳೆದಂತಿದ್ದವು. ನೆಟ್ಟಗೆ ನಿಲ್ಲಲಾಗದ ಮುದಿ ನಾಯಿಗಳೆರಡು ತಮ್ಮ ದುರ್ಬಲ ದೊಂಡೆಗಳಿಂದ ಊಳಿಡುವಂತೆ ಕರ್ಕಶವಾಗಿ ಬೊಗಳಿದವು, ಅಪರಿಚಿತರ ಸುಳಿವನ್ನು ಮನೆಯವರಿಗೆ ತಿಳಿಸಿ ತಮ್ಮ ಕೆಲಸವಾಯಿತೆಂಬಂತೆ ಮರಳಿ ಕಣ್ಣುಮುಚ್ಚಿ ಮುದುಡಿಕೊಂಡವು.  ಸ್ವಲ್ಪಹೊತ್ತಿನಲ್ಲಿ ಬಣ್ಣ ಮಾಸಿದ ಕಾವಿ ಲುಂಗಿಯುಟ್ಟಿದ್ದ, ಐವತ್ತೈದರ ಆಸುಪಾಸಿನ ಡೊಳ್ಳು ಹೊಟ್ಟೆಯ ಕಂದು ಮೈಬಣ್ಣದ ದಢೂತಿ ವ್ಯಕ್ತಿಯೊಬ್ಬರು ಹಳೆಯ ಬೈರಾಸೊಂದನ್ನು ಹೆಗಲಿಗೇರಿಸಿಕೊಂಡು ಬಾಯಿ ತುಂಬ ಎಲೆಯಡಿಕೆ ಜಗಿಯುತ್ತ ಪಡಸಾಲೆಗೆ ಬಂದರು. ಅಂಗಳದಲ್ಲಿ ನಿಂತಿದ್ದ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಅಲ್ಲೇ ಗೋಡೆಯ ಹೊರ ಮೂಲೆಗೆ ವೀಳ್ಯದೆಂಜಲನ್ನು ಪಿಚಕ್ಕನೇ ಉಗುಳುತ್ತ ತಂಗವೇಲುವಿನ ಗುರುತು ಹಿಡಿದರು. ‘ಓಹೋ, ತಂಗವೇಲುವಾ ಮಾರಾಯಾ…ಬನ್ನಿ ಬನ್ನಿ ಒಳಗೆ ಬನ್ನಿ. ಎಷ್ಟು ಕಾಲವಾಯ್ತಾ ನಿನ್ನನ್ನು ನೋಡಿ…! ಆವತ್ತೊಮ್ಮೆ ಬಂದು ಹೋದವನದ್ದು ಮತ್ತೆ ಪತ್ತೆಯೇ ಇಲ್ಲ ನೋಡು…!’ ಎಂದು ನಗುತ್ತ ಅಂದವರು, ‘ಹೌದೂ ಇವರು ಯಾರು ಸಾಹುಕಾರ್ರು…?’ ಎಂದು ಶಂಕರನೆಡೆಗೆ ದಿಟ್ಟಿಸುತ್ತ ಗತ್ತಿನಿಂದ ಕೇಳಿದರು. ಅವರು, ‘ಸಾಹುಕಾರ್ರು…!’ ಎಂದಾಕ್ಷಣ ಶಂಕರನ ದೇಹವು ತಾನಿದ್ದುದಕ್ಕಿಂತಲೂ ಕೆಲವಿಂಚು ಎತ್ತರಕ್ಕೆ ಸೆಟೆದುನಿಂತಿತು. ‘ಹ್ಹೆಹ್ಹೆಹ್ಹೆ… ಏನು ಮಾಡುವುದು ಸಾವುಗಾರ್ರೇ ಗಿರಾಕಿ ಸಿಗಬೇಕಲ್ಲ…!’ ಎಂದ ತಂಗವೇಲು ಶಂಕರನತ್ತ ತಿರುಗಿ, ‘ಇವರು ನಮ್ಮ ಧಣಿ ಸಂಗರಣ್ಣ ಅಂತ. ದೊಡ್ಡ ಬಿಲ್ಡರ್ರು ಮತ್ತು ಭಾರೀ ದೊಡ್ಡ ಗುಳ (ಕುಳ) ಸಾವುಗಾರ್ರೇ!’ ಎಂದು ನಗುತ್ತ ಹೇಳಿ ತಾನೂ ಅವನನ್ನು ಉಬ್ಬಿಸಿದ. ಶಂಕರ ತಂಗವೇಲುವಿನೆಡೆಗೂ ಮೆಚ್ಚುಗೆಯ ನಗು ಹರಿಸಿದ. ಅಷ್ಟು ತಿಳಿದ ಸುರೇಂದ್ರಯ್ಯ ಶಂಕರನಿಗೆ ಗೌರವದಿಂದ ನಮಸ್ಕರಿಸಿ ಕುಳಿತುಕೊಳ್ಳಲು ಹಳೆಯ ಕುಸುರಿ ಚಿತ್ತಾರವಿದ್ದ ಕುರ್ಚಿಯನ್ನು ತೋರಿಸಿದವರು, ಕೆಲಸದವಳನ್ನು ಕೂಗಿ ಕರೆದು ಕಾಫಿ ತರಲು ಸೂಚಿಸಿ ಅವರೊಂದಿಗೆ ಮಾತುಕತೆಗಿಳಿದರು. ತಂಗವೇಲುವೇ ಮೊದಲು ಮಾತಾಡಿದ. ‘ಸಾವುಗಾರ್ರೇ, ನಮ್ಮ ಶರವಣನ ದಯೆಯಿಂದ ನಿಮ್ಮ ಹಿರಿಯರಾಸೆ ಕೈಗೂಡುವ ಕಾಲ ಬಂದೇಬಿಟ್ಟಿತು ನೋಡಿ. ಸಂಗರಣ್ಣನಿಗೆ ನಿಮ್ಮ ಬಂಡಿಗಲ್ಲು ಬೇಕಂತೆ!’ ಎಂದವನು, ‘ಮುಂದಿನದ್ದನ್ನು ನೀವೇ ಮಾತಾಡಿಕೊಳ್ಳಿ!’ ಎಂಬಂತೆ ಶಂಕರನ ಮುಖ ನೋಡಿದ. ಆದ್ದರಿಂದ ಶಂಕರ ಮೊದಲು ಏಕನಾಥ ಗುರೂಜಿಯವರನ್ನೂ ಮತ್ತವರ ಜ್ಯೋತಿಷ್ಯದ ಶಕ್ತಿಯನ್ನೂ ಹೊಗಳುತ್ತ ಅವರನ್ನು ಪರಿಚಯಿಸಿದ. ಬಳಿಕ ಅವರೀಗ ನಿರ್ಮಿಸಲು ಹೊರಟಿರುವ ದೇವಸ್ಥಾನದ ವಿಚಾರವನ್ನು ಅವರಿಗೆ ವಿವರಿಸಿ, ‘ಗುರೂಜಿಯವರದ್ದು ಇದೊಂದು ದೊಡ್ಡ ಸಾಧನೆಯಾಗಲಿದೆ ಸುರೇಂದ್ರಯ್ಯನವರೇ. ಅದರಿಂದ ನಮ್ಮೂರಿಗೂ ಬಹಳ ಒಳ್ಳೆಯದಾಗಲಿದೆ. ಹಾಗಾಗಿ ಆವೊಂದು ಉತ್ತಮ ಕೆಲಸಕ್ಕೆ ನಿಮ್ಮ ಬಂಡೆಗಳು ನಮಗೆ ಬೇಕು. ಕೊಡಬಹುದಾ…?’ ಎಂದು ಗಂಭೀರವಾಗಿ ಕೇಳಿದ. ಅವನ ಮಾತು ಕೇಳಿದ ಸುರೇಂದ್ರಯ್ಯನಿಗೆ ತಾವು ಕುಳಿತ ನೆಲದಡಿಯಲ್ಲೇ ಕೊಪ್ಪರಿಗೆಯೆದ್ದಷ್ಟು ಸಂತೋಷವಾಯಿತು. ಆದರೂ ತೋರಿಸಿಕೊಳ್ಳದೆ ಕೆಲವು ಕ್ಷಣ ಗಂಭೀರವಾಗಿ ಯೋಚಿಸುವಂತೆ ನಟಿಸಿದರು. ಬಳಿಕ, ‘ಬಂಡೆಯನ್ನೇನೋ ಕೊಡಬಹುದು ಸಾವುಕಾರ್ರೇ…, ಆದರೆ ನಮ್ಮ ಹಿರಿಯರದ್ದೊಂದು ಸಣ್ಣ ಆಸೆಯಿದೆ. ಏನೆಂದರೆ ನಮ್ಮ ಬಂಡೆಯಿಂದ ಕಟ್ಟುವ ದೇವಸ್ಥಾನದಲ್ಲಿ ಯಾವುದಾದರೂ ಒಂದು ದೈವದ ಅಥವಾ ದೇವರ ಮೂರ್ತಿಯು ಇದೇ ಶಿಲೆಯಿಂದ ಕೆತ್ತನೆಯಾಗಿ ಅಲ್ಲಿ ಪೂಜೆಗೊಳ್ಳಬೇಕು ಎಂಬುದು. ನಿಮ್ಮ ಗುರೂಜಿಯವರು ಇದಕ್ಕೆ ಒಪ್ಪುತ್ತಾರಾ…?’ ಎಂದು ಅನುಮಾನದಿಂದ ಪ್ರಶ್ನಿಸಿದರು.    ಅಷ್ಟು ಕೇಳಿದ ಶಂಕರನಿಗೆ ಪಕ್ಕನೆ ಏನೂ ತೋಚಲಿಲ್ಲ. ಆದ್ದರಿಂದ, ‘ಈ ವಿಷಯವನ್ನು ಮಾತ್ರ ನಾನು ಗುರೂಜಿಯವರೊಡನೆ ಕೇಳಿಯೇ ಹೇಳಬೇಕಾಗುತ್ತದೆ ಸುರೇಂದ್ರಯ್ಯ!’ ಎಂದವನು, ‘ಹೌದು, ನಿಮ್ಮ ಹಿರಿಯ ಆ ಆಸೆಗೆ ಕಾರಣವೇನು?’ ಎಂದ ಕುತೂಹಲದಿಂದ. ಅದನ್ನೇ ನಿರೀಕ್ಷಿಸುತ್ತಿದ್ದ ಸುರೇಂದ್ರಯ್ಯ, ‘ಆ ಕಥೆಯನ್ನು ನಿಮಗೆ ಸ್ವಲ್ಪ ಹೇಳಬೇಕು ನೋಡಿ. ಆದರೆ ಅದಕ್ಕಿಂತ ಮೊದಲು ಆ ಬಂಡೆಗಳ ವಿಶೇಷವನ್ನೂ ಹೇಳುತ್ತೇವೆ ಕೇಳಿ. ನಮ್ಮ ಮುತ್ತಜ್ಜನ ಕಾಲದಿಂದಲೋ ಅಥವಾ ಅವರ ಮುತ್ತಜ್ಜದಿಂದಿರ ಕಾಲದಿಂದಲೋ ಎಂಬುದು ಸರಿಯಾಗಿ ಗೊತ್ತಿಲ್ಲ, ಒಟ್ಟಾರೆ ಅಷ್ಟೊಂದು ಪ್ರಾಕಿನಿಂದಲೂ ಆ ಬಂಡೆಕಲ್ಲು ನಮ್ಮ ಜಾಗದಲ್ಲಿತ್ತಂತೆ. ಆದರೆ ಆವಾಗ ಕೇವಲ ಒಂದೇ ಬಂಡೆಯಿದ್ದದ್ದು ಕಾಲಕ್ರಮೇಣ ಬೆಳೆಯುತ್ತ ಹೋಯಿತಂತೆ. ಒಮ್ಮೆ ರಾತ್ರೋರಾತ್ರಿ ಎರಡು ಭಾಗವಾಗಿಬಿಟ್ಟಿತಂತೆ! ಅಷ್ಟಾಗಿ ಕೆಲವು ವರ್ಷಗಳ ನಂತರ ಮತ್ತೆ ಮೂರು ಭಾಗವಾಗಿದ್ದು ಬರಬರುತ್ತ ಮತ್ತಷ್ಟು ಸೀಳಿ, ಒಡೆದುಕೊಳ್ಳುತ್ತ ಬಂದದ್ದು ಒಂದೊಂದು ಬಂಡೆಗೂ ಒಂದೊಂದು ಪ್ರಾಣಶಕ್ತಿ ಬಂದು ಬಂಡೆಗಳ ದೊಡ್ಡದೊಂದು ಸಂಸಾರವೇ ಆಗಿಬಿಟ್ಟಿತಂತೆ. ಹೀಗಾಗಿ ಆ ಬಂಡೆಗಳ ನಡುವೆ ಪಿಲಿಚೌಂಡಿ ಮತ್ತು ಪಂಜುರ್ಲಿ ದೈವಗಳು ಬಂದು ನೆಲೆಸಿದ್ದಾವೆ ಎಂದೊಮ್ಮೆ ನಮ್ಮ ಹಿರಿಯರಿಗೆ ‘ದೈವದರ್ಶನ’ ಸೇವೆಯಲ್ಲಿ ತಿಳಿದು ಬಂದಿತಂತೆ. ಅಷ್ಟು ತಿಳಿದ ಅವರು ಆ ಶಕ್ತಿಗಳನ್ನು ಭಯಭಕ್ತಿಯಿಂದ ಈ ಮನೆಗೆ ಕರೆದುಕೊಂಡು ಬಂದು ನೆಲೆಗೊಳಿಸಿ ಕಾಲಕಾಲಕ್ಕೆ ಅವುಗಳನ್ನು ವೈಭವದಿಂದ ಪೂಜಿಸಿಕೊಂಡು ಬಂದರು. ಆ ಶಕ್ತಿಗಳು ನೆಲೆಯಾಗಿದ್ದಂಥ ಆ ಬಂಡೆಗಳಿಗೂ ದೈವಶಕ್ತಿ ಇರುತ್ತದೆ. ಹಾಗಾಗಿ ಅದರದ್ದೊಂದು ತುಂಡು ಕಲ್ಲಾದರೂ ದೈವ, ದೇವರ ಮೂರ್ತಿಯಾಗಿ ಪೂಜೆಯಾಗಬೇಕೆನ್ನುವುದು ನಮ್ಮ ಹಿರಿಯರ ಸಂಕಲ್ಪ!’ ಎಂದು ಸುರೇಂದ್ರಯ್ಯ ವಿವರಿಸಿದರು. ‘ಓಹೋ ಹೀಗಾ ವಿಷಯ…? ಹಾಗಾದರೆ ಅವರು ಸರಿಯಾಗಿಯೇ ಯೋಚಿಸಿದ್ದಾರೆ ಬಿಡಿ!’ ಎಂದು ಶಂಕರ ಅವರ ಮಾತನ್ನು ಸಮರ್ಥಿಸಿದ. ‘ಆ ಬಂಡೆಗಳಿಗೆ ನಾವು ಹೇಳುತ್ತಿದ್ದ ರೇಟಿಗಿಂತಲೂ ಎರಡರಷ್ಟು ಹೆಚ್ಚು ಕೊಟ್ಟು ಅದನ್ನು ಕೊಳ್ಳಲು ಇಲ್ಲಿನ ತುಂಬಾ ಜನ ಕ್ರಷರ್ ಮಾಲಿಕರು ಬಹಳ ವರ್ಷಗಳಿಂದ ಬಂದು ಹೋಗುತ್ತಲೇ ಇದ್ದಾರೆ ಸಾಹುಕಾರ್ರೇ. ಮೊನ್ನೆ ಮೊನ್ನೆಯಷ್ಟೇ ನಮಗೆ ಬಹಳ ಪರಿಚಯವಿದ್ದ ಇಲ್ಲಿನೊಬ್ಬ ದೊಡ್ಡ ಉದ್ಯಮಿ ರವೀಂದ್ರಯ್ಯ ಅಂತ ಬಂದಿದ್ದರು. ಆದರೆ ನಾವು ಅವರಿಗೂ ‘ಸದ್ಯ ಮಾರುವ ಯೋಚನೆಯಿಲ್ಲ. ಇದ್ದರೆ ಹೇಳುತ್ತೇವೆ!’ ಎಂದು ಕಳುಹಿಸಿದ್ದೆವು. ಈ ಸಲ ಬಹುಶಃ ನಿಮ್ಮ ಮೂಲಕವೇ ನಮ್ಮ ಹಿರಿಯರ ನಂಬಿಕೆಯು ಈಡೇರುವ ಕಾಲ ಬಂದಿದೆ ಅಂತ ತೋರುತ್ತದೆ!’ ಎಂದು ಸುರೇಂದ್ರಯ್ಯ ನಗುತ್ತ ಹೇಳಿದರು. ‘ಆಯ್ತು ಸುರೇಂದ್ರಯ್ಯನವರೇ, ಈ ವಿಷಯ ಗುರೂಜಿಯವರಲ್ಲಿ ಮಾತಾಡಿ ಒಪ್ಪಿಸುವ ಜವಾಬ್ದಾರಿ ನನ್ನದು. ಈಗ ವ್ಯವಹಾರದ ಮಾತಾಡುವ. ನೀವು ಸರಿಯಾದ ಒಂದು ರೇಟು ಹೇಳಿದರೆ ಒಳ್ಳೆಯದಿತ್ತು!’ ಎಂದ ಶಂಕರ. ಆಗ ಸುರೇಂದ್ರಯ್ಯ ಮತ್ತೆ ಗಂಭೀರವಾದವರು ಕೆಲವು ಕ್ಷಣದ ಬಳಿಕ, ‘ನೋಡಿ ಸಾಹುಕಾರ್ರೇ, ನಾವು ಬಂಡೆ ಮಾರಿ ಅದರಿಂದಲೇ ಬದುಕಲು ಹೊರಟವರೇನಲ್ಲ. ಅದನ್ನೀಗಲೇ ಹೇಳಿ ಬಿಡುತ್ತೇವೆ. ಯಾಕೆಂದರೆ ನಮ್ಮ ಹಿರಿಯರು ಬಿಟ್ಟು ಹೋದ ಆಸ್ತಿಯೇ ನಮ್ಮ ಇನ್ನೆರಡು, ಮೂರು ತಲೆಮಾರಿಗಾಗುವಷ್ಟಿದೆ. ಆದರೂ ಆ ಬಂಡೆಗಳನ್ನು ಮಾರಲು ಒಂದು ಮುಖ್ಯ ಕಾರಣವಿದೆ. ನಮ್ಮ ಈ ಮನೆಯನ್ನೂ ಇದರ ಅವಸ್ಥೆಯನ್ನೂ ನೀವು ಗಮನಿಸಿರಬಹುದು. ಅರಮನೆಯಂಥ ಇದನ್ನು ರಿಪೇರಿ ಮಾಡಿಸುವುದೆಂದರೆ ಸಣ್ಣ ಮಾತೇನಲ್ಲ. ಆ ಬಂಡೆಗಳನ್ನು ಮಾರಿ ಈ ಮನೆಯನ್ನು ಈಗ ಇರುವ ರೀತಿಯಲ್ಲೇ ಚಂದ ಮಾಡಿ ರಿಪೇರಿ ಮಾಡಿಸಿ ಇನ್ನೊಂದಷ್ಟು ವರ್ಷ ಇದರ ವೈಭವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ತಂದೆಯವರ ಮತ್ತು ನಮ್ಮಿಚ್ಛೆಯೂ ಹೌದು! ಅದಕ್ಕೆ ಒಂದು ಅಂದಾಜಿನ ಪ್ರಕಾರ ಒಂದು ಕೋಟಿಯತನಕ ಖರ್ಚು ಬೀಳಬಹುದು. ನಮ್ಮ ಬಂಡೆಗೂ ನೀವು ಅಷ್ಟೇ ಕೊಟ್ಟರೆ ಸಾಕು!’ ಎಂದು ಸಲೀಸಾಗಿ ಅಂದರು. ಆದರೆ ಶಂಕರನಿಗೆ ಅದೇನೂ ಅಷ್ಟೊಂದು ದೊಡ್ಡ ಮೊತ್ತವೆಂದು ಅನ್ನಿಸಲಿಲ್ಲ. ಆದರೆ ಅವನು ಒಂದು ಹುಲ್ಲು ಕಡ್ಡಿಯನ್ನು ಕೂಡಾ ಹತ್ತು ಬಾರಿ ಚೌಕಾಶಿ ಮಾಡದೆ ಕೊಂಡುಕೊಳ್ಳುವ ಜಾಯಮಾನದವನಲ್ಲ. ಆದ್ದರಿಂದ, ‘ಓ ದೇವರೇ…! ನೀವೆಂಥದು ಮಾರಾಯ್ರೇ ಒಟ್ಟಾರೆ ಒಂದು ರೇಟು ಹೇಳಿ ಬಿಡುವುದಾ…? ಛೇ! ಛೇ! ಅದು ಸಿಕ್ಕಾಪಟ್ಟೆ ಜಾಸ್ತಿಯಾಯಿತು ಬಿಡಿ. ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಆ ದೇವಸ್ಥಾನವನ್ನು ಕಟ್ಟುವುದಕ್ಕೆ ನಾವು ಕೂಡಾ ನಾಗದೇವರ ಭಕ್ತಾದಿಗಳಿಂದಲೇ ಹಣವನ್ನು ಒಟ್ಟು ಮಾಡುವವರು ಸುರೇಂದ್ರಯ್ಯ! ಅಂಥ ಪವಿತ್ರವಾದ ದುಡ್ಡನ್ನು ನಮಗೆ ಖುಷಿ ಬಂದ ಹಾಗೆ ಖರ್ಚು ಮಾಡಲಿಕ್ಕಾಗುತ್ತದಾ ಹೇಳಿ…? ನೀವು ಕೂಡಾ ಅದೇ ದೃಷ್ಟಿಯಿಂದ ಒಂದಷ್ಟು ಕಡಿಮೆ ಮಾಡಿ ಹೇಳಬೇಕು ನೋಡಿ!’ ಎಂದು ಖಡಕ್ಕಾಗಿ ಹೇಳಿದ. ಅವನ ಮಾತಿನ ವರಸೆಯನ್ನು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಬೆಚ್ಚಿದವರು, ಛೇ, ಛೇ!…ವ್ಯಾಪಾರವೆಲ್ಲಿ ಕೈತಪ್ಪುತ್ತದೋ…? ಎಂದುಕೊಂಡು ಮತ್ತಷ್ಟು ಯೋಚಿಸುವಂತೆ ನಟಿಸಿದರು. ಕೊನೆಯಲ್ಲಿ, ‘ಆಯ್ತು ಸಾಹುಕಾರ್ರೇ, ನೀವು ಆ ನಾಗನ ಹೆಸರು ಹೇಳಿದ ಮೇಲೂ ನಾವು ನಮ್ಮ ಹಿಡಿದ ಮುಷ್ಟಿ ಬಿಚ್ಚದಿದ್ದರೆ ಅರ್ಥ ಉಂಟಾ ಹೇಳಿ? ಇಬ್ಬರಿಗೂ ಚರ್ಚೆ ಬೇಡ. ಒಂದೇ ಮಾತು, ನಾವು ಹೇಳಿದ ಮೊತ್ತದಲ್ಲಿ ಐದು ಲಕ್ಷ ಕಡಿಮೆ ಮಾಡುತ್ತೇವಷ್ಟೇ. ತೊಂಬತ್ತೈದಕ್ಕೆ ವ್ಯಾಪಾರ ಮುಗಿಸಿಬಿಡುವ ಏನಂತೀರಾ…?’ ಎಂದು ನಗುತ್ತ ಅಂದರು.    ಅಷ್ಟಕ್ಕೆ ಶಂಕರನ ಮುಖದಲ್ಲೂ ನಗು ಮೂಡಿತು. ಅಲ್ಲಿಗೆ ವ್ಯವಹಾರದ ಮಾತುಕಥೆಯೂ ಮುಗಿಯಿತು. ತಂಗವೇಲುವೂ ಖುಷಿಯಾದ. ಆದರೆ ಅವನು, ವ್ಯಾಪಾರ ಹೇಗೂ ಕುದುರಿತು. ಆದರೆ ಇನ್ನು ಇವರಿಬ್ಬರ ಕಡೆಯಿಂದ ತನಗೆಷ್ಟೆಷ್ಟು ಕಮಿಷನ್ ಸಿಗುತ್ತದೋ…? ಎಂಬ ಆತಂಕದಿಂದ ಚಡಪಡಿಸಿದ. ಅದನ್ನು ಗಮನಿಸಿದ ಸುರೇಂದ್ರಯ್ಯ, ‘ತಂಗವೇಲು, ನೀನು ಮಂಡೆಬಿಸಿ ಮಾಡಬೇಡ ಮಾರಾಯ. ನಿಮ್ಮ ಕಡೆಯಿಂದ ಹಣ ನಮಗೆ ಸಂದಾಯವಾಗುತ್ತಲೇ ನಿನ್ನ ಕಮಿಷನ್ನೂ ನಿನ್ನ ಕೈ ಸೇರುತ್ತದೆ!’ ಎಂದಾಗ ತಂಗವೇಲು ಗೆಲುವಾದವನು, ‘ಹಾಗಾದರೆ ನಿಮ್ಮದು ಯಾವಾಗ ಶಂಗರಣ್ಣಾ…?’ ಎಂಬಂತೆ ಅವನನ್ನು ದಿಟ್ಟಿಸಿದ. ಆದರೆ ಅಷ್ಟರಲ್ಲಿ ಶಂಕರ ತಟ್ಟನೆ ಅವನಿಂದ ಮುಖ ತಿರುಗಿಸಿ ಎದ್ದು ಕಾರಿನತ್ತ ಹೋದವನು ಗುರೂಜಿಯವರ ಪ್ರಸಾದವನ್ನೂ ಮತ್ತು ಒಂದು ಲಕ್ಷ ರೂಪಾಯಿಯನ್ನೂ ತಂದು, ‘ತಗೊಳ್ಳಿ ಸುರೇಂದ್ರಯ್ಯ, ಇದು ಗುರೂಜಿಯವರು ಕೊಟ್ಟ ಪ್ರಸಾದ. ಮತ್ತಿದು ಅಡ್ವಾನ್ಸು. ಉಳಿದ ಹಣವನ್ನು ಬಂಡೆ ಕಡಿದು ಮುಗಿದ ಕೂಡಲೇ ಚುಕ್ತಾ ಮಾಡುತ್ತೇವೆ. ಅದಕ್ಕೊಂದು ಅಗ್ರಿಮೆಂಟು ಕೂಡಾ ಮಾಡಿಕೊಳ್ಳುವ!’ ಎಂದು ಗತ್ತಿನಿಂದ ಅಂದವನು, ಠಸ್ಸೆ ಪೇಪರನ್ನು ಅವರ ಮುಂದಿಟ್ಟ. ಒಂದು ಲಕ್ಷವನ್ನು ನೋಡಿದ ಸುರೇಂದ್ರಯ್ಯ ತಾವು ಕಾಣುತ್ತಿರುವುದು ಕನಸೋ ನನಸೋ…? ಎಂಬ ಅನುಮಾನಕ್ಕೆ ಬಿದ್ದು ನೋಟಿನ ಕಂತೆಯನ್ನೊಮ್ಮೆ ನಯವಾಗಿ ಮುಟ್ಟಿ ನೋಡಿದವರು, ಶಂಕರನ ಪತ್ರಕ್ಕೆ ಅವನು ತೋರಿಸಿದಲ್ಲಿ ಸಹಿ ಎಳೆದು ಅವರನ್ನು

Read Post »

You cannot copy content of this page

Scroll to Top