Category: ಕಾವ್ಯಯಾನ

ಕಾವ್ಯಯಾನ

ಜೋಳದ ಹೂವು

ಕವಿತೆ ಜೋಳದ ಹೂವು ಪೂಜಾ ನಾರಾಯಣ ನಾಯಕ್ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆಜೋಳದ ಹೂವೊಂದು ಮಗುವಂತೆಮನದಿಂಗಿತವ ಕೇಳುವವರಾರೆಂದುನರಳುತಿದೆ ತನ್ನೆದೆಯ ಗೂಡಲ್ಲಿರಾತ್ರಿ-ಹಗಲೆನ್ನದೆ. ಯಾರಬಳಿ ನನ್ನ ಮನದಿಂಗಿತವನರುಹಲಿ?ಯಾರ ಬಳಿ ತೋಡಿಕೊಳ್ಳಲಿ ನನ್ನಳಲ?ಗೆಳೆತನದ ಸಲುವಾಗಿ ಯಾರ್ಯಾರ ಬೇಡಲಿ?ನನ್ನೆಡಗೆ ಸುಳಿಯರಾರೂಅಯ್ಯೋ, ಇದು ನನ್ನ ವಿಧಿಯೆ? ಪಾತರಗಿತ್ತಿಗೆ ಹೇಳಲೆ?ಛೇ, ತಗುಲಿದೆ ಮಲ್ಲಿಗೆಯ ಹುಚ್ಚು!ಭ್ರಮರಕ್ಕೆ ತಟ್ಟಿದೆಸೂರ್ಯಕಾಂತಿಯ ಮೋಹ!ಕಣಜವನು ಕೈಬೀಸಿ ಕರೆವೆನೆಂದರೆಛೇ, ಅದಕೂ ಸೋಕಿದೆ ತಾವರೆಯ ಪ್ರೇಮ!ಯಾರ ಬಳಿ ಹೇಳಲಿ ಅಡಗಿದಗುಹೆಯೊಳಗಿನ ಮರ್ಮ ಕಣ್ಣೀರಿನದ್ದೆಂದು,ಗೋಗರೆಯುತಿಹೆ ಸುಯ್ಲು ಸೋರದ ಹಾಗೆನುಂಗುತಿಹೆ ಒಳಗೊಳಗೆ… ಎತ್ತಲಿಂದಲೂ ಬರರ್ಯಾಕೆ ಇತ್ತ?ಕುಸುಮ-ವಾಸನೆಯ ಕಂಪಿಲ್ಲವೆಂದೆ?ಇದ್ದರೂ ಇರಬಹುದೆ ನನ್ನೊಳಗಿನಮಧುವಿಗೆ […]

ದೊರೆಯ ಕಿರೀಟದ ನೀಲ ಮಣಿಯಲ್ಲಿ….

ಕವಿತೆ ದೊರೆಯ ಕಿರೀಟದ ನೀಲ ಮಣಿಯಲ್ಲಿ…. ಶ್ರೀದೇವಿ ಕೆರೆಮನೆ ರತ್ನ ಖಚಿತ ಸಿಂಹಾಸನದಲ್ಲಿ ಆಸೀನನಾಗಿದ್ದದೊರೆಯಲ್ಲೊಂದು ಉದಾಸೀನಅನತಿ ದೂರದಲ್ಲಿ, ಕೈ ಕಟ್ಟಿವಿಧೇಯಳಾಗಿ ನಿಂತಿದ್ದಕಪ್ಪು ಬಣ್ಣದ ನಿರಾಭರಣ ಯುವತಿಯಕಡೆಗೊಂದು ದಿವ್ಯ ನಿರ್ಲಕ್ಷ ಹ್ಞೂಂಕರಿಸಿ ಎದುರಿಂದ ತೊಲಗೆಂಬಂತೆಕೈಬೀಸಿದ ದೊರೆಯಲ್ಲಿ ಅದೇನೋ ವ್ಯಂಗ್ಯಸುಂದರವಾಗಿರದ್ದು ಯಾವುದೂ ಕಣ್ಣೆದುರುಕಾಣಲೇ ಬಾರದು ಎಂಬ ಹಟಎದುರಿಗಿದ್ದ ಯುವತಿಯೋಯಾರ ಕಣ್ಣೂ ಅರಳಿಸಿದ ಸೀದಾ ಕವಿತೆ ದೊರೆಯ ಅಣತಿಯಂತೆ ತಲೆ ತಗ್ಗಿಸಿಮುಖ ತಿರುವಿ ಹೊರ ಹೊರಟಾಕೆಯಕಣ್ಣಲ್ಲೊಂದು ಅಬ್ಬರಿಸುವ ಕಡಲುಉಕ್ಕಿದ ನಗೆಯಲ್ಲೊಂದು ಕಡಲಲೆಗಳನೆನಪಿಸುವ ಭೋರ್ಗರೆತ ಅದೋ…ದೊರೆ ಓಡೋಡಿ ಬಂದಿದ್ದಾನೆಈಗ ತಾನೆ ಹೊರಗೆ ಹೋದಕಪ್ಪು […]

ಗೆಳೆಯರು ಹಲವರು

ಕವಿತೆ ಗೆಳೆಯರು ಹಲವರು ಮಾಲಾ.ಮಾ.ಅಕ್ಕಿಶೆಟ್ಟಿ. ಕಲಿಸುವುದು ದಿನವೂಗೆಳೆತನ ವ್ಯಾಖ್ಯೆಗಳುವಾಟ್ಸಪ್ ಫೇಸ್ ಬುಕ್ ನಲ್ಲಿ ನೋಯಿಸುವುದು ಹೀಯಾಳಿಸುವುದುಕಡೆಗಣಿಸುವುದು ಸಲ್ಲಚೂರು ಚೂರು ಹೃದಯವನ್ನಂತೂಮಾಡಬಾರದುಗಳ ಸರಮಾಲೆಯಲ್ಲಿಸಾಲು ನಿಂತ ‘ಬಾರದುಗಳು’ ಬೇಕೇ ಬೇಕು ಹಠಒಂದು ಕಾಲದಲ್ಲಿ ಗೆಳೆತನಇರದಿರೆ ನಿರುತ್ಸಾಹಸಿಗಲಿಲ್ಲ ಅಂದುಸಿಗುತ್ತಿದೆ ಇಂದುವಾಟ್ಸಪ್ ಫೇಸ್ ಬುಕ್ ನಲ್ಲಿ ಒಂಟಿತನ, ಅಸಂತೋಷಅಶಾಂತಿಯನ್ನು ಕೊಟ್ಟದೇಣಿಗೆ ಅಂದಿನ ಗೆಳೆತನದ್ದುಸುಧಾರಿಸಿದ ಗೆಳೆತನಇಗಿಂದು ನೀಗಿಸಲುಅಸಾಧ್ಯ ಆಗಿನ ಬೇಡಿಕೆಯನ್ನುಸಾಕು ಗೆಳೆತನ ಡೋಂಗಿರೂಢಿಯಾಗಿದೆ ಅವರಿಲ್ಲದಜೀವನದ ಒಂಟಿ ಪಯಣ ವ್ಯತ್ಯಾಸವಿಲ್ಲ ಇವರಇರುವಿಕೆ ಇಲ್ಲದಿರುವಿಕೆಯಾರ್ಯಾರ ಜೀವನದಲ್ಲಿಏನು, ಕುತೂಹಲವಿಲ್ಲಆತ್ಮೀಯರಲ್ಲದವರಜೊತೆ ಉತ್ಸಾಹವೆಲ್ಲಿ ನೀರೆರೆಯಲು ಬರುವರುಸತ್ತಾಗ ಬಾಯಲ್ಲಿ ಆತ್ಮೀಯರುಹೊರತು ಡೋಂಗಿಯಲ್ಲಪಾಪ ಫೋಟೋ […]

ನನ್ನ ಬೆರಳುಗಳು

ಕವಿತೆ ನನ್ನ ಬೆರಳುಗಳು ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ನನ್ನ ಬೆರಳುಗಳುಗಿಡಗಳಲ್ಲಿ ಚಿಗುರುತ್ತವೆಹವಳದಂತೆ ಕೆಂಪು ಕೆಂಪುಅರಳುತ್ತವೆ ತಾವರೆಯ ಎಸಳುಗಳಂತೆಕೊಳದಲ್ಲಿ ಮೀನುಗಳಾಗಿಉಗುರುಗಳು ಕಣ್ಣುಗಳಾಗಿಕಣ್ಣು ಮಿಟುಕಿಸದೆ ದೇವರಾಗುತ್ತವೆಮಿಂಚಿನ ಗತಿಯಲ್ಲಿ ಚಲಿಸುತ್ತವೆನಾನು ಗಾಳ ಹಾಕುತ್ತೇನೆನನ್ನದೇ ಬೆರಳುಗಳಿಗೆಕವಿತೆಯ ಎರೆಹುಳ ತುಂಡುಪದ ಸಿಕ್ಕಿಸಿ ಮೀನುಗಳು ನೀರು ಬಿಟ್ಟೊಡನೆಮರಳಿ ಬೆರಳುಗಳಾಗುತ್ತವೆಹವಳ ಚಿಗುರುಗಳಾದತಾವರೆ ಎಸಳುಗಳಾದಕೊಳದೊಳಗೆ ಮೀನುಗಳಾದಅನುಭವಗಳನ್ನು ಬರೆಯುತ್ತವೆದೇವರಾದದ್ದನ್ನೆ ಮರೆತುಇನ್ನೇನೋ ಹೊಸತು ಆಗಲುರೆಕ್ಕೆ ಬಿಚ್ಚಿಕೊಂಡು ಹೊರಟುಬಿಡುತ್ತವೆಹೊಸತು ಆದಾಗೆಲ್ಲ ದೇವರಾದ್ದನ್ನುಬೆರಳಾದಾಗೆಲ್ಲ ಮರೆಯುತ್ತಮರಳಿ ಹೊರಡುತ್ತವೆ ಅದಕೇ…ನನ್ನ ಕವನಗಳು ದೇವರನ್ನುಮುಟ್ಟುವುದೇ ಇಲ್ಲಇನ್ನೇನು ಬೆರಳು ಆತನನ್ನುಮುಟ್ಟಿತು ಎಂಬಷ್ಟರಲ್ಲಿಅದಕ್ಕೆ ಮುಟ್ಟು ಆಗಿರುತ್ತದೆಕವನಗಳು ಹಾಳೆಗಳಲ್ಲೇಹಳತಾಗುತ್ತವೆ ನನ್ನ ಹೃದಯಒಂದು ಮೀನಾಗಿಬಿಟ್ಟಿದೆಗಾಳ ಅವನ […]

ಅಬ್ಬರ

ಕವಿತೆ ಅಬ್ಬರ ಪ್ರೊ.ಕವಿತಾ ಸಾರಂಗಮಠ ಹರಿದ ಗುಡಿಸಲಲ್ಲಿಮುರಿದ ಛಾವಣಿಗಳಲ್ಲಿಹರಿದ ಬಟ್ಟೆಯುಟ್ಟುಹಸಿವು ಇಂಗಿದೆ! ನಿರಾಶ್ರಿತರು ಮುಗಿಲಿಗೆಮುತ್ತಿಗೆ ಹಾಕಿದ್ದಾರೆತುತ್ತು ಅನ್ನ ಬಟ್ಟೆಗಾಗಿಹೆಣಗುತ್ತಿದ್ದಾರೆಇಲ್ಲೊಬ್ಬನಿಗೆ ಹೊರಗೆತಿರುಗುವ ಚಿಂತೆ! ಸೀಲ್ ಡೌನ್,ಲಾಕ್ ಡೌನ್ಆಯ್ತುಪ್ರೀತಿ-ಪ್ರೇಮ ಸೀಲ್ ಡೌನ್ ಆಯಿತಾ?ಇಲ್ಲೊಬ್ಬ ಪ್ರೇಮಿ ಉಸುರುತ್ತಿಅದ್ದಾನೆ! ನೆಕ್ಕಲು ಹಳಸಿದ ಅನ್ನ ಸಿಕ್ಕರೆಸಾಕು ಬದುಕುತ್ತೇನೆಎನ್ನುತ್ತಿದ್ದಾನೆಹಸಿವಿನ ಬೆಲೆ ತಿಳಿದವಭಿಕ್ಷುಕನೂ ಇರಬಹುದು?! ಕೀಟಗಳ ಕಾಟವಿನ್ನೂ ಮುಗಿಯದೇಅಕಟಕಟಾನಿದ್ದೆಮಾಡಿ ಮಾಸಗಳೇ ಉರುಳಿವೆಎನುತಿರುವ ಇಲ್ಲೊಬ್ಬಹಾಸಿಗೆ ಪ್ರೇಮಿ! ಆಸೆ ಬಿಡದ ಜೀವಬೇಕೆಂದು ಹೊರಟೇ ಇದೆಅರಿವಿಲ್ಲಮಸಣಕೋವ್ಯಸನಕೋ? *****************************

ಮುಖಗಳು

ಕವಿತೆ ಮುಖಗಳು ಡಾ. ಅರಕಲಗೂಡು ನೀಲಕಂಠ ಮೂರ್ತಿ ವೃತ್ತಿಯಲ್ಲಿ ಎಷ್ಟೊಂದು ಮುಖಗಳುಎದುರಾಗುತ್ತವೆ…ಭಿನ್ನ ಭಿನ್ನ ಭಾವಗಳುಕವಚಗಳು ಅದೇ ಒಂದೊಮ್ಮೆ ಯಾವುದೋರಸ್ತೆಯ ಪಕ್ಕ ಕಾಯುತ್ತಿರಿಒಂದೇ ಒಂದೂ, ಕೊಸರಿಗೂ ಕಾಣದುಪರಿಚಯದ ಮುಖ!ಎಷ್ಟೊಂದು ಸೋಜಿಗ…! ಜಗತ್ತು ತುಂಬಿದೆತುಂಬಿ ತುಳುಕುತ್ತಿದೆ –ಜನರಿಂದ ಮತ್ತುಜನರನ್ನು!ಇಲ್ಲಿ ಅನಾಥರಿಗೂಇನ್ನಿತರ ಅಂಥದೇ ಅನಾಥರ ಗುರುತೂಸಿಗದು…ಬಹುಶಃ… ಇದರಿಂದಲೇ ಇಲ್ಲಿ ಎಲ್ಲವೂನಾನು, ನನ್ನದು ಮತ್ತುನನ್ನವರು…ಬಹುಶಃ… ಗೋಡೆಯ ಮೇಲೆ ಈ ದಿನದಹೊಚ್ಚ ಹೊಸ ಹೂಮಾಲೆಯಿರುವನನ್ನಪ್ಪನ ಅಮ್ಮನ ಫೋಟೋನನ್ನ ನಂತರ ಎಲ್ಲಿರುವುದೋ ಏನೋ…?ಹಾಗೆಯೇ ಎಲ್ಲ ಮುಖಗಳುನೆನಪುಗಳು… ಬಣ್ಣದ ಬ್ರಶ್ ಒಂದುಬಳಿಬಳಿದು ನಿತ್ಯ ನಿರಂತರಉದುರಿ ಮರೆಯಾಗುವ ಮುಖವಾಡಗಳು…ಮತ್ತು […]

ಕಾದಿಹೆ ಬಂದುಬಿಡು

ಕವಿತೆ ಕಾದಿಹೆ ಬಂದುಬಿಡು ಪ್ರೇಮಾ ಟಿ.ಎಂ. ಆರ್ ನಡೆದಿದ್ದೇನೆ ದಂಡೆಯುದ್ದಕ್ಕೆಹೆದ್ದೆರೆಗಳಬ್ಬರದ ಭಯ ಬಂದುಬಿಡುಸೊಕ್ಕಿದಲೆ ನನ್ನ ಕೊಚ್ಚಿಕೊಂಡೊಯ್ಯುವ ಮೊದಲೇ ಬಂದುಬಿಡು ಮೋಡ ಮುಕ್ಕಿದ ತುಂಡು ಸೂರ್ಯದ್ವಾದಶಿಯ ಮುರುಕು ಚಂದ್ರಎದುರುಬದುರು ನಿಂತಿರುವಾಗಲೇಬಂದುಬಿಡು ನನ್ನಹೆಜ್ಜೆಯ ಹೊಂಡದೊಳಗೆಉಪ್ಪುನೀರು ನೆಲೆನಿಂತಿದೆಅಲೆಯೊಳಗೆ ನಾಸುಳಿದು ಹೋಗುವ ಮುನ್ನಬಂದುಬಿಡು ಪಶ್ಚಿಮದಂಚಿಗೆ ಕೆನ್ನೆತ್ತರದ ಹಸೆಮುಗಿಲು ಹಾಡು ಹರಿಯುತಿದೆಕನಸು ಕೆನೆಗಟ್ಟುವದಕ್ಕೂ ಮೊದಲೇಬಂದುಬಿಡು ಸೂರ್ಯ ತಲೆಮರೆಸಿಕೊಳ್ಳುತ್ತಿದ್ದಾನೆತಾರೆಗಳೆದೆಗೆ ಸೊಕ್ಕು ಹೊಕ್ಕಿದೆದಂಡೆ ಮೌನವ ಹೊದ್ದು ಮಲಗುವ ಮುಂಚೆಬಂದುಬಿಡು ಇರುಳು ಜಾರುತಿದೆ ಮುಷ್ಠಿಯೊಳಗಿನ ಮರಳಂತೆ ಸುಳುಸುಳುಕನಸು ಕರಗುವ ಮೊದಲೇ ಮಧುಶಾಲೆಬಿಟ್ಟುಬಂದುಬಿಡು ಎಲ್ಲೋ ಗಾಳಿ ಮರದಮೇಲೆಒಂಟಿಹಕ್ಕಿಯ ಎದೆಕೊರೆವ ಹಾಡುತಟ್ಟಿ […]

ಟೈಂ ಮುಗಿಸಿದ ಸಮಯ…..

ಕವಿತೆ ಡಾ.ಪ್ರೇಮಲತ ಬಿ ಕೆಲವರಿಗೆ ಸಮಯವಿರುವುದಿಲ್ಲಸಮಯ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲನನ್ನ ಬಳಿ ಬಹಳ ಸಮಯವಿದೆಆಳ ಗೆರೆಗಳ ನನ್ನ ಕೈ ಖಾಲಿಯಿದೆ ಹಾಗೆಂದೇ ಸಮಯವನ್ನು ಕೊಲ್ಲಲು ನನ್ನ ಬಳಿಅಸಾಧ್ಯ ಸಾಧ್ಯತೆಗಳಿವೆ ಆದರೆಹಾಗೊಮ್ಮೆ, ಹೀಗೊಮ್ಮೆ ತೂಗುವ ಲೋಲಕದನನ್ನ ಗಡಿಯಾರಕ್ಕೆ ಮುಳ್ಳುಗಳಿಲ್ಲ ಅನಂತ ಚಲನೆಗಳ ಸಂವೇದನೆಯಿಲ್ಲಕೊಂದದ್ದೇನು ತಿಳಿಯುವುದಿಲ್ಲಟಿಕ್-ಟಿಕ ನೆಂದು ಉಲಿದು ಹೇಳಲುನನ್ನೆದೆ ಗಡಿಯಾರಕ್ಕೆ ಧ್ವನಿಯಿಲ್ಲ ರಸ್ತೆಯಲಿ ನಿಂತ ಒಂಟಿ ಜೀವಸಂತೆಯಲ್ಲಿದ್ದರೂ ಕೇಳುವ ನಿರಂತರ ಮೌನಸಮಯದ್ದೇನು ನನಗೆ ಮುಲಾಜುಸಮಯ ಪ್ರಜ್ಞೆಆಳುವುದಿಲ್ಲ ಅವಸರ ಬದುಕ ಕಾಡುವುದಿಲ್ಲಸಮಯ ಕೊಂದ ಪಾಪಪ್ರಜ್ಞೆಯಿಲ್ಲಅರ್ಥಗಳ ಟೈಂ ಮುಗಿಸಿದ ಸಮಯ ನನ್ನೆದುರು […]

ನೈವೇದ್ಯ

ಕವಿತೆ ನೈವೇದ್ಯ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಮೂರು ಕಲ್ಲುಗಳ ಒಲೆನನ್ನ ಮನಸ್ಸು!ಹಳದಿ ಮೈಯ ಕೆಂಪು ನಾಲಗೆಯನ್ನುಊರ್ಧ್ವಕ್ಕೆ ಕೊರಳುದ್ದಕ್ಕೂ ಚಾಚಿ ಚಾಚಿಕಾಯಮಡಕೆಯನ್ನು ನೆಕ್ಕುತ್ತಿರುತ್ತದೆಬೆಂಕಿಬಾಳು! ಒಂದು ದೀರ್ಘ ಕಾಯುವಿಕೆಯಲ್ಲಿಪ್ಲುತಕಾಲಗಳ ಬೇಯುವಿಕೆ…ಅಕ್ಕಿ ಗುಳುಗುಳು ಕುದಿಯುತ್ತ ಅಂಗುಳಅಗುಳು ಅಗುಳೂ ಅನ್ನವಾಗುತ್ತದೆಆಹಾ! ಉದುರುದುರು ಮಲ್ಲಿಗೆ ಹೂವು!ಬಟ್ಟಲು ತುಂಬ ಹರಿದಾಡುವ ಮುತ್ತು!ಅನ್ನ ಜೀವವಾಗುತ್ತದೆ… ಪರಮ ಅನ್ನ! ಬ್ರಹ್ಮ ವಿಷ್ಣು ಮಹೇಶ್ವರ ಪುಟುಪುಟುಅಂಬೆಗಾಲಿಡುತ್ತಿದ್ದಾರೆ…ಚಿಗುರು ಬೆರಳ ಚುಂಚದಲ್ಲಿ ಹೆಕ್ಕಿ ಹೆಕ್ಕಿಬಾಯಿ ಬ್ರಹ್ಮಾಂಡದಲ್ಲಿ ತುಂಬಿಕೊಳ್ಳಲು!ಒಬ್ಬನ ಕೈಯ ಕೆಂದಾವರೆಗೆಮತ್ತೊಬ್ಬನ ಹೊಕ್ಕುಳ ಕುಂಡದ ದಂಟಲ್ಲಿ ನಗುಹುಟ್ಟಿಗೆ ಬದುಕಿನ ನಂಟು!ಹೊಕ್ಕುಳಬಳ್ಳಿ… ಅಮೃತಬಳ್ಳಿ! ಮಗದೊಬ್ಬನ ನೊಸಲಲಿ ಒಲೆಯಬೂದಿಯೆ […]

ದಿಟ್ಟ ಹೆಜ್ಜೆ

ಕವಿತೆ ದಿಟ್ಟ ಹೆಜ್ಜೆ ಶಿವಲೀಲಾ ಹುಣಸಗಿ ಇನ್ನೇನು ಬೀದಿಗೆ ಬಿದ್ದಂತೆಒಣಹುಲ್ಲಿಗೂ ಆಸರೆಯಿಲ್ಲದೇಕೊನೆಗಳಿಗೆಯ ನಿಟ್ಟುಸಿರಿಗೆನಿತ್ರಾಣದ ನಡುವಿಂದ ನಡುಕಕಣ್ಸನ್ನೆಯಲಿ ನುಡಿದುದೆಲ್ಲ ದಿಟಹೊತ್ತಿಗೆ ಬಾರದ ತುತ್ತ ನೆನೆದುಕತ್ತು ಹೊರಳಿದರೂ ನಿಲ್ಲದ ಆಪತ್ತುತೂಗುಗತ್ತಿಯ ನೆತ್ತಿಯಲಿ ಹೊತ್ತುಸ್ವಪ್ನ ಕಾಣುವ ಭರದಲ್ಲಿಯೇಸೂರಿಲ್ಲದೆ ತಾರೆಗಳಾದರೆಷ್ಟೋಒಣಹುಲ್ಲಿಗೆ ಮಣಲೆಕ್ಕ ಬರೆದುಹೊಟ್ಟೆ ಬಗಿದರೂ ಚಿಮ್ಮದಾ ನೆತ್ತರುಹಸಿವಿನ ಮುಂದೆ ಎಲ್ಲ ಸೋತವರುಶೂನ್ಯದಾಹುತಿಗೆ ಕೊರಳೊಡ್ಡಿಹರುಬೀದಿಗೆ ಬಂದ ಬದುಕಿಗೆಲ್ಲಿದೆ ತ್ರಾಣಇರಳೊಂದು ಮಸಿ ಚಲ್ಲಿದಂತೆಗಾಢಂಧಕಾರದಲಿ ಸುಖವೆಲ್ಲ ವ್ಯರ್ಥಎಲುಬಿನ ಎಣಿಕೆಯೋ ಗೋರ ಅನರ್ಥಬಯಲಿಗೆ ಬೆತ್ತಲಾಗುವ ಭಯವಿಲ್ಲನಮಗೋ ಬಯಲಾಗದೇ ಬದುಕಿಲ್ಲಬೀದಿ ಚಂದ್ರಮನೇ ಮೌನವಾಗಿಹನುಚಿಗುರೊಡೆಯದೆ ಕಮರಿದ ಬಾಳಿಗೆ.ಎದೆಸೆಟಿಸಿ ನಡೆದೆನೆಂದರೂ ನಿರಾಶೆಎದೆಬಗಿದು ಕರುಳ […]

Back To Top