Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

‘ಪ್ರಶ್ನೆ ದಾಳ’ ವಸುಂಧರಾ ಕದಲೂರು.  ಎಳೆ ಹುಡುಗನನ್ನು ಮಲೆ ಮೇಲೆ ಕೂರಿಸಿ ಆತ, ಮೊಲೆ ಕಾಣಬಾರದೆಂದು ಬಿಡುತ್ತಾರೆ ! ಹತ್ತಲು ೧೮ ಏಕೆ ..? ಉತ್ತರವಿಲ್ಲದವರ ಬಳಿ ಇಂತಹ ಪ್ರಶ್ನೆ ಕೇಳಬಾರದು. ಎರಡೊಂಬತ್ತಲಿ ಹದಿನೆಂಟೆಂದು ಒಂದು ಗರ್ಭಾವಧಿಯ ಅವಧಿಯ ಮರೆತು ಬಿಡುತ್ತಾರೆ. ಬೀಜ ನಾಟಿ, ಬೇರು ಚಿಗುರಿ ಹೂವೋ ಕಾಯೋ ಅರಳಿಕೊಳಲು ಒಂದ್ಹೊಂಬತ್ತು. ಹೊಟ್ಟೆ ಮಗುಚಿ ಅಂಬೆಗಾಲಿರಿಸಿ, ಬಾಯ ತೊದಲು ಶುರುವಿಗೆ ಇನ್ನೊಂದು ಒಂಬತ್ತು. . ಆಯಿತಲ್ಲ ಹದಿನೆಂಟು..! ಪ್ರತೀ ಪ್ರಶ್ನೆಗೂ ಒಂದು ಉತ್ತರವಿದೆ ಒಪ್ಪಿತವಾದರೆ. ಆದರೂ […]

ಕಾವ್ಯಯಾನ

ವಿಶ್ವಗುರು ಬಸವಣ್ಣ ತೇಜಾವತಿ ಹೆಚ್. ಡಿ ನೀನೇ ಅಲ್ಲವೇ ಮಹಾಮಾನವತಾವಾದಿ ಹನ್ನೆರಡನೆಯ ಶತಮಾನದ ಕ್ರಾಂತಿಯೋಗಿ ಅದೆಷ್ಟೋ ಅಂಧಕಾರದ ಧೂಳುಹಿಡಿದ ಮನಗಳಲಿ ಅರಿವಿನ ಪ್ರಣತಿಯ ಬೆಳಗಿದೆ ! ಹುಟ್ಟುಬ್ರಾಹ್ಮಣ ಸಂಸ್ಕಾರಶರಣ ಅಂಧಶ್ರದ್ಧೆ ಜಡ ಸಂಪ್ರದಾಯ ತೊರೆದು ಸತ್ಯಾನ್ವೇಷಕನಾದೆ ! ಅಂತರ್ಜಾತಿ ವಿವಾಹ ಮಾಡಿಸಿ ಬಿಜ್ಜಳನಾಸ್ಥಾನ ಮಂತ್ರಿ ನೀನು ಗಡೀಪಾರಿಗೀಡಾದೆ! ಸಮಾಜ ಸುಧಾರಕನಾದೆ ಕಾಯಕವೇ ಕೈಲಾಸವೆಂದೆ ನುಡಿದಂತೆ ನಡೆಯೆಂದೆ ಅಂತರಂಗಶುದ್ಧಿಯೇ ಮಿಗಿಲೆಂದೆ ಜ್ಞಾನವೇ ಬಂಢಾರವೆಂದು ನೀ ಭಕ್ತಿ ಬಂಢಾರಿಯಾದೆ ! ಆಚಾರವೇ ಸ್ವರ್ಗವೆಂದೆ ಅನಾಚಾರವೇ ನರಕವೆಂದೆ ಅನುಭವ ಮಂಟಪದೊಳು ಮಹಾಜ್ಞಾನಿಯಾದೆ […]

ಕಾವ್ಯಯಾನ

ಬಸವಣ್ಣ ಡಾ.ಪ್ರಸನ್ನ ಹೆಗಡೆ ಅಣ್ಣ ಬಸವಣ್ಣನೆಂದರೆ ಬಿಜ್ಜಳ ಮಂತ್ರಿಯೊಂದೇ ಅಲ್ಲ ಸಾವಿರದ ಬೀಜ ಬಿತ್ತಿದ ಮಹಾ ಮಂತ್ರ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೆ ವಚನಕಾರನಲ್ಲ ಹೊಸ ವಿಚಾರ ಸೃಜಿಸಿದ ವಿವೇಕ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಶಿವಶರಣನಲ್ಲ ಶಿವ ಚರಣ ಮುಟ್ಟದಾ ವಿಶ್ವ ಮೂರ್ತಿ ಅಣ್ಣ ಬಸವಣ್ಣನೆಂದರೆ ವಿಚಾರವಾದಿಯೊಂದೇ ಅಲ್ಲ ಶಿಷ್ಟಾಚಾರ ಪಾಲಿಸಿದ ಇಷ್ಟ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಲಿಂಗ ಪಿಡಿದವನಲ್ಲ ಲಿಂಗವನ್ನೇ ಮೆಚ್ಚಿಸಿದ ಜ್ಞಾನ ಮೂರ್ತಿ ಅಣ್ಣ ಬಸವಣ್ಣನೆಂದರೆ ಜ್ಞಾನ ಸಾಗರವಷ್ಟೇ ಅಲ್ಲ ಸರ್ವರನೂ […]

ಕಾವ್ಯಯಾನ

ಕರೋನ ಕರೋನಾ.. ವಾಣಿ ಮಹೇಶ್ ಅತ್ತ ಹೋಗ್ ಬ್ಯಾಡಿ ಕರೋನಾ ಐತೆ ಇತ್ತ ಬರ್ ಬ್ಯಾಡಿ ಕರೋನಾ ಐತೆ ಎತ್ತಾ ಹೋದ್ರೂನೂ ಪೋಲೀಸು ಕಾಟ ಎತ್ತಾ ಬಂದ್ರೂನೂ ವೈದ್ಯರಾ ಕಾಟ ಏನು ಮಾಡೋದಪ್ಪ… ಹೆಂಗಿರೋದಪ್ಪಾ..? ಮನೆಯಲ್ಲಿ ಕುಂತೂ.. ನಿಂತೂ.. ಸಾಕಾಗೋಗೈತೆ.. ಅಯ್ಯೋ ಸಾಕಾಗೋಗೈತೆ // ಪಕ್ಕದಾ ಮನೆಯಾ ಇಣುಕಿ ನೋಡಲೂ ಭಯವಾಗುತೈತೆ ಯಾಕೋ.. ಏನೋ.. ಬಂದಾ.. ಕೆಮ್ಮು ನೋಡಿದಾ ಜನ ದೂರ ಸರಿಸಿಯೇ ಬಿಟ್ಟರಲ್ಲ!!! ಅಯ್ಯೋ ಓಡಾಡ್ಸಿ ಬಿಟ್ಟರಲ್ಲ..!! ಬೆಳಗಿಂದಾ.. ಮೈ ಬೆಚ್ಗೆ.. ಊರೆಲ್ಲಾ ಸುತ್ತೋಕೆ ಹೋಗಿದ್ನಲ್ಲ […]

ಕಾವ್ಯಯಾನ

ಅಂತಿಮಯಾತ್ರೆ ಹರೀಶ ಕೋಳಗುಂದ ಉಸಿರು ಬಿಗಿ ಹಿಡಿದಿದೆ, ಎದೆಬಡಿತ ಕ್ಷೀಣ. ಕೆಲವೇ ಸಮಯ ಬಾಕಿ. ಪಸೆಯಾರಿದ ಗಂಟಲಿಗೆ ಕಡೆಯ ಬಯಕೆ, ಗುಟುಕು ಗಂಗಾಜಲ ಮಾತ್ರ. ಮತ್ತೇನೂ ಬೇಡ. ಉರಿವ ಹಣತೆಯ ಸೊಡರು ಬೀಸುಗಾಳಿಗೆ ತುಯ್ದಾಟ….! ಕಾಲ ಮೀರುತ್ತಿದೆ, ಸಾಸಿವೆಯ ಸಾಲಕ್ಕೆ ಹೋದವಳು ಇನ್ನೂ ಮರಳಿಲ್ಲ, ದಾರಿಯಲಿ ಬುದ್ಧ ಸಿಕ್ಕಿರಬೇಕು. ಕಾಲವಶದಲ್ಲಿ ಸಾವಿತ್ರಿಯೂ ಲೀನ. ಪುರುದೇವನ ವರ್ತಮಾನವೂ ಇಲ್ಲ. ಕಣ್ಣು ಕವಿಯುತ್ತಿದೆ, ಚಾಚಿ ಮಲಗಿದ ದೇಹ ಅಸಾಧ್ಯ ಭಾರ. ಸುತ್ತ ಕತ್ತಲೆಯ ಕೂಪ, ಏಕಾಂಗಿ ಭಾವ, ಹಠಾತ್ತನೆ ಯಾರದೋ […]

ಕಾವ್ಯಯಾನ

ಶಾಯರಿಗಳು ಮರುಳಸಿದ್ದಪ್ಪ ದೊಡ್ಡಮನಿ (ಕೂದಲಾ)                                                                            ನಿನ್ನ ಕೂದಲ ಹಾಂಗ ಹಗೂರಕ ನಿನ್ನ ಗಲ್ಲಕ್ಕ ಹಾರಿಕೊತ ಮುತ್ತಿಡತಾವು ಅವು ಎಷ್ಟು ಪುಣ್ಯಾ ಮಾಡ್ಯಾವು. ನೀ ಬಾಚಿ ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ಹುಚ್ಚು ಬಿಡಬೇಕು ಅವನ್ನೋಡಿದ ಹರೇದ ಹುಡುಗರಿಗೆ ಹುಚ್ಚು ಹಿಡಿ ಬೇಕು.  ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ನವಿಲು ಕುಣದಂಗಕ್ಕೈತಿ ನವಿಲಿನ ಕುಣತಕ್ಕ ನನಗರ ಒಂದ್ ನಮೂನಿ ಆಕ್ಕೈತಿ. ನಿನ್ನ ಮುಂಗುರುಳು ಎಷ್ಟು ಚಂದ ಮುಖದ ಮ್ಯಾಗ ಹಾರಾಡತಾವು ಅವುಕ ಸಲಿಗಿ ಕೊಟ್ಟಿ ಅಂತ ಕಾಣತೈತಿ ಎಲ್ಲೆಂದ್ರಲ್ಲಿ […]

ಅನುವಾದ ಸಂಗಾತಿ

ಇನ್ನಿಲ್ಲ ಕ್ಲೀಷೆಗಳು ಮೂಲ: ಆಕ್ತೇವಿಯೋ ಪಾಜ಼್  ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಸು೦ದರ ಮುಖಸೂರ್ಯನಿಗೆ ದಳ ಬಿಚ್ಚಿ ಕೊಳ್ಳುವ ಡೈಸಿ ಹೂವಿನ ಹಾಗೆನೀನೂ ತೆರೆ ನಿನ್ನ ಮುಖವನ್ನು ನನಗೆಪುಟಗಳನು ತೆರೆದ೦ತೆ ಪತ್ರಿಕೆಯ ಒಳಗೆ. ಸಮ್ಮೋಹಕ ಮುಗುಳು ನಗೆಯಓ, ನಿಯತಕಾಲಿಕೆಯ ಸು೦ದರಿಮರುಳಾಗಿ ಬಿಡುವರು ಮ೦ದಿ ನಿನ್ನ ಮೋಡಿಗೆ. ಎಷ್ಟು ಕವನಗಳು ಹುಟ್ಟಿಕೊ೦ಡಿಹವು ನಿನಗಾಗಿ?ಎಷ್ಟು ಜನ “ಡಾ೦ಟೆ” ಗಳು ಬರೆದಿಹರು ನಿನಗಾಗಿ?ಓ, ಬಿಯಾಟ್ರಿಸ್,ಕಾಡುವ ನಿನ್ನ ಮಾಯೆಸೃಜಿಸುವುದು ಭ್ರಮೆ. ಆದರಿ೦ದು, ಮತ್ತೊ೦ದು ಕ್ಲೀಷೆಯಲಿಬರೆಯುವುದಿಲ್ಲ ಈ ಕವಿತೆ ನಿನಗಾಗಿಇಲ್ಲ, ಇನ್ನಿಲ್ಲ ಕ್ಲೀಷೆ. ಯಾರ ಸೌ೦ದರ್ಯಅವರ […]

ಕಾವ್ಯಯಾನ

ಗಝಲ್ ಎ. ಹೇಮಗಂಗಾ ಸ್ಫಟಿಕದಂತೆ ಸದಾ ನಿರ್ಮಲ ಹೃದಯದವನು ನನ್ನ ರಾಜಕುಮಾರ ಕನಕದಂತೆ ಸದಾ ಹೊಳೆಯುವ ರೂಪದವನು ನನ್ನ ರಾಜಕುಮಾರ ಸವಿಮಾತಿನಲಿ ಮೊಗ್ಗು ಮನಸ ಅರಳಿಸಿದವನು ನನ್ನ ರಾಜಕುಮಾರ ಕಿರುನಗೆಯಲಿ ಮೋಡಿ ಮಾಡುತ ಚಿತ್ತ ಕಲಕಿದವನು ನನ್ನ ರಾಜಕುಮಾರ ಬೆಂಗಾಡಾದ ಬಾಳಲಿ ಚೈತ್ರ ಮೂಡಿಸಿದವನು ನನ್ನ ರಾಜಕುಮಾರ ಒಲವಿನಾರಾಧನೆಯೇ ತಪವೆಂದು ತೋರಿದವನು ನನ್ನ ರಾಜಕುಮಾರ ಸಪ್ತಪದಿಯಲಿ ಒಂದಾಗಿ ಸಗ್ಗವನೇ ಸೃಜಿಸಿದವನು ನನ್ನ ರಾಜಕುಮಾರ ಮಧುರ ಮಿಲನದ ನಶೆಯಲಿ ಮೈ ಮರೆಸಿದವನು ನನ್ನ ರಾಜಕುಮಾರ ತೋಳಬಂಧನದಿ ಪಿಸುಮಾತುಗಳ ಉಸುರಿದವನು […]

ಕಾವ್ಯಯಾನ

ಶಂಕಿತರು-ಸೊಂಕಿತರು ನಾಗರಾಜ ಮಸೂತಿ.. ಹೆಜ್ಜೆ ಗುರುತುಗಳು ಮಾಯವಾಗಿ ಕಂಗಾಲದ ರಸ್ತೆಗಳು, ಮೇಲ್ಮುಖವಾಗಿ ಮುಗಿಲನ್ನೆ ದಿಟ್ಟಿಸುವ ಗಿಡಮರಗಳು, ಗಿಜಗೂಡುವ ಸರಕಾರಿ ಕಛೇರಿಗಳ ಖಾಲಿ ಮನಸ್ಥಿತಿಯ ಗೋಡೆಗಳು, ಬೆಳಕು ಕಾಣದೆ ಕತ್ತಲಾವರಿಸಿದ ದವಾಖಾನ ಕೋಣಿಗಳು, ಫಿನಾಯಿಲ್ ವಾಸನೆ ಆವರಿಸಿಕೊಂಡು ತಳತಳ ಅನ್ನುತ್ತಿವೆ ಅಮವಾಸ್ಯೆ ಪೂಜೆಗೆ ಸಿದ್ಧವಾದಂತೆ, ಓಣಿಯ ಬೀದಿಗಳೆಲ್ಲ ಲೊಚುಗುಟ್ಟುತ್ತಿವೆ ಸಿಂಗಾರಗೊಂಡು, ಗಟಾರಗಳೆಲ್ಲ ಕಂದಮ್ಮಗಳಂತೆ ಪೌಡರ್ ಬಳಿದುಕೊಂಡು ವಧು ವರರ ವೇದಿಕೆಗೆ ಸಿದ್ಧವಾದಂತಿವೆ ಸಂಜೆ ಹೊತ್ತಿಗೆ ಕತ್ತಲೆ ಮೆತ್ತಿಕೊಂಡ ಆವರಣಕ್ಕೆಲ್ಲ ಬೀದಿ ದೀಪಗಳು ಬೆಳಕು ಹರಿಸಿ, ಕಛೇರಿ ಕಟ್ಟಡಗಳು, ಲೈಟ್ […]

ಕಾವ್ಯಯಾನ

ಯಾತ್ರಿಕ ವಿಭಾ ಪುರೋಹಿತ್ ಜಗದೆದೆಯ ತುಂಬ ಹತ್ತಿ ಉರಿಯುತ್ತಿದೆ ಬತ್ತಲಾರದ ಜ್ವಾಲೆ. ಹಾದಿ ಮುಗಿಯುವುದಿಲ್ಲ ಮುಗಿದರದು ಹಾದಿಯಲ್ಲ ! ಯಾತ್ರೆ ಮುಂದುವರೆದಿದೆ ಹೊಸ ಹೊಸ ದೇಶ ಪ್ರದೇಶವನು ತೆಕ್ಕೆಯೊಳಗೆ ನುಂಗಿದೆ. ನೂರು,ಸಾವಿರ,ಲಕ್ಷಗಳ ದಾಟುತ್ತಲಿದೆ ರಕ್ತಬೀಜಾಸುರನ ನೆತ್ತರಿನ ಹನಿಗಳಿಗಿಂತ ವಿಷಾಣು ಹರಡುತ್ತ,ಹಬ್ಬುತ್ತ ರಕ್ಕಸನಂತೆ ಮೀರಿ ಬೆಳೆಯುತ್ತಲಿದೆ ಮನುಕುಲವ ಕಂಗೆಡಿಸುತ್ತಿದೆ. ಹೊರಗಿಂದ ಬಂದವರು ಸುಮ್ಮನೆ ಬರಲಿಲ್ಲ ಇಂದಿಗೂ ಹಂಚುತ್ತಲೇ ಇರುವರು ಬೆನ್ನು ಹಿಂದೆ ನಿಂತು ಚೂರಿ ಹಾಕಿದರು ಕಾಡುಪಾಪದ ರುಚಿಗೆ ಸೋತವರು ಸಂಜೆ ಹಕ್ಕಿಯ ದನಿಗೆ ಕಿವುಡರಾದವರು ನೋವು ಕೇಕೆ […]

Back To Top