ಕಾವ್ಯಯಾನ

‘ಪ್ರಶ್ನೆ ದಾಳ’

ವಸುಂಧರಾ ಕದಲೂರು. 

ಎಳೆ ಹುಡುಗನನ್ನು ಮಲೆ ಮೇಲೆ ಕೂರಿಸಿ
ಆತ, ಮೊಲೆ ಕಾಣಬಾರದೆಂದು ಬಿಡುತ್ತಾರೆ !

ಹತ್ತಲು ೧೮ ಏಕೆ ..? ಉತ್ತರವಿಲ್ಲದವರ
ಬಳಿ ಇಂತಹ ಪ್ರಶ್ನೆ ಕೇಳಬಾರದು.

ಎರಡೊಂಬತ್ತಲಿ ಹದಿನೆಂಟೆಂದು ಒಂದು
ಗರ್ಭಾವಧಿಯ ಅವಧಿಯ ಮರೆತು ಬಿಡುತ್ತಾರೆ.

ಬೀಜ ನಾಟಿ, ಬೇರು ಚಿಗುರಿ ಹೂವೋ
ಕಾಯೋ ಅರಳಿಕೊಳಲು ಒಂದ್ಹೊಂಬತ್ತು.

ಹೊಟ್ಟೆ ಮಗುಚಿ ಅಂಬೆಗಾಲಿರಿಸಿ, ಬಾಯ
ತೊದಲು ಶುರುವಿಗೆ ಇನ್ನೊಂದು ಒಂಬತ್ತು. .

ಆಯಿತಲ್ಲ ಹದಿನೆಂಟು..! ಪ್ರತೀ ಪ್ರಶ್ನೆಗೂ
ಒಂದು ಉತ್ತರವಿದೆ ಒಪ್ಪಿತವಾದರೆ.

ಆದರೂ ತನ್ನ ಮಗುವ ತಾನೇ
ಕಾಣಬಾರದೇಕೆನುವ ಉತ್ತರವಿರದ
ಒಂದು ‘ಪ್ರಶ್ನೆ ದಾಳ’ ಮರಳಿ ಉರುಳಿ
ಉರುಳಿ, ತಾಯ ಹೃದಯ ನರಳಿದೆ..

**********

Leave a Reply

Back To Top