ಕಾವ್ಯಯಾನ

ಬಸವಣ್ಣ

ಡಾ.ಪ್ರಸನ್ನ ಹೆಗಡೆ

ಅಣ್ಣ ಬಸವಣ್ಣನೆಂದರೆ
ಬಿಜ್ಜಳ ಮಂತ್ರಿಯೊಂದೇ ಅಲ್ಲ
ಸಾವಿರದ ಬೀಜ ಬಿತ್ತಿದ
ಮಹಾ ಮಂತ್ರ ಮೂರ್ತಿ

ಅಣ್ಣ ಬಸವಣ್ಣನೆಂದರೆ
ಬರೆ ವಚನಕಾರನಲ್ಲ
ಹೊಸ ವಿಚಾರ ಸೃಜಿಸಿದ
ವಿವೇಕ ಮೂರ್ತಿ

ಅಣ್ಣ ಬಸವಣ್ಣನೆಂದರೆ
ಬರೇ ಶಿವಶರಣನಲ್ಲ
ಶಿವ ಚರಣ ಮುಟ್ಟದಾ
ವಿಶ್ವ ಮೂರ್ತಿ

ಅಣ್ಣ ಬಸವಣ್ಣನೆಂದರೆ
ವಿಚಾರವಾದಿಯೊಂದೇ ಅಲ್ಲ
ಶಿಷ್ಟಾಚಾರ ಪಾಲಿಸಿದ
ಇಷ್ಟ ಮೂರ್ತಿ

ಅಣ್ಣ ಬಸವಣ್ಣನೆಂದರೆ
ಬರೇ ಲಿಂಗ ಪಿಡಿದವನಲ್ಲ
ಲಿಂಗವನ್ನೇ ಮೆಚ್ಚಿಸಿದ
ಜ್ಞಾನ ಮೂರ್ತಿ

ಅಣ್ಣ ಬಸವಣ್ಣನೆಂದರೆ
ಜ್ಞಾನ ಸಾಗರವಷ್ಟೇ ಅಲ್ಲ
ಸರ್ವರನೂ ಕ್ಷಮಿಸಿದ
ಕ್ಷಮಾ ಮೂರ್ತಿ.

*******

Leave a Reply

Back To Top