Category: ಕಾವ್ಯಯಾನ

ಕಾವ್ಯಯಾನ

ಹೃದಯಂಗಮ

ಕವಿತೆ ಹೃದಯಂಗಮ ಸ್ಮಿತಾ ಭಟ್ ನೀನಿರುವುದೇ ಬಡಿದುಕೊಳ್ಳಲುಅನ್ನುವಾಗಲೆಲ್ಲಒಮ್ಮೆ ಸ್ತಬ್ಧವಾಗಿಬಿಡುಎನ್ನುವ ಪಿಸುಮಾತೊಂದ ಹೇಳಬೇಕೆನಿಸುತ್ತದೆ! ‘ಹೃದಯದ ಮಾತು ಕೇಳಬೇಡಬುದ್ಧಿಯ ಮಾತು ಕೇಳು’ಎನ್ನುವ ಫಿಲಾಸಫಿಗಳಎದೆಗಾತುಕೊಳ್ಳುವ ಕಿವಿಗಳಿಗೆ ಇಯರ್ ಪೋನ್ ಜೋತು ಬಿದ್ದುಲಬ್ ಡಬ್ಒಂಟಿಬಡಿತ! ಅಡಿಯಿಂದ ಮುಡಿಯವರೆಗೂಪಾರುಪತ್ಯದ ಅಧಿಕಾರ ಹೊತ್ತರೂನಿರಂತರ ಚಲನೆಯಲ್ಲಿ ನಿಲ್ಲುವ ಅಧಿಕಾರವಿಲ್ಲ! ಚೂರೇ ಚೂರು ದಣಿವಿಗೆ ಕೊಸರಿಕೊಂಡರೂಭುಗಿಲೇಳುವ ಭಯದ ಹನಿ. ಇರ್ರಿ, ಹೃದಯ ಬಡಿತ ಶುರುವಾಗಲಿ ಈಗೇನೂ ಹೇಳುವದಿಲ್ಲ –ಎದೆಯ ಮೇಲೆ ಕೈ ಇಟ್ಟು ಸ್ಕ್ಯಾನಿಂಗ್ ಕೋಣೆಯಿಂದ ಹೊರ ಬರುವ ಜೀವಮನದೊಳಗಿನ ಪ್ರತೀ ಭಾವಕ್ಕೂ ಸ್ಪಂದಿಸಿ –ಲಬ್ ಡಬ್ ಮತ್ತಷ್ಟು […]

ಕ್ಷಮಿಸಲಾಗದು

ಕ್ಷಮಿಸಲಾಗದು ಸುಧಾ ಹಡಿನಬಾಳ ಹೇ ನಿಷ್ಕರುಣಿ ನಿರ್ಗುಣಿಕರುಣೆಯಿಲ್ಲದ ನಿರ್ದಯಿ ಸಿಂಹಿಣಿಸಾವು ಬರಲೆಂದುದಿನವೂ ಹಂಬಲಿಸುವವರಮೇಲಿಲ್ಲ ನಿನ್ನ ಕರುಣಇನ್ನೂ ಬಾಳಿ ಬದುಕಬೇಕಾದಮುಗ್ಧ ಜೀವಗಳ ಸಂಚು ಹಾಕಿಪ್ರಾಣ ಹೀರಿ ಹೊತ್ತೊಯ್ಯುವನಿನ್ನ ಭಯಾನಕ ಪರಿಸಹಿಸಲಾಗದು ನಿನ್ನ ಕ್ಷಮಿಸಲಾಗದುಯಾಕೆ ನಿನಗೆ ಯಾರ ಯಾರಮೇಲೊ ಕಾಕ ದೃಷ್ಟಿ..?ಒಂದು ಸಣ್ಣ ಸುಳಿವೂನೀಡದೆ ಕಸಿದುಕೊಳ್ಳುವೆಯಲ್ಲಮೊಲೆಯನುಂಬ ಕಂದಮ್ಮಗಳ ತಾಯ್ಗಳಇನ್ನೂ ಬಾಳಿ ಬದುಕಿಎಲ್ಲರಿಗೂ ಬೇಕಾದವರಜೀವಕ್ಕೆ ಜೀವವಾಗಿ ಅರಿತುಬೆರೆತ ಸತಿ ಪತಿಗಳಲ್ಲೊಬ್ಬರಇಳಿ ವಯದಲ್ಲಿ ಊರುಗೋಲಿನಂತೆಆಸರೆಯಾಗಿ ನಿಂತವರಪಾಪ ಪುಣ್ಯ ಎಲ್ಲ ಕಂತೆಪಾಪಿಗಳಿಗಲ್ಲಿ ನಿಶ್ಚಿಂತೆಮುಗ್ಧ ಮಾನವಂತರಿಲ್ಲಿನಿನ್ನ ತೋಳ ತೆಕ್ಕೆಯಲ್ಲಿನಿನಗಿಲ್ಲ ಯಾರ ಮೇಲೂದಯೆ, ಪ್ರೀತಿ, ಕರುಣನಿನ್ನ ಹೆಸರೆ […]

ಸ್ನೇಹ

ಕವಿತೆ ಸ್ನೇಹ ನೂತನ ದೋಶೆಟ್ಟಿ ಶುಭ್ರ ಬೆಳಗಿನಲ್ಲಿನೀಲಿ ಆಕಾಶಬಾನ ತುಂಬೆಲ್ಲನಗುಮೊಗದ ಬಿಳಿ ಮೋಡ ಕವಿ ಕಲ್ಪನೆಯಗರಿ ಬಿಚ್ಚುವ ಹೊತ್ತುಹೂ ದಳಗಳ ತುದಿಎಲೆಯಂಚಿನ ಬದಿಮಣಿ ಮಾಲೆ ಸೃಷ್ಟಿ ನೇಸರನಿಟ್ಟ ರಂಗೋಲಿಕಾಮನಬಿಲ್ಲಿನಕಾವ್ಯ ರಂಗಿನ ಮುನ್ನುಡಿ ಹೊತ್ತೇರಿ ಸುಡು ಬಿಸಿಲುನೆತ್ತಿಯ ಸೂರ್ಯನೇಕಳಕಳಿಸಿ ನೀಡಿದತಂಪು ನೆರಳು ನಸು ನಾಚಿ ಮುತ್ತಿಕ್ಕಿಇಳೆಯ ಬೀಳ್ಕೊಟ್ಟುದೂರ ಸರಿವನೋವ ಮರೆಯಲುಚಂದ್ರಗೆ ಅಹವಾಲು ರಾತ್ರಿ ಕಳೆದುಅರುಣೋದಯಕಲ್ಪನೆಯಹರಿವ ತೊರೆಯಸಲಲ ನಿನದರವರವ ಇದು ಸ್ನೇಹಬಾನು, ಭೂಮಿನೀರು , ನೆಲಚಂದ್ರಮನ ಬಿಳುನೊರೆ ಕಲಿಯಬೇಕುಇದರಿಂದಸ್ನೇಹದ ಗುಟ್ಟುಸಮರಸದ ನಂಟಲ್ಲದೆಬದುಕಲೇನು ಉಂಟು? ***********************

ಉರಿಯುತ್ತಿದ್ದೇನೆ…. ಅಯ್ಯೋ!

ಕವಿತೆ ಉರಿಯುತ್ತಿದ್ದೇನೆ…. ಅಯ್ಯೋ! ಕಾತ್ಯಾಯಿನಿ ಕುಂಜಿಬೆಟ್ಟು ಸಾವಿನ ಕೆಂಡದ ಮೇಲೆಓಡುತ್ತಲೇ ಇರುವ ಲಾಕ್ಷಾದೇಹ…ಲೆಪ್ಪದ ಗೊಂಬೆ ನಾನುನಿಂತರೆ ಕರಗುತ್ತದೆ ಕೋಮಲ ಅರಗು ಮೈ…ಆತ್ಮ ಹಾರಿ ಇನ್ನೊಂದು ಮೈಯನ್ನುಪಡೆದು ಹೊಸದಾಗಿ ಹುಟ್ಟುತ್ತೇನೆಮರಳಿ ಮರಳಿ ನಾನು ನನ್ನ ಆತ್ಮ ನನ್ನದೆಂದುಕೊಂಡಿದ್ದೆಆದರೆ…ಇದು ನನ್ನದಲ್ಲವೇ ಅಲ್ಲ!ತಲೆ ತಲಾಂತರದಿಂದ ದೇಹದಿಂದ ದೇಹ ದೇಹದಿಂದ ದೇಹದೇಹ ದೇಹ ದೇಹಗಳನ್ನು ದಾಟಿಈಗ ಈ ದೇಹದೊಳಗೆಸೇರಿಕೊಂಡಿದೆಹಾಗಾದರೆ ನಾನು ಯಾರು?ಈ ದೇಹವೇ? ಆ….. ಆತ್ಮವೇ? ದೇಹದಿಂದ ದೇಹಕ್ಕೆ ಹಾರುವ ಅತೃಪ್ತ ಹೆಂಗಸಿನಂತೆಅಥವಾ ಗಂಡಸಿನಂತೆಹಾದರಗಿತ್ತಿ ಅಥವಾ ಹಾದರಗಿತ್ತವಲ್ಲವೇ ದೇವರೇಈ ಆತ್ಮಗಳು?ಹೊಸ ಅಂಗಿ ಹೊಸ […]

ನೆನಪ ಕಟ್ಟೋಣ

ಕವಿತೆ ನೆನಪ ಕಟ್ಟೋಣ ಸುಧಾರಾಣಿ ನಾಯಕ್ ಹೇಗೂ ದೂರಾಗುವವರಿದ್ದೆವೆಬಾ..ಕಡಲದಂಡೆಯ ಗುಂಟಒಂದಿಷ್ಟು ಹೆಜ್ಜೆ ಹಾಕೋಣನಾಳೆಯ ಮಾತೇಕೆ,ಕವಲು,ಕವಲು,ನಿನ್ನೆಯದೇ ಬೇಕುನೆನೆದುಕೊಳ್ಳೊಣ ಸಾವಿರ ಸಾವಿರ ಆಣೆಗಳುಸವಕಲಾಗಿದೆ,ಚಲಾವಣೆಯಿಲ್ಲದಸಂದೂಕಿನ ನಾಣ್ಯಗಳಂತೆಯಾವ ವ್ಯಥೆಯಕಹಾನಿಯು ಬೇಡಒಂದಿಷ್ಟು ನೆನಪ ಕಟ್ಟೋಣ ಕಾಡಿ,ಬೇಡಿ,ಮೋಹಿಸಿಮುದ್ದಿಸಿದ್ದೆಲ್ಲ ನಕಾಶೆಯಗೆರೆಗಳಂತಿದೆ ಎದೆಯಲಿಮಾತು,ನಗು ಯಾವುದುಮುಗಿದಿಲ್ಲ,ಮುಗಿಯದಮಾತುಗಳ ಸೊಲ್ಲೇ ಬೇಡಒಂದಿಷ್ಟು ಜೊತೆ ಸಾಗೋಣ ಅರ್ಧರ್ಧ ಹೀರುವ ಚಹಾ,ತಾಸಿನ ಪರಿವೇ ಇಲ್ಲದೇವಿಷಯವೂ ಇರದೇಮಾತಾಡಿ,ಕಿತ್ತಾಡಿ ಕಳೆದದಿನಗಳೆಲ್ಲ‌ ನಾಳೆಗೆಪಳೆಯುಳಿಕೆಯಾಗಬಹುದುಬಾ ,ಒಂದಿಷ್ಟುಒಪ್ಪವಾಗಿಸೋಣ ಅಲೆಅಲೆಯುಕೊಡುವ ಕಚಗುಳಿ,ಅಪ್ಪಿ ಗುಯ್ ಗುಡುವಆರ್ದ್ರ ಗಾಳಿ,ನದಿ ನೀರು ಸಹ ಉಪ್ಪಾಗುವಹುಚ್ಚು ಮೋಹದ ಪರಿ,ಎಲ್ಲವನೂ ನಾಳೆಗೆನಮ್ಮೊಲವಿಗೆ ಸಾಕ್ಷಿಯಾಗಿಸಬೇಕಿದೆನೀ ತೊರೆದಾಗಲೂ,ನೀನಿರುವ ಭ್ರಮೆಯಲಿನಾ ಬದುಕಬೇಕಿದೆ,ಬಾ..ಸುಳ್ಳಾದರೂ ಒಂದಿಷ್ಟುಕನಸ ಕಟ್ಟೋಣ ********************************************

ಉಳಿವಿಗಾಗಿ ಹೋರಾಟ

ಕವಿತೆ ಉಳಿವಿಗಾಗಿ ಹೋರಾಟ ಲಕ್ಷ್ಮೀದೇವಿ ಕಮ್ಮಾರ ಇತಿಮಿತಿಗಳ ಪರದೆ ಹರಿದುಬಯಲಲಿ ಒಂದಾಗಲುನಿಂತಲ್ಲೇ ನಿಂತು ಕೋಳೆಯುವ ಮೋದಲುಸಾಗಬೇಕು ನಾವು ಮುಂದು ಮುಂದುಹೋಸ ದಾರಿ ಕಂಡುಕೊಂಡು ಅವರ ಜೀವನ ಅವರಿಗೆನಮ್ಮ ಜೀವನದ ದಾರಿ ನಮಗೆನಾವೆ ಸವಿಸಬೇಕುಹೊಟ್ಟೆ, ಬಟ್ಟೆಗೆ ಗಟ್ಟಿ ನೆಲೆ ಕಂಡುಕೊಳ್ಳಲುನಾವು ಹೆಣಗಾಡಬೇಕು ಹುಚ್ಚು ಮನದ ಹಂಬಲಕೊಯಾರ ಮೇಲಿನ ರೊಚ್ಚಿಗೊಭಂಡಾಯದ ಕಿಚ್ಚಿಗೊಹಾಕಿಕೊಂಡ ಕಗ್ಗಂಟುಗಳ ಬಿಚ್ಚುಕೊಂಡು ನಮ್ಮಳುವಿಗಾಗಿ ಗೊಡ್ಡುಸಂಪ್ರದಾಯ,ಮರ್ಯಾದೆಗಳ ಮಡುವಿನಿಂದ ಮೇಲೆ ಬಂದುಗಟ್ಟಿನೆಲೆ ಕಾಣಬೇಕುನಮ್ಮೋಳಗಿನ ಶಕ್ತಿ ಅನಾವರಣಗೊಳ್ಳಬೇಕು ಕತ್ತಲೆಯಲಿ ಭೂಗತ ವಾಗುವ ಬದಲುಬೆಳಕಿಗೆ ಬಿದ್ದು,ಬಾಳು ಬೆಳಗಬೇಕುಕತ್ತಲಲಿದ್ದವರಿಗೆ ದೀಪದುಡಗರೆನಾವು ನೀಡಬೇಕು *******************************

ನಿನ್ನ ಪ್ರೀತಿಗೆ ಅದರ ರೀತಿಗೆ

ಕವಿತೆ ನಿನ್ನ ಪ್ರೀತಿಗೆ ಅದರ ರೀತಿಗೆ ಜಯಶ್ರೀ ಭ.ಭಂಡಾರಿ. ಎಲ್ಲಿಯೋ ಇದ್ದ ನೀನುನನ್ನಲ್ಲಿ ಪ್ರೀತಿ ಮೂಡಿಸಿದೆನಿನ್ನ ತಿರಸ್ಕರಿಸುತಲಿದ್ದ ನಾಒಲವಿನ ಸಿರಿಯಾದೆ ನಿನ್ನಲಿ ಸೆರೆಯಾದೆ ನೀ ಕವಿಯಾದೆ ನಾ ಕವಿತೆಯಾದೆನೀ ಗೀತೆಯಾದೆ ನಾ ಭಾವವಾದೆನಿನ್ನ ರಾಗವಾದರೆ ನಾ ಪಲ್ಲವಿಯಾದೆನೀ ಹೆಜ್ಜೆಯಾದರೆ ನಾ ಗೆಜ್ಜೆಯಾದೆ ಬಿಟ್ಟಿರಲಾರದ ನೆರಳಾದೆವುಜೀವಕೆ ಜೀವ ನಂಟಾದೆವುಬಿಡಿಸಲಾರದ ಬಂಧಿಗಳಾದೆವುಎಂದೆಂದಿಗೂ ಒಲವ ಜೇನಾದೆವು ಮೌನಿ ಅವನಿಗೆ ಮಾತಾದೆನಗುವಿಗೆ ಅಮೃತಧಾರೆಯಾದೆಕಂಗಳಕಾಂತಿಗೆ ಜ್ಯೋತಿಯಾದೆಉಸಿರಿಗೆ ಚೈತನ್ಯದ ಚಿಲುಮೆಯಾದೆ ದೂರದಲಿ ಇರುವವ ಬಂಗಾರದಂತವಬಾಳದಾರಿಗೆ ಗುರಿ ತೋರಿದವಮನದನ್ನೆಗೆ ಕನಸತೋರಣವಾಗಿಸಿದವಬೆವರಗುಳಿಕೆನ್ನೆಯವ ನನ್ನವನವ ಕಣ್ಣಮಿಂಚಿಗೆ ಸೋತುಬಂದವಮುತ್ತುಗಳ ಮಾಲೆ ತೊಡಿಸಿದವಕೊರಳ […]

ಅತೀತ

ಕವಿತೆ ಅತೀತ ಪವಿತ್ರಾ ಕಾಯುತಿಹರಲವರಲ್ಲಿನಿನ್ನಾಗಮಕೆ…ಇಹದ ಜಂಜಡದ ಜಾತ್ರೆಯಜಯಿಸದಲವರುಕೆಲವರದು ಪಲಾಯನಪರದ ಸುಖವನರಸಿ. ಸೋಲಿನಲು ಗೆಲುವುಗೆಲುವಿನಲಿ ನಗೆ ಬುಗ್ಗೆಎನಮೀರಿಪರೆ ಶಾಂತಿ ನೆಮ್ಮದಿಯಲಿಕೇಕೆ ಕಿಲಕಿಲ ಕೇಳರಿತ ನಗುವ ಮೊಗಸೊಗದ ಸೋಗೆಯಲೆ ಹಲವರಹೊಟ್ಟೆಗೆ ಕಿಚ್ಚಿಡುವ ಕಾಯಕವುಸಾಗುತಲಿ ಬೀಗುತಲಿ ಬಿಡದೆ ಎಲ್ಲರನೂ ತನ್ನಾಲಿಂಗನದತೆಕ್ಕೆಯೊಳು ಆಹುತಿಗೈವ ವಿಧಿಕೂಟಮಾಟ ತಪ್ಪಿಪರೆ ಅವರುಇವರಿಂದು ನಾಳೆ ಅವರುಎಲ್ಲರದೊಂದೊಂದು ನಿಗಧಿ ದಿನದಿನಪನಿಗೆ ಭೇದವಿರದೆ ಬಿಡುವಿರದೆನಡೆದುದೇ ಹಾದಿ. ಮಕ್ಕಳದು ಬೇಡ ಇರಲಿನ್ನಷ್ಟು ದಿನಈಗ ತಾನೆ ಮದುವೆನಡೆ ನಾಳೆ ಬರುವೆಹಂಬಲಿಪ ಯುವಕನೋರ್ವನ ಮನವಿಗೆಮಣಿವನೇ ಅವನುಧೈತ ಧೂತ ಹೆಸರೆಂದರೆ ಭಯ ಅದಕೇನೋ ಅದರನುಭವಸಾಧುವಾಗದು ನಿಲುಕದೂ ಬಣ್ಣನೆಗೆಗಳಿಗೆ […]

ಕವಾಟಗಳ ಮಧ್ಯೆ ಬೆಳಕಿಂಡಿ

ಕವಿತೆ ಕವಾಟಗಳ ಮಧ್ಯೆ ಬೆಳಕಿಂಡಿ ಸುತ್ತು ಗೋಡೆಗಳ ಕಟ್ಟಿತೆರೆಯದ ಕವಾಟಗಳ ಮಧ್ಯೆನಾನೆಂಬ ನಾನು ಬೇಧವಳಿದುಒಂದಾಗಲಿಜೀವ ಪರಮಾತ್ಮಸಂತ ಶರಣರ ಅಹವಾಲು ನೋವಿರದ ಹಸಿದ ಸ್ವಾರ್ಥಬರಡಾದ ಎದೆಯ ಅಮೃತಬರಿದೆ ಬಡಿಯುವ ಮಿಡಿತ ಕಳೆದು ಹೋಗಿಹ ನಾವುಕದ ತಟ್ಟಿ ಕರೆಯೋಣಇಂದಲ್ಲ ನಾಳೆ ತೆರೆದೀತುತಟ್ಟಿದ ಕೈಗಳ ತಬ್ಬೀತುಸಂತ ಶರಣರು ನಕ್ಕಾರು. ***************************

Back To Top