ಉಳಿವಿಗಾಗಿ ಹೋರಾಟ

ಕವಿತೆ

ಉಳಿವಿಗಾಗಿ ಹೋರಾಟ

ಲಕ್ಷ್ಮೀದೇವಿ ಕಮ್ಮಾರ

ಇತಿಮಿತಿಗಳ ಪರದೆ ಹರಿದು
ಬಯಲಲಿ ಒಂದಾಗಲು
ನಿಂತಲ್ಲೇ ನಿಂತು ಕೋಳೆಯುವ ಮೋದಲು
ಸಾಗಬೇಕು ನಾವು ಮುಂದು ಮುಂದು
ಹೋಸ ದಾರಿ ಕಂಡುಕೊಂಡು

ಅವರ ಜೀವನ ಅವರಿಗೆ
ನಮ್ಮ ಜೀವನದ ದಾರಿ ನಮಗೆ
ನಾವೆ ಸವಿಸಬೇಕು
ಹೊಟ್ಟೆ, ಬಟ್ಟೆಗೆ ಗಟ್ಟಿ ನೆಲೆ ಕಂಡುಕೊಳ್ಳಲು
ನಾವು ಹೆಣಗಾಡಬೇಕು

ಹುಚ್ಚು ಮನದ ಹಂಬಲಕೊ
ಯಾರ ಮೇಲಿನ ರೊಚ್ಚಿಗೊ
ಭಂಡಾಯದ ಕಿಚ್ಚಿಗೊ
ಹಾಕಿಕೊಂಡ ಕಗ್ಗಂಟುಗಳ ಬಿಚ್ಚುಕೊಂಡು

ನಮ್ಮಳುವಿಗಾಗಿ ಗೊಡ್ಡುಸಂಪ್ರದಾಯ,ಮರ್ಯಾದೆಗಳ ಮಡುವಿನಿಂದ ಮೇಲೆ ಬಂದು
ಗಟ್ಟಿನೆಲೆ ಕಾಣಬೇಕು
ನಮ್ಮೋಳಗಿನ ಶಕ್ತಿ ಅನಾವರಣಗೊಳ್ಳಬೇಕು

ಕತ್ತಲೆಯಲಿ ಭೂಗತ ವಾಗುವ ಬದಲು
ಬೆಳಕಿಗೆ ಬಿದ್ದು,ಬಾಳು ಬೆಳಗಬೇಕು
ಕತ್ತಲಲಿದ್ದವರಿಗೆ ದೀಪದುಡಗರೆ
ನಾವು ನೀಡಬೇಕು

*******************************

Leave a Reply

Back To Top