ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸ್ನೇಹವೆಂದರೆ ಅದು
ದೈವ ಬೆಸೆದ ಬಂಧ ,
ಜಾತಿ , ಗೋತ್ರ , ಮತ ,
ಪಂಥ ಕೇಳದ ಅನುಬಂಧ.

ಕೃಷ್ಣ – ಸುಧಾಮ , ಕರ್ಣ – ದುರ್ಯೋದನ
ಚಿರ ಸ್ನೇಹಕೆ ಹೆಸರಾದವರು
ಸ್ನೇಹ ಎನ್ನುವ ಆಮ್ಲಜನಕ
ನಮ್ಮನ್ನು ಬದುಕುಳಿಸುತ್ತದೆ
ಸುಮಾರು ಬಾರಿ.

ಸ್ನೇಹದ ನೌಕೆ ತೇಲುತಿರಲು
ಬಾಳ ಸಾಗರದಿ,
ತೀರ ಸೇರುವ ಭರವಸೆ
ಇರುವುದು ಯಾವಾಗಲೂ.

ಸ್ನೇಹ ಒಂದು ಭಾವದ ಕೊಳಲ ದನಿ
ಸದಾ ಕೇಳುವುದು ಇಂಪಾದ ನಿನಾದ
ಸ್ನೇಹ ವೀಣೆ ಮಿಡಿಯುತಿರೆ
ಅಪಸ್ವರದ ಭಯವೆಲ್ಲಿ.

ಯಾವ ರಕ್ತ ಸಂಭಂದ ಇರದಿದ್ದರು
ನೋವಿಗೆ ಮರುಗುವ
ಕರುಳ ಬಂಧವೆ ಅಲ್ಲದೆ ಇದ್ದರು
ಕರುಣೆ ತೋರುವುದೆ ಸ್ನೇಹ…..


About The Author

Leave a Reply

You cannot copy content of this page

Scroll to Top