ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುದಿನವು
ನವ ನವೀನ ಕಂದ
ನಲಿಯುವಾಗ

ಆಟ ಚಂದವು,
ತೋದಲ್ನುಡಿ ಸಂಗೀತ
ಮಗು ಆಡಲು

ಇರುವಂತಿಗೆ
ಅರಳಿದಾಗ, ಮನ
ಮನೆ ಸೌರಭ.

ಈಶ ಗೌರೀಶ
ರಕ್ಷಿಸು ಭಗವಂತ
ಬಿಸಿಲ ಬೇಗೆ

ಉತ್ತರ ಇದೆ
ಪ್ರತಿ ಗೂಢ ಪ್ರಶ್ನೆಗೆ
ಅರಿಸು ನೋಡು

ಊಸರವಳ್ಳಿ
ಬಣ್ಣವು ಕೆಲವರ
ನಡೆ ನುಡಿಲಿ

ಎದೆಯಾಳದಿ
ದಾವನಲ, ನಯನ
ನಗುತಿರಲು,

ಏಕೆ ಮನಸ್ಸೆ?
ನಿನ್ನದಲ್ಲದ ಸಿರಿಯು
ಎಂದೂ ಸಿಗದು

ಐಶ್ವರ್ಯ ಅಂಧ
ಕಾಣನು ಯಾವದನ್ನೂ
ದೇವರೇ ಗತಿ

ಒಲವೇ ಸಿರಿ
ಅರಿತ ಮನಗಳು
ಜೊತೆ ಸಾಗಲು

ಓರೆ ನೋಟಕೆ
ಸೋತು ಶರಣು, ನವ್ಯ
ಪ್ರೇಮ ಕವನ

ಔಷಧ ನೋಡು
ನಿನ್ನ ನಗು ಕಂಡಾಗ
ನೋವು ಶಮನ


About The Author

Leave a Reply

You cannot copy content of this page

Scroll to Top