ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)ಶ್ರೀದೇವಿ. ಮ.ಗುಮ್ಮಗೋಳ.

ನೆನಪುಗಳ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ. “ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)      ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಮತ್ತು ಯೌವನ ಅಲ್ಬಂಗಳಿದ್ದಂತೆ. ಅವುಗಳನ್ನು ಮತ್ತೆ ಮತ್ತೆ ತೆರೆದು ನೋಡಿ ನೆನಪುಗಳು ಮರುಕಳಿಸುವಂತೆ ಮಾಡುತ್ತವೆ.  ಮಾತು ಬೆಳ್ಳಿ ಮೌನ ಬಂಗಾರವೆನ್ನುವ ಹಾಗೆ ಯೌವನ ಬೆಳ್ಳಿಯಾದರೆ ಬಾಲ್ಯ ಬಂಗಾರದಂತೆ.   ನಾನು ಹೈಸ್ಕೂಲಿನಿಂದ ಪೊಸ್ಟ ಗ್ರಾಜ್ಯೂಯೇಶನ ವರೆಗೆ ಓದಿದ್ದು ಧಾರವಾಡದಲ್ಲಿ. ನಾನು ಹಳ್ಳಿಯಿಂದ ಧಾರವಾಡಕ್ಕೆ ಕಲಿಯಲು ದಿನವೂ ಬಸ್ ನಲ್ಲೆ ಹೋಗುವಾಗ ಬರುವಾಗ ಅರ್ದಗಂಟೆ ಪ್ರಯಾಣ. ಈ ಬಸ್ ಪ್ರಯಾಣದ ಅನೇಕ ನೆನಪುಗಳು, ಹಾಸ್ಯ ಪ್ರಸಂಗಗಳು, ವಿಚಿತ್ರ ಘಟನೆಗಳು ನನ್ನ ಜೀವನದ ಕಪಾಟಿನೊಳಗೆ  ಭದ್ರವಾಗಿ ಕುಳಿತಿವೆ. ಅವೆಲ್ಲಾ ನನ್ನ ನೆನಪಿನ ಬುತ್ತಿಯಲ್ಲಿ ಮರೆಯಲಾರದ ಕ್ಷಣಗಳು. ಶಾಲೆಯಲ್ಲಿಯ ನೆನಪುಗಳು ಒಂದು ತೆರನಾದರೆ ಕಾಲೇಜಿನ ನೆನಪುಗಳು ಮತ್ತೊಂದು ರೀತಿಯವು. ಶಾಲೆಗೆ ಹೋಗುವಾಗ ಬೆನ್ನಿಗೆ ಹಾಕುತಿದ್ದ ಪಾಟಿಚೀಲಗಳನ್ನು ನೋಡಿ ಬಸ್ಸ ನಲ್ಲಿ ಪಕ್ಕದಲ್ಲಿ ಕುಳಿತ ಅಂಕಲ ಅಂಟಿಗಳು  “ನಿಮಗಿಂತ ನಿಮ್ಮ ಪಾಟಿಚೀಲಗಳೆ ದೊಡ್ಡುವಿವೆಯಲ್ಲಾ ತಂಗಿ ಕೊಡು ಇಲ್ಲಿ ಹಿಡಕೊತೇನಿ” ಎಂದು ಕೆಲವರು ಇಸಿದು ಕೊಳ್ಳುತ್ತಿದ್ದರು.  ಇನ್ನು ಕೆಲವರು ಅದರಲ್ಲೂ ಹಳ್ಳಿಯ ಮುದಕಿಯರು ನಮ್ಮ ಬ್ಯಾಗು ಅವರ ಬೆನ್ನಿಗೆ ತಾಗಿದ ಕೂಡಲೇ ತಮಗೇನೊ ಒಂದು ದೊಡ್ಡ ಗದಾ ಪ್ರಹಾರವೇ ಆಯಿತೊ ಅನ್ನುವಂತೆ ಬಾಯಿಗೆ ಬಂದಂತೆ “ಇವೇನು ಎಷ್ಟ ಸಾಲಿ ಕಾಲಿತಾವೋ ಏನೊ?…  ಇವಿರುದೊ ಒಂದ ಮಣಾ ಇವಕರದು ಚೀಲಾ ನೋಡ…. ಗೋಣಿ ಚೀಲಾಗೆತಿ… ಎಲ್ಲಿಂದ ಬಂದಿ ಅತಾಕ… ಮದಲ ಪಾಟಿ ಚೀಲಾ ತಗದು… ಮ್ಯಾಲ ಇಡು” ಎಂದು ಬಯ್ಯುವರು. ಬಸ್ಸಿನಲ್ಲಿ ಸಾಮಾನುಗಳನ್ನು ಇಡಲು ಮೇಲಗಡೆ ಉದ್ದಕ್ಕೆ ಒಂದು ಪಟ್ಟಿ (loner/rack) ಇರತಿತ್ತು. ನಾವು ಆಜು ಬಾಜುವರ ಕಡಿಂದ ಬಯ್ಯಸಿಕೋತ ಗುದ್ಯಾಡಕೋತ ಬ್ಯಾಗ ತಗೆದು ಮೇಲೆ ಇಡುತ್ತಿದ್ದೇವು.      ಒಂದ ಸಾರಿ  ಬಸ್ ಕಂಡಕ್ಟರ ಬಸ್ ಪಾಸ ಕೇಳಿದಾಗ ಬ್ಯಾಗನಲ್ಲಿ ಇರಲಿಲ್ಲ. ಬಸ್ ಪಾಸು ಮನೆಯಲ್ಲೆ ಉಳಿದು ಬಿಟ್ಟಿತ್ತು. ಸ್ಕೂಲಿಗೆ ಹೋಗುವಾಗ ಮನೆಯಲ್ಲಿ ಇನ್ನೂ ಸಣ್ಣವರೆಂದು ಒಂದು ಪೈಸೆಯು ಕೊಡುತ್ತಿರಲಿಲ್ಲ. ಕಂಡಕ್ಟರ್ ಟಿಕೇಟ ತೆಗೆಸಬೇಕೆಂದಾಗ ನನ್ನ ಕಡೆ ಒಂದು ಪೈಸೆಯೂ ಇರಲಿಲ್ಲ. ಪಾಪ ಪಕ್ಕದಲ್ಲಿದ್ದ ಪುಣ್ಯಾತ್ಮರೊಬ್ಬರು ಟಿಕೇಟ ತೆಗೆಸಿದರು. “ಅಂಕಲ್ ನಿಮ್ಮ ಅಡ್ರೆಸ್ ಕೊಡಿ ನಿಮಗೆ ದುಡ್ಡು ಕಳಿಸುತ್ತೇನೆ” ಎಂದು ಎಷ್ಟು ಕೇಳಿಕೊಂಡರು ಬೇಡಮ್ಮಾ ನೀನು ನನ್ನ ಮಗಳಿದ್ದಂತೆ ಎಂದರು. ಕಾಲೇಜಿಗೆ ಹೊಗುವಾಗ ನನ್ನಪ್ಪ ತಿಂಗಳಿಗೊಮ್ಮೆ ಹತ್ತೊ ಇಪ್ಪತ್ತೊ ರೂಪಾಯಿ ದುಡ್ಡು ಕೊಡುತ್ತಿದ್ದ.  ಪಿ.ಯು.ಸಿ ಓದುವಾಗ ಕ್ಲಾಸಿನಲ್ಲಿ ಲೆಕ್ಚರೊಬ್ಬರು “ನೋಡ್ರಿ ನಿಮ್ಮನ್ಯಾಗ ನಿಮ್ಮ ಖರ್ಚಿಗಂತ ಏನೊ ದುಡ್ಡ ಕೊಟ್ಟರ ಹುಡಗರ ನೀವು ಸಿಗರೇಟೊ ಮತ್ತೊಂದೊ ಕೆಟ್ಟ ಚಟಕ್ಕ ಉಪಯೋಗಿಸಬ್ಯಾಡ್ರಿ…… ಹೆಣ್ಣ ಮಕ್ಕಳ ನೀವು.. ಖಾಲಿಪೀಲಿ ಆಯ್ಸಕ್ರೀಮ್ ತಿಂದೆ.. ಕೇಕ ತಿಂದೆ….ಅಂತ ಖರ್ಚ ಮಾಡಬ್ಯಾಡ್ರಿ  ಪಕ್ಕದಲ್ಲೆ ಇಲ್ಲೆ ಬ್ಯಾಂಕ ಅದ ಅದರಳೊಗ ಅಕೌಂಟ ಓಪನ್ ಮಾಡಿ ಕೂಡಿ ಇಡುದನ್ನ ಈಗಿಂದ ಕಲಿರಿ… ಅಲ್ಲದ ಬ್ಯಾಂಕಿನ ವ್ಯವಹಾರ ಏನು ಅನ್ನುದು ನೀವು ತಿಳಕೊಂಡಂಗ ಆಗ್ತದ” ಅಂತ ಹೇಳತಿದ್ದರು.  ಅವರ ಪ್ರಭಾವದಿಂದಾಗಿ ನಾನು ಬ್ಯಾಂಕನಲ್ಲಿ ಆಗಲೇ ಒಂದು saving account ಓಪನ್ ಮಾಡ್ದೆ.  ಕೂಡಿಟ್ಟ ಹತ್ತೊ ಇಪ್ಪತ್ತೊ ವರ್ಷಕ್ಕೆ ಸಾವಿರ ರೂಪಾಯಿವರೆಗೂ ಆಗ್ತತ್ತು.  ಆಗ ಅದೇ ದೊಡ್ಡ ಅಮೌಂಟು. ಸರ್ ಹೇಳದಂಗ ಬ್ಯಾಂಕಿನ ವ್ಯವಹಾರದ ಜ್ಞಾನನು ಬಂತು.       ನಾನು ಕಾಲೇಜಿಗೆ ಬೆಳಿಗ್ಗೆ ೬.೩೦ ಕ್ಕೆ ನಮ್ಮೂರಿನ ಒಳಗಡೆ ಬೆರೆಯ ಮತ್ತೊಂದು ಹಳ್ಳಿಯಿಂದ ಬರುತ್ತಿದ್ದ ಬಸ್ಸ ನ್ನು ಹತ್ತಿ ಕಾಲೇಜಿಗೆ ಹೋದರೆ ಮದ್ಯಾಹ್ನ ೧ ಗಂಟಗೆ ಕ್ಲಾಸ್ ಬಿಡುತ್ತಿತ್ತು. ನಮ್ಮೂರು ಹೈವೆ ಮೇಲಿದ್ದರೂ ನಮ್ಮೂರಿಗೆ ಕಡಿಮೆ ಬಸ್ಸಗಳು ನಿಲ್ಲುತ್ತಿದ್ದವು. ಹೆಚ್ಚಾಗಿ ಎಕ್ಸಪರೆಸ್ ಬಸ್ ಗಳೆ ಅವು ನಿಲ್ಲುತ್ತಿರಲಿಲ್ಲ. ನಾನೇನಾದರೂ ಒಳಗಡೆ ಹಳ್ಳಿಯಿಂದ ಬರುತ್ತಿದ್ದ ಬಸ್ ನ್ನು ತಪ್ಪಿಸಿದರೆ ಮೊದಲನೆ ಕ್ಲಾಸ ಬಂಕ ಆಗುತ್ತಿತ್ತು. ಮದ್ಯಾಹ್ನ ಕೂಡಾ ಸರಿಯಾಗಿ ಲಾಂಗರೂಟ್ ಬಸ್ ಗಳಿಲ್ಲದೇ ಅದೇ ನಮ್ಮೂರಿನಿಂದ ಒಳ ಹೋಗುವ ಹಳ್ಳಿ ಬಸ್ಸೆ ಗತಿ. ಅದೋ ಹಳೆ ಕಾಲದ ಟ್ರಂಕ್ ತರಹ. ಡಕೊಟಾ ಬಸ್ ಎಂದೆ ಫೇಮಸ್ಸು. ಡಕೊಟಾ ಎಕ್ಸಪ್ರೆಸ ಪಿಕ್ಚರ್ ನೋಡಿದವರು ಊಹಿಸಿಕೊಳ್ಳಿ ಅದರಲ್ಲಿರುವಂತೆಯೇ ನಮ್ಮ ಬಸ್ ಡಕೊಟಾ ಆಗಿತ್ತು. ಊರನ್ನು ದಾಟಿ ಅರ್ದ ದಾರಿ ಕ್ರಮಿಸಿದ ಮೇಲೆ ಎಷ್ಟೊ ಸಾರಿ ಬಂದ್ ಬಿದ್ದು ಮತ್ತೆ ಬೇರೆ ಬಸ್ಸಿಗೆ ದಾರಿ ಕಾದ ಕಾದು ಸುಸ್ತಾಗಿ ಕಂಡಕ್ಟರ ಜೊತೆ ಜಗಳಕ್ಕೆ ನಿಲ್ಲುವದು, ಮುಖ್ಯವಾದ ಕೆಲಸ ಕಾರ್ಯಗಳಿದ್ದವರು ಪರದಾಡುವದು ಮಾಮೂಲಾಗಿತ್ತು. ಬೇಸಿಗೆಯಲ್ಲಿ ನಿಂತಂತ ಬಸ್ಸನಲ್ಲಿ ಸೆಕೆ ತಾಳಲಾರದೆ ಗಂಡಸರು ಹೊರಗಡೆ ಹೋಗಿ ನಿಂತರೆ ನಾವು ವಿಧಿಯಿಲ್ಲದೇ ಅದರಲ್ಲಿಯೇ ಬೆವರಿಳಿದು ಮೈಗೆ ಬೆವರಿನ ಸ್ನಾನ. ಕಂಡಕ್ಟರ್ ಬೇರೆ ಬಸ್ ಗೆ ಪ್ರಯಾಣಿಕರನ್ನು ಹೊಂದಿಸಲು ಹೆಣಗಾಡುತ್ತಿದ್ದ.       ನಮ್ಮೂರು ನನ್ನ ಅಕ್ಕ ಪಕ್ಕದ ಊರುಗಳಿಂದ ಕಾಲೇಜ ಕಲಿಯಲು ಎಳೆಂಟು ಹುಡಗೀಯರು ಮತ್ತು ಒಂದಿಷ್ಟು ಹುಡಗರ ದಂಡು ಇರುತ್ತಿತ್ತು. ಡಕೋಟಾ ಎಕ್ಸಪ್ರೆಸ್ ಬಸ್ಸನ್ನು ಡ್ರೈವರ ಒಂದ ತಾಸು ಮುಂಚೆ ಬಸ್ ಸ್ಟ್ಯಾಂಡಿನಲ್ಲಿ ತಂದು ಒಂದು ಬೇರೆ ಕಡೆ ನಿಲ್ಲಿಸುತ್ತಿದ್ದ. ಕಾಯಂ ಅದೇ ಸ್ಥಳದಲ್ಲಿ ನಿಲ್ಲಿಸುತ್ತಿದ್ದ. ನಮ್ಮೂರಿಗೆ ಹೋಗುವ ಹುಡಗ ಹುಡಗೀಯರಿಗೆ ಅದೇ ಬಸ್ಸೆಂದು ಗೊತ್ತಿರುತ್ತಿತ್ತು. ಆ ಬಸ್ ಬಂದ ಕೂಡಲೇ ಹುಡಗರು “ಬಂತು…. ಬಂತು…. ಡಕೊಟಾ ಎಕ್ಸಪ್ರೆಸ್….” ಎಂದು ಹಾಡು ಸುರು ಹಚ್ಚುತ್ತಿದ್ದರು. ನನಗಿನ್ನೂ ನೆನಪಿದೆ ನಾನು ಡಿಗ್ರಿ ಕಲಿಯುತ್ತಿದ್ದಾಗ ರೀಗಲ್ ಟಾಕೀಜಗೆ ಡಕೊಟಾ ಎಕ್ಸಪ್ರೆಸ ಪಿಕ್ಚರ್ ಬಂದಿತು. ಆ ಪಿಕ್ಚರ್ ನಂತರ ಅದೇ ಸ್ಥಿತಿ ಇರುವ ನಮ್ಮ ಬಸ್ಸು ಡಕೊಟಾ ಎಕ್ಸಪ್ರೆಸ್ ಎಂದೇ ಫೇಮಸ್ ಆಗಿತ್ತು. ನಾವು ಕಾಲೇಜಿನಲ್ಲಿ ಡಬ್ಬಿ ತಿನ್ನದೇ ಹಾಗೆ ಉಳಿಸಿಕೊಂಡು ಬಂದಿದ್ದರೆ ನಿಲ್ಲಿಸಿದ ಆ ಬಸ್ ನಲ್ಲಿ ಹೋಗಿ ಕುಳಿತು ನಾನು ಮತ್ತು ಇಬ್ಬರೂ ಸ್ನೇಹಿತೆಯರು ಕೂಡಿ ಹಾಸ್ಯ ಚಟಾಕಿ ಮತ್ತು ಮಾತುಗಳ ಬತ್ತಿಗಳೊಂದಿಗೆ ನಮ್ಮ ಬುತ್ತಿ ತೆಗೆದು ತಿನ್ನುತ್ತಿದ್ದೇವು.         ಆ ಬಸ್ ಒಂದ ತರಹ ಆಲ್ ಇಂಡಿಯಾ ರೇಡಿಯೊ, ಮಿರ್ಚ ಮಸಾಲಾ ಕಡೆಗೆ ನಮೆಗೆಲ್ಲಾ ಒಂದು ಮಿನಿ ಪ್ರಪಂಚವೇ ಆಗಿರುತ್ತಿತ್ತು‌. ಇದರೋಳಗೆ ಅಜ್ಜ -ಅಜ್ಜಿ, ಅಂಟಿ ಅಂಕಲಗಳು ಮಾತುಗಿಳಿದಾಗ ಅವರ ಮನೆ ಮನೆ ರಾಮಾಯಣ, ಹರಿಕಥೆಗಳು ನಮ್ಮ ಕಿವಿಗಳಿಗೂ ಬಿಳುತ್ತಿದ್ದವು. ಹಿಂದೆ ಕುಳಿತು ಚೇಡಿಸುವ ಹುಡಗರದು ಇನ್ನೊಂದು ತರಹ. ಸುಸ್ತಾಗಿ ಬೇಸತ್ತು ಸ್ವಲ್ಪ ನಿದ್ರೆಗೆ ಜಾರಿದರೆ. ಚೇಡಿಸುತ ಹಾಡುವವರು“ರಾಮಚಾರಿ ಹಾಡುವಾ ಲಾಲಿ ಹಾಡ ಕೇಳವಾನೀಲಿಬಾನಿನೂರಿಗೆ ಬೆಳ್ಳಿ ದೀಪ ನೀನವಾ…..”        ಈಗೀನ ಹಾಗೆ ಆಗ ಪೇಸ್ ಬುಕ್, ಟ್ವಿಟರ, ವ್ಯಾಟ್ಸಪ್ ಯಾವುದೂ ಇಲ್ಲದ ಪ್ರಪಂಚ. ಒಬ್ಬರಿಗೊಬ್ಬರು ಹರಟೆ, ಜೊಕ್ಸು ಇವೆ ಆಗ ಬಸ್ಸಿನಲ್ಲಿ ಬೇಸರ ಕಳೆಯುವ ಟೈಮ್ ಪಾಸ್.ಬಸ್ ನಲ್ಲಿ ಹುಟ್ಟಿಕೊಂಡ ಪ್ರೇಮಗಳೆಷ್ಟೊ, ಪರಿಚಯವಾಗಿ ಮಾತಿಗಿಳಿದ ಸ್ನೇಹದಲ್ಲಿ ರೆಕ್ಕಪುಕ್ಕ ಹಚ್ಚಿ ಹರಡಿದ ಗಾಸಿಪ್ ಗಳೆಷ್ಟೊ ಲೆಕ್ಕವಿಲ್ಲ. ಚಂದವಾಗಿರುವ ಹುಡಗೀರಗೆ ಹುಡಗರಿಂದ ಹಿಡಿದು ಹೊಟ್ಟೆ ಉಬ್ಬಿಸಿಕೊಂಡ ಅಂಕಲಗಳು ಹಲ್ಲು ಗೀರಿಯುತ್ತ  ತಮ್ಮ ಪಕ್ಕದಲ್ಲಿರುವ ಸೀಟಿನಲ್ಲಿ ಕೂತುಕೊಳ್ಳಲು ಹೇಳುವರು. ಕೆಲವೊಬ್ಬರು ತಾವೇ ಕುಳಿತ ಸೀಟನ್ನು ಬಿಟ್ಟು ಕೊಡುತ್ತಿದ್ದರು. ಎಷ್ಟೊ ಸಾರಿ ನಾನು ಕುಳಿತಂತೆ ಮಾಡಿ ಪಕ್ಕದಲ್ಲಿ ನಿಂತಿರುವ ಅಂಟಿಯರಿಗೆ, ಅಜ್ಜಿಯರಿಗೆ ನನ್ನ ಸೀಟು ಬಿಟ್ಟು ಕೊಟ್ಟಿದ್ದಿದೆ. ಈಗ ಬಿಡಿ ನಾನೂ ಅಂಟಿಯಾಗಿ ಆ ಅಂಟಿಗಳ ಸಾಲಿನಲ್ಲಿ ನಾನು ನಿಂತಿದ್ದೇನೆ.        ಒಂದು ಸಾರಿ  ಹೆರಗಿಗೆಂದು ಧಾರವಾಡಕ್ಕೆ ಬರಲು ಬಸ್ ಹತ್ತಿದವಳು ಇನ್ನೇನೂ ಧಾರವಾಡದ ಸಮೀಪ ಇತ್ತು ಆಗಲೇ ಅವಳಿಗೆ ಜೋರಾಗಿ ಹೆರಗೆ ನೋವು ಪ್ರಾರಂಭವಾಯಿತು ಕಂಡಕ್ಟರ ಪ್ರಯಾಣಿಕರನ್ನೆಲ್ಲ ಅಲ್ಲೆ ಇಳಿಸಿದ.  ಅವಳಿಗೆ ಬಸ್ ನಲ್ಲಿಯೇ ಹೆರಿಗೆಯಾಯಿತು.  ಬಸ್ ನಲ್ಲೆ ಮಗುವಾಗಿದ್ದರಿಂದ ಗಂಡಾಗಿದ್ದರೆ ಬಸಪ್ಪ ಎಂದೋ ಹೆಣ್ಣಾಗಿದ್ದರೆ ಬಸವ್ವ ಎಂದೋ ಇಟ್ಟಿರಬಹುದೇನೊ ಎಂಬುದು ನನ್ನ ಅನುಮಾನ. ಸುಮ್ನೆ ಹಾಸಕ್ಕೆ ಹೇಳಿದೆ.  ಅವಳಿಷ್ಟದ ಹೆಸರು ಅವಳಿಟ್ಟರಬಹುದು.        ಕುಂಟುತ್ತಾ ಸಾಗುವ ಬಸ್ಸು ಅದರಲ್ಲೂ ಮಳೆಯಾಯಿತೆಂದರೆ ರೊಡಲ್ಲಿ ಅಲ್ಲಲ್ಲಿ ತಗ್ಗು ಗುಂಡಿಗಳು, ಯೌವನಕ್ಕೆ ಕಾಲಿಟ್ಟ ಹೆಣ್ಣಿನಂತೆ ಉಬ್ಬುತಗ್ಗುಗಳು. ಅಂತುವಗಳನ್ನು ದಾಟುವಾಗ ಬಸ್ಸು ಪುಟಿದೇಳುತ್ತಿತ್ತು. ಹಾಗೆ ಪುಟಿದೆದ್ದಾಗ ಯಾರದೋ ಚೀಲದಲ್ಲಿದ್ದ ಅಕ್ಕಿಕಾಳು ನಮ್ಮೂರಿನಿಂದ ಕಾಲೇಜಿಗೆ ಬರುವ ಒಬ್ಬ ಹುಡಗಿಯ ಮೇಲೆ ಬಿದ್ದು ಬಿಟ್ಟವು.  ಅವಳು ನನಗೆ ಅಕ್ಕಳ ಸಮಾನಳಾಗಿದ್ದಳು.   ಎಲ್ಲರೂ ಗೋಳೊ ಎಂದು ನಗತೊಡಗಿದರು. ಒಬ್ಬ ಅಜ್ಜಿ “ಆತು ತುಗೊ ತಂಗಿ ನಿನ್ನ ಮದುವಿ ಲಗೂ ಆಗ್ತೈತಿ” ಅಂದಾಗ ಹಿಂದೆ ಕುಳಿತಿದ್ದ ಕಿಡಗೇಡಿ ಹುಡಗರು “ಮದುವೆ ಆತು ಡುಮ್ …ಡುಮ್ …”ಎಂದು ಚೇಡಿಸತೊಡಗಿದರು. ಮತ್ತೆ ಕೆಲ ಹುಡಗರು ಸಣ್ಣಗೆ ತಮ್ಮ ತಮ್ಮೊಳಗೆ “ನಮ್ಮೂರ ಯುವ ರಾಣಿ ಕಲ್ಯಾಣ ವಂತೆ ವರನಾರೆಂದು ನೀ ಹೇಳು ಓ….ಕೋಗಿಲೆ..” ಎಂದು ಹಾಡಿದ್ದು ಇದೆ. ಆದರೆ ಪಾಪ ಆಗಿದ್ದೆ ಬೇರೆ ನನಗಿಂತ ನಾಲ್ಕೈದು ವರ್ಷ ದೊಡ್ಡವಳಾದ ಅವಳ ಮದುವೆ ನನ್ನ ಮದುವೆಯಾದ ನಾಲ್ಕೈದು ವರಷಕೆ  ಮದುವೆಯಾಯಿತು.  ಹೀಗೆ ಮೆಲಿಟ್ಟಂತ ಲಗೇಜುಗಳಿಂದ ಕೆಳಗೆ ಕುಳಿತವರ ತಲೆ ಮೇಲೆ ಬಿದ್ದ ಅರಿವೆ, ಉಂಡೆ, ಚಕ್ಕುಲಿ, ಬಾಳೆಹಣ್ಣು, ದ್ರಾಕ್ಷಿ ಹಣ್ಣುಗಳೆಷ್ಟೊ  ಸ್ವಲ್ಪ ಮೇಲ್ಮುಖ ಮಾಡಿದರೆ ಸೀದಾ ಅವರ ಬಾಯಿಗೆ. “ಸೀದಾ ಲಡ್ಡು ಮೂ ಪೆ….” ಯಾವುದೊ ಚಾಕ್ಲೇಟಿನ ಅಡ್ವರಟೈಸ ಒಂದು ಗಕ್ಕನೆ ಬಂದು ಕಣ್ಣು ಮುಂದೆ ಹೋದಂತೆ.       ಒಂದ ಬಾರಿ ಡ್ರೈವರಂತೂ ಬಸ್ ಹತ್ತಿ ಕೂತವನೆ ಬಸ್ ಹೊಡೆಯತೊಡಗಿದ.  ಬಸ್ ನಲ್ಲಿ “ಒಹೊ.. ಒಹೊ….ಬಸ್ ನಿಲ್ಲಸರಿ…” ಎಂದು ಚೀರತೊಡಗಿದರು. ಬಸ್ ಡ್ರೈವರ್ ನ ಕಿವಿ ಮಂದಿದ್ದವೋ ಏನೊ ಗೊತ್ತಿಲ್ಲ ಅವನು ಹಾಗೆ… ಗಾಡಿ ಹೊಡೆಯತೊಡಗಿದ.  ಎಲ್ಲರೂ ಅದರಲ್ಲೂ ಕಿಡಗೆಡಿ ಹುಡಗರು ಕೈಯಿಂದ ಬಸ್ ನ್ನು ಕುಳಿತಲ್ಲಿಂದ ನಿಂತಲ್ಲಿಂದ ಬಡಿಯತೊಡಗಿದರು. ಆಗ ಡ್ರೈವರ್ ಎಚ್ಚತ್ತು ಏತಕೆ ಬಸ್ಸ ಬಡಿಯುತ್ತಿರುವರು ಎಂದು ಬಸ್ ನಿಲ್ಲಿಸಿದ. ಆಗಲೇ ಅವನಿಗೆ ಗೊತ್ತಾಗಿದ್ದು ತಾನು ಕಂಡಕ್ಟರನನ್ನೆ ಬಿಟ್ಟು ಬಂದಿದ್ದೇನೆ ಎಂದು.  ಅದಾಗಲೇ ಬಸ್ ಬಸ್ ಸ್ಟ್ಯಾಂಡಿಂದ ಎರಡು ಕಿಲೊಮಿಟರ್ ಬಂದಿತ್ತು. ಡ್ರೈವರ್ ಮತ್ತೆ ಬಸ್ ನ್ನು ಹೊರಳಿಸಿ ಬಸ್ ಸ್ಟ್ಯಾಂಡ ಕಡೆಗೆ ಹೊಡೆದ. ಬಸ್ ನಲ್ಲಿದ್ದ  ಕೆಲವರು  “ಹಂಗ…. ಇದ್ದರ.. ಡ್ರೈವರ ನಮ್ಮ ಊರ ಮಟಾ… ಗಾಡಿ ಹೊಡಿತಿದ್ದ. ಇವತ್ತು ಪ್ರೀ ಯೊಳಗ… ಮನಿಗೆ ಹೋಗ್ತಿದ್ವಿ. ನಮ್ಮ ರೊಕ್ಕ ಲುಕ್ಸಾನ ಆತು ನೋಡ…” ಎಂದು ಪರದಾಡತೊಡಗಿದರು.  ಬಸ್ಸಿನಲ್ಲಿದ್ದ ನನ್ನ ಸ್ನೇಹಿತೆಯರು ಆಮೇಲೆ ಬೇರೆಯವರಿಗೆ ಆ ಸಂಗತಿ ಹೇಳಿ ನಕ್ಕಿದ್ದೆ ನಕ್ಕಿದ್ದು.     ಮೊದಲೇ ಡಕೊಟಾ ಬಸ್ ಕೆಲವೊಂದ ಸಾರಿ ಪ್ರಯಾಣಿಕರನೆಲ್ಲಾ ಹತ್ತಿಸಕೊಂಡು ಡಿಪೊಕೆ ತಂದು ರಿಪೇರಿ ಮಾಡಿಸಲು ನಿಲ್ಲಿಸುತ್ತಿದ್ದ. ಮೊದಲೆ ತಾಸ ಗಟ್ಟಲೆ ಬಸ್ ಸ್ಟ್ಯಂಡಲ್ಲಿ ಕಾದು ಕುಳಿತವರಿಗೆ ಇದನ್ನ ಕಾಯುವದೆಂದರೆ ಹೆಣಾ ಕಾದಷ್ಟು ಸಂಕಟಾ ಆಗುತ್ತಿತ್ತು. ಬೆಳಿಗ್ಗೆ ಹೋಗುವಾಗಲೂ ಅಷ್ಟೆ ಧಾರವಾಡ ಮುಟ್ಟಿದಾಗ ಎಲ್ಲಿ ಕ್ಲಾಸ ತಪ್ಪುತ್ತದೊ ಎಂದು ಗಡಿಬಿಡಿಯಲ್ಲಿ ಸಾಮಾನುಗಳಿಡುವ ಪಟ್ಟಿಯಿಂದ (longer,/rack) ನೊಟುಬುಕ್ ಗಳು ನಮ್ಮುವ ಹೌದೊ ಅಲ್ಲೊ ಎಂದು ನೋಡದೆ ಎತ್ತಿಕೊಂಡು ಹೋಗುತ್ತಿದ್ದೇವು.

“ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)ಶ್ರೀದೇವಿ. ಮ.ಗುಮ್ಮಗೋಳ. Read Post »

ನಿಮ್ಮೊಂದಿಗೆ

ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ”

ಕಾವ್ಯ ಸಂಗಾತಿ ಡಾ.ಕಾಡಜ್ಜಿ ಮಂಜುನಾಥ್‌ “ನ್ಯಾಯ ಕಣ್ಣು ತೆರೆದಿದೆ” ಜನಸಾಮಾನ್ಯರಉಸಿರು ನಿಲ್ಲಿಸಿದರ್ಪ ಮೆರೆದನರನ ಮಾತುಮೌನವಾಗಿದೆ; ಹಣದಕಪಿಮುಷ್ಠಿಯಲಿಹಂತಕರ ಸೃಷ್ಟಿಸಿದ್ವೇಷವೆಂಬ ರೋಗದಿಜೀವ ತೆಗೆದಜೀವಿಯಮುಖವಾಡ ಕಳಚಿದೆ; ತೋಳ್ಬಲದಕತ್ತಿಯ‌ ಅಂಚಿನಲಿಹಣದಾಸೆ ತೋರಿಸಿಕುರ್ಚಿಯ‌ ವ್ಯಾಮೋಹದಿಪ್ರಾಣ ತೆಗೆದವಿನಯದದುರಹಂಕಾರಮಣ್ಣಾಗಿದೆ; ಕಾನೂನಿನರಕ್ಷಕರೇಅಪರಾಧಿಗಳಆಮಿಷಕ್ಕೆ ಬಲಿಯಾಗಿಸಹಾಯ ಹಸ್ತಚಾಚಿದಮೃಗಗಳ ಮೇಲೆನ್ಯಾಯ ದೇವತೆಯಕಣ್ಣು ಬಿದ್ದಿದೆ; ಬಾಳಿ ಬದುಕಬೇಕಾದಮುಗ್ದ ಯುವಕನನ್ನುದಬ್ಬಾಳಿಕೆಯಕೆಂಡದಲಿಕೊಲೆ ಮಾಡಿದಕಟುಕರನ್ನುಕಾರಾಗೃಹ  ಕೈಬೀಸಿಕರೆದಿದೆ; ತೆರೆ ಹಿಂದಿನಕುತಂತ್ರಗಳು ಕರಗಿಹಣ ಅಧಿಕಾರ  ಪ್ರಭುತ್ವದಕೈಗಳುಕಾನೂನಿನ ಕುಣಿಕೆಗೆಸಿಲುಕಿಸಂವಿಧಾನವುತನ್ನ ಅಭೇದ್ಯಶಕ್ತಿಯನ್ನುನ್ಯಾಯದ ಚಾಟಿಯಲಿಕರ್ಮವುಮರುಕಳಿಸಿದೆ;ಡಾ.ಕಾಡಜ್ಜಿ ಮಂಜುನಾಥ

ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ” Read Post »

ನಿಮ್ಮೊಂದಿಗೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ”

ಕಾವ್ಯ ಸಂಗಾತಿ ಶಾಲಿನಿ ಕೆಮ್ಮಣ್ಣು “ಬಹುಮುಖ” ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದರ್ಪಣದಿಂದ ಕಾಣದು ಮೂರ್ಖದರ್ಪದ ಅಹಮ್ಮಿನ ಕೋರೆಮುಖತೊಡಲುಬೇಕು ದಿನವೂ ಬಹುಮುಖನಾನು ನೀನು ಕೊನೆಯಾಗುವ ತನಕ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದಿನಗಳೆದಂತೆ ಬರಿದಾಗುವ ದೇಹಇಲ್ಲದ ಬಯಸುವ ಮನುಜನ ಮೋಹಎಂದಿಗೂ ತೀರದ ಸ್ವಾರ್ಥದ ದಾಹಜಗದಲಿ ನಿಲ್ಲದ ದುಗುಡದ ವಾಹ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಮೋಸದ ಬಲೆಯಲಿ ಚಿನ್ನದ ಮೀನುಪರಿಶ್ರಮಕಿಲ್ಲಿ  ಸಿಗುವುದೆ ಜೇನುಮರಗಳ ಕಡಿದು ಬರಿದಾಗಿದೆ ಕಾನುಕಡಲಿನ ಮೊರೆತಕೆ ಬಾಗಿದೆ ಬಾನು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ನನ್ನವರು ಪರರು ನಡುವೆ ನಾ ಯಾರುಅರಿಯದೆ ಸಾಗಿದೆ ಜನಪದ ತೇರುಅಂಕಿಯ ಅಂಕುಶದಿ ಬಡಿದಾಡುವ ಜನರುಮಾನವ ಮರೆತು ಯುದ್ಧವ ಸಾರುತಲಿಹರು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ” Read Post »

ನಿಮ್ಮೊಂದಿಗೆ

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ನೀವು..ಮತ್ತೂ… ಈ..ಪ್ರೇಮ” ಈ ಪ್ರೇಮವೆಂಬುದುಮಹಾಕವಿಯೊಬ್ಬ ಬರೆದಅನವಶ್ಯಕವಿವರಣೆಗಳನ್ನೊಳಗೊಂಡ ಮಹಾಕಾದಂಬರಿಯಂತೆ ರಸಹೀನವಾದುದಲ್ಲ..! ಅದು..!ಎಲ್ಲೋ..ದೂರದಲ್ಲಿ..!ಅಜ್ಞಾತವಾಗಿ ಕೂತಅನಾಮಿಕನೊಬ್ಬನ ಎದೆಯಲ್ಲಿತಣ್ಣಗೆ ಹುಟ್ಟಿಕೊಂಡಬಲು ಸೂಕ್ಷ್ಮ ಮತ್ತು ತೀವ್ರ ಮೊನಚುಳ್ಳಆತ್ಮಸಂವೇದನೆಯಗಂಭೀರ ದನಿಯ ಹಿನ್ನೆಲೆಯಲ್ಲಿಹೃದಯದಲ್ಲೊಂದುಸಣ್ಣಗೆ ಕಂಪನ ಉಂಟು ಮಾಡಬಲ್ಲಎರಡೇ ಎರಡು ಸಾಲಿನಬಂಡಾಯದ ಬೆಂಕಿಯಂತಹಕಾವ್ಯ ರೂಪಕ..! ಒಮ್ಮೆಲೇ ಸುಡುವುದಿಲ್ಲನಿಮ್ಮನ್ನು ಅದುನಿಧಾನವಾಗಿ ಹೆಜ್ಜೆಯೂರುತ್ತದೆಸಮ್ಮೋಹನಗೊಳಿಸುತ್ತದೆ..!ಎಷ್ಟೇ ಎಚ್ಚರಿಕೆ ವಹಿಸಿದರೂಕ್ಷಣಾರ್ಧದಲ್ಲಿ ಕಣ್ಮುಂದಿನಹಾದಿಯನ್ನು ಮರೆಸಿ ಬಿಡುತ್ತದೆ..! ಸರಿಯಾದಒಂದೇ ಒಂದು ವಿಳಾಸವಿಲ್ಲಅದರ ತೆಕ್ಕೆಯೊಳಗೆಗೂಡು ಮರೆತ ಹಕ್ಕಿಯಂತೆಬಯಲ ತುಂಬಾಎಲ್ಲೆಲ್ಲೂ ಹಾರಿ ವಿಹರಿಸುತ್ತಾಆನಂದದಲ್ಲಿತೇಲಿಸುತ್ತದೆನೀವು ಕಾಣದಿರುವಹೊಸ ಭ್ರಮಾ ಲೋಕಗಳಲ್ಲಿಮಿಂಚಿನ ಸಂಚಲನ ಸೃಷ್ಟಿಸಿಕಣ್ಣನ್ನು ಕುರುಡಾಗಿಸುತ್ತದೆ..! ಅಚ್ಚರಿಯೇನಿಸುವುದಿಲ್ಲಯಾರೊಬ್ಬರಿಗೂಎದೆಗೂಡಿನಲ್ಲಿನೂರಾರು ಕನಸುಗಳಿಗೆಮೊಟ್ಟೆಯಿಟ್ಟು ಮರಿ ಮಾಡುವಾಗಆದರೆಎಷ್ಟು ಕಾಲಹೀಗೆ ಕನಸಿನಲ್ಲಿ ಹಾರುವಿರಿ?ಹಾರುವ ರೆಕ್ಕೆಗಂಟಿಕೊಂಡೇಬೆನ್ನೇರಿರುತ್ತದೆಒಂದು ಸಣ್ಣ ಆತಂಕಅಥವಾಬಿರುಕು ಮೂಡಿಸುವನಿಮ್ಮದೇ ನೆರಳುಗಳ ಛಾಯೆ..! ತತ್ ಕ್ಷಣಪ್ರೇಮದ ಕನಸುಗಳಿಂದನಿಜಕ್ಕೂ ಎಚ್ಚರವಾಗುತ್ತೀರಿ..!ಆರಂಭದಲ್ಲಿಕಣ್ಣೀರು ಹಾಕುತ್ತಾಕೂಗಾಡುತ್ತೀರಿವಾಗ್ವಾದಗಳಲ್ಲಿಗುದ್ದಾಡುತ್ತಾ ಜಿದ್ದಿಗೆ ಬಿದ್ದಂತೆವರ್ತಿಸುತ್ತೀರಿದನಿಯೆತ್ತುವುದನ್ನು ಕಲಿಯುತ್ತೀರಿಪ್ರತಿಭಟಿಸುತ್ತೀರಿ..! ಆದರೆ ವಿಪರ್ಯಾಸ..!ಕಾಲ ಸರಿದಂತೆಲ್ಲಾತಣ್ಣಾಗುಗುತ್ತೀರಿತುಂಬಾ ಆಳದಲ್ಲಿ ಬಿದ್ದಿರುತ್ತೀರಿಮೌನವಾಗುತ್ತೀರಿಕೊನೆಗೊಮ್ಮೆಗಂಭೀರವಾಗಿಏಕಾಂತದ ಸಂಜೆಗಳಲ್ಲಿಸುಖಾಸುಮ್ಮನೆತಾವೊಬ್ಬರೇ ತಮ್ಮಷ್ಟಕ್ಕೆ ತಾವೇಕಳೆದು ಹೋಗುತ್ತೀರಿ…! ಧಾವಂತವಿಲ್ಲನಿಮಗೆ ಬದುಕಿನಲ್ಲಿಗುನುಗುತ್ತದೆ ಕಿವಿಗಳಿಗೆಶೋಕದಲ್ಲೂ ನೆಮ್ಮದಿ ತರಬಲ್ಲಮಹಮ್ಮದ್ ರಫಿಕಿಶೋರ್ ಕುಮಾರ್ , ಮುಖೇಶ್ ಮನ್ನಾಡೇಯಯಾವೊದಾದರೊಂದುಹಳೆಯ ಹಾಡು..! ಕೂತುಬಿಡುತ್ತೀರಿಪ್ರೇಮದ ಹರಿವಿನಲ್ಲಿಮುಗುಳ್ನಗುವ ಬುಧ್ಧನಂತೆಆಗ ನಿಜಕ್ಕೂ ಕೇಳಿಸುತ್ತದೆಪ್ರೇಮದ ಒಳದನಿಪಿಸುಗುಡುತ್ತೀರಿನೀವು ಕೂಡ ಅದರೊಟ್ಟಿಗೆಬೆಂಕಿಯನ್ನು ಬೆಳಕಾಗಿಸಿಕೊಂಡಕಲಾತ್ಮಕಕವಿತೆಯೊಂದರ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ” Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಒಂಟಿತನಕೆ ಆಸರೆ” ಒಂಟಿ ಹೃದಯದ ಮೂಲೆಮೂಲೆಯಲಿ  ಕತ್ತಲು ಕವಿದಾಗ  ಯಾರೋ ಸಣ್ಣ ದೀಪ   ಹಚ್ಚಿದ ಭಾವ  ಆಸರೆಯಾಗಿ ಬರುವುದು ನೋಡಾಗ ಕಣ್ಣೀರ ಹನಿಯ ಜೊತೆ ಮಾತನಾಡುವ  ಗಾಳಿಯ ಸ್ಪರ್ಶವೇ ಸಾಂತ್ವನ  ಮೌನದ ನಡುವೆ ಬೆಳಕು ಹರಡುವ  ಭರವಸೆಯದೇ ಒಂದು ಬಂಧನ ನೀ ಒಂಟಿಯಲ್ಲ, ಜಗವೇ ಜೊತೆಯಿದೆ  ಚುಕ್ಕಿಗಳು ಸಾಕ್ಷಿ ನಮ್ಮ ಪಯಣಕೆ  ನಿನ್ನ ನೋವಿಗೂ ಒಂದು ಅರ್ಥವಿದೆ  ಬದುಕು ಚಿಗುರುವುದು ವಸಂತ ನಿನಗಾಗಿ ಕಾಲ ನೋವನ್ನು ಮಾಯಿಸುವ ಮಂತ್ರ  ನಾಳೆಯೆಂಬ ಕನಸೇ ಆಸರೆ  ಎದ್ದು ನಿಂತರೆ ಸಾಕು ಗೆಳತಿ  ಒಂಟಿತನವೂ ತಾನೆ ದೂರ ಸರಿವ ಕರೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ” Read Post »

ನಿಮ್ಮೊಂದಿಗೆ

ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು

ವಚನ ಸಂಗಾತಿ ಗೊರೂರು ಅನಂತರಾಜು ಸುನಂದ ಅರುಣ್ ಕುಮಾರ್ ಗೋಸಿ  “ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಎಲ್ಲಾ 176 ವಚನಗಳನ್ನು ಪ್ರಸಿದ್ಧ ಗಾಯಕ ಗಾಯಕಿಯರಿಂದ ಹಾಡಿಸಿ ಭಾವಾಥ೯ ಸಹಿತ ದೃಶ್ಯಿಕರಿಸಿ ಯೂ ಟ್ಯೂಬ್ ನಲ್ಲಿ ಹಾಕಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿಯವರ ತಂದೆ ಶೇಷಾದ್ರಿ ಮತ್ತು ತಾಯಿ ಕಮಲಮ್ಮನವರು. ಇವರು ಬೆಂಗಳೂರಿನ ನಿವಾಸಿಗಳಾಗಿದ್ದು, ಪತಿ ಅರುಣ್ ಕುಮಾರ್ ರವರು ಇಂಜಿನಿಯರಿಂಗ್ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮಕ್ಕಳಾದ ಆಕಾಶ್, ಮಹೇಶ್, ಸೊಸೆ ಐಶ್ವರ್ಯ, ಸ್ನಾತಕೋತ್ತರ ಪದವಿ ಮುಗಿಸಿ, ಮೊಮ್ಮಗ ಆವಿಯನ್ ಅಮೇರಿಕದಲ್ಲಿ ನೆಲಿಸಿದ್ದಾರೆ. ಇವರು ಸಮಾಜದ ಕಳಕಳಿಯುಳ್ಳವರಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜದ ಏಳಿಗೆಯ ಸದುದ್ದೇಶದಿಂದ ದೇವಾಂಗ ಇತಿಹಾಸವನ್ನು ಸಂಗ್ರಹಿಸಿ, ತಾವೇ ನಿರ್ಮಿಸಿದ ಗೋಸಿ ಯೂನಿವರ್ಸ ( Gosi Universe ) ಎಂಬ ಅಂತರ್ಜಾಲ ತಾಣದಿಂದ (Website) ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ದೇವಲ ಮಹರ್ಷಿ ಹಾಗು ದಾಸಿಮಯ್ಯನವರ ಜೀವನ ಚರಿತ್ರೆಯನ್ನು ವಿಕಿಪೀಡಿಯದಲ್ಲಿ ದಾಖಲಿಸಿದ್ದಾರೆ.ವಚನ ಸಾಹಿತ್ಯಕ್ಕೆ ಭದ್ರಬುನಾದಿಯನ್ನು ಹಾಕಿ ಬಸವಾದಿ ಪ್ರಮಥರಿಗೆ ಮಾರ್ಗದರ್ಶನ ಮಾಡಿದ ಆದ್ಯ ವಚನಕಾರ, ವಚನ ಬ್ರಹ್ಮ , ಶ್ರೀ ದೇವರ ದಾಸಿಮಯ್ಯನವರು ರಚಿಸಿರುವ ಎಲ್ಲಾ 176 ವಚನಗಳನ್ನು ರಾಗ ಸಂಯೋಜನೆ ಮಾಡಿಸಿ, ಮೊಟ್ಟಮೊದಲ ಬಾರಿಗೆ “ವಚನ ಬ್ರಹ್ಮನ ವಚನಾಮೃತ” ಎಂಬ ನಾಮದಿಂದ, ವಚನ, ಗಾಯನ, ಮತ್ತು ಭಾವಾರ್ಥ ಸಹಿತ ದೃಶ್ಯೀಕರಿಸಿ, ಸಾಹಿತ್ಯ ಲೋಕ ಹಾಗೂ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ನಿರ್ಮಿಸಿದ ಈ ಮಹತ್ಕಾರ್ಯವನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವರು ದಾಖಲಿಸಿ ಸನ್ಮಾನಿಸಿದ್ದಾರೆ.ಇದರ ಸಂಪೂರ್ಣ ನಿರ್ದೇಶನ ಹಾಗೂ ನಿರ್ಮಾಣವನ್ನು, ಅವರ ಕುಟುಂಬದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಿ.ಈ ಎಲ್ಲಾ ವಚನಗಳನ್ನು ನಿರಂತರವಾಗಿ ವೀಕ್ಷಿಸಲು, Gosi Universe, You tube Channel ನಲ್ಲಿ ಪ್ರಸಾರ ಮಾಡಿರುತ್ತಾರೆ. ಹಾಗು ಮೊಟ್ಟ ಮೊದಲ ಬಾರಿಗೆ ದಾಸಿಮಯ್ಯ ವಚನಗಳನ್ನು, ದೂರದರ್ಶನ ಚಂದನ ವಾಹಿನಿಯಲ್ಲಿ ಕೂಡ ಪ್ರಸಾರ ಮಾಡಿಸಿರುತ್ತಾರೆ. ಇವರ ಈ ಮಹತ್ಕಾರ್ಯವನ್ನು ಗುರುತಿಸಿ ಹಲವಾರು ಸಂಘ – ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿವೆ. ಮೇಡಂ ಕುಟುಂಬದ ಈ ಮಹತ್ಕಾರ್ಯ ಸಮಾಜ ಮೆಚ್ಚುವಂತಹದ್ದಾಗಿದೆ. ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ – 573 201

ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು Read Post »

ಕಾವ್ಯಯಾನ, ನಿಮ್ಮೊಂದಿಗೆ

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಹೃದಯ ಒಡೆದಾಗ” ಹೃದಯ ಒಡೆದಾಗ ಪ್ರತಿಯೊಂದು ನೋವು ಒಲವಿನ ಕಥೆಗಳಾಗಿ ಮೂಡಿ ಬರುತ್ತವೆ;ಬಿಸಿ ಕಣ್ಣೀರಿನ ಹನಿಹನಿಯಲ್ಲು ಕುದಿಮೌನದ ಮಾತುಗಳೆ ಹರಿದು ನಿಲ್ಲುತ್ತವೆ! ಈ ಅಶಾಂತಿ, ಈ ಕಾತರ, ಈ ಅಸಹಾಯತೆಯ ನೆರಳಲ್ಲಿ ನೀನಿರುವೆ ನನ್ನೊಲವೆ;ಪ್ರೇಮದ ಪ್ರತಿಯೊಂದು ಸಾಕ್ಷಿ ಜೀವಂತ ಬೆದರು ಬೊಂಬೆಯಾಗಿ ಕುಣಿಯುತ್ತವೆ ಜೀವವೆ! ಪ್ರೇಮ ಮೌನ ಹೊದ್ದ ತುಟಿಗಳ ಮೇಲೆ ನಿಂತಿರುವ ಅಪೂರ್ಣ ಕನಸುಗಳ ದಾರಿಯದು;ಪ್ರೇಮಿಯ ಹೃದಯದ ಪ್ರತಿ ಬಡಿತವು ಮಳೆಯಿರದ ನದಿಯ ಹರಿವಿನಂತೆ ಸಾಗುವುದು! ಹೃದಯದ ಪುಸ್ತಕದ ಪ್ರತಿಯೊಂದು ನೆನಪಿನ ಪುಟಗಳ ನವಿರಾಗಿ ತಿರುಗಿಸುವುದು!ಪ್ರೀತಿ ಏಕಾಂಗಿಯಾಗಿ ಖಾಲಿ ಪ್ರತಿಧ್ವನಿಯಲ್ಲಿ ದುಃಸ್ವಪ್ನಗಳ ಕಂಡಂತೆ ಊಳಿಡುವುದು! ಭಗ್ನ ಪ್ರೇಮಿಯಷ್ಟೇ ಏಕಾಂತದ ನಿಶ್ಶಬ್ದದಲ್ಲಿ ತನ್ನೊಂದಿಗೇ ಮಾತಾಡುವುದು!ಭ್ರಮೆಯ ಮಾತುಗಳ ಪ್ರತಿ ಪದದಲ್ಲೂ ನಿನ್ನದೇ ನೆನಪು ಮಧುರವಾಗಿ ತುಳುಕುವುದು! ನಿನ್ನ ನೆನಪು ಹುಟ್ಟು ಮಚ್ಚೆಯಂತೆ ಬರಡು ಹೃದಯವನ್ನು ಸುದೀರ್ಘವಾಗಿ ಆಳುವುದು!ಕಣ್ಣೀರೇ ಒಲವಿನ ಭಾಷೆಯಾಗಿ ಪ್ರೇಮದ ಸಿಹಿಕಹಿಯ ಮುಚ್ಚುಮರೆಯಿಲ್ಲದೆ ಹಾಡುವುದು! ಪ್ರೀತಿಸಿದ ಹೃದಯ ವಿಚಿತ್ರ ಯಾತನೆಯ ಘಮಲು ಅದರ ಸ್ವಭಾವವೇ ಅರ್ಥವಾಗದು;ವಿರಹದ ಗಾಯದ ಉರಿಯನ್ನೆಲ್ಲ ನಿನ್ನ ಪ್ರೀತಿಯ ಗುರುತಿನ ಸ್ಮಾರಕವಾಗಿ ಸ್ಮರಿಸುವುದು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ” Read Post »

ನಿಮ್ಮೊಂದಿಗೆ

ಅಶ್ಫಾಕ ಪೀರಜಾದೆ ಅವರ ಕವಿತೆ “ಕವಿ ಹೃದಯ ಹಾಡುತ್ತಿಲ್ಲ !”

ಕಾವ್ಯ ಸಂಗಾತಿ ಅಶ್ಫಾಕ ಪೀರಜಾದೆ “ಕವಿ ಹೃದಯ ಹಾಡುತ್ತಿಲ್ಲ !” ಈ ನಿಶ್ಶಬ್ಧದ ನಿಗೂಢ ಗರ್ಭದಿಂದಕೇಳಿ ಬರಬಹುದೆ ಸಣ್ಣದಾದ ಸದ್ದುಬಿಸಿ ಉಸಿರಿನ ಮಿಡಿತ ತಾಕಬಹುದೆಕಾಣಬಹುದೆ ಅಗೋಚರ ಸತ್ಯಎಲ್ಲ ಅಸ್ಪಷ್ಟ ಮಂಜು ಮುಸುಕು ನಾಲಿಗೆ ಸೀಳಿ ತಗೆದರೂ ಒಂದು ಮಾತು ಇಲ್ಲಮಿದುಳೆಲ್ಲ ತಡಕಾಡಿ ಬರೆದರೂ ಒಂದಕ್ಷರಆತ್ಮದ್ದು ಮೌನ ರೋಧನಮೋಡ ಕಟ್ಟದೆ ಮುಗಿಲಿನಿಂದಮರಭೂಮಿಗೆ ಮಳೆಯ  ಮುನ್ಸೂಚನೆಯೇ !ಒಳಗೊಳಗೆ ಶಾಂತ ಸುನಾಮಿ ಪೆನ್ನು ಪಾರ್ಶ್ವವಾಯು ಪೀಡಿತಮಿದುಳು ಖಾಲಿ ಕಾಗದ ಅಸ್ಖಲಿತ ಭಾವನೆಗಳ ಬಟಾ ಬಯಲುಮೋದಲಿನಂತೆ ಕೌದಿಯೊಳಗೆ ಕನಸು  ಮೊಟ್ಟೆಯಿಡುತ್ತಿಲ್ಲ ಮೊಳಕೆಯೊಡಿತ್ತಿಲ್ಲ ಕಾಳು ಮಡಿಕೆಯೊಳಗೆಪುಸ್ತಕದಲಿ ನವಿಲುಗರಿ ಈಗಮರಿ ಹಾಕುವುದು ಮರೆತಿದೆ ಬಸಿರಾಗುವುದಿಲ್ಲ ಭಾವನೆಗಳುಸ್ಪರ್ಶಕೆ ಮನಸ್ಸು ಸ್ಪಂದಿಸುತ್ತಿಲ್ಲಸಂವೇದನಾ ರಹಿತ ಹೃದಯಒಲವ ಕ್ಷಾಮ ಕಾಡುತಿದೆಖಾಲಿತ! ತಬ್ಬಲಿತನ!! ಯಾಕೋ ಗೊತ್ತಿಲ್ಲ ಇತ್ತೀಚೆಗೆಕತ್ತಲೆ ಕರಗುತ್ತಿಲ್ಲ ಸೂರ್ಯನ ಬೆಳಕಿಗೂಕವಿ ಹೃದಯ ಹಾಡುವುದು ನಿಲ್ಲಿಸಿದೆಸಂಭವಿಸು ಪುನರುತ್ಥಾನ  ಕಾಯುತಿರುವೆ ಮುಗಿಲಿನತ್ತ ಮುಖ ಮಾಡಿ ಅನ್ನದಾತನಂತೆತಮ್ಮವರೆಲ್ಲರನ್ನು ಕಳೆದುಕೊಂಡುಒಂಟಿಯಾಗಿ ಯದ್ಧ ವಿರಾಮಕೆ ಪ್ರಜೆಯಂತೆ.. ಅಶ್ಫಾಕ ಪೀರಜಾದೆ.

ಅಶ್ಫಾಕ ಪೀರಜಾದೆ ಅವರ ಕವಿತೆ “ಕವಿ ಹೃದಯ ಹಾಡುತ್ತಿಲ್ಲ !” Read Post »

ನಿಮ್ಮೊಂದಿಗೆ

ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ

ಪುಸ್ತಕ ಸಂಗಾತಿ. ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಶ್ರೀ ಹರಿಹರ ಶಿವಕುಮಾರ್‌ “ಅನನ್ಯ ಅಲ್ಲಮ” ಅನನ್ಯ ಅಲ್ಲಮ ಉತ್ತಮ ಆಕರ ಗ್ರಂಥ ಲೇಖಕರು  ಶ್ರೀ ಹರಿಹರ ಶಿವಕುಮಾರಪ್ರಕಾಶಕರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರುಬೆಲೆ 180 ರೂಪಾಯಿವರ್ಷ 2026 ನಾಡಿನ ಹಿರಿಯ ಅನುಭಾವಿ ಚಿಂತಕರು ಸಾಹಿತಿಗಳೂ ಆದ ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಾಶಕರ ಮೂಲಕ ಅನನ್ಯ ಅಲ್ಲಮ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳ ಚರ್ಚೆಗೆ ಅವಕಾಶ ಮಾಡಿಕೊಡುವ ಸಂಗ್ರಹಕ್ಕೆ ಯೋಗ್ಯವಾದ ಒಂದು ಸುಂದರ ಆಕರ ಗ್ರಂಥ. ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನವರು.ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವ್ಯಕ್ತಿ.ಅನನ್ಯ ಅಲ್ಲಮ ಎಂಬ ಕೃತಿಯಲ್ಲಿ ಇವರು ಅಲ್ಲಮ ಪ್ರಭುಗಳ 75 ಸರಳ ಸ್ಥಲ ಕಟ್ಟಿನ ವಚನಗಳನ್ನು ಆಯ್ಕೆ ಮಾಡಿದ್ದಾರೆ. ಅಲ್ಲಮರ ವಚನ ವಿಶ್ಲೇಷಣೆ ಚಿಂತನೆ ನಿಜಕ್ಕೂ ಕಬ್ಬಿಣದ ಕಡಲೆ ಇದ್ದ ಹಾಗೆ. ಲೇಖಕರಿಗೂ ಅಲ್ಲಮರ ವಚನ ವಿಶ್ಲೇಷಣೆ ಒಂದು ಕಠಿಣ ಪರಿಶ್ರಮವೆಂದು ತಿಳಿದುಕೊಂಡು ತಮ್ಮದೇ ಆದ ಅನುಭವವನ್ನು ಸಂಕಲನದಲ್ಲಿಪದ ಅರ್ಥ ,ವಚನಾರ್ಥ, ಪದಪ್ರಯೋಗಾರ್ಥ ಎಂಬ ಮೂರು ಭಾಗಗಳಲ್ಲಿ ಮಾಡಿದ್ದು ವಾಚಾರ್ಥ ಗೂಢಾರ್ಥ ಲಕ್ಷಾರ್ಥಗಳ ಕಡೆಗೆ ಗಮನ ಕೊಟ್ಟಿದ್ದಾರೆ. ಅಲ್ಲಮರ ಬೆಡಗಿನ ವಚನಗಳು ಮತ್ತು ಅವುಗಳಲ್ಲಿರುವ ಪದಗಳಿಗೆ ಸಮಾನವಾದ ಅರ್ಥ ಹುಡುಕುವ ಪ್ರಯತ್ನ ಇವರದ್ದಾಗಿದೆ. ನಂತರ ಸಾಂದರ್ಭಿಕವಾಗಿ ಆ ಬೆಡಗಿನ ಪದಗಳ ಅರ್ಥವನ್ನು ಇಂದಿನ ಜಗತ್ತಿಗೆ ಅನುಗುಣವಾಗಿ ಸಮಯೋಚಿತವಾಗಿ ಅರ್ಥೈಸುವ ಇವರ ಶೈಲಿ ತುಂಬಾ ಚೆನ್ನಾಗಿದೆ. ಇವರ ನಿರಂತರ ಪರಿಶ್ರಮ ಹಾಗೂ ಶೃದ್ಧೆ ಅಲ್ಲಮರ ಬೆಡಗಿನ ವಚನಗಳನ್ನು ಸರಳವಾಗಿ ಅರ್ಥೈಸಲು ಒಂದು ಸುಂದರ ಆಕರ ಪುಸ್ತಕ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ಅತ್ಯಂತ ಅಪರೂಪದ ಪ್ರಬುದ್ಧ ಕಾರ್ಯವೆಂದೆನಿಸುತ್ತದೆ.ವಚನಗಳ ಅರ್ಥಗಳ ವಿವರಣೆ ಇನ್ನಷ್ಟು ವಿಸ್ತರಣೆಗೊಂಡಿದ್ದರೆ ಇನ್ನೂ ಹೆಚ್ಚಿನ ಸೊಗಡು ಎದ್ದು ಕಾಣುತಿತ್ತು. ಇದು ಶ್ರೀ ಶಿವಕುಮಾರ ಅವರ ಪ್ರಥಮ ಕೃತಿಯಾಗಿದೆ. ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಲೋಕಾರ್ಪಣೆಯಾಗಲಿ ಎಂದು ಹಾರೈಸುತ್ತೇನೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಸಮರಸವು ಮೂಡಲಿ” ಈ ನೆಲದ ಭಾಷೆಯಿದುಬುದ್ಧ ಬಸವರ ವಚನಗಳುಸತ್ಯ ಸಮತೆ ಶಾಂತಿ ಪ್ರೀತಿಮನುಜ ಪಥದ ಮಂತ್ರವು ನಾನು ಹುಟ್ಟಿ ನಾವು ಬೆಳೆದುನಾಡ ಗೋಡೆ ಕಟ್ಟ ಬೇಕುವರ್ಗ ವರ್ಣ ಬೇಧ ಅಳೆದುದೇಶ ಒಂದೇ ಎನ್ನ ಬೇಕು ನೇಯ್ಗೆ ಕೃಷಿ ಗ್ರಾಮ ರಾಜ್ಯಬಾಪು ಕನಸಿನ ಭಾರತಭಗತ ಸಿಂಗರ ತ್ಯಾಗ ನೆಲದಬಾಬಾಸಾಹೇಬರ ಭಾರತ ದ್ವೇಷ ಮತ್ಸರ ಕರಗಿ ಹೋಗಲಿಮಮತೆ ಪ್ರೀತಿ ಅರಳಲಿಕೊಲೆ ಹಿಂಸೆ ಮಾಯವಾಗಿಸಮರಸವು ಮೂಡಲಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ” Read Post »

You cannot copy content of this page

Scroll to Top