ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“೧೯೩೦೦ ರ ಹೆಣ”ಹಿಂದಿ ಕವಿತೆ ಸುದೀರ್‌ ಧಾವಳೆ ಕನ್ನಡಾನುವಾದ ಕಾ.ಹು.ಚಾನ್‌ಪಾಷ

ಅನುವಾದ ಸಂಗಾತಿ ೧೯೩೦೦ ರ ಹೆಣ ಹಿಂದಿ ಮೂಲ : ಸುದೀರ್ ಧಾವಳೆ ಕನ್ನಡಕ್ಕೆ : ಕಾ.ಹು.ಚಾನ್‌ಪಾಷ ಬ್ಯಾಂಕಿನ ಹೊಸ್ತಿಲಿಗೆಇವತ್ತು ಯಾವ ಗ್ರಾಹಕನೂ ಬಂದಿಲ್ಲಬAದಿರುವುದು ಒಂದು ಪ್ರಶ್ನೆಅವನ ಕೈಯಲ್ಲಿ ಪಾಸ್‌ಬುಕ್ ಇಲ್ಲಒಂದು ಅಸ್ಥಿಪಂಜರವಿದೆಅವನು ಅರ್ಜಿ ತುಂಬಲಾರಸಹಿ ಹಾಕಲಾರಆದರೆ ಅವನು ಇತಿಹಾಸದ ಪುಟಗಳಲ್ಲಿಮೂಳೆಗಳಿಂದಲೇ ಒಂದು ಹೆಗ್ಗುರುತು ಮಾಡಿದ್ದಾನೆ ಸಮಾಧಿಯ ಮಣ್ಣು ಇನ್ನು ಹಸಿಯಾಗಿಯೇ ಇದೆತಂಗಿಯ ಕೊನೆಯ ಉಸಿರುನೆಲದಲ್ಲಿ ಸಿಲುಕಿಕೊಂಡಿವೆಯೇನೋ ಎಂಬಂತ್ತಿದೆಆ ಅಣ್ಣ ತನ್ನದೇ ರಕ್ತದ ಮೂಳೆಗಳನ್ನು ಅಗೆಯುತ್ತವ್ಯವಸ್ಥೆಯ ಬಾಗಿಲು ತಟ್ಟುತ್ತಿದ್ದಾನೆ “ಪುರಾವೆ ತನ್ನಿ; ಬದುಕಿರುವಳೋ ಅಥವಾ ಸತ್ತಿರುವಳೋ”ಕಾಗದಗಳ ಕಾಡನಲ್ಲಿ ಕುಳಿತಬಾಯಲ್ಲಿ ನಿಯಮಗಳ ಮೊಳೆ ಹೊಡೆದ ಅಧಿಕಾರಿಗಳು ಹೇಳಿದರು ಹೇಳುತ್ತಾರೆಇದು ವ್ಯವಸ್ಥೆ, ಇದು ನಿಯಮ,ಇದು ಪ್ರಕ್ರಿಯೆ, ಇದು ಕಾನೂನು…ಆದರೆ ಇವತ್ತುಒಬ್ಬ ಬಡ ಆದಿವಾಸಿನಿಮ್ಮ ನಿಯಮಗಳನ್ನುತನ್ನ ತಂಗಿಯ ಮೂಳೆಗಳಲ್ಲಿ ಸುತ್ತಿನಿಮ್ಮ ಮುಂದೆ ಎಸೆದಿದ್ದಾನೆ ನೀವು ಹೇಳುತ್ತೀರಿ“ಖಾತೆದಾರ ಬಂದರೆ ಮಾತ್ರ ಹಣ ಸಿಗುವುದು”ಅವನು ಕೇಳುತ್ತಾನೆ“ಸತ್ತ ನಂತರ ಯಾರು ಬರುತ್ತಾರೆ?”ನಿಮ್ಮ ಬಳಿ ಯಾವ ಉತ್ತರವೂ ಇಲ್ಲಬರೀ ಮೌನಅದೂ ಸಹ ಎಸಿ ಕೋಣೆಯಲ್ಲಿ ಕುಳಿತ ಮೌನ ಎರಡು ತಿಂಗಳ ಕಾಲಅವನು ನಿಮ್ಮ ಬಾಗಿಲಿಗೆ ಮನುಷ್ಯನಾಗಿ ಬರುತ್ತಿದ್ದನೀವು ಅವನನ್ನು ಅಟ್ಟಿಸಿದಿರಿಇವತ್ತು ಅವನು ಅಸ್ಥಿಪಂಜರವಾಗಿ ಬಂದಿದ್ದಾನೆನೀವು ಬೆಚ್ಚಿಬಿದ್ದಿದ್ದೀರಿ ಕೇಳಿಇದು ನೀವೇ ಹುಟ್ಟಿಸಿದ ಭಯಈ ಅಸ್ಥಿಪಂಜರಕೇವಲ ಆ ತಂಗಿಯದ್ದಲ್ಲಎಂದೋ ಸತ್ತ ನಿಮ್ಮ ಮನುಷ್ಯತ್ವದ್ದು ಊರಿನವರು ಹುಚ್ಚ ಎಂದರುಬ್ಯಾಂಕಿನವರು ನಿಯಮ ಹೇಳಿದರುಪೊಲೀಸರು ಪ್ರಕರಣ ದಾಖಲಿಸಿದರುಆದರೆ ಯಾರಿಗೂ ಕಾಣಲಿಲ್ಲಇವನೇ ಎಲ್ಲರಿಗಿಂತ ಬುದ್ಧಿವಂತನೆಂದುಏಕೆಂದರೆ ಇವನು ಅರ್ಥಮಾಡಿಕೊಂಡಿದ್ದಾನೆಈ ದೇಶದಲ್ಲಿಬದುಕಿರುವ ಮನುಷ್ಯನಿಗೆ ಯಾವ ಅಸ್ತಿತ್ವವೂ ಇಲ್ಲಆದರೆ ಸತ್ತ ದೇಹಕ್ಕೆ ಪೋಸ್ಟ್ಮರ‍್ಟಂ ಮಾಡಲಾಗುವುದುಇಲ್ಲಿ ಮನುಷ್ಯರಿಗಿಂತ ಹೆಣಗಳೇ ಅಧಿಕೃತ ದಾಖಲೆಗಳು ಇವನು ಕೇವಲ ಒಬ್ಬ ಅಣ್ಣನಲ್ಲಇಡೀ ಸಮಾಜದ ಹರಿದಹೋದ ನರನಾಡಿಇದರಿಂದ ರಕ್ತವಲ್ಲವ್ಯವಸ್ಥೆಯ ಕೊಳೆತ ವಾಸನೆ ಸೋರುತ್ತಿದೆಸಮಾದಿಯಿಂದ ತೆಗೆದ ಅಸ್ಥಿಪಂಜರಈಗ ಕೇವಲ ತಂಗಿಯದ್ದಾಗಿ ಉಳಿದಿಲ್ಲಅದು ಈ ಪ್ರಜಾಪ್ರಭುತ್ವದಎಂದೋ ಮುರಿದುಹೋದ ಬೆನ್ನೆಲುಬು ಇವತ್ತು ಅವನು ನಿಂತಿದ್ದಾನೆಜನರ ನಡುವೆಹಾಸ್ಯ ಮತ್ತು ಭಯದ ನಡುವೆಒಂದು ಪ್ರಶ್ನೆಯಾಗಿ“ಈಗಲಾದರೂ ನಂಬುವಿರಾ?”ಈ ಅಧಿಕಾರ?ಅದು ತಲೆ ತಗ್ಗಿಸಿ ಫೈಲ್ ತಿರುವುತ್ತಿದೆ…ಯಾಕೆಂದರೆಅದರ ಬಳಿ ಪ್ರತಿ ಸಾವಿನ ದಾಖಲೆಯಿದೆಆದರೆ ಪ್ರತಿ ಅನ್ಯಾಯಗಳದ್ದು ಇಲ್ಲ ಇದು ಕವಿತೆಯಲ್ಲ ಇದೊಂದು ಚಾರ್ಜ್ಶೀಟ್ಇದರಲ್ಲಿ ಆರೋಪಿಗಳು:ನಿಮ್ಮ ವ್ಯವಸ್ಥೆನಿಮ್ಮ ಕಾನೂನುಮತ್ತು ಆ ಇಡೀ ಚೌಕಟ್ಟುಯಾವುದು ಬಡವರಿಗೆ ಹೇಳುತ್ತದೆಯೋ ಅದು“ಮೊದಲು ಸತ್ತಿದ್ದಕ್ಕೆ ಪುರಾವೆ ತನ್ನಿನಂತರ ಬದುಕುವ ಹಕ್ಕು ಸಿಗುತ್ತದೆ” ಸುಧೀರ್ ಧಾವಳೆ : ಸುಧೀರ್ ಧಾವಳೆ ಅವರು ಮಹಾರಾಷ್ಟçದ ಪ್ರಸಿದ್ಧ ಸಾಹಿತಿ, ಸಾಮಾಜಿಕ ಕಾರ್ಯಕರ್ತರು. ‘ವಿದ್ರೋಹಿ’ ಎಂಬ ಮರಾಠಿ ದ್ವೈಮಾಸಿಕ ಪತ್ರಿಕೆಯ ಸಂಪಾದಕರು. ದಲಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇವರು ಸಮಾಜದ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರು. ಇವರ ಕವಿತೆಗಳು ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ಅಸ್ತ್ರಗಳಾಗಿವೆ. ಹಿಂದಿ ಮೂಲ : ಸುದೀರ್ ಧಾವಳೆ ಕನ್ನಡಕ್ಕೆ : ಕಾ.ಹು.ಚಾನ್‌ಪಾಷ

“೧೯೩೦೦ ರ ಹೆಣ”ಹಿಂದಿ ಕವಿತೆ ಸುದೀರ್‌ ಧಾವಳೆ ಕನ್ನಡಾನುವಾದ ಕಾ.ಹು.ಚಾನ್‌ಪಾಷ Read Post »

ನಿಮ್ಮೊಂದಿಗೆ

“ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ

ಪುಸ್ತಕ ಸಂಗಾತಿ “ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ ಕೃತಿಯ ಹೆಸರು :ಕೆಂಪು ಗುಲಾಬಿಯ ಹಾಯಿಕುಗಳು(ಐದುನೂರಾ ಮೂವತ್ತಾರು ಹಾಯಿಕುಗಳ ಸಂಕಲನ)ಕವಿಯ ಹೆಸರು: ಡಾ.ಗವಿಸಿದ್ದಪ್ಪ ಎಚ್ ಪಾಟೀಲ.ಪ್ರಕಾಶಕರು : ಸಮನ್ವಯ ಪ್ರಕಾಶನ ಕಲಬುರಗಿಪ್ರಥಮ ಮುದ್ರಣ: 2023ಬೆಲೆ: 100₹ ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು ಮೈದುನ ಡಾ. ಗವಿಸಿದ್ದಪ್ಪ ಪಾಟೀಲ ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ನಾನು 1985 ರಿಂದ 1987ರವರೆಗೆ ಕೊಪ್ಪಳದಲ್ಲಿ ಶಿಕ್ಷಕರ ತರಬೇತಿ (ಟಿ ಸಿ ಎಚ್) ಪಡೆದೆ.ಆ ಅವಧಿಯಲ್ಲಿ ಕೊಪ್ಪಳದ ಎಂ ಎಚ್ ಪಿ ಎಸ್ ಶಾಲೆಗೆ ಪಾಠ ಕೊಡಲು ಹೋಗುತ್ತಿದ್ದಾಗ ಅಲ್ಲಿ ಗವಿ ನಾಲ್ಕನೇ ತರಗತಿ ಓದುತ್ತಿದ್ದ ಪುಟ್ಟ ಹುಡುಗ. ಅದೇನು ಆಕರ್ಷಣೆಯೋ ನನ್ನ ಹಿಂದೆನೇ ಸುತ್ತುತ್ತಿದ್ದ. ಅಚ್ಚುಮೆಚ್ಚಿನ ಶಿಷ್ಯನಾದ.ಆಗ ನಾನು ಇವರ ಅಣ್ಣ ನರೇಂದ್ರ ಪಾಟೀಲ ಅವರನ್ನು ಮದುವೆಯಾಗುತ್ತೇನೆಂದು ನನಗೂ ಗೊತ್ತಿರಲಿಲ್ಲ,ಈ ಪುಟ್ಟ ಪೋರನಿಗೂ ಗೊತ್ತಿರಲಿಲ್ಲ. ಅದು ಕೇವಲ ಋಣಾನುಬಂಧ. ನಾನು ಪಾಟೀಲರ ಮನೆಯ ಸೊಸೆಯಾದೆ.ನೋಡು ನೋಡುತ್ತಿದ್ದಂತೆ ಗವಿಸಿದ್ದಪ್ಪ ಪಾಟೀಲ ಒಂದೊಂದೇ ಮೆಟ್ಟಿಲೇರುತ್ತ ಸಾಹಿತ್ಯದ ಎತ್ತರದ ಶಿಖರವನ್ನೇ ಹತ್ತಿದ್ದಾನೆ ಎಂಬುದು ನನಗೆ ಹೆಮ್ಮೆ ಮತ್ತು ಅಭಿಮಾನ !.ಕಾವ್ಯ, ಆಧುನಿಕ ವಚನ,ಚುಟುಕು, ಶಾಹಿರಿ, ದೋಹೆ,ಗಜಲ್ ಹೀಗೆ ಕಾವ್ಯದ ಹಲವು ಪ್ರಕಾರಗಳಲ್ಲಿ ಕೃಷಿಗೈದಿದ್ದಾನೆ. ಅಲ್ಲದೇ ವಚನ ಸಾಹಿತ್ಯ, ವಿಮರ್ಶೆ,ಲೇಖನ,ಕಥೆ, ಜೀವನ ಚರಿತ್ರೆ, ಸಂಪಾದನೆ ಹೀಗೆ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾನೆ. ಕೊಪ್ಪಳದ ಹಿರಿಯ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾನ್ಯ ಎಚ್ಎಸ್ ಪಾಟೀಲರ ಮಗನಾಗಿ ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೀಮಂತ ಮನೆತನದ ಕುಡಿಯಾಗಿ ನೀಡಿರುವ ಕೊಡುಗೆ ಅಪಾರ.ಡಾ. ಗವಿಸಿದ್ದಪ್ಪ ಪಾಟೀಲ ಇವರ ಸಂಗಾತಿ ಜಯದೇವಿ ಗಾಯಕವಾಡ ಕೂಡ ಒಳ್ಳೆಯ ಬರಹಗಾರ್ತಿಯಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕ ತಂದಿದ್ದಾರೆ. ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವನಿಗೆ ಎನ್ನುವ ಶರಣರ ನುಡಿಯಂತೆ ಸತಿ-ಪತಿಗಳೊಂದಾಗಿ ಸಾಹಿತ್ಯ ಸರಸ್ವತಿಗೆ ಸಲ್ಲಿಸುತ್ತಿರುವ ಸೇವೆ ಅಮೋಘವಾದದು. ನಾನು 2010 ರಲ್ಲಿ “ರಸದ ತೆನಿ ಹೈಕುಗಳು” ಕೃತಿಯನ್ನು ತಂದೆ.ಅದು ಗವಿಯ ಒತ್ತಾಸೆಯೂ ಆಗಿತ್ತು. ಕಲ್ಯಾಣ ಕರ್ನಾಟಕದಲ್ಲಿ ಹಾಯಿಕು ಕೃತಿ ತಂದ ಮೊದಲ ಮಹಿಳೆ ಎಂದು ಗುರುತಿಸಿಕೊಂಡಿದ್ದೇನೆ. ಹಾಯಿಕು ಕಾವ್ಯ ಇದು ಜಪಾನ್ ಮೂಲದ ಸಾಹಿತ್ಯ. ಕೇವಲ ಮೂರು ಸಾಲುಗಳ 17 ಅಕ್ಷರ (syllables) ಗಳನ್ನು ಒಳಗೊಂಡ 5+7+5=17 ಅಕ್ಷರದ ಕ್ರಮಬದ್ಧ ಕಾವ್ಯ. ಇದನ್ನು ಜಪಾನಿನ ತ್ರಿಪದಿ ಎಂದು ಕರೆಯುಯಲಾಗುತ್ತದೆ. ಬಾಶೋ,ಬುಸೋನ, ಆಸ್ಸಾಂ,ಶಿಕಿ ಜಪಾನಿನ ಹಾಯಿಹಗ್ಗದಕು ಕವಿಗಳು. ಭಾಶೋ ಹೇಳುತ್ತಾನೆ “ಯಾರು ಜೀವನದಲ್ಲಿ ಮೂರರಿಂದ ಐದು ಹಾಯಿಕುಗಳನ್ನು ರಚಿಸುತ್ತಾರೋ ಅವರು ಹಾಯಿಕು ಕವಿ, “ಯಾರು 10 ಹಾಯ್ಕುಗಳನ್ನು ರಚಿಸುತ್ತಾರೋ ಅವರು ಮಹಾಕವಿ”ಎಂದಿದ್ದಾನೆ. ಇದರಿಂದ ನಮಗೆ ಗೊತ್ತಾಗುತ್ತದೆ ಹೈಕು‌ ರಚನೆ ಸುಲಭವಲ್ಲ . “ಗಾಗರ್ ಮೆಂ ಸಾಗರ ”  ಎನ್ನುವ ಹಾಗೆ, ಕರಿಯು ಕನ್ನಡಿಯಲ್ಲಿ ಅಡಗಿಕೊಂಡಂತೆ ಹಾಯಿಕುವಿನಲ್ಲಿ ಹಿರಿದಾದ ಅರ್ಥ ಅಡಗಿರುತ್ತದೆ. ಹಿಡಿದರೆ ಹಿಡಿಯಷ್ಟು ಬಿಟ್ಟರೆ ಜಗದ ತುಂಬಾ ಎನ್ನುವಂತೆ ಹಾಯಿಕು ಇಂದು ಜಗದಗಲ ಪಸರಿಸಿದೆ. ಇತ್ತೀಚಿಗೆ 17 ಸಿಲಬಲ್ ಗಳ ನಿಯಮ ಪಾಲಿಸದೆ ಭಾವಕ್ಕೆ ಹೆಚ್ಚು ಮಹತ್ವ ಕೊಟ್ಟು ಅತ್ಯಂತ ಪರಿಣಾಮಕಾರಿಯಾಗಿ, ಅಕ್ಷರ ನಿಯಮಗಳನ್ನು ಮೀರಿ ಒಟ್ಟು ಮೂರು ಸಾಲಿನಲ್ಲಿ ಹೈಕುಗಳನ್ನು ಬರೆಯುತ್ತಿದ್ದಾರೆ. ಆದರೆ ಡಾ. ಗವಿಸಿದ್ದಪ್ಪ ಪಾಟೀಲ 17 ಸಿಲೆಬಲ್ಲಗಳ ಚೌಕಟ್ಟಿನಲ್ಲಿ ಅರ್ಥಗರ್ಭಿತವಾದ ಹಾಯಿಕುಗಳನ್ನು ಬರೆದು ಕನ್ನಡ ಹಾಯಿಕು ಸಾಹಿತ್ಯಕ್ಕೆ ಉತ್ತಮ  ಕೊಡುಗೆಯನ್ನು ನೀಡಿದ್ದಾನೆ. “ಕೆಂಪು ಗುಲಾಬಿಯ ಹಾಯಿಕುಗಳು”  ಕೃತಿಯು ಹೆಸರೇ ಹೇಳುವಂತೆ ಪ್ರೀತಿ- ಪ್ರೇಮ, ಪ್ರಣಯ- ಉತ್ಸಾಹ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕುರಿತು ತೀವ್ರ ಭಾವಗಳನ್ನು ಪ್ರತಿನಿಧಿಸುವ ಕೃತಿಯಾಗಿದೆ. ಪ್ರೀತಿ ಆದಾಗಪ್ರೇಮಿಗಳ ನಡುವೆಗುಲಾಬಿ ಹೂವು  **   ***   ** ಮುಳ್ಳಿನ ಮೇಲೆಕೆಂಪು ಗುಲಾಬಿ ಹೂವು ನಿಸರ್ಗ ಸ್ವರ್ಗ **   ***   **ಗುಲಾಬಿ ಹೂವುಮುಳ್ಳುಗಳ ನಡುವೆ ಚಂದ್ರೋದಯ ಗುಲಾಬಿ ಪ್ರೀತಿಯ ಸಂಕೇತ. ಎರಡು ಹೃದಯಗಳ ನಡುವೆ ಪ್ರೀತಿ ಮೂಡಿದಾಗ ಆ ಪ್ರೀತಿಯನ್ನು ಇಂದಿನ ಯುವ ಪೀಳಿಗೆ ಗುಲಾಬಿಯನ್ನು ಕೊಡು ಕೊಳ್ಳುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳುವ ಚಿತ್ರಣವನ್ನು ಈ ಹಾಯಿಕುಗಳಲ್ಲಿ ಕಾಣುತ್ತೇವೆ. ಇಂತಹ ಸುಂದರವಾದ ಗುಲಾಬಿ ಮುಳ್ಳಿನ ಮೇಲೆ ಇದ್ದೂ ತನ್ನ ಚೆಲುವಿನಿಂದ ನಿಸರ್ಗವನ್ನು ಸ್ವರ್ಗವಾಗಿಸುತ್ತದೆ. ಇದು ಮುಳ್ಳಿನ ನಡುವೆಯೂ ತನ್ನ ನೋವನ್ನು ಮರೆತು ಹುಣ್ಣಿಮೆಯ ಚಂದ್ರನಂತೆ ನಗುತ್ತಿರುತ್ತದೆ. ಎಂತಹ ಕಷ್ಟದ ಸಮಯದಲ್ಲೂ ನೊಂದುಕೊಳ್ಳದೆ ಸದಾ ನಗುವನ್ನು ಹಂಚಿಕೊಳ್ಳಬೇಕೆಂಬ ಸಂದೇಶವನ್ನು ಈ ಹಾಯಿಕುಗಳು ನೀಡುತ್ತವೆ. ಇಡೀ ಕೃತಿಯಲ್ಲಿ ಬಹುಪಾಲು ಹಾಯಿಕುಗಳು ಶ್ರಮಿಕ ವರ್ಗದವರು, ಶೋಷಿತರು,ಅಸ್ಪೃಶ್ಯರು, ಹಿಂದುಳಿದ ಮತ್ತು ದಲಿತ ವರ್ಗದವರು ಅನುಭವಿಸಿದ ಅನುಭವಿಸುತ್ತಿರುವ ನೋವಿನ ಚಿತ್ರಣವನ್ನು ನೀಡುತ್ತವೆ. ನಿತ್ಯ ದುಡಿಮೆಸುಖವೇ ಇಲ್ಲವೇನೋ ದಲಿತರಿಗೆ ***    ***   *** ಕಲ್ಲಿನ ದಾರಿತುಳಿದ ಅಸ್ಪೃಶ್ಯರುಕಲ್ಲಾಗಿಹರು ***    ***   ***ಎಲ್ಲಿಂದ ಬಂತೊ ಶೋಷಣೆ ಬೆಂದವರ ರಕ್ತ ಹೀರಲು ***   ***   ***“ಮಂಜು ಕಟ್ಟಿದೆಶತಮಾನದ ಬ್ಯಾನಿ ನೋಂದ ಕಣ್ಣಲ್ಲಿ“ ನಿತ್ಯವೂ ಕಲ್ಲು ಮುಳ್ಳುಗಳ ತುಳಿದು ದುಡಿದರೂ ಸುಖ ಕಾಣದ ದಲಿತ ವರ್ಗ ಕ್ಷಣ ಕ್ಷಣಕ್ಕೂ ಶೋಷಣೆಗೆ ಒಳಗಾಗುತ್ತಿದೆ. ಶತ ಶತಮಾನದಿಂದಲೂ ನೋವು, ಅವಮಾನ, ಅಸಡ್ಡೆಗಳಿಂದ ತತ್ತರಿಸಿ ಹೋಗಿರುವ ಈ ಜನರು ಸಹಜವಾಗಿ ಕಲ್ಲಂತೆ ಕಠಿಣ ಆಗುತ್ತಿದ್ದಾರೆ ಎಂದು ಕವಿಯ ಅಭಿಮತ.ಸಮಾನತೆಯ ಸರಿದಾರಿಯ ನಿರೀಕ್ಷೆಯಲ್ಲಿದ್ದವರಿಗೆ ಬುದ್ಧನ ಬೆಳಕು, ಗಾಂಧೀಜಿಯ ತತ್ವ, ಬಸವಾದಿ ಶರಣರ ವಿಚಾರಗಳು ಆತ್ಮವಿಶ್ವಾಸ ಮೂಡಿಸಿವೆ. ಸಂವಿಧಾನಕ್ಕೆಸಾಮಾಜಿಕ ನ್ಯಾಯವ ನೀಡಿದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ದಲಿತ ವರ್ಗದವರಿಗೆ ಸಾಂವಿಧಾನಿಕವಾಗಿ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಟ್ಟಿದ್ದಾರೆ.  “ಕಪ್ಪು ಜನರನೋವಿನ ಒಡಲಾಳದಬೆಳಕು ಬಾಬಾ” ಹಿಂದುಳಿದ ಜಾತಿ ಜನಾಂಗದ ಜನರ ಒಡಲಾಳದ ನೋವಿಗೆ ಬೆಳಕಾದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಶಿಕ್ಷಣ, ಸಮಾನತೆ, ಸ್ವಾತಂತ್ರ್ಯದ ಬದುಕನ್ನು ನೀಡಿದವರು. ಕರಿಯ ಕಟ್ಟಿದ ಗೋಡೆಯ ಮೇಲೆ ಭಾರತದ ಧ್ವಜ ಹಾರಿತು ಎಂದು ಹೇಳುವಲ್ಲಿ  ಮನದಾಳದ ಕೆಚ್ಚು ಹೊರಹೊಮ್ಮಿದೆ.ಕೇವಲ ದಲಿತರಿಗೆ ಅಷ್ಟೇ ಅಲ್ಲ, ಇಡೀ ಮಾನವ ಕುಲದ ಏಳಿಗೆಗೆ  ಬಾ ಬಾ ಸಾಹೇಬರು ಶ್ರಮಿಸಿದರು. ಮನು ಕುಲಕ್ಕೆಹೊಸ ಭಾಷ್ಯ ಬರೆದಬಾ ಬಾ ಸಾಹೇಬ ***    ***   ***ಮಾನವತೆಯಧ್ವನಿ ಅಂಬೇಡ್ಕರ್ಈ ಸ್ವಾಭಿಮಾನಿ ಎಂದು ಅಂಬೇಡ್ಕರ್ ಅವರ ಮಾನವ ಪ್ರೇಮವನ್ನು ಇವರು ಹೈಕುಗಳಲ್ಲಿ ಹಿಡಿದಿಟ್ಟಿದ್ದಾರೆ. ಜಗಕೆ ಅನ್ನ ನೀಡುವ ರೈತನನ್ನು ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ರೈತ ಎದುರಿಸುತ್ತಿರುವ ಸಂಕಷ್ಟಗಳು, ದಲ್ಲಾಳಿಗಳ ಶೋಷಣೆ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲದ ಬಾಧೆ ತಾಳದೆ  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬದುಕು ಕವಿ ಮನವನ್ನು ಕಲಕಿದೆ. ಬೆಳೆ ಯಾರಿಗೊ ದುಡಿಮೆಯ ಇನ್ನಾರಿಗೊಈ ದೇಶದಲ್ಲಿ ಎಂದು ನೋಯುವ ಕವಿ  ಕೈಗೆ ಕೆಸರುಆದರೂ ಬರಲಿಲ್ಲಬಾಯಿಗೆ ತುಪ್ಪ ಎಂದು ವಿಷಾದ ವ್ಯಕ್ತಪಡಿಸುತ್ತಾನೆ. ರೈತನ ಶ್ರಮಕ್ಕೆ ಬೆಲೆ ಸಿಗುವುದು ದುರ್ಲಭವಾಗಿರುವ ಪ್ರಚಲಿತ ದಿನಗಳಲ್ಲಿ ನೇಗಿಲ ಯೋಗಿಭಾರತ ಭಾಗ್ಯದಾತ ಕತ್ತು ನೇಣಿಗೆ ಎಂದು ರೈತನ ಸಮಸ್ಯೆ- ಸವಾಲುಗಳ ವಿವಿಧ ಮಗ್ಗಲುಗಳನ್ನು ಇಲ್ಲಿಯ ಹಾಯಿಕುಗಳು ಪರಿಚಯಿಸುತ್ತವೆ.  ‘ಯುವ ಜನ ದೇಶದ ಶಕ್ತಿ’ ಎಂದು ಹೇಳಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಹಲವು ದುಶ್ಚಟಗಳಿಗೆ ಬಲಿಯಾಗಿ, ಮೋಜು ಮಸ್ತಿಗಳಲ್ಲಿ ಕಾಲ ಕಳೆಯುತ್ತಾ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವವರನ್ನು ಕಂಡು ಕವಿಯ ಮನ ನೊಂದಿದೆ. ದುಡಿದ ದುಡ್ಡುಸಾರಾಯಿ ಅಂಗಡಿಗೆಭವಿಷ್ಯ ಹಾಳು ***   ***    ***ಕುಡಿತ ಚಟಬದುಕಿನಲ್ಲಿ ಬಂದಸುಂಟರಗಾಳಿ ***   ***   ***ದಾರಿ ತಪ್ಪಿದೆಮಗ ಬಾರಿನೊಳಗೆ ಚಿತೆ ಏರಿದ ಎನ್ನುವ ಹಾಯಿಕುಗಳು ಕುಡಿತದ ಚಟಕ್ಕೆ ಒಳಗಾಗಿ ದುಡಿದದ್ದನ್ನೆಲ್ಲಾ ಹಾಳು ಮಾಡಿಕೊಳ್ಳುತ್ತಿರುವವರನ್ನು ನಿತ್ಯವೂ ನಾವು ನೋಡುತ್ತೇವೆ. ಕುಡಿತ ಆರೋಗ್ಯವನ್ನು ಹಾಳು ಮಾಡುತ್ತದೆ. ಕುಟುಂಬದ ನೆಮ್ಮದಿಯನ್ನು ಕೆಡಿಸುತ್ತದೆ. ಅಲ್ಲದೆ ಗೌರವವನ್ನು ಹಾಳು ಮಾಡುತ್ತದೆ. ಇಂಥ ಚಟಗಳಿಂದ ಯುವಕರು ದೂರ ಇರಬೇಕೆಂಬ ಸಂದೇಶವನ್ನು ಇವು ನೀಡುತ್ತವೆ.  ಇವತ್ತಿನ ತಾಂತ್ರಿಕ ಯುಗದಲ್ಲಿ ಮನುಷ್ಯ ತನ್ನ ಸುಖ ಸಂತೋಷಕ್ಕಾಗಿ ಏನೆಲ್ಲ ಸಾಧನಗಳನ್ನು ಕಂಡು ಹಿಡಿದಿದ್ದಾನೆ.ಅದರೆ ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿದ ಮೇಲೆ ಸಾವು ಖಚಿತ !.ಹುಟ್ಟು ಸಾವುಗಳ ನಡುವಿನ ಈ ಬದುಕು ಅತ್ಯಂತ ಅಮೂಲ್ಯವಾದದ್ದು. ಬದುಕಿನ ಬಂಡಿ ಸರಾಗವಾಗಿ ಸಾಗಲು ಗಂಡ- ಹೆಂಡತಿ ಅನ್ಯೋನ್ಯವಾಗಿ ಇರಬೇಕು.  ಈ ಜೀವನಕೆದಾಂಪತ್ಯ ಸಾಮರಸ್ಯ ಜೀವನೋತ್ಸಾಹ  ದಾಂಪತ್ಯದಲ್ಲಿ ಸಾಮರಸ್ಯ ಇದ್ದಾಗ ಮಾತ್ರ ಜೀವನದಲ್ಲಿ ಉತ್ಸಾಹ ಸಹಜವಾಗಿ ಮೂಡುತ್ತದೆ. ಇಲ್ಲದಿದ್ದರೆ ಸಂಸಾರ ಎನ್ನುವುದು ಸಾರವನ್ನು ಕಳೆದುಕೊಳ್ಳುತ್ತದೆ.  ಗಂಡ ಹೆಂಡತಿಜೀವನ ಬೇವು- ಬೆಲ್ಲ ಯುಗಾದಿ ಹಬ್ಬ ಗಂಡ ಹೆಂಡತಿ ಒಬ್ಬರನ್ನೊಬ್ಬರು ಅರಿತು ನಡೆದರೆ ಜೀವನ ಬೇವು ಬೆಲ್ಲದಂತೆ. ನಿತ್ಯವೂ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮವನ್ನು ಕಾಣಲು ಸಾಧ್ಯವಾಗುತ್ತದೆ. ಕವಿ ಡಾ. ಗವಿಸಿದ್ದಪ್ಪ ಪಾಟೀಲ ‘ಕೆಂಪು ಗುಲಾಬಿಯ ಹಾಯಿಕುಗಳು’ ಕೃತಿಯಲ್ಲಿ ಹೇಳದೆ ಇರುವ ವಿಷಯಗಳೇ ಇಲ್ಲ. ಸೃಷ್ಟಿಯ ಸೊಬಗಿನಲ್ಲಿ ಓಲಾಡಿದ್ದಾನೆ, ಸೂರ್ಯ ಚಂದ್ರ ನಕ್ಷತ್ರಗಳನ್ನು ಮಾತಾಡಿಸಿದ್ದಾನೆ, ಅಸಮಾನತೆಗೆ ಸಿಡಿದಿದ್ದಾನೆ, ಪ್ರೀತಿ- ಪ್ರೇಮ ಕನವರಿಕೆಯಲ್ಲಿ ಮೈಮನ ಮರೆತಿದ್ದಾನೆ.! ತಾನು ಒಬ್ಬ ಕವಿಯಾಗಿ ಕವಿತೆಯ ಬಗ್ಗೆ ಬರೆಯದಿದ್ದರೆ ಹೇಗೆ ?ಬರಹ ಅಪೂರ್ಣವೆನಿಸುತ್ತದೆ ಅಲ್ಲವೆ? ಅಂತೆಯೇ ಕಾವ್ಯವೆಂದರೆ ಏನು ಎನ್ನುವುದನ್ನು ಬಹಳ ಸೊಗಸಾಗಿ ತಿಳಿಸಿದ್ದಾನೆ.  ಶಬ್ದದೊಂದಿಗೆಕವಿ ಕಾವ್ಯ ತಿಕ್ಕಾಟ ಹೆರಿಗೆ ನೋವು  ಕಾವ್ಯವೆಂದರೆ ಕವಿ ತನ್ನ ಭಾವನೆಗಳನ್ನು ಶಬ್ದದ ಮೂಲಕ ಅಭಿವ್ಯಕ್ತಿಗೊಳಿಸುವುದಾಗಿದೆ. ಭಾವಗಳ ಜೊತೆಗೆ ಶಬ್ದಗಳ ತಿಕ್ಕಾಟ ಇದು ಸಾಮಾನ್ಯವಲ್ಲ. ಅದು ಹೆರಿಗೆ ನೋವಿನಷ್ಟೇ ಗಂಭೀರ ಎಂದು ಕವಿ ಅನುಭವದ ಅಮೃತ ಹಂಚಿಕೊಂಡಿದ್ದಾನೆ.  ಶಬ್ದಾರ್ಥಗಳ ಸಂಯೋಗವೇ ಕಾವ್ಯದ ಬಂಧನ ಕಟ್ಟು ಎಂದು ಕಾವ್ಯವನ್ನು ಅರ್ಥೈಸುತ್ತಾನೆ.  ಅವ್ವನ ಕೌದಿಚಿತ್ತ ಚಿತ್ತಾರದಿಂದಹೊಲಿದ ಕಾವ್ಯ  ಇದಂತೂ ಅದ್ಭುತ ರೂಪಕ! ಚಿತ್ತದಲ್ಲಿ ಹೊಳೆದ ಭಾವಗಳ ಬಣ್ಣ ಬಣ್ಣದ ಬಟ್ಟೆಗಳನ್ನು ಜೋಡಿಸಿ ಅವ್ವ ಹೊಲಿದ ಕೌದಿ ಎಂದು ವೈಶಿಷ್ಟ್ಯಪೂರ್ಣವಾಗಿ ಕಾವ್ಯವನ್ನು ಅರ್ಥೈಸಿದ್ದಾನೆ. ಕವಿ ಡಾ. ಗವಿಸಿದ್ದಪ್ಪ ಪಾಟೀಲ ಸಮಾಜದ ಜನತೆ, ಸಾಮಾಜಿಕ ವ್ಯವಸ್ಥೆಯ ಬಗೆಗೆ ವ್ಯಕ್ತಪಡಿಸುವ ವಿಶೇಷ ಕಾಳಜಿಯನ್ನು ಈ ಕೆಳಗಿನ ಹಾಯಿಕುಗಳಲ್ಲಿ ಕಾಣುತ್ತೇವೆ.  ಮೂಢನಂಬಿಕೆಹೊತ್ತು ಹರಿದ ಧರ್ಮ ನಾಲೆಯ ನೀರು ಜನರಲ್ಲಿ ಆಳವಾಗಿ ಬೇರೂರಿರುವ ಮೂಢ ನಂಬಿಕೆಯು ಧರ್ಮ ಎಂಬ ಕಾಲುವೆಯಲ್ಲಿ ತುಂಬಿ ಹರಿಯುವ ನೀರು ಇದ್ದಂತೆ ಎಂದು ಅಭಿಪ್ರಾಯ ಪಡುತ್ತಾನೆ. ಇಂತಹ ಮೌಢ್ಯತೆಯಿಂದ ಹೊರಗೆ ಬರಬೇಕು ಎಂದೂ ಇಲ್ಲದಿದ್ದರೆ ಬದುಕು ನರಕವಾಗುವ ಭೀತಿಯನ್ನು ಮೌಡ್ಯ ಆಚರಣೆತಂದಿದೆ ಜನರಲ್ಲಿ ಭೀತಿ ನರಕ ಎಂದು ಈ ಮೂಲಕ ಸ್ಪಷ್ಟಪಡಿಸಿದ್ದಾನೆ. ನನ್ನ ಜನರುಹಣೆ ಬರಹ ಎಂದು ತಲೆಕೊಟ್ಟರು  ಬದುಕಿನಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಯಶಸ್ಸು ಸಿಗದಿದ್ದರೆ ಹಣೆ ಬರಹವನ್ನೇ ಹೊಣೆ ಮಾಡುವದು ಸಹಜ.ಇದು ಮೌಢ್ಯತೆ !.ಇದಕ್ಕೆ ಬದಲಾಗಿ ಎಲ್ಲಿ ತಪ್ಪಿದ್ದೇವೆ , ಯಾವುದೇ ಕಾರ್ಯ ವೈಫಲ್ಯಕ್ಕೆ ನನ್ನೊಳಗಿರುವ ದೌರ್ಬಲ್ಯವೇನು ಎಂಬುದನ್ನು ಅರಿತು ಸುಧಾರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಣೆ ಬರಹ ಎಂದು ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಂಥ ಮೌಡ್ಯತೆಯನ್ನು ಬಿಟ್ಟು ವೈಚಾರಿಕ ಮನೋಭಾವವನ್ನು  ಬೆಳೆಸಿಕೊಂಡು ಜಾಗೃತರಾಗುವ ಸದಾಶಯವನ್ನು ಈ ಹಾಯಿಕುಗಳು ತಿಳಿಸುತ್ತವೆ. ಸ್ವಾರ್ಥವೇ ತುಂಬಿಕೊಂಡ ಈ ಭೂಮಿಯ ಮೇಲೆ ಪ್ರೀತಿ ಕರುಣೆ ಮತ್ತು ಸೋದರತೆಯಂತಹ ಮಾನವೀಯ ಗುಣಗಳು ಇಲ್ಲವಾಗಿ ಎಲ್ಲಿ ನೋಡಿದರೂ ದ್ವೇಷ – ಅಸೂಯೆ, ಹೊಡೆದಾಟ- ಬಡಿದಾಟಗಳನ್ನು ಕಂಡು ಕವಿ ಮರುಗುತ್ತಾನೆ. ಮನುಜ ಪಥ ದಾರಿ ಕಳಕೊಂಡಿದೆ ಯಾಕೋ ಸಾಲಾಗಿ ಎಂದು ಚಿಂತಿಸುತ್ತಾನೆ. ಓ ಮನುಷ್ಯರೇಮಾನವತೆಯ ತಂದುಕೊಡಿ ನನಗೆ  ಎಂದು ಹಂಬಲಿಸಿ

“ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ Read Post »

ನಿಮ್ಮೊಂದಿಗೆ

ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ”

ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಒಲವ ಗೀತೆ”. ಅವರ ನೆನಪ ಜೋಕಾಲಿಯಲ್ಲಿಒಲವ ಗೀತೆ ಆಗಾಗ ಸರ್ರನೇ ಜೀಕುತ್ತದೆ| ಒಮ್ಮೆಲೇ….ಹೂ ತೋಟವ ಸುತ್ತಿ ಬಂದಗಾಳಿಯ ಘಮದಿ ಮಿಂದಪಲ್ಲವಿಯ ಸಾಲುಗಳುಮನವನು ಚಿಟ್ಟೆಯಾಗಿಸಿಬಿಡುತ್ತವೆ| ಆದರೆ….ಚರಣಗಳು ನೀರವ ಧ್ಯಾನದಿ ಬಂಧಿಏಕೆ? ಹೇಗೆ? ಪ್ರಶ್ನೆಗಳುಉತ್ತರಕ್ಕಾಗಿ ಕಾಯ್ದರೂಇಬ್ಬರ ಅಹಮ್ಮಿನ ಕೋಟೆಯನ್ನುಬೇಧಿಸಲಾರವು| ಬದುಕಿನ ಎಲ್ಲ ಹಾಡುಗಳಲ್ಲಿಚರಣಗಳಿರಬೇಕೆ?ಆದಿ, ಅಂತ್ಯಾಕ್ಷರ, ಮುಕ್ತಾಯದ ಸಾಲೊಂದಿರಬೇಕೆ?ಹೂಂ..ಗುಡುತ್ತದೆ ಕವಿಹೃದಯ| ವಿಚಿತ್ರವೆಂದರೆ…ಬಹುತೇಕ ಒಲವಿನ ಹಾಡುಪಲ್ಲವಿಗಷ್ಟೇ ಸೀಮಿತವಾದಾಗಲೂಜೀವನದುದ್ದಕ್ಕೂ ಮನದಿಜೀಕುತ್ತಲೇ ಇರುತ್ತದೆಬೇಸರಿಕೆಯ ಪೋಷಾಕು ತೊಡದೇ… ಗಂಗಾ ಚಕ್ರಸಾಲಿ

ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ” Read Post »

ನಿಮ್ಮೊಂದಿಗೆ

“ಹೀಗೊಂದು ಆಲೋಚನೆ…”ಕೆ.ಜಯಲಕ್ಷ್ಮಿ ಅವರ ಪ್ರಬಂಧ

ಪ್ರಬಂಧ ಸಂಗಾತಿ ಕೆ.ಜಯಲಕ್ಷ್ಮಿ ಅವರ ಪ್ರಬಂಧ “ಹೀಗೊಂದು ಆಲೋಚನೆ…”  ಕಾಲೇಜುಗಳಲ್ಲಿ ಯಾರಾದರೂ ಉಪನ್ಯಾಸಕರು ರಜೆ ತೆಗೆದುಕೊಂಡ ಸಂದರ್ಭದಲ್ಲಿ ಅವರ ತರಗತಿಗಳಿಗೆ ಬೇರೆ ಉಪನ್ಯಾಸಕರು ಹೋಗುವುದು ಸರ್ವೇ ಸಾಮಾನ್ಯ. ಅದೊಂದು ದಿನ   ವಿಜ್ಞಾನ ವಿಭಾಗದ  ಉಪನ್ಯಾಸಕರು ರಜೆಯಲ್ಲಿದ್ದಾಗ ಅವರ ಪಿರೀಡ್ ಗೆ ನಾನು ಆ ತರಗತಿಗೆ ಹೋಗಿದ್ದೆ.  ಮಕ್ಕಳು ಟೈಮ್ ಟೇಬಲ್ ಗೆ ಅನುಗುಣವಾಗಿ ಪಠ್ಯ ಪುಸ್ತಕ ತರುತ್ತಾರಷ್ಟೇ? ಆ ದಿನ ನನ್ನ ಸಬ್ಜೆಕ್ಟ್ ಇರಲಿಲ್ಲವಾದ್ದರಿಂದ ನನ್ನ ಪಠ್ಯ ತಂದಿರಲಿಲ್ಲ. ಆದ ಕಾರಣ ನಾನು ಪಾಠ ಮಾಡುವಂತಿರಲಿಲ್ಲ.  ಮಕ್ಕಳಿಗೆ ಏನನ್ನಾದರೂ ಓದುವಂತೆ ಹೇಳಿ ಸುಮ್ಮನೆ ಅವರನ್ನು ಗಮನಿಸುತ್ತಿದ್ದೆ. ಓರ್ವ ವಿದ್ಯಾರ್ಥಿನಿ ಯಾವ ಪುಸ್ತಕವನ್ನೂ ತೆರೆಯದೆ ಸುಮ್ಮನೆ ಕುಳಿತು ಯೋಚನಾಮಗ್ನಳಾಗಿದ್ದಳು. ಕಾರಣ ಕೇಳಿದಾಗ ಅವಳು ಕೊಟ್ಟ ಉತ್ತರ ಹೀಗಿತ್ತು ” ನಾವು ಒಂದು ನಾಯಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದೆವು. ಇತ್ತೀಚೆಗೆ ಅದು ರಾತ್ರಿ ಹೊತ್ತು ವಿಚಿತ್ರವಾಗಿ ಬೊಗಳಲು ಶುರು ಮಾಡಿದ್ದರಿಂದ ಅಕ್ಕ ಪಕ್ಕದ ಜನರ ನಿದ್ದೆಗೆ ಭಂಗವಾಗುತ್ತದೆ ಅಂತ ದೂರದ ಸಂಬಂಧಿಕರ ಮನೆಗೆ ಅದನ್ನು ಕಳುಹಿಸಿಕೊಟ್ಟೆವು. ಸರಪಳಿ ಸಹಿತ ಅದನ್ನವರು ತೆಗೆದುಕೊಂಡು ಹೋಗಬೇಕಾದರೆ ಅದು ನನ್ನನ್ನೇ ನೋಡುತ್ತಾ.. ನೋಡುತ್ತಾ.. ಹೋಗುತ್ತಿತ್ತು ಮತ್ತು ಅದರ ಕಣ್ಣಂಚಿನಲ್ಲಿ ಹನಿ ಜಿನುಗಿತ್ತು. ನಾಯಿಗಳು ಕೂಡಾ ನಮ್ಮ ಹಾಗೆ ದುಃಖದ ಸಂದರ್ಭದಲ್ಲಿ ಅಳುತ್ತವಾ?!ಬಹುಶಃ ಅದು ನನಗೆ ಏನೋ ಹೇಳುವುದಿತ್ತು ಅನಿಸುತ್ತೆ. ಆದರೆ ಪಾಪ! ಅದಕ್ಕೆ ಬಾಯಿ ಬರುವುದಿಲ್ಲವಲ್ಲಾ…ಒಂದು ವೇಳೆ ನಮ್ಮ ಹಾಗೆ ಮಾತನಾಡುವಂತಿದ್ದರೆ   ಅದು  ನನಗೆ ಏನು ಹೇಳಿ ಹೋಗುತ್ತಿತ್ತು?ಎಂದು ಆಲೋಚಿಸುತ್ತಿದ್ದೆ ಮೇಡಂ ”  ” ನಾಯಿಗಳಿಗೆ ಮಾತನಾಡುವ ಶಕ್ತಿ ಇದ್ದಿದ್ದರೆ ಹಗಲು ರಾತ್ರಿಯೆನ್ನದೆ ಬೀದಿಯುದ್ಧಕ್ಕೂ ಅವುಗಳ ದನಿಯೇ ಮೇಳಯಿಸುತ್ತಿತ್ತು,  ಈಗ ಓದು, ಆಮೇಲೆ   ಆ ಬಗ್ಗೆ ಆಲೋಚನೆ ಮಾಡುವಿಯಂತೆ ” ಎಂದು ಆ ಹುಡುಗಿಯನ್ನು ಓದಿಗೆ ಹಚ್ಚಿದೆನಾದರೂ   ಹೌದು,…ಆ ನಾಯಿ ಮಾತಾಡುವಂತಿದ್ದಿದ್ದರೆ ಏನು ಹೇಳಿ ಹೋಗುತ್ತಿತ್ತು….  ಇಷ್ಟು ಪ್ರೀತಿಯಿಂದ ಮಕ್ಕಳ ಹಾಗೆ ಬೆಳೆಸಿದ ನನ್ನನ್ನು ಗುರುತು ಪರಿಚಯ ಇಲ್ಲದವರ ಮನೆಗೆ ಕಳುಹಿಸುತ್ತಿದ್ದೀರಲ್ಲ.. ನನ್ನ ಮೇಲೆ ಕರುಣೆ ಬಾರದೇ? ಎಂದು ಹೇಳುತ್ತಿತ್ತೋ ಏನೋ.ಈಗ ಆ ವಿದ್ಯಾರ್ಥಿನಿಯ  ಆಲೋಚನೆ ನನ್ನ ತಲೆ ಕೊರೆಯತೊಡಗಿತ್ತು. ಹೌದು, ಪ್ರಾಣಿಗಳಿಗೆ ಬಾಯಿ ಬಂದಿದ್ದರೆ , ಅವುಗಳೂ ಮಾತನಾಡತೊಡಗಿದರೆ ಇಡೀ ಪ್ರಪಂಚದಲ್ಲಿ ಒಂದು ನೈತಿಕ ಕ್ರಾಂತಿಯೇ ಆಗುತ್ತಿತ್ತು . ಕೇವಲ ಮೂಕ ಸನ್ನೆಗಳಿಂದಲೇ ಪ್ರಾಣಿಗಳು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಬಲ್ಲ ಮೂಕ ಪ್ರಾಣಿಗಳು ನಮ್ಮ ಮಾತಿನ ಶೈಲಿಯನ್ನು ಗಮನಿಸಿಯೇ ನಮ್ಮ ಸಂತೋಷ , ದುಃಖ,ಸಮಸ್ಯೆ  ಎಲ್ಲವನ್ನೂ     ಅರ್ಥೈಸಿಕೊಳ್ಳಬಲ್ಲವು.ನಮ್ಮತ್ತ ಕರುಣಾಪೂರಿತ  ದೃಷ್ಟಿ ಹರಿಸುತ್ತಲೇ  ನಮ್ಮ ಮನಸ್ಸನ್ನು ಆಕರ್ಷಿಸುವ ಸಾಕು ಪ್ರಾಣಿಗಳು ನಮ್ಮ ಮಾನಸಿಕ ಒತ್ತಡವನ್ನು ಕುಗ್ಗಿಸಿ ದೇಹದ ಆರೋಗ್ಯ ಮಟ್ಟ ಸುಧಾರಣೆಗೆ, ಲವಲವಿಕೆಯ ಜೀವನಕ್ಕೆ ಸ್ಫೂರ್ತಿಯಾಗಬಲ್ಲವು. ಉದಾಹರಣೆಗೆ ನಾಯಿಗಳನ್ನೇ ತೆಗೆದುಕೊಳ್ಳೋಣ. ಕೇವಲ ತಮ್ಮ ಮುಖ ಭಾವದಿಂದಲೇ ಸಂತೋಷ, ದುಃಖ, ಭಯ, ಸಿಟ್ಟು, ಅಪರಾಧಿ ಭಾವ, ಏಕಾಂಗಿತನದ ನೋವು, ಕೃತಜ್ಞತಾ ಭಾವ ಎಲ್ಲವನ್ನೂ  ಸ್ಪಷ್ಟಪಡಿಸಬಲ್ಲ ವಿಶ್ವಾಸಾರ್ಹ ಜೀವಗಳು.  ನಾವು ಮನುಷ್ಯರು ಕೇಕೆ ಹಾಕಿ, ಅತ್ತು ಕರೆದು ಗೋಳಾಡಿ, ಕಿರುಚಿ ಹೇಳುವ ಅಷ್ಟೂ ವಿಚಾರಗಳನ್ನು ಕೇವಲ ಮುಖ ಭಾವದಿಂದಲೇ ವ್ಯಕ್ತಪಡಿಸುವ ಅವುಗಳಿಗೆ ಮಾತೇಕೆ ಬೇಕು? ನಾವು ಬೈದರೆ ತಿರುಗಿ ಕೂರುತ್ತವೆ.ಪ್ರೀತಿ ತೋರಿದರೆ ಖುಷಿ ಪಡುತ್ತವೆ.  ಅವುಗಳ ತಪ್ಪಿಗೆ ಹೊಡೆಯಲು ಹೋದರೆ ಕಣ್ಣು ಮುಚ್ಚಿ ತೆರೆದು ಮಾಡುವ ಮೂಲಕ ಕ್ಷಮೆಯಾಚಿಸುತ್ತವೆ. ಗುಡುಗು ಸಿಡಿಲು ಅಥವಾ ವಿಪರೀತ ಸದ್ದು ಬಂದಾಗ ಭಯದಿಂದ ತಾನು ಅಸುರಕ್ಷಿತ ಎನ್ನುವ ಭಾವನೆ ಎದುರಾಗಿ ಎಲ್ಲೋ ಹೋಗಿ ಮುದುಡಿಕೊಳ್ಳುತ್ತವೆ. ತಮ್ಮ ಆಹಾರದ ಬೇಡಿಕೆ ಪೂರೈಕೆ ಆದಾಗ ಬಾಲ ಅಲ್ಲಾಡಿಸಿ ಕೃತಜ್ಞತೆ ಹೇಳುತ್ತವೆ. ಇಡೀ ದಿನ ಮನೆ ಕಾದು ಸುಸ್ತಾದ ಸಂದರ್ಭದಲ್ಲಿ ಮನೆ ಮಂದಿ ಬಂದಾಗ ‘ ನನಗೆಷ್ಟು ಬೇಜಾರಾಗಿತ್ತು, ನೀವು ನನ್ನೊಬ್ಬನನ್ನು ಬಿಟ್ಟು ಹೋದಿರಿ ‘ ಎಂದು ತನ್ನದೇ ದನಿಯಲ್ಲಿ ನೋವನ್ನು ನಿವೇದಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನೆಯೊಳಗೆ ಇರುವ ಬೆಕ್ಕಿನ ಬಗೆಗಿನ ತನ್ನ ಅಸಹನೆಯನ್ನು ಕೂಡಾ ನಾಯಿ ಸ್ಪಷ್ಟಪಡಿಸುವುದುಂಟು. ಸುಮ್ಮನೆ ಕುಳಿತಿದ್ದರೆ ತನ್ನ ತುಂಟ ನೋಟದಿಂದ ಆಟಕ್ಕೆ ಕರೆಯುವ ನಾಯಿಗೆ ನಮ್ಮ ಹಾಗೆ ಸದಾ ಸಂತೋಷವಾಗಿ ಇರಬೇಕು ಎನ್ನುವ ಹಂಬಲ ಉಂಟು . ಇನ್ನು ಬೆಕ್ಕು…ಅದು ಕೂಡಾ ತನ್ನ ವರ್ತನೆಯಿಂದಲೇ ಮನದ ಇಂಗಿತವನ್ನು ವ್ಯಕ್ತಪಡಿಸಬಲ್ಲ ಮುದ್ದು ಪ್ರಾಣಿ.ತನ್ನನ್ನು ಮುಟ್ಟಿದ ತಕ್ಷಣ ಮೈ ತೊಳೆದುಕೊಳ್ಳುವ ಬೆಕ್ಕು ತಾನು ಬಹಳ ಸ್ವಚ್ಛತೆಯ ಪ್ರಾಣಿ ಎಂಬುದನ್ನು ತನ್ನ ಕ್ರಿಯೆಯ ಮೂಲಕವೇ ವ್ಯಕ್ತಪಡಿಸುತ್ತದೆ.  ಆದರೆ ನಾಯಿಯಷ್ಟು ನಿಯತ್ತು ಇದಕ್ಕಿಲ್ಲ. ಎಲ್ಲೋ ಓದಿದ ನೆನಪು… ನಾಯಿ ನಾವು ಊಟ ಹಾಕುವ ಸಂದರ್ಭದಲ್ಲಿ ” ಇವನು ನನಗೆ ಅನ್ನ ನೀರು ಕೊಟ್ಟು ಸಾಕುತ್ತಿದ್ದಾನೆ, ಇವನೇ ನನ್ನ ಪಾಲಿನ ದೇವರು…” ಎಂದರೆ ಬೆಕ್ಕು ” ನಾನೇ ದೇವರು, ಅದಕ್ಕಾಗಿ ಇವ ನನಗೆ ಊಟ ಕೊಡುತ್ತಿದ್ದಾನೆ ” ಎಂದು ಭಾವಿಸುತ್ತದಂತೆ!!ಅದೇನೇ ಇರಲಿ, ಮಾತಿನ ಕಲೆಗಾರಿಕೆ ಇಲ್ಲದಿದ್ದರೆನಂತೆ.. ಮೂಕ ಪ್ರಾಣಿಗಳ ಭಾವಾಭಿನಯಕ್ಕೆ ಯಾವ ರಂಗ  ಕಲಾವಿದನೂ ಸಾಟಿಯಾಗಲಾರ. ನಮ್ಮ ಧ್ವನಿಯ ಏರಿಳಿತವನ್ನು ನಮ್ಮ ವರ್ತನೆಯನ್ನು ಅರ್ಥಮಾಡಿಕೊಳ್ಳಬಲ್ಲ ನಾಯಿ ಬೆಕ್ಕುಗಳು  ನಮ್ಮ ಸುಖ ದುಃಖಗಳಲ್ಲಿ ಅವುಗಳದೇ ಆದ ರೀತಿಯಲ್ಲಿ ಸ್ಪಂದಿಸಬಲ್ಲವು.ಮನೆಯ ಯಜಮಾನನ ಗೋರಿಯ ಮೇಲೆ ಬಿದ್ದು ಹೊರಳಾಡಿದ ನಾಯಿಯ  ವೇದನೆಗೆ ನಾವು  ಬೆರಗಾಗಿ ಮೂಕರಾಗಿ ನಿಂತುಬಿಟ್ಟಿಲ್ಲವೇ? ಮೂಕ ಪ್ರಾಣಿ ಆದರೇನಂತೆ, ಪುಟ್ಟ ಮಕ್ಕಳನ್ನು ತನ್ನ ಕಣ್ಣ ನೋಟದಿಂದಲೇ ಕಾಯುವ ನಾಯಿಗಳಿದ್ದಾವೆ. ಪಾಪ! ಕೆಲವೊಮ್ಮೆ ನಾವು ಕೊಟ್ಟ ಆಹಾರ ಅವುಗಳಿಗೆ ಇಷ್ಟವಿಲ್ಲದಿದ್ದರೂ  ನಮ್ಮ ತೃಪ್ತಿಗಾಗಿ ಅದನ್ನು ತಿನ್ನುವ ಮೂಲಕ ಒಂದು ಬಗೆಯ ಸೌಜನ್ಯ ತೋರುವ ಗುಣ ಮೂಕ ಪ್ರಾಣಿಗಳಿಗುಂಟು!! ಒಮ್ಮೆ ನಮ್ಮ ಮನೆಯ ಬೆಕ್ಕಿಗೆ ಜಿಲೇಬಿ ಕೊಟ್ಟೆ. ಬೇಡ ಅನ್ನುವ ರೀತಿಯಲ್ಲಿ ತಿರುಗಿ ಕುಳಿತಿತು.ನಾನು ಸುಮ್ಮನಾಗದೆ ಪದೇ ಪದೇ  ಅದರ ಎದುರು ಹಿಡಿದು ‘ತಿನ್ನು ಬಿಲ್ಲಿ’ ಎಂದು ಮುದ್ದಾಗಿ ಹೇಳಿದೆ. ಪಾಪ ಅದಕ್ಕೆ ಏನನಿಸಿತೋ ಏನೋ ದಾಕ್ಷಿಣ್ಯ ಕ್ಕೆ ಗಂಟು ಬಿದ್ದು ನನ್ನಿಂದ  ಜಿಲೇಬಿ ಪಡಕೊಂಡು   ಆಚೆ ಹೋಗಿ ಉಗಿದು ಬಂತದು!!ಬೇಸರ ಮಾಡಿಸಬಾರದು ಎನ್ನುವ ಕಾಳಜಿ ಅದಕ್ಕೂ ಇದೆ!!ಅಂದ ಮೇಲೆ ಅವುಗಳಿಗೆ ಮಾತೇಕೆ ಬೇಕು?   ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಇತ್ಯಾದಿಗಳಿಗೆ ಹೆಸರುವಾಸಿಯಾದ ನಾಯಿಗೆ ಮಾತನಾಡುವ ಕಲೆಗಾರಿಕೆ ದೇವರು ಕೊಟ್ಟಿದ್ದಿದ್ದರೆ… ಬಹುಶಃ ಕೆಲವು ಮನುಷ್ಯರಂತೆ ಅವುಗಳು ಕೂಡಾ ಸುಳ್ಳು, ಮೋಸ ವಂಚನೆಗಳ ಸುಳಿಗೆ ಸಿಲುಕುತ್ತಿದ್ದವು.  ಅವುಗಳು ಮಾತಿಲ್ಲದೆಯೇ ಜೀವನ ಸಾಗಿಸಬಲ್ಲವು ಎಂದೇ ದೇವರು ಅವುಗಳನ್ನು  ಮೂಕವಾಗಿಸಿರಬೇಕು. ದೇವರ ಸೃಷ್ಟಿ ನಿಯಮದ ಬಗ್ಗೆ ಅಥವಾ ಅದಕ್ಕೆ  ವಿರುದ್ದವಾಗಿ   ಆಲೋಚನೆ ಮಾಡುವುದಕ್ಕೂ  ನಾವು ಅರ್ಹರಲ್ಲ. ಜಯಲಕ್ಷ್ಮಿ ಮಡಿಕೇರಿ

“ಹೀಗೊಂದು ಆಲೋಚನೆ…”ಕೆ.ಜಯಲಕ್ಷ್ಮಿ ಅವರ ಪ್ರಬಂಧ Read Post »

ನಿಮ್ಮೊಂದಿಗೆ

“ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)ಶ್ರೀದೇವಿ. ಮ.ಗುಮ್ಮಗೋಳ.

ನೆನಪುಗಳ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ. “ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)      ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಮತ್ತು ಯೌವನ ಅಲ್ಬಂಗಳಿದ್ದಂತೆ. ಅವುಗಳನ್ನು ಮತ್ತೆ ಮತ್ತೆ ತೆರೆದು ನೋಡಿ ನೆನಪುಗಳು ಮರುಕಳಿಸುವಂತೆ ಮಾಡುತ್ತವೆ.  ಮಾತು ಬೆಳ್ಳಿ ಮೌನ ಬಂಗಾರವೆನ್ನುವ ಹಾಗೆ ಯೌವನ ಬೆಳ್ಳಿಯಾದರೆ ಬಾಲ್ಯ ಬಂಗಾರದಂತೆ.   ನಾನು ಹೈಸ್ಕೂಲಿನಿಂದ ಪೊಸ್ಟ ಗ್ರಾಜ್ಯೂಯೇಶನ ವರೆಗೆ ಓದಿದ್ದು ಧಾರವಾಡದಲ್ಲಿ. ನಾನು ಹಳ್ಳಿಯಿಂದ ಧಾರವಾಡಕ್ಕೆ ಕಲಿಯಲು ದಿನವೂ ಬಸ್ ನಲ್ಲೆ ಹೋಗುವಾಗ ಬರುವಾಗ ಅರ್ದಗಂಟೆ ಪ್ರಯಾಣ. ಈ ಬಸ್ ಪ್ರಯಾಣದ ಅನೇಕ ನೆನಪುಗಳು, ಹಾಸ್ಯ ಪ್ರಸಂಗಗಳು, ವಿಚಿತ್ರ ಘಟನೆಗಳು ನನ್ನ ಜೀವನದ ಕಪಾಟಿನೊಳಗೆ  ಭದ್ರವಾಗಿ ಕುಳಿತಿವೆ. ಅವೆಲ್ಲಾ ನನ್ನ ನೆನಪಿನ ಬುತ್ತಿಯಲ್ಲಿ ಮರೆಯಲಾರದ ಕ್ಷಣಗಳು. ಶಾಲೆಯಲ್ಲಿಯ ನೆನಪುಗಳು ಒಂದು ತೆರನಾದರೆ ಕಾಲೇಜಿನ ನೆನಪುಗಳು ಮತ್ತೊಂದು ರೀತಿಯವು. ಶಾಲೆಗೆ ಹೋಗುವಾಗ ಬೆನ್ನಿಗೆ ಹಾಕುತಿದ್ದ ಪಾಟಿಚೀಲಗಳನ್ನು ನೋಡಿ ಬಸ್ಸ ನಲ್ಲಿ ಪಕ್ಕದಲ್ಲಿ ಕುಳಿತ ಅಂಕಲ ಅಂಟಿಗಳು  “ನಿಮಗಿಂತ ನಿಮ್ಮ ಪಾಟಿಚೀಲಗಳೆ ದೊಡ್ಡುವಿವೆಯಲ್ಲಾ ತಂಗಿ ಕೊಡು ಇಲ್ಲಿ ಹಿಡಕೊತೇನಿ” ಎಂದು ಕೆಲವರು ಇಸಿದು ಕೊಳ್ಳುತ್ತಿದ್ದರು.  ಇನ್ನು ಕೆಲವರು ಅದರಲ್ಲೂ ಹಳ್ಳಿಯ ಮುದಕಿಯರು ನಮ್ಮ ಬ್ಯಾಗು ಅವರ ಬೆನ್ನಿಗೆ ತಾಗಿದ ಕೂಡಲೇ ತಮಗೇನೊ ಒಂದು ದೊಡ್ಡ ಗದಾ ಪ್ರಹಾರವೇ ಆಯಿತೊ ಅನ್ನುವಂತೆ ಬಾಯಿಗೆ ಬಂದಂತೆ “ಇವೇನು ಎಷ್ಟ ಸಾಲಿ ಕಾಲಿತಾವೋ ಏನೊ?…  ಇವಿರುದೊ ಒಂದ ಮಣಾ ಇವಕರದು ಚೀಲಾ ನೋಡ…. ಗೋಣಿ ಚೀಲಾಗೆತಿ… ಎಲ್ಲಿಂದ ಬಂದಿ ಅತಾಕ… ಮದಲ ಪಾಟಿ ಚೀಲಾ ತಗದು… ಮ್ಯಾಲ ಇಡು” ಎಂದು ಬಯ್ಯುವರು. ಬಸ್ಸಿನಲ್ಲಿ ಸಾಮಾನುಗಳನ್ನು ಇಡಲು ಮೇಲಗಡೆ ಉದ್ದಕ್ಕೆ ಒಂದು ಪಟ್ಟಿ (loner/rack) ಇರತಿತ್ತು. ನಾವು ಆಜು ಬಾಜುವರ ಕಡಿಂದ ಬಯ್ಯಸಿಕೋತ ಗುದ್ಯಾಡಕೋತ ಬ್ಯಾಗ ತಗೆದು ಮೇಲೆ ಇಡುತ್ತಿದ್ದೇವು.      ಒಂದ ಸಾರಿ  ಬಸ್ ಕಂಡಕ್ಟರ ಬಸ್ ಪಾಸ ಕೇಳಿದಾಗ ಬ್ಯಾಗನಲ್ಲಿ ಇರಲಿಲ್ಲ. ಬಸ್ ಪಾಸು ಮನೆಯಲ್ಲೆ ಉಳಿದು ಬಿಟ್ಟಿತ್ತು. ಸ್ಕೂಲಿಗೆ ಹೋಗುವಾಗ ಮನೆಯಲ್ಲಿ ಇನ್ನೂ ಸಣ್ಣವರೆಂದು ಒಂದು ಪೈಸೆಯು ಕೊಡುತ್ತಿರಲಿಲ್ಲ. ಕಂಡಕ್ಟರ್ ಟಿಕೇಟ ತೆಗೆಸಬೇಕೆಂದಾಗ ನನ್ನ ಕಡೆ ಒಂದು ಪೈಸೆಯೂ ಇರಲಿಲ್ಲ. ಪಾಪ ಪಕ್ಕದಲ್ಲಿದ್ದ ಪುಣ್ಯಾತ್ಮರೊಬ್ಬರು ಟಿಕೇಟ ತೆಗೆಸಿದರು. “ಅಂಕಲ್ ನಿಮ್ಮ ಅಡ್ರೆಸ್ ಕೊಡಿ ನಿಮಗೆ ದುಡ್ಡು ಕಳಿಸುತ್ತೇನೆ” ಎಂದು ಎಷ್ಟು ಕೇಳಿಕೊಂಡರು ಬೇಡಮ್ಮಾ ನೀನು ನನ್ನ ಮಗಳಿದ್ದಂತೆ ಎಂದರು. ಕಾಲೇಜಿಗೆ ಹೊಗುವಾಗ ನನ್ನಪ್ಪ ತಿಂಗಳಿಗೊಮ್ಮೆ ಹತ್ತೊ ಇಪ್ಪತ್ತೊ ರೂಪಾಯಿ ದುಡ್ಡು ಕೊಡುತ್ತಿದ್ದ.  ಪಿ.ಯು.ಸಿ ಓದುವಾಗ ಕ್ಲಾಸಿನಲ್ಲಿ ಲೆಕ್ಚರೊಬ್ಬರು “ನೋಡ್ರಿ ನಿಮ್ಮನ್ಯಾಗ ನಿಮ್ಮ ಖರ್ಚಿಗಂತ ಏನೊ ದುಡ್ಡ ಕೊಟ್ಟರ ಹುಡಗರ ನೀವು ಸಿಗರೇಟೊ ಮತ್ತೊಂದೊ ಕೆಟ್ಟ ಚಟಕ್ಕ ಉಪಯೋಗಿಸಬ್ಯಾಡ್ರಿ…… ಹೆಣ್ಣ ಮಕ್ಕಳ ನೀವು.. ಖಾಲಿಪೀಲಿ ಆಯ್ಸಕ್ರೀಮ್ ತಿಂದೆ.. ಕೇಕ ತಿಂದೆ….ಅಂತ ಖರ್ಚ ಮಾಡಬ್ಯಾಡ್ರಿ  ಪಕ್ಕದಲ್ಲೆ ಇಲ್ಲೆ ಬ್ಯಾಂಕ ಅದ ಅದರಳೊಗ ಅಕೌಂಟ ಓಪನ್ ಮಾಡಿ ಕೂಡಿ ಇಡುದನ್ನ ಈಗಿಂದ ಕಲಿರಿ… ಅಲ್ಲದ ಬ್ಯಾಂಕಿನ ವ್ಯವಹಾರ ಏನು ಅನ್ನುದು ನೀವು ತಿಳಕೊಂಡಂಗ ಆಗ್ತದ” ಅಂತ ಹೇಳತಿದ್ದರು.  ಅವರ ಪ್ರಭಾವದಿಂದಾಗಿ ನಾನು ಬ್ಯಾಂಕನಲ್ಲಿ ಆಗಲೇ ಒಂದು saving account ಓಪನ್ ಮಾಡ್ದೆ.  ಕೂಡಿಟ್ಟ ಹತ್ತೊ ಇಪ್ಪತ್ತೊ ವರ್ಷಕ್ಕೆ ಸಾವಿರ ರೂಪಾಯಿವರೆಗೂ ಆಗ್ತತ್ತು.  ಆಗ ಅದೇ ದೊಡ್ಡ ಅಮೌಂಟು. ಸರ್ ಹೇಳದಂಗ ಬ್ಯಾಂಕಿನ ವ್ಯವಹಾರದ ಜ್ಞಾನನು ಬಂತು.       ನಾನು ಕಾಲೇಜಿಗೆ ಬೆಳಿಗ್ಗೆ ೬.೩೦ ಕ್ಕೆ ನಮ್ಮೂರಿನ ಒಳಗಡೆ ಬೆರೆಯ ಮತ್ತೊಂದು ಹಳ್ಳಿಯಿಂದ ಬರುತ್ತಿದ್ದ ಬಸ್ಸ ನ್ನು ಹತ್ತಿ ಕಾಲೇಜಿಗೆ ಹೋದರೆ ಮದ್ಯಾಹ್ನ ೧ ಗಂಟಗೆ ಕ್ಲಾಸ್ ಬಿಡುತ್ತಿತ್ತು. ನಮ್ಮೂರು ಹೈವೆ ಮೇಲಿದ್ದರೂ ನಮ್ಮೂರಿಗೆ ಕಡಿಮೆ ಬಸ್ಸಗಳು ನಿಲ್ಲುತ್ತಿದ್ದವು. ಹೆಚ್ಚಾಗಿ ಎಕ್ಸಪರೆಸ್ ಬಸ್ ಗಳೆ ಅವು ನಿಲ್ಲುತ್ತಿರಲಿಲ್ಲ. ನಾನೇನಾದರೂ ಒಳಗಡೆ ಹಳ್ಳಿಯಿಂದ ಬರುತ್ತಿದ್ದ ಬಸ್ ನ್ನು ತಪ್ಪಿಸಿದರೆ ಮೊದಲನೆ ಕ್ಲಾಸ ಬಂಕ ಆಗುತ್ತಿತ್ತು. ಮದ್ಯಾಹ್ನ ಕೂಡಾ ಸರಿಯಾಗಿ ಲಾಂಗರೂಟ್ ಬಸ್ ಗಳಿಲ್ಲದೇ ಅದೇ ನಮ್ಮೂರಿನಿಂದ ಒಳ ಹೋಗುವ ಹಳ್ಳಿ ಬಸ್ಸೆ ಗತಿ. ಅದೋ ಹಳೆ ಕಾಲದ ಟ್ರಂಕ್ ತರಹ. ಡಕೊಟಾ ಬಸ್ ಎಂದೆ ಫೇಮಸ್ಸು. ಡಕೊಟಾ ಎಕ್ಸಪ್ರೆಸ ಪಿಕ್ಚರ್ ನೋಡಿದವರು ಊಹಿಸಿಕೊಳ್ಳಿ ಅದರಲ್ಲಿರುವಂತೆಯೇ ನಮ್ಮ ಬಸ್ ಡಕೊಟಾ ಆಗಿತ್ತು. ಊರನ್ನು ದಾಟಿ ಅರ್ದ ದಾರಿ ಕ್ರಮಿಸಿದ ಮೇಲೆ ಎಷ್ಟೊ ಸಾರಿ ಬಂದ್ ಬಿದ್ದು ಮತ್ತೆ ಬೇರೆ ಬಸ್ಸಿಗೆ ದಾರಿ ಕಾದ ಕಾದು ಸುಸ್ತಾಗಿ ಕಂಡಕ್ಟರ ಜೊತೆ ಜಗಳಕ್ಕೆ ನಿಲ್ಲುವದು, ಮುಖ್ಯವಾದ ಕೆಲಸ ಕಾರ್ಯಗಳಿದ್ದವರು ಪರದಾಡುವದು ಮಾಮೂಲಾಗಿತ್ತು. ಬೇಸಿಗೆಯಲ್ಲಿ ನಿಂತಂತ ಬಸ್ಸನಲ್ಲಿ ಸೆಕೆ ತಾಳಲಾರದೆ ಗಂಡಸರು ಹೊರಗಡೆ ಹೋಗಿ ನಿಂತರೆ ನಾವು ವಿಧಿಯಿಲ್ಲದೇ ಅದರಲ್ಲಿಯೇ ಬೆವರಿಳಿದು ಮೈಗೆ ಬೆವರಿನ ಸ್ನಾನ. ಕಂಡಕ್ಟರ್ ಬೇರೆ ಬಸ್ ಗೆ ಪ್ರಯಾಣಿಕರನ್ನು ಹೊಂದಿಸಲು ಹೆಣಗಾಡುತ್ತಿದ್ದ.       ನಮ್ಮೂರು ನನ್ನ ಅಕ್ಕ ಪಕ್ಕದ ಊರುಗಳಿಂದ ಕಾಲೇಜ ಕಲಿಯಲು ಎಳೆಂಟು ಹುಡಗೀಯರು ಮತ್ತು ಒಂದಿಷ್ಟು ಹುಡಗರ ದಂಡು ಇರುತ್ತಿತ್ತು. ಡಕೋಟಾ ಎಕ್ಸಪ್ರೆಸ್ ಬಸ್ಸನ್ನು ಡ್ರೈವರ ಒಂದ ತಾಸು ಮುಂಚೆ ಬಸ್ ಸ್ಟ್ಯಾಂಡಿನಲ್ಲಿ ತಂದು ಒಂದು ಬೇರೆ ಕಡೆ ನಿಲ್ಲಿಸುತ್ತಿದ್ದ. ಕಾಯಂ ಅದೇ ಸ್ಥಳದಲ್ಲಿ ನಿಲ್ಲಿಸುತ್ತಿದ್ದ. ನಮ್ಮೂರಿಗೆ ಹೋಗುವ ಹುಡಗ ಹುಡಗೀಯರಿಗೆ ಅದೇ ಬಸ್ಸೆಂದು ಗೊತ್ತಿರುತ್ತಿತ್ತು. ಆ ಬಸ್ ಬಂದ ಕೂಡಲೇ ಹುಡಗರು “ಬಂತು…. ಬಂತು…. ಡಕೊಟಾ ಎಕ್ಸಪ್ರೆಸ್….” ಎಂದು ಹಾಡು ಸುರು ಹಚ್ಚುತ್ತಿದ್ದರು. ನನಗಿನ್ನೂ ನೆನಪಿದೆ ನಾನು ಡಿಗ್ರಿ ಕಲಿಯುತ್ತಿದ್ದಾಗ ರೀಗಲ್ ಟಾಕೀಜಗೆ ಡಕೊಟಾ ಎಕ್ಸಪ್ರೆಸ ಪಿಕ್ಚರ್ ಬಂದಿತು. ಆ ಪಿಕ್ಚರ್ ನಂತರ ಅದೇ ಸ್ಥಿತಿ ಇರುವ ನಮ್ಮ ಬಸ್ಸು ಡಕೊಟಾ ಎಕ್ಸಪ್ರೆಸ್ ಎಂದೇ ಫೇಮಸ್ ಆಗಿತ್ತು. ನಾವು ಕಾಲೇಜಿನಲ್ಲಿ ಡಬ್ಬಿ ತಿನ್ನದೇ ಹಾಗೆ ಉಳಿಸಿಕೊಂಡು ಬಂದಿದ್ದರೆ ನಿಲ್ಲಿಸಿದ ಆ ಬಸ್ ನಲ್ಲಿ ಹೋಗಿ ಕುಳಿತು ನಾನು ಮತ್ತು ಇಬ್ಬರೂ ಸ್ನೇಹಿತೆಯರು ಕೂಡಿ ಹಾಸ್ಯ ಚಟಾಕಿ ಮತ್ತು ಮಾತುಗಳ ಬತ್ತಿಗಳೊಂದಿಗೆ ನಮ್ಮ ಬುತ್ತಿ ತೆಗೆದು ತಿನ್ನುತ್ತಿದ್ದೇವು.         ಆ ಬಸ್ ಒಂದ ತರಹ ಆಲ್ ಇಂಡಿಯಾ ರೇಡಿಯೊ, ಮಿರ್ಚ ಮಸಾಲಾ ಕಡೆಗೆ ನಮೆಗೆಲ್ಲಾ ಒಂದು ಮಿನಿ ಪ್ರಪಂಚವೇ ಆಗಿರುತ್ತಿತ್ತು‌. ಇದರೋಳಗೆ ಅಜ್ಜ -ಅಜ್ಜಿ, ಅಂಟಿ ಅಂಕಲಗಳು ಮಾತುಗಿಳಿದಾಗ ಅವರ ಮನೆ ಮನೆ ರಾಮಾಯಣ, ಹರಿಕಥೆಗಳು ನಮ್ಮ ಕಿವಿಗಳಿಗೂ ಬಿಳುತ್ತಿದ್ದವು. ಹಿಂದೆ ಕುಳಿತು ಚೇಡಿಸುವ ಹುಡಗರದು ಇನ್ನೊಂದು ತರಹ. ಸುಸ್ತಾಗಿ ಬೇಸತ್ತು ಸ್ವಲ್ಪ ನಿದ್ರೆಗೆ ಜಾರಿದರೆ. ಚೇಡಿಸುತ ಹಾಡುವವರು“ರಾಮಚಾರಿ ಹಾಡುವಾ ಲಾಲಿ ಹಾಡ ಕೇಳವಾನೀಲಿಬಾನಿನೂರಿಗೆ ಬೆಳ್ಳಿ ದೀಪ ನೀನವಾ…..”        ಈಗೀನ ಹಾಗೆ ಆಗ ಪೇಸ್ ಬುಕ್, ಟ್ವಿಟರ, ವ್ಯಾಟ್ಸಪ್ ಯಾವುದೂ ಇಲ್ಲದ ಪ್ರಪಂಚ. ಒಬ್ಬರಿಗೊಬ್ಬರು ಹರಟೆ, ಜೊಕ್ಸು ಇವೆ ಆಗ ಬಸ್ಸಿನಲ್ಲಿ ಬೇಸರ ಕಳೆಯುವ ಟೈಮ್ ಪಾಸ್.ಬಸ್ ನಲ್ಲಿ ಹುಟ್ಟಿಕೊಂಡ ಪ್ರೇಮಗಳೆಷ್ಟೊ, ಪರಿಚಯವಾಗಿ ಮಾತಿಗಿಳಿದ ಸ್ನೇಹದಲ್ಲಿ ರೆಕ್ಕಪುಕ್ಕ ಹಚ್ಚಿ ಹರಡಿದ ಗಾಸಿಪ್ ಗಳೆಷ್ಟೊ ಲೆಕ್ಕವಿಲ್ಲ. ಚಂದವಾಗಿರುವ ಹುಡಗೀರಗೆ ಹುಡಗರಿಂದ ಹಿಡಿದು ಹೊಟ್ಟೆ ಉಬ್ಬಿಸಿಕೊಂಡ ಅಂಕಲಗಳು ಹಲ್ಲು ಗೀರಿಯುತ್ತ  ತಮ್ಮ ಪಕ್ಕದಲ್ಲಿರುವ ಸೀಟಿನಲ್ಲಿ ಕೂತುಕೊಳ್ಳಲು ಹೇಳುವರು. ಕೆಲವೊಬ್ಬರು ತಾವೇ ಕುಳಿತ ಸೀಟನ್ನು ಬಿಟ್ಟು ಕೊಡುತ್ತಿದ್ದರು. ಎಷ್ಟೊ ಸಾರಿ ನಾನು ಕುಳಿತಂತೆ ಮಾಡಿ ಪಕ್ಕದಲ್ಲಿ ನಿಂತಿರುವ ಅಂಟಿಯರಿಗೆ, ಅಜ್ಜಿಯರಿಗೆ ನನ್ನ ಸೀಟು ಬಿಟ್ಟು ಕೊಟ್ಟಿದ್ದಿದೆ. ಈಗ ಬಿಡಿ ನಾನೂ ಅಂಟಿಯಾಗಿ ಆ ಅಂಟಿಗಳ ಸಾಲಿನಲ್ಲಿ ನಾನು ನಿಂತಿದ್ದೇನೆ.        ಒಂದು ಸಾರಿ  ಹೆರಗಿಗೆಂದು ಧಾರವಾಡಕ್ಕೆ ಬರಲು ಬಸ್ ಹತ್ತಿದವಳು ಇನ್ನೇನೂ ಧಾರವಾಡದ ಸಮೀಪ ಇತ್ತು ಆಗಲೇ ಅವಳಿಗೆ ಜೋರಾಗಿ ಹೆರಗೆ ನೋವು ಪ್ರಾರಂಭವಾಯಿತು ಕಂಡಕ್ಟರ ಪ್ರಯಾಣಿಕರನ್ನೆಲ್ಲ ಅಲ್ಲೆ ಇಳಿಸಿದ.  ಅವಳಿಗೆ ಬಸ್ ನಲ್ಲಿಯೇ ಹೆರಿಗೆಯಾಯಿತು.  ಬಸ್ ನಲ್ಲೆ ಮಗುವಾಗಿದ್ದರಿಂದ ಗಂಡಾಗಿದ್ದರೆ ಬಸಪ್ಪ ಎಂದೋ ಹೆಣ್ಣಾಗಿದ್ದರೆ ಬಸವ್ವ ಎಂದೋ ಇಟ್ಟಿರಬಹುದೇನೊ ಎಂಬುದು ನನ್ನ ಅನುಮಾನ. ಸುಮ್ನೆ ಹಾಸಕ್ಕೆ ಹೇಳಿದೆ.  ಅವಳಿಷ್ಟದ ಹೆಸರು ಅವಳಿಟ್ಟರಬಹುದು.        ಕುಂಟುತ್ತಾ ಸಾಗುವ ಬಸ್ಸು ಅದರಲ್ಲೂ ಮಳೆಯಾಯಿತೆಂದರೆ ರೊಡಲ್ಲಿ ಅಲ್ಲಲ್ಲಿ ತಗ್ಗು ಗುಂಡಿಗಳು, ಯೌವನಕ್ಕೆ ಕಾಲಿಟ್ಟ ಹೆಣ್ಣಿನಂತೆ ಉಬ್ಬುತಗ್ಗುಗಳು. ಅಂತುವಗಳನ್ನು ದಾಟುವಾಗ ಬಸ್ಸು ಪುಟಿದೇಳುತ್ತಿತ್ತು. ಹಾಗೆ ಪುಟಿದೆದ್ದಾಗ ಯಾರದೋ ಚೀಲದಲ್ಲಿದ್ದ ಅಕ್ಕಿಕಾಳು ನಮ್ಮೂರಿನಿಂದ ಕಾಲೇಜಿಗೆ ಬರುವ ಒಬ್ಬ ಹುಡಗಿಯ ಮೇಲೆ ಬಿದ್ದು ಬಿಟ್ಟವು.  ಅವಳು ನನಗೆ ಅಕ್ಕಳ ಸಮಾನಳಾಗಿದ್ದಳು.   ಎಲ್ಲರೂ ಗೋಳೊ ಎಂದು ನಗತೊಡಗಿದರು. ಒಬ್ಬ ಅಜ್ಜಿ “ಆತು ತುಗೊ ತಂಗಿ ನಿನ್ನ ಮದುವಿ ಲಗೂ ಆಗ್ತೈತಿ” ಅಂದಾಗ ಹಿಂದೆ ಕುಳಿತಿದ್ದ ಕಿಡಗೇಡಿ ಹುಡಗರು “ಮದುವೆ ಆತು ಡುಮ್ …ಡುಮ್ …”ಎಂದು ಚೇಡಿಸತೊಡಗಿದರು. ಮತ್ತೆ ಕೆಲ ಹುಡಗರು ಸಣ್ಣಗೆ ತಮ್ಮ ತಮ್ಮೊಳಗೆ “ನಮ್ಮೂರ ಯುವ ರಾಣಿ ಕಲ್ಯಾಣ ವಂತೆ ವರನಾರೆಂದು ನೀ ಹೇಳು ಓ….ಕೋಗಿಲೆ..” ಎಂದು ಹಾಡಿದ್ದು ಇದೆ. ಆದರೆ ಪಾಪ ಆಗಿದ್ದೆ ಬೇರೆ ನನಗಿಂತ ನಾಲ್ಕೈದು ವರ್ಷ ದೊಡ್ಡವಳಾದ ಅವಳ ಮದುವೆ ನನ್ನ ಮದುವೆಯಾದ ನಾಲ್ಕೈದು ವರಷಕೆ  ಮದುವೆಯಾಯಿತು.  ಹೀಗೆ ಮೆಲಿಟ್ಟಂತ ಲಗೇಜುಗಳಿಂದ ಕೆಳಗೆ ಕುಳಿತವರ ತಲೆ ಮೇಲೆ ಬಿದ್ದ ಅರಿವೆ, ಉಂಡೆ, ಚಕ್ಕುಲಿ, ಬಾಳೆಹಣ್ಣು, ದ್ರಾಕ್ಷಿ ಹಣ್ಣುಗಳೆಷ್ಟೊ  ಸ್ವಲ್ಪ ಮೇಲ್ಮುಖ ಮಾಡಿದರೆ ಸೀದಾ ಅವರ ಬಾಯಿಗೆ. “ಸೀದಾ ಲಡ್ಡು ಮೂ ಪೆ….” ಯಾವುದೊ ಚಾಕ್ಲೇಟಿನ ಅಡ್ವರಟೈಸ ಒಂದು ಗಕ್ಕನೆ ಬಂದು ಕಣ್ಣು ಮುಂದೆ ಹೋದಂತೆ.       ಒಂದ ಬಾರಿ ಡ್ರೈವರಂತೂ ಬಸ್ ಹತ್ತಿ ಕೂತವನೆ ಬಸ್ ಹೊಡೆಯತೊಡಗಿದ.  ಬಸ್ ನಲ್ಲಿ “ಒಹೊ.. ಒಹೊ….ಬಸ್ ನಿಲ್ಲಸರಿ…” ಎಂದು ಚೀರತೊಡಗಿದರು. ಬಸ್ ಡ್ರೈವರ್ ನ ಕಿವಿ ಮಂದಿದ್ದವೋ ಏನೊ ಗೊತ್ತಿಲ್ಲ ಅವನು ಹಾಗೆ… ಗಾಡಿ ಹೊಡೆಯತೊಡಗಿದ.  ಎಲ್ಲರೂ ಅದರಲ್ಲೂ ಕಿಡಗೆಡಿ ಹುಡಗರು ಕೈಯಿಂದ ಬಸ್ ನ್ನು ಕುಳಿತಲ್ಲಿಂದ ನಿಂತಲ್ಲಿಂದ ಬಡಿಯತೊಡಗಿದರು. ಆಗ ಡ್ರೈವರ್ ಎಚ್ಚತ್ತು ಏತಕೆ ಬಸ್ಸ ಬಡಿಯುತ್ತಿರುವರು ಎಂದು ಬಸ್ ನಿಲ್ಲಿಸಿದ. ಆಗಲೇ ಅವನಿಗೆ ಗೊತ್ತಾಗಿದ್ದು ತಾನು ಕಂಡಕ್ಟರನನ್ನೆ ಬಿಟ್ಟು ಬಂದಿದ್ದೇನೆ ಎಂದು.  ಅದಾಗಲೇ ಬಸ್ ಬಸ್ ಸ್ಟ್ಯಾಂಡಿಂದ ಎರಡು ಕಿಲೊಮಿಟರ್ ಬಂದಿತ್ತು. ಡ್ರೈವರ್ ಮತ್ತೆ ಬಸ್ ನ್ನು ಹೊರಳಿಸಿ ಬಸ್ ಸ್ಟ್ಯಾಂಡ ಕಡೆಗೆ ಹೊಡೆದ. ಬಸ್ ನಲ್ಲಿದ್ದ  ಕೆಲವರು  “ಹಂಗ…. ಇದ್ದರ.. ಡ್ರೈವರ ನಮ್ಮ ಊರ ಮಟಾ… ಗಾಡಿ ಹೊಡಿತಿದ್ದ. ಇವತ್ತು ಪ್ರೀ ಯೊಳಗ… ಮನಿಗೆ ಹೋಗ್ತಿದ್ವಿ. ನಮ್ಮ ರೊಕ್ಕ ಲುಕ್ಸಾನ ಆತು ನೋಡ…” ಎಂದು ಪರದಾಡತೊಡಗಿದರು.  ಬಸ್ಸಿನಲ್ಲಿದ್ದ ನನ್ನ ಸ್ನೇಹಿತೆಯರು ಆಮೇಲೆ ಬೇರೆಯವರಿಗೆ ಆ ಸಂಗತಿ ಹೇಳಿ ನಕ್ಕಿದ್ದೆ ನಕ್ಕಿದ್ದು.     ಮೊದಲೇ ಡಕೊಟಾ ಬಸ್ ಕೆಲವೊಂದ ಸಾರಿ ಪ್ರಯಾಣಿಕರನೆಲ್ಲಾ ಹತ್ತಿಸಕೊಂಡು ಡಿಪೊಕೆ ತಂದು ರಿಪೇರಿ ಮಾಡಿಸಲು ನಿಲ್ಲಿಸುತ್ತಿದ್ದ. ಮೊದಲೆ ತಾಸ ಗಟ್ಟಲೆ ಬಸ್ ಸ್ಟ್ಯಂಡಲ್ಲಿ ಕಾದು ಕುಳಿತವರಿಗೆ ಇದನ್ನ ಕಾಯುವದೆಂದರೆ ಹೆಣಾ ಕಾದಷ್ಟು ಸಂಕಟಾ ಆಗುತ್ತಿತ್ತು. ಬೆಳಿಗ್ಗೆ ಹೋಗುವಾಗಲೂ ಅಷ್ಟೆ ಧಾರವಾಡ ಮುಟ್ಟಿದಾಗ ಎಲ್ಲಿ ಕ್ಲಾಸ ತಪ್ಪುತ್ತದೊ ಎಂದು ಗಡಿಬಿಡಿಯಲ್ಲಿ ಸಾಮಾನುಗಳಿಡುವ ಪಟ್ಟಿಯಿಂದ (longer,/rack) ನೊಟುಬುಕ್ ಗಳು ನಮ್ಮುವ ಹೌದೊ ಅಲ್ಲೊ ಎಂದು ನೋಡದೆ ಎತ್ತಿಕೊಂಡು ಹೋಗುತ್ತಿದ್ದೇವು.

“ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)ಶ್ರೀದೇವಿ. ಮ.ಗುಮ್ಮಗೋಳ. Read Post »

ನಿಮ್ಮೊಂದಿಗೆ

ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ”

ಕಾವ್ಯ ಸಂಗಾತಿ ಡಾ.ಕಾಡಜ್ಜಿ ಮಂಜುನಾಥ್‌ “ನ್ಯಾಯ ಕಣ್ಣು ತೆರೆದಿದೆ” ಜನಸಾಮಾನ್ಯರಉಸಿರು ನಿಲ್ಲಿಸಿದರ್ಪ ಮೆರೆದನರನ ಮಾತುಮೌನವಾಗಿದೆ; ಹಣದಕಪಿಮುಷ್ಠಿಯಲಿಹಂತಕರ ಸೃಷ್ಟಿಸಿದ್ವೇಷವೆಂಬ ರೋಗದಿಜೀವ ತೆಗೆದಜೀವಿಯಮುಖವಾಡ ಕಳಚಿದೆ; ತೋಳ್ಬಲದಕತ್ತಿಯ‌ ಅಂಚಿನಲಿಹಣದಾಸೆ ತೋರಿಸಿಕುರ್ಚಿಯ‌ ವ್ಯಾಮೋಹದಿಪ್ರಾಣ ತೆಗೆದವಿನಯದದುರಹಂಕಾರಮಣ್ಣಾಗಿದೆ; ಕಾನೂನಿನರಕ್ಷಕರೇಅಪರಾಧಿಗಳಆಮಿಷಕ್ಕೆ ಬಲಿಯಾಗಿಸಹಾಯ ಹಸ್ತಚಾಚಿದಮೃಗಗಳ ಮೇಲೆನ್ಯಾಯ ದೇವತೆಯಕಣ್ಣು ಬಿದ್ದಿದೆ; ಬಾಳಿ ಬದುಕಬೇಕಾದಮುಗ್ದ ಯುವಕನನ್ನುದಬ್ಬಾಳಿಕೆಯಕೆಂಡದಲಿಕೊಲೆ ಮಾಡಿದಕಟುಕರನ್ನುಕಾರಾಗೃಹ  ಕೈಬೀಸಿಕರೆದಿದೆ; ತೆರೆ ಹಿಂದಿನಕುತಂತ್ರಗಳು ಕರಗಿಹಣ ಅಧಿಕಾರ  ಪ್ರಭುತ್ವದಕೈಗಳುಕಾನೂನಿನ ಕುಣಿಕೆಗೆಸಿಲುಕಿಸಂವಿಧಾನವುತನ್ನ ಅಭೇದ್ಯಶಕ್ತಿಯನ್ನುನ್ಯಾಯದ ಚಾಟಿಯಲಿಕರ್ಮವುಮರುಕಳಿಸಿದೆ;ಡಾ.ಕಾಡಜ್ಜಿ ಮಂಜುನಾಥ

ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ” Read Post »

ನಿಮ್ಮೊಂದಿಗೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ”

ಕಾವ್ಯ ಸಂಗಾತಿ ಶಾಲಿನಿ ಕೆಮ್ಮಣ್ಣು “ಬಹುಮುಖ” ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದರ್ಪಣದಿಂದ ಕಾಣದು ಮೂರ್ಖದರ್ಪದ ಅಹಮ್ಮಿನ ಕೋರೆಮುಖತೊಡಲುಬೇಕು ದಿನವೂ ಬಹುಮುಖನಾನು ನೀನು ಕೊನೆಯಾಗುವ ತನಕ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದಿನಗಳೆದಂತೆ ಬರಿದಾಗುವ ದೇಹಇಲ್ಲದ ಬಯಸುವ ಮನುಜನ ಮೋಹಎಂದಿಗೂ ತೀರದ ಸ್ವಾರ್ಥದ ದಾಹಜಗದಲಿ ನಿಲ್ಲದ ದುಗುಡದ ವಾಹ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಮೋಸದ ಬಲೆಯಲಿ ಚಿನ್ನದ ಮೀನುಪರಿಶ್ರಮಕಿಲ್ಲಿ  ಸಿಗುವುದೆ ಜೇನುಮರಗಳ ಕಡಿದು ಬರಿದಾಗಿದೆ ಕಾನುಕಡಲಿನ ಮೊರೆತಕೆ ಬಾಗಿದೆ ಬಾನು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ನನ್ನವರು ಪರರು ನಡುವೆ ನಾ ಯಾರುಅರಿಯದೆ ಸಾಗಿದೆ ಜನಪದ ತೇರುಅಂಕಿಯ ಅಂಕುಶದಿ ಬಡಿದಾಡುವ ಜನರುಮಾನವ ಮರೆತು ಯುದ್ಧವ ಸಾರುತಲಿಹರು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ” Read Post »

ನಿಮ್ಮೊಂದಿಗೆ

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ನೀವು..ಮತ್ತೂ… ಈ..ಪ್ರೇಮ” ಈ ಪ್ರೇಮವೆಂಬುದುಮಹಾಕವಿಯೊಬ್ಬ ಬರೆದಅನವಶ್ಯಕವಿವರಣೆಗಳನ್ನೊಳಗೊಂಡ ಮಹಾಕಾದಂಬರಿಯಂತೆ ರಸಹೀನವಾದುದಲ್ಲ..! ಅದು..!ಎಲ್ಲೋ..ದೂರದಲ್ಲಿ..!ಅಜ್ಞಾತವಾಗಿ ಕೂತಅನಾಮಿಕನೊಬ್ಬನ ಎದೆಯಲ್ಲಿತಣ್ಣಗೆ ಹುಟ್ಟಿಕೊಂಡಬಲು ಸೂಕ್ಷ್ಮ ಮತ್ತು ತೀವ್ರ ಮೊನಚುಳ್ಳಆತ್ಮಸಂವೇದನೆಯಗಂಭೀರ ದನಿಯ ಹಿನ್ನೆಲೆಯಲ್ಲಿಹೃದಯದಲ್ಲೊಂದುಸಣ್ಣಗೆ ಕಂಪನ ಉಂಟು ಮಾಡಬಲ್ಲಎರಡೇ ಎರಡು ಸಾಲಿನಬಂಡಾಯದ ಬೆಂಕಿಯಂತಹಕಾವ್ಯ ರೂಪಕ..! ಒಮ್ಮೆಲೇ ಸುಡುವುದಿಲ್ಲನಿಮ್ಮನ್ನು ಅದುನಿಧಾನವಾಗಿ ಹೆಜ್ಜೆಯೂರುತ್ತದೆಸಮ್ಮೋಹನಗೊಳಿಸುತ್ತದೆ..!ಎಷ್ಟೇ ಎಚ್ಚರಿಕೆ ವಹಿಸಿದರೂಕ್ಷಣಾರ್ಧದಲ್ಲಿ ಕಣ್ಮುಂದಿನಹಾದಿಯನ್ನು ಮರೆಸಿ ಬಿಡುತ್ತದೆ..! ಸರಿಯಾದಒಂದೇ ಒಂದು ವಿಳಾಸವಿಲ್ಲಅದರ ತೆಕ್ಕೆಯೊಳಗೆಗೂಡು ಮರೆತ ಹಕ್ಕಿಯಂತೆಬಯಲ ತುಂಬಾಎಲ್ಲೆಲ್ಲೂ ಹಾರಿ ವಿಹರಿಸುತ್ತಾಆನಂದದಲ್ಲಿತೇಲಿಸುತ್ತದೆನೀವು ಕಾಣದಿರುವಹೊಸ ಭ್ರಮಾ ಲೋಕಗಳಲ್ಲಿಮಿಂಚಿನ ಸಂಚಲನ ಸೃಷ್ಟಿಸಿಕಣ್ಣನ್ನು ಕುರುಡಾಗಿಸುತ್ತದೆ..! ಅಚ್ಚರಿಯೇನಿಸುವುದಿಲ್ಲಯಾರೊಬ್ಬರಿಗೂಎದೆಗೂಡಿನಲ್ಲಿನೂರಾರು ಕನಸುಗಳಿಗೆಮೊಟ್ಟೆಯಿಟ್ಟು ಮರಿ ಮಾಡುವಾಗಆದರೆಎಷ್ಟು ಕಾಲಹೀಗೆ ಕನಸಿನಲ್ಲಿ ಹಾರುವಿರಿ?ಹಾರುವ ರೆಕ್ಕೆಗಂಟಿಕೊಂಡೇಬೆನ್ನೇರಿರುತ್ತದೆಒಂದು ಸಣ್ಣ ಆತಂಕಅಥವಾಬಿರುಕು ಮೂಡಿಸುವನಿಮ್ಮದೇ ನೆರಳುಗಳ ಛಾಯೆ..! ತತ್ ಕ್ಷಣಪ್ರೇಮದ ಕನಸುಗಳಿಂದನಿಜಕ್ಕೂ ಎಚ್ಚರವಾಗುತ್ತೀರಿ..!ಆರಂಭದಲ್ಲಿಕಣ್ಣೀರು ಹಾಕುತ್ತಾಕೂಗಾಡುತ್ತೀರಿವಾಗ್ವಾದಗಳಲ್ಲಿಗುದ್ದಾಡುತ್ತಾ ಜಿದ್ದಿಗೆ ಬಿದ್ದಂತೆವರ್ತಿಸುತ್ತೀರಿದನಿಯೆತ್ತುವುದನ್ನು ಕಲಿಯುತ್ತೀರಿಪ್ರತಿಭಟಿಸುತ್ತೀರಿ..! ಆದರೆ ವಿಪರ್ಯಾಸ..!ಕಾಲ ಸರಿದಂತೆಲ್ಲಾತಣ್ಣಾಗುಗುತ್ತೀರಿತುಂಬಾ ಆಳದಲ್ಲಿ ಬಿದ್ದಿರುತ್ತೀರಿಮೌನವಾಗುತ್ತೀರಿಕೊನೆಗೊಮ್ಮೆಗಂಭೀರವಾಗಿಏಕಾಂತದ ಸಂಜೆಗಳಲ್ಲಿಸುಖಾಸುಮ್ಮನೆತಾವೊಬ್ಬರೇ ತಮ್ಮಷ್ಟಕ್ಕೆ ತಾವೇಕಳೆದು ಹೋಗುತ್ತೀರಿ…! ಧಾವಂತವಿಲ್ಲನಿಮಗೆ ಬದುಕಿನಲ್ಲಿಗುನುಗುತ್ತದೆ ಕಿವಿಗಳಿಗೆಶೋಕದಲ್ಲೂ ನೆಮ್ಮದಿ ತರಬಲ್ಲಮಹಮ್ಮದ್ ರಫಿಕಿಶೋರ್ ಕುಮಾರ್ , ಮುಖೇಶ್ ಮನ್ನಾಡೇಯಯಾವೊದಾದರೊಂದುಹಳೆಯ ಹಾಡು..! ಕೂತುಬಿಡುತ್ತೀರಿಪ್ರೇಮದ ಹರಿವಿನಲ್ಲಿಮುಗುಳ್ನಗುವ ಬುಧ್ಧನಂತೆಆಗ ನಿಜಕ್ಕೂ ಕೇಳಿಸುತ್ತದೆಪ್ರೇಮದ ಒಳದನಿಪಿಸುಗುಡುತ್ತೀರಿನೀವು ಕೂಡ ಅದರೊಟ್ಟಿಗೆಬೆಂಕಿಯನ್ನು ಬೆಳಕಾಗಿಸಿಕೊಂಡಕಲಾತ್ಮಕಕವಿತೆಯೊಂದರ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ” Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಒಂಟಿತನಕೆ ಆಸರೆ” ಒಂಟಿ ಹೃದಯದ ಮೂಲೆಮೂಲೆಯಲಿ  ಕತ್ತಲು ಕವಿದಾಗ  ಯಾರೋ ಸಣ್ಣ ದೀಪ   ಹಚ್ಚಿದ ಭಾವ  ಆಸರೆಯಾಗಿ ಬರುವುದು ನೋಡಾಗ ಕಣ್ಣೀರ ಹನಿಯ ಜೊತೆ ಮಾತನಾಡುವ  ಗಾಳಿಯ ಸ್ಪರ್ಶವೇ ಸಾಂತ್ವನ  ಮೌನದ ನಡುವೆ ಬೆಳಕು ಹರಡುವ  ಭರವಸೆಯದೇ ಒಂದು ಬಂಧನ ನೀ ಒಂಟಿಯಲ್ಲ, ಜಗವೇ ಜೊತೆಯಿದೆ  ಚುಕ್ಕಿಗಳು ಸಾಕ್ಷಿ ನಮ್ಮ ಪಯಣಕೆ  ನಿನ್ನ ನೋವಿಗೂ ಒಂದು ಅರ್ಥವಿದೆ  ಬದುಕು ಚಿಗುರುವುದು ವಸಂತ ನಿನಗಾಗಿ ಕಾಲ ನೋವನ್ನು ಮಾಯಿಸುವ ಮಂತ್ರ  ನಾಳೆಯೆಂಬ ಕನಸೇ ಆಸರೆ  ಎದ್ದು ನಿಂತರೆ ಸಾಕು ಗೆಳತಿ  ಒಂಟಿತನವೂ ತಾನೆ ದೂರ ಸರಿವ ಕರೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ” Read Post »

ನಿಮ್ಮೊಂದಿಗೆ

ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು

ವಚನ ಸಂಗಾತಿ ಗೊರೂರು ಅನಂತರಾಜು ಸುನಂದ ಅರುಣ್ ಕುಮಾರ್ ಗೋಸಿ  “ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಎಲ್ಲಾ 176 ವಚನಗಳನ್ನು ಪ್ರಸಿದ್ಧ ಗಾಯಕ ಗಾಯಕಿಯರಿಂದ ಹಾಡಿಸಿ ಭಾವಾಥ೯ ಸಹಿತ ದೃಶ್ಯಿಕರಿಸಿ ಯೂ ಟ್ಯೂಬ್ ನಲ್ಲಿ ಹಾಕಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿಯವರ ತಂದೆ ಶೇಷಾದ್ರಿ ಮತ್ತು ತಾಯಿ ಕಮಲಮ್ಮನವರು. ಇವರು ಬೆಂಗಳೂರಿನ ನಿವಾಸಿಗಳಾಗಿದ್ದು, ಪತಿ ಅರುಣ್ ಕುಮಾರ್ ರವರು ಇಂಜಿನಿಯರಿಂಗ್ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮಕ್ಕಳಾದ ಆಕಾಶ್, ಮಹೇಶ್, ಸೊಸೆ ಐಶ್ವರ್ಯ, ಸ್ನಾತಕೋತ್ತರ ಪದವಿ ಮುಗಿಸಿ, ಮೊಮ್ಮಗ ಆವಿಯನ್ ಅಮೇರಿಕದಲ್ಲಿ ನೆಲಿಸಿದ್ದಾರೆ. ಇವರು ಸಮಾಜದ ಕಳಕಳಿಯುಳ್ಳವರಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜದ ಏಳಿಗೆಯ ಸದುದ್ದೇಶದಿಂದ ದೇವಾಂಗ ಇತಿಹಾಸವನ್ನು ಸಂಗ್ರಹಿಸಿ, ತಾವೇ ನಿರ್ಮಿಸಿದ ಗೋಸಿ ಯೂನಿವರ್ಸ ( Gosi Universe ) ಎಂಬ ಅಂತರ್ಜಾಲ ತಾಣದಿಂದ (Website) ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ದೇವಲ ಮಹರ್ಷಿ ಹಾಗು ದಾಸಿಮಯ್ಯನವರ ಜೀವನ ಚರಿತ್ರೆಯನ್ನು ವಿಕಿಪೀಡಿಯದಲ್ಲಿ ದಾಖಲಿಸಿದ್ದಾರೆ.ವಚನ ಸಾಹಿತ್ಯಕ್ಕೆ ಭದ್ರಬುನಾದಿಯನ್ನು ಹಾಕಿ ಬಸವಾದಿ ಪ್ರಮಥರಿಗೆ ಮಾರ್ಗದರ್ಶನ ಮಾಡಿದ ಆದ್ಯ ವಚನಕಾರ, ವಚನ ಬ್ರಹ್ಮ , ಶ್ರೀ ದೇವರ ದಾಸಿಮಯ್ಯನವರು ರಚಿಸಿರುವ ಎಲ್ಲಾ 176 ವಚನಗಳನ್ನು ರಾಗ ಸಂಯೋಜನೆ ಮಾಡಿಸಿ, ಮೊಟ್ಟಮೊದಲ ಬಾರಿಗೆ “ವಚನ ಬ್ರಹ್ಮನ ವಚನಾಮೃತ” ಎಂಬ ನಾಮದಿಂದ, ವಚನ, ಗಾಯನ, ಮತ್ತು ಭಾವಾರ್ಥ ಸಹಿತ ದೃಶ್ಯೀಕರಿಸಿ, ಸಾಹಿತ್ಯ ಲೋಕ ಹಾಗೂ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ನಿರ್ಮಿಸಿದ ಈ ಮಹತ್ಕಾರ್ಯವನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವರು ದಾಖಲಿಸಿ ಸನ್ಮಾನಿಸಿದ್ದಾರೆ.ಇದರ ಸಂಪೂರ್ಣ ನಿರ್ದೇಶನ ಹಾಗೂ ನಿರ್ಮಾಣವನ್ನು, ಅವರ ಕುಟುಂಬದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಿ.ಈ ಎಲ್ಲಾ ವಚನಗಳನ್ನು ನಿರಂತರವಾಗಿ ವೀಕ್ಷಿಸಲು, Gosi Universe, You tube Channel ನಲ್ಲಿ ಪ್ರಸಾರ ಮಾಡಿರುತ್ತಾರೆ. ಹಾಗು ಮೊಟ್ಟ ಮೊದಲ ಬಾರಿಗೆ ದಾಸಿಮಯ್ಯ ವಚನಗಳನ್ನು, ದೂರದರ್ಶನ ಚಂದನ ವಾಹಿನಿಯಲ್ಲಿ ಕೂಡ ಪ್ರಸಾರ ಮಾಡಿಸಿರುತ್ತಾರೆ. ಇವರ ಈ ಮಹತ್ಕಾರ್ಯವನ್ನು ಗುರುತಿಸಿ ಹಲವಾರು ಸಂಘ – ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿವೆ. ಮೇಡಂ ಕುಟುಂಬದ ಈ ಮಹತ್ಕಾರ್ಯ ಸಮಾಜ ಮೆಚ್ಚುವಂತಹದ್ದಾಗಿದೆ. ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ – 573 201

ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು Read Post »

You cannot copy content of this page

Scroll to Top