ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಗದಗ ಎದೆಯ ಸಂದೂಕಿಗೆ ಅರಿವಳಿಕೆ ಮದ್ದು ಸುರಿದು ಹೋದಳು| ಉಸಿರಿನಿಂದ ಉಸಿರು ಕದ್ದು ಸಾವು ಬರೆದು ಹೋದಳು|| ಚಾಟಿ ಇಲ್ಲದೆ ಬುಗುರಿಯಂತೆ ತಿರುಗೋಣ ಎಂದವಳು| ಪ್ರೇಮಿಗಳ ಗೋರಿಗೆ ಬಣ್ಣ ಬಳಿದು ಹೋದಳು|| ಇರುಳ ದಾರಿ ತುಂಬ ಕಣ್ಣ ದೀಪ ಬೆಳಗುವೆ ಎಂದವಳು| ಕನಸುಗಳ ಗೋಣು ಮುರಿದು ನೆತ್ತರು ಕುಡಿದು ಹೋದಳು|| ಭಾವನೆಗಳ ನಾವೆಯ ನಾವಿಕ ಎಂದವಳು| ಪ್ರತಿ ಹೆಜ್ಜೆ ಹೆಜ್ಜೆಗೆ ಕಲ್ಪನೆಗಳ ಕೊಂದು ಹೋದಳು|| ‘ಸಾಚಿ’ ಅಧರಕೆ ಜೀವ ಸತ್ವ ತುಂಬೋಣ ಎಂದವಳು| […]

ಕಾವ್ಯಯಾನ

ಶೂನ್ಯ ಡಾ.ಪ್ರಸನ್ನ ಹೆಗಡೆ ಈ ಬದುಕು ಸುಂದರ ಶೂನ್ಯ ಕಂಡಿದ್ದೆಲ್ಲವೂ ಅನ್ಯ ಹಿಂದತಿಲ್ಲ ಇಂದು ನಾಳೆಗೆ ಕಾದಿದೆ ಬೇರೊಂದು ಅಂದಂತಿಂದು ನಾನಿಲ್ಲ ಇಂದಂತಿರುವವ ನಾನಲ್ಲ ಇದು ಇಂತೆಂದೆಂಬುವನಾರಣ್ಣ? ಆ ಅಣ್ಣನೂ ಕೊನೆಗೆ ಮಣ್ಣಣ್ಣಾ ಈ ಅಕ್ಷಿಯ ಕಕ್ಷಿಯು ಕಿರಿದು ಬಾಯ್ಬಿಡಬೇಡಾ ಬಿರಿದು ಈ ಕಾಲನ ಚಕ್ರವು ಹಿರಿದು ಅದನರಿಯಲು ಸಾವದು ಬಿಡದು ಹರಿಯುವ ಹೊಳೆಯೂ ಮಾಯಾವಿ ಗಗನವೇರಲಿದೆ ಹಬೆಯಾಗಿ ಓ! ತೇಲುವ ಮೋಡವು ಮೇಲಿಲ್ಲ ಅದು ನಾಳಿನ ಹೊಳೆಯು ಸುಳ್ಳಲ್ಲ ನನ್ನದು ಎನ್ನಲು ಏನಿಲ್ಲ ನಾ ಧೂಳನು […]

ಕಾವ್ಯಯಾನ

ಸಖ-ಸಖಿ ವಾಯ್.ಜೆ.ಮಹಿಬೂಬ ವಿಧ-ವಿಧಗಳಿಗೆ ವಿದಾಯ ಹೇಳಿ ಒಂದಾಗೋಣ ಬಾ ಸಖಿ ವಿಧಿ-ವಿಧಾನಗಳು ಬದಿಗಿಟ್ಟು ಪ್ರೀತಿ ಹಂಚೋಣ ಬಾ ಸಖ ನೂರಿದ್ದರೇನು-? ನಮ್ಮನ ನಾವು ಸಂತೈಸಲು ಸಾವೆಂದರೆ ಬೆರೆಸಿ ಸಂಸ್ಕಾರವ ಜಗ ಸಾರಿ,ಹೆತ್ತವರಾಗೋಣ ಬಾ ಸಖಿ ಅತ್ತವರುದಕೆ ಕೈ ತುತ್ತಿಟ್ಟು,ಬಿತ್ತಿ ಬರೋಣು ಬಾ ಸಾಂತ್ವನ ಮೆಟ್ಟಿ ನಿಂತು ರಟ್ಟೆಯರಳಿಸಿ,ಪೃಥ್ವಿ ಬೆಳೆಸೋಣ ಬಾ ಸಖ ಯಾತರದ ಜೀವ-? ಕಾವ ಕಳೆದ ದೇಹಕೆ ಹೆಸರು ನಿಲ್ಲದು ಆತ್ಮ ಸತ್ಯ ನಿತ್ಯ ಮೊಳೆಸುತ ಧರೆಯ ಸುತ್ತೋಣ ಬಾ ಸಖಿ ಆಝಾದ್’ಮೈಖಾನೆಯೂ ಹೊಕ್ಕು ಬರುವ […]

ಕಾವ್ಯಯಾನ

ನತದೃಷ್ಟ ಕವಿತಾ ಸಾರಂಗಮಠ ಪಂಜರದಿ ಹಕ್ಕಿಗಳ ಬಂಧಿಸಿದೆ ಆನೆಗಳ ಗರ್ವ ಅಡಗಿಸಿ ಮದ್ದಾನೆಯಾದೆ ಆನೆ ದಂತಗಳ ಕದ್ದೆ ಹುಲಿ,ಸಿಂಹಗಳ ಬೇಟೆಯಾಡಿದೆ ಓ ಮಾನವ ಗೃಹ ಬಂಧಿಯಾದೆ! ಸ್ವಚ್ಛಂದ ಹಾರಾಡುವ ಪಕ್ಷಿಗಳ ಪಂಜರದಿ ಬಂಧಿಸಿದೆ ಪಶು,ಕೀಟಗಳ ಭೇದವೆಣಿಸದೆ ಚಪ್ಪರಿಸಿದೆ ಉಭಯ ಜೀವಿ ಸಂಕುಲದ ನಾಶಕೆ ಮುಂದಾದೆ ಎಮ್ಮೆ,ಕಾಡು ಕೋಣ,ಚಿರತೆ,ಹುಲಿಗಳ ಚರ್ಮವನೆ ಹೊದ್ದೆ ಓ ಮಾನವ ನೀನೇ ಅವುಗಳಾದೆ! ಆತಂಕವಿಲ್ಲದೆ ಅಂತರಿಕ್ಷಕೆ ಹಾರಿದೆ ಸೂರ್ಯ ಚಂದ್ರರ ಮೀರಿಸಲು ಹೋದೆ ನಿಲುಕಿದ್ದರೆ ನೀಲನಭದೆ ವಾಸಿಸುತ್ತಿದ್ದೆ ಹಣದ ದಾಹಕೆ ಮೌಲ್ಯಗಳ ಮಾರಿಕೊಂಡೆ ಓ […]

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-5 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ. ‘ಅಮ್ಮಾ ನನ್ನ ಜೊತೆ ಆಟಾ ಆಡು ಬಾ ಎಂದು ನಾಲ್ಕು ವರ್ಷದ ಪುಟ್ಟ ಶಿಶಿರನ ಕರೆ ಕೂಗಾಟ ಚೀರಾಟವಾದರೂ ಆ ಅಮ್ಮನಿಗೆ ಅಡುಗೆ ಮನೆಯಲ್ಲಿ ಕೆಲಸ ಮುಗಿಯುವುದಿಲ್ಲ. ತೊಳೆದಷ್ಟೂ ಮುಗಿಯದ ಮುಸುರೆ ಪಾತ್ರೆಗಳು, ಬಟ್ಟೆಗಳು …ಬಿಡುವೆಲ್ಲಿದೆ?ಈಗಿನ್ನೂ ತಿಂಡಿ ತಿಂದಾಗಿದೆ ಆದರೆ ಮತ್ತೆ ಅಡುಗೆ ಮಾಡುವ ಸಮಯ ಬಂದೇ ಹೋಯ್ತು ಎನ್ನುವ ಟೆನ್ಶನ್ […]

ಕಾವ್ಯಯಾನ

ಹನಿಗಳು ಬಸವರಾಜ ಕಾಸೆ ಅವಳ ಕೈಗುಣ ಕೇಳಿ ತಿಳಿದು ಕಟ್ಟಿಕೊಂಡೆ ಮಾಡಿ ಅವಳ ಗುಣಗಾನ! ಆಹಾ ಎಂತಹ ನಶೆ ಕಂಡು ಅವಳ ಕೈಗುಣ!!! ಸಂಜೆ ಮಿಕ್ಸ್ ಮಾಡಿ ಕೊಡುವಳು ಎಣ್ಣೆಯೊಂದಿಗೆ ಸೋಡಾ!! ರುಚಿ ಹೇಗಿದೆ ಎಂದು ಪರೀಕ್ಷಿಸಿ!!! ಪಿಜ್ಜಾ ಬರ್ಗರ್ ಕೊಡಿಸದಿದ್ದರೂ ಪರವಾಗಿಲ್ಲ ಪಿಜ್ಜಾ ಬರ್ಗರ್ ಸ್ಯಾಂಡವಿಚ್!!! ಕೊಡಿಸಿದರೆ ಸಾಕೆಂದಳು ಲಿಪಸ್ಟಿಕ್ ಕ್ರೀಮ್ ಬಿವಟಿ ಕಿಟ್!!! ಅಮಾಯಕಿ ಗುಟ್ಕಾ ಸಿಗರೇಟು ಎಣ್ಣೆ ಏನೆಲ್ಲಾ ಬಿಡಿಸಿದಳು ನಲ್ಲೆ! ಹುಚ್ಚು ಪ್ರೀತಿಯ ಅಡ್ಡ ಪರಿಣಾಮ!! ಜೇಬಲ್ಲಿ ಯಾವುದಕ್ಕೂ ಕಾಸಿಲ್ಲದಂತೆ ಮಾಡಿದಳು […]

ನಾನು ಓದಿದ ಪುಸ್ತಕ

ಚಿಗುರಿದ ಕನಸು ಡಾ.ಶಿವರಾಮ ಕಾರಂತ ಮೊನ್ನೆ ನಮ್ಮ ಬತ್ತಲಹಳ್ಳಿಗೆ ಹೊರಟಾಗ ಎದುರಿಂದ ಕುರುಚಲು,ಸಣ್ಣ ಕಾಡು ಗಿಡಗಳಿಂದಲೇ ತುಂಬಿರುವ ಹಸಿರುಟ್ಟ ಬೆಟ್ಟ ಸಾಲುಗಳು ಬರಮಾಡಿಕೊಂಡವು. ಬೆಟ್ಟದ ತಪ್ಪಲಿನಲ್ಲಿ ಇರುವ ನಮ್ಮ ಹೊಲ,ತುಂಡು ಭೂಮಿಯ ಕಂಡಾಗ ಎಂತದೋ ಖುಷಿ. ಈ ದಿನ ಅದೆಲ್ಲವನ್ನೂ ಮತ್ತೆ ಮತ್ತೆ ನೆನೆಯಲು ಕಾರಣವಾಯ್ತು ಈ “ಚಿಗುರಿದ ಕನಸು”. ಈ ಕಾದಂಬರಿಯು ಶಿವರಾಮ ಕಾರಂತರು  ‌ಬರೆದಿರುವ‌ ಕಾದಂಬರಿಗಳಲ್ಲಿ ಒಂದಾಗಿದ್ದು ತುಂಬಾ ಅದ್ಭುತವಾದ ಕಾದಂಬರಿಯಾಗಿದೆ.                   ಈ ಕಾದಂಬರಿಯನ್ನು ಓದಿ ಮುಗಿಸಿದ ನನಗೆ ಈ ಒಂದು ವಿಷಯ […]

ಕಾವ್ಯಯಾನ

ಎಚ್ಚರವಾಗಿದ್ದರೂ ಏಳದೆ! ಧಾಮಿನಿ ಅವಳು ಮಲಗೇ ಇದ್ದಾಳೆ… ಬೆಳಗು ಮುಂಜಾನೆದ್ದು ರಂಗೋಲಿ ಹಾಕುತ್ತಿದ್ದವಳು ಇವತ್ತೇನೋ ನೀರು ಹಾಕಿದರೆ ಸೂರ್ಯನ ಮುಖಕ್ಕೇ ರಾಚುವಷ್ಟು ಸಮಯವಾಗಿದ್ದರೂ ಮಲಗೇ ಇದ್ದಾಳೆ. ಹಾಗಂತ ರಾತ್ರಿಯೆಲ್ಲ ಕ್ರೀಡೆಯಾಡಿರಲಿಲ್ಲ ಲೀಲೆಯಾಡಿದಂತ ಕಸಸೂ ಕಂಡಿರಲಿಲ್ಲ, ಶತಮಾನವಾಗಿದ್ದರೂ. ಹಾಗಂತ ಮೈಮರೆತು ಮಲಗಿರಲಿಲ್ಲ ಎಲ್ಲದರಿಂದ ವಿಮುಖವಾದವಳೂ ಅಲ್ಲ ಬದುಕೇ ಎಲ್ಲದರಿಂದ ದೂರ ಸರಿದಿದೆ ಸುಮ್ಮನೆ ಮಲಗೇ ಇದ್ದಾಳೆ ವೇಳೆ ಸರಿದಿದ್ದರೂ. ಹಾಗಂತ ಕೆಲಸವಿಲ್ಲದೇ ಏನಿಲ್ಲ ಶುರು ಮಾಡಿದರೆ ಅತ್ತಿತ್ತ ತಿರುಗಲೂ ಪುರುಸೊತ್ತಿಲ್ಲ ಒಂದೊಂದು ಘಳಿಗೆ ಮುಂದಕ್ಕೋಗುತ್ತಿದ್ದರೂ ಮಲಗೇ ಇದ್ದಾಳೆ. ಹಾಗಂತ […]

ಅವನಿಗೆ ನಾಳೆ ಬಾ ಎನ್ನಿ

ಕೊರೋನಾ ಅವನಿಗೆ ನಾಳೆ ಬಾ ಎನ್ನಿ ಡಿ.ಯಶೋದಾ ಕೊರೋನಾ ಅವನಿಗೆ ನಾಳೆ ಬಾ ಎನ್ನಿ ಇತ್ತೀಚೆಗೆ ಪ್ರತಿದಿವಸ ಅವನು ಕನಸಿನಲ್ಲಿ ಬರುತ್ತಾನೆ, ತನ್ನ ಜೊತೆ ಬಂದುಬಿಡು ಎಂದು ಬಲವಂತ ಮಾಡುತ್ತಾನೆ, ನನಗೂ ಅವನೊಂದಿಗೆ ಹೋಗಿಬಿಡುವ ಮನಸ್ಸಾಗುತ್ತಿದೆ.ನಿಜ ಹೇಳಬೇಕೆಂದರೆ ಹಗಲೆಲ್ಲಾ ಅವನನ್ನೇ ನೆನಪಿಸಿಕೊಳ್ಳುತ್ತಿರುತ್ತೇನೆ, ಇರುಳಲ್ಲಿ ಅವನು ಬಂದು ಕರೆಯುತ್ತಾನೆ. ಇಲ್ಲಿ ಇದ್ದು ನಾನು ಮಾಡುವುದಾದರೂ ಏನಿದೆ? ಹೋಗಿಬಿಡಲೇ?…ಹೋಗಿಬಿಡಲೇ ಎಂದು ಕೇಳುವ ಆಕೆಯಮನಸ್ಸು ಅರ್ಥವಾಗಿತ್ತು ಹಾಗೆಯೇ ನನ್ನ ಮನಸ್ಸುಆರ್ದ್ರವಾಯಿತು.. ಕರೆಯುವವನು ಜೀವ ಕೊಡುವವನಾಗಿದ್ದರೆ ಹೋಗಿಬಿಡು ಎನ್ನಬಹುದಿತ್ತು, ಆದರೆ ಜೀವ ತೆಗೆಯುವವನ […]

ಕಾವ್ಯಯಾನ

ಲೆಕ್ಕವಿಟ್ಟವರಿಲ್ಲ.. ಮಧುಸೂದನ ಮದ್ದೂರು ಭೂತಗನ್ನಡಿಯಲಿ ಇತಿಹಾಸ ಗರ್ಭ ಕೆದಕಿದಾಗ ಕಂಡುಂಡ ಸತ್ಯಗಳು ಮಿಥ್ಯೆಗಳವೆಷ್ಟೋ ಲೆಕ್ಕವಿಟ್ಟವರಿಲ್ಲ.. ರಾತ್ರಿ ರಾಣಿಯರ ಪಲ್ಲಂಗದಲ್ಲಿ ಕರಗಿದ ಸಾಮ್ರಾಜ್ಯಗಳೆಷ್ಟೋ ? ಉರುಳಿದ ಕೋಟೆ ಕೊತ್ತಲಗಳೆಷ್ಟೋ? ಸಾಮ್ರಾಜ್ಯ ಮುಕುಟ ಮಣಿಗಳೆಷ್ಟೋ? ತರಗಲೆಯಾದ ತಲೆಗಳೆಷ್ಟೋ? ಲೆಕ್ಕವಿಟ್ಟವರಿಲ್ಲ… ಮಣ್ಣಿನಾಸೆಯ ಹಪಹಪಿಕೆಯಲಿ ಹರಿದ ರಕುತದ ಕಾಲುವೆಗಳೆಷ್ಟೋ? ಆ ಕಾಲುವೆಗಳಲ್ಲಿ ಮುಗಿಲು ಮುಟ್ಟಿದ ವಿಧವೆಯರ ಗೋಳಿನ ಕಣ್ಣೀರ ಉಪ್ಪು ಕದಡಿ ಹರಿದ ನದಿಗಳೆಷ್ಟೋ? ಉಪ್ಪುಪ್ಪು ಕಡಲುಗಳೆಷ್ಟೋ? ಲೆಕ್ಕವಿಟ್ಟವರಿಲ್ಲ…. ಅಂಗವಿಹಿನರಾದವರ ಆರ್ತನಾದ ನಿರ್ವಂಶವಾಗಲೆಂಬ ಹಿಡಿಶಾಪವಿಟ್ಟು ಹೂಳಿಟ್ಟು ಎರಚಿದ ದೂಳಿನ ಗುಡ್ಡೆ ಗಳೆಷ್ಟೋ ಲೆಕ್ಕವಿಟ್ಟವರಿಲ್ಲ… […]

Back To Top