ಕಾವ್ಯಯಾನ

ಕಾವ್ಯಯಾನ

ಕಿಟಕಿ ದೀಪ್ತಿ ಭದ್ರಾವತಿ ನೀನು ನನ್ನಿಂದ ದೂರ ಸರಿದಿದ್ದೀಯೆಆದರೂ ಮೋಡದಅಂಚುಗಳಲಿನಾನು ನಿನ್ನನ್ನು ಕಾಣುತ್ತೇನೆ ಮುಸ್ಸಂಜೆ ಕೆಂಬಣ್ಣದಲಿ ನೆನಪ ಅಲೆಗಳುಓಕುಳಿಯಾಡುವಾಗಲೆಲ್ಲನಿನ್ನ ಮುಂಗುರುಳು ನನ್ನಕಣ್ಣಿನಲಿಇಣುಕಿದಂತೆ ಭಾಸವಾಗುತ್ತದೆ ವ್ಯಾಖ್ಯಾನಿಸುತ್ತೇನೆನಾನು ನಿನ್ನನ್ನು ಮರೆತಿದ್ದೇನೆ ಎಂತಲೇ..ಆದರೆಬಿಟ್ಟು ಹೋದ ಹೆಜ್ಜೆ ಗುರುತುಗಳಹಾದಿ ಮಳೆಗಾಲದಲಿ ಮಿದುವಾಗಿಬೇಸಿಗೆಯಲಿ ಒರಟಾಗಿಬೆರಳಿಗಂಟುವಾಗಅರ್ಧ ಬರೆದಿಟ್ಟ ಕವಿತೆಯೊಂದುಎದೆಯಲ್ಲಿ ಗೂಡುಕಟ್ಟುತ್ತದೆ ಮತ್ತೆ ಇನ್ನೆಂದು ನಿನ್ನ ಭೇಟಿಯಾಗುವುದಿಲ್ಲಎಂದೆ ನಂಬುತ್ತೇನೆ.ಮುಚ್ಚಿ ಎದ್ದು ಹೋದ ಕಿಟಕಿಯಲಿಬೆಳಕ ಗೀರೊಂದು ತಡತಡಕಿ ಬರುವಾಗನಿನ್ನ ಕಣ್ಣ ಮಿಂಚುಇರುಳ ಸರಳುಗಳತೂರಿ ನನ್ನೆಡೆಗೆ ಬಂದಂತೆ ಅನ್ನಿಸುತ್ತದೆ ಮತ್ತೆ ಮತ್ತೆ ನಿನ್ನ ನೆನಪುಗಳಬೇಕೆಂದೆ ದೂರ ಅಟ್ಟುತ್ತೇನೆಅವು ಜಾತ್ರೆಯಲಿ ಕೈ […]

ಕಾವ್ಯಯಾನ

ಆಪ್ತ ಗೆಳೆಯನ ಸಾವು ವೆಂಕಟೇಶ್ ಚಾಗಿ ಅವನು ನನ್ನೊಂದಿಗೆ ಪ್ರತಿದಿನವೂಶಾಲೆಗೆ ಬರುತ್ತಿದ್ದನನ್ನ ಆಟ ಪಾಠ ಕೀಟಲೆಗಳಿಗೆಅವನು ಸಾಕ್ಷಿಯಾಗಿದ್ದಪಾಪ, ಅವನು ಮೂಗನನ್ನೊಂದಿಗೆ ಮಾತನಾಡದಿದ್ದರೂಭಾವನೆಗಳನ್ನುಅರ್ಥಮಾಡಿಕೊಳ್ಳುವಆತ್ಮಬಾಂಧವನನ್ನಿಂದ ಬಯಸುವುದುನನ್ನ ತುಳಿತವಷ್ಟೇಪ್ರತಿದಿನವೂ ತುಳಿತಕ್ಕೊಳಗಾದರೂಅವನು ಬದುಕಿದ್ದು ನನಗಾಗಿಯೇಅವನ ಕಾಲುಗಳಿಗೆನೋವುಗಳು ಚುಚ್ಚಿದಾಗಅವನೇ ಉಸಿರೇ ಹೋಗುತ್ತಿತ್ತುಆಗಾಗ ಉಸಿರು ನೀಡಿದಾಗಮತ್ತೆ ಬದುಕುತ್ತಿದ್ದಪ್ರತಿದಿನದ ನನ್ನ ಸೇವೆಗಾಗಿ;ನನ್ನ ಭಾರವನ್ನೆಲ್ಲ ಅವನುನಿರಾಕರಿಸದೇ ಹೊರುತ್ತಿದ್ದಮತ್ತೆ ನನ್ನ ಭಾರವನ್ನೂ ಸಹ.ಅವನೊಂದಿಗೆ ನಾನು ಹಂಚಿಕೊಂಡಮಾತುಗಳು ಸಾವಿರಾರುನೀಡಿದ ಮುತ್ತುಗಳೂ ಸಾವಿರಾರುತಾನು ಕಷ್ಟಗಳ ಅಪ್ಪಿದರೂಕ್ಷಣಕ್ಷಣವೂ ನೋವನ್ನುಂಡರೂನನ್ನ ಗಾಳಿಯಲ್ಲಿ ತೇಲಿಸುತ್ತಿದ್ದನಾನೇ ಮಾಡಿದ ಗಾಳಿಪಟದಂತೆ.ಅವನುಂಡ ಬಿಸಿಲುಆ ರೈತನಿಗೂ ದಕ್ಕಿಲ್ಲಮಳೆಯ ಹನಿಗಳ ಸುಖವನ್ನುಪ್ರತಿಭಾರಿಯೂಅನುಭವಿಸುವವನು ಅವನೇಚಂದ್ರ ರಜೆ […]

ಕಾವ್ಯಯಾನ

ಬೋಧಿ ಭಾವ ರೇಮಾಸಂ ಕರವ ಕೊಡವಿ ಕುಳಿತ ಮನಕೆಹಸಿರು ಹಾಸುವ ತವಕದಲಿಮುಗಿಲಿಗೆ ನೋಟವ ಚೆಲ್ಲಿಕೆಚ್ಚನು ತೋರಿದಿ ನೀನಲ್ಲಿ // ಬೊಗಸೆ ಬೆಳಕು ಹಿಡಿದುಕಲ್ಲ ಮುಳ್ಳ ಬೇಲಿಯ ಹಾರಿಭರವಸೆಯ ಬಂಡೆ ಹೊದ್ದುಸಂದಿನಲಿ ಬಿತ್ತು ಬೀಜ ಹಾರಿ// ವಜ್ರದೇಹಿ ಕಲ್ಲೆದೆಯ ಸೀಳಿಮೆದು ಮೇಣವಾಗಿಸಿ ಅರಳಿಪ್ರಯತ್ನಿಸಿದೆ ಮರಳಿ ಮರಳಿನೋಡುವಂತಾದೆಲ್ಲ ಹೊರಳಿ// ಬುದ್ಧನ ಬೋಧಿ ಭಾವವಾಗಿತಪವ ಗೈಯುತ ಮರೆಯಲಿಸರಿದಾರಿ ದೋರಿದೆ ಸರೀಕರಿಗೆಗೆಲುವಿದೆ ಛಲದ ಬಲದಲಿ// ***********

ಕಾವ್ಯಯಾನ

“ನಲಿಯೋಣ ಬನ್ನಿ ಸಾತುಗೌಡ ಬಡಗೇರಿ ನಲಿವಾ ಎಲ್ಲರೂ ಸರಸದಿ ಬೆರೆತುವಿರಸವ ಮರೆತು ಒಂದಾಗಿ.ಈ ಧರೆ ಸ್ವರ್ಗದಿ ಹಾಡಿ ಕುಣಿಯುವಾಐಕ್ಯದಿ ನಲಿದು ಚೆಂದಾಗಿ. ದ್ವೇಷ,ಅಸೂಯೆ, ಸೇಡಿನ ಬೆಂಕಿಮನುಜನ ನೆಮ್ಮದಿ ಕೆಡಿಸುವದು.ಅಶಾಂತಿ ಮನದಲಿ ನೆಲೆಸಿ ದೇಹವರೋಗದ ಭಾದೆಗೆ ತಳ್ಳುವುದು. ಏತಕೆ ಸುಮ್ಮನೆ ಚಿಂತೆಯ ಬಾಳುಮರೆತು ಬಾಳುವ ಚಿಂತೆಯನು.ಈ ಇಳೆ ಸೊಬಗು ಸವಿದು ಉಳಿಸುತಸ್ವಾಗತ ಮಾಡುವ ನಾಳೆಯನು. ವೈರಿಯ ಸ್ನೇಹದ ಮಾತಿನ ಒಳಗಡೆಅಡಗಿದೆ ಬೇರೆಯ ಮಸಲತ್ತು.ಎಚ್ಚರ ನಡೆಯ ಇಡಲು ನಮಗೆಬಾರದು ಕೇಡು ಯಾವತ್ತೂ. ಬನ್ನಿ!ಗೆಳೆಯರೇ ಸಂತಸದಿ ತೇಲುವಾಪ್ರತಿಕ್ಷಣ ಹರುಷದ ಹೊಳೆಯಲ್ಲಿ.ಒಂದೇ ಕುಟುಂಬದ […]

ಲಹರಿ

ನೆನಪುಗಳೇ ಮಧುರ. ಶೀಲಾ ಭಂಡಾರ್ಕರ್ ನೆನಪುಗಳೇ ವಿಚಿತ್ರ. ಒಂದಕ್ಕೊಂದು ಸಂಬಂಧ ಕೂಡಿಸಿ ಎಲ್ಲಿಂದೆಲ್ಲಿಗೋ ಎಳಕೊಂಡು ಹೋಗುವ ಪರಿಯಂತೂ ಅದ್ಭುತ. ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ವಾರಾಂತ್ಯದಲ್ಲಿ ನಮ್ಮನೆಗೆ ಬರುವುದಿತ್ತು. ನಾವು ಚಿಕ್ಕವರಿದ್ದಾಗ ಶನಿವಾರವನ್ನು ಬಹಳ ಕಾತರದಿಂದ ಕಾಯುತಿದ್ದೆವು.ಚಿಕ್ಕಮ್ಮ ಭಾನುವಾರದ ತಿಂಡಿ, ಇಡ್ಲಿ ಅಥವಾ ಖೊಟ್ಟೆಯ ಹಿಟ್ಟನ್ನು ರುಬ್ಬುವ ಕಲ್ಲಿನಲ್ಲಿ ರುಬ್ಬಿ ಕೊಡುತಿದ್ದರು. ಆ ಉದ್ದಿನ ಹಿಟ್ಟು ರುಬ್ಬುತ್ತಾ ಅವರು ನಮಗೆ ಚಂದ ಚಂದದ ರೋಮಾಂಚಕಾರಿ ಕಥೆಗಳನ್ನು ಸೃಷ್ಠಿ ಮಾಡಿ ಹೇಳುವುದಿತ್ತು. ನಮಗದುವೇ ದೊಡ್ಡ ಫ್ಯಾಂಟಸಿಯಾಗಿತ್ತು.ಈಗಲೂ ಚಿಕ್ಕಮ್ಮನ ನೆನಪಾದ […]

ಮೂರನೆ ಆಯಾಮ

ಕೈರಳಿಯ ದೇವನಾಡಿನಲ್ಲಿ ರಂಗಪಯಣ ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಕೂಸೆ ಅಡ್ರೆಸ್ ಹೇಳು… ಕಿರಣ ಭಟ್ಟರ ಫೋನ್.ಶ್ರೀದೇವಿ ಕೆರೆಮನೆ, ಹಬ್ಬುವಾಡ, ಕಾರವಾರ ಬರೆದುಹಾಕು ಸಾಕು. ಬರ್‍ತು.ಅಷ್ಟೇ ಸಾಕೇನೆ? ಕೆ.ಎಚ್.ಬಿ ಹಾಕದು ಬ್ಯಾಡ್ದಾ? ರೋಡ್ ನಂಬರ ಹೇಳ್ಬಿಡೆ…ನಿಂಗೆ ಬೇಕರೆ ಕೆ.ಎಚ್.ಬಿ. ಡಿ-೬ ರಸ್ತೆ ಎಲ್ಲ ಹಾಕು. ಹಾಕದಿದ್ರು ಬರ್‍ತು. ಚಿಂತೆ ಮಾಡಡ… ನಾನು ನಗುತ್ತ ಹೇಳಿದೆ.ವರ್ಲ್ಡ್ ಫೇಮಸ್ಸು ಮಾರಾಯ್ತಿ ನೀನು… ನಕ್ಕಿದ್ದರು.ಎಂತಕ್ಕೋ… […]

ಸಂಪ್ರೋಕ್ಷಣ

ಕನಸಿನ ಚಾದರ ಬರಹ-02 ಬಣ್ಣಗಳಂತೆಯೇ ಕನಸುಗಳದ್ದೂ ಒಂದು ಮೋಹಕ ಲೋಕ. ಕನಸು ಕಾಣದ ಅಥವಾ ಕನಸುಗಳೇ ಬೀಳದ ಮನುಷ್ಯರಿಲ್ಲ. ಕನಸು ಬೀಳುವುದು ವಿಜ್ಞಾನ ಅಥವಾ ವೈದ್ಯಕೀಯಕ್ಕೆ ಸಂಬಂಧಪಟ್ಟ ಸಂಗತಿಯಾದರೆ, ಕನಸು ಕಾಣುವುದೊಂದು ಮನಸ್ಥಿತಿ ಅಥವಾ ಭಾವನೆಗಳಿಗೆ ಸಂಬಂಧಪಟ್ಟಿದ್ದು. ರಾತ್ರಿ ಬಿದ್ದ ಕನಸೊಂದು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಮರೆತುಹೋಗುವುದುಂಟು; ಬಾಲ್ಯದ ಅವೆಷ್ಟೋ ಕನಸುಗಳು ಯೌವನಾವಸ್ಥೆಯಲ್ಲಿ ಅಥವಾ ಯೌವನದ ಅವೆಷ್ಟೋ ಕನಸುಗಳು ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮರೆಯಾಗುವುದುಂಟು. ಆದರೆ ಈ ಕನಸಿನ ಪ್ರಕ್ರಿಯೆ ಮಾತ್ರ ನಿರಂತರ. ಕಾಲೇಜಿನ ದಿನಗಳಲ್ಲಿ ಕುಡಿಮೀಸೆಯಂಚಿನಲ್ಲಿ ಸೊಗಸಾಗಿ […]

ಕಾವ್ಯಯಾನ

ಭಾವನೆಗಳು ತೇಜಾವತಿ ಹೆಚ್.ಡಿ. ಭಾವನೆಗಳೇ ಹಾಗೆತುಸು ಆಸರೆ ಸಿಕ್ಕರೆ ಸಾಕುಲತೆಯಾಗಿ ಹಬ್ಬಲುಚೂರು ಸ್ಫೂರ್ತಿ ಸಾಕುವಾಹಿನಿಯಾಗಿ ಶರಧಿಯ ಸೇರಲುಹನಿಜಲದ ಸೆಲೆ ಸಾಕುಬೀಜ ಮೊಳೆತು ಅಂಕುರಿಸಲು ನಿಖರ ಸ್ಥಳ ವೇಳೆಯ ಹಂಗಿಲ್ಲಆದಿ ಅಂತ್ಯಗಳಿಲ್ಲಬಣ್ಣ ರೂಪಗಳಿಲ್ಲಲಿಂಗ ಭೇದಗಳಿಲ್ಲ… ಮನಸು ಭಾವಗಡಲುಹೃದಯ ಮಿಡಿತದೊಡಲುಒರತೆ ಉಕ್ಕೇರಲುಹೊಂಗನಸ ಸಿಹಿಹೊನಲು.. ನಿಗ್ರಹಿಸಿದರೆ ಸತ್ತೇ ಹೋಗುವವುರೆಕ್ಕೆಬಂದರೆ ಹಾರಿ ಹೋಗುವವುಬಂದಷ್ಟು ಸಲೀಸಲ್ಲ ಹೋಗಲುಜನಿಸಿ ಮರಣಿಸುವವು ನಗಲು ಅಳಲು ************

ಕಾವ್ಯಯಾನ

ಸ್ವಯಂ ದೀಪ ವಿದ್ಯಾ ಶ್ರೀ ಎಸ್ ಅಡೂರ್ ಏನಾದರೂ ಬರೆಯಬೇಕೆಂಬ ಅಮಲು,ಮತ್ತುಸ್ವಂತಕ್ಕೆ ಸಮಯವೇ ಉಳಿಯದ ಗೃಹಸ್ತಿಕೆಯ ಭಾರ ಹೊತ್ತು,ಇತ್ತ ಪೂರ್ಣ ಗೃಹಿಣಿಯಾಗಿಯೂ ಉಳಿಯದೆ…ಅತ್ತ ಕವಿಯಾಗುವ ಆಸೆಯೂ ಅಳಿಯದೆ…. ಸಾಗಿದೆ ಜೀವನ ರಥ..ಹಲವಾರು ಸವಾಲುಗಳೆಂಬಕುದುರೆಗಳ ಲಗಾಮು ಹಿಡಿದು ….. ಪಳ್ಳನೆ ಮಿಂಚಿ ಮರೆಯಾಗುವ ಕೋಲ್ಮಿಂಚಿನಂತೆಸ್ಪುರಿಸುವ ಒಂದೆರಡು ಸಾಲು ಕವನ ,ಮರೆಯಾಗುವುದು,ಹಿಡಿಯಲಾಗದ ಚಿಟ್ಟೆಯಂತೆಬೆನ್ನಟ್ಟಲಾಗದೆ….ಆ ಕ್ಷಣ ನಿತ್ಯವೂ ಇದೇ ಕಥೆ…ಸಾಗಿದೆ ಗರ್ಭಪಾತನನ್ನ ಭಾವಗಳ ಬಸಿರು ಹರಿದು…… ಹನಿ ಸೇರಿ ಹಳ್ಳ,ಆವಿ ಘನೀಕರಿಸಿ ಮೋಡ ಆದಂತೆಬದುಕು ಉಣಿಸಿದ ಹದವಾದ ಭಾವಗಳ ಪಾಕಕಟ್ಟಿತ್ತುಬಿಸಿಯುಂಡ ಹಾಲಿನ […]

ಕಾವ್ಯಯಾನ

ಬರಿ ಮಣ್ಣಲ್ಲ ನಾನು….! ಶಿವಲೀಲಾ ಹುಣಸಗಿ ಬಯಕೆಯೊಂದು ಮನದಲವಿತು ಕಾಡುತ್ತಿತ್ತು…ಮದ ತುಂಬಿದೆದೆಯಲಿ ಹದವಾಗಿ ನಾಟಿ ಮೀಟುತ್ತಿತ್ತುಹೃದಯ ಬಡಿತದ ಗೀಳೊಂದು ಸಂಕೋಲೆಯತೊಡರಾಗಿ,ನಿನ್ನರಸುವ ಗಾಳಿಗುಂಟ ದಿಕ್ಕಾಪಾಲುನುಸುಳಿದಾಗೆಗಲೆಲ್ಲ ಸದ್ದಿಲ್ಲದೆ ಮುಳ್ಳುಗಳು ಚುಚ್ಚಿಪರಚಿದ ಗಾಯಕ್ಕೊಂದು ಮುಲಾಮುಹಿತವಾಗಿ ಅಪ್ಪಿದ ಗಳಿಗೆಗಳು,ತೀವ್ರತೆಗೆ ಸಾಣೆ ಹಿಡಿದು ತನುವಿನೊಳಗೆ ಭಾವೋದ್ರೇಕದ ಸುಳಿಗಾಳಿಮುತ್ತಿನ ಹನಿಗಳಿಗೆ,ಬಯಲಾಗಿ ಮೈದೆಳೆದಿದೆಹೊನಲು ಬೆಳಕಿನಾರ್ಭಟದಲಿ ಪ್ರೇಮೋತ್ಸವವಿದೆಸಂಭ್ರಮಕ್ಕೊಂದು ಮಿತಿಯಿದೆ ನಿಧಾನಿಸು,ಬಿಕರಿಯಾಗದಿರಲಿ ಸೆಳೆತದಾ ಬಿಗಿ ನಂಟುಬರೀ ಮಣ್ಣಲ್ಲ ನಾನು,ನೀ ಬಿತ್ತುವ ಬೀಜಕೆಕಾಪಿಡುವ ಜೀವದುಸಿರಿನ ಆಸರೆಒಡಲೊಳು ಬಂಧಿಸಿ ನಿನ್ನ ಮರುಸೃಷ್ಟಿಗೆಎನ್ನೆದೆಯು ಯುಗಗಳಿಗೆ ಸಾಕ್ಷಿಯಾಗಿದೆನಿನಗಾಗಿ ಹಂಬಲಿಸದ ದಿನಗಳಿಲ್ಲನೀನಿಲ್ಲದೆ ಹೂ ಅರಳಿಲ್ಲ,ಗುಬ್ಬಿ ಗೂಡು ಕಟ್ಟಿಲ್ಲ,ಜಗವೆಲ್ಲ […]

Back To Top