ಕಾವ್ಯಯಾನ

ಕಾವ್ಯಯಾನ

ನತದೃಷ್ಟ ಕವಿತಾ ಸಾರಂಗಮಠ ಪಂಜರದಿ ಹಕ್ಕಿಗಳ ಬಂಧಿಸಿದೆ ಆನೆಗಳ ಗರ್ವ ಅಡಗಿಸಿ ಮದ್ದಾನೆಯಾದೆ ಆನೆ ದಂತಗಳ ಕದ್ದೆ ಹುಲಿ,ಸಿಂಹಗಳ ಬೇಟೆಯಾಡಿದೆ ಓ ಮಾನವ ಗೃಹ ಬಂಧಿಯಾದೆ! ಸ್ವಚ್ಛಂದ ಹಾರಾಡುವ ಪಕ್ಷಿಗಳ ಪಂಜರದಿ ಬಂಧಿಸಿದೆ ಪಶು,ಕೀಟಗಳ ಭೇದವೆಣಿಸದೆ ಚಪ್ಪರಿಸಿದೆ ಉಭಯ ಜೀವಿ ಸಂಕುಲದ ನಾಶಕೆ ಮುಂದಾದೆ ಎಮ್ಮೆ,ಕಾಡು ಕೋಣ,ಚಿರತೆ,ಹುಲಿಗಳ ಚರ್ಮವನೆ ಹೊದ್ದೆ ಓ ಮಾನವ ನೀನೇ ಅವುಗಳಾದೆ! ಆತಂಕವಿಲ್ಲದೆ ಅಂತರಿಕ್ಷಕೆ ಹಾರಿದೆ ಸೂರ್ಯ ಚಂದ್ರರ ಮೀರಿಸಲು ಹೋದೆ ನಿಲುಕಿದ್ದರೆ ನೀಲನಭದೆ ವಾಸಿಸುತ್ತಿದ್ದೆ ಹಣದ ದಾಹಕೆ ಮೌಲ್ಯಗಳ ಮಾರಿಕೊಂಡೆ ಓ […]

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-5 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ. ‘ಅಮ್ಮಾ ನನ್ನ ಜೊತೆ ಆಟಾ ಆಡು ಬಾ ಎಂದು ನಾಲ್ಕು ವರ್ಷದ ಪುಟ್ಟ ಶಿಶಿರನ ಕರೆ ಕೂಗಾಟ ಚೀರಾಟವಾದರೂ ಆ ಅಮ್ಮನಿಗೆ ಅಡುಗೆ ಮನೆಯಲ್ಲಿ ಕೆಲಸ ಮುಗಿಯುವುದಿಲ್ಲ. ತೊಳೆದಷ್ಟೂ ಮುಗಿಯದ ಮುಸುರೆ ಪಾತ್ರೆಗಳು, ಬಟ್ಟೆಗಳು …ಬಿಡುವೆಲ್ಲಿದೆ?ಈಗಿನ್ನೂ ತಿಂಡಿ ತಿಂದಾಗಿದೆ ಆದರೆ ಮತ್ತೆ ಅಡುಗೆ ಮಾಡುವ ಸಮಯ ಬಂದೇ ಹೋಯ್ತು ಎನ್ನುವ ಟೆನ್ಶನ್ […]

ಕಾವ್ಯಯಾನ

ಹನಿಗಳು ಬಸವರಾಜ ಕಾಸೆ ಅವಳ ಕೈಗುಣ ಕೇಳಿ ತಿಳಿದು ಕಟ್ಟಿಕೊಂಡೆ ಮಾಡಿ ಅವಳ ಗುಣಗಾನ! ಆಹಾ ಎಂತಹ ನಶೆ ಕಂಡು ಅವಳ ಕೈಗುಣ!!! ಸಂಜೆ ಮಿಕ್ಸ್ ಮಾಡಿ ಕೊಡುವಳು ಎಣ್ಣೆಯೊಂದಿಗೆ ಸೋಡಾ!! ರುಚಿ ಹೇಗಿದೆ ಎಂದು ಪರೀಕ್ಷಿಸಿ!!! ಪಿಜ್ಜಾ ಬರ್ಗರ್ ಕೊಡಿಸದಿದ್ದರೂ ಪರವಾಗಿಲ್ಲ ಪಿಜ್ಜಾ ಬರ್ಗರ್ ಸ್ಯಾಂಡವಿಚ್!!! ಕೊಡಿಸಿದರೆ ಸಾಕೆಂದಳು ಲಿಪಸ್ಟಿಕ್ ಕ್ರೀಮ್ ಬಿವಟಿ ಕಿಟ್!!! ಅಮಾಯಕಿ ಗುಟ್ಕಾ ಸಿಗರೇಟು ಎಣ್ಣೆ ಏನೆಲ್ಲಾ ಬಿಡಿಸಿದಳು ನಲ್ಲೆ! ಹುಚ್ಚು ಪ್ರೀತಿಯ ಅಡ್ಡ ಪರಿಣಾಮ!! ಜೇಬಲ್ಲಿ ಯಾವುದಕ್ಕೂ ಕಾಸಿಲ್ಲದಂತೆ ಮಾಡಿದಳು […]

ನಾನು ಓದಿದ ಪುಸ್ತಕ

ಚಿಗುರಿದ ಕನಸು ಡಾ.ಶಿವರಾಮ ಕಾರಂತ ಮೊನ್ನೆ ನಮ್ಮ ಬತ್ತಲಹಳ್ಳಿಗೆ ಹೊರಟಾಗ ಎದುರಿಂದ ಕುರುಚಲು,ಸಣ್ಣ ಕಾಡು ಗಿಡಗಳಿಂದಲೇ ತುಂಬಿರುವ ಹಸಿರುಟ್ಟ ಬೆಟ್ಟ ಸಾಲುಗಳು ಬರಮಾಡಿಕೊಂಡವು. ಬೆಟ್ಟದ ತಪ್ಪಲಿನಲ್ಲಿ ಇರುವ ನಮ್ಮ ಹೊಲ,ತುಂಡು ಭೂಮಿಯ ಕಂಡಾಗ ಎಂತದೋ ಖುಷಿ. ಈ ದಿನ ಅದೆಲ್ಲವನ್ನೂ ಮತ್ತೆ ಮತ್ತೆ ನೆನೆಯಲು ಕಾರಣವಾಯ್ತು ಈ “ಚಿಗುರಿದ ಕನಸು”. ಈ ಕಾದಂಬರಿಯು ಶಿವರಾಮ ಕಾರಂತರು  ‌ಬರೆದಿರುವ‌ ಕಾದಂಬರಿಗಳಲ್ಲಿ ಒಂದಾಗಿದ್ದು ತುಂಬಾ ಅದ್ಭುತವಾದ ಕಾದಂಬರಿಯಾಗಿದೆ.                   ಈ ಕಾದಂಬರಿಯನ್ನು ಓದಿ ಮುಗಿಸಿದ ನನಗೆ ಈ ಒಂದು ವಿಷಯ […]

ಕಾವ್ಯಯಾನ

ಎಚ್ಚರವಾಗಿದ್ದರೂ ಏಳದೆ! ಧಾಮಿನಿ ಅವಳು ಮಲಗೇ ಇದ್ದಾಳೆ… ಬೆಳಗು ಮುಂಜಾನೆದ್ದು ರಂಗೋಲಿ ಹಾಕುತ್ತಿದ್ದವಳು ಇವತ್ತೇನೋ ನೀರು ಹಾಕಿದರೆ ಸೂರ್ಯನ ಮುಖಕ್ಕೇ ರಾಚುವಷ್ಟು ಸಮಯವಾಗಿದ್ದರೂ ಮಲಗೇ ಇದ್ದಾಳೆ. ಹಾಗಂತ ರಾತ್ರಿಯೆಲ್ಲ ಕ್ರೀಡೆಯಾಡಿರಲಿಲ್ಲ ಲೀಲೆಯಾಡಿದಂತ ಕಸಸೂ ಕಂಡಿರಲಿಲ್ಲ, ಶತಮಾನವಾಗಿದ್ದರೂ. ಹಾಗಂತ ಮೈಮರೆತು ಮಲಗಿರಲಿಲ್ಲ ಎಲ್ಲದರಿಂದ ವಿಮುಖವಾದವಳೂ ಅಲ್ಲ ಬದುಕೇ ಎಲ್ಲದರಿಂದ ದೂರ ಸರಿದಿದೆ ಸುಮ್ಮನೆ ಮಲಗೇ ಇದ್ದಾಳೆ ವೇಳೆ ಸರಿದಿದ್ದರೂ. ಹಾಗಂತ ಕೆಲಸವಿಲ್ಲದೇ ಏನಿಲ್ಲ ಶುರು ಮಾಡಿದರೆ ಅತ್ತಿತ್ತ ತಿರುಗಲೂ ಪುರುಸೊತ್ತಿಲ್ಲ ಒಂದೊಂದು ಘಳಿಗೆ ಮುಂದಕ್ಕೋಗುತ್ತಿದ್ದರೂ ಮಲಗೇ ಇದ್ದಾಳೆ. ಹಾಗಂತ […]

ಅವನಿಗೆ ನಾಳೆ ಬಾ ಎನ್ನಿ

ಕೊರೋನಾ ಅವನಿಗೆ ನಾಳೆ ಬಾ ಎನ್ನಿ ಡಿ.ಯಶೋದಾ ಕೊರೋನಾ ಅವನಿಗೆ ನಾಳೆ ಬಾ ಎನ್ನಿ ಇತ್ತೀಚೆಗೆ ಪ್ರತಿದಿವಸ ಅವನು ಕನಸಿನಲ್ಲಿ ಬರುತ್ತಾನೆ, ತನ್ನ ಜೊತೆ ಬಂದುಬಿಡು ಎಂದು ಬಲವಂತ ಮಾಡುತ್ತಾನೆ, ನನಗೂ ಅವನೊಂದಿಗೆ ಹೋಗಿಬಿಡುವ ಮನಸ್ಸಾಗುತ್ತಿದೆ.ನಿಜ ಹೇಳಬೇಕೆಂದರೆ ಹಗಲೆಲ್ಲಾ ಅವನನ್ನೇ ನೆನಪಿಸಿಕೊಳ್ಳುತ್ತಿರುತ್ತೇನೆ, ಇರುಳಲ್ಲಿ ಅವನು ಬಂದು ಕರೆಯುತ್ತಾನೆ. ಇಲ್ಲಿ ಇದ್ದು ನಾನು ಮಾಡುವುದಾದರೂ ಏನಿದೆ? ಹೋಗಿಬಿಡಲೇ?…ಹೋಗಿಬಿಡಲೇ ಎಂದು ಕೇಳುವ ಆಕೆಯಮನಸ್ಸು ಅರ್ಥವಾಗಿತ್ತು ಹಾಗೆಯೇ ನನ್ನ ಮನಸ್ಸುಆರ್ದ್ರವಾಯಿತು.. ಕರೆಯುವವನು ಜೀವ ಕೊಡುವವನಾಗಿದ್ದರೆ ಹೋಗಿಬಿಡು ಎನ್ನಬಹುದಿತ್ತು, ಆದರೆ ಜೀವ ತೆಗೆಯುವವನ […]

ಕಾವ್ಯಯಾನ

ಲೆಕ್ಕವಿಟ್ಟವರಿಲ್ಲ.. ಮಧುಸೂದನ ಮದ್ದೂರು ಭೂತಗನ್ನಡಿಯಲಿ ಇತಿಹಾಸ ಗರ್ಭ ಕೆದಕಿದಾಗ ಕಂಡುಂಡ ಸತ್ಯಗಳು ಮಿಥ್ಯೆಗಳವೆಷ್ಟೋ ಲೆಕ್ಕವಿಟ್ಟವರಿಲ್ಲ.. ರಾತ್ರಿ ರಾಣಿಯರ ಪಲ್ಲಂಗದಲ್ಲಿ ಕರಗಿದ ಸಾಮ್ರಾಜ್ಯಗಳೆಷ್ಟೋ ? ಉರುಳಿದ ಕೋಟೆ ಕೊತ್ತಲಗಳೆಷ್ಟೋ? ಸಾಮ್ರಾಜ್ಯ ಮುಕುಟ ಮಣಿಗಳೆಷ್ಟೋ? ತರಗಲೆಯಾದ ತಲೆಗಳೆಷ್ಟೋ? ಲೆಕ್ಕವಿಟ್ಟವರಿಲ್ಲ… ಮಣ್ಣಿನಾಸೆಯ ಹಪಹಪಿಕೆಯಲಿ ಹರಿದ ರಕುತದ ಕಾಲುವೆಗಳೆಷ್ಟೋ? ಆ ಕಾಲುವೆಗಳಲ್ಲಿ ಮುಗಿಲು ಮುಟ್ಟಿದ ವಿಧವೆಯರ ಗೋಳಿನ ಕಣ್ಣೀರ ಉಪ್ಪು ಕದಡಿ ಹರಿದ ನದಿಗಳೆಷ್ಟೋ? ಉಪ್ಪುಪ್ಪು ಕಡಲುಗಳೆಷ್ಟೋ? ಲೆಕ್ಕವಿಟ್ಟವರಿಲ್ಲ…. ಅಂಗವಿಹಿನರಾದವರ ಆರ್ತನಾದ ನಿರ್ವಂಶವಾಗಲೆಂಬ ಹಿಡಿಶಾಪವಿಟ್ಟು ಹೂಳಿಟ್ಟು ಎರಚಿದ ದೂಳಿನ ಗುಡ್ಡೆ ಗಳೆಷ್ಟೋ ಲೆಕ್ಕವಿಟ್ಟವರಿಲ್ಲ… […]

ಸ್ವಾತ್ಮಗತ

ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..! ಕೆ.ಶಿವು ಲಕ್ಕಣ್ಣವರ  ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..! ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು ‘ಅಪ್ರಸಿದ್ದ ಶರಣೆಯರು/ವಚನಕಾರ್ತಿಯರು’ ಅಥವಾ ‘ಗೌಪ್ಯವಚನಕಾರ್ತಿಯರೆಂದು ‘ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ […]

ಕಾವ್ಯಯಾನ

ಗಝಲ್ ಎ. ಹೇಮಗಂಗಾ ನನ್ನ ತೊರೆದು ಹೋಗುವುದೇ ಹಿತವೆಂದಾದರೆ ಹೇಳಿ ಹೋಗು ಕಾರಣ ನನ್ನ ಮರೆತು ಬಾಳುವುದೇ ಸುಖವೆಂದಾದರೆ ಹೇಳಿ ಹೋಗು ಕಾರಣ ‘ನಿನ್ನ ಹೊರತು ಬೇರಾರೂ ಬೇಕಿಲ್ಲ’ವೆಂದೇ ಈ ತನಕ ಕನವರಿಸುತ್ತಿದ್ದೆ ನನ್ನ ಅಸೀಮ ಒಲವೇ ಈಗ ಬೇಡವೆಂದಾದರೆ ಹೇಳಿ ಹೋಗು ಕಾರಣ ಕಂಡ ಕನಸುಗಳಿಗೆ ರಂಗು ಬಳಿದು ರೆಕ್ಕೆ ಮೂಡಿಸಿದವನು ನೀನು ನನ್ನ ಸಾಂಗತ್ಯವೇ ಇ‌ಷ್ಟವಿಲ್ಲವೆಂದಾದರೆ ಹೇಳಿ ಹೋಗು ಕಾರಣ ದಿಕ್ಕು ಬದಲಿಸಿದ ನಿನ್ನ ನಿಗೂಢ ನಡೆ ಊಸರವಳ್ಳಿಯನ್ನು ನೆನಪಿಸಿದೆ ನನ್ನ ಸಂಗವೇ ಬೇಡದ […]

ಕಾವ್ಯಯಾನ

ಮೌನ ಪ್ರತಿಭಾ ಹಳಿಂಗಳಿ ನಾ ಹೊದ್ದಿರುವೆ ಮೌನದ ಕಂಬಳಿಯನು ಉಸಿರು ಕಟ್ಟಿದಂತಿದೆ ಒಳಗೊಳಗೆ ಜೋರಾಗಿ ಕಿರುಚಬೇಕೆಂದಿರುವೆ ಸರಿಪಡಿಸಿಕೊಳ್ಳುತ ಗಂಟಲನ್ನು. ಒಳಗೂ,ಹೊರಗೂ ತಾಕಲಾಟ ತರತರನಾದ ಭಾವಗಳ ಎರಿಳಿತ ಮನದ ಕದ ತಟ್ಟುತಿರಲು. ಅತ್ತು ಸುಮ್ಮನಾಗುವೆ ಒಮ್ಮೆ ಜಗದ ಆಗು,ಹೋಗುಗಳಲ್ಲಿ ಮಂಡಿ ಉರಿ ಕುಳಿತಿರಲೂ ಬಂದು ನನ್ನ ಮುಂದೆ. ಶಬ್ದವೂ ನಿಲುಕುತ್ತಿಲ್ಲ ತಲೆಯೆತ್ತಿ ನೋಡಬೇಕೆನಿಸಿತು ಒಮ್ಮೆ. ನೋಡಲಾರೆನು ಎಂದುಸುರಿತು ಹುದುಗಿಸುತ ತಲೆ ಕಂಬಳಿಯೊಳಗೆ ಮರೆಯಲಾರದೆ ಮೌನ *********

Back To Top