Day: October 5, 2021

ತರಹಿ ಗಜಲ್

ತರಹಿ ಗಜಲ್ (ಮಿಶ್ರ: ಹೃದಯವನ್ನು ಓದಲು ಬರುವುದಿಲ್ಲ ನಿನಗೆ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ) ಅಭಿಷೇಕ ಬಳೆ ಮಸರಕಲ್ ಹೃದಯವನ್ನು ಓದಲು ಬರುವುದಿಲ್ಲ ನಿನಗೆಮನದ ಮಾತು ಕೇಳುವುದಿಲ್ಲ ನಿನಗೆ ಹೃದಯ ಅಗಣಿತ ನೋವುಗಳ ಕಣಜನೋವಿಗೆ ಕಣ್ಣೀರಾಗುವುದು ತಿಳಿದಿಲ್ಲ ನಿನಗೆ ಮೊದಲ ಕವಿತೆಗೆ ಕಿವಿಯಾಗದೆ ಹೋದೆಅಗಲಿಕೆಯ ವಿರಹ ಕಾಡುವುದಿಲ್ಲ ನಿನಗೆ ಕಣ್ಣಿನಲ್ಲೇ ಕನುಸಗಳ ಕಟ್ಟುತ್ತಲೇ ಇದ್ದೆನಾಳಿನ ಕನಸುಗಳು ಕಾಣುವುದಿಲ್ಲ ನಿನಗೆ ಎದೆಯ ಬಾಗಿಲಲ್ಲೇ ನಿಂತಿರುವೆ ಒಳಬರದೇಅಭಿಯ ಮನದ ನೋವು ಕೇಳಿಸುವುದಿಲ್ಲ ನಿನಗೆ

ಶ್ಮಶಾನ ಕುರುಕ್ಷೇತ್ರ

ದ್ವಾಪರವು ಅಸ್ತಯಿಸಿ

ಕಲಿ ತಾನು ವಿಸ್ತರಿಸಿ

ಹೊಸಯುಗಕೆ ನಾಂದಿಯೂ…

ಕುರುಕ್ಷೇತ್ರವೇ ಬುನಾದಿಯೂ…..

(ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ರಿಂದ ಪ್ರೇರಿತ)

ಗಾಂಧಿ

ಗಾಂಧಿ ಇಂದು ಜಗತ್ತೇ ನಿನ್ನ
ಆರಾಧನೆಗಾಗಿ ಕಾತರಿಸುತಿದೆ!
ಆದರೆ ನಿನ್ನ ನೆಲದಲ್ಲಿ ಮಾತ್ರ
ನೀನು ಪರಿಹಾಸ್ಯದ ಕವನ!

ಆತ್ಮಕಥನ:ಬಾಬಾಸಾಹೇಬರ ಆಲೋಚನೆಗಳು.

ಬಾಬಾಸಾಹೇಬರ ಜೀವನ ಹೋರಾಟ ಕುರಿತು ಧನಂಜಯ ಕೀರ್ ಅವರು ಬರೆದ ಕೃತಿಯನ್ನು ನೋಡಿದ ಬಾಬಾಸಾಹೇಬರು “ಚೆನ್ನಾಗಿದೆ, ಆದರೆ ನನ್ನದು  ಸುದೀರ್ಘ ಮತ್ತು ಅಂತ್ಯ ಕಾಣದ ಜೀವನಗಾಥೆ,  ಅದು ಯಾರಿಗೂ ತಿಳಿಯದು ಬೇರಾರು ಬರೆಯುವಂತಹದ್ದಲ್ಲ” ಎನ್ನುತ್ತಾರೆ. ‘ ಆತ್ಮ ಚರಿತ್ರೆ ಬರೆಯಲು ಸಮಯ ಎಲ್ಲಿದೆ?’ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು. ‘ನನ್ನ ಜನರಿಗೊಂದು  ಮಾತೃಭೂಮಿ ಇಲ್ಲ’ ಎಂದ ಬಾಬಾಸಾಹೇಬರು,ಮಾತು ಸೋತ ಎಲ್ಲರಿಗೂ ಮಾತೃಭೂಮಿಯ ಹಕ್ಕು ಕೊಟ್ಟವರು, ಅವರು ಬರೆದದ್ದೆಲ್ಲ ಆತ್ಮಚರಿತ್ರೆಯೇ ಆದೀತು.

Back To Top