Day: October 27, 2021

ಗಜಲ್

ಚಂದಿರನಂತೆ ಬೆಳಗುತಿರು ಎನ್ನುವರು ಕತ್ತಲಲ್ಲಿ
ನೇಸರನಂತೆ ಹೊಳೆಯುತಿರು ನನ್ನದೆಯ ಬಾನಿನಲ್ಲಿ

ಎದೆಯ ತಿದಿ

ಯುಗಗಳೆಷ್ಟೊ ಸರಿದಿದೆ
ಅನಂಗರಂಗವು‌ ನಿತ್ಯ ನಿರಂತರ
ಶಿವಕಣ್ಣುರಿಗೆ ಭಸ್ಮವಾದರೂ ರತಿ ಇದ್ದಾಳೆ ಬದುಕಿಸಲು.

ಕನ್ನಡಿಯ ಅಮಾಯಕತೆ

ಕಾವ್ಯಯಾನ ಕನ್ನಡಿಯ ಅಮಾಯಕತೆ ಅಶೋಕ ಹೊಸಮನಿ ಹೀರಬೇಕಿತ್ತು ಈ ಮೊಗವನ್ನಾದರೂನಗುವ ಪರದೆಯ ಚೂರಿಯನ್ನಾದರೂ ಕಲಿಸಬೇಕಿತ್ತು ಮುಖಗಳ ಹೂಳಲುಈ ನೇತ್ರಗಳಿಗಾದರೂ ಒಡೆಯಬೇಕಿತ್ತು ಈ ಮಡಿಕೆಯದಾರಿಗಳಿಗಾದರೂ ಆಲಿಸಬೇಕಿತ್ತು ಗಾಯಗಳಅಣುಕು ಗೋಷ್ಠಿಗಳಾದರೂ ಸಾಕಿತ್ತು ಚಂದಿರನ ನಗುಹೃದಯದ ಕಿರು ಬೆರಳಿಗಾದರೂ ನೀನಾಗಬೇಕಿತ್ತುಹಸ್ತಗನ್ನಡಿಯ ನಕ್ಷತ್ರವಾದರೂ ನುಡಿಬೇಕಿತ್ತು ಕನ್ನಡಿಯ ಅಮಾಯಕತೆಯನ್ನ ನೆತ್ತರಾದರೂ

ಅಂಕಣ ಬರಹ ತೊರೆಯ ಹರಿವು ಅಮ್ಮನಾಗಿ ಬರೆಯುವಾಗ ನಾನೊಬ್ಬ ಹೊರಗೆ ದುಡಿಯಲು ಹೋಗುವ ಆಧುನಿಕ ಕಾಲದ ಅಮ್ಮ. ವೃತ್ತಿಯ ಜೊತೆಗೆ ಕೆಲವು ಪ್ರವೃತ್ತಿಗಳಿವೆ. ಅದರಲ್ಲೂ ಓದು – ಬರವಣಿಗೆ ಎಂಬುದು ನನ್ನ ಪ್ರೀತಿಯ ಹವ್ಯಾಸ. ಆದರೆ, ಈ ಹವ್ಯಾಸಿ ಬರವಣಿಗೆ ಅನ್ನುವುದು ಯಾವ ಸಮೀಕ್ಷೆ ಅಥವಾ ಅಧ್ಯಯನಗಳಿಗೆ ಒಳಗಾಗದ ಅನೂಹ್ಯ ಘಟನೆ ಎನ್ನುವುದು ನನ್ನ ಅಭಿಮತ. ಏಕೆಂದರೆ, ಬರವಣಿಗೆಗೆ ಒಂದು ಭಾವ ಅಗತ್ಯ. ಆದರೆ, ಭಾವ ಸ್ಫುರಿಸಿದಾಗ ಬರೆದು ಬಿಡಬಹುದಾದ ಯಾವ ಅನುಕೂಲಗಳೂ ವೃತ್ತಿಪರ ಬರಹಗಾರರಲ್ಲದ ನನ್ನಂಥವರಿಗೆ […]

Back To Top