Category: ಕಾವ್ಯಯಾನ

ಕಾವ್ಯಯಾನ

ಮುದ್ದು ಮಳೆ ಮೋಡಗಳು ಒಂದನ್ನೊಂದು ಮುದ್ದಿಸಲುಹಣೆಗೆ ಹಣೆಯ ತಾಕಿಸಲುತಂಗಾಳಿಯು ಮೋಡಕೆ ತಂಪೆರೆದಾಗಲೇನೀ ಬರುವೆ ಭೂಮಿಗೆ ಮಗುವಾಗಿ ಮಳೆಯಾಗಿ ನಾಳೆಯುದುರುವ ಹಣ್ಣೆಲೆಯು ನಿನ್ನ ಸ್ಪರ್ಶ ಮಾತ್ರಕೆ ಪಾವನವುಒಣಭೂಮಿ ಕುಣಿಯುತಿದೆ ನಿನ್ನಮಿಲನದ ಮಣ್ಣಗಂಧವ ಹೊತ್ತು ಗಾಳಿಗೆ ತೂರಿ ಹೋಗುವ ಬೀಜಗಳುನಿನ್ನ ಬರುವಿಕೆಗೆ ಜಾಗ ಹಿಡಿದು ಕುಳಿತಿವೆನಿನ್ನೊಡನೆಯ ಪಿಸುಮಾತುಗಳ ಕೇಳುತ್ತಲೇಭೂಮಿ ಹಸಿರ ತುಂಬಿಕೊಂಡು ಮೈ ನೆರೆದಿದೆ ಸೀರಂಗಿಯೊಡನೆಯೊಂದು ಸೂಕ್ಷ್ಮ ಸಂವೇದನೆಯುಸಿಂಗರಿಸಿಕೊಂಡು ಕಾಯುತ್ತಿದೆ ಒಳಬರಲುಕೋಣೆಯೊಳಗಿರುವ ತಬ್ಬಿರುವ ದೇಹಗಳಿಗೆಮೈ ಬಿಸಿ ಏರಿಸಿ ಕಿಟಕಿಯಿಂದಲೇ ಸೋಕಿ ತಂಪೆರೆದು ರೇಗಿಸಲು ಮಿಲನಾತುರಕ್ಕೆ ಕಪ್ಪೆಗಳು ಕಾತರಿಸಿಇರುಳನ್ನೇ ಬೆಚ್ಚಿ ಬೀಳಿಸಿವೆ […]

ಮಳೆ ಹಾಡು ಆಕಾಶ ಬಯಲಲ್ಲಿ ಸಾಲುಗಟ್ಟಿದಮೋಡ ಗರಿಕೆಯೊಂದನೂಚಿಗುರಿಸದು ನೋಡು ಇಳೆಯ ಸಾಂಗತ್ಯಕೆ ಇಳಿದುಬಂದೊಡನೆಯೇ ನೆಲವೆಲ್ಲಾಹಚ್ಚ ಹಸಿರು ಪಚ್ಚೆ ಕಾಡು ಬಾನ ನಂಟಿದ್ದೂ ಅಂಟಿಕೊಳದೆಭುವಿಯ ಸಾಮಿಪ್ಯಕೆ ಕಾತರಿಸಿ ಓಡಿಬರುವುದು ಅಮೋಘ ಮೇಘದ ಪಾಡು ಹೀಗೆ ಇರುವ ಪರಿ ಯಾವುದೆಲ್ಲಾಸರಿ ಏನಚ್ಚರಿಯಿದೇನಚ್ಚರಿ ಎಂದುಯೋಚಿಸಲದು ಗೊಂದಲದ ಗೂಡು ಮೋಡಗಟ್ಟಿ ಮಳೆ ಹೊಯ್ಯದುಇಳೆಯ ಬಯಸಿ ಬಳಸಿ ಅಪ್ಪುವುದುಋತುಮಾನ ಚಕ್ರಗತಿಯ ನಡೆಯು ನೋಡು ಆವಿಯಾಗದ ಕಡಲು ಮಳೆಯಾಗದಮೋಡ ನೆಲಕಾಗಿ ಹರಿಯದ ನದಿಎನಿತಿರಲೆಂತು ಲೇಸಹುದು ಬಿಡು ನಶೆಯೊಳಗಾಗಿ ಕಳೆದುಹೋಗದೆನಿನಗಾಗಿ ನಾನು ನನಗಾಗಿ ನೀನುಎಂದಂದು ಬದುಕುವುದು ಒಲವ […]

ಮುಂಗಾರು ಮಳೆಗೆ ಬಿದ್ದ ಮುಂಗಾರು ಮಳೆಗೆನಿನ್ನದೇ ನೆನಪುಮಣ್ಣ ಕಣ ಕಣದ ಘಮನಿನ್ನದೇ ಸೊಡರು ಕಾದ ಕಬ್ಬಿಣದ ದೋಸೆ ಹಂಚಿಗೆಬಿದ್ದ ಮೊದಲ ನೀರುಚುರ್ ಎನ್ನುತ್ತಾ ಮೇಲೇರುವ ಘಮನಿನ್ನದೇ ಹಳೆಯ ನೆನಪು ಜೂನ್ ಮುಗಿಯುವ ಹೊತ್ತಿಗೆ ಕಾಣೆಯಾಗುವ ದುಂಡು ಮಲ್ಲಿಗೆ ಹೂಮುಡಿದು,ಮುದಿಡಿ ಲಂಗ ಎತ್ತಿ ಮಳೆನೀರ ಗುಂಡಿ ಹಾರಿಸಿ ಗೆಜ್ಜೆ ಹೆಜ್ಜೆಯ ಹೂಡುಗಿ …ಆಗ ನಿನ್ನದೇ ನೆನಪು! ಮುಖಪುಟದ ನೂರಾರು ಫ್ರೊಫೆಲ್ ತಿರುವಿತಿರುವಿನಲಿ ನಿನ್ನ,ನೀನೆ ಎಂಬ ಚಿತ್ರ ಪಟ ಹುಡುಕಿ,ತಿರುಗಿಸಿ,ಮುರುಗಿಸಿ ನೋಡುವಾಗಇವಳ ಕೈಯಲ್ಲಿ ಸಿಕ್ಕಿ,ಕಿವಿ ತಿರುಗಿಸಿಕೊಳ್ಳುವಾಗನಿನ್ನದೇ ಹಳೆಯ ನೆನಪು ರಾತ್ರಿ […]

ಕಾವ್ಯಯಾನ

ಅವನಾಗದಿರಲಿ. ಪ್ರಮೀಳಾ. ಎಸ್.ಪಿ.ಜಯಾನಂದ. ಸದ್ದು ನಿಲ್ಲಿಸಿದ್ದ ನಾಯಿಮತ್ತೇಕೆ ಸದ್ದು ಮಾಡುತ್ತಿದೆ…?ಇಷ್ಟು ದಿನ ಮೌನವಾಗಿದ್ದ ಶುನಕ…ಇಂದೇಕೆ ಸದ್ದು..?? ಅದೊ..ಅವನು ಬಂದಿರುವನೆ..ಚಪ್ಪರದ ಸಂಭ್ರಮ..ವಾಲಗದ ಸದ್ದು ಕೇಳಿಸಿತೆ ಅವನಿಗೆ ಹೂಹುಂ…ಇಲ್ಲ,ಇಲ್ಲ.. ಆ ಹೊತ್ತುಸದ್ದು ಮಾಡದೇ ಎದ್ದು ಹೋದನಲ್ಲ… ಆ ರಾಜ..ಜಗದ ಉದ್ದಾರ ಕ್ಕೆಂದು ನಂಬಿತು ಜಗತ್ತು ಆದರವಳ ಮಗ…ಏನೆಂದು ದುಃಖಿಸಿದನೋ ಇವನುಮಗ್ಗಲು ಬದಲಿಸುವುದರೊಳಗೆ ಎದ್ದು ಹೋಗಿದ್ದು ಯಾಕೆಂದು ತಿಳಿಯಬಲ್ಲದೆ ನನ್ನ ಹಸುಗೂಸು..?? ಗಟ್ಟಿಯಾಗದಿದ್ದರೂ ಮನಸ್ಸುಕಲ್ಲಾದ ದೇಹದುಡಿಯಿತುಮಗಳ ಸಾಕುವುದು ಸುಲಭದ ಮಾತೇನು.. ಅದು ಬರೆಯಲಾಗದ ಕವಿತೆ,ಹಾಡಲು ಬರದ ಹಾಡು.. ಅಳುವ ಕೂಸಿಗೆ ಹಾಲುಣಿಸಿಕಂಬನಿ […]

ಕಾವ್ಯಯಾನ

ಅಮ್ಮನಿಗೀಗ ೬೬ ನಾಗರಾಜ ಮಸೂತಿ ದುಡಿಯುವ ದೇಹಕ್ಕೆ ವಾಕಿಂಗ್ ಅನಗತ್ಯ ಎಂದವಳುಮೆಲ್ಲ ಹೆಜ್ಜೆ ಇರಿಸುತ್ತಿದ್ದಾಳೆ ಆರು ಹೆರಿಗೆಗೆ ನಲುಗದವಳುಮಂಡೆ ನೋವಿಗೆ ಕುಸಿದಿದ್ದಾಳೆ ಬಿಸಿ ರೊಟ್ಟಿ ಉಣಬಡಿಸಿದವಳುಊಟಕ್ಕೆ ಮೆತ್ತನೆ ರೊಟ್ಟಿಯನ್ನು ಕೇಳಲು ಮುಜುಗರಕ್ಕೊಳಗಾಗುತ್ತಾಳೆ ಮೈಲು ದಾರಿ ಸವೆಸಿ ಬಿಸಿಯೂಟ ಬಡಿಸಿದಅವಳ ಪ್ರತಿ ಹೆಜ್ಜೆನನ್ನೆದೆಗೆ ಭಾರ ಅನಿಸುತ್ತಿವೆ ತಿಂಡಿ ತಿನಿಸು, ಧಿರಿಸು ತಂದಿಡುವಎನಗೆ ಆರೋಗ್ಯ ಮರುಕಳಿಸಲಾಗುತ್ತಿಲ್ಲಅವಳಿಗೀಗ ಅರವತ್ತಾರರ ಹರೆಯ ಅಮ್ಮನಿಗೆ ವಯಸ್ಸಾಗ್ತಿದೆಅದೇ ಬೇಸರವಾಗ್ತಿದೆ… **************

ಕಾವ್ಯಯಾನ

ಕಿಟಕಿ ದೀಪ್ತಿ ಭದ್ರಾವತಿ ನೀನು ನನ್ನಿಂದ ದೂರ ಸರಿದಿದ್ದೀಯೆಆದರೂ ಮೋಡದಅಂಚುಗಳಲಿನಾನು ನಿನ್ನನ್ನು ಕಾಣುತ್ತೇನೆ ಮುಸ್ಸಂಜೆ ಕೆಂಬಣ್ಣದಲಿ ನೆನಪ ಅಲೆಗಳುಓಕುಳಿಯಾಡುವಾಗಲೆಲ್ಲನಿನ್ನ ಮುಂಗುರುಳು ನನ್ನಕಣ್ಣಿನಲಿಇಣುಕಿದಂತೆ ಭಾಸವಾಗುತ್ತದೆ ವ್ಯಾಖ್ಯಾನಿಸುತ್ತೇನೆನಾನು ನಿನ್ನನ್ನು ಮರೆತಿದ್ದೇನೆ ಎಂತಲೇ..ಆದರೆಬಿಟ್ಟು ಹೋದ ಹೆಜ್ಜೆ ಗುರುತುಗಳಹಾದಿ ಮಳೆಗಾಲದಲಿ ಮಿದುವಾಗಿಬೇಸಿಗೆಯಲಿ ಒರಟಾಗಿಬೆರಳಿಗಂಟುವಾಗಅರ್ಧ ಬರೆದಿಟ್ಟ ಕವಿತೆಯೊಂದುಎದೆಯಲ್ಲಿ ಗೂಡುಕಟ್ಟುತ್ತದೆ ಮತ್ತೆ ಇನ್ನೆಂದು ನಿನ್ನ ಭೇಟಿಯಾಗುವುದಿಲ್ಲಎಂದೆ ನಂಬುತ್ತೇನೆ.ಮುಚ್ಚಿ ಎದ್ದು ಹೋದ ಕಿಟಕಿಯಲಿಬೆಳಕ ಗೀರೊಂದು ತಡತಡಕಿ ಬರುವಾಗನಿನ್ನ ಕಣ್ಣ ಮಿಂಚುಇರುಳ ಸರಳುಗಳತೂರಿ ನನ್ನೆಡೆಗೆ ಬಂದಂತೆ ಅನ್ನಿಸುತ್ತದೆ ಮತ್ತೆ ಮತ್ತೆ ನಿನ್ನ ನೆನಪುಗಳಬೇಕೆಂದೆ ದೂರ ಅಟ್ಟುತ್ತೇನೆಅವು ಜಾತ್ರೆಯಲಿ ಕೈ […]

ಕಾವ್ಯಯಾನ

ಆಪ್ತ ಗೆಳೆಯನ ಸಾವು ವೆಂಕಟೇಶ್ ಚಾಗಿ ಅವನು ನನ್ನೊಂದಿಗೆ ಪ್ರತಿದಿನವೂಶಾಲೆಗೆ ಬರುತ್ತಿದ್ದನನ್ನ ಆಟ ಪಾಠ ಕೀಟಲೆಗಳಿಗೆಅವನು ಸಾಕ್ಷಿಯಾಗಿದ್ದಪಾಪ, ಅವನು ಮೂಗನನ್ನೊಂದಿಗೆ ಮಾತನಾಡದಿದ್ದರೂಭಾವನೆಗಳನ್ನುಅರ್ಥಮಾಡಿಕೊಳ್ಳುವಆತ್ಮಬಾಂಧವನನ್ನಿಂದ ಬಯಸುವುದುನನ್ನ ತುಳಿತವಷ್ಟೇಪ್ರತಿದಿನವೂ ತುಳಿತಕ್ಕೊಳಗಾದರೂಅವನು ಬದುಕಿದ್ದು ನನಗಾಗಿಯೇಅವನ ಕಾಲುಗಳಿಗೆನೋವುಗಳು ಚುಚ್ಚಿದಾಗಅವನೇ ಉಸಿರೇ ಹೋಗುತ್ತಿತ್ತುಆಗಾಗ ಉಸಿರು ನೀಡಿದಾಗಮತ್ತೆ ಬದುಕುತ್ತಿದ್ದಪ್ರತಿದಿನದ ನನ್ನ ಸೇವೆಗಾಗಿ;ನನ್ನ ಭಾರವನ್ನೆಲ್ಲ ಅವನುನಿರಾಕರಿಸದೇ ಹೊರುತ್ತಿದ್ದಮತ್ತೆ ನನ್ನ ಭಾರವನ್ನೂ ಸಹ.ಅವನೊಂದಿಗೆ ನಾನು ಹಂಚಿಕೊಂಡಮಾತುಗಳು ಸಾವಿರಾರುನೀಡಿದ ಮುತ್ತುಗಳೂ ಸಾವಿರಾರುತಾನು ಕಷ್ಟಗಳ ಅಪ್ಪಿದರೂಕ್ಷಣಕ್ಷಣವೂ ನೋವನ್ನುಂಡರೂನನ್ನ ಗಾಳಿಯಲ್ಲಿ ತೇಲಿಸುತ್ತಿದ್ದನಾನೇ ಮಾಡಿದ ಗಾಳಿಪಟದಂತೆ.ಅವನುಂಡ ಬಿಸಿಲುಆ ರೈತನಿಗೂ ದಕ್ಕಿಲ್ಲಮಳೆಯ ಹನಿಗಳ ಸುಖವನ್ನುಪ್ರತಿಭಾರಿಯೂಅನುಭವಿಸುವವನು ಅವನೇಚಂದ್ರ ರಜೆ […]

ಕಾವ್ಯಯಾನ

ಬೋಧಿ ಭಾವ ರೇಮಾಸಂ ಕರವ ಕೊಡವಿ ಕುಳಿತ ಮನಕೆಹಸಿರು ಹಾಸುವ ತವಕದಲಿಮುಗಿಲಿಗೆ ನೋಟವ ಚೆಲ್ಲಿಕೆಚ್ಚನು ತೋರಿದಿ ನೀನಲ್ಲಿ // ಬೊಗಸೆ ಬೆಳಕು ಹಿಡಿದುಕಲ್ಲ ಮುಳ್ಳ ಬೇಲಿಯ ಹಾರಿಭರವಸೆಯ ಬಂಡೆ ಹೊದ್ದುಸಂದಿನಲಿ ಬಿತ್ತು ಬೀಜ ಹಾರಿ// ವಜ್ರದೇಹಿ ಕಲ್ಲೆದೆಯ ಸೀಳಿಮೆದು ಮೇಣವಾಗಿಸಿ ಅರಳಿಪ್ರಯತ್ನಿಸಿದೆ ಮರಳಿ ಮರಳಿನೋಡುವಂತಾದೆಲ್ಲ ಹೊರಳಿ// ಬುದ್ಧನ ಬೋಧಿ ಭಾವವಾಗಿತಪವ ಗೈಯುತ ಮರೆಯಲಿಸರಿದಾರಿ ದೋರಿದೆ ಸರೀಕರಿಗೆಗೆಲುವಿದೆ ಛಲದ ಬಲದಲಿ// ***********

ಕಾವ್ಯಯಾನ

“ನಲಿಯೋಣ ಬನ್ನಿ ಸಾತುಗೌಡ ಬಡಗೇರಿ ನಲಿವಾ ಎಲ್ಲರೂ ಸರಸದಿ ಬೆರೆತುವಿರಸವ ಮರೆತು ಒಂದಾಗಿ.ಈ ಧರೆ ಸ್ವರ್ಗದಿ ಹಾಡಿ ಕುಣಿಯುವಾಐಕ್ಯದಿ ನಲಿದು ಚೆಂದಾಗಿ. ದ್ವೇಷ,ಅಸೂಯೆ, ಸೇಡಿನ ಬೆಂಕಿಮನುಜನ ನೆಮ್ಮದಿ ಕೆಡಿಸುವದು.ಅಶಾಂತಿ ಮನದಲಿ ನೆಲೆಸಿ ದೇಹವರೋಗದ ಭಾದೆಗೆ ತಳ್ಳುವುದು. ಏತಕೆ ಸುಮ್ಮನೆ ಚಿಂತೆಯ ಬಾಳುಮರೆತು ಬಾಳುವ ಚಿಂತೆಯನು.ಈ ಇಳೆ ಸೊಬಗು ಸವಿದು ಉಳಿಸುತಸ್ವಾಗತ ಮಾಡುವ ನಾಳೆಯನು. ವೈರಿಯ ಸ್ನೇಹದ ಮಾತಿನ ಒಳಗಡೆಅಡಗಿದೆ ಬೇರೆಯ ಮಸಲತ್ತು.ಎಚ್ಚರ ನಡೆಯ ಇಡಲು ನಮಗೆಬಾರದು ಕೇಡು ಯಾವತ್ತೂ. ಬನ್ನಿ!ಗೆಳೆಯರೇ ಸಂತಸದಿ ತೇಲುವಾಪ್ರತಿಕ್ಷಣ ಹರುಷದ ಹೊಳೆಯಲ್ಲಿ.ಒಂದೇ ಕುಟುಂಬದ […]

ಕಾವ್ಯಯಾನ

ಭಾವನೆಗಳು ತೇಜಾವತಿ ಹೆಚ್.ಡಿ. ಭಾವನೆಗಳೇ ಹಾಗೆತುಸು ಆಸರೆ ಸಿಕ್ಕರೆ ಸಾಕುಲತೆಯಾಗಿ ಹಬ್ಬಲುಚೂರು ಸ್ಫೂರ್ತಿ ಸಾಕುವಾಹಿನಿಯಾಗಿ ಶರಧಿಯ ಸೇರಲುಹನಿಜಲದ ಸೆಲೆ ಸಾಕುಬೀಜ ಮೊಳೆತು ಅಂಕುರಿಸಲು ನಿಖರ ಸ್ಥಳ ವೇಳೆಯ ಹಂಗಿಲ್ಲಆದಿ ಅಂತ್ಯಗಳಿಲ್ಲಬಣ್ಣ ರೂಪಗಳಿಲ್ಲಲಿಂಗ ಭೇದಗಳಿಲ್ಲ… ಮನಸು ಭಾವಗಡಲುಹೃದಯ ಮಿಡಿತದೊಡಲುಒರತೆ ಉಕ್ಕೇರಲುಹೊಂಗನಸ ಸಿಹಿಹೊನಲು.. ನಿಗ್ರಹಿಸಿದರೆ ಸತ್ತೇ ಹೋಗುವವುರೆಕ್ಕೆಬಂದರೆ ಹಾರಿ ಹೋಗುವವುಬಂದಷ್ಟು ಸಲೀಸಲ್ಲ ಹೋಗಲುಜನಿಸಿ ಮರಣಿಸುವವು ನಗಲು ಅಳಲು ************

Back To Top