ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಜಿರಳೆ ಬಂತಯ್ಯ ಜಿರಳೆ
ಎಲ್ಲೆಡೆಯು ಗದ್ದಲ ಎಬ್ಬಿಸಿ
ದುಷ್ಟ ಸ್ವಾರ್ಥಿಗಳ ನಿದ್ದೆಗೆಡಿಸಿ
ಅತ್ತಿತ್ತ ವಾಟ್ಸಾಪ್ ತುಂಬ ಹರಿದಾಡಿಸಿ,!

ದುಷ್ಟ ರಾಜಕೀಯ ನೀತಿಗೆ
ಧರ್ಮ ರಾಜಕೀಯ ಕ್ರಾಂತಿಗೆ
ಕೊಳಕು ಬಾಯಿಯ ಮತಿಭ್ರಾಂತಿಗೆ
ಗೆದ್ದಲು ಸಾಮ್ರಾಜ್ಯಶಾಹಿ ಅವನತಿಗೆ,!

ಯುವ ಜನಾಂಗದ
ಶೋಷಿತ, ತುಳಿತಕ್ಕೊಳಗಾದ
ಅಲ್ಪಸಂಖ್ಯಾತ,ನೊಂದವರಿಗಾದ
ನ್ಯಾಯದ ಪರ ಹೋರಾಡ ಬಂದಿದೆ,!

ಸರ್ವಾಧಿಕಾರಿಗಳ ಮಸ್ತಕ
ನುಸುಳಿ ಮೆದಳಿಗೆ ನೋಯಿಸಿ
ಸತ್ತಂತಿಹರನು ಇದೀಗ ಬಡಿದೆಬ್ಬಿಸಿ
ನ್ಯಾಯಕ್ಕಾಗಿ ಜಿರಳೆ ಧಂಗೆಯ ಸಾರಿದೆ,!

ಕುರ್ಚಿಯಾಸೆಗೆ
ಆಡಳಿತೆಯ ದುರಾಸೆಗೆ
ಮನುಜ ಮನಸುಗಳ ಕೊಳಚೆಗೆ
ದೂಡಿ ಬಿಟ್ಟವರ ಬೆನ್ನಟ್ಟುತ್ತ ಬಂದಿದೆ.!


About The Author

Leave a Reply

You cannot copy content of this page

Scroll to Top