ಬಾಯ್ಬಿಟ ವಂಸುಧರೆಯ ಕಂಡ ಸೂರ್ಯ ಸಂಭ್ರಮಿಸುತಿಹನು ಒಳಗೊಳಗೆ
ಬೆವರು ಬತ್ತುವ ಮುನ್ನ ಆಸೆ ಚಿಗುರೊಡೆಯಬಹುದೇನೋ ನೋಡಿ ಬರುವೆ

ಬರೀ ಮಾತಲ್ಲೇ ನಮ್ಮನ್ನು ಅಟ್ಟ ಹತ್ತಿಸಿ ಆಟ ನೋಡುತ್ತಿದ್ದಾರೆ ಜನ.
ಇರುಳು ಶಶಿಯ ನಗು ನೋಡಿಯೇ ಸಮಾಧಾನ ಪಡುತ್ತಿರುವ ನಾ ಬಡರೈತ

ಎತ್ತರದ ಹೊಸ್ತಿಲಿನಾಚೆಗಿನ ಅಂಗಳಕ್ಕೆ ಮನೆಯ ಸೊಸೆ ದಾಟಿ ಬಂದದ್ದೇ, ನಾಟಕದ ಮೊದಲ ದೃಶ್ಯಕ್ಕೆ ತೆರೆ ತೆರೆದಂತೆಯೇ, ಅಲ್ಲವೇ.

ಬರದ ಛಾಯೆಗೆ ಬುವಿ ಮೇಲೆ ಬಿರುಕಿನ ಚಿತ್ರ ಜೀವತಳೆದಿದೆ
ವರುಣ ದೇವನ ಕೃಪೆಯಿಂದ ಅವತರಿಸಬೇಕಿದೆ ಹನಿ ಮುತ್ತು

ಅಂಬಲಿಗೂ ಗತಿಯಿಲ್ಲದೆ ಅನ್ನದಾತನ ಮನೆಯಲ್ಲಿ ಹಸಿವು ಧಡಭಡಿಸಿದೆ
ಸ್ವಾಭಿಮಾನದ ಪಟಗೆಗಳು ಉಳ್ಳವರಲ್ಲಿ ಜೀತದಾಳಾಗಿ ದುಡಿಯುತಿವೆ

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ

ವಿಶೇಷ ಲೇಖನ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಆಶಾ ಸಿದ್ದಲಿಂಗಯ್ಯ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.  ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ […]

ಇಲ್ಲದವರಿಗೆ ಕೊಟ್ಟ ನೂರು ಭರವಸೆಗಳು ಹುಸಿಯಾಗಿ ಹೋದವು ಸುಳಿವಿಲ್ಲದೆ
ಅನ್ನದಾತನ ಮನೆಯಲ್ಲಿ ಅಗುಳನ್ನವೂ ಸಹ ಕೊಪ್ಪರಿಗೆ ಹೊನ್ನಾಗಿ ಕಾಣಿಸುತ್ತವೆ

ಎಂತಹ ಸಮಯವಿದು!!

ಕವಿತೆ ಎಂತಹ ಸಮಯವಿದು!! ಸಂಮ್ಮೋದ ವಾಡಪ್ಪಿ ಪ್ರೀತಿ ವಿಶ್ವಾಸ ಕೂಡಿಟ್ಟವರುಯಾವುದೋ ವಾರ್ಡಿನಲ್ಲಿ ಏಕಾಂಗಿಶ್ವಾಸಕ್ಕಾಗಿ ಎಲ್ಲ ಕಳೆದುಕೊಂಡರುಉಸಿರಿಗಾಗಿ ಕಳೆದು ಹೋದರು ಚೈತ್ರದ ಚಿಲುಮೆಯ ಕಾಲಎಲ್ಲವೂ ಚಿಗುರತಿರಲಿಂದುಬಾಡುತಿವೆ ಸಾವಿರ ಲಕ್ಷಮನೆಗಳಲಿ ರೋದನಗಳಿಂದು ಅವ ಹೋದ ಇವ ಬಂದಏನಾಯಿತು ಕೋವಿಡ್ಡಾ?ಅದೇ ಪ್ರಶ್ನೆ..‌ ಭಯಂಕರ ಉತ್ತರಸಮರವಿದು ಜಗವೆಲ್ಲ ತತ್ತರ ಹಣ ತೆತ್ತರು ಸಿಗದಲ್ಲಅಂದು ಗಿಡ ನೆಡದವಆಮ್ಲಜನಕ ಬೇಡುತಿಹಧಗಧಗಿಸುವ ಸೂರ್ಯ ನಗುತಿಹ ಸಮಯವಿದು ಕಳೆದು ಹೋಗಲಿಕಳೆದು ಹೋದ ನಗು ಮರಳಲಿಮರಳಿನಲಿ‌ ಓಯಾಸಿಸ್ ಸಿಗಲಿವೈರಾಣುವಿನ ಸಂಹಾರವಾಗಲಿ *************************************************

Back To Top