ಹಚ್ಚಿಕೊಂಡರೆ

ಹಚ್ಚಿಕೊಂಡರೆ

ಕವಿತೆ ಹಚ್ಚಿಕೊಂಡರೆ ನಿರ್ಮಲಾ ಶೆಟ್ಟರ ಸಾಕಿನ್ನು ಹೊರಡುಎನ್ನುವುದೆ ತಡ ಹೊರಡಲಾಗದು ಸರಿ ಇದ್ದುಬಿಡುಎಂದೊಡನೆ ಉಳಿಯಲಾಗದು ನಡೆಯುವ ಮುನ್ನ ನಿನ್ನೊಳಗಿನನನ್ನ ತೊರೆದು ನಡೆ ಎಂದೆನಲುಅದೆಷ್ಟು ಬಾರಿ ಅಂದುಕೊಂಡಿಲ್ಲತೊರೆಯಲಾಗದು ನನ್ನಒಳಗಿನ ನಿನ್ನ ಹೀಗೆ ಒಂದೊಮ್ಮೆ ಹಚ್ಚಿಕೊಂಡರೆರೆಕ್ಕೆ ಮೂಡಿ ನಿಂತ ಹಕ್ಕಿಮುನ್ನುಡಿ ತೀಡಿದ ಮೊದಲ ಪುಟತಾಯೊಡಲು ಸೀಳಿ ಬಂದ ಮೊಳಕೆ ಸಸಿಕಂಡಿಕೆ ಪೋಣಿಸಿಕೊಂಡ ಮಗ್ಗಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ ನಡೆಯುವದು ಸರಳಾತೀ ಸರಳಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿಚಿಗುರು ಆವರಿಸಿಕೊಂಡಂತೆ ಮಳೆಗೆಅಳಿದುಳಿದವು ತಮ್ಮಿರುವಿನ ಗುರುತಿನಲಿ ಭೂಮಿ ಬಸಿರ ಧಿಕ್ಕರಿಸಿದರೆಅತ್ತಂತೆ ಭಾನು ಮೋಡ ಸುರಿಸಿಮತ್ತೆ […]

ಅನುವಾದ ಸಂಗಾತಿ

ಕನ್ನಡ ಮೂಲ: ಸ್ಮಿತಾ ಅಮೃತರಾಜ್ ಇಂಗ್ಲೀಷಿಗೆ: ಸಮತಾ ಆರ್. ಹಸಿ ಮಣ್ಣ ಧ್ಯಾನ. ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂದುರ್ಬೀನು ಧರಿಸಿ ಹಸಿ ಮಣ್ಣ ಅರಸಿಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರುಫೌಂಡೇಶನ್ ಕ್ರೀಂ ಹಚ್ಚುವಂತೆ. ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ.ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆಎಷ್ಟು ಚಂದದ ಮಿರುಗು ಬಣ್ಣದ ಲೇಪ. ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯುಹೇಳಿಕೊಡಲಾಗುತ್ತಿದೆ ಇಲ್ಲೀಗ ಎಳೆಯರಿಗೆಚಿತ್ರಕ್ಕೆ ಬಣ್ಣ ತುಂಬುವ ಪಾಠಫ್ಯಾನಿನ ಅಡಿಯಲ್ಲಿ ಕುಳ್ಳಿರಿಸಿ. ತಲೆಯೆತ್ತಿದೆ ವಿಶಾಲ ಸಭಾಂಗಣತೇವದ ಗುರುತೇ ಸಿಗದಂತೆ,ಕೆರೆಯ ಸಮಾಧಿಯ ಮೇಲೆ.ನಡೆಸುತ್ತಿದ್ದಾರೆ ಹಿರಿಯರುಶುಷ್ಕ […]

ಬೆವರು ಹಾಗೂ ಹೆಣ್ಣು

ಕವಿತೆ ಬೆವರು ಹಾಗೂ ಹೆಣ್ಣು ನೂತನ ದೋಶೆಟ್ಟಿ ಹೆಂಟೆಯೊಡೆದು ಮಡಿ ಮಾಡಿಬೆವರ ಧಾರೆ ಎರೆದೆರೆದುನೀರುಣಿಸಿದ ಪೈರೀಗಕಾಳುಕಟ್ಟಿ ನಿಂತಿದೆಎದೆಯೆತ್ತರದ ಮಗನಂತೆ ಕೈಯ ಕೆಸರುಮನದ ಕೊಸರುಹಚ್ಚಿಟ್ಟ ಕಣ್ಣ ಹಣತೆಹನಿಸಿದ್ದ ಎದೆಯಾಮೃತ ಹಿಂಡಿ ತೆಗೆದ ಕಾಳ ಹಾಲುಸೇರಿ ಸವಿದ ಪಾಯಸಾನ್ನಸಂಭ್ರಮದ ನಗೆಯ ಮೋಡಿ ಆಳೆತ್ತರ ಬೆಳೆದ ಪೈರುಎದೆಯೆತ್ತರ ಬೆಳೆದ ಮಗಹೆಣೆದ ಕನಸುಗಳ ಕೊಂಡಿಬೆವರಿಗೂ ಹೆಣ್ಣಿಗೂ ತಾಳೆಯ ಮಾಡಿ. ********************************

ಹಣೆಗೆ ಹಣೆ ಹಚ್ಚಿ

ಕವಿತೆ ಹಣೆಗೆ ಹಣೆ ಹಚ್ಚಿ ನಾಗರಾಜ ಹರಪನಹಳ್ಳಿ ಹಣೆಗೆ ಹಣೆ ಹಚ್ಚಿಪಿಸುಮಾತಾನಾಡೋಣಜಗಕೆ ಪ್ರೀತಿಯ ಹಾಡ ಹಾಡೋಣ ಇರುವಷ್ಟು ದಿನಹಗಲುಜೀವ ಕಾರುಣ್ಯದ ಹಾಡ ಹಾಡಿನೆಲದ ಜನಕೆ ಬದುಕ ಹಾಡೋಣ ಸುಖವೋ ದುಃಖವೋ ಸಮನಾಗಿ ಸ್ವೀಕರಿಸಿಹಣೆ ತುಂಬ , ಮನ ತುಂಬ ಸಿಹಿಯ ಹಂಚೋಣ ಬದುಕೆಂಬುದು ಸುಖದ ಹಾಸಿಗೆಯಲ್ಲಕಡು ಕಷ್ಟವನೆ ಹೊದ್ದ ದಾರಿಯೂ ಅಲ್ಲಎಂಬುದು ಸಾರಿ ಹೇಳೋಣ ಹಗಲು ಸೂರ್ಯನ ಪಯಣಇರುಳು ಚಂದ್ರನ ಗಗನಸುಳಿವ ಗಾಳಿಗೆ ದಣಿವಿಲ್ಲದಿರುವಾಗದುಡಿಮೆ ಒಲುವೆ ಜೊತೆ ಜೊತೆಗೆ ಎಂಬ ತತ್ವ ಸಾರೋಣ ಮಗನ ಹಣೆಗೆ ಹಣೆಯಿಟ್ಟುಬದುಕ […]

ಗಾಂಧಿ

ಕವಿತೆ ಗಾಂಧಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಹದಿಹರೆಯದಲ್ಲಿ ಶ್ರವಣನನ್ನೂ ಹರಿಶ್ಚOದ್ರನನ್ನೂಅಡ್ಡೆಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತು ನಡೆಯಲಾರಂಭಿಸಿದ ಈತಒಂದೂವರೆ ಶತಮಾನದಿಂದ ನಡೆಯುತ್ತಲೇ ಇದ್ದಾನೆಹೇ ರಾಮ್… ಹೇ ರಾಮ್… ಎನ್ನುತ್ತ…ಎಷ್ಟೋ ಬಾರಿಅಡ್ಡೆಯಲ್ಲಿ ಕುಳಿತ ಶ್ರವಣನಿಗೆ ವ್ರಣವಾಗಿದ್ದುಂಟುಹರಿಶ್ಚಂದ್ರನಿಗೆ ಭಗಂದರವಾಗಿ ನರಳಿದ್ದುಂಟುಆಗೆಲ್ಲ ತನ್ನ ಹೃದಯದಲ್ಲೇ ಹುಣ್ಣು ಆದವನಂತೆಪಶ್ಚಾತ್ತಾಪದ ಕಂಬನಿಯಲ್ಲಿ ನೆನೆಸಿದ ಮದ್ದು ಪಟ್ಟಿಯನ್ನು ಕಟ್ಟಿಹಗಲು ರಾತ್ರಿ ಶುಶ್ರೂಷೆ ಮಾಡಿಬರಿಗಾಲಲ್ಲಿ ಬಿಸಿಲು ಮಳೆ ಚಳಿ ಗಾಳಿಯೆನ್ನದೆ ನಡೆದಿದ್ದಾನೆಬಸುರಿ ಸೀತೆ ಹೊಟ್ಟೆಯೊಳಗೆ ಅವಳಿಭ್ರೂಣಗಳ ಹೊತ್ತು ತಿರುಗಿದಂತೆ ಹಾದಿಯುದ್ದಕ್ಕೂ ಕಸಾಯಿ ಮಾಂಸದಂಗಡಿಗಳಲ್ಲಿತಲೆ ಕೆಳಗಾಗಿ ನೇತಾಡುತ್ತ ಸಿಪ್ಪೆ ಸುಲಿಸಿಕೊಂಡು ಚೀರಾಡುವ […]

ಅಂಕಣ ಬರಹ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನಮೂಲ ಗುಜರಾತಿ: ಪನ್ನಾಲಾಲ್ ಪಟೇಲ್ ಕನ್ನಡಕ್ಕೆ : ಎಲ್.ವಿ.ಶಾಂತಕುಮಾರಿಪ್ರ : ಸಾಹಿತ್ಯ ಅಕಾಡೆಮಿಪ್ರ.ವರ್ಷ :೨೦೧೫ಬೆಲೆ : ರೂ.೧೯೦ಪುಟಗಳು : ೪೨೪   ಎಲ್.ವಿ.ಶಾಂತಕುಮಾರಿ ನಮ್ಮ ನಡುವಿನ ಬಹಳ ದೊಡ್ಡ ವಿದ್ವಾಂಸರು ಮತ್ತು ಅನುವಾದಕರು. ಅನೇಕ ಕ್ಲಾಸಿಕ್ ಗಳನ್ನು ಅವರು ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ’ ಕಾದಂಬರಿಯು ಜ್ಞಾನಪೀಠ ಪ್ರಶಸ್ತಿ […]

ಗಝಲ್

ಗಝಲ್ ರತ್ನರಾಯ ಮಲ್ಲ ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವುವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನುಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು ************************************

ಸಾಧ್ಯವಾದರೆ ಕಲಿ

ಕವಿತೆ ಸಾಧ್ಯವಾದರೆ ಕಲಿ ಪ್ರತಿಮಾ ಕೋಮಾರ ಈರಾಪುರ ಹೌದು ನಾನು ಬರೀ ಇರುವೆನನ್ನಾಕಾರ,ಗಾತ್ರ,ಬಣ್ಣನೋಡಿನನ್ನೆಳೆಯದಿರು ಮನವೆನನ್ನ ಹೊಸಕದಿರುಸಾಧ್ಯವಾದರೆ ಕಲಿನನ್ನ ಸಂಘ ಜೀವನತುಸುವಾದರೂಹಂಚಿ ತಿನ್ನುವ ಉದಾರತೆ ನೀ ಕೊಡುವ ಪ್ರತೀತುತ್ತಿಗೂ ನಾನು ಋಣಿನಿನ್ನ ಮನೆ ಮೂಲೆಯೇಎನ್ನ ಸಾಮ್ರಾಜ್ಯನೀ ತೋರುವ ಹನಿ ಪ್ರೀತಿಗೆದುಪ್ಪುಟ್ಟು ಸೇರಿಸಿಕೊಡುವೆ ಪ್ರೀತಿಸಾಧ್ಯವಾದರೆ ಕಲಿಉಂಡ ಮನೆಗೆ ದ್ರೋಹ ಬಗೆಯದನನ್ನ ಪ್ರಾಮಾಣಿಕತೆ ನೀ ಬತ್ತಿಯಿಟ್ಟು ತೈಲವೆರೆದುಉರಿಸುವ ಹಣತೆ ನಾನುನಾ ಕತ್ತಲೆಯಲ್ಲುಳಿದರೂನೀಡುವೆ ನಿನಗೆ ಬರೀಬೆಳಕುಸಾಧ್ಯವಾದರೆ ಕಲಿಬೆಳಕ ನೀಡಿದವರಬದುಕ ಬೆಳಕಾಗಿಸಲುಇಲ್ಲ ಆರಿಸುವವಿಶ್ವಾಸ ದ್ರೋಹವಾದರೂಮಾಡದಿರು ಹಣ್ಣು ಹೇಗಿದ್ದರೂಬರೀ ಸವಿಯನ್ನಷ್ಟೇಕುಕ್ಕಿ ಹೀರಿಖುಷಿಪಡುವುದು ಹಕ್ಕಿಸಾಧ್ಯವಾದರೆ ಕಲಿಒಂದು ಕೆಟ್ಟದ್ದನ್ನೇಕೆದಕಿಕೂಗಿ […]

ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ

ಅನುಭವ ಮೊದಲಬಾರಿಪೇಯಿಂಗ್ ಗೆಸ್ಟ್ಆಗಿಹೋದಾಗ      ಬೆಂಗಳೂರಿಗೆ ಹೋಗಿ ಬಂಧುಗಳ ಮನೆಯಲ್ಲಿ  ಬಂಧುಗಳ  ಹಾಗೆ ಒಂದೆರಡು ದಿನ ಇದ್ದು ಬರುವುದು ಬೇರೆ ವಿಚಾರ !ಅದೇ ನಮ್ಮ ಕೆಲಸಕ್ಕೆ ಹೋಗಿ ಇರುವುದು ವೆರಿ ಹಾರಿಬಲ್‌! ಯಾರಿಗೂ ಇರಿಸು ಮುರಿಸು ಬೇಡ ಎಂಬ ಕಾರಣಕ್ಕೆ ಸಾಧನಾಕಾಂಕ್ಷೆಗಳ ಅರ್ಥಾತ್ ಉದ್ಯೋಗಾಕಾಂಕ್ಷೆಗಳು,. ಸ್ಪರ್ಧಾಕಾಂಕ್ಷಿಗಳು ಏನೇ ಕರೆಯಲಿ ಅವರ ಮುಂದಿನ ಆಯ್ಕೆ ಪಿಜಿ.  ಪಿಜಿ ಅಂದರೆ  ‘ಪೇ’ ಮಾಡಿ ‘ಗೆಸ್ಟ್’ ಆಗಿರಿ ಅಂತ ಅಲ್ಲ ಪೇ ಮಾಡಿ  ಪೇನ್ಫುಲ್ ಅಡ್ಜಸ್ಮೆಂಟ್ ಮಾಡಿಕೊಂಡಿರಿ ಎಂದರ್ಥ. ಅತ್ತೆ ಮನೆಯ […]

ಕಡಿವಾಣವೂ ಪ್ರೀತಿಯೇ!!!!!

ಲೇಖನ ಕಡಿವಾಣವೂ ಪ್ರೀತಿಯೇ!!!!! ಮಾಲಾ ಅಕ್ಕಿಶೆಟ್ಟಿ   ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ […]

Back To Top