Category: ಕಾವ್ಯಯಾನ

ಕಾವ್ಯಯಾನ

ಕನಸು ಪ್ರೊ.ಸುಧಾ ಹುಚ್ಚಣ್ಣವರ ಕಾಣುವ ಕನಸುಗಳಿಗೆಲ್ಲಾದಾರಿ ತೋರಿದವರು ಯಾರೋ!ಬಂದೆ ಬಿಡುವವುನಮ್ಮ ಭಾವನೆಗಳ ಅರಸಿ. ಇತಿಮಿತಿಗಳ ಅರಿವಿಲ್ಲ ಸಾಗಿದಷ್ಟು ದೂರಬಹುದೂರ ಚಲಿಸುವವು ಪ್ರಯಾಸವಿಲ್ಲದ….ಪಯಣಿಗನಂತೆ. ಹೊತ್ತು ಸಾಗುವವು ಸುಂದರ ಅತಿ ಸುಂದರ…ಕಲ್ಪನೆಗಳ ಹೂರಣವ ಪರಿಮಿತಿಯೆ ಇರದ ಬಜಾರಿನಲ್ಲಿ . ಬಯಕೆಗಳ ಭಾರವ ಹಗುರಗೊಳಿಸಲೆ೦ದೆ….. ಕಲ್ಪನಾ ಲೋಕದಲ್ಲಿ ವಿಹರಿಸುತಿಹವು ಬಂಧನದಿ ಹೊರಬಂದ ಪಕ್ಷಿಗಳಂತೆ. ಕೆಲವೊಂದು ವಾಸ್ತವಕ್ಕೆ ಹತ್ತಿರವಾಗುತ್ತಾ ಮತ್ತೆ ಕೆಲವು ಭ್ರಮೆಯಲ್ಲಿಯೇ ಉಳಿದು ಭಾವನೆಗಳ ಅರಳಿಸಿ.. ಕೆರಳಿಸಿ.. ಕನಸಿನ ಸಾಮ್ರಾಜ್ಯಕ್ಕೆ ಅಧಿಪತಿಯಾಗಿಹವು. ********

ವಿರಹಾಂತರಂಗ ಸಂತೋಷಕುಮಾರ ಅತ್ತಿವೇರಿ ನಿನ್ನ ಕಾಣದೆ ಮಾತನಾಡದೆಕ್ಷಣವೇ ಯುಗವು ಅನುದಿನಕಡಲೇ ಇರದ ಬರಿಯ ಮರಳುಬೆಂಗಾಡು ಬದುಕು ಪ್ರತಿಕ್ಷಣ ಆಲಿಸುವ ದನಿಗಳಲೆಲ್ಲ ಬರಿನಿನದೆ ಸೊಲ್ಲಿನ ಹೊಳಲಿದೆಎಲ್ಲ ಲೋಹದ ಝಣಕೃತಿಯಲುನಿನದೆ ನೂಪುರ ದನಿಯಿದೆ ‌‌‌‌‌‌‌ಕೊರಳ ಕಾರ್ಮೋಡ ಬಿಗಿದಿದೆಹೊತ್ತು ಕಂಬನಿಯಾಗರನಿನ್ನವಜ್ಞೆಯ ತಂಪು ತಾಗಿಹನಿಗೂಡಿತೆಂಬುದೆ ಬೇಸರ ಸುರಿದ ಮೇಲಿನ್ನೇನಿದೆಖಾಲಿ ಆಗಸ ಈ ಮನನಿನ್ನ ಪ್ರೀತಿಯ ಮಳೆಯಬಿಲ್ಲಿಗೆಕಾದು ಗುನುಗಿದೆ ತಾನನ ***********

ಕಾವ್ಯಯಾನ

ಅವಳು ನೆನಪಾದಾಗ ಎಂ.ಜಿ.ತಿಲೋತ್ತಮೆ ಹೀಗೆ ಕಾಡುವುದಾದರೆ ನಿತ್ಯನಿನ್ನ ಸ್ವರಗಳು ಮೊದಲುನನ್ನ ಎದೆಗೆ ಇಳಿದ ದಿನದ ಕ್ಷಣದಾಚೆಪರಿಪೂರ್ಣವಾಗಿದ್ದುಪರಿತಪಿಸುತ್ತಿದ್ದ ಸಂಗಾತಿ ನಿನ್ನ ಬಿಂಬ ಬಿಗಿದ ತಂತಿಗೆ ಬೆರಳುಗಮನಿಸದೆ ತಗುಲಿ ನುಡಿಸಿದ ರಾಗಕ್ಕೆಯಾವ ಭಾಯಾನದ ಹೋಲಿಕೆ?ಸಾಟಿಯಿಲ್ಲದ ಹಂಬಲವು ಹೆಮ್ಮರವಾಗಿನುಗ್ಗುವ ಪರಿಗೆ ಕೊನೆಯೆಲ್ಲಿ?ಅಧೃಶ್ಯವಾದ ನಿನ್ನ ಚಿತ್ತಾರಹುಡುಕುತ್ತಾ ಹೊರಟ ನಯನದ ಹಟಕ್ಕೆಕಡಿವಾಣವೇ ಬೇಡ ಮರಳೇ ಸೂಸಿ ಹಾಸಿರಲಿವರುಣನು ನಿನ್ನ ಹೆಜ್ಜೆಗೆ ಸುತ್ತುಗಟ್ಟಲಿಪಾದ ಮೂಡಿದಲೆಲ್ಲಾ ನಾ ಓಡಿ ಬರುವೆನಿನ್ನಲಿ ಸೆರೆಯಾಗುವೆ ಎಂದರೆಹುಸಿಯಾಗಿ ನಗುವುದು ಹೂ ಗಿಡ ಬಳ್ಳಿ ಮುಖಾಮುಖಿಯಾದರೆ ನಿನ್ನ ನೆರಳು ನಾನುನನ್ನ ಕಣ್ಣೊಳಗೆ ನಿನ್ನ […]

ಕಾವ್ಯಯಾನ

ಮಳೆಯ ಹಾಡು ಚೈತ್ರಾ ಶಿವಯೋಗಿಮಠ ನೆಲದ ಮೇಲೆ ಪುಟಿದುಚಿಮ್ಮುವ ಸ್ಫಟಿಕದ ಮಣಿಗಳೋ?ಬಾನು ಉಲಿಯುವ ಪ್ರೀತಿಪ್ರೇಮದ ದನಿಗಳೋ! ಹನಿ ಹನಿಯ ಪೋಣಿಸಿಹೆಣೆದ ರತ್ನ ಖಚಿತ ಹಾರವೋ?ಭುವಿಯ ಒಡಲ ಹಸಿವತಣಿಸುವ ಆಹಾರವೋ? ಮೇಘ ಮಾಲೆಯ ಒಡಲತುಂಬಿ ತುಳುಕುವ ಜೀವಕಳೆಯೋ?ಭೂರಮೆಯ ಗರ್ಭಕ್ಕಿಳಿದು ಜೀವಚಿಗುರಿಸೊ ಜೀವನ ಸೆಲೆಯೋ? ಕವಿಯ ಮನದಿ ಭಾವಸ್ಫುರಿಸುವ ದಿವ್ಯ ಸಿಂಚನವೋ?ಜೀವ-ಭಾವಗಳೆರಡು ತಣಿಸಲುಮಳೆಯ ಹಾಡಿನ ರಿಂಗಣವು ******

ಕಾವ್ಯಯಾನ

ಆವರ್ತನ ಎನ್ ಆರ್ ರೂಪಶ್ರೀ ಬದುಕೆಂದರೆ ಕನಸುಗಳ ಸಂತೆಮನಸಿನ ಭಾವನೆಗಳ ಒರತೆಕನಸಿನೂರಿನ ಪಯಣಸುಖದುಃಖಗಳ ಸಮ್ಮಿಶ್ರಣ. ಅತ್ತ ಬಂದರೂ ಬರಲಾಗದೆನಿಂತರೂ ನಿಲ್ಲಲಾಗದೆತವಕ ತಲ್ಲಣಗಳ ಮಹಾಪೂರಅಲೆಗಳ ನಡುವಿನ ಸಾಗರ. ಜೀವ ಜೀವದ ಜೀವಸೆಲೆಯಿದುನಿಲ್ಲದ ನಿರಂತರ ಪಯಣವಿದುಸಾಗುತ್ತಲೇ ಸಾಗುವ ಜಿನುಗುತ್ತಲೇ ಜಿನುಗುವ ತುಂತುರು ಮಳೆ ಹನಿಯಿದು. ಕಡಿದಂತೆ ಚಿಗುರು ಕಾಂತಿಯ ಬೆರಗುಸವಿನಯ ಭಾವದ ಸೆರಗುಮತ್ತೆ ಮತ್ತೆ ಮರುಕಳಿಸುವ ಮೆರಗು ಮೌನದಿ ಜೊತೆಗೆನ್ನ ಹುದುಗು. ಹರಿವ ಸಾಗರದಿ ಅಲೆಗಳ ನಡುವೆಪ್ರೀತಿಯ ಸಂಚಲನಬಾಳಹಾದಿಯಲ್ಲಿ ಸಾಗುತ್ತಲಿರುವಆವತ೯ನ. *****

ಕಾವ್ಯಯಾನ

ಅಪ್ಪ… ಸುಜಾತ ಲಕ್ಷ್ಮೀಪುರ. ಅಪ್ಪ ನೆನಪಿಗೆ ಬರುವುದು ಅಪರೂಪ… ಕಣ್ಣು ಬಿಟ್ಟಾಗಿನಿಂದ‌ ಕಂಡ‌ಅಮ್ಮನ ಮೊಗದಲ್ಲೇ ಅಪ್ಪನ‌ ಸುಳಿವು..ಅಮ್ಮನಲ್ಲಿ ಪ್ರೀತಿ ತುಂಬಿದ ಭಯ ಆತಂಕಆವಸರಿಸಿದರೆ ಗೊತ್ತಾಗುತ್ತಿತ್ತು ಅಪ್ಪ ಬಂದಾ! ಚಿಕ್ಕವಳಿರುವಾಗಲೇಮಧ್ಯ ರಾತ್ರಿ ಎಬ್ಬಿಸಿ ಕುಳ್ಳಿರಿಸುತ್ತಿದ್ದ ಓದು.. ಓದು..ತಾನು ಕಲಿತ ನಾಲ್ಕು ಅಕ್ಷರ ಸಾಲದೆಂದು ನಮ್ಮನ್ನು ಬಡಿದೆಚ್ಚರಿಸುತ್ತಿದ್ದ. ರಾತ್ರಿ ಎಷ್ಟೋ ಹೊತ್ತಿಗೆ ಕುಡಿದು ತೂರಾಡುತ್ತಾ ತಿಂಡಿ ಕಟ್ಟಿಸಿಕೊಂಡುಮನೆಗೆ ಬರುತ್ತಿದ್ದ ಅಪ್ಪ..ಹೊತ್ತು ಗೊತ್ತು ನೋಡದೆಯೇ ಎಬ್ಬಿಸಿ ತಿನ್ನಿಸುತ್ತಿದ್ದ. ಕುಡಿತ ದುಡಿಮೆಯಲ್ಲೇಜೀವ ಸವೆಸಿದ ಅಪ್ಪಮುದ್ದು ಮಾಡಿದ್ದು ನೆನಪೇ ಇಲ್ಲಾ..ಒದ್ದು ಎಬ್ಬಿಸಿ ನೀರಿಗೆಂದು ಕೊಡ […]

ಕಾವ್ಯಯಾನ

ಮಳೆ ಪದ್ಯಗಳು ಜಿ.ಲೋಕೇಶ ಮತ್ತೆ ಮತ್ತೆ ಮಳೆ ಹುಯ್ದುನೆನೆದ ನೆನಪು ತರಿಸಿದೆ ಹಾರಿಹೋದ ಕೊಡೆಯು ಕೂಡಕಣ್ಣು ಸನ್ನೆ ಮಾಡಿದೆ ಮೊದಲ ಭೇಟಿಗೆ ಮರದ ನೆಳಲುಮಳೆಯು ಗುಡುಗು ಜೊತೆಗೆ ಸಿಡಿಲು ಎದೆಯ ತಬ್ಬಿ ಭಯದಿ ಹಿಡಿತ ಬಿಗಿದುತಬ್ಬಲೇನು ಅಡ್ಡಿ ಯಾಕೋ ಬೆರಳು ತಡೆದು ತೋಯ್ದ ದೇಹ ತಣ್ಣನೆ ಬಿಸಿಯ ಫಲವುಇರದು ಜೀವ ಮೆಲ್ಲ ಮುರಿದುನಿಯಮವು ಕಾಲ ಹೊತ್ತ ತಬ್ಬಿದೆದೆಗೆ ಅನ್ಯ ನಾದಹುಯ್ದು ಮರೆತ ಮಳೆಗೆ ಒಂದು ಧನ್ಯವಾದ ಮತ್ತೆ ಬರಲಿ ಕ್ಷಣವು ಅವಕಾಶದಂತೆಮತ್ತೆ ತೊಯ್ದು ತೆಪ್ಪೆಯಾಗುವಂತೆ ****

ಮತ್ತೆ ಮಳೆ ಬಂದಿದೆ.. ಹರಿವ ನೀರಲ್ಲಿ ತನ್ನ ಪುಟ್ಟ ಕೈಗಳಿಂದದೋಣಿಗಳ ಬಿಟ್ಟುಅವು ಚಲಿಸುವ ಚಂದಕ್ಕೆಬೆರಗಾಗಿ ನಕ್ಕು ಹಗುರಾಗಿದೆ ಅರಳಿದ ನೆಲಸಂಪಿಗೆಯ ಕೇಸರಗಳಮುಟ್ಟಿ ನೋಡುತ್ತಹನಿ ಮುತ್ತಿಕೊಂಡ ದಳಗಳಸವರಿ ಇನ್ನಷ್ಟು ನಯವಾಗಿಸುತ್ತದೆ ಬೀಸುವ ತಂಗಾಳಿ ಅಲೆಯುವಎಲೆಗಳ ಜೊತೆ ಗುಟ್ಟುಗಳನಿಟ್ಟುಹೂವಿಂದ ಹೂವಿಗೆ ಅಲೆದುಪರಿಮಳವ ಹೊತ್ತೊಯ್ಯುತ್ತದೆ ಸಂಜೆ ಬಂದ ಮಳೆಗೆ ಖಾಸಾನೆಂಟರ ಕರೆದುತಾಜಾ ಮೀನುಗಳ ಹಿಡಿದುಊಟ ಬಡಿಸುವ ಭೂಮಿರಾತ್ರಿ ಪಟ್ಟಾಂಗ ಹೊಡೆದುಬದುಕಿನ ಖುಷಿಯ ದ್ವಿಗುಣಗೊಳಿಸುತ್ತದೆ ರಾಶಿ ರಾಶಿ ರಾಶಿ ಮೋಡಗಳು ಜಗದ ತುಂಬೆಲ್ಲಾ ಕವಿಯುವಾಗನವಿಲಿನ ಹಜ್ಜೆಗೆ ಗೆಜ್ಜೆದನಿಮೂಡಿ ಮುಸ್ಸಂಜೆಯ ಆಲಾಪಕ್ಕೆಶೃತಿ ಕೊಡುತ್ತದೆ ಕತ್ತಲಾಗಲಿ,ಜೀರುಂಡೆಗಳ […]

ಕಾವ್ಯಯಾನ

ಮೂಲ ಬಿಂದು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅದ್ಯಾವ ರೂಪದಲ್ಲಿ ಬಂದು ಸೇರಿತ್ತೋ?ಸಣ್ಣ ಸುಳಿವೂ ಇರಲಿಲ್ಲ ನೋಡುಹೆಡೆಯೆತ್ತಿ ಬುಸುಗುಟ್ಟದ ಹೊರತುಇರುವು ತಿಳಿಯುವುದಾದರೂ ಹೇಗೆ?ಮತ್ತೆ ಹಾಗೆ ಗೊತ್ತಾಗುವುದಕ್ಕೂಅದ್ಯಾವತ್ತೂ ಪ್ರಕಟವಾಗಲೂ ಇಲ್ಲ ಬಿಡು. ಅದೂ ಅಲ್ಲದೇ,ಇನ್ಯಾವತ್ತೋ ಹಠತ್ತನೇ ಎದುರಿಗೆ ಬಂದುಹಲ್ಲುಕಿಸಿದು, ನೋಡು ನಾನಿದ್ದೇನೆ; ಅದೂ ನಿನ್ನಲ್ಲೇ!ಅಂತ ಹೆದರಿಸುತ್ತದೆ ಅನ್ನುವ ಕಲ್ಪನೆಯಾದರೂಆವತ್ತು ಯಾರಿಗಿತ್ತು ಹೇಳು? ಯಾವುದೂ ಸುದ್ದಿಯಾಗಲಿಲ್ಲ,ಹಗಲು ರಾತ್ರಿ ಕತ್ತಲು ಬೆಳಕುಮೊಗ್ಗರಳಿದ್ದು ಹೂವಾದದ್ದುಉತ್ತು ಬಿತ್ತ ಮಣ್ಣಲ್ಲಿ ತೆನೆ ತೂಗಿದ್ದುಹಕ್ಕಿ ಹಾರಿದ್ದು ಕಪ್ಪೆ ಕೂಗಿದ್ದುಯಾವುದು ಕೂಡಾ,“ಅವನ ಆಣತಿ ಇಲ್ಲದೇ ಹುಲ್ಲುಕಡ್ಡಿಯೂಅಲ್ಲಾಡುವುದಿಲ್ಲ ಇಲ್ಲಿ…”ಎಲ್ಲದಕ್ಕೂ ಲೆಕ್ಕಾಚಾರವಿದೆ! ಆದರೆ,ಹಗುರವಾಗಿ […]

ನನ್ನೊಳಗೂ ಮಳೆ ವರುಣ ನೀಡಿದ ಸಿಹಿ ಚುಂಬನದ ಮಳೆ,ನನ್ನೆದೆಯ ಅಂಗಳದಲಿ ನಾಚಿವೆತನುಮನದ ಹೂಗಳುನನ್ನೊಳಗೂ ಮುಂಗಾರು, ಮೌನದ ಪರದೆಯೊಳಗೆಅವಿತ ಮಾತುಗಳುಎದೆಯ ನೆಲದಲಿ ಒಣಗಿದ ನೆನಪುಗಳಿಗೆ,ಕತ್ತಲೆಯ ಬೇಲಿ ದಾಟಿ ಹರಿದು ಬಂದಳುನನ್ನೊಳಗೂ ಮುಂಗಾರು ಮೊಗೆ ಮೊಗೆದು ಸುರಿದಳು ವಿರಹದ ಕಣ್ಣೀರು,ಬಚ್ಚಿಟ್ಟುಕೊಂಡ ಮಾತು ಬಿಚ್ಚಿಡುವ ಸಂತಸನನ್ನೊಳಗೂ ಮುಂಗಾರು ಋತುಗಳ ಕನವರಿಕೆಯಲಿಮಿಲನದ ಲವಲವಿಕೆಮತ್ತೆ ಮೌನವೇ ನಾಚಿತುಬಾಚಿ ತಬ್ಬಿತು,ವಸಂತನಕುಂಚದಲಿ ಮತ್ತೆ ಬಣ್ಣ ಬಣ್ಣದ ಚಿತ್ತಾರಗಳುನನ್ನೊಳಗೂ ಮುಂಗಾರು ಕನಸುಗಳು ಗೂಡು ಕಟ್ಟಿವೆಮನದ ಕೂಜನದಲಿ ಇನಿದನಿ ಕೇಳಿಸುತಿದೆಎಳೆಬಿಸಿಲ ರಂಗು ಕಾಡಿದೆಕಾಮನಬಿಲ್ಲಿನ ವರ್ಣಗಳಲಿ ನನ್ನೊಳಗೂಮುಂಗಾರು ಸುರಿದಿದೆ ನನ್ನೊಳಗೂ ಕವಿತೆ […]

Back To Top