Category: ಕಾವ್ಯಯಾನ

ಕಾವ್ಯಯಾನ

ಗಜಲ್

ಗಜಲ್ ಅಂತರಂಗದ ಪ್ರೀತಿಯ ದೀಪ ಬೆಳಗಬೇಕಿದೆ ತೂಗುದೀಪವೇವಿರಹವು ಮಂಜಿನ ಹೂವಾಗಿ ಕರಗಬೇಕಿದೆ ತೂಗುದೀಪವೇ ಒಲುಮೆಯ ಮಧುರ ನಕ್ಷತ್ರಗಳ ಎಣಿಕೆಯ ಎಷ್ಟೋ ರಾತ್ರಿಗಳು ಕಳೆದಿವೆಹೃದಯಗಳ ಬಡಿತ ಕೇಳುತ ಕರಗಳಲ್ಲಿ ಬೆರೆಯಬೇಕಿದೆ ತೂಗುದೀಪವೇ ಬೇವಫಾ ನಾವಿಬ್ಬರೂ ಅಲ್ಲ ಜನುಮಾಂತರ ಬಂಧನ ಬದಲಾಗುವುದೆಸ್ಪಂದಿಸಿದ ಭಾವ ರಾಗ ರಾಗಿಣಿಯರು ಬಾಳಬೇಕಿದೆ ತೂಗುದೀಪವೇ ಚಾತಕ ಪಕ್ಷಿಯಂತೆ ಕಾಯುತಿರುವೆ ನಿನ್ನೊಲುಮೆಯ ಗುಟುಕಿಗಾಗಿಹೃದಯಗಳಲ್ಲಿ ಮೂಡಿದ ಪ್ರೀತಿಯು ನೀಗಬೇಕಾಗಿದೆ ತೂಗುದೀಪವೇ ಆಮಂತ್ರಣ ನೀಡದೆ ಬರುವ ಸಾವು ಬರುವ ಮುನ್ನವೇ ಮಾಜಾದುಃಖ ದುಮ್ಮಾನ ಬಿಟ್ಟು ಒಂದಾಗಬೇಕಿದೆ ತೂಗುದೀಪವೇ ಮಾಜಾನ್ ಮಸ್ಕಿ

ಕಾವ್ಯ ಸಂಗಾತಿ ನೀನಿರಲು ಅನಿತಾ ನಸುಕಿನಲಿ ಹಸಿರೆಲೆಯ ಮೇಲೆಬಿದ್ದ ಇಬ್ಬನಿ ಬೇಡಿದೆ ಭಗವಂತನಜಗವ ಬೆಳಗುವ ದಿನಕರನ ಕಿರಣಸ್ಪರ್ಶಿಸಲು ಮೊಗ್ಗಾಗಿ ಅರಳಿದ ಸುಂದರ ಸುಮಹಾತೊರೆಯುತಿದೆ, ಏಳು ಬೆಟ್ಟಗಳಮೇಲೇರಿ ನಿಂತ ಆ ದೇವರಕಾಲ ಬಳಿ ಸೇರಲು! ಗುಡಿಯ ಘಂಟೆ ಧ್ಯಾನಿಸುತಿದೆಸುಶ್ರಾವ್ಯವಾಗಿ ತನ್ನ ಸದ್ದುಜಗನ್ನಿಯಮಕನ ತಲುಪಲು! ಗರ್ಭಗುಡಿಯ ಪ್ರಣತಿಕಾಯುತಿದೆ ಕರುಣಮಯ ಪರಮಾತ್ಮನಮುಖಾರವಿಂದವ ಉಜ್ವಲಿಸಲು! ಜಗದ ಪ್ರತಿ ಚಲನೆಯೂ ನೀನಾಗಿರಲುಧ್ಯಾನಿಸದೆ ಇರಲಾರದುಈ ಮನವು, ಅನುಕ್ಷಣವೂನನ್ನೊಳಗೆ ನೀನಿರಲು!

ಬಿರುಸು ಮಾತಿನಿಂದ ಸ್ನೇಹ ಬೆಸೆಯುವುದೇ ಗಾಲಿಬ್
ಮದ ಏರಿದ ಅಧಿಕಾರದಿ ಮಣಿಸುತ್ತಿದೆ ನೋಡಿ ಸುಮ್ಮನಿರಲಿ ಹೇಗೆ

ಕಾವ್ಯ ಸಂಗಾತಿ ಭಾವನೆ…. ನಮಗೂ ಇದೆ.. ಸುಮಾ, ಪಡುಬೆಳ್ಳೆ ಹರಿದ ಬಟ್ಟೆ ಬಡಕಲು ದೇಹ ತೋರಿತು,ಮಣ್ಣಿನ ಕಾಯ; ಹಸಿ ನೆತ್ತರ ಗಾಯಅಸ್ಪ್ರಶ್ಯತೆ ತಂದಿತುಇದ ನೋಡಿಯು ನೋಡದ ಹೆತ್ತವರಮಾತು ಮೂಕವಿಸ್ಮಿತವಾಯಿತುಸುತ್ತಲೂ ಮೌನ, ವ್ಯರ್ಥ ಮಾತಿನ್ನೇಕೆ? ಸಹಾಯ ಮಾಡಬಯಸುವ ಕೆಲವೊಂದು ಜೀವ,ಅದ ಹಿಂಜರಿಸಿತು ಅವರ ನಾಚಿಕೆಯ ಸ್ವಭಾವಶ್ರೀಮಂತಿಕೆ ಇದ್ದರೇನು ಬಂತು,ನಮ್ಮನ್ನು ಕಾಣುವ, ತಲೆಗೆಟ್ಟ ವರ್ತನೆ ಅವರದ್ದಂತೂ ಎಲ್ಲೋ ಪುಸ್ತಕದ ಭಂಡಾರ ಹೊರುವರುನಮ್ಮದೆಂತ ಪರಿಸ್ಥಿತಿ, ಪರಿಸ್ಥಿತಿ….?ಹೆತ್ತವರ ಅನಕ್ಷರತೆ ಮುಳ್ಳಾಯಿತೆ ನಮಗೆ?ನಮ್ಮೆಲ್ಲಾ ಕನಸುಗಳು ಸುಳ್ಳಾಯಿತೆ ಕೊನೆಗೆ? ಯಾರದ್ದೋ ಹರಕಲು ಬಟ್ಟೆ, ನಮ್ಮ ಹೊಸಬಟ್ಟೆಅಂದೇ […]

Back To Top