ಬರಹ

ಕಾವ್ಯ ಸಂಗಾತಿ

ಬರಹ

ದೇವರೇ,
ಜಾತೀಯತೆ ಕೋಮುವಾದದ
ಬೆಂಕಿ ಕೆನ್ನಾಲಿಗೆ ಚಾಚಿದೆ
ಯುಗಾಂತರದಿಂದಲೂ ಮೊದಲು
ಕಿಚ್ಚು ಹಚ್ಚಿದವರು ಯಾರು?

ಹೊಳಪಿನ ಕತ್ತಿ ನೆಕ್ಕುತ್ತಿದೆ ರಕುತ
ಜೀವಂತ ಕೈಗಳಿಂದ
ನ್ಯಾಯಕ್ಕೆ ಎತ್ತಬೇಕಾಗಿದೆ ಧ್ವನಿಗಳು
ಹಸಿವು ನೀಗಿಸಲು ಹೆಣಗುತ್ತಿವೆ

ಪಾಪಿಗೆ ಅಧಿಕಾರ ಸಿಕ್ಕಿತು
ದುಷ್ಟನಿಗೆ ಹಣ ದಕ್ಕಿತು
ಕಾಮುಕರ ತೃಷೆಗೆ ಹೆಣ್ಣು
ಬಲಿಯಾಯಿತು

ಗರ್ಭದಲ್ಲಿಯ ಆರ್ತ ವೇಧನೆ
ಅತಿವೃಷ್ಟಿ ಅನಾವೃಷ್ಟಿಯ ರೋಧನೆ
ಮಾನವೀಯತೆ ಕಳೆಯುತ್ತಿದೆ
ಒಳ್ಳೆಯತನ ಕಂಗಾಲಾಗಿದೆ

ತಪ್ಪಿಲ್ಲದೆಯೇ ಶಿಕ್ಷೆ ನೀಡುತ್ತಿದೆ
ತತ್ತರಿಸಿ ಹೋಗಿದೆ ಬದುಕು
ನೀ ಬರೆದ ಹಣೆಬರಹವೇ….
ದೇವರು ಇದು?


ಮಾಜಾನ್ ಮಸ್ಕಿ

Leave a Reply

Back To Top