Category: ಕಾವ್ಯಯಾನ

ಕಾವ್ಯಯಾನ

ಕಾಂಕ್ರೀಟ್ ಬೋಧಿ

ಕವಿತೆ ಕಾಂಕ್ರೀಟ್ ಬೋಧಿ ಪೂಜಾ ನಾರಾಯಣ ನಾಯಕ ಯಾವ ಹಕ್ಕಿ ಎಸೆಯಿತೋ, ನನ್ನ ಬೀಜವನಿಲ್ಲಿಅದರ ಪರಿಣಾಮವೇ ಬೆಳೆದೆನಾಯಿಲ್ಲಿಸಿಮೆಂಟ್ ಗಾರೆಯ ಬಿರುಕಿನಾ ಕಿಂಡಿಅದುವೇ ನನ್ನ ಬದುಕಿನಾ ಮೊದಲನೆಯ ಬಂಡಿಗೆದ್ದುಬರುತ್ತಿದ್ದೆ ಆ ಬಿರುಕ ಇನ್ನೂ ಸರಿಸಿಆದರೆ ನೀ ಬರದೇ ಇರಲಾರೆ, ಕೀಳಲು ನನ್ನರಸಿ ಕರವೊಡ್ಡಿ ಬೇಡುವೇ, ಕೀಳಬೇಡವೋ ಮನುಜಕೀಳದಿದ್ದರೆ ನಾ ನೀಡುವೆ, ಔಷಧೀಯ ಕಣಜನಿನಗಷ್ಟೇ ಎಂದು ತಿಳಿಬೇಡವೋ ಅಣ್ಣಾಖಗಗಳಿಗೂ ನೀಡುವೆನೋ ತಿನ್ನಲು ಹಣ್ಣಾನಿಮ್ಮಿಬ್ಬರಿಗೆ ಎಂದು ತಿಳಿಯದಿರು ಮತ್ತಣ್ಣಮೃಗಗಳಿಗೂ ನೀಡುವೆನೋ ನನ್ನ ಮೇವಣ್ಣ ನೀನಾಗಿಹೆ ಇಂದು ಕ್ರೋಧದಾ ಬಂಧನಕೇಳಿಸುತ್ತಿಲ್ಲವೇನೋ ನಿನಗೆ, ನನ್ನ […]

ಹೇಗೆ ಉಸಿರಾಗಲಿ

ಕವಿತೆ ಹೇಗೆ ಉಸಿರಾಗಲಿ ಲಕ್ಷ್ಮೀ ಪಾಟೀಲ್ ಹಾಡಿಗೆ ನಿಲುಕದ ಕವಿತೆಗಳಿವುಭಾವ ರಾಗದ ಕೊಂಡಿ ಎಲ್ಲಿ ಜೋಡಿಸಲಿಸತ್ತಂತೆ ಸುಪ್ತಬಿದ್ದಭಾವಗಳಿವುತಾಳ ಮೇಳ ಲಯಗಳಹೇಗೆ ಮೀಟಲಿ ಗಂಡಿನ ಅಟ್ಟಹಾಸ ಹಿಸುಕುವಕವಿತೆಗಳಿವುಹೆಣ್ಣಿನ ಕೋಮಲ ಎಲ್ಲಿ ಚಿತ್ರಿಸಲಿಕಾವ್ಯದ ಮಾಧುರ್ಯ ನಲುಗಿಸುವಕವಿತೆಗಳಿವುಮುದದ ನಂದನವನ ಎಲ್ಲಿ ತೋರಿಸಲಿ ಅಂತೆ ಕಂತೆಗಳಲಿ ನಿತ್ಯ ರೋದಿಸುವಳೀಕವಿತೆಭಾವ ಬದಲಿಸಿಭಾವವೀಣೆಎಲ್ಲಿ ನುಡಿಸಲಿಆಕ್ಸಿಜನ್ನಳಿಕೆ ಕಟ್ಟಿಕೊಂಡು ತೀವ್ರನಿಗಾಘಟಕದಲ್ಲಿ ನನ್ನ ಕವಿತೆಗಳುನಾನೇ ಹಾಡಾದಹಾಡಿಗೆ ಹೇಗೆ ಉಸಿರಾಗಲಿ ***************************************

ವರ್ತಮಾನ

ಕವಿತೆ ವರ್ತಮಾನ ರೇಶ್ಮಾಗುಳೇದಗುಡ್ಡಾಕರ್ ಮನದ ಉದ್ವೇಗ ಕ್ಕೆ ಬೇಕುಒಲವು ,ಛಲವುಇವುಗಳಸೆಳವಿಗೆ ಖುಷಿ ಇರುವದುಅಶ್ರುತರ್ಪಣಧರೆಗುರುಳುವದು ಯಾವ ಸಾಗರಕೂ ಹೊಲಿಕೆಯಾಗದಬದುಕಿನ ಅಲೆಗಳ ಓಟ …..ಮೆಲ್ಲನೆ ದಡಕ್ಕೆ ಮುತ್ತಿಡುವವುಕೆಲವೊಮ್ಮೆ ಕೊಚ್ವಿಕೊಂಡ್ಯೊಯುವವುದಡವನ್ನೇ …. ಏನು ಆಟವಿದು ?ಕಾಣದ ಕೈ ಸೂತ್ರವದುತಲ್ಲಣ ತಂಪಾಗಿ ,ಸುಧೆ ವಿಷವಾಗಿ ಕೆರಳಿಮುರಿದು ಬೀಳುವುದುಕನಸಿನ ಮನೆ ವರವೊ,ಬರವೂ ತಿಳಿಯದಕಾಲವಿದುಮತ್ತೆ ಸಿಲುಕುವದುಉದ್ವೇಗದಚಕ್ರ ವೇಗ ಪಡೆದು ಓಡುವುದುಸ್ವಾರ್ಥ ಸೆಳವಿಗೆ ಸೆರೆಯಾಗಿ ದಿನಗಳು ಉರುಳಿದಂತೆಮಣ್ಣಲ್ಲಿ ಮಣ್ಣಾಗಿನಿರ್ಮಿಸಿದ ಮೂಕಅವಶೇಷಗಳು ಹುಡುಕುವವುಸ್ನೇಹ ,ಪ್ರೀತಿಗಾಗಿ ಹಂಬಲಿಸುತ ***************************************

ಗಝಲ್

ಗಝಲ್ ಸಹದೇವ ಯರಗೊಪ್ಪ ಪ್ರೇಮದ ಹೂ ಬಾಣ ಹೃದಯದಲಿ ರುಜು ಹಾಕುವಾಗ ನಾನೇ ಇಲ್ಲದಾದೆಹದವರಿತ ಎದೆಹೊಲದಿ ಬಿತ್ತಿದ ಪ್ರೀತಿ ಫಲ ನೀಡುವಾಗ ನಾನೇ ಇಲ್ಲದಾದೆ ಅಂಗಗಳ ಸಂಗ ಬಯಸಿದ ಮನಸು ನಿದಿರೆ ಬತ್ತಿಸಿ ಕಂಗಳ ವಿಶ್ರಾಂತಿ ಕದ್ದಿದೆತುಂಬಿದ ರೂಪದ ಬಟ್ಟಲು ಕಂಡು ಗುಲಾಬಿ ರಂಗೇರಿದಾಗ ನಾನೇ ಇಲ್ಲದಾದೆ ಫಕೀರನಂತೆ ತಂಬೂರಿ ಮೀಟುತ ಅವಳ ಹಿಮ್ಮಡಿಯ ಹುಡಿಬೆಳಕಲಿ ಅಲೆದೆಬದುಕಿನ ತಿರುವಿನಲ್ಲಿ ಕಣ್ಣ ಪ್ರಣತಿ ಹೊತ್ತಿಸಿ ಕಾಯುವಾಗ ನಾನೇ ಇಲ್ಲದಾದೆ ಮೋಹ ತೃಷೆಯಲಿ ತೇಲಾಡುವ ಅಮಲಿಗೆ ಬಿಸಿಯುಸಿರ ಗುಟುಕಿಸಿದೆಒಲವ ಮಳೆಗೆ […]

ಅವಳ ಕಣ್ಣುಗಳು

ಕವಿತೆ ಅವಳ ಕಣ್ಣುಗಳು ಡಾ. ಪ್ರೇಮಲತ ಬಿ. ಅವಳ ಕಣ್ಣುಗಳು ಅವನನ್ನುನಿರುಕಿಸುವುದೇ ಹೀಗೆನಿಧಾನವಾಗಿ ಪರೀಕ್ಷಿಸುವಂತೆಯಾರೆಂದು ಯಾವತ್ತೂ ನೋಡಿರದ ಹಾಗೆಆಳವಾಗಿ ಕತ್ತರಿಸುವ ಬಗೆ ಅವಳು ಅತ್ತಿತ್ತ ಹರಿಸುವ ನೋಟದಲ್ಲಿಇಡೀ ಜೀವಿತದಿ ಕಂಡಿರದ್ದಕ್ಕಿಂತಹೆಚ್ಚು ನೋಡಿಬಿಡುತ್ತಾನೆ ಅವನುದೀಪಗಣ್ಣುಗಳು ಆಳವಾಗಿ ಯೋಚಿಸುತ್ತನಿಷ್ಯಬ್ದವಾಗಿ ಪ್ರಕಟಿಸುತ್ತವೆತಟ್ಟನೆ ಒಂದು ಕಥೆಯನ್ನು ಬರೆಯುತ್ತಹೊಸಲೋಕದ ಕವಿತೆಯೊಂದನ್ನು ಹಾಡುತ್ತಇವನು ನಿಂತ ನೆಲ ಕಂಪಿಸುವ ಹಾಗೆ ಅವಳ ಕಣ್ಣೋಟದ ಕೊಲೆಗಡುಕನಿಗೆಇವನು ಬಲಿಯಾದ್ದು ಇದೇ ಮೊದಲಲ್ಲಕೊನೆಯೂ ಇಲ್ಲಅವಳ ನೋಟವೇ ಹಾಗೆಅವನ ಹೊರಮೈ ಭಾವಗಳ ಬಟ್ಟೆಕಳಚಿ ನಗ್ನವಾಗಿಸುವ ಹಾಗೆಒಳಮೈಯ ಬೇಗುದಿಗಳಿಗೆ ತಿದಿಯನ್ನುಒತ್ತಿ ಜ್ಯೋತಿ ಬೆಳಗಿಸುವ ಹಾಗೆ […]

ಅಗ್ನಿಕುಂಡ

ಕವಿತೆ ಅಗ್ನಿಕುಂಡ ಲಕ್ಷ್ಮೀ ಪಾಟೀಲ್ ಅವರುನಡೆದಸ್ವರ್ಗದದಾರಿಯಲ್ಲಿಅವಳೂಹೆಜ್ಜೆಹಾಕಿಹೊರಟಿದ್ದಾಳೆಅವರುಸ್ವರ್ಗದಿಂದದಾರಿಮಾಡಿಕೊಂಡೇಹುಟ್ಟಿದವರುನಡಿಗೆಸಲೀಸುಅವಳಿಗೊಏರಿಗೆಜೋಲಿತಪ್ಪುತ್ತಿದೆಬದುಕನ್ನೆಲ್ಲಕಣ್ಣಿಟ್ಟುನಡೆದವಳಿಗೀಗಮಂಜುಕವಿದಂತೆಕಣ್ಣಿಗೆಕತ್ತಲೆಆವರಿಸಿದಂತೆನಡಿಗೆನಿಂತುಪಾದಗಳುಕುಸಿದಿವೆಬದುಕಿನಲ್ಲೇನರಕದನೋವುಉಂಡವಳುಸ್ವರ್ಗದಏರಿಗೆಬೆಚ್ಚಿಬಿದ್ದಿದ್ದಾಳೆಇಲ್ಲೇತೆರೆಯಬಾರದೇಒಂದುಕುಂಡಎಂಬಂತೆಕಣ್ಣುಗಳುನಿಸ್ತೇಜಗೊಂಡಿವೆಇವರೆಲ್ಲಸ್ವರ್ಗದಛ್ಹುಮಂತ್ರಗಾಳಿಯಿಂದಬಂದವರುಅದಕ್ಕೇಗಾಳಿಯೊಂದಿಗೆಹೊರಟಿದ್ದಾರೆಹಿಂದೆನೋಡದೆಹುಟ್ಟಿನಮೂಲಸೇರಲುಬೀದಿಗರುಗಳಂತೆಇದ್ದಸ್ವರ್ಗಕ್ಕೋಅಥವಾಇವರೇಕಟ್ಟಿಕೊಳ್ಳುವಇನ್ನೊಂದುಸ್ವರ್ಗಕ್ಕೋ ! ನನಗೂಇಲ್ಲಿನನ್ನಅಗ್ನಿಕುಂಡದಮೋಹಸ್ವರ್ಗನರಕಪಾಪಪುಣ್ಯಗಳಸ್ವತ್ತನ್ನೆಲ್ಲಯಜ್ಞಾಹುತಿಗೊಳಿಸಲುಅಗ್ನಿಕುಂಡಕಾಯುತ್ತಯಾರದೋದೇಹಬೆನ್ನಟ್ಟದಂತೆಕೆಂಡದೊಂದಿಗೆಕೆಂಡವಾಗಲುನನ್ನಾತ್ಮಿಣಿಯೂಸಿದ್ಧಳಾಗಿನಿಂತಿದ್ದಾಳೆಇವರಸ್ವರ್ಗದಲ್ಲಿಮತ್ತೆಭೂಮಿಗೆಬೀಳುವಭಯಮೂಲಪುರುಷಸ್ವರ್ಗದಲ್ಲಿಯೂಸುಖದಿಂದಿರಲಿಲ್ಲಐವರುಗಂಡಂದಿರಆದರದಲ್ಲಿಅಲ್ಲಿಯೂಸೋತರೆಛೆ ! ಪ್ರಮಾದಅಕ್ಷಮ್ಯಅಪರಾಧಶಂತನುಗಂಗೆಯಂತೆವಂಶಕ್ಕೆಮುನ್ನುಡಿಬರೆದುಮತ್ತೊಂದುಮಹಾಭಾರತಕ್ಕೆಕಿಡಿಹೊತ್ತಿಸಬೇಕುಶಾಪಗ್ರಸ್ಥಳಾಗಿಅವತರಿಸಿಗೆದ್ದಗಂಡಸರನೆರಳಾಗಿಮೀಸೆಹೊತ್ತಮುಖಗಳೆಲ್ಲಸೀರೆಯಲ್ಲಿಕವುಚಿಮುಗುಚಿಹೂವಿನಪಕಳೆಮೇಲೆಹಸಿಕಾಮದಗಾಯಬರೆಮೂಡಿಸಿವನವಾಸಯುದ್ಧಕರುಳುಗಳಿಗೆಕತ್ತರಿ.ಭೂಮಿಗೆಬಿದ್ದಸಂಕಟಕ್ಕೆಸಹಿಸುವುದು ಇವರೇಏರಲಿಸುರಲೋಕಸೋಪಾನಇಲ್ಲೊಂದುಭೂದೇವಿಯಅಗ್ನಿಕುಂಡಎದ್ದುಬಿಡಲಿಎಂದಿಗೂಬೇಡಅಪ್ಪನಸೇಡಿನಅಗ್ನಿಕುಂಡ ಓ ! ಮುಂದೆಕಾಯಿದಿರಿಸಿದಸ್ಥಳಕ್ಕೆಗಂಡಂದಿರಭರದನಡೆಸ್ವರ್ಗದಕೌತುಕಹೊತ್ತುಭೂಮೋಹದಾಚೆಭೂಭಾರದಾಚೆಗುರುತ್ವಾಕರ್ಷಣೆಕಳಚುತ್ತಿದೆಕೂಗುಕೆಳದುಆಸೆಹಿಂಗದುಎಲ್ಲೋಸ್ವರ್ಗಸ್ಥಆಕೇಶವಯುಗಪ್ರವೇಶಕ್ಕೆಯುಗಯುಗದತಯಾರಿದೀರ್ಘವಿರಾಮಯುಗಭಾರಕ್ಕೆಭೂದೇವಿ ! ನಿನ್ನಲ್ಲೇನನ್ನಸ್ವರ್ಗತೆರೆದುಬಿಡುಮತ್ತೊಂದುಅಗ್ನಿಕುಂಡಬೆತ್ತಲಾಗಿಬಿದ್ದುಒಪ್ಪಗೊಳ್ಳಲುಮನಭಾರದಸಂಕಟಗಳುಕಿಡಿಕಿಡಿಗಳಸೋಂಕಲುಹೇಗೆಮರೆತೀತುಸೀರೆಅಯ್ಯೋಸೀರೆಯಭಾರತಡೆಯಲಾಗುತ್ತಿಲ್ಲ **********************************************

ಗಝಲ್

ಗಝಲ್ ರತ್ನರಾಯ ಮಲ್ಲ ಅಂದವನ್ನು ಮುಚ್ಚಿಡಲು ಬಟ್ಟೆಗಳನ್ನು ತರುತಿರುವೆಚಂದವನ್ನು ಹೆಚ್ಚಿಸಲು ಸೀರೆಯನ್ನು ಉಡಿಸುತಿರುವೆ ಅವಯವಗಳ ಇಳಿಜಾರಿನಲ್ಲಿ ಬೆರಳುಗಳು ಸೋಲುತಿವೆಸೌಂದರ್ಯದ ಕೆನೆಯಲ್ಲಿ ಪ್ರೀತಿಯಿಂದ ಅಲೆಯುತಿರುವೆ ಹೇಮವನ್ನು ನಾಚುವ ಕಿವಿಯೋಲೆಗಳನ್ನು ತಂದಿರುವೆಒರಟು ಅಧರಗಳಿಂದ ಕರ್ಣಗಳನ್ನು ಸಿಂಗರಿಸುತಿರುವೆ ಹೃದಯದ ಉದ್ಯಾನದಲ್ಲಿ ಹೂವೊಂದು ಅರಳಿ ನಿಂತಿದೆಹಿಂಬದಿಯಿಂದ ಆಲಂಗಿಸಿ ಲತೆಯನ್ನು ಮುಡಿಸುತಿರುವೆ ತೆಳುವಾದ ಮೈಯ ಕಂಡು ಅರಿವೆಗೂ ತುಸು ಮತ್ಸರ ಮಲ್ಲಿಶೂನ್ಯ ಅಂಗದ ಸೊಬಗಿನಲಿ ನಾನು ಕಳೆದು ಹೋಗುತಿರುವೆ ************************

ನಿಲ್ಲದಿರು ದೂರ

ಕವಿತೆ ನಿಲ್ಲದಿರು ದೂರ ಜಯಶ್ರೀ.ಭ.ಭಂಡಾರಿ ಉಸಿರ ಉಸಿರಲಿ ನಿನ್ನದೆ ಹೆಸರುನೆನಪ ಮೆರವಣಿಗೆಯದು ಹಸಿರುಅರಿತು ಬೆರೆತ ನವನೀತದ ಮೊಸರುಕನಸಕಂಗಳಲಿ ತುಂಬಿದೆ ಉಸಿರು ದೂರದಲಿ ನೀನಿದ್ದರೂ ಇಲ್ಲ ಅಂತರ..ಹುಚ್ಚು ಪ್ರೀತಿಯದು ತೀರದ ದಾಹಕಡಲ ಅಲೆಗಳಾಗಿವೆ ಆಸೆಗಳುಬಂದು ಬಿಡು ತಾಳಲಾರೆ ಈ ವಿರಹ ನೋವ ನಿನ್ನ ಸನಿಹ ಬೇಕೆನಗೆ ನಿರಂತರಬಯಕೆಗಳ ರಂಗೋಲಿಗೆ ರಂಗಾಗುಬಾ ಗೆಳೆಯನೆ ಸಹಿಸಲಾರೆ ಅಂತರಜೊನ್ನಮಳೆ ಜೇನಹೊಳೆ ನೀನಾಗು ಕತ್ತಲೆಯ ಸರಿಸು ಹರಸು ಬಾಬೆಳಕಾಗಿ ಹೃದಯ ಮೀಟು ಬಾಪ್ರೀತಿಯ ಮಹಲಿನ ಅರಸನೆ ಬಾಅಂತರ ಸಾಕು ನಿರಂತರವಾಗಿ ಬಾ ಮುದ್ದುಮಾತಿನ ಮೋಹಗಾರನೆಗೆಜ್ಜೆಸದ್ದಿಗೆ […]

ಸಂತೆಯಲಿ

ಕವಿತೆ ಸಂತೆಯಲಿ ವಿ.ಎಸ್.ಶಾನಬಾಗ್ ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರು ಹಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ ಅಡಗಿಸಿ ಮನೆಯಲಿ ಸ್ವಪಾತ್ರಗಂಡನ ಚಮತ್ಕಾರ ನೂಡಲ್‌ ನಂತಹಪರಿಹಾರಗರತಿಯರನ್ನು ತರಗತಿಗೆ ಕಳುಹಿಸಿಪಿಸುಮಾತಿನಲ್ಲಿ ದ್ವಿಪಾತ್ರಹೌಹಾರಿಸಿದ ಚಿತ್ರ ಪುರುಷರು ಸಂತೆಯಲ್ಲಿಹೆಂಡತಿ,ಬಡ್ತಿ,ಲೋನುಅನುಕಂಪಕ್ಕೆ ಕಾಯುವಶೋಷಿತರು ಪೆಗ್ ನಲ್ಲಿಮೀಟೂ ಕಥಾಸರಣಿ ಯುವಕರುಸಂಜೆ ಸಂತೆಯಲಿ ಸಂದವರು, ಪ್ರೀತಿಯಲಿ ದುಶ್ಯಂತರುಮಾತು ಬೇಡದ ಬರೀ ಸೂಚನೆವಿವರಣೆ, ಹಕ್ಕಿಯಂತೆ ಹಾರಿ ಮಾತು ಮತ್ತೇನೋ ಆದ ಬವಣೆಕೇಳದ ಕಿವಿಗೆ ಹೇಳದ ಬಾಯಿ ನೋಡದ ಕಣ್ಣುಮಾರುವವರ ಎದೆಯಿಂದ […]

ಕಾಪಿಟ್ಟು ಕಾಯುತ್ತಾಳೆ

ಕವಿತೆ ಕಾಪಿಟ್ಟು ಕಾಯುತ್ತಾಳೆ ಶ್ರೀವಲ್ಲಿ ಶೇಷಾದ್ರಿ ಋತು ಋತುವಿಗೊಂದೊಂದು ಹೊಸತುಹೆಚ್ಚುಗಾರಿಕೆಯ ಬಿಚ್ಚಿಡುತ್ತಾಳೆ,ಅಚ್ಚರಿ ಹುಟ್ಟಿಸಿಬೆಚ್ಚಿಸುವ ಈಹುಚ್ಚಿಪೆಚ್ಚಾಗಿಸುತ್ತಾಳೆ ಹುಚ್ಚುಗಳ ಹೆಚ್ಚಿಸಿಮನದಿಚ್ಚೆಗಳ ಅಚ್ಚು ಹಾಕಿಸಿಟ್ಟುರಚ್ಚೆ ಹಿಡಿದು ಅಚ್ಚು ಮೆಚ್ಚಾಗಿಕೊಚ್ಚಿ ಹೋಗದ ಹಾಗೆ ಬಚ್ಚಿಟ್ಟುಕಾಪಿಟ್ಟು ಕಾಯುತ್ತಾಳೆ ಬೆಚ್ಚಗೆ ಕಳಚಿಟ್ಟ ಪೊರೆ ಮತ್ತೆ ಹಸಿರು ಕೊನರಿಹಸಿ ಕರಗ ಮಣ ಭಾರ ಹೊತ್ತುಚೀರಿ ಹಾರಿ ಮೇಲೆರಗೊ ಹನಿಯರಭಸ ಭರಿಸಿ ಝಾಡಿಸಿ ತೂರಿಎಲ್ಲೆ ಇರದೆಡೆ ಹರಿದು ಬರಿಯರಾಡಿಯನ್ನಪ್ಪಿ ಒಪ್ಪಿ ಮುತ್ತಿಕ್ಕಿ ದಿನ ರಾತ್ರಿಯಾಟಕ್ಕೆ ಅದರಿ ಬೆದರಿಗರಿ ಕೆದರಿ ಮತ್ತೊಮ್ಮೆ ಹೂವಾಗುತ್ತಾಳೆ ಬಟ್ಟ ಬಯಲಿನಲಿ ದೃಷ್ಟಿ ತಾಗುವ ಹಾಗೆಪರಿಪರಿಯ […]

Back To Top