ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನನಸಾಗದ ಕನಸೆಂದು ತಿಳಿದೂ  
ಮನದ ಮೂಲೆಯಲೊಂದು ಆಸೆ
ನಾನೂ ಮನಸ ಬಳಿ ಮಾತನಾಡುವೆ  
ಆಡದೇ ಯಾವುದೇ ಭಾಷೆ

ಇಂದೋ ನಾಳೆಯೊ ತಿಳಿಯದ ಅಂತ್ಯ
ಮಾಡಿದ್ದೆಲ್ಲವೂ ವ್ಯರ್ಥ
ಕಣ್ಣೆದುರಲ್ಲೇ ಜೀವನ ಮರಣ
ನಮ್ಮಲ್ಲೇಕಿದೆ ಸ್ವಾರ್ಥ ?

ತಿಳಿಯದೆ ಏನೂ ವರ್ತಿಸುವುದೇಕೆ
ತಿಳಿದವರಂತೆ ನಾವು
ತಿಳಿದರೆ ತಿಳಿಸಿ ತೆಗೆವುದು  ಹೇಗೆ
ಮಾನವ ಕುಲದ ನೋವು?

ಬೆಳೆಸಿದಿರೇಕೆ ಗಿಡವನು ಅಂದು
ಆಸೆಯ ಬೀಜವ ನೆಟ್ಟು?
ಈ ದಿನ ನಾನು ತಡೆಯಲಿ ಹೇಗೆ
ಜನಗಳ ಕೊಡಲಿಯ ಪೆಟ್ಟು ?

ಗುರುತಿಸದಿದ್ದರೂ ನೋವಿರಲಿಲ್ಲ
ನಾನು ಮಾಡಿದ ಸಾಧನೆ
ತಿಳಿದು ಕೊಳ್ಳಲು ಪ್ರಯತ್ನಿಸಬಾರದೆ
ನನ್ನ ಮನಸಿನ ಭಾವನೆ


About The Author

Leave a Reply

You cannot copy content of this page

Scroll to Top