ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬರಿದಾದ ನನ್ನಯ ಬಾಳಿಗೆ ಬಂಗಾರವೇ ನೀನಾದೆ ಸಖಿಕಂಗಾಲಾದ ಭಾವ ಬಳ್ಳಿಗೆ ಇಂಗಾಲವೇ ನೀನಾದೆ ಸಖಿ ನನ್ನೆಲ್ಲ ಕಷ್ಟ ಸುಖಗಳಲ್ಲೂ ಅರ್ಧ ಪಾಲು ನಿನ್ನದೇ ಬಿಡುಉಸಿರಿಗೆ ಹೆಸರಾಗಿರುವ ಆಮ್ಲಜಕನವೇ ನೀನಾದೆ ಸಖಿ ನಾ ನೀ ಯಾರೊಬ್ಬರೂ ಇರದಿದ್ದರೆ ಜೀವನವೇ ನಿಸ್ಸಾರಸಸಾರವಲ್ಲದ ಸಂಸಾರಕೆ ಸಾರಜನಕವೇ ನೀನಾದೆ ಸಖಿ ಜತುನದಿ ಕಾದಿಟ್ಟ ಪೀರುತಿ ರತುನವಿದೆ ಎದೆಯಾಳದಲಿಆಶ್ರು ಗ್ರಂಥಿ ಪ್ರಚೋದಿಸುವ ಗಂಧಕವೇ ನೀನಾದೆ ಸಖಿ ನೀನಿರದೇ ಈ ಮಹಾಂತನ ಬಾಳು ಸಂಪೂರ್ಣವಾಗದುಎದೆ ತಳಮಳಕೆ ತುಕ್ಕು ತಂದ ಕಬ್ಬಿಣವೇ ನೀನಾದೆ ಸಖಿಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಇತರೆ, ಪ್ರಬಂಧ

“ಕರವಸ್ತ್ರದ ಕರಾಮತ್ತು” ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ

ಪ್ರಬಂಧ ಸಂಗಾತಿ ಶೈಲಜಾ ಪ್ರಸಾದ್‌ “ಕರವಸ್ತ್ರದ ಕರಾಮತ್ತು” ಇದೇನಿದು, ಶೀರ್ಷಿಕೆ ಹೀಗಿದೆ ಅಂತ ಯೋಚಿಸ್ತಿದ್ದೀರ ?! ಲೇಖನ ಓದಿದ ಮೇಲೆ ನಿಮಗೇ ಗೊತ್ತಾಗುತ್ತೆ  ಈ ಮಾತೆಷ್ಟು ಸತ್ಯ ಅಂತ. ಅದರಲ್ಲೂ ಇಂದಿನ   ವಿಷಮ ಪರಿಸ್ಥಿತಿಯಲ್ಲಿ (`ಕರೋನ’ ವ್ಯಾಧಿ/ಕಾಯಿಲೆ ಎಂದು ಉದ್ದೇಶ ಪೂರ್ವಕವಾಗಿಯೇ ಹೇಳಿಲ್ಲ. ಎಲ್ಲೆಲ್ಲೂ ಅದರದ್ದೇ ಆವಾಜ್ ಕೇಳಿ…ಕೇಳಿ…. ಎಲ್ಲರಿಗೂ ಖಂಡಿತಾ ಬೇಸರವಾಗಿರುತ್ತೆ ಅಂತ ಗೊತ್ತು)ಪುಟ್ಟ/ದೊಡ್ಡ ಕರವಸ್ತ್ರವೊಂದು ನಮ್ಮ ದಿನನಿತ್ಯದ ಕೆಲಸ-ಕರ‍್ಯಗಳಲ್ಲಿ ಎಂತಹ ಪ್ರಮುಖ ಪಾತ್ರ ವಹಿಸುತ್ತದೆ ಅಂತ ಗಮನಿಸಿದರೆ ನಿಜಕ್ಕೂ ಆಶ್ಚರ್ಯವೆನಿಸುವುದರಲ್ಲಿ ಅನುಮಾನವೇ ಇಲ್ಲ. `ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಅಂತಾರೆ ಬಲ್ಲವರು. ಹಾಗೇ ಇದು ಚಿಕ್ಕ ವಸ್ತುವಾದರೂ ಇದರ ಕಾರ‍್ಯವ್ಯಾಪ್ತಿ ಬಹಳ ವಿಶಾಲವಾದದ್ದು.ಆದರೆ ಇಂದಿನ ಪೀಳಿಗೆಯ ಮಕ್ಕಳಿಗೆ ಈ ಕರವಸ್ತ್ರದ ಬಗ್ಗೆ , ಅದರ ವ್ಯಾಪಕವಾದ ಬಳಕೆಯ ಬಗ್ಗೆ ತಿಳಿದಿಲ್ಲವೆಂದು ನನ್ನ ಭಾವನೆ. ಜತೆಗೆ ಅವರಿಗೆ ಈ ಬಗ್ಗೆ ಆಸಕ್ತಿಯೂ ಇಲ್ಲವೆನಿಸುತ್ತದೆ. ಅವರಿಗೇನಿದ್ದರೂ `ಯೂಸ್ ಅಂಡ್ ಥ್ರೋ’ ಸಂಸ್ಕೃತಿಯ ಕಾಗದದ ಟಿಷ್ಯೂಗಳಷ್ಟೇ ಪರಿಚಿತ. ಆದರೆ ಇದರಿಂದ ಸುಮ್ಮನೆ ಕಸ, ತ್ಯಾಜ್ಯಗಳು ಹೆಚ್ಚುತ್ತವೆಯೇ ವಿನಃ  ಬೇರೇನೂ ಉಪಯೋಗವಿಲ್ಲ. ಒಂದೆಡೆ ಕಾಗದದ ಬಳಕೆಯನ್ನು ಕಡಿಮೆ ಮಾಡುವಂತೆ ಹೇಳುತ್ತ, ಇನ್ನೊಂದಡೆ ಟಿಷ್ಯುಗಳು, ಬಳಸಿ ಬಿಸಾಡುವ ತಟ್ಟೆ-ಲೋಟಗಳು….. ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಜೊತೆ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಮತ್ತು ಮಕ್ಕಳ/ ವೃದ್ಧರ ಡಯಾರ‍್ಗಳೂ  ಸೇರುತ್ತವೆ. ಇವೆಲ್ಲದ್ದಕ್ಕೂ ಪರ‍್ಯಾಯವಾಗಿ ಬಟ್ಟೆ/ ಬೇರೆ ಏನಾದರೊಂದನ್ನು ಬಳಸಬೇಕಾಗಿರುವುದು  ಇಂದಿನ ತುರ್ತುಅಗತ್ಯವಾಗಿದೆ.ಈಗ ನಮ್ಮ ಕಾಲದ (ಅಂದರೆ ೬೦-೭೦ ರ ದಶಕಗಳ ) ಕರವಸ್ತ್ರವೆಂಬ ಬಹೂಪಯೋಗಿ ವಸ್ತುವಿನ ಬಗ್ಗೆ, ಅದರ ಬಹುರೂಪಿ ಕಾರ‍್ಯಗಳನ್ನು  ಅವಲೋಕಿಸಿದರೆ ಅಚ್ಚರಿಯಾಗುತ್ತದೆ.ಈ ಸಂದರ್ಭದಲ್ಲಿ ಕವಿವರ‍್ಯರ ಪದ್ಯವೊಂದು ಅಯಾಚಿತವಾಗಿ ನೆನಪಿಗೆ ಬರುತ್ತದೆ. ಸಾಧಾರಣವಾಗಿ ನಮ್ಮ ಕಾಲದವರಿಗೆಲ್ಲಾ ಇದು ಗೊತ್ತೇ ಇರುತ್ತದೆ.”ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ವಿಭೂತಿಯಾದೆ…..ನೀನಾರಿಗಾದೆಯೋ ಎಲೆ ಮಾನವ…..”ಅನ್ನೋ ರೀತಿ ಈ ಕರವಸ್ತ್ರವು   ಎಲ್ಲಾ  ಕಾಲಕ್ಕೂ, ಸಮಯಕ್ಕೂ ಒದಗಿಬರುತ್ತದೆ.ಮೊದಲಿಗೆ ನಾವು(ಸ್ತ್ರೀ/ಪುರುಷರು) ಆಚೆ ಹೋಗುವಾಗ ಮರೆಯದೆ ಶುಭ್ರವಾಗಿ ಒಗೆದ ಕರವಸ್ತ್ರವನ್ನು ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ.ನಮಗೆ ಆಗ ಇದರಿಂದ  ಆಗುವ ಅನುಕೂಲತೆಗಳ ಅರಿವಾಗುತ್ತದೆ.ಹೊರಗಡೆ ಹೋದಾಗ ಮುಖ್ಯವಾಗಿ ಮಾಲ್ ಗಳಲ್ಲಿನ ವಾಷ್ರೂಂಗಳನ್ನು  ಬಳಸಿದ ನಂತರ ನಮ್ಮದೇ  ಶುಭ್ರವಾದ  ಕರ‍್ಚೀಫ್ ಅನ್ನು  ಬಳಸಿ ಸಾಮಾಜಿಕ  ಪ್ರಜ್ಞೆಯನ್ನು ಮೆರೆಯಬಹುದಾಗಿದೆ. ಇದರಿಂದ ಕೆಲವರಾದರೂ ಉತ್ತೇಜಿತರಾಗಿ  ತಂತಮ್ಮ ಕರವಸ್ತ್ರಗಳನ್ನು ಉಪಯೋಗಿಸಿದರೆ ಎಷ್ಟೋ ಟಿಷ್ಯೂಗಳ ಉಳಿತಾಯವಾಗಿ ಪರಿಸರಕ್ಕೆ ಉತ್ತಮ ಕೊಡುಗೆ ನಮ್ಮಿಂದ ಆದಂತಾಗುತ್ತದೆ. ವಿಧಿಯಿಲ್ಲದಾಗ ಟಿಷ್ಯೂಗಳನ್ನು ಬಳಸಲು ಅಡ್ಡಿಯೇನಿಲ್ಲವಲ್ಲ.ಇನ್ನು ಮಾರ್ಕ್ಕೆಟ್ಟಿಗೆ ಹೋದಾಗ ಚೀಲವನ್ನು ತೆಗೆದುಕೊಂಡು ಹೋಗಲು ಅಕಸ್ಮಾತ್ ಮರೆತುಹೋಗಿದ್ದರೆ, ಇವು ಆಪತ್ಭಾಂದವನಂತೆ ನೆರವಾಗುತ್ತದೆ. ಸಣ್ಣ ಪುಟ್ಟ ಸಾಮಾನುಗಳನ್ನು/ ತರಕಾರಿಯನ್ನು ಇದರಲ್ಲಿ  ಕಟ್ಟಿಕೊಳ್ಳಬಹುದು.ಬೇಸಿಗೆಯ ಕಾಲದಲ್ಲಿ ಈ ಪುಟ್ಟ  ಕರವಸ್ತ್ರವು ಬೆವರೊರೆಸಿಕೊಳ್ಳಲು  ಅಗತ್ಯವಾಗಿ ಬೇಕೇ ಬೇಕಲ್ಲವೇ? ಈಗಿನ ಪರಿಸ್ಥಿತಿಯಲ್ಲಿ ಕೆಮ್ಮು/ಸೀನು ಬಂದಾಗ ಅವಶ್ಯಕವಾಗಿ ಇರಲೇಬೇಕಾದ ವಸ್ತುವಿದು ಎಂದರೆ ತಪ್ಪಿಲ್ಲ.  ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಎಷ್ಟೋ ಜನರು ಮಾಸ್ಕ್ ಗಳ ಬದಲಿಗೆ ಇದನ್ನೇ ಬಳಸುವುದನ್ನು ಪ್ರತಿನಿತ್ಯ ನಾವು ನೋಡುತ್ತಿದ್ದೇವೆ. ಸ್ವಚ್ಛವಾಗಿ ಒಗೆದ ಕರವಸ್ತ್ರಗಳು ನಿಜಕ್ಕೂ ನಮಗೆ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ.`ಅವರವರ ಭಾವಕ್ಕೆ ಅವರವರ ಭಕುತಿಗೆ’ ಅನ್ನೋ ಮಾತಿನಂತೆ ಯಾರಿಗೆ ಹೇಗೆ ಬಳಸಲು ಸ್ಫೂರ್ತಿ ಸಿಗುತ್ತದೆಯೋ ಅದರಂತೆ ಬಳಸಲು ಅಡ್ಡಿಯೇನಿಲ್ಲವಲ್ಲ.! ಮಳೆಗಾಲದಲ್ಲಿ  ಕೊಡೆ ತೆಗೆದುಕೊಂಡು ಹೋಗಲು ಮರೆತರೆ ಆ ತಕ್ಷಣಕ್ಕೆ ನೆರವಿಗೆ ಬರುವುದೇ  ಕರವಸ್ತ್ರಅಲ್ಲವೇ?!ಹೀಗೆ ಬಹುರೂಪಿಯಾದ , ಎಲ್ಲಾ ಕಾಲಕ್ಕೂ/ಸಂದರ್ಭಕ್ಕೂ  ಸಲ್ಲುವ ಮಹಾನ್ ಕರವಸ್ತ್ರಕ್ಕೆ ನಾವು ಕೊಡಬೇಕಾದಷ್ಟು ಮಾನ್ಯತೆಯನ್ನು ನೀಡುತ್ತಿಲ್ಲವೆಂದು ನನ್ನ ಅನಿಸಿಕೆ. ನೀವೇನಂತೀರಾ ?! ಶೈಲಜಾ ಪ್ರಸಾದ್

“ಕರವಸ್ತ್ರದ ಕರಾಮತ್ತು” ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ Read Post »

ಕಾವ್ಯಯಾನ, ಗಝಲ್

ಜಯಶ್ರೀ ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ ಭ.ಭಂಡಾರಿ ಗಜಲ್ ಹುಣ್ಣಿಮೆಯ ಚಂದಿರ ಬಾನಲಿ ಬಂದಿಹನು ಗೆಳೆಯ.ತಣ್ಣನೆಯ ಗಾಳಿಯಲಿ ಅಲೆಗಳ ತಂದಿಹನು ಗೆಳೆಯ. ಸಮುದ್ರದ ಮಧ್ಯದಲಿ ಮೋಹಕ ಬೆಳಕು ಹರಡಿದೆಯಲ್ಲವೇಕೌಮುದಿಯ ಸೊಬಗ‌‌ ಬೀರುತ ನಿಂದಿಹನು ಗೆಳೆಯ ಎತ್ತರದ ಸಾಲಿನಲಿ ಮಿನುಗುವ ದೀಪಗಳು ಕಾಣುತಿವೆ ಉತ್ತರದ ದಿಕ್ಕಿನಲಿ ಮಾರುತ ಕುಂದಿಹನು ಗೆಳೆಯ. ಒಟ್ಟಾಗಿ ಹೆಜ್ಜೆಗಳ ಸೇರಿಸುತ ಮೆಟ್ಟಿಲುಗಳ ಏರೋಣ ಪಟ್ಟಾಗಿ ಗೆಜ್ಜೆಯ ನಾದದಲಿ ಮಿಂದಿಹನು ಗೆಳೆಯ ಶಶಿಯ ಸನಿಹ ಜಯಳಿಗೆ ಲಜ್ಜೆಯ ತೋರಿದೆ ನಿಶೆಯ ಒಲವೇ ಸಂಭ್ರಮ ಎಂದಿಹನು ಗೆಳೆಯ  ಜಯಶ್ರೀ ಭ.ಭಂಡಾರಿ.

ಜಯಶ್ರೀ ಭ.ಭಂಡಾರಿ ಅವರ ಗಜಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸೇನಾನಿ ದೇಶ ಭಕ್ತ ಲಿಂಗೈಕ್ಯ ಶ್ರೀ ರತ್ನಪ್ಪಣ್ಣ ಕುಂಬಾರ ರತ್ನಪ್ಪ ಭರಮಪ್ಪ ಕುಂಬಾರ (ದೇಶಭಕ್ತ ರತ್ನಪ್ಪಣ್ಣ ಕುಂಬಾರ) ಅವರು ಮಹಾರಾಷ್ಟ್ರದ ಇಚಲಕರಂಜಿಯ ಪ್ರಸಿದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕಾರಣಿಯಾಗಿದ್ದರು. ದಕ್ಷಿಣ ಭಾರತದ ಹಲವು ಸಂಸ್ಥಾನಗಳ ವಿಲೀನಕ್ಕಾಗಿ ಶ್ರಮಿಸಿದ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದೂ ಕರೆಯಲಾಗುತ್ತದೆ.  ಡಾ. ರತ್ನಪ್ಪ ಕುಂಬಾರ ಅವರ ಜೀವನದ   ಪ್ರಮುಖ ವಿವರಗಳು .ಜನನ: 15 ಸೆಪ್ಟೆಂಬರ್ 1909, ನಿಮ್ಶಿರ್ಗಾಂವ್ (ಮಹಾರಾಷ್ಟ್ರ).ನಿಧನ: 23 ಡಿಸೆಂಬರ್ 1998 (ವಯಸ್ಸು 89). ಬಿರುದು: ದೇಶಭಕ್ತ. ರಾಜಕೀಯ ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್.   ಸಾಧನೆಗಳು ಮತ್ತು ಕೊಡುಗೆಗಳು ಸಂವಿಧಾನಕ್ಕೆ ಸಹಿ: ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ಭಾರತದ ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕಿದ ಮಹನೀಯರಲ್ಲಿ ಇವರೂ ಒಬ್ಬರು. ಸ್ವಾತಂತ್ರ್ಯ ಹೋರಾಟ: 1942 ರ ಆಗಸ್ಟ್ 9 ರಂದು ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಹಕಾರಿ ರಂಗ:  ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಹಕಾರಿ ರಂಗದ ನಕ್ಷತ್ರವಾಗಿ ಬೆಳಗಿದ ಇವರು, ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಹಕಾರಿ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದರು. ಪದ್ಮಶ್ರೀ ಪ್ರಶಸ್ತಿ: ಇವರ ಸಮಾಜ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 1985 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ರಾಜಕೀಯ ಸೇವೆ: ಇವರು ಸಂಸತ್ ಸದಸ್ಯರಾಗಿ (MP) ಹಾಗೂ ಮಹಾರಾಷ್ಟ್ರ ಸರ್ಕಾರದ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.  ಸ್ವಾತಂತ್ರ್ಯಹೋರಾಟ ಡಾ. ರತ್ನಪ್ಪಣ್ಣ ಕುಂಬಾರ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಅತ್ಯಂತ ಸಕ್ರಿಯ ಮತ್ತು ಪ್ರಭಾವಶಾಲಿ ಪಾತ್ರ ವಹಿಸಿದ್ದರು. ಅವರ ಪ್ರಮುಖ ಸ್ವಾತಂತ್ರ್ಯ ಹೋರಾಟದ ವಿವರಗಳು : 1. ಬ್ರಿಟಿಷ್ ಮತ್ತು ರಾಜಪ್ರಭುತ್ವದ ವಿರುದ್ಧ ಹೋರಾಟ 2. ಕೊಲ್ಹಾಪುರ ಪ್ರಜಾ ಪರಿಷತ್: ರತ್ನಪ್ಪಣ್ಣನವರು ಕೊಲ್ಹಾಪುರ ಸಂಸ್ಥಾನದಲ್ಲಿ ರಾಜಪ್ರಭುತ್ವ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ‘ಕೊಲ್ಹಾಪುರ ರಾಜ್ಯ ಪ್ರಜಾ ಪರಿಷತ್’ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 3. ಪ್ರಜಾಪ್ರಭುತ್ವಕ್ಕಾಗಿ ಆಗ್ರಹ: ಸಂಸ್ಥಾನದ ಜನರಿಗೆ ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮಾದರಿಯ ಆಡಳಿತ ಸಿಗಬೇಕೆಂದು ಅವರು ನಿರಂತರ ಚಳವಳಿ ನಡೆಸಿದರು. 4. . ಕ್ವಿಟ್ ಇಂಡಿಯಾ ಚಳವಳಿ (1942)ಭೂಗತ ಹೋರಾಟ: 1942ರಲ್ಲಿ ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಘೋಷಿಸಿದಾಗ, ರತ್ನಪ್ಪಣ್ಣನವರು ಅದರಲ್ಲಿ ಸಕ್ರಿಯವಾಗಿ ಧುಮುಕಿದರು. ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಲು ಆದೇಶ ಹೊರಡಿಸಿದಾಗ, ಇವರು ಸುಮಾರು 6 ವರ್ಷಗಳ ಕಾಲ ಭೂಗತರಾಗಿ (Underground) ಹೋರಾಟ ಮುಂದುವರಿಸಿದರು. 5. ಸಶಸ್ತ್ರ ಮತ್ತು ಸೈದ್ಧಾಂತಿಕ ಪ್ರತಿರೋಧ: ಭೂಗತರಾಗಿದ್ದ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ಕಣ್ಣು ತಪ್ಪಿಸಿ ಯುವಕರನ್ನು ಸಂಘಟಿಸುವುದು, ಕ್ರಾಂತಿಕಾರಿ ಪತ್ರಿಕೆಗಳನ್ನು ಹಂಚುವುದು ಮತ್ತು ಸರ್ಕಾರದ ಖಜಾನೆಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟಿಸುವುದರಲ್ಲಿ ಇವರು ಮುಂಚೂಣಿಯಲ್ಲಿದ್ದರು. ಇವರನ್ನು ಹಿಡಿದುಕೊಟ್ಟವರಿಗೆ ಬ್ರಿಟಿಷ್ ಸರ್ಕಾರ ದೊಡ್ಡ ಮೊತ್ತದ ಬಹುಮಾನವನ್ನೂ ಘೋಷಿಸಿತ್ತು. 6. ಸಂಸ್ಥಾನಗಳ ವಿಲೀನ ಮತ್ತು “ದಕ್ಷಿಣ ಭಾರತದ ಪಟೇಲ್” ಎಂದು ಜನರಿಂದ ಅಭಿಮಾನದಿಂದ ಕರೆಯಿಸಿ ಕೊಂಡರು. 7. ಭಾರತ ಒಕ್ಕೂಟಕ್ಕೆ ಸೇರ್ಪಡೆ:  ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ (1947) ಕೊಲ್ಹಾಪುರ, ಸಾಂಗ್ಲಿ ಸೇರಿದಂತೆ ದಕ್ಷಿಣದ ಹಲವು ದೇಶಿ ಸಂಸ್ಥಾನಗಳು ಭಾರತ ಒಕ್ಕೂಟದೊಂದಿಗೆ ವಿಲೀನಗೊಳ್ಳಲು ನಿರಾಕರಿಸುತ್ತಿದ್ದವು. 8 ಕಠಿಣ ನಿರ್ಧಾರ: ರತ್ನಪ್ಪಣ್ಣನವರು ಈ ಸಂಸ್ಥಾನಗಳ ರಾಜರ ವಿರುದ್ಧ ಪ್ರಬಲ ಜನಪ್ರತಿಭಟನೆಗಳನ್ನು ಸಂಘಟಿಸಿ, ಅವರು ಭಾರತದೊಂದಿಗೆ ವಿಲೀನವಾಗುವಂತೆ ಒತ್ತಡ ಹೇರಿದರು. ಈ ಅದ್ಭುತ ಚಾಕಚಕ್ಯತೆ ಮತ್ತು ಸಾಹಸಕ್ಕಾಗಿ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿನ ಕೊಡುಗೆಗಳು ಸಂವಿಧಾನ ರಚನೆಯಲ್ಲಿನ ಪಾತ್ರದ ವಿವರಗಳು ಭಾರತದ ಸಂವಿಧಾನ ರಚನೆಯಲ್ಲಿ ಡಾ. ರತ್ನಪ್ಪಣ್ಣ ಕುಂಬಾರ ಅವರು ಅತ್ಯಂತ ಗೌರವಾನ್ವಿತ ಮತ್ತು ಐತಿಹಾಸಿಕ ಪಾತ್ರವನ್ನು ವಹಿಸಿದ್ದರು.  ದೇಶಿ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸುವಲ್ಲಿ ಅವರು ತೋರಿದ ನಾಯಕತ್ವವನ್ನು ಗುರುತಿಸಿ, ಅವರನ್ನು ಸಂವಿಧಾನ ರಚನಾ ಸಭೆಯ (Constituent Assembly) ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.  ಸಂವಿಧಾನ ರಚನೆಯಲ್ಲಿ ಅವರ ಪ್ರಮುಖ ಕೊಡುಗೆಗಳು ಮತ್ತು ಪಾತ್ರದ ವಿವರಗಳು  1. ಸಂವಿಧಾನದ ಮೂಲ ಪ್ರತಿಯ ಸಹಿ ಒಕ್ಕೂಟದ ಸದಸ್ಯರುಭಾರತದ ಸಂವಿಧಾನದ ರಚನೆ ಪೂರ್ಣಗೊಂಡ ನಂತರ, 24 ಜನವರಿ 1950 ರಂದು ಸಂವಿಧಾನದ ಅಂತಿಮ ಕರಡು (Final Draft) ಮತ್ತು ಮೂಲ ಪ್ರತಿಯ ಮೇಲೆ ಸಹಿ ಹಾಕಿದ ಭಾರತದ ಪ್ರಮುಖ ನಾಯಕರಲ್ಲಿ ರತ್ನಪ್ಪಣ್ಣ ಕುಂಬಾರ ಅವರೂ ಒಬ್ಬರು. ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ದೇಶದ ಅತ್ಯುನ್ನತ ಕಾನೂನು ಗ್ರಂಥಕ್ಕೆ ಸಹಿ ಹಾಕಿದ ಹೆಮ್ಮೆ ಇವರದ್ದಾಗಿದೆ.  ದೇಶಿ ಸಂಸ್ಥಾನಗಳ ಜನರ ಧ್ವನಿಯಾಗಿ ಪ್ರಾತಿನಿಧ್ಯಸಂಸ್ಥಾನಗಳ ಜನರ ಹಕ್ಕುಗಳು:  ಸಂವಿಧಾನ ರಚನಾ ಸಭೆಯಲ್ಲಿ ಬ್ರಿಟಿಷ್ ಭಾರತದ ಪ್ರಾಂತ್ಯಗಳ ಪ್ರತಿನಿಧಿಗಳ ಜೊತೆಗೆ ದೇಶಿ ಸಂಸ್ಥಾನಗಳ (Princely States) ಪ್ರತಿನಿಧಿಗಳೂ ಇದ್ದರು.  ರತ್ನಪ್ಪಣ್ಣನವರು ಕೊಲ್ಹಾಪುರ ಮತ್ತು ದಕ್ಷಿಣದ ಇತರ ಸಂಸ್ಥಾನಗಳ ಲಕ್ಷಾಂತರ ಸಾಮಾನ್ಯ ಜನರ ಧ್ವನಿಯಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಜಾಪ್ರಭುತ್ವದ ವಿಕೇಂದ್ರೀಕರಣ:  ರಾಜಪ್ರಭುತ್ವದ ಆಡಳಿತದಲ್ಲಿದ್ದ ಜನರಿಗೆ ಸಮಾನ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಸೌಲಭ್ಯಗಳು ಸಿಗಬೇಕೆಂದು ಅವರು ಪ್ರತಿಪಾದಿಸಿದರು. .ಕರಡು ಪರಿಶೀಲನೆ ಮತ್ತು ಚರ್ಚೆಗಳಲ್ಲಿ ಭಾಗವಹಿಸುವಿಕೆ ಸಂವಿಧಾನ ರಚನಾ ಸಭೆಯ ವಿವಿಧ ಸಮಿತಿಗಳ ಚರ್ಚೆಗಳಲ್ಲಿ ಭಾಗವಹಿಸಿದ ಇವರು, ಭಾರತದಂತಹ ವೈವಿಧ್ಯಮಯ ದೇಶಕ್ಕೆ ಬಲಿಷ್ಠ ಒಕ್ಕೂಟ ವ್ಯವಸ್ಥೆ (Federal Structure) ಎಷ್ಟು ಮುಖ್ಯ ಎಂಬುದರ ಕುರಿತು ತಮ್ಮ ನುಡಿಗಟ್ಟುಗಳನ್ನು ಹಂಚಿಕೊಂಡಿದ್ದರು. ಹಿಂದುಳಿದ ವರ್ಗಗಳು, ರೈತರು ಮತ್ತು ಶ್ರಮಿಕ ವರ್ಗದವರ ಆರ್ಥಿಕ ಸಬಲೀಕರಣಕ್ಕೆ ಸಂವಿಧಾನದಲ್ಲಿ ಸೂಕ್ತ ಅವಕಾಶಗಳಿರಬೇಕು ಎಂದು ಅವರು ಆಗ್ರಹಿಸಿದ್ದರು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದು ಕೇವಲ ಸಂವಿಧಾನ ಬರೆಯುವುದಷ್ಟೇ ಅಲ್ಲದೆ, ಸ್ವಾತಂತ್ರ್ಯದ ನಂತರ ದೇಶದ ಮೊದಲ ಲೋಕಸಭೆಯ (1952-1957) ಸಂಸದರಾಗಿ (MP) ಆಯ್ಕೆಯಾಗಿ, ಸಂವಿಧಾನದ ಆಶಯಗಳನ್ನು ಕಾನೂನು ರೂಪದಲ್ಲಿ ಜಾರಿಗೆ ತರಲು ಶ್ರಮಿಸಿದರು.   ರತ್ನಪ್ಪಣ್ಣ ಕುಂಬಾರ ಅವರು ಸಂವಿಧಾನ ಸಭೆಯ ನಂತರ ದೇಶದ ಮೊದಲ ಲೋಕಸಭೆ ಸದಸ್ಯರಾಗಿ (MP) ಮಾಡಿದ ಅನೇಕ ಕೆಲಸಗಳ  ಲೆಕ್ಕ ಇಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಇಚಲಕರಂಜಿಯನ್ನು “ಮ್ಯಾಂಚೆಸ್ಟರ್ ಆಫ್ ಮಹಾರಾಷ್ಟ್ರ” ಆಗಿ ಬದಲಾಯಿಸಿದ ಅವರ ಸಹಕಾರಿ ಚಳವಳಿಯ  ದೂರದೃಷ್ಟಿ ರತ್ನಪ್ಪಣ್ಣನವರು ಸಹಕಾರಿ ರಂಗದಲ್ಲಿ ಕ್ರಾಂತಿ ಉಂಟು ಮಾಡಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿಯ (ಗಂಗಾನಗರ) ಕಬ್ನೂರ್‌ನಲ್ಲಿ ಈ ಬೃಹತ್ ಕಾರ್ಖಾನೆಯನ್ನು 1954 ರಲ್ಲಿ ಸ್ಥಾಪಿಸಿದರು.  ವಾಣಿಜ್ಯ ಕಾಲೇಜು ಸ್ಥಾಪನೆ. ಇಂತಹ ಅಪರೂಪದ ಅಪ್ಪಟ ಬಸವ ಭಕ್ತ ಸ್ವತಂತ್ರ ಸೇನಾನಿ ದೇಶಭಕ್ತ ಶ್ರೀ ರತ್ನಪ್ಪಣ್ಣ ಕುಂಬಾರ ಸಾವಿಲ್ಲದ ಶರಣರು  ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top