ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಹೆಗಲಿಗೆ ಹೆಗಲಾದ ನಮ್ಮಪ್ಪ.” ದಯಾನ೦ದ ಎಂ ಪಾಟೀಲ.

ಕಾವ್ಯ ಸಂಗಾತಿ ದಯಾನ೦ದ ಎಂ ಪಾಟೀಲ. “ಹೆಗಲಿಗೆ ಹೆಗಲಾದ ನಮ್ಮಪ್ಪ.” ಅಪ್ಪ ತಾತ್ಯಾ ದಾದಾ ಡ್ಯಾಡ ಹೆಸರುಗಳಿಂದ ಕೂಡಿದ ತ೦ದೆ ಸ್ಟಾಭಿಮಾನಿ ಹಾಗೂ ನಿಸ್ವಾರ್ಥ ಪರೋಪಕಾರಿ ಜೀವಿಯೆ೦ದರೆ ತಪ್ಪಗಲಾರದು. ಹಗಲು ರಾತ್ರಿಯೆನ್ನದೇ ತನ್ನ ಕುಟುಂಬ ಗೋಸ್ಕರ ದುಡಿಯುತ್ತಾನೆ.ಬೇನೆ ಬಾಸರಿಕೆ ಇದ್ದರೂ ಕೂಡ ತನ್ನ ಮಕ್ಕಳು ಉಪವಾಸವನವಾಸ ಇರಬಾರದು ತಾನು ಉಪವಾಸ ಇದ್ದರೂ ಕೂಡ ಹೆ೦ಡತಿ ಮಕ್ಕಳಿಗೆ ಪ್ರತಿ ನಿತ್ಯ ಅವಶ್ಯಕತೆ ಪೂರೈಕೆ ಮಾಡುತ್ತಾನೆ. ತಾನು ಹರಿದ ಬಟ್ಟೆ ತೊಟ್ಟಿದ್ದರೂ ತನ್ನ ಮಕ್ಕಳು ಹೊಸ ಹೊಸ ಬಟ್ಟೆ ತೊಡಬೇಕು ತನ್ನ ಹತ್ತಿರ ಸಾದಾ ಪೋನ ಇದ್ದರೂ ಮಕ್ಕಳ ಹತ್ತಿರ IPOne ಇರಬೇಕು ತಾನು ಹಳಸಿದ ಅನ್ನ ತಿ೦ದರೂ ತನ್ನ ಮಕ್ಕಳು ಒಳ್ಳೆಯ ಆಹಾರ ತಿನ್ನಬೇಕು. ಪ್ರತಿಯೊಂದು ಕಾರಣಕ್ಕೂ ಒ೦ದೊಂದು ಕಣ್ಣೀರು ಕಥೆ ಇದೆ.ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವೆ? ತಂದೆ ಹಿಮಾಲಯ ಪರ್ವತ ಇದ್ದ೦ತೆ ಇಡೀ ಕುಟುಂಬವನ್ನು ಕಾಪಾಡುವನು ಅವನೇ ಹೊಲದಲ್ಲಿ ಕಾರ್ಮಿಕರಿಂದ ಹಿಡಿದು ನಾನಾ ತರಹದ ಉದ್ಯೋಗ ಪತಿಗಳು ಸರ್ಕಾರಿ ನೌಕರರು ಹಿಡಿದು ಉನ್ನತ ಸ್ಥಾನಮಾನದಲ್ಲಿ ಅಧಿಕಾರಿಗಳು ಇಡೀ ಕುಟುಂಬದ ಜವಾಬ್ದಾರಿ ಹೊರುವ ತಂದೆ ಆಗಿರುತ್ತಾರೆ. ತ೦ದೆಯಾದವನು ಜೀವನ ಪಾತ್ರವನ್ನು ನಿರ್ವಹಣೆ ಮಾಡುತ್ತಾ ಇರುತ್ತಾನೆ. ಶಾಲೆ ಅಥವಾ ಪದವಿ ಶಿಕ್ಷಣಗೆ ಕಳಿಸಿ ಬರುವ ವೆಚ್ಚ ನಷ್ಟ ಬರಿಸುತ್ತಾ ಮಕ್ಕಳು ಶಿಕ್ಷಣ ಮುಗಿಸಿದ ಬಳಿಕ ಸ್ವಂತ ಸ್ವಾಲಂಬನೆ ಸಾಧಿಸುತ್ತಾರೆ. ಮಕ್ಕಳು ಸಹ ತಂದೆ ತಾಯಿಯ ಕಷ್ಟಕ್ಕೆ ಆಗುವುದು ಇಲ್ಲ ಚಿಕಿತ್ಸೆಗೆ ದಿನ ನಿತ್ಯ ದಿನಸಿಗೆ ಹಣ ಕೊಡುವುದೇ ಇಲ್ಲ. ಮಕ್ಕಳ ಕಷ್ಟಕ್ಕೆ ನೆರವು ನೀಡುವ ಅಪ್ಪ ಅದೇ ಮಕ್ಕಳು ಅಪ್ಪನಿಗೆ ಸಹಾಯ ಮಾಡುವುದು ಇಲ್ಲ.ನಯಾ ಪೈಸೆ ಕೊಡುವುದು ಇಲ್ಲ ಅಪ್ಪಂದಿರು ಜೀವನ ಪರ್ಯಾಂತ ಮಕ್ಕಳ ಗೋಸ್ಕರ ಜೀವ ಹಾಗೂ ಜೀವನವನ್ನು ತ್ಯಾಗ ಮಾಡುತ್ತಾರೆ. ಆದರೆ ಮಕ್ಕಳು ತಂದೆಯ ಕಣ್ಣೀರು ಒರಿಸುವುದು ಇಲ್ಲವೇ ಇಲ್ಲ ಇಂತಹ ಮಕ್ಕಳು ಜಾಲಿ ಮರಕ್ಕೆ ಸಮ. ಅಪ್ಪ ಯೆಂದರೆ ಹಠವಾದಿ ಸ್ವಾಭಿಮಾನಿ ಹೊರಗಿನ ಕಡೆ. ಸಾಲ ಮಾಡದೇ ಅಭಿಮಾನದಿಂದ ಜೀವನ ಮಾಡುವ ಅಪ್ಪನಿಂದ ಕಲಿಯಬೇಕಾಗಿದೆ. ಸಿಟ್ಟು ಏಕೆ? ಬರುತ್ತೆ ಗೊತ್ತೆ? ತನ್ನ ಮೇಲೆ ಶೋಷಣೆ ಅನ್ಯಾಯ ಮೋಸ ದಬ್ಬಾಳಿಕೆ ನಡೆದಾಗ ಹೋರಾಟ ಮಾಡುತ್ತಾನೆ. ಮಕ್ಕಳು ಸಹ ಚನ್ನಾಗಿ ನೋಡಿಕೊಳ್ಳಬೇಕು. ಕಣ್ಣಿನ ರಪ್ಪೆಯ0ತೆ ಕಾಪಾಡಬೇಕುಅಪ್ಪ ಎಂಬವಸ್ತು ಕಳೆದು ಹೋದರೆ ಮತ್ತೆ ಸಿಗುವುದೇಇಲ್ಲ. ಇಂದಿನ ದಿನಮಾನದಲ್ಲಿ ತಂದೆ ತಾಯಿಯನ್ನುಮನೆಯಿಂದ ಹೊರಗೆ ಹಾಕುವಕೆಟ್ಟ ಚಾಳಿ ಹೆಚ್ಚಾಗುವುದು ವಿಷಾದನೀಯ ಹಾಗೂ ಖಂಡನೀಯ ಇಡೀ ಮಾನವಕುಲ ತಲೆ ತೆಗಿಸುವ೦ತಅನೇಕ ಘಟನೆಗಳು ದೇಶದ ಅನೇಕ ಭಾಗದಲ್ಲಿ ನಡೆದಿವೆ ನಡೆಯುತ್ತಿವೆ. ನೋಡಿದಾಗ ಸಮಾಜ ಯತ್ತ ಸಾಗಿದೆ ಒಮ್ಮೆ ಎಲ್ಲರೂ ಆಲೋಚನೆ ಮಾಡಬೇಕಾಗಿದೆ. ಇದು ಹೆಚ್ಚಾಗಿ ವಿದ್ಯಾವಂತರಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಕಣ್ಣಾರೆ ನೋಡುತ್ತಿದ್ದೇವೆ. ಹಣ ಆಸ್ತಿ ಹೆಂ ಡರು ಮಕ್ಕಳು ಅಷ್ಟೆ ತಂದೆ ತಾಯಿ ಸಂಬಂಧಿಕರು ಬೇಡವೇ ಬೇಡ…ದಾರಿಗೆದಾರಿಯಾಗಿ ಕತ್ತಲಿನಿಂದ ಬೆಳಕು ತೋರಿಸಿದನಿವೃತ ಶಿಕ್ಷಕರಾದ ಮಲ್ಲಪ್ಪಾ ಬಿರಾದಾರ ಪಾಟೀಲಯವರಿಗೆ ಈ ಪುಟ್ಟ ಕವನ ಅರ್ಪಣೆ.ನನ್ನಪ್ಪ…ಗಾಳಿ ಬಿರುಗಾಳಿಯಲ್ಲಿ ಮಿ೦ಚು ಸಿಡಿಲಿನಂತೆ ಬೆರೆತು ಹೋದ ನನ್ನಪ್ಪ.ಹೆಜ್ಜೆ ಹೆಜ್ಜೆಯಲ್ಲಿ ಕಣ ಕಣದಲ್ಲಿ ಬೆರೆತು ಹೋದ ನನ್ನಪ್ಪ..ನಾಡಿನಾಡಿಯಲ್ಲಿ ಹೃದಯ ಹೃದಯದಲ್ಲಿ ಬೆರೆತು ಹೋದ ನನ್ನಪ್ಪ..ಜೀವ ಜೀವದಲ್ಲಿ ಮನ ಮನದಲ್ಲಿ ಬೆರೆತು ಹೋದ ನನ್ನಪ್ಪ…ದುಡಿಮೆಯಲ್ಲಿ ತ್ಯಾಗದ ಜೊತೆ ಬೆರೆತು ಹೋದ ನನ್ನಪ್ಪ..ಉಸಿರು ಉಸಿರಲ್ಲಿ ನೋವು ಸಂತೋಷದಲ್ಲಿ ಬೆರೆತು ಹೋದ ನನ್ನಪ್ಪ..ಆಕಾಶದಲ್ಲಿ ಕಾಣುವ ನಕ್ಷತ್ರದಂತೆ ಹುಣ್ಣಿಮೆಯ ಚಂದ್ರನಂತೆ ಬೆರೆತು ಹೋದ ನನ್ನಪ್ಪ..ಅಕ್ಷರಗಳು ನೂರಾರು ಸಾಲುಗಳು ಸಾವಿರಾರು ಸಾಲಿನಲ್ಲಿ ಬೆರೆತು ಹೋದ ನನ್ನಪ್ಪ…ತ್ಯಾಗದಲ್ಲಿ ಕರ್ಣನಂತೆ ಕಾಯಕದಲ್ಲಿ ಬೆರೆತು ಹೋದ ನನ್ನಪ್ಪ..ಭೂ ತಾಯಿಯ ಮಡಿಲಲ್ಲಿ ಮಣ್ಣಾದನನ್ನಪ್ಪಇ೦ಥ ಸ್ವಾರ್ಥ ಜೀವನ ಹೆಚ್ಚಾಗಿರುವುದು ಅಪ್ಪನ ಅಸ್ತಿ ಬೇಕು ಆದರೆ ತಂದೆ ತಾಯಿ ಬೇಡ ಇಂಥೆಂಥ ಮಕ್ಕಳು ಇದ್ದಾವೆ ನೋಡಿ. ಕಳೆದ 20 ವರುಷಗಳ ಹಿಂದಿನ ಅವಲೋಕನ ನೋಡಿದಾಗ ತಂದೆಗೆ ಒಳ್ಳೆಯ ಸ್ಥಾನಮಾನ ನೀಡಿದ್ದರು. ಅವಿಭಕ್ತ ಕುಟುಂಬಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದರು. ಹಿರಿಯರು ಕಿರಿಯರು ಭೇದ ಭಾವ ಇರುತ್ತಿರಲಿಲ್ಲ ಮದುವೆ ಮುಂಜಿ ಕಾರ್ಯಕ್ರಮ ಹಿರಿಯರ ಮುಂದಾಳುತನದಲ್ಲಿ ಮಾಡುತ್ತಿದ್ದರು. ಹೀಗೆ ಹಿಂದಿನ ಹಾಗೂ ಇಂದಿನ ಇತಿಹಾಸ ನೋಡಿದರೆ ಅಜಜಾಂತರ.ಮಠಾಧಿಪತಿಗಳು ತಿದ್ದುವ ಕಾಯ೯ ಮಾಡಬೇಕಾಗಿದೆ… ಲೇಖಕರು. ದಯಾನ೦ದ ಎಂ ಪಾಟೀಲ.ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ..

“ಹೆಗಲಿಗೆ ಹೆಗಲಾದ ನಮ್ಮಪ್ಪ.” ದಯಾನ೦ದ ಎಂ ಪಾಟೀಲ. Read Post »

ಇತರೆ, ಜೀವನ

“ರೇಡಿಯೇಷನ್ ಥೆರಪಿ: ನನ್ನ ಅನುಭವ” ಕವಿತಾ ಶ್ರೀನಿವಾಸ್‌ ನಾಯಕ್

ಅನುಭವ ಸಂಗಾತಿ ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ ಕವಿತಾ ಶ್ರೀನಿವಾಸ್‌ ನಾಯಕ್ ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ  ನಾನು ಲೇಖಕಿಯಾಗಿ ನನ್ನ ಕ್ಯಾನ್ಸರ್ ಚಿಕಿತ್ಸೆಯ ಅನುಭವವನ್ನು ನಾನೇ ಬರೆಯುವ ಪರಿಸ್ಥಿತಿ. ನನ್ನ ಕ್ಯಾನ್ಸರ್ ಪಯಣದಲ್ಲಿ ಸಾಕಷ್ಟು ಅನುಭವಗಳಾಗಿವೆ. ಸಾಧ್ಯವಾದಷ್ಟು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಮುಂದೆ ಸಾಗುತ್ತಿದ್ದೇನೆ.ಮೊದಲಿಗೆ ಕಿಮೋಥೆರಪಿ, ನಂತರ ಶಸ್ತ್ರಚಿಕಿತ್ಸೆ. ತದನಂತರ ಬಂದದ್ದು ರೆಡಿಯೇಷನ್ ಥೆರಪಿ.ನನಗೆ ಮೊದಲು ರೆಡಿಯೇಷನ್ ಥೆರಪಿ ಎಂದರೆ ಏನು ಎಂಬುದೇ ಗೊತ್ತಿರಲಿಲ್ಲ. ವೈದ್ಯರು ರೆಡಿಯೇಷನ್ ಥೆರಪಿ ಮಾಡಬೇಕೆಂದು ಹೇಳಿದಾಗ ನನ್ನಲ್ಲಿ ಕುತೂಹಲ ಹೆಚ್ಚಾಯಿತು. ಯೂಟ್ಯೂಬ್‌ನಲ್ಲಿ ಹುಡುಕಿದೆ. ಅಲ್ಲಿ ಸ್ವಲ್ಪಮಟ್ಟಿನ ಮಾಹಿತಿ ಸಿಕ್ಕಿತು. ಆದರೆ ನಿಜವಾದ ಅನುಭವ ಚಿಕಿತ್ಸೆ ಪಡೆಯಲು ಹೋದಾಗಲೇ ತಿಳಿಯಿತು.ಮೊದಲು ಸಿಟಿ ಸ್ಕ್ಯಾನ್ ಮಾಡಿ, ವೈದ್ಯರು ನಿಗದಿಪಡಿಸಿದ ದಿನಕ್ಕೆ ರೆಡಿಯೇಷನ್ ಥೆರಪಿಗಾಗಿ ಹೋದೆ. ಮೊದಲ ದಿನ ಸ್ವಲ್ಪ ಸಮಯ ಕಾಯಬೇಕಾಯಿತು. ನನ್ನ ಸರದಿ ಬಂದಾಗ ಅವರು ನೀಡಿದ ವಸ್ತ್ರ ಧರಿಸಿ ರೆಡಿಯೇಷನ್ ಕೊಠಡಿಗೆ ಹೋದೆ.ಅದು ವಿಶಾಲವಾದ, ಎಸಿ ಇರುವ ಕೊಠಡಿ. ಮಧ್ಯದಲ್ಲಿ ರೆಡಿಯೇಷನ್ ಯಂತ್ರ. ಮೊದಲ ಬಾರಿ ನೋಡಿದಾಗ, ಯಾವುದೋ ಹೊಸ ಲೋಕಕ್ಕೆ ಬಂದಂತಾಯಿತು!ಚಳಿಯಾಗಿದ್ದರಿಂದ ಅಲ್ಲಿನ ಸಿಬ್ಬಂದಿ ಬೆಡ್‌ಶೀಟ್ ನೀಡಿದರು. ಮೊದಲ ದಿನ ವೈದ್ಯರು, ದಾದಿಯರು ಹಾಗೂ ರೆಡಿಯೇಷನ್ ಸಿಬ್ಬಂದಿ ನನ್ನ ರೆಡಿಯೇಷನ್ ನೀಡಬೇಕಾದ ಭಾಗವನ್ನು ಪರಿಶೀಲಿಸಿ, ಎಲ್ಲವನ್ನೂ ಸರಿಯಾಗಿ ಹೊಂದಿಸಿದರು. ನಂತರ ರೆಡಿಯೇಷನ್ ಯಂತ್ರ ತಿರುಗಲು ಆರಂಭಿಸಿತು.ಆ ಸಮಯದಲ್ಲಿ ನಮ್ಮ ದೇಹಕ್ಕೆ ಯಾವುದೇ ರೀತಿಯ ನೋವು ಅಥವಾ ವಿಶೇಷ ಅನುಭವವಾಗುವುದಿಲ್ಲ. ಆರಾಮವಾಗಿ ಮಲಗಿಕೊಂಡೇ ಇರಬಹುದು. ಕೆಲವೊಮ್ಮೆ ಸಣ್ಣ ನಿದ್ರೆಯೂ ಬರಬಹುದು. ಆದರೆ ರೆಡಿಯೇಷನ್ ನಡೆಯುವ ಸಂದರ್ಭದಲ್ಲಿ ನಮ್ಮ ದೇಹವನ್ನು ಅಲುಗಾಡಿಸದೆ ಸ್ಥಿರವಾಗಿರಬೇಕು.ಸಕಾರಾತ್ಮಕವಾಗಿ ಹೇಳಬೇಕೆಂದರೆ, ನಾನು ಆ ಸಮಯವನ್ನೂ ಒಳ್ಳೆಯ ರೀತಿಯಲ್ಲಿಯೇ ಕಳೆದಿದ್ದೇನೆ. ರೆಡಿಯೇಷನ್ — ಕ್ಯಾನ್ಸರ್ ಹೋರಾಟಗಾರರ ಮಿತ್ರರೆಡಿಯೇಷನ್ ಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಪ್ರಮುಖ ಭಾಗವಾಗಿದೆ. ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ಅವುಗಳನ್ನು ನಿಯಂತ್ರಿಸಲು ಅಥವಾ ನಾಶಪಡಿಸಲು ರೆಡಿಯೇಷನ್ ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸೆಯ ಭಾಗವಾಗಿರಬಹುದು; ಕೆಲವೊಮ್ಮೆ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹ ಬಳಸಲಾಗುತ್ತದೆ.ನನ್ನ ಅನುಭವದಲ್ಲಿ ರೆಡಿಯೇಷನ್ ಪಡೆಯುವ ಸಂದರ್ಭದಲ್ಲಿ ಯಾವುದೇ ವಿಶೇಷ ಸಮಸ್ಯೆಯಾಗಲಿಲ್ಲ. ಅಲ್ಲಿನ ವೈದ್ಯರು ಹಾಗೂ ರೆಡಿಯೇಷನ್ ಸಿಬ್ಬಂದಿ ಬಹಳ ಅಕ್ಕರೆಯಿಂದ ಪ್ರತಿಯೊಂದನ್ನೂ ಮಾಡುತ್ತಿದ್ದರು. ಅವರ ಮಾತು, ಕಾಳಜಿ ಮತ್ತು ಧೈರ್ಯ ತುಂಬುವ ರೀತಿಯೇ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿತ್ತು.ನಾನು ಚಿಕಿತ್ಸೆ ಪಡೆಯುವುದರ ಜೊತೆಗೆ ಅಲ್ಲಿಗೆ ಬರುವ ಇತರ ಕ್ಯಾನ್ಸರ್ ಚಿಕಿತ್ಸಕರಿಗೂ, “ರೆಡಿಯೇಷನ್ ಬಗ್ಗೆ ಭಯಪಡಬೇಡಿ. ಧೈರ್ಯವಾಗಿ ಬನ್ನಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಹೋಗಿ” ಎಂದು ಹೇಳುತ್ತಿದ್ದೆ. ಅವರೊಂದಿಗೆ ಮಾತನಾಡಿ ಅವರಲ್ಲೂ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದೆ.ರೆಡಿಯೇಷನ್ ಚಿಕಿತ್ಸೆಯಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆಯೂ ವೈದ್ಯರು ಮೊದಲೇ ವಿವರವಾಗಿ ತಿಳಿಸುತ್ತಾರೆ. ಆದರೆ ಎಲ್ಲರಿಗೂ ಒಂದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಚಿಕಿತ್ಸೆ ನೀಡುವ ಭಾಗ ಮತ್ತು ವ್ಯಕ್ತಿಯ ದೇಹದ ಪ್ರತಿಕ್ರಿಯೆಗನುಗುಣವಾಗಿ ಅನುಭವ ಬದಲಾಗಬಹುದು.ನನ್ನದು ಸ್ತನ ಕ್ಯಾನ್ಸರ್ ಆಗಿದ್ದರಿಂದ ನನ್ನ ಗಂಟಲಿನವರೆಗೂ ರೆಡಿಯೇಷನ್ ಚಿಕಿತ್ಸೆ ನೀಡಬೇಕಾಯಿತು. ಅದರ ಪರಿಣಾಮವಾಗಿ ನನಗೆ ಸುಮಾರು ಎರಡು ತಿಂಗಳು ಗಂಟಲು ನೋವಿನ ಸಮಸ್ಯೆ ಇತ್ತು. ಆ ಸಮಯದಲ್ಲಿ ನೀರಾಹಾರ ಸೇವಿಸುತ್ತಿದ್ದೆ. ಇದನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಪ್ರಮುಖ ಅಡ್ಡ ಪರಿಣಾಮಗಳು ಇರಲಿಲ್ಲ.ಇದು ನನ್ನ ವೈಯಕ್ತಿಕ ಅನುಭವ ಮಾತ್ರ. ಪ್ರತಿಯೊಬ್ಬರ ಚಿಕಿತ್ಸೆಯ ಅನುಭವವೂ ವಿಭಿನ್ನವಾಗಿರಬಹುದು. ಆದ್ದರಿಂದ ವೈದ್ಯರು ನೀಡುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.ಭಯ ಬೇಡ… ಧೈರ್ಯದಿಂದ ಮುಂದೆ ಸಾಗೋಣಕ್ಯಾನ್ಸರ್ ಎಂಬ ಪದ ಕೇಳಿದಾಗ ಭಯ ಸಹಜ. ರೆಡಿಯೇಷನ್ ಥೆರಪಿ ಎಂದಾಗಲೂ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಬಹುದು. ಆದರೆ ತಿಳುವಳಿಕೆ, ವೈದ್ಯರ ಮೇಲಿನ ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ಭಯವನ್ನು ಕಡಿಮೆ ಮಾಡಬಹುದು.ನನ್ನ ಅನುಭವದಲ್ಲಿ ರೆಡಿಯೇಷನ್ ಥೆರಪಿ ನನಗೆ ಭಯ ಹುಟ್ಟಿಸಿದ ಚಿಕಿತ್ಸೆಯಾಗಿರಲಿಲ್ಲ. ಅದು ನನ್ನ ಕ್ಯಾನ್ಸರ್ ಹೋರಾಟದ ಮತ್ತೊಂದು ಪ್ರಮುಖ ಹಂತವಾಗಿತ್ತು.ಆದ್ದರಿಂದ ರೆಡಿಯೇಷನ್ ಥೆರಪಿ ಪಡೆಯಬೇಕಾದ ಪ್ರತಿಯೊಬ್ಬ ಕ್ಯಾನ್ಸರ್ ಹೋರಾಟಗಾರರಿಗೂ ನನ್ನ ಒಂದೇ ಮಾತು—ಭಯಪಡಬೇಡಿ… ಧೈರ್ಯದಿಂದ ಮುಂದೆ ಬನ್ನಿ.ವೈದ್ಯರ ಮಾತು ಕೇಳಿ, ಚಿಕಿತ್ಸೆಯ ಮೇಲೆ ನಂಬಿಕೆ ಇಡಿ.ಪ್ರತಿಯೊಂದು ದಿನವೂ ನಾವು ಗೆಲುವಿನತ್ತ ಇಡುವ ಮತ್ತೊಂದು ಹೆಜ್ಜೆ ಎಂದು ಭಾವಿಸಿ.ಕ್ಯಾನ್ಸರ್ ಪಯಣ ಕಷ್ಟವಾದರೂ, ಧೈರ್ಯ, ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ದೊಡ್ಡ ಶಕ್ತಿ.  ಕವಿತಾ ಶ್ರೀನಿವಾಸ ನಾಯಕ್ರೇಡಿಯೇಷನ್ ಥೆರಪಿ: ನನ್ನ ಅನುಭವ ಕಾರ್ಕಳ, ಉಡುಪಿ ಜಿಲ್ಲೆ

“ರೇಡಿಯೇಷನ್ ಥೆರಪಿ: ನನ್ನ ಅನುಭವ” ಕವಿತಾ ಶ್ರೀನಿವಾಸ್‌ ನಾಯಕ್ Read Post »

You cannot copy content of this page

Scroll to Top