ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಭಾಗ್ಯವತಿ ಅಮರೇಶ್ವರ ಗಜಲ್ ನಿನ್ನ ಮೌನ ಸಹವಾಸ ಬೇಡ ಅನ್ನುವಂತಿದೆ ಮಾತಾಡು ಸಖಿನಿನ್ನ ಇಣುಕು ನೋಟ ಕಾಡುವಂತಿದೆ ಮಾತಾಡು ಸಖಿ ದಿನ ದಿನವೂ ನನ್ನ ಸುತ್ತ ಸುಳಿಯುತ್ತಿದ್ದವಳು ನೀನುನಿನ್ನ ಕಣ್ಣು ಮುಚ್ಚಾಲೆ ಕೊಲ್ಲುವಂತಿದೆ ಮಾತಾಡು ಸಖಿ ನೀ ಬರೆದ ಓಲೆಯ ಪದಗಳು  ನನ್ನ ಮನ ತುಂಬಿ ನಲಿದಾಡುತ್ತಿದ್ದವುನಿನ್ನ ಸಂದೇಶ ಬರದೆ ಮನ ಮೂಕವಾದಂತಿದೆ ಮಾತಾಡು ಸಖಿ ನಡೆವ ಹೆಜ್ಜೆಗೆ ಅಡಿಗಡಿಗೆ ದಾರಿ ತೋರಿಸಿದವಳು ನೀನುನಿನ್ನ ಬೆಳಕಿಲ್ಲದೆ ಕಣ್ಣು ಕುರುಡಾದಂತಿದೆ ಮಾತಾಡು ಸಖಿ ನೀನಿಲ್ಲದೆ ಬದುಕ ಬಲ್ಲೆನಾದರೂ ಸಗ್ಗವಿಲ್ಲ ಆ ಬಾಳಲ್ಲಿಭಾಗ್ಯದ ನಿನ್ನ ನುಡಿಯಿಲ್ಲದೆ ಮೌನ ನರಕದಂತಿದೆ ಮಾತಾಡು ಸಖಿ. ಡಾ. ಭಾಗ್ಯವತಿ ಅಮರೇಶ್ವರ

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ ” ಒಳ ಸುಳಿವು” ಮೌನಮರೆಯಲಿ ಮಾತೊಂದು ಮೊಳಗುವುದುಮನದಾಳದ ನೋವು ಕಣ್ಣಲಿ ಕರಗುವುದು;ನಗುವಿನ ಹಿಂದೆ ಅಡಗಿದ ಕಣ್ಣೀರ ಹನಿಯೇ,ಬದುಕಿನ ಸತ್ಯಕ್ಕೆ ನೀಡುವ ಒಳ ಸುಳಿವೇ. ಹೊರಗಿನ ಬೆಳಕಿಗೆ ನೆರಳೊಂದು ಜೊತೆಯಲಿ,ಒಳಗಿನ ಕತ್ತಲೆಗೆ ದೀಪವೊಂದು ಹೃದಯದಲಿ;ಕಳೆದುಹೋದ ದಾರಿಯ ಹೆಜ್ಜೆ ಗುರುತಿನಲಿ,ನಾಳೆಯ ಪಯಣದ ಸುಳಿವಿದೆ ಆತ್ಮದಲಿ. ಕಾಣದ ಕನಸೊಂದು ಕಣ್ಣೊಳಗೆ ನಿಲ್ಲುವುದುಹೇಳದ ಭಾವ ಉಸಿರಾಗಿ ಹರಿಯುವುದುಪದಗಳಿಗಿಂತ ಮೌನವೇ ಸತ್ಯ ಹೇಳುವಾಗಮನವೇ ಮನಸ್ಸಿಗೆ ಕನ್ನಡಿ ಹಿಡಿಯುವಾಗ ಜಗವನು ಅರಿಯಲು ಮೊದಲು ನಿನ್ನನು ಅರಿತು ಒಳಗಿನ ಧ್ವನಿಯನು ಕೇಳು ಕ್ಷಣವೊಂದು ನಿಂತು ಹೊರಗೆ ಹುಡುಕಿದ ಸತ್ಯ ಒಳಗೇ ಹೊಳೆಯುವುದು ನೀನೇ ನಿನ್ನ ದಾರಿ ಎಂದು ಒಳ ಸುಳಿವು ನೀಡುವುದು. ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ ” ಒಳ ಸುಳಿವು” Read Post »

You cannot copy content of this page

Scroll to Top