ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಸಿಲ ಬೇಗೆಗೆ ಬಸವಳಿದ
ಭೂರಮೆಯ ತಂಪುಗೊಳಿಸಲು
ಇಳೆಗೆ ಸುರಿಯಿತಿಂದು
ಮೃಗಶಿರಾ ಮಳೆ
ಧರಣಿದೇವಿಯ
ತಾಪ ನೀಗಿಸಲು

ಕಣ್ಣೋಟ ಹರಿಸಿದೆಡೆ
ಹಸಿರಿನ ವೈಭವ
ಮುನ್ನೋಟ ವಿಹರಿಸಿದೊಡೆ
ಆಹ್ಲಾದದ ಸೂರಭ
ನಿಸರ್ಗ ಚೆಲುವಿನ
ಅಮೃತಪಾವನ
ಈ ಮೃಗಶಿರಾ ಮಳೆ

ಕಾದ ನೆಲವ ತಂಪಾಗಿಸಿದ
ಆ ವರುಣದೇವ
ಹಸಿದೊಡಲ ಬರ ನೀಗಿಸಿದ
ಈ ಅನ್ನದೇವ
ಭಾವ ಸಮಾಧಿಯ
ಸಿಂಧೂರ
ಈ ಮೃಗಶಿರಾ ಮಳೆ

ಕಪ್ಪೆಗಳ ವಟವಟ ನಿನಾದ
ಚಿಟ್ಟೆಗಳ ಚಿಲಿಪಿಲಿ ನಾದ
ಗುಂಯ್ ಗುಡುವ ಸೊಳ್ಳೆಗಳ
ಮಧುರಾಯನ ಮೈಳೈಸಿತೇಳ್
ಈ ಮಳೆಯ ಆರ್ಭಟದಿಂ

ಮಳೆಯಿಂದ ಇಳೆ
ಕಾಣುತಿದೆ ಬೆಳೆ
ಮನದಿಂದ ಕಲ್ಮಶವ ಕಳೆ
ಇದೇ ಬಾಳಿಗೆ ಚಿತ್ಕಳೆ
ಬೆಳಗುತಿದೆ ಬಾಳು
ಸುಖದ ಕುರುಹು ಕೇಳು


About The Author

Leave a Reply

You cannot copy content of this page

Scroll to Top