ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಕವಿತೆ


ಎನಿತೊ ಮಾತುಗಳು
ಮೌನದಲಿ ಕರಗಿ
ನಿಂತು ಹೋಗಿದೆ
ಬಂಧವದು ಸೊರಗಿ
ಎದೆಯ ಭಾವಗಳು
ಆಡದೆಯೆ ಉಳಿದು
ದೂರವಾದ ಹೃದಯ
ಅಳುತಿದೆ ಮನದಿ
ಕಾರಣವೆ ಇರದ
ನೋವಿನ ಸರಮಾಲೆ
ಯಾರದೇನೋ ಶಾಪವು
ತಿಳಿಯದಾವ ಲೀಲೆ
ದಾಟದ ಸಾಗರವು
ಎದೆಗಳ ನಡುವೆ
ಮುಗಿದು ಹೋದ ಮೇಲೆ
ಮಾತವು ಬರಿ ಸಪ್ಪೆ
ಕಡಿದ ಬಂಧವನು
ಜೋಡಿಸುವದೇ ತಂತು
ದಾರಿ ಕಾಣದ ಮನ
ಮರುಗುತಿದೆ ಇಂತು
ವೈ.ಎಂ.ಯಾಕೊಳ್ಳಿ



